ದೇಶಕ್ಕೆ ಅನ್ನ ನೀಡುವ ಅನ್ನದಾತನಾದ ರೈತನ ಸಮಸ್ಯೆ ಬಗೆರಿಸಲು ಸರ್ಕಾರಗಳು ವಿಫಲವಾಗುತ್ತಿರುವ ಕಾರಣ ರೈತರ ಜೀವನ ದಿನದಿಂದ ದಿನಕ್ಕೆ ದುಸ್ತರವಾಗುತ್ತಿದ್ದು ಆತ್ಮಹತ್ಯೆಯ ದಾರಿ ಹಿಡಿಯುವಂತಾಗಿದೆ. ರೈತ ಆತ್ಮಹತ್ಯೆಗೆ ಶರಣಾದರೆ ಅದು ದೇಶಕ್ಕೆ ಭಾರಿ ನಷ್ಠ. ಹಾಗಾಗಿ ಸಾಲದ ಬಾದೆಗೆ ಹೆದರಿ ರೈತರು ಆತ್ಮಹತ್ಯೆಯ ನಿರ್ಧಾರ ಕೈಗೊಳ್ಳದೆ ಬದುಕಿದ್ದು ಸಮಸ್ಯೆ ಎದುರಿಸಬೇಕು ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಅಭಿಪ್ರಾಯಪಟ್ಟರು.
ಹುಳಿಯಾರು ಸಮೀಪದ ಬರಗೂರು ಗ್ರಾಮದ ನೂತನ ರೈತ ಸಂಘ ಹಾಗೂ ಹಸಿರು ಸೇನೆ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿ ರೈತ ಸಾಲದ ಶೂಲಕ್ಕೆ ಸಿಲುಕಲು ಸರ್ಕಾರದ ದ್ವಂದ ನೀತಿ ಕಾರಣವಾಗಿದ್ದು ಇದರಿಂದ ಹೊರ ಬರಲು ಹೋರಾಟವೇ ಮದ್ದು ಎಂದರು.
ರೈತ ಬೆಳೆಯುವ ಬೆಳಗೆ ಇನ್ಯಾರೋ ಬೆಲೆ ಕಟ್ಟುತ್ತಿದ್ದು ಮಧ್ಯವರ್ತಿಗಳ ಹಾವಳಿಗೆ ಸಿಕ್ಕು ರೈತ ನುಜ್ಜುಗುಜ್ಜಾಗುತ್ತಿದ್ದಾನೆ.ಸರಿಯಾದ ಬೆಲೆ ನೀಡದೆ ರೈತನಿಗೆ ಮೋಸವಾಗುತ್ತಿದೆ ಎಂದ ಅವರು ಕಡಿಮೆ ಬೆಲೆ ಕೊಟ್ಟು ಭತ್ತ ಕೊಳ್ಳುವ ಇವರು ಅಕ್ಕಿಯನ್ನು 30 ರಿಂದ 50 ರು. ಗೆ ಮಾರುತ್ತಾರೆ. ತೊಗರಿಯನ್ನು 2 ಸಾವಿರಕ್ಕೆ ಖರೀದಿಸಿ 90 ರು. ಗೆ ಮಾರಾಟ ಮಾಡುತ್ತಾರೆ. ಹಾಗಾಗಿ ಸರ್ಕಾರ ರೈತನ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ಶೇ. 75 ರಷ್ಟಿರುವ ರೈತರಿಗೆ ದೇಶ ಹಾಗೂ ರಾಜ್ಯಗಳಲ್ಲಿ ಪ್ರತ್ಯೇಕ ಬಜೆಟ್ ಮಂಡನೆಯಾಗುವ ಹೊರತು ರೈತನ ಅಭಿವೃದ್ಧಿ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ರೈತ ವರ್ಗ ಎಚ್ಚೆತ್ತುಕೊಂಡು ಪ್ರತ್ಯೇಕ ಬಜೆಟ್ಗೆ ಹೋರಾಟ ಮಾಡಬೇಕು ಹಾಗೂ ಒಗ್ಗಟ್ಟಿನ ಬಲ ಪ್ರದರ್ಶಿಸಿ ನಮ್ಮ ಪಾಲಿನ ಹಕ್ಕುಗಳನ್ನು ಪಡೆಯಬೇಕು ಎಂದು ಕರೆ ನೀಡಿದರು.
ರಾಜ್ಯ ಹಸಿರು ಸೇನೆ ಸಂಚಾಲಕ ಕೆಂಕೆರೆ ಸತೀಶ್, ಜಿಲ್ಲಾ ಸಂಚಾಲಕ ಶಿವಶಂಕರಪ್ಪ, ಟ್ರಾಕ್ಟರ್ ಮಾಲೀಕರ ಸಂಘದ ಅಧ್ಯಕ್ಷ ಕಾಡಿನರಾಜ ನಾಗರಾಜು, ಲಕ್ಷ್ಮೀಪುರದ ಶಾಂತ್ಕುಮಾರ್, ಶಿರಾದ ಪರಮಶಿವಯ್ಯ, ಕೆರೆಸೂರಗೊಂಡನಹಳ್ಳಿ ಗಂಗಾಧರಯ್ಯ, ಮಾದಿಹಳ್ಳಿ ರಂಗಸ್ವಾಮಿ, ರಾಜಶೇಖರಯ್ಯ, ನಂಜುಂಡಪ್ಪ, ಈಶ್ವರಯ್ಯ, ರಾಮಲಿಂಗಯ್ಯ, ಜಗದೀಶ್, ಕುಮಾರಯ್ಯ, ಶಂಕರಯ್ಯ, ಬೊಮ್ಮಣ್ಣ
ಉಪಸ್ಥಿತರಿದ್ದರು.
ಹುಳಿಯಾರು ಸಮೀಪದ ಬರಗೂರು ಗ್ರಾಮದ ನೂತನ ರೈತ ಸಂಘ ಹಾಗೂ ಹಸಿರು ಸೇನೆ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿ ರೈತ ಸಾಲದ ಶೂಲಕ್ಕೆ ಸಿಲುಕಲು ಸರ್ಕಾರದ ದ್ವಂದ ನೀತಿ ಕಾರಣವಾಗಿದ್ದು ಇದರಿಂದ ಹೊರ ಬರಲು ಹೋರಾಟವೇ ಮದ್ದು ಎಂದರು.
ರೈತ ಬೆಳೆಯುವ ಬೆಳಗೆ ಇನ್ಯಾರೋ ಬೆಲೆ ಕಟ್ಟುತ್ತಿದ್ದು ಮಧ್ಯವರ್ತಿಗಳ ಹಾವಳಿಗೆ ಸಿಕ್ಕು ರೈತ ನುಜ್ಜುಗುಜ್ಜಾಗುತ್ತಿದ್ದಾನೆ.ಸರಿಯಾದ ಬೆಲೆ ನೀಡದೆ ರೈತನಿಗೆ ಮೋಸವಾಗುತ್ತಿದೆ ಎಂದ ಅವರು ಕಡಿಮೆ ಬೆಲೆ ಕೊಟ್ಟು ಭತ್ತ ಕೊಳ್ಳುವ ಇವರು ಅಕ್ಕಿಯನ್ನು 30 ರಿಂದ 50 ರು. ಗೆ ಮಾರುತ್ತಾರೆ. ತೊಗರಿಯನ್ನು 2 ಸಾವಿರಕ್ಕೆ ಖರೀದಿಸಿ 90 ರು. ಗೆ ಮಾರಾಟ ಮಾಡುತ್ತಾರೆ. ಹಾಗಾಗಿ ಸರ್ಕಾರ ರೈತನ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ಶೇ. 75 ರಷ್ಟಿರುವ ರೈತರಿಗೆ ದೇಶ ಹಾಗೂ ರಾಜ್ಯಗಳಲ್ಲಿ ಪ್ರತ್ಯೇಕ ಬಜೆಟ್ ಮಂಡನೆಯಾಗುವ ಹೊರತು ರೈತನ ಅಭಿವೃದ್ಧಿ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ರೈತ ವರ್ಗ ಎಚ್ಚೆತ್ತುಕೊಂಡು ಪ್ರತ್ಯೇಕ ಬಜೆಟ್ಗೆ ಹೋರಾಟ ಮಾಡಬೇಕು ಹಾಗೂ ಒಗ್ಗಟ್ಟಿನ ಬಲ ಪ್ರದರ್ಶಿಸಿ ನಮ್ಮ ಪಾಲಿನ ಹಕ್ಕುಗಳನ್ನು ಪಡೆಯಬೇಕು ಎಂದು ಕರೆ ನೀಡಿದರು.
ರಾಜ್ಯ ಹಸಿರು ಸೇನೆ ಸಂಚಾಲಕ ಕೆಂಕೆರೆ ಸತೀಶ್, ಜಿಲ್ಲಾ ಸಂಚಾಲಕ ಶಿವಶಂಕರಪ್ಪ, ಟ್ರಾಕ್ಟರ್ ಮಾಲೀಕರ ಸಂಘದ ಅಧ್ಯಕ್ಷ ಕಾಡಿನರಾಜ ನಾಗರಾಜು, ಲಕ್ಷ್ಮೀಪುರದ ಶಾಂತ್ಕುಮಾರ್, ಶಿರಾದ ಪರಮಶಿವಯ್ಯ, ಕೆರೆಸೂರಗೊಂಡನಹಳ್ಳಿ ಗಂಗಾಧರಯ್ಯ, ಮಾದಿಹಳ್ಳಿ ರಂಗಸ್ವಾಮಿ, ರಾಜಶೇಖರಯ್ಯ, ನಂಜುಂಡಪ್ಪ, ಈಶ್ವರಯ್ಯ, ರಾಮಲಿಂಗಯ್ಯ, ಜಗದೀಶ್, ಕುಮಾರಯ್ಯ, ಶಂಕರಯ್ಯ, ಬೊಮ್ಮಣ್ಣ
ಉಪಸ್ಥಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ