ಹುಳಿಯಾರು: ಬಸವೇಶ್ವರ ಪತ್ತಿನ ಸಹಕಾರ ಸಂಘದಿಂದ ಬಸವ ಜಯಂತಿ ಆಚರಣೆಹುಳಿಯಾರಿನಲ್ಲಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ವತಿಯಿಂದ ಬಸವ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಸವಣ್ಣನವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಬಸವಣ್ಣನವರ ತತ್ವಗಳು ಸರ್ವಕಾಲಿಕವಾಗಿದ್ದು ಸಮಾನತೆ, ಸತ್ಯನಿಷ್ಠೆ ಮತ್ತು ಸೇವಾಭಾವ ಎಂಬ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಬಸವಣ್ಣನವರು ಕಾಯಕವೇ ಕೈಲಾಸ ಎಂಬ ಸಂದೇಶದ ಮೂಲಕ ಶ್ರಮಕ್ಕೆ ಮಹತ್ವ ನೀಡಿದ ಮಹಾನ್ ಸಮಾಜ ಸುಧಾರಕರಾಗಿದ್ದು, ಅಂಧಶ್ರದ್ಧೆ ಹಾಗೂ ಜಾತಿ ಭೇದಗಳಿಗೆ ವಿರೋಧವಾಗಿ ಹೋರಾಡಿದವರು. ಅವರ ವಿಚಾರಧಾರೆಗಳು ಸಮಾಜದಲ್ಲಿ ಸಮಾನತೆ ತರಲು ಸಹಕಾರಿಯಾಗಿದೆ ಎಂದು ಕರೆ ನೀಡಿದರು.
ಇದೇ ವೇಳೆ ನೂರಾರು ಜನರಿಗೆ ಪಾನಕ ಹಾಗೂ ಕೋಸಂಬರಿ ವಿತರಿಸುವ ಮೂಲಕ ಬಸವ ತತ್ವದ ದಾಸೋಹ ಸೇವೆಯನ್ನುಸ್ಮರಿಸಲಾಯಿತು.
ಬಸವೇಶ್ವರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಎಲ್ಐಸಿ ದೇವರಾಜ್, ಕಾರ್ಯನಿರ್ವಹಣಾಧಿಕಾರಿ ವೀಣಾ, ಆರ್ಥಿಕ ಸಲಹೆಗಾರ ಶಿವರಾಮ್, ರಂಗನಕೆರೆ ವಿರೂಪಾಕ್ಷ, ಕಾಳಿಕಾಂಬ ವಿಜಿ, ಧನಂಜಯಮೂರ್ತಿ, ತೋಟದ ಮನೆ ಶೇಖರ್, ಪಾಳ್ಯ ಶಿವಶಂಕರ್, ಕರವೇ ಜಿಲ್ಲಾ ಉಪಾಧ್ಯಕ್ಷ ಚನ್ನಬಸವಯ್ಯ, ಪ್ರಿಂಟಿಂಗ್ ಪ್ರೆಸ್ ಚಿದಾನಂದ, ರೋಟರಿ ರವೀಶ್, ಪ್ರದೀಪ್,ಮೋಟರ್ ಲೋಕಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ