ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮದುವೆಗಳು ಟ್ವೆಂಟಿ-20 ಮ್ಯಾಚ್ ಗಳಾಗುತ್ತಿವೆ: ವಿರಕ್ತ ಮಠಾಧ್ಯಕ್ಷ

( ಹುಳಿಯಾರು ಸಮೀಪದ ಬೊಮ್ಮೇನಹಳ್ಳಿಯ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ವಿವಿಧ ಮಠದ ಶ್ರೀಗಳು ಹಾಜರಿರುವುದು ಶಾಸಕ ಸುರೇಶ್ ಬಾಬು,ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್, ಕೋಡಿಹಳ್ಳಿ ಚಂದ್ರಶೇಖರ್ ಮತ್ತಿತರರಿದ್ದಾರೆ.) ಮೊದ ಮೊದಲು ಮದುವೆಗಳು ಟೆಸ್ಟ್ ಮ್ಯಾಚ್ ರೀತಿ ಐದು ದಿನಗಳು ನಡೆಯುತ್ತಿದ್ದವು. ನಂತರ ಒನ್ ಡೇ ಮ್ಯಾಚ್ ರೀತಿ ಒಂದೇ ದಿನಕ್ಕೆ ಮುಗಿಸುವಂತಾಯಿತು. ಈಗ ಟ್ವೆಂಟಿ-20 ಮ್ಯಾಚ್ಗಳ ರೀತಿ ಮೂರ್ನಾಲ್ಕು ಗಂಟೆಗೆ ಸೀಮಿತವಾಗುತ್ತಿದ್ದು ವಸ್ತುಗಳ ಬೆಲೆ ಗಗನಕ್ಕೇರುತ್ತಿರುವ ಈ ಕಾಲದಲ್ಲಿ ಅನಗತ್ಯ ದುಂದುವೆಚ್ಚ ಆಗುವುದನ್ನು ತಡೆಯುವ ನಿಟ್ಟಿನಲ್ಲಿ ಇದು ಸ್ವಾಗತಾರ್ಹ ಬೆಳವಣಿಗೆ ಎಂದು ಕುಪ್ಪೂರು-ತಮ್ಮಡಿಹಳ್ಳಿ ವಿರಕ್ತ ಮಠಾಧ್ಯಕ್ಷ ಡಾ.ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ಹುಳಿಯಾರು ಸಮೀಪದ ಬೊಮ್ಮೇನಹಳ್ಳಿಯಲ್ಲಿ ಸುವರ್ಣಮುಖಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ರೈತ ಸಂಘದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಗ್ರಾಮೀಣ ಸಿದ್ಧರಾಮ ಸ್ಮರಣೋತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಆಶೀರ್ವಚನ ನೀಡಿದ ಅವರು ಮದುವೆಗಳಿಗೆ ಆಡಂಭರ ಮುಖ್ಯವಲ್ಲ ಸತಿಪತಿಗಳ ಮನಸ್ಸುಗಳು ಪರಸ್ಪರ ಅರ್ಥಮಾಡಿಕೊಳ್ಳುವುದು ಮುಖ್ಯ ಎಂದರು. ವ್ಯರ್ಥವಾಗಿ ಬದುಕು ಸವೆಸಿ ಮಣ್ಣಾಗುವ ಬದಲು ಸಾರ್ಥಕ ಜೀವನ ನಡೆಸಿ ಆದರ್ಶ ಬದುಕು ಬಾಳಿದಾಗ ಮಾತ್ರ ಮಾನವನಾಗಿ ಜನ್ಮ ಪಡೆದದಕ್ಕೂ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ

ರೈತನ ಆತ್ಮಹತ್ಯೆಗೆ ಸರ್ಕಾರದ ದ್ವಂದ್ವ ನೀತಿ ಕಾರಣ : ಕೋಡಿಹಳ್ಳಿ

ದೇಶಕ್ಕೆ ಅನ್ನ ನೀಡುವ ಅನ್ನದಾತನಾದ ರೈತನ ಸಮಸ್ಯೆ ಬಗೆರಿಸಲು ಸರ್ಕಾರಗಳು ವಿಫಲವಾಗುತ್ತಿರುವ ಕಾರಣ ರೈತರ ಜೀವನ ದಿನದಿಂದ ದಿನಕ್ಕೆ ದುಸ್ತರವಾಗುತ್ತಿದ್ದು ಆತ್ಮಹತ್ಯೆಯ ದಾರಿ ಹಿಡಿಯುವಂತಾಗಿದೆ. ರೈತ ಆತ್ಮಹತ್ಯೆಗೆ ಶರಣಾದರೆ ಅದು ದೇಶಕ್ಕೆ ಭಾರಿ ನಷ್ಠ. ಹಾಗಾಗಿ ಸಾಲದ ಬಾದೆಗೆ ಹೆದರಿ ರೈತರು ಆತ್ಮಹತ್ಯೆಯ ನಿರ್ಧಾರ ಕೈಗೊಳ್ಳದೆ ಬದುಕಿದ್ದು ಸಮಸ್ಯೆ ಎದುರಿಸಬೇಕು ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಅಭಿಪ್ರಾಯಪಟ್ಟರು. ಹುಳಿಯಾರು ಸಮೀಪದ ಬರಗೂರು ಗ್ರಾಮದ ನೂತನ ರೈತ ಸಂಘ ಹಾಗೂ ಹಸಿರು ಸೇನೆ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿ ರೈತ ಸಾಲದ ಶೂಲಕ್ಕೆ ಸಿಲುಕಲು ಸರ್ಕಾರದ ದ್ವಂದ ನೀತಿ ಕಾರಣವಾಗಿದ್ದು ಇದರಿಂದ ಹೊರ ಬರಲು ಹೋರಾಟವೇ ಮದ್ದು ಎಂದರು. ರೈತ ಬೆಳೆಯುವ ಬೆಳಗೆ ಇನ್ಯಾರೋ ಬೆಲೆ ಕಟ್ಟುತ್ತಿದ್ದು ಮಧ್ಯವರ್ತಿಗಳ ಹಾವಳಿಗೆ ಸಿಕ್ಕು ರೈತ ನುಜ್ಜುಗುಜ್ಜಾಗುತ್ತಿದ್ದಾನೆ.ಸರಿಯಾದ ಬೆಲೆ ನೀಡದೆ ರೈತನಿಗೆ ಮೋಸವಾಗುತ್ತಿದೆ ಎಂದ ಅವರು ಕಡಿಮೆ ಬೆಲೆ ಕೊಟ್ಟು ಭತ್ತ ಕೊಳ್ಳುವ ಇವರು ಅಕ್ಕಿಯನ್ನು 30 ರಿಂದ 50 ರು. ಗೆ ಮಾರುತ್ತಾರೆ. ತೊಗರಿಯನ್ನು 2 ಸಾವಿರಕ್ಕೆ ಖರೀದಿಸಿ 90 ರು. ಗೆ ಮಾರಾಟ ಮಾಡುತ್ತಾರೆ. ಹಾಗಾಗಿ ಸರ್ಕಾರ ರೈತನ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು. ದೇಶದಲ್ಲಿ ಶೇ. 75 ರಷ್ಟಿರುವ ರೈತರಿಗೆ ದೇಶ ಹಾಗೂ ರಾಜ್ಯಗಳಲ್ಲಿ ಪ್ರತ್ಯೇಕ ಬಜೆಟ್ ಮಂಡನೆಯಾಗುವ ಹೊರತ

ಟಿ.ಎಸ್.ಹಳ್ಳಿಯಲ್ಲಿ ವೈಭವದ ಶ್ರೀ ಬಸವೇಶ್ವರಸ್ವಾಮಿ ಮತ್ತು ಶ್ರೀ ಚೌಡಮ್ಮನವರ ಜಾತ್ರಾ ಮಹೋತ್ಸವ

ಹುಳಿಯಾರು ಸಮೀಪದ ತೊರೆಸೂರಗೊಂಡನಹಳ್ಳಿಯಲ್ಲಿ ನೆಲೆಸಿರುವ ಶ್ರೀ ಬಸವೇಶ್ವರಸ್ವಾಮಿ ಮತ್ತು ಶ್ರೀ ಚೌಡಮ್ಮನವರ ಜಾತ್ರಾ ಮಹೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು. ಇದರಂಗವಾಗಿ ಧ್ವಜಾರೋಹಣ, ರುದ್ರಾಭಿಷೇಕ, ಮಹಾಮಂಗಳಾರತಿ, ಹೊಳೆಸೇವೆ, ಅಗ್ನಿಕುಂಡ, ಮದವಣಗಿತ್ತಿ ಸೇವೆ, ಕಳಸೋತ್ಸವ, ಆರತಿಬಾನ, ರಾಜಬೀದಿ ಉತ್ಸವ, ಓಕುಳಿ ಸೇವೆ ಮುಂತಾದ ಪೂಜಾ ಕೈಂಕರ್ಯಗಳು ಜರುಗಿದವು. ಕಳಸ ಮಹೋತ್ಸವದ ಪ್ರಯುಕ್ತ ಹೊಳೆಯಿಂದ ಶ್ರೀ ಅಮ್ಮನವರ ಮೂಲ ಸ್ಥಾನಕ್ಕೆ ಟಿ.ಎಸ್.ಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ 44 ಮಂದಿ ಹೆಣ್ಣು ಮಕ್ಕಳು ಕಳಸಹೊತ್ತು ಮಂಗಳವಾದ್ಯದೊಂದಿಗೆ ನಡೆಮುಡಿಯಲ್ಲಿ ಆಗಮಿಸಿದರು.ನಂತರ ರಾತ್ರಿ ನಡೆದ ಅಗ್ನಿಕುಂಡ ಮಹೋತ್ಸವದಲ್ಲಿ ಐವತ್ತಕ್ಕೂ ಹೆಚ್ಚು ಭಕ್ತರು ಕೆಂಡ ಹಾಯ್ದು ಭಕ್ತಿಬಾವ ಸಮರ್ಪಿಸಿದರು. ರಥೋತ್ಸವದ ಅಂಗವಾಗಿ ಮುಂಜಾನೆಯಿಂದಲೆ ಧಾರ್ಮಿಕ ವಿಧಿವಿಧಾನಗಳು ನಡೆದು ಅಸಂಖ್ಯಾತ ಭಕ್ತರ ಉದ್ಘೋಷದೊಂದಿಗೆ ಸರ್ವಾಲಂಕೃತ ರಥದಲ್ಲಿ ಶ್ರೀಸ್ವಾಮಿ ಹಾಗೂ ಅಮ್ಮನವರನ್ನು ಪ್ರತಿಷ್ಠಾಪಿಸಿ ನಾಸಿಕ್ ಡೋಲ್, ಡೊಳ್ಳು ಕುಣಿತ ಮಂಗಳವಾದ್ಯದೊಂದಿಗೆ ಬ್ರಹ್ಮ ರಥೋತ್ಸವ ನೆರವೇರಿಸಲಾಯಿತು. ನೆರದಿದ್ದ ಭಕ್ತಾಧಿಗಳು ರಥ ಎಳೆದು ಹಣ್ಣುಕಾಯಿ ಮಾಡಿಸಿಕೊಂಡು ಹರಕೆ ತೀರಿಸಿಕೊಂಡರು. ಅನ್ನಸಂತರ್ಪಣೆ, ಆರ್ಕೇಸ್ಟಾ, ಹಿರಿಯರ ಕ್ರೀಡಾಕೂಟ ಹೀಗೆ ಅನೇಕ ಮನರಂಜನ ಕಾರ್ಯಕ್ರಮಗಳೂ ಸಹ ಜರುಗಿತು.

ಹುಳಿಯಾರು:ಸುಸಜ್ಜಿತ ಬಸ್ ತಂಗುದಾಣ ನಿರ್ಮಾಣಕ್ಕೆ ಶಾಸಕರಿಂದ ಗುದ್ದಲಿ ಪೂಜೆ

ಹುಳಿಯಾರಿನಲ್ಲಿ 20 ಲಕ್ಷರೂಗಳ ಅಂದಾಜು ವೆಚ್ಚದ ಸುಸಜ್ಜಿತ ಬಸ್ ಶೆಲ್ಟರ್ ನಿರ್ಮಾಣಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು ಸೋಮವಾರದಂದು ಗುದ್ದಲಿ ಪೂಜೆ ನೆರವೇರಿಸಿದರು. ಹುಳಿಯಾರಿಗೊಂದು ಮಾದರಿ ಬಸ್ ಶೆಲ್ಟರ್ ನಿರ್ಮಿಸಹೊರಟಿರುವ ತಮ್ಮ ಉದ್ದೇಶದ ಬಗ್ಗೆ ಮಾತನಾಡಿದ ಶಾಸಕ ಸಿ.ಬಿ.ಸುರೇಶ್ ಬಾಬು ಹುಳಿಯಾರು ಜಿಲ್ಲೆಯಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದ್ದು ನೂರಾರು ಬಸ್ ಗಳು ಪ್ರತಿದಿನ ಬಂದುಹೋಗುತ್ತಿದ್ದು ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಸೂಕ್ತ ತಂಗುದಾಣ ಇಲ್ಲದೆ ಜನತೆ ಬಿಸಿಲು-ಮಳೆಗೆ ತೊಂದರೆಗೀಡಾಗುತ್ತಿರುವುದನ್ನು ಮನಗಂಡು ಪ್ರಯಾಣಿಕರಿಗೆ ಹೆಚ್ಚಿನ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಶಾಸಕರ ನಿಧಿಯಲ್ಲಿ ಸುಮಾರು 20 ಲಕ್ಷ ರು. ವೆಚ್ಚದಲ್ಲಿ ಚಿ.ನಾ.ಹಳ್ಳಿಯಲ್ಲಿನ ಮಾದರಿಯಂತೆ ನಿರ್ಮಿಸಲು ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದರು.ಸಧ್ಯ 5 ಲಕ್ಷ ರೂ ಹಣ ಬಿಡುಗಡೆಮಾಡಲಾಗಿದ್ದು ನಾಳಿಯಿಂದಲೆ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ವಿವರಿಸಿದರು. ಆತಂಕ ಬೇಡ: ನೂತನ ಬಸ್ ಶೆಲ್ಟರ್ ನಿರ್ಮಾಣ ಪ್ರಾರಂಭವಾಗುವುದರಿಂದ ಫುಟ್ ಪಾತ್ ವ್ಯಾಪಾರಿಗಳ ಅಂಗಡಿಗಳು ಸ್ಥಳಾಂತರ ಅನಿವಾರ್ಯವಾಗಿದ್ದು ಅಂಗಡಿದಾರರು ಆತಂಕಪಡುವ ಅವಶ್ಯಕತೆಯಿಲ್ಲ ಎಂದರು.ಬಸ್ ನಿಲ್ದಾಣದ ಫುಟ್ಪಾತ್ ನಲ್ಲಿ ದಶಕಗಳ ಕಾಲದಿಂದಲೂ ಪೆಟ್ಟಿಗೆ ಅಂಗಡಿ ವ್ಯಾಪಾರವನ್ನೇ ಆಶ್ರಯಿಸಿರುವ ಅಂಗಡಿದಾರರಿಗೆ ಬದಲಿ ವ್ಯವಸ್ಥೆ ಕಲ್ಪಸಲಾಗುವುದೆಂದ ಅವರು ಪ್ರಾರಂಭಿಕ ಹಂತದಲ್ಲಿ ಪಿ

ಧಾರವಾಹಿಯ ಅಬ್ಬರದಲ್ಲಿ ನಾಟಕಗಳು ಮಾರೆಯಾಗುತ್ತಿವೆ: ಅನಂತರಾಮಯ್ಯ

ಹಿಂದೆ ಪ್ರತಿಯೊಂದು ಹಳ್ಳಿಗಳಲ್ಲಿಯೂ ಸಹ ವರ್ಷಕ್ಕೆ ಕನಿಷ್ಠ ಐದಾರು ನಾಟಕಗಳ ಪ್ರದರ್ಶನಗಳು ನಡೆಯುತ್ತಿದ್ದವು. ಹಳ್ಳಿಹಳ್ಳಿಗಳಲ್ಲೂ ಒಂದೊಂದು ನಾಟಕ ತಂಡಗಳಿರುತ್ತಿದ್ದವು. ಆದರೆ ಈಗ ಟಿ.ವಿ ದಾರವಾಹಿಯ ಅಬ್ಬರದಲ್ಲಿ ನಾಟಕಗಳು ಮರೆಯಾಗುತ್ತಿದ್ದು ಹಳ್ಳಿಗಳಲ್ಲಿನ ಕಲಾ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಹಿಸಿ, ಬೆಳೆಸುವ ಪರಂಪರೆ ಮರೆಯಾಗಿ ನೆಲ ಮೂಲ ಸಂಸ್ಕೃತಿ ನಾಶವಾಗುತ್ತಿದೆ ಎಂದು ರಂಗಕರ್ಮಿ ಹಂದನಕೆರೆ ಅನಂತರಾಮಯ್ಯ ಆತಂಕ ವ್ಯಕ್ತಪಡಿಸಿದರು . ಹುಳಿಯಾರು ಎಂಪಿಎಸ್ ಮೈದಾನದಲ್ಲಿ ಭಾನುವಾರ ರಾತ್ರಿ ರೈತ ಸಂಘ, ಹಸಿರು ಸೇನೆ, ಪತ್ರಿಕಾ ವರದಿಗಾರರು ಹಾಗೂ ಏಜೆಂಟರ ಸಂಘ, ಸಿಬಿಎಸ್ ಅಭಿಮಾನಿಗಳ ಸಂಘ, ಕೆಂಕೆರೆ ಬಸವ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಚಿತ್ರದುರ್ಗ ಶ್ರೀಮುರುಘಾಮಠದ ಜಮುರಾ ಕಲಾ ಲೋಕದ ಹೂಗನಸು ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 1962 ರಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಪರಕೀಯರ ಕಾಲ್ತುಳಿತಕ್ಕೆ ಸಿಕ್ಕಿ ನಲುಗುತ್ತಿದ್ದ ಸಂದರ್ಭದಲ್ಲಿ ಹುಳಿಯಾರಿನಲ್ಲಿ ಕನ್ನಡ ಸಂಘ ಸ್ಥಾಪಿಸಿ ರಾಜ್ಯದ ಮೂಲೆ ಮೂಲೆಗಳಲ್ಲಿ ಪೌರಾಣಿಕ, ಸಾಮಾಜಿಕ, ಚಾರಿತ್ರಿಕ ನಾಟಕಗಳನ್ನು ಪ್ರದರ್ಶಿಸಿ ಕನ್ನಡಿಗರಿಗೆ ಕನ್ನಡದ ಕಿಚ್ಚು ಹಚ್ಚುಲಾಗುತ್ತಿತ್ತು ಎಂದು ಹಿಂದಿನ ಸಾಧನೆಗಳನ್ನು ಮೆಲುಕು ಹಾಕಿ ನಾಟಕಗಳು ಸಮಾಜದ ಅಂಕು ಡೊಂಕುಗಳನ್ನು ತಿದ್ದಬಹುದಾಗಿದ್ದು ಯುವ ಜನತೆ ನಾಟಕಗಳನ್ನು ಸ್ವತಃ ಅಭಿನಯಿಸುವ, ನೋಡುವ ಹವ್ಯಾಸ

ಕನಕದಾಸರ ಏಕಶಿಲೆಗೆ ಹುಳಿಯಾರಿನಲ್ಲಿ ಭವ್ಯ ಸ್ವಾಗತ, ಆತ್ಮೀಯ ಬೀಳ್ಕೊಡುಗೆ

ಹೊಸದುರ್ಗ ಸಮೀಪದ ಕೆಲ್ಲೋಡುವಿನ ನೇತ್ರಾವತಿ ನದಿ ನಾಲೆಯ ದಂಡೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕನಕಪೀಠದಲ್ಲಿ ಕನಕದಾಸರ ಬೃಹತ್ ವಿಗ್ರಹ ಸ್ಥಾಪಿಸುವ ಸಲುವಾಗಿ ದೊಡ್ಡಬಳ್ಳಾಪುರದ ದೇವನಹಳ್ಳಿ ಬಂಡೆಯಿಂದ ಸಾಗಿಸುತ್ತಿರುವ ಏಕಶಿಲೆ ಹೊತ್ತ ವಾಹನವು ಮಾರ್ಗಮಧ್ಯೆ ಹುಳಿಯಾರಿಗೆ ಆಗಮಿಸಿದಾಗ ಕುರುಬರ ಸಂಘದ ಪ್ರತಿನಿಧಿಗಳು ಹಾಗೂ ನಾಗರೀಕರು ಕಂಸಾಳೆ, ನಗಾರಿ, ಡೊಳ್ಳು ವಾಧ್ಯದೊಂದಿಗೆ ಭವ್ಯವಾಗಿ ಸ್ವಾಗತಿಸಲಾಯಿತು. 380 ಟನ್ ತೂಕದ, 40 ಅಡಿ ಉದ್ದದ ಹಾಗೂ 8 ಅಡಿ ದಪ್ಪದಾದ 150 ಕ್ಕೂ ಹೆಚ್ಚು ಚಕ್ರವುಳ್ಳ ಭಾರಿ ವಾಹನದಲ್ಲಿ ಸಾಗಿಬಂದ ಏಕಶಿಲೆಯನ್ನು ಇಲ್ಲಿನ ಎಪಿಎಂಸಿ ಬಳಿ ಹೋಬಳಿ ಕುರುಬರ ಸಂಘದ ಬಸವಲಿಂಗೇಗೌಡ, ಕಾಯಿ ಕುಮಾರ್, ಲಿಂಗರಾಜು, ದಯಾನಂದ್, ಗೋವಿಂದಪ್ಪ, ರಾಮಯ್ಯ, ತಿಮ್ಮಯ್ಯ ಅವರುಗಳು ಪೂಜೆ ಸಲ್ಲಿಸಿ ಸ್ವಾಗತಿಸಿದರು. ಮಂಗಳವಾದ್ಯ, ಡೊಳ್ಳುಕುಣಿತದೊಂದಿಗೆ ಹೊಸದುರ್ಗ ಕನಕಶಾಖಾ ಮಠದ ಈಶ್ವರಾನಂದಪುರಿ ಸ್ವಾಮಿಜಿಯೊಂದಿಗೆ ಏಕಶಿಲೆಯನ್ನು ಮೆರವಣಿಗೆಯೊಂದಿಗೆ ಕರೆತರುವಾಗ ಕನಕ ಟ್ರಸ್ಟ್ ನ ಗವಿರಂಗಯ್ಯ, ರಂಗನಾಥ್, ಜಯಣ್ಣ, ಪುಟ್ಟರಾಜು, ಬೋರಲಿಂಗಯ್ಯ, ಬನಪ್ಪ ಅವರುಗಳು ಕೆನರಾ ಬ್ಯಾಂಕ್ ಬಳಿ ಶ್ರೀಗಳಿಗೆ ಹಾಗೂ ಏಕಶಿಲೆಗೆ ಹಾರ ಹಾಕಿ ಪೂಜೆ ಸಲ್ಲಿಸಿ ಪಠಾಕಿ ಸಿಡಿಸಿ ಸಂಭ್ರಮಿಸಿದರು. 128 ಚಕ್ರದ ಭಾರಿ ವಾಹನದಲ್ಲಿ ಭಾರಿ ಗಾತ್ರದ ಏಕಶಿಲೆ ಕೊಂಡೊಯ್ಯುವುದನ್ನು ನೋಡಲು ಜನಜಾತ್ರೆಯೇ ನೆರೆದಿತ್ತು. ಶಾಸಕ ಸಿ.ಬಿ.ಸುರೇಶ್ ಬಾಬು, ಕನಕಪೀಠದ ಆಡಳಿತಾಧಿಕ

ಹುಳಿಯಾರು ಗ್ರಾ.ಪಂ.ಗೆ ತಹಸೀಲ್ದಾರ್ ಭೇಟಿ

ಹುಳಿಯಾರು ಗ್ರಾ.ಪಂ.ಗೆ ತಹಸೀಲ್ದಾರ್ ಭೇಟಿ ------------------------------------- ಅವಧಿ ಮುಗಿದಿರುವ ಹುಳಿಯಾರು ಗ್ರಾಮ ಪಂಚಾಯ್ತಿಗೆ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ತಹಸೀಲ್ದಾರ್ ಟಿ.ಸಿ.ಕಾಂತರಾಜು ಅವರು ಶುಕ್ರವಾರ ಸಂಜೆ ಗ್ರಾಮ ಪಂಚಾಯ್ತಿಗೆ ದಿಡೀರ್ ಭೇಟಿ ನೀಡಿ ಕಾರ್ಯದರ್ಶಿಯೊಂದಿಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ಹಾಗೂ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಕುರಿತು ಚರ್ಚಿಸಿದರು. ನೈರ್ಮಲ್ಯ, ಕರವಸೂಲಿ ಹಾಗೂ ಕುಡಿಯುವ ನೀರು ಸರಭರಾಜು ಸಂಬಂಧ ಅಗತ್ಯ ಸಲಹೆ ಸೂಚನೆ ನೀಡಿದರು. ಜಮಾಖರ್ಚಿನ ಪುಸ್ತಕ ಪರಿಶೀಲಿಸಿದ ತಹಸೀಲ್ದಾರ್ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೂ ಸಹ ಈ ಹಿಂದೆ ಲಕ್ಷಾಂತರ ರು.ಗಳಿಗೆ ಚೆಕ್ ಗಳನ್ನು ನೀಡಿರುವ ಬಗ್ಗೆ ಕೆಂಡಮಂಡಲವಾಗಿ ಯಾವ ಆಧಾರದ ಮೇಲೆ ಚೆಕ್ ನೀಡಿರುವಿರಿ, ಸಭಾ ನಡಾವಳಿಕೆ ಆಗಿದೆಯೆ, ಹಣವಿಲ್ಲದಿದ್ದರೂ ಚೆಕ್ ನೀಡುವ ಅಗತ್ಯತೆ ಏನಿತ್ತು ಎಂದು ಕಾರ್ಯದರ್ಶಿ ಗೋಪಾಕೃಷ್ಣ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೆ ಕೂಡಲೆ ಬ್ಯಾಂಕ್ ಗಳಿಗೆ ಹಿಂದಿನ ಚೆಕ್ ಗಳಿಗೆ ಹಣ ಪಾವತಿಸದೆ ತಡೆಹಿಡಿಯಲು ಪತ್ರ ಬರೆಯುವಂತೆ ಆದೇಶಿಸಿದರು. ಬೇಸಿಗೆಯ ಈ ದಿನದಲ್ಲಿ ನೀರಿನ ಸಮಸ್ಯೆ ತೀವ್ರವಾಗಿರಿವುದನ್ನು ಮನಗಂಡ ತಹಸಿಲ್ದಾರ್ ಕಾಂತರಾಜು ಅವರು ನೀರಿಗೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದರಲ್ಲದೆ ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಬೋರನಕಣಿವೆ ಜಲಾಶಯದಿ

ಕನಕದಾಸರ ಏಕಶಿಲೆಗೆ ಹುಳಿಯಾರಿನಲ್ಲಿ ಭವ್ಯ ಸ್ವಾಗತ

ಕನಕದಾಸರ ಏಕಶಿಲೆಗೆ ಹುಳಿಯಾರಿನಲ್ಲಿ ಭವ್ಯ ಸ್ವಾಗತ ಹೊಸದುರ್ಗ ಸಮೀಪದ ಕೆಲ್ಲೋಡುವಿನ ನೇತ್ರಾವತಿ ನದಿ ನಾಲೆಯ ದಂಡೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕನಕಪೀಠದಲ್ಲಿ ಕನಕದಾಸರ ಬೃಹತ್ ವಿಗ್ರಹ ಸ್ಥಾಪಿಸುವ ಸಲುವಾಗಿ ದೊಡ್ಡಬಳ್ಳಾಪುರದ ದೇವನಹಳ್ಳಿ ಬಂಡೆಯಿಂದ ಸಾಗಿಸುತ್ತಿರುವ ಏಕಶಿಲೆ ಹೊತ್ತ ವಾಹನವು ಮಾರ್ಗಮಧ್ಯೆ ಹುಳಿಯಾರಿಗೆ ಆಗಮಿಸಿದಾಗ ಕುರುಬರ ಸಂಘದ ಪ್ರತಿನಿಧಿಗಳು ಹಾಗೂ ನಾಗರೀಕರು ಕಂಸಾಳೆ, ನಗಾರಿ, ಡೊಳ್ಳು ವಾಧ್ಯದೊಂದಿಗೆ ಭವ್ಯವಾಗಿ ಸ್ವಾಗತಿಸಲಾಯಿತು. 380 ಟನ್ ತೂಕದ, 40 ಅಡಿ ಉದ್ದದ ಹಾಗೂ 8 ಅಡಿ ದಪ್ಪದಾದ 150 ಕ್ಕೂ ಹೆಚ್ಚು ಚಕ್ರವುಳ್ಳ ಭಾರಿ ವಾಹನದಲ್ಲಿ ಸಾಗಿಬಂದ ಏಕಶಿಲೆಯನ್ನು ಇಲ್ಲಿನ ಎಪಿಎಂಸಿ ಬಳಿ ಹೋಬಳಿ ಕುರುಬರ ಸಂಘದ ಬಸವಲಿಂಗೇಗೌಡ, ಕಾಯಿ ಕುಮಾರ್, ಲಿಂಗರಾಜು, ದಯಾನಂದ್, ಗೋವಿಂದಪ್ಪ, ರಾಮಯ್ಯ, ತಿಮ್ಮಯ್ಯ ಅವರುಗಳು ಪೂಜೆ ಸಲ್ಲಿಸಿ ಸ್ವಾಗತಿಸಿದರು . ಮಂಗಳವಾದ್ಯ, ಡೊಳ್ಳುಕುಣಿತದೊಂದಿಗೆ ಹೊಸದುರ್ಗ ಕನಕಶಾಖಾ ಮಠದ ಈಶ್ವರಾನಂದಪುರಿ ಸ್ವಾಮಿಜಿಯೊಂದಿಗೆ ಏಕಶಿಲೆಯನ್ನು ಮೆರವಣಿಗೆಯೊಂದಿಗೆ ಕರೆತರುವಾಗ ಕನಕ ಟ್ರಸ್ಟ್ ನ ಗವಿರಂಗಯ್ಯ, ರಂಗನಾಥ್, ಜಯಣ್ಣ, ಪುಟ್ಟರಾಜು, ಬೋರಲಿಂಗಯ್ಯ, ಬನಪ್ಪ ಅವರುಗಳು ಕೆನರಾ ಬ್ಯಾಂಕ್ ಬಳಿ ಶ್ರೀಗಳಿಗೆ ಹಾಗೂ ಏಕಶಿಲೆಗೆ ಹಾರ ಹಾಕಿ ಪೂಜೆ ಸಲ್ಲಿಸಿ ಪಠಾಕಿ ಸಿಡಿಸಿ ಸಂಭ್ರಮಿಸಿದರು. 128 ಚಕ್ರದ ಭಾರಿ ವಾಹನದಲ್ಲಿ ಭಾರಿ ಗಾತ್ರದ ಏಕಶಿಲೆ ಕೊಂಡೊಯ್ಯುವುದನ್ನು ನೋಡಲು ಜನಜಾತ್ರೆಯೇ ನೆರೆ

ಹುಳಿಯಾರು ದುರ್ಗಮ್ಮನ ವೈಭವದ ರಥೋತ್ಸವ

ಹುಳಿಯಾರು ಗ್ರಾಮದೇವತೆ ದುರ್ಗಾಪರಮೇಶ್ವರಿ ಅಮ್ಮನವರ 40 ನೇ ವರ್ಷದ ರಥೋತ್ಸವವು ಅಸಂಖ್ಯಾತ ಭಕ್ತರ ಉಪಸ್ಥಿತಿಯಲ್ಲಿ ವಿವಿಧ ಗ್ರಾಮದೇವತೆಗಳ ಸಮ್ಮುಖದಲ್ಲಿ ವೇದ ಮಂತ್ರ ಘೋಷಗಳ ನಾದದಲ್ಲಿ ಸಡಗರ ಹಾಗೂ ಸಂಭ್ರಮದಿಂದ ಶುಕ್ರವಾರದಂದು ಯಶಸ್ವಿಯಾಗಿ ಜರುಗಿತು. ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ಧಾರ್ಮಿಕ ವಿಧಿವಿಧಾನಗಳು ಹಾಗೂ ಪೂಜಾಕೈಂಕರ್ಯಗಳು ನೆರವೇರಿತು.ಮಂಗಳವಾಧ್ಯದೊಂದಿಗೆ ಶ್ರೀ ದುರ್ಗಾಪರಮೇಶ್ವರಿ ದೇವಿಯವರನ್ನು ಮೂಲ ದೇವತೆಗೆ ವಿಶೇಷ ಪೂಜೆ ಸಲ್ಲಿಸಿ ಗ್ರಾಮದೇವತೆ ಹುಳಿಯಾರಮ್ಮ,ಕೆಂಚಮ್ಮ,ತಿರುಮಲಾಪುರದ ಕೊಲ್ಲಾಪುರದಮ್ಮ,ಗೌಡಗೆರೆಯ ದುರ್ಗಮ್ಮ,ಹೊಸಹಳ್ಳಿಯ ಕೊಲ್ಲಾಪುರದಮ್ಮನವರೊಂದಿಗೆ ಭೇಟಿ ಮಾಡಿಸಿ ಭಕ್ತಾಧಿಗಳ ಉದ್ಘೋಷದೊಂದಿಗೆ ಕರೆತಂದು ರಂಗು ರಂಗಿನ ಬಾವುಟಗಳು, ತಳಿರು ತೋರಣಗಳು ಹಾಗೂ ಹೂವಿನ ಹಾರಗಳಿಂದ ಸರ್ವಾಲಂಕೃತಗೊಂಡ ರಥಕ್ಕೆ ಏರಿಸಲಾಯಿತು.ಮದ್ಯಾಹ್ನ ೨ ಗಂಟೆಗೆ ಹೊಸದುರ್ಗ ಕನಕಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಗಳು ರಥಕ್ಕೆ ಕಾಯಿ ಒಡೆಯುವ ಮೂಲಕ ಹಾಗೂ ಶಾಸಕ ಸಿ.ಬಿ.ಸುರೇಶ್ ಬಾಬು, ಧರ್ಮದರ್ಶಿ ಹನುಮಂತಯ್ಯ,ಕನ್ವೀನರ್ ಎಲೆಬಳ್ಳಿ ಜಯಣ್ಣ,ದೇವಸ್ಥಾವದ ಸಮಿತಿ ಸದಸ್ಯರು ಹಾಗೂ ಗಣ್ಯರು ವಿಶೇಷ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಬೇಸಿಗೆಯ ಸುಡುಬಿಸಿಲನ್ನು ಲೆಕ್ಕಿಸದೆ ಮುಂಜಾನೆಯಿಂದಲೇ ಕಿಕ್ಕಿರಿದು ನೆರದಿದ್ದ ಭಕ್ತಾಧಿಗಳು ಜಯಘೋಷದೊಂದಿಗೆ ತೇರನ್ನೆಳದು ಸಂಭ್ರಮಿಸಿದರು. ಮಂಗಳವಾಧ್ಯದೊಂದಿಗೆ ಸಾಗಿಬ

ಬೇಕಾಬಿಟ್ಟಿ ಲೋಡ್ ಶೆಡ್ಡಿಂಗ್ :ವಿದ್ಯುತ್ ಬಳಕೆದಾರರ ವೇದಿಕೆಯಿಂದ ಉಗ್ರ ಹೋರಾಟದ ಎಚ್ಚರಿಕೆ

ನಗರ ಪ್ರದೇಶಗಳಿಗೆ ವಿದ್ಯುತ್ ಪೂರೈಕೆ ಮಾಡಲು ಪಟ್ಟಣ ಪ್ರದೇಶಗಳಲ್ಲಿ ಅನಗತ್ಯ ಲೋಡ್ ಶೆಡ್ಡಿಂಗ್ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಿ ಹಾಗೂ ಪಟ್ಟಣ ಪ್ರದೇಶಗಳಿಗೆ ಸರ್ಕಾರ ನಿಗದಿ ಮಾಡಿರುವಂತೆ ವಿದ್ಯುತ್ ಪೂರೈಕೆ ಮಾಡಬೇಕು.ಇಲ್ಲದಿದ್ದಲ್ಲಿ ಬೆಸ್ಕಾಂ ಅಧಿಕಾರಿಗಳ ವಿರುದ್ದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹುಳಿಯಾರು ವಿದ್ಯುತ್ ಬಳಕೆದಾರರ ವೇದಿಕೆ ಎಚ್ಚರಿಕೆ ನೀಡಿದೆ. ಹುಳಿಯಾರಿನ ಪರಿವೀಕ್ಷಣ ಮಂದಿರದಲ್ಲಿ ಹುಳಿಯಾರು ವಿದ್ಯುತ್ ಬಳಕೆದಾರರ ವೇದಿಕೆ ಅಧ್ಯಕ್ಷ ಎಲ್.ಆರ್.ಚಂದ್ರಶೇಖರ್ ಅವರ ನೇತೃತ್ವದಲ್ಲಿ ವಿದ್ಯುತ್ ಸಮಸ್ಯೆ ಸಂಬಂಧ ವಿದ್ಯುತ್ ಬಳಕೆದಾರರ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಯಿತು. ಹುಳಿಯಾರು ಸೇರಿದಂತೆ ತಾಲ್ಲೂಕಿನಾದ್ಯಂತ ವಿದ್ಯುತ್ ಸಮಸ್ಯೆ ಬಿಗಡಾಯಿಸಿದ್ದು ವಿದ್ಯುತ್ ಕಾಣುವುದೇ ಅಪರೂಪ ಎಂಬ ಪರಿಸ್ಥಿತಿ ಇದೆ.ಹುಳಿಯಾರಿನಲ್ಲಿ ವಿದ್ಯುತ್ ಮರುವಿತರಣ ಕೇಂದ್ರವಿದ್ದು ಹುಳಿಯಾರು ಭಾಗಕ್ಕೆ 80 ಮೆಘಾವ್ಯಾಟ್ ವಿದ್ಯತ್ ಬಳಕೆಗೆ ಅಲೋಕೇಷನ್ ಇದ್ದರೂ ಕುಂಟು ನೆಪವೊಡ್ಡಿ ನಮ್ಮ ಭಾಗಕ್ಕೆ ನಿಗಧಿಯಾಗಿರುವ ವಿದ್ಯತ್ ಸರಬರಾಜು ಮಾಡದೆ ಕೇವಲ 40 ಮೆಘಾವ್ಯಾಟ್ ಹರಿಸಿ ಉಳಿಕೆ 40 ಮೆಘಾವ್ಯಾಟ್ ವಿದ್ಯುತ್ ಅನ್ನು ನಗರ ಪ್ರದೇಶಗಳಿಗೆ ಸಪ್ಲೈ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 2 ಲಕ್ಷದಷ್ಟು ವಿದ್ಯುತ್ ಗ್ರಾಹಕರಿದ್ದು ಇವರಲ್ಲಿ ಬಹುತೇಕ ಮಂದಿ ಪಂಸ್ ಸೆಟ್ ಆಧಾರಿತ ಕೃಷಿಕರು ಹಾಗೂ ವಿದ್ಯುತ್

ಕಡ್ಡಾಯ ಶಿಕ್ಷಣ ಕಾಯಿದೆ

ಕಡ್ಡಾಯ ಶಿಕ್ಷಣ ಕಾಯಿದೆ-ವಿಜಯ ಕರ್ನಾಟಕ ಪತ್ರಿಕೆಯಲ್ಲಿ ದಿನಾಂಕ 2.4.2010 ರಲ್ಲಿ ಪ್ರಕಟವಾಗಿದೆ.

ಇತಿಹಾಸದ ಬೃಹತ್ ಜನಗಣತಿ ಆರಂಭ

ಇತಿಹಾಸದ ಬೃಹತ್ ಜನಗಣತಿ ಆರಂಭ-ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ದಿನಾಂಕ 1.4.2010 ರಲ್ಲಿ ಪ್ರಕಟವಾಗಿದೆ.

ಪ್ರಾಣಿಗಳ ಮಾರಣ ಹೋಮ- ಗೋಹತ್ಯೆ ನಿಷೇಧ

ಪ್ರಾಣಿಗಳ ಮಾರಣ ಹೋಮ- ಗೋಹತ್ಯೆ ನಿಷೇಧದ ಬಗ್ಗೆ ಪ್ರಜಾವಾಣಿಯಲ್ಲಿ ದಿನಾಂಕ 5.2.2010 ರಲ್ಲಿ ಪ್ರಕಟವಾಗಿರುವ ಲೇಖನ

ರಾಜ್ಯದಿಂದ ನೀಡಿರುವ ಅದಿರು ಪರವಾನಿಗೆ ಲೆಖ್ಖ.

ರಾಜ್ಯದಿಂದ ನೀಡಿರುವ ಅದಿರು ಪರವಾನಿಗೆ ಲೆಖ್ಖ.ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ದಿನಾಂಕ 1.4.2010 ರಲ್ಲಿ ಪ್ರಕಟವಾಗಿದೆ.

ಹುಳಿಯಾರು ಶ್ರೀ ದುರ್ಗಾಪರಮೇಶ್ವರಿಯ 40 ನೇ ವರ್ಷದ ರಥೋತ್ಸವಕ್ಕೆ ಚಾಲನೆ

ಹುಳಿಯಾರು ಶ್ರೀ ದುರ್ಗಾಪರಮೇಶ್ವರಿಯ 40 ನೇ ವರ್ಷದ ರಥೋತ್ಸವಕ್ಕೆ ಚಾಲನೆ ಹುಳಿಯಾರು ಗ್ರಾಮ ದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಿಯವರ 40 ನೇ ವರ್ಷದ ರಥೋತ್ಸವಕ್ಕೆ ಕೋಡಿಪಾಳ್ಯ ,ಲಿಂಗಪ್ಪನಪಾಳ್ಯ,ಕಾಮಶೆಟ್ಟಿಪಾಳ್ಯ ಮತ್ತು ಸೋಮಜ್ಜನಪಾಳ್ಯ ಗ್ರಾಮಸ್ಥರು ಶ್ರೀಅಮ್ಮನವರಿಗೆ ಮಡ್ಲಕ್ಕಿ ಸೇವೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.ಏಪ್ರಿಲ್ ೧೧ ರವರೆಗಿನ ಕಾರ್ಯಕ್ರಮಗಳು ಇಂತಿದೆ. ಏ.5 ರಂದು ಎಡೆ ಸೇವೆ, ಧ್ವಜಾರೋಹಣ ಮತ್ತು ಅಂಕುರಾರ್ಪಣೆ, ಏ.6 ರಂದು ಆರತಿ ಬಾನ, ಎಡೆ ಸೇವೆ, ಏ.7 ರಂದು ರಾತ್ರಿ ಶ್ರೀಹುಳಿಯಾರಮ್ಮನವರು, ಶ್ರೀಕೆಂಚಮ್ಮನವರು, ಹೊಸಹಳ್ಳಿ ಮತ್ತು ತಿರುಮಲಾಪುರದ ಶ್ರೀಕೊಲ್ಲಾಪುರದಮ್ಮನವರು ಹಾಗೂ ಗೌಡಗೆರೆ ಶ್ರೀದುರ್ಗಮ್ಮನವರ ಭೇಟಿ ನಂತರ ಹುಳಿಯಾರು ಕೆರೆಗೆ ದಯಮಾಡಿಸುವುದು. ಏ.8 ರಂದು ಬೆಳಗಿನಜಾವ ಕಳಸ ಸ್ಥಾಪನೆ, ಫಲಹಾರಸೇವೆ, ನಂತರ ಆರೀ ಅಮ್ಮನವರು ಕಳಸ ಸಮೇತ ಮೂಲಸ್ಥಾನಕ್ಕೆ ದಯಮಾಡಿಸುವುದು. ರಾತ್ರಿ ಶ್ರೀಅಮ್ಮನವರ ಉಯ್ಯಾಲೆ ಉತ್ಸವ. ಏ.9 ರಂದು ಮಧ್ಯಾಹ್ನ ಬ್ರಹ್ಮ ರಥೋತ್ಸವ ನಂತರ ವಸಂತ. ಏ.10 ರಂದು ಬೆಳಿಗ್ಗೆ ಸಿಡಿ, ಓಕಳಿ ಸೇವೆ, ಕಂಕಣ ವಿಸರ್ಜನೆ ನಂತರ ಮಡಲಕ್ಕಿ ಸೇವೆ. ಏ.11 ರಂದು ಗ್ರಾಮಸ್ಥರು ಮತ್ತು ಭಕ್ತಾಧಿಗಳಿಂದ ಮಡಲಕ್ಕಿ ಸೇವೆ ಸ್ವೀಕರಿಸುವ ಮೂಲಕ 9 ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ. ಬ್ರಹ್ಮ ರಥೋತ್ಸವದಂದು ಮಧ್ಯಾಹ್ನ ಅನ್ನಸಂತರ್ಪಣೆ ರಾತ್ರಿ ಶ್ರೀದೇವಿ ಮಹತ್ಮೆ ಯಕ್ಷಗಾನ

ಹುಳಿಯಾರು: ಮದರಸ ವಿಚಾರವಾಗಿ ಎರಡು ಪಂಗಡಗಳ ನಡುವೆ ಘರ್ಷಣೆ

ಮದರಸ ವಿಚಾರವಾಗಿ ಒಂದೇ ಕೋಮಿನ ಎರಡು ಪಂಗಡಗಳ ನಡುವೆ ಘರ್ಷಣೆ- --------------------------------------- ವಾಹನಕ್ಕೆ ಕಲ್ಲು: ಹಲವರಿಗೆ ಗಾಯ --------------------- ಮದರಸ ನಡೆಸುತ್ತಿರುವವರು ಒಂದು ಪಂಗಡದ ಧಾರ್ಮಿಕ ಆಚರಣೆ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ ಎಂದು ಅದೇ ಕೋಮಿನ ಮತ್ತೊಂದು ಪಂಗಡ ಆರೋಪಿಸಿ ಈ ವಿಚಾರವಾಗಿ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿ ಎರಡೂ ಪಂಗಡಗಳ ನಡುವೆ ಘರ್ಷಣೆ ನಡೆದು ಒಂದು ಕ್ವಾಲೀಸ್ ವಾಹನದ ಗಾಜು ಪುಡಿಪುಡಿಯಾಗಿ ಎರಡು ಬಣಗಳ ಹಲವು ಮಂದಿಗೆ ಗಾಯಗಳಾದ ಘಟನೆ ಹುಳಿಯಾರಿನಲ್ಲಿ ಭಾನುವಾರ ಜರುಗಿದೆ.ಘಟನೆ ವಿವರ: ಇಲ್ಲಿನ ಹಳೇ ಅಂಚೆ ಕಛೇರಿ ಹಿಂಭಾಗದಲ್ಲಿರುವ ಇಂದಿರಾನಗರದ ಮನೆಯೊಂದರಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ತಬ್ಲಿಕ್ ಪಂಗಡದವರು ಮದರಸ ಆರಂಭಿಸಿದ್ದು ಇವರುಗಳು ಬಹುಸಂಖ್ಯಾತ ಸುನ್ನಿ ಪಂಗಡದ ಬಡ ಮಕ್ಕಳಿಗೆ ಆಮಿಷವೊಡ್ಡಿ ಸುನ್ನಿ ಧರ್ಮ ಪದ್ಧತಿ ಹಾಗೂ ಪಾಲನೆ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆಂದು ಆರೋಪಿಸಿದ ಸುನ್ನಿ ಪಂಗಡದ ಕೆಲ ಯುವಕರು ಮದರಸ ನಡೆಸುವುದನ್ನು ತಡೆಯಲು ಹೋಗಿದ್ದೆ ಈ ಘಟನೆ ನಡೆಯಲು ಕಾರಣ ಎನ್ನಲಾಗಿದೆ. ತಬ್ಲಿಕ್ ಪಂಗಡದವರು ಹೇಳುವುದಿಷ್ಟು : ಹಜರತ್ ದಿಲಾಲ್ ಟ್ರಸ್ಟ್ ಅಡಿಯಲ್ಲಿ ತಬ್ಲಿಕ್ ಪಂಗಡದವರು ಮದರಸ ನಡೆಸುತ್ತಿದ್ದು ಇಲ್ಲಿ ಕುರಾನ್ ಪಠಣ ಹಾಗೂ ನಮಾಝ್ ಕ್ರಮ ಕಲಿಸಿಕೊಡಲಾಗುತ್ತಿದೆ. ಅಲ್ಲದೆ ಕಳೆದ ವರ್ಷದಿಂದ ಈ ಭಾಗದ 3 ಮಸೀದಿಗಳಿಗೆ ನಿರಂತರವಾಗಿ ದೇಣಿಗೆ ನೀಡುತ್ತ ಸಮ

ಮೈಲಾರಪುರದ ಏಳುಕೋಟಿ ಮೈಲಾರಲಿಂಗನ ಬ್ರಹ್ಮರಥೋತ್ಸವ.

20 ವರ್ಷಗಳ ನಂತರ ಮೈಲಾರಪುರದ ಏಳುಕೋಟಿ ಮೈಲಾರಲಿಂಗನ ಬ್ರಹ್ಮರಥೋತ್ಸವ. ------------------------------------------ ಹರಿದು ಬಂತು ಭಕ್ತ ಸಾಗರ ------------------- ಹೊಸದುರ್ಗ ತಾಲೂಕಿನ ಶ್ರೀರಾಂಪುರ ಹೋಬಳಿ ಮೈಲಾರಪುರದ ಬೆಟ್ಟದಲ್ಲಿ ತಪ್ಪಲಿನಲ್ಲಿ ಏಳುಕೋಟಿ ಮೈಲಾರಲಿಂಗನ ಬ್ರಹ್ಮರಥೋತ್ಸವ ಶನಿವಾರದಂದು ಸಹಸ್ರಾರು ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.19 ವರ್ಷಗಳ ನಂತರ ನಡೆಯುತ್ತಿರುವ ಬ್ರಹ್ಮರಥೋತ್ಸವವಾದ್ದರಿಂದ ಉರಿವ ಬಿಸಿಲನ್ನು ಲೆಕ್ಕಿಸದೆ ಹರಿದು ಬಂದ ಸಹಸ್ತ್ರಾರು ಸಂಖ್ಯೆಯ ಭಕ್ತ ಸಾಗರದಿಂದ ಏಳುಕೋಟಿ,ಏಳುಕೋಟಿ ಎಂಬ ಉದ್ಘೋಷ ಮುಗಿಲು ಮುಟ್ಟಿತು. ರಥೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ಆಗಮಿಕರ ಉಪಸ್ಥಿತಿಯಲ್ಲಿ ದಾರ್ಮಿಕ ವಿಧಿವಿಧಾನಗಳು ಪ್ರಾರಂಭಗೊಂಡಿತು. ನೂಥನವಾಗಿ ಸಮರ್ಪಣೆಗೊಂಡಿದ್ದ ರಥಕ್ಕೆ ರಥಾದಿ ದೇವತಾ ಹೋಮ,ರಥ ಸಂಪ್ರೋಕ್ಷಣೆ, ನಿತ್ಯ ಹೋಮ, ಬಲಿ ಪ್ರಧಾನ, ಕೃಷ್ಣಗಂಧೋತ್ಸವ ಮುಂತಾದ ಧಾರ್ಮಿಕ ಕೈಂಕರ್ಯಗಳು ನಡೆಯಿತು.ಬೆಟ್ಟದ ಮೇಲಿನ ಮೂಲ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಕುರುಬರಳ್ಳಿ ಶ್ರೀ ಕಪ್ಪಕರಿಯಮ್ಮದೇವಿ,ಸೂಜಿಕಲ್ಲು ಶ್ರೀ ಕೆಂಚಾಬಿಕೆ ದೇವಿ, ಮೈಲಾರಪುರದ ದೊಡ್ಡಬಿಲ್ಲು ಶ್ರೀ ಚೌಡಮ್ಮದೇವಿ ಉಪಸ್ಥಿತಿಯಲ್ಲಿ ರಥಕ್ಕೆ ಕಳಸ ಸ್ಥಾಪಿಸಲಾಯಿತು. ರಂಗು ರಂಗಿನ ಬಾವುಟಗಳು, ಎಳನೀರು ಗೊನೆಗಳು ಹಾಗೂ ಹೂವಿನ ಹಾರಗಳಿಂದ ಅಲಂಕಾರದೊಂದಿಗೆ ಸಿಂಗಾರಗೊಂಡಿದ್ದ ಹೊಚ್ಚ ಹೊಸ ರಥದಲ್ಲಿ ಶ್ರೀ ಮೈಲಾರಲಿಂಗ

ಮೈಲಾರಪುರದ ಏಳುಕೋಟಿ ಮೈಲಾರಲಿಂಗನ ಬ್ರಹ್ಮರಥೋತ್ಸವ.

20 ವರ್ಷಗಳ ನಂತರ ಮೈಲಾರಪುರದಲ್ಲಿ ಏಳುಕೋಟಿ ಮೈಲಾರಲಿಂಗನ ಬ್ರಹ್ಮರಥೋತ್ಸವ . -------------------------------------------------- ಹರಿದು ಬಂತು ಭಕ್ತ ಸಾಗರ ------------------------ ಹುಳಿಯಾರು ಗಡಿ ಭಾಗದ ಹೊಸದುರ್ಗ ತಾಲೂಕಿನ ಶ್ರೀರಾಂಪುರ ಹೋಬಳಿ ಮೈಲಾರಪುರದ ಬೆಟ್ಟದಲ್ಲಿ ತಪ್ಪಲಿನಲ್ಲಿ ಏಳುಕೋಟಿ ಮೈಲಾರಲಿಂಗನ ಬ್ರಹ್ಮರಥೋತ್ಸವ ಶನಿವಾರದಂದು ಸಹಸ್ರಾರು ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು .19 ವರ್ಷಗಳ ನಂತರ ನಡೆಯುತ್ತಿರುವ ಬ್ರಹ್ಮರಥೋತ್ಸವವಾದ್ದರಿಂದ ಉರಿವ ಬಿಸಿಲನ್ನು ಲೆಕ್ಕಿಸದೆ ಹರಿದು ಬಂದ ಸಹಸ್ತ್ರಾರು ಸಂಖ್ಯೆಯ ಭಕ್ತ ಸಾಗರದಿಂದ ಏಳುಕೋಟಿ , ಏಳುಕೋಟಿ ಎಂಬ ಉದ್ಘೋಷ ಮುಗಿಲು ಮುಟ್ಟಿತು . ರಥೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ಆಗಮಿಕರ ಉಪಸ್ಥಿತಿಯಲ್ಲಿ ದಾರ್ಮಿಕ ವಿಧಿವಿಧಾನಗಳು ಪ್ರಾರಂಭಗೊಂಡಿತು . ನೂಥನವಾಗಿ ಸಮರ್ಪಣೆಗೊಂಡಿದ್ದ ರಥಕ್ಕೆ ರಥಾದಿ ದೇವತಾ ಹೋಮ , ರಥ ಸಂಪ್ರೋಕ್ಷಣೆ , ನಿತ್ಯ ಹೋಮ , ಬಲಿ ಪ್ರಧಾನ , ಕೃಷ್ಣಗಂಧೋತ್ಸವ ಮುಂತಾದ ಧಾರ್ಮಿಕ ಕೈಂಕರ್ಯಗಳು ನಡೆಯಿತು . ಬೆಟ್ಟದ ಮೇಲಿನ ಮೂಲ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಕುರುಬರಳ್ಳಿ ಶ್ರೀ ಕಪ್ಪಕರಿಯಮ್ಮದೇವಿ , ಸೂಜಿಕಲ್ಲು ಶ್ರೀ ಕೆಂಚಾಬಿಕೆ ದೇವಿ , ಮೈಲಾರಪುರದ ದೊಡ್ಡಬಿಲ್ಲು ಶ್ರೀ ಚೌಡಮ್ಮದೇವಿ ಉಪಸ್ಥಿತಿಯಲ್ಲಿ