ನಗರ ಪ್ರದೇಶಗಳಿಗೆ ವಿದ್ಯುತ್ ಪೂರೈಕೆ ಮಾಡಲು ಪಟ್ಟಣ ಪ್ರದೇಶಗಳಲ್ಲಿ ಅನಗತ್ಯ ಲೋಡ್ ಶೆಡ್ಡಿಂಗ್ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಿ ಹಾಗೂ ಪಟ್ಟಣ ಪ್ರದೇಶಗಳಿಗೆ ಸರ್ಕಾರ ನಿಗದಿ ಮಾಡಿರುವಂತೆ ವಿದ್ಯುತ್ ಪೂರೈಕೆ ಮಾಡಬೇಕು.ಇಲ್ಲದಿದ್ದಲ್ಲಿ ಬೆಸ್ಕಾಂ ಅಧಿಕಾರಿಗಳ ವಿರುದ್ದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹುಳಿಯಾರು ವಿದ್ಯುತ್ ಬಳಕೆದಾರರ ವೇದಿಕೆ ಎಚ್ಚರಿಕೆ ನೀಡಿದೆ.
ಹುಳಿಯಾರಿನ ಪರಿವೀಕ್ಷಣ ಮಂದಿರದಲ್ಲಿ ಹುಳಿಯಾರು ವಿದ್ಯುತ್ ಬಳಕೆದಾರರ ವೇದಿಕೆ ಅಧ್ಯಕ್ಷ ಎಲ್.ಆರ್.ಚಂದ್ರಶೇಖರ್ ಅವರ ನೇತೃತ್ವದಲ್ಲಿ ವಿದ್ಯುತ್ ಸಮಸ್ಯೆ ಸಂಬಂಧ ವಿದ್ಯುತ್ ಬಳಕೆದಾರರ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಯಿತು.
ಹುಳಿಯಾರು ಸೇರಿದಂತೆ ತಾಲ್ಲೂಕಿನಾದ್ಯಂತ ವಿದ್ಯುತ್ ಸಮಸ್ಯೆ ಬಿಗಡಾಯಿಸಿದ್ದು ವಿದ್ಯುತ್ ಕಾಣುವುದೇ ಅಪರೂಪ ಎಂಬ ಪರಿಸ್ಥಿತಿ ಇದೆ.ಹುಳಿಯಾರಿನಲ್ಲಿ ವಿದ್ಯುತ್ ಮರುವಿತರಣ ಕೇಂದ್ರವಿದ್ದು
ಹುಳಿಯಾರು ಭಾಗಕ್ಕೆ 80 ಮೆಘಾವ್ಯಾಟ್ ವಿದ್ಯತ್ ಬಳಕೆಗೆ ಅಲೋಕೇಷನ್ ಇದ್ದರೂ ಕುಂಟು ನೆಪವೊಡ್ಡಿ ನಮ್ಮ ಭಾಗಕ್ಕೆ ನಿಗಧಿಯಾಗಿರುವ ವಿದ್ಯತ್ ಸರಬರಾಜು ಮಾಡದೆ ಕೇವಲ 40 ಮೆಘಾವ್ಯಾಟ್ ಹರಿಸಿ ಉಳಿಕೆ 40 ಮೆಘಾವ್ಯಾಟ್ ವಿದ್ಯುತ್ ಅನ್ನು ನಗರ ಪ್ರದೇಶಗಳಿಗೆ ಸಪ್ಲೈ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 2 ಲಕ್ಷದಷ್ಟು ವಿದ್ಯುತ್ ಗ್ರಾಹಕರಿದ್ದು ಇವರಲ್ಲಿ ಬಹುತೇಕ ಮಂದಿ ಪಂಸ್ ಸೆಟ್ ಆಧಾರಿತ ಕೃಷಿಕರು ಹಾಗೂ ವಿದ್ಯುತ್ ಅವಲಂಭಿತ ಉದ್ದಿಮೆದಾರರಾಗಿದ್ದಾರೆ. ಎಲ್ಲ ಗ್ರಾಮಗಳಲ್ಲೂ ವಿದ್ಯುತ್ ಸಹಕಾರದಿಂದಲೇ ಕುಡಿಯುವ ನೀರು ಸರಬರಾಜು ಮಾಡಬೇಕಿದ್ದು ಅಧಿಕಾರಿಗಳು ಕಾನೂನು ಉಲ್ಲಂಘಿಸಿ ವಿದ್ಯುತ್ ವ್ಯತ್ಯಯ ಮಾಡುತ್ತಿರುವುದರಿಂದ ಜನರ ಜೀನವ ನಿರ್ವಹಣೆಗೆ ತೊಡಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹುಳಿಯಾರು ಪಟ್ಟಣದ ಶೇ.99 ರಷ್ಟು ಕಮರ್ಷಿಯಲ್ ವಿದ್ಯುತ್ ಗ್ರಾಹಕರಿದ್ದು ಇಲಾಖೆಗೆ ಲಾಭ ತಂದುಕೊಡುವವರಾಗಿದ್ದಾರೆ ಹಾಗೂ ಯಾವುದೇ ಬಾಕಿ ಉಳಿಸದೆ ನಿರಂತರವಾಗಿ ಬಿಲ್ ಪಾವತ್ತಿಸುವವರಾಗಿದ್ದಾರೆ. ಮೂನ್ಸೂಚನೆ ಇಲ್ಲದೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡುತ್ತಿರುವುದರಿಂದ ಅವರ ಕೆಲಸ-ಕಾರ್ಯಗಳಿಗೆ ತೊಡಕಾಗಿದೆ. ಹಾಗಾಗಿ ಸರ್ಕಾರ ನಿಗಧಿ ಮಾಡಿರುವ 4 ಗಂಟೆ ಲೋಡ್ ಶೆಡ್ಡಿಂಗ್ ಸಮಯ ನಿಗಧಿ ಮಾಡಬೇಕು ಹಾಗೂ ಉಳಿದಂತೆ 20 ಗಂಟೆ ನಿರಂತರವಾಗಿ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಕೈಗಾರಿಕ ಪ್ರದೇಶವಾದ ತುಮಕೂರು, ಕುಣಿಗಲ್, ಮಧುಗಿರಿಗಳಲ್ಲಿ ಮಾತ್ರ ವಿದ್ಯುತ್ ಸೇವೆ ಉತ್ತಮವಾಗಿದ್ದು ಚಿ.ನಾ.ಹಳ್ಳಿ ಭಾಗಕ್ಕೆ ಮಾತ್ರ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದಿ ಈ ತಾರತಮ್ಯ ನೀತಿ ಏಕೆ ಎಂದು ಪ್ರಶ್ನಿಸಿದ ವಿದ್ಯುತ್ ಬಳಕೆದಾರರು ನಿಯಮಾನುಸಾರ ಹುಳಿಯಾರಿನ ಮರು ವಿತರಣಾ ಕೇಂದ್ರಕ್ಕೆ ನಿರಂತರ ವಿದ್ಯುತ್ ಸರಬರಾಜು ನೀಡಿ ಆ ಕೇಂದ್ರದಿಂದಲೇ ಲೋಡ್ ಶೆಡ್ಡಿಂಗ್ ಮಾಡಬೇಕಿರುತ್ತದೆ. ಆದರೆ ಕೆ.ಬಿ.ಕ್ರಾಸ್ ನ ವಿತರಣಾ ಕೇಂದ್ರದಲ್ಲಿಯೇ ಲೋಡ್ ಶೆಡ್ಡಿಂಗ್ಗೆ ಮುಂದಾಗುವುದು ಎಷ್ಟು ಸರಿ ಎಂದಿದ್ದಾರೆ.
ಸಭೆಯಲ್ಲಿ ಹಿಟ್ಟಿನ ಮಿಲ್ ಸಂಘದ ನಾಗಪ್ರಸಾದ್, ಎನ್ಐಐಟಿ ಪ್ರಭು, ಸ್ಟುಡಿಯೋ ಸಂಘದ ಸುದರ್ಶನ್, ಸಾಮಿಲ್ ಸಂಘದ ಆರೀಫ್,ಎಚ್.ಎಂ.ಶ್ರೀನಿವಾಸಚಾರ್,ಟಿ.ಎನ್.ತಮ್ಮಯ್ಯ, ಆಯಿಲ್ ಮಿಲ್ ಸಂಘದ ಸುದೀರ್, ಎಚ್.ಎಸ್.ವೆಂಕಟೇಶ್, ನಾರಿನ ಕೈಗಾರಿಕೆ ಸಂಘದ ಎಸ್ಎಸ್ಆರ್ ದಯಾನಂದ್, ಸೈಯದ್ ಸಮೀಉಲ್ಲಾ, ನಿಂಗಪ್ಪ, ಮಹೇಶ್, ಮತ್ತಿತರರು ಉಪಸ್ಥಿತರಿದ್ದರು.
ಹುಳಿಯಾರಿನ ಪರಿವೀಕ್ಷಣ ಮಂದಿರದಲ್ಲಿ ಹುಳಿಯಾರು ವಿದ್ಯುತ್ ಬಳಕೆದಾರರ ವೇದಿಕೆ ಅಧ್ಯಕ್ಷ ಎಲ್.ಆರ್.ಚಂದ್ರಶೇಖರ್ ಅವರ ನೇತೃತ್ವದಲ್ಲಿ ವಿದ್ಯುತ್ ಸಮಸ್ಯೆ ಸಂಬಂಧ ವಿದ್ಯುತ್ ಬಳಕೆದಾರರ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಯಿತು.
ಹುಳಿಯಾರು ಸೇರಿದಂತೆ ತಾಲ್ಲೂಕಿನಾದ್ಯಂತ ವಿದ್ಯುತ್ ಸಮಸ್ಯೆ ಬಿಗಡಾಯಿಸಿದ್ದು ವಿದ್ಯುತ್ ಕಾಣುವುದೇ ಅಪರೂಪ ಎಂಬ ಪರಿಸ್ಥಿತಿ ಇದೆ.ಹುಳಿಯಾರಿನಲ್ಲಿ ವಿದ್ಯುತ್ ಮರುವಿತರಣ ಕೇಂದ್ರವಿದ್ದು
ಹುಳಿಯಾರು ಭಾಗಕ್ಕೆ 80 ಮೆಘಾವ್ಯಾಟ್ ವಿದ್ಯತ್ ಬಳಕೆಗೆ ಅಲೋಕೇಷನ್ ಇದ್ದರೂ ಕುಂಟು ನೆಪವೊಡ್ಡಿ ನಮ್ಮ ಭಾಗಕ್ಕೆ ನಿಗಧಿಯಾಗಿರುವ ವಿದ್ಯತ್ ಸರಬರಾಜು ಮಾಡದೆ ಕೇವಲ 40 ಮೆಘಾವ್ಯಾಟ್ ಹರಿಸಿ ಉಳಿಕೆ 40 ಮೆಘಾವ್ಯಾಟ್ ವಿದ್ಯುತ್ ಅನ್ನು ನಗರ ಪ್ರದೇಶಗಳಿಗೆ ಸಪ್ಲೈ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 2 ಲಕ್ಷದಷ್ಟು ವಿದ್ಯುತ್ ಗ್ರಾಹಕರಿದ್ದು ಇವರಲ್ಲಿ ಬಹುತೇಕ ಮಂದಿ ಪಂಸ್ ಸೆಟ್ ಆಧಾರಿತ ಕೃಷಿಕರು ಹಾಗೂ ವಿದ್ಯುತ್ ಅವಲಂಭಿತ ಉದ್ದಿಮೆದಾರರಾಗಿದ್ದಾರೆ. ಎಲ್ಲ ಗ್ರಾಮಗಳಲ್ಲೂ ವಿದ್ಯುತ್ ಸಹಕಾರದಿಂದಲೇ ಕುಡಿಯುವ ನೀರು ಸರಬರಾಜು ಮಾಡಬೇಕಿದ್ದು ಅಧಿಕಾರಿಗಳು ಕಾನೂನು ಉಲ್ಲಂಘಿಸಿ ವಿದ್ಯುತ್ ವ್ಯತ್ಯಯ ಮಾಡುತ್ತಿರುವುದರಿಂದ ಜನರ ಜೀನವ ನಿರ್ವಹಣೆಗೆ ತೊಡಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹುಳಿಯಾರು ಪಟ್ಟಣದ ಶೇ.99 ರಷ್ಟು ಕಮರ್ಷಿಯಲ್ ವಿದ್ಯುತ್ ಗ್ರಾಹಕರಿದ್ದು ಇಲಾಖೆಗೆ ಲಾಭ ತಂದುಕೊಡುವವರಾಗಿದ್ದಾರೆ ಹಾಗೂ ಯಾವುದೇ ಬಾಕಿ ಉಳಿಸದೆ ನಿರಂತರವಾಗಿ ಬಿಲ್ ಪಾವತ್ತಿಸುವವರಾಗಿದ್ದಾರೆ. ಮೂನ್ಸೂಚನೆ ಇಲ್ಲದೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡುತ್ತಿರುವುದರಿಂದ ಅವರ ಕೆಲಸ-ಕಾರ್ಯಗಳಿಗೆ ತೊಡಕಾಗಿದೆ. ಹಾಗಾಗಿ ಸರ್ಕಾರ ನಿಗಧಿ ಮಾಡಿರುವ 4 ಗಂಟೆ ಲೋಡ್ ಶೆಡ್ಡಿಂಗ್ ಸಮಯ ನಿಗಧಿ ಮಾಡಬೇಕು ಹಾಗೂ ಉಳಿದಂತೆ 20 ಗಂಟೆ ನಿರಂತರವಾಗಿ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಕೈಗಾರಿಕ ಪ್ರದೇಶವಾದ ತುಮಕೂರು, ಕುಣಿಗಲ್, ಮಧುಗಿರಿಗಳಲ್ಲಿ ಮಾತ್ರ ವಿದ್ಯುತ್ ಸೇವೆ ಉತ್ತಮವಾಗಿದ್ದು ಚಿ.ನಾ.ಹಳ್ಳಿ ಭಾಗಕ್ಕೆ ಮಾತ್ರ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದಿ ಈ ತಾರತಮ್ಯ ನೀತಿ ಏಕೆ ಎಂದು ಪ್ರಶ್ನಿಸಿದ ವಿದ್ಯುತ್ ಬಳಕೆದಾರರು ನಿಯಮಾನುಸಾರ ಹುಳಿಯಾರಿನ ಮರು ವಿತರಣಾ ಕೇಂದ್ರಕ್ಕೆ ನಿರಂತರ ವಿದ್ಯುತ್ ಸರಬರಾಜು ನೀಡಿ ಆ ಕೇಂದ್ರದಿಂದಲೇ ಲೋಡ್ ಶೆಡ್ಡಿಂಗ್ ಮಾಡಬೇಕಿರುತ್ತದೆ. ಆದರೆ ಕೆ.ಬಿ.ಕ್ರಾಸ್ ನ ವಿತರಣಾ ಕೇಂದ್ರದಲ್ಲಿಯೇ ಲೋಡ್ ಶೆಡ್ಡಿಂಗ್ಗೆ ಮುಂದಾಗುವುದು ಎಷ್ಟು ಸರಿ ಎಂದಿದ್ದಾರೆ.
ಸಭೆಯಲ್ಲಿ ಹಿಟ್ಟಿನ ಮಿಲ್ ಸಂಘದ ನಾಗಪ್ರಸಾದ್, ಎನ್ಐಐಟಿ ಪ್ರಭು, ಸ್ಟುಡಿಯೋ ಸಂಘದ ಸುದರ್ಶನ್, ಸಾಮಿಲ್ ಸಂಘದ ಆರೀಫ್,ಎಚ್.ಎಂ.ಶ್ರೀನಿವಾಸಚಾರ್,ಟಿ.ಎನ್.ತಮ್ಮಯ್ಯ, ಆಯಿಲ್ ಮಿಲ್ ಸಂಘದ ಸುದೀರ್, ಎಚ್.ಎಸ್.ವೆಂಕಟೇಶ್, ನಾರಿನ ಕೈಗಾರಿಕೆ ಸಂಘದ ಎಸ್ಎಸ್ಆರ್ ದಯಾನಂದ್, ಸೈಯದ್ ಸಮೀಉಲ್ಲಾ, ನಿಂಗಪ್ಪ, ಮಹೇಶ್, ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ