ಕನಕದಾಸರ ಏಕಶಿಲೆಗೆ ಹುಳಿಯಾರಿನಲ್ಲಿ ಭವ್ಯ ಸ್ವಾಗತ
ಹೊಸದುರ್ಗ ಸಮೀಪದ ಕೆಲ್ಲೋಡುವಿನ ನೇತ್ರಾವತಿ ನದಿ ನಾಲೆಯ ದಂಡೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕನಕಪೀಠದಲ್ಲಿ ಕನಕದಾಸರ ಬೃಹತ್ ವಿಗ್ರಹ ಸ್ಥಾಪಿಸುವ ಸಲುವಾಗಿ ದೊಡ್ಡಬಳ್ಳಾಪುರದ ದೇವನಹಳ್ಳಿ ಬಂಡೆಯಿಂದ ಸಾಗಿಸುತ್ತಿರುವ ಏಕಶಿಲೆ ಹೊತ್ತ ವಾಹನವು ಮಾರ್ಗಮಧ್ಯೆ ಹುಳಿಯಾರಿಗೆ ಆಗಮಿಸಿದಾಗ ಕುರುಬರ ಸಂಘದ ಪ್ರತಿನಿಧಿಗಳು ಹಾಗೂ ನಾಗರೀಕರು ಕಂಸಾಳೆ, ನಗಾರಿ, ಡೊಳ್ಳು ವಾಧ್ಯದೊಂದಿಗೆ ಭವ್ಯವಾಗಿ ಸ್ವಾಗತಿಸಲಾಯಿತು.
380 ಟನ್ ತೂಕದ, 40 ಅಡಿ ಉದ್ದದ ಹಾಗೂ 8 ಅಡಿ ದಪ್ಪದಾದ 150 ಕ್ಕೂ ಹೆಚ್ಚು ಚಕ್ರವುಳ್ಳ ಭಾರಿ ವಾಹನದಲ್ಲಿ ಸಾಗಿಬಂದ ಏಕಶಿಲೆಯನ್ನು ಇಲ್ಲಿನ ಎಪಿಎಂಸಿ ಬಳಿ ಹೋಬಳಿ ಕುರುಬರ ಸಂಘದ ಬಸವಲಿಂಗೇಗೌಡ, ಕಾಯಿ ಕುಮಾರ್, ಲಿಂಗರಾಜು, ದಯಾನಂದ್, ಗೋವಿಂದಪ್ಪ, ರಾಮಯ್ಯ, ತಿಮ್ಮಯ್ಯ ಅವರುಗಳು ಪೂಜೆ ಸಲ್ಲಿಸಿ ಸ್ವಾಗತಿಸಿದರು.
ಮಂಗಳವಾದ್ಯ, ಡೊಳ್ಳುಕುಣಿತದೊಂದಿಗೆ ಹೊಸದುರ್ಗ ಕನಕಶಾಖಾ ಮಠದ ಈಶ್ವರಾನಂದಪುರಿ ಸ್ವಾಮಿಜಿಯೊಂದಿಗೆ ಏಕಶಿಲೆಯನ್ನು ಮೆರವಣಿಗೆಯೊಂದಿಗೆ ಕರೆತರುವಾಗ ಕನಕ ಟ್ರಸ್ಟ್ ನ ಗವಿರಂಗಯ್ಯ, ರಂಗನಾಥ್, ಜಯಣ್ಣ, ಪುಟ್ಟರಾಜು, ಬೋರಲಿಂಗಯ್ಯ, ಬನಪ್ಪ ಅವರುಗಳು ಕೆನರಾ ಬ್ಯಾಂಕ್ ಬಳಿ ಶ್ರೀಗಳಿಗೆ ಹಾಗೂ ಏಕಶಿಲೆಗೆ ಹಾರ ಹಾಕಿ ಪೂಜೆ ಸಲ್ಲಿಸಿ ಪಠಾಕಿ ಸಿಡಿಸಿ ಸಂಭ್ರಮಿಸಿದರು.
ಹೊಸದುರ್ಗ ಸಮೀಪದ ಕೆಲ್ಲೋಡುವಿನ ನೇತ್ರಾವತಿ ನದಿ ನಾಲೆಯ ದಂಡೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕನಕಪೀಠದಲ್ಲಿ ಕನಕದಾಸರ ಬೃಹತ್ ವಿಗ್ರಹ ಸ್ಥಾಪಿಸುವ ಸಲುವಾಗಿ ದೊಡ್ಡಬಳ್ಳಾಪುರದ ದೇವನಹಳ್ಳಿ ಬಂಡೆಯಿಂದ ಸಾಗಿಸುತ್ತಿರುವ ಏಕಶಿಲೆ ಹೊತ್ತ ವಾಹನವು ಮಾರ್ಗಮಧ್ಯೆ ಹುಳಿಯಾರಿಗೆ ಆಗಮಿಸಿದಾಗ ಕುರುಬರ ಸಂಘದ ಪ್ರತಿನಿಧಿಗಳು ಹಾಗೂ ನಾಗರೀಕರು ಕಂಸಾಳೆ, ನಗಾರಿ, ಡೊಳ್ಳು ವಾಧ್ಯದೊಂದಿಗೆ ಭವ್ಯವಾಗಿ ಸ್ವಾಗತಿಸಲಾಯಿತು.
380 ಟನ್ ತೂಕದ, 40 ಅಡಿ ಉದ್ದದ ಹಾಗೂ 8 ಅಡಿ ದಪ್ಪದಾದ 150 ಕ್ಕೂ ಹೆಚ್ಚು ಚಕ್ರವುಳ್ಳ ಭಾರಿ ವಾಹನದಲ್ಲಿ ಸಾಗಿಬಂದ ಏಕಶಿಲೆಯನ್ನು ಇಲ್ಲಿನ ಎಪಿಎಂಸಿ ಬಳಿ ಹೋಬಳಿ ಕುರುಬರ ಸಂಘದ ಬಸವಲಿಂಗೇಗೌಡ, ಕಾಯಿ ಕುಮಾರ್, ಲಿಂಗರಾಜು, ದಯಾನಂದ್, ಗೋವಿಂದಪ್ಪ, ರಾಮಯ್ಯ, ತಿಮ್ಮಯ್ಯ ಅವರುಗಳು ಪೂಜೆ ಸಲ್ಲಿಸಿ ಸ್ವಾಗತಿಸಿದರು.
ಮಂಗಳವಾದ್ಯ, ಡೊಳ್ಳುಕುಣಿತದೊಂದಿಗೆ ಹೊಸದುರ್ಗ ಕನಕಶಾಖಾ ಮಠದ ಈಶ್ವರಾನಂದಪುರಿ ಸ್ವಾಮಿಜಿಯೊಂದಿಗೆ ಏಕಶಿಲೆಯನ್ನು ಮೆರವಣಿಗೆಯೊಂದಿಗೆ ಕರೆತರುವಾಗ ಕನಕ ಟ್ರಸ್ಟ್ ನ ಗವಿರಂಗಯ್ಯ, ರಂಗನಾಥ್, ಜಯಣ್ಣ, ಪುಟ್ಟರಾಜು, ಬೋರಲಿಂಗಯ್ಯ, ಬನಪ್ಪ ಅವರುಗಳು ಕೆನರಾ ಬ್ಯಾಂಕ್ ಬಳಿ ಶ್ರೀಗಳಿಗೆ ಹಾಗೂ ಏಕಶಿಲೆಗೆ ಹಾರ ಹಾಕಿ ಪೂಜೆ ಸಲ್ಲಿಸಿ ಪಠಾಕಿ ಸಿಡಿಸಿ ಸಂಭ್ರಮಿಸಿದರು.
128 ಚಕ್ರದ ಭಾರಿ ವಾಹನದಲ್ಲಿ ಭಾರಿ ಗಾತ್ರದ ಏಕಶಿಲೆ ಕೊಂಡೊಯ್ಯುವುದನ್ನು ನೋಡಲು ಜನಜಾತ್ರೆಯೇ ನೆರೆದಿತ್ತು. ಶಾಸಕ ಸಿ.ಬಿ.ಸುರೇಶ್ಬಾಬು, ಕನಕಪೀಠದ ಆಡಳಿತಾಧಿಕಾರಿ ಹಾಗೂ ಹೊಸದುರ್ಗದ ಮಾಜಿ ಶಾಸಕ ಗೋವಿಂದಪ್ಪ, ತಾ.ಪಂ.ಸದಸ್ಯ ಶಿವನಂಜಪ್ಪ, ನಂದಿಹಳ್ಳಿ ಶಿವಣ್ಣ,ಅಹಿಂದ ರಾಜ್ಯ ಸಂಚಾಲಕ ಸಿ.ಎಲ್.ರವಿಕುಮಾರ್ ಸೇರಿದಂತೆ ಲಿಂಗಪ್ಪನಪಾಳ್ಯ, ಸೋಮಜ್ಜನಪಾಳ್ಯ, ಹುಳಿಯಾರು, ಕುರಿಹಟ್ಟಿ, ನಂದಿಹಳ್ಳಿ, ಹೊಸಹಳ್ಳಿ, ಸೇರಿದಂತೆ ಅಕ್ಕಪಕ್ಕದ ಅಪಾರ ಸಂಖ್ಯೆಯ ಕನಕದಾಸರ ಅನುಯಾಯಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ನೂರಕ್ಕೂ ಹೆಚ್ಚು ಬೈಕ್ ಗಳಲ್ಲಿ ರ್ಯಾಲಿ ನಡೆಸಿ ಜಯಘೋಷ, ಪಠಾಕಿ, ಅದ್ದೂರಿ ಮೆರವಣಿಗೆ ನಡೆಸಿ ಆತ್ಮೀಯತೆಯಿಂದ ಬೀಳ್ಕೊಟ್ಟರು.
ನೂರಕ್ಕೂ ಹೆಚ್ಚು ಬೈಕ್ ಗಳಲ್ಲಿ ರ್ಯಾಲಿ ನಡೆಸಿ ಜಯಘೋಷ, ಪಠಾಕಿ, ಅದ್ದೂರಿ ಮೆರವಣಿಗೆ ನಡೆಸಿ ಆತ್ಮೀಯತೆಯಿಂದ ಬೀಳ್ಕೊಟ್ಟರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ