ತೊರೆಸೂರಗೊಂಡನಹಳ್ಳಿಯಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಶ್ರೀ ಆದಿಶಕ್ತಿ ಚೌಡೇಶ್ವರಿ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವ: ಇಂದು ಬ್ರಹ್ಮ ರಥೋತ್ಸವದ ಸಂಭ್ರಮ
*ತೊರೆಸೂರಗೊಂಡನಹಳ್ಳಿಯಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಶ್ರೀ ಆದಿಶಕ್ತಿ ಚೌಡೇಶ್ವರಿ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವ: ಇಂದು ಬ್ರಹ್ಮ ರಥೋತ್ಸವದ ಸಂಭ್ರಮ*
ಹುಳಿಯಾರು ಹೋಬಳಿಯ *ತೊರೆಸೂರಗೊಂಡನಹಳ್ಳಿ* ಗ್ರಾಮದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಶ್ರೀ ಆದಿಶಕ್ತಿ ಚೌಡೇಶ್ವರಿ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವವು ಭಾನುವಾರದಿಂದ (ಏಪ್ರಿಲ್ 5) ಅತ್ಯಂತ ಶ್ರದ್ಧಾಭಕ್ತಿಗಳಿಂದ ಆರಂಭಗೊಂಡಿದ್ದು ಏಪ್ರಿಲ್ 8ರ ಬುಧವಾರದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
*ಇಂದಿನ ವಿಶೇಷ* (ಸೋಮವಾರ, ಏಪ್ರಿಲ್ 6):ಇಂದು ಜಾತ್ರೆಯ ಪ್ರಮುಖ ದಿನವಾಗಿದ್ದು, ಬೆಳಿಗ್ಗೆಯಿಂದಲೇ ವಿವಿಧ ಕೈಂಕರ್ಯಗಳು ಜರುಗುತ್ತಿವೆ:
ದರ್ಬಾರ್ ಅಲಂಕಾರ: ಬೆಳಿಗ್ಗೆ 7:30ಕ್ಕೆ ಸ್ವಾಮಿಯವರ ಮೂಲಸ್ಥಾನಕ್ಕೆ ವಿಶೇಷ ದರ್ಬಾರ್ ಅಲಂಕಾರ ಮಾಡಲಾಗಿದೆ.
ಹೊಳೆಸೇವೆ: ಬೆಳಿಗ್ಗೆ 9:15ಕ್ಕೆ ಪುಷ್ಪಾಲಂಕೃತ ಸ್ವಾಮಿಯವರಿಗೆ ಹೊಳೆಸೇವೆ ನೆರವೇರಲಿದೆ.
ಅಗ್ನಿಕೊಂಡ: ಬೆಳಿಗ್ಗೆ 11:00 ಗಂಟೆಗೆ ಭಕ್ತಾದಿಗಳ ಸಮ್ಮುಖದಲ್ಲಿ ಅಗ್ನಿಕೊಂಡ ಕಾರ್ಯಕ್ರಮ ಜರುಗಲಿದೆ.
ಬ್ರಹ್ಮ ರಥೋತ್ಸವ: ಬೆಳಿಗ್ಗೆ 11:30ಕ್ಕೆ ಮಂಗಳವಾದ್ಯಗಳೊಂದಿಗೆ *ಶ್ರೀ ಬಸವೇಶ್ವರ ಸ್ವಾಮಿಯವರ ಅದ್ದೂರಿ ಬ್ರಹ್ಮ ರಥೋತ್ಸವ*ಕ್ಕೆ ಚಾಲನೆ ನೀಡಲಾಗುವುದು.
ಇಂದು ಮಧ್ಯಾಹ್ನ 1:00 ಗಂಟೆಗೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಗ್ರಾಮಸ್ಥರಿಂದ *ಅನ್ನ ಸಂತರ್ಪಣೆ* ಏರ್ಪಡಿಸಲಾಗಿದೆ.
ಸಂಜೆ ಶ್ರೀ ಬಸವೇಶ್ವರ ಸ್ವಾಮಿಯವರ ರಥೋತ್ಸವ ಹಾಗೂ ರಾತ್ರಿ 7:30ಕ್ಕೆ ಶ್ರೀ ಆದಿಶಕ್ತಿ ಚೌಡೇಶ್ವರಿ ಅಮ್ಮನವರ "ಮದುವಣಗಿತ್ತಿ" ಸೇವೆ ನಡೆಯಲಿದೆ.
ರಾತ್ರಿ 9:00 ಗಂಟೆಗೆ ಹೊಳೆಸೇವೆ ಮತ್ತು ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಮದ್ದಿನ ಸೇವೆ (ಸಿಡಿಮದ್ದು ಪ್ರದರ್ಶನ) ಇರಲಿದೆ.
ರಾತ್ರಿ 9:30ಕ್ಕೆ ಡಿ.ಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.-
------
*ನಾಳಿನ ಕಾರ್ಯಕ್ರಮಗಳು:*ನಾಳೆ ಅಂದರೆ ಏಪ್ರಿಲ್ 7ರ ಮಂಗಳವಾರ ಬೆಳಿಗ್ಗೆ 8:30ಕ್ಕೆ ಶ್ರೀ ಚೌಡೇಶ್ವರಿ ಅಮ್ಮನವರ ಹೊಳೆಸೇವೆ ನಡೆಯಲಿದ್ದು, ಬೆ.9:30ಕ್ಕೆ ಕಳಸೋತ್ಸವ ರಾತ್ರಿ ಎಂಟು ಗಂಟೆಗೆ ಆರತಿ ಬಾನ, ರಾತ್ರಿ 9:00 ಗಂಟೆಗೆ ವಾಹನದ ಉತ್ಸವ ನಡೆಯಲಿದೆ
ಏಪ್ರಿಲ್ 8ರ ಬುಧವಾರ ಶ್ರೀ ದೂತಯ್ಯ ಗೆಳೆಯರ ಬಳಗದಿಂದ ಅದ್ದೂರಿ ಮಣೇವು, ಸಂಜೆ ಓಕಳಿ ಸೇವೆ ಕಂಕಣ ವಿಸರ್ಜನೆ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಟ್ರಸ್ಟ್ನವರು ಹಾಗೂ ಗ್ರಾಮಸ್ಥರು ಕೋರಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ