ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರಿನಲ್ಲಿ ಅದ್ದೂರಿ ಹನುಮಜಯಂತಿ

(ಹುಳಿಯಾರು ಶಂಕರಪುರದಲ್ಲಿ ಹನುಮಜಯಂತಿ ಅಂಗವಾಗಿ ನಡೆದ ರಾಮ ಭಜನೆಯ ಒಂದು ನೋಟ.) (ಹುಳಿಯಾರಿನಲ್ಲಿ ಹನುಮಜಯಂತಿ ಅಂಗವಾಗಿ ಏರ್ಪಡಿಸಿದ್ದ ಶ್ರೀಸ್ವಾಮಿಯವರ ಉತ್ಸವದಲ್ಲಿ ಪಾಲ್ಗೊಂಡ ಶಿವಮೊಗ್ಗ ಜಿಲ್ಲೆ ಹೆಗ್ಗೋಡಿನ ರಾಜ್ಯ ಪ್ರಶಸ್ತಿ ವಿಜೇತ ಮಹಿಳಾ ಡೊಳ್ಳು ಕುಣಿತ ತಂಡ ನೋಡುಗರನ್ನು ಆಕಷಿ೯ಸಿತ್ತು.) (ಹುಳಿಯಾರಿನಲ್ಲಿ ಹನುಮಜಯಂತಿ ಅಂಗವಾಗಿ ಸೋಮವಾರ ರಾತ್ರಿ ನಡೆದ ಶ್ರೀಸ್ವಾಮಿಯವರ ವಿಜೃಂಭಣೆಯಿಂದ ನಡೆದ ರಾಜಬೀದಿ ಉತ್ಸವ ಮಾಡಲಾಯಿತು. ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಟಿ.ಆರ್.ಶ್ರೀನಿವಾಸ ಶ್ರೇಷ್ಠಿ, ಅಧ್ಯಕ್ಷ ಎಸ್ಆರ್ಎಸ್ ದಯಾನಂದ್, ಆರ್.ಮಂಜುನಾಥ್, ಎಚ್.ವಿ.ಧನಂಜಯಮೂತಿ೯, ಟಿ.ಆರ್.ರಂಗನಾಥಶೆಟ್ಟಿ, ಕೆ.ಎಂ.ರಾಮಯ್ಯ, ಮೀಸೆ ರಂಗಪ್ಪ, ಎಂ.ಅಶೋಕ್ ಬಾಬು, ಎಚ್.ಎಸ್.ಪ್ರದೀಪ್, ಡಾಬಾ ಸುರೇಶ್ ಇನ್ನಿತರರಿದ್ದಾರೆ.) ಪಟ್ಟಣದ ವಿವಿಧ ದೇವಾಲಯಗಳಲ್ಲಿ ಇಂದು ಹನುಮ ಜಯಂತಿ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಮಾರುತಿ ನಗರದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀ ಆಂಜನೇಯಸ್ವಾಮಿ ಜೀಣೋ೯ದ್ಧಾರ ಸಮಿತಿಯಿಂದ ಹನುಮಂತ ದೇವರಿಗೆ ಅಭಿಷೇಕ, ರಾಮಚಂದ್ರ ಭಟ್ಟರ ನೇತೃತ್ವದಲ್ಲಿ ಪವಮಾನ ಹೋಮ, ಪೂ೯ಣಾ೯ಹುತಿ, ಮಹಾಮಂಗಳಾರತಿ ಮುಂತಾದ ಧಾಮಿ೯ಕ ಕಾರ್ಯಕ್ರಮ ನಡೆಸಿ ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು.ನೂರಾರು ಭಕ್ತಾಧಿಗಳು ದೇವಾಲಯಕ್ಕೆ ಭೇಟಿ ನೀಡಿ ಶ್ರೀ ಸ್ವಾಮಿಯವರ ದರ್ಶನ ಪಡೆದು ಧನ್ಯತೆ ಮೆರೆದರು.

ದಸೂಡಿಯಲ್ಲಿ ಸಡಗರ-ಸಂಭ್ರಮದ ಹನುಮಜಯಂತಿ

ಹುಳಿಯಾರು ಹೋಬಳಿ ದಸೂಡಿ ಗ್ರಾಮದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಸಡಗರ ಮತ್ತು ಸಂಭ್ರಮದಿಂದ ಹನುಮಜಯಂತಿ ಮತ್ತು ಶ್ರೀ ಸ್ವಾಮಿಯ ರಥೋತ್ಸವವನ್ನು ಭಾನುವಾರ ಆಚರಿಸಲಾಯಿತು. ಹನುಮಜಂತಿ ಅಂಗವಾಗಿ ಭಕ್ತಾಧಿಗಳ ಸೇವಾರ್ಥದಲ್ಲಿ ಶ್ರೀಸ್ವಾಮಿಯವರಿಗೆ ನೂರೊಂದೆಡೆ ಪೂಜೆ, ಅಭಿಷೇಕ, ಮಂಗಳಾರತಿ, ಲಲಿತ ಸಹಸ್ರನಾಮ ಪೂಜೆ, ಅಷ್ಟೋತ್ತರ, ಸುಮಂಗಲೆಯರಿಂದ ದೀಪಸ್ತಂಭ ಪೂಜೆ, ಕುಂಕುಮಾರ್ಚನೆ, ಸಹಸ್ರನಾಮ ಪೂಜೆ, ಷೋಡೋಪಚಾರ ಪೂಜೆ, ಮಹಾಮಂಗಳಾರತಿ, ಪಂಚಫಲಪ್ರಸಾದ ವಿನಿಯೋಗ, ಮಹಾಮಂಗಳಾರತಿ, ಅನ್ನ ಸಂತರ್ಪಣೆ, ಮುಂತಾದ ಧಾಮಿ೯ಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆದವು. ಬೆಳಿಗ್ಗೆ 6.30 ರ ಬ್ರಾಹ್ಮಿ ಮುಹೂರ್ತದಲ್ಲಿ ಬೆಂಗಳೂರಿನ ದಾ.ಹನುಮಂತಯ್ಯ, ಎಚ್.ರಾಮಸ್ವಾಮಿ ಅವರ ಸೇವಾರ್ಥದಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ಶ್ರೀ ಸ್ವಾಮಿಯವರ ರಥೋತ್ಸವವು ವೈಭವದಿಂದ ಜರುಗಿತು. ದಸೂಡಿ ಮಾರುತಿ ಭಜನಾ ಮಂಡಳಿಯ ಭಜನೆ, ಬಲ್ಲಪ್ಪನಹಟ್ಟಿ ಹಾಗೂ ಎಳೆಗೊಲ್ಲರಹಟ್ಟಿ ಯಾದವರ ಕೋಲಾಟ ಉತ್ಸವಕ್ಕೆ ಮೆರಗು ತಂದಿತ್ತು. ದೇವಸ್ಥಾನ ಸಮಿತಿ ಕನ್ವೀನರ್ ಆರ್.ರಂಗಸ್ವಾಮಿ, ಗ್ರಾ.ಪಂ.ಅಧ್ಯಕ್ಷೆ ರೇಣುಕಮ್ಮ, ಸದಸ್ಯರುಗಳಾದ ರಮೇಶ್, ಮಮತ, ಪೂಜಾಕಾರ್ಯಕ್ರಮದ ಸೇವಾಕರ್ಥರುಗಳಾದ ಬೆಂಗಳೂರಿನ ಆರ್.ಶುಭಾರಾಣಿ, ಬಿ.ಆರ್.ಪ್ರಕಾಶ್, ದೊಡ್ಡೇರಿ ರತ್ಮಮ್ಮರಾಮಣ್ಣ ಸಿದ್ಧನಕಟ್ಟೆ ಲೇ.ಬೋರೇಗೌಡರ ಮಕ್ಕಳು ಹೊಯ್ಸಳಕಟ್ಟೆ ಶ್ರೀನಿವಾಸಶೆಟ್ಟರ, ದಸೂಡಿ ಪಾಂಡುರಂಗಯ್ಯ ಡಿ.ಎನ್.ಹನುಮಂತಯ್ಯ, ಡಿ.ಎಚ್.ಸಂಜ

ಮೊಹರಂ ಹಬ್ಬ

ಹುಳಿಯಾರಿನಲ್ಲಿ ಮುಸ್ಲೀಂ ಬಾಂಧವರು ಮೊಹರಂ ಹಬ್ಬದ ಅಂಗವಾಗಿ ಊರಿನ ಪ್ರಮುಖ ಬೀದಿಗಳಲ್ಲಿ ಪೀರ್ ದೇವರ ಧೂಪದ ಮೆರವಣಿಗೆಯನ್ನು ಸಡಗರದಿಂದ ಮಾಡಿದರು

ಜೆಡಿಯುಗೆ ಸೇರಿದ ಯಳನಡು ತಾಪಂ ಸದಸ್ಯ ವೈ.ಆರ್.ಮಲ್ಲಿಕಾಜು೯ನಯ್ಯ

ಜಿಪಂ ಚುನಾವಣೆ ಹಿನ್ನಲೆಯಲ್ಲಿ ಯಳನಾಡು ತಾಪಂ ಸದಸ್ಯರಾಗಿದ್ದ ವೈ.ಆರ್.ಮಲ್ಲಿಕಾಜು೯ನಯ್ಯ ಸಂಯುಕ್ತ ಜನತಾದಳಕ್ಕೆ ಸೇರ್ಪಡೆಗೊಂಡಿದಲ್ಲದೆ ಜೆಡಿಯು ಪಕ್ಷದಿಂದಲೆ ತಮ್ಮ ಪುತ್ರಿಯನ್ನು ಹುಳಿಯಾರು ಜಿಲ್ಲಾ ಪಂಚಾಯ್ತಿಗೆ ಅಧಿಕೃತ ಅಭ್ಯಥಿ೯ಯಾಗಿ ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ತಾಲೂಕು ಪಂಚಾಯ್ತಿ ಸದಸ್ಯರಾಗಿದ್ದ ಇವರು ಕಳೆದ ಸಂಸದರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಗೆ ಸೇರ್ಪಡೆಗೊಂಡು ಆ ಮೂಲಕ ಚಿನಾಹಳ್ಳಿ ತಾಲೂಕು ಪಂಚಾಯ್ತಿಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ತಾವು ಪಕ್ಷ ತೊರೆದಿದ್ದರ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ನ ಜಯಚಂದ್ರ ಶಿರಾ ಕ್ಷೇತ್ರಕ್ಕೆ ಹೋದ ನಂತರ ಚಿ.ನಾ.ಹಳ್ಳಿ ಕಾಂಗ್ರೆಸ್ ಪಕ್ಷದಲ್ಲಿ ನಾಯಕರ್ಯಾರು ಇಲ್ಲದ ಹಿನ್ನಲೆಯಲ್ಲಿ ಜೆಡಿಎಸ್ ಶಾಸಕ ಸಿ.ಬಿ.ಸುರೇಶ್ ಬಾಬು ಅವರ ಉತ್ತಮ ವ್ಯಕ್ತಿತ್ವಕ್ಕೆ ಮಾರುಹೋಗಿ ತಾವು ಜೆಡಿಎಸ್ ಸೇರ್ಪಡೆಗೊಂಡಿದ್ದೆ.ಆದರೆ ಶಾಸಕ ಸಿ.ಬಿ.ಸುರೇಶ್ ಬಾಬು ಹೆಚ್ಚಿನ ಕಾಲ ಬೆಂಗಳೂರಿನಲ್ಲಿಯೇ ಉಳಿಯುತ್ತ ಕ್ಷೇತ್ರದ ಕಾರ್ಯಕರ್ತರ ಬಗ್ಗೆ ನಿರಾಸಕ್ತಿ ಮನೋಭಾವ ತಾಳಿದ್ದ ಹಿನ್ನಲೆಯಲ್ಲಿ ಬೇಸತ್ತು ನೇರ ಮತ್ತು ನಿಷ್ಠೂರ ವಾದಿ ಎಂದು ತಿಳಿದಿದ್ದರೂ ಜೆಡಿಯುನ ಮಾಧುಸ್ವಾಮಿ ಅವರಿಂದ ಸಾರ್ವಜನಿಕ ಸೇವೆ ಸಲೀಸು ಎಂಬ ಕಾರಣಕ್ಕೆ ಅವರನ್ನು ಬೆಂಬಲಿಸಿ ಅವರ ಪಕ್ಷ ಸೇರುತ್ತಿರುವುದಾಗಿ ತಿಳಿಸಿದರು. ತಮ್ಮ ಮಗಳನ್ನು ಹುಳಿಯಾರು

ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬ

ಹುಳಿಯಾರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಬಳಗದಿಂದ ರೋಗಿಗಳಿಗೆ ಹಣ್ಣು-ಬ್ರೆಡ್ ವಿತರಿಸಲಾಯಿತು. ಸೈಯದ್ ಜಲಾಲ್, ಮಂಜುಳಾ ಗವೀರಂಗಯ್ಯ, ಬಿ.ಬಿ.ಪಾತೀಮಾ, ಪ್ರಸನ್ನ, ಡಿಶ್ ಬಾಬು, ರಘುನಾಯಕ್, ಅಹಮದ್ ಖಾನ್, ಬಾಲರಾಜು, ರೇವಣ್ಣ, ಮತ್ತಿತರರು ಇದ್ದಾರೆ.

ಕಡೆಗೂ ಬಂತು ಕೊಬ್ಬರಿಗೆ ಬಂಪರ್ ಬೆಲೆ

(ಹುಳಿಯಾರು ಎಪಿಎಂಸಿಯಲ್ಲಿ ಕೊಬ್ಬರಿಗೆ ಬಂಪರ್ ಬೆಲೆ ಬಂದಿರುವ ಕಾರಣ ರೈತರು ಅತಿ ಉತ್ಸಾಹದಿಂದ ಕೊಬ್ಬರಿ ಮಾರಾಟದಲ್ಲಿ ತೊಡಗಿರುವುದು ) ಕಳೆದ ಹಲವಾರು ತಿಂಗಳಿನಿಂದ ನಾಲ್ಕು ನಾಲ್ಕುವರೆ ಸಾವಿರದ ಆಜುಬಾಜಿನಲ್ಲಿದ್ದ ಕೊಬ್ಬರಿ ಕಳೆದ ವಾರದಿಂದ ಏರಿಕೆ ಕಾಣುತ್ತಿದ್ದು ರೈತರು ಅಂತೂ ಇಂತೂ ಸ್ವಲ್ಪವಾದರೂ ಬೆಲೆ ಬಂತಲ್ಲ ಎಂದು ನಿಟ್ಟುಸಿರು ಬಿಡುವಂತಾಗಿದೆ. ಮುಂದಿನ ದಿನದಲ್ಲ್ದಿ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ಅಲ್ಲದೆ, ಮುಂದಿನ ದೀಪಾವಳಿಗೆ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಬಹುದೆಂಬ ಮಾತು ಕೇಳಿಬರುತ್ತಿದೆ. ಇದುವರೆಗೂ ಕೊಬ್ಬರಿ ಬೆಲೆ ಏರಿಕೆ ಕಾಣದೆ 4 ಸಾವಿರದ ಆಸು ಪಾಸಿನಲ್ಲಿಯೇ ಗಿರಕಿ ಹೊಡೆಯುತ್ತಿದ್ದರೆ ತೆಂಗಿನ ಕಾಯಿಯನ್ನಂತೂ 4 ರು ಗೆ ಕೇಳುವವರು ಗತಿಯಿರಲಿಲ್ಲ. ಇದರಿಂದ ತೆಂಗು ಬೆಳಯುವ ಜಿಲ್ಲೆಗಳಾದ ತುಮಕೂರು, ಚಿತ್ರದುರ್ಗ, ಹಾಸನ, ದಾವಣಗೆರೆ, ಭದ್ರಾವತಿ, ಶಿವಮೊಗ್ಗ ರೈತರು ಕಂಗಾಲಾಗಿ ಹೋಗಿದ್ದರು. ಕೆಲ ದಿನಗಳಿಂದ 1 ಸಾವಿರ ಕಾಯಿಗೆ ಇದ್ದ 4200 ರು. ಈಗ 6 ರಿಂದ 7 ಸಾವಿರ ರು.ಗಳಾಗಿದೆ.ವಾಡಿಕೆಯಂತೆ ಏಣಿಕೆ ಲೆಖ್ಖದಲ್ಲಿ ಸಾವಿರ ಕಾಯಿಗಿಷ್ಟು ಬೆಲೆ ಎಂಬ ಬದಲಿಗೆ ಯಾವುದೆ ಗಾತ್ರದ ಕಾಯಿಯಿರಲಿ ಎಲ್ಲವನ್ನು ಕ್ವಿಂಟಾಲ್ ಲೆಖ್ಖದಲ್ಲಿ ಕೊಳ್ಳುವ ಹೊಸ ಪರಿಪಾಟ ಶುರುವಾಗಿದ್ದು ರೈತರಿಗೆ ಕಾಯಿ ಮಾರುವುದೆ ಲಾಭದಾಯಕ ಎನ್ನುವಂತಾಗಿದೆ. ಕೊಬ್ಬರಿಗಿಂತ ಕಾಯಿಗೆ ಬೆಲೆ ಬರಲು ಶುರುವಾದ್ದರಿಂದ ರೈತರು ಕೊಬ್ಬರಿ ಆಸೆ ಕೈ ಬಿಟ್ಟು ಕಾಯಿಯನ್ನೇ

ಹುಳಿಯಾರಿನಲ್ಲಿ ಭಾನುವಾರದಂದು ಅದ್ದೂರಿ ಹನುಮಜಯಂತಿ

ಹುಳಿಯಾರಿನ ಶ್ರೀ ಆಂಜನೇಯಸ್ವಾಮಿ ಜೀಣೋ೯ದ್ಧಾರ ಸಮಿತಿಯಿಂದ ಪ್ರಸಕ್ತ ಸಾಲಿನ ಹನುಮ ಜಯಂತಿ ಮಹೋತ್ಸವವನ್ನು ಡಿಸೆಂಬರ್-19 ರ ಭಾನುವಾರ ಅದ್ದೂರಿಯಾಗಿ ಆಯೋಜಿಸಲಾಗಿದೆ. ಅಂದು ಮುಂಜಾನೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶ್ರೀ ಸ್ವಾಮಿಯವರಿಗೆ 6 ಗಂಟೆಗೆ ಅಭಿಷೇಕ, 8 ಗಂಟೆಗೆ ಪವಮಾನ ಹೋಮ, 11 ಗಂಟೆಗೆ ಪೂಣಾ೯ಹುತಿ, 11-30 ಕ್ಕೆ ಮಹಾಮಂಗಳಾರತಿ ಮುಂತಾದ ಧಾಮಿ೯ಕ ಕಾರ್ಯಕ್ರಮ ನಡೆಸಿ ಮಧ್ಯಾಹ್ನ 12 ಗಂಟೆಗೆ ಭಕ್ತಾಧಿಗಳಿಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಅದೇ ದಿನ ಸಂಜೆ 5 ಕ್ಕೆ ಶ್ರೀ ಸ್ವಾಮಿಯವರನ್ನು ಪುಷ್ಪಾಲಂಕಾರಗಳಿಂದ ಕೂಡಿದ ಭವ್ಯ ಮಂಟಪದಲ್ಲಿ ಕುಳ್ಳಿರಿಸಿ ರಾಜ್ಯ ಪ್ರಶಸ್ತಿ ವಿಜೇತ ಬೆಳ್ತಂಗಡಿ ಕೀಲು ಕುದುರೆ, ಕರಗ, ಹಾಸ್ಯಗೊಂಬೆ, ಯಕ್ಷಗಾನ ಶೈಲಿಯ ದೊಡ್ಡಬೊಂಬೆಯಾಟ, ವಡೆರಹಳ್ಳಿ ಪಟಾಕಿ ಸೋಮಣ್ಣ ಅವರಿಂದ ಮದ್ದಿನ ಪ್ರದರ್ಶನ, ಹೆಗ್ಗೋಡು ಸಾಗರದ ರಾಜ್ಯ ಪ್ರಶಸ್ತಿ ವಿಜೇತ ಮಹಿಳಾ ಡೊಳ್ಳುಕುಣಿತ, ಮಣಿಕಿಕೆರೆಯ ನಾಸಿಕ್ ಡೋಲ್, ಸಿಂಗಾಪುರದ ಡೊಳ್ಳುಕುಣಿತ ಪ್ರದರ್ಶನಗಳೊಂದಿಗೆ ಅದ್ದೂರಿಯಾಗಿ ರಾಜಬೀದಿ ಉತ್ಸವ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹನುಮಜಯಂತಿ ಅಂಗವಾಗಿ ಜರುಗುವ ಎಲ್ಲಾ ಧಾಮಿ೯ಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಯಾಗಲು ಸಹಕರಿಸುವಂತೆ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್ಆರ್ಎಸ್ ದಯಾನಂದ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಹುಳಿಯಾರಿನಲ್ಲಿ ಭಕ್ತಿಭಾವದ ವೈಕುಂಠ ಏಕಾದಶಿ

( ವೈಕುಂಠ ಏಕಾದಶಿ ಅಂಗವಾಗಿ ಹುಳಿಯಾರಿನ ಶ್ರೀ ಬನಶಂಕರಿ ಅಮ್ಮನವರಿಗೆ ಅರ್ಚಕ ಶ್ರೀಧರ್ ವೈಕುಂಠ ನಾರಾಯಣನ ಅಲಂಕಾರ ಮಾಡಿರುವುದು.) (ಹುಳಿಯಾರಿನ ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನದಲ್ಲಿ ಗುಹಾ ಪ್ರವೇಶ ದಾರಿ ಮೂಲಕ ಭಕ್ತರು ಶ್ರೀ ಸ್ವಾಮಿಯವರ ದರ್ಶನ ಮಾಡುತ್ತಿರುವುದು.) ವೈಕುಂಠ ಏಕಾದಶಿ ಅಂಗವಾಗಿ ಹುಳಿಯಾರಿನ ವಿವಿಧ ದೇವಾಲಯಗಳಲ್ಲಿ ಮುಖ್ಯ ದೇವರುಗಳಿಗೆ ಮಾಡಲಾಗಿದ್ದ ಶ್ರೀಮನ್ನಾರಯಣನ ಹಲವು ರೂಪಗಳ ಅಲಂಕಾರ ಭಕ್ತಾಧಿಗಳ ಮನಸೂರೆಗೊಂಡಿತು.ಎಲ್ಲಾ ದೇವಾಲಯಗಳಿಗೆ ತೆರಳಿ ಶ್ರೀ ಸ್ವಾಮಿಯ ದಶ೯ನ ಪಡೆದ ಭಕ್ತಾಧಿಗಳು ಭಕ್ತಿ ಭಾವದಲ್ಲಿ ಮಿಂದು ಪುನೀತರಾದರು. ಪಟ್ಟಣದ ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನ, ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ, ಶ್ರೀ ಕಾಳಮ್ಮ ಹಾಗೂ ಶ್ರೀ ಬನಶಂಕರಿ ದೇವಸ್ಥಾನಗಳಲ್ಲಿ ಸುಪ್ರಭಾತ ಸೇವೆಯೊಂದಿಗೆ ಮುಂಜಾನೆಯಿಂದಲೆ ಧಾಮಿ೯ಕ ಕೈಂಕರ್ಯಗಳು ಆರಂಭಗೊಂಡವು. ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನದಲ್ಲಿ ಎಂಎಸ್ಆರ್ ನಟರಾಜ್ ಅವರ ಸೇವಾರ್ಥದಲ್ಲಿ ಅರ್ಚಕರುಗಳಾದ ರಾಮಚಂದ್ರಭಟ್ಟ ಹಾಗೂ ನಾಗರಾಜಗುಪ್ತ ಮಾರ್ಗದರ್ಶನದಲ್ಲಿ ಉತ್ಸವಮೂತಿ೯ಯ ಪ್ರಾಕಾರೋತ್ಸವ,ವಾಸವಿಗೆ ಅಷ್ಟಾವದಾನ ಸೇವೆ,ವೈಕುಂಠ ದ್ವಾರ ಪೂಜೆ, ಮಹಾಮಂಗಳಾರತಿ, ಮುಂತಾದ ಧಾಮಿ೯ಕ ಕೈಂಕರ್ಯಗಳನ್ನು ನೆರವೇರಿಸಿ ಪ್ರಸಾದ ವಿನಿಯೋಗ ಮಾಡಲಾಯಿತು.ಶ್ರೀ ಕೋದಂಡರಾಮನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತಲ್ಲದೆ ಗುಹಾ ಪ್ರವೇಶ ದಾರಿ ಮೂಲಕ ಭಕ್ತರ ದರ್ಶನ ವ್ಯವಸ್ಥೆ ಮಾಡಿದಿದುದು ಭ

ಚಿಕ್ಕಎಣ್ಣೇಗೆರೆಯಲ್ಲಿ ಶನಿವಾರದಿಂದ ಹನುಮಜಯಂತಿ

ಹುಳಿಯಾರು ಸಮೀಪದ ಚಿಕ್ಕಎಣ್ಣೇಗೆರೆ ಗ್ರಾಮದಲ್ಲಿ ಡಿಸೆಂಬರ್ 18 ರ ಶನಿವಾರ ಮತ್ತು 19 ರ ಭಾನುವಾರ ಶ್ರೀ ಆಂಜನೇಯಸ್ವಾಮಿಯವರ 5 ನೇ ವರ್ಷದ ಹನುಮಜಯಂತಿ ಮಹೋತ್ಸವವನ್ನು ಏರ್ಪಡಿಸಲಾಗಿದೆ. ಡಿಸೆಂಬರ್ 18 ರ ಶನಿವಾರ ಸುಲೋಚನಮ್ಮ ಅವರ ಸೇವಾರ್ಥದಲ್ಲಿ ರಾತ್ರಿ 8 ಗಂಟೆಯಿಂದ ಕೊಲ್ಲಾಪುರದ ಶ್ರೀ ಕರಿಯಮ್ಮದೇವಿಯವರ ಆರತಿಭಾನ, ಶ್ರೀ ಆಂಜನೇಯಸ್ವಾಮಿಯವರ ಮತ್ತು ಕರಿಯಮ್ಮದೇವಿಯವರ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ. ಡಿಸೆಂಬರ್ 19 ರ ಭಾನುವಾರ ಸಿ.ಎಸ್.ಶಂಕರಪ್ಪ, ಜೆ.ಸಿ.ಮಾಧುಸ್ವಾಮಿ ಅಭಿಮಾನಿ ಬಳಗ, ಹೂವಾಡಿ ಲಕ್ಷ್ಮಮ್ಮ, ಅನಸೂಯಮ್ಮ, ವರದಯ್ಯ ಅವರುಗಳ ಸೇವಾರ್ಥದಲ್ಲಿ ಬೆಳಗಿನ ಜಾವ 4 ರಿಂದ ಹೋಮ ಪೂಜೆ, ಮಹಾಮಂಗಳಾರತಿ, ಬೆಳಿಗ್ಗೆ 9 ಕ್ಕೆ ಶ್ರೀ ಸ್ವಾಮಿಯವರ ಹೂವಿನ ಮತ್ತು ಕುಂಕುಮ ಅಲಂಕಾರ ಬೆಳಿಗ್ಗೆ 10 ಕ್ಕೆ ಬಿಲ್ಲು ಗೂಡಸೇವೆ ಕಾರ್ಯಕ್ರಮಗಳು ನಡೆಯಲಿವೆ. ಅದೇ ದಿನ ಬೆಳಿಗ್ಗೆ 11-30 ಕ್ಕೆ ಧಾಮಿ೯ಕ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಕುಪ್ಪೂರು-ತಮ್ಮಡಿಹಳ್ಳಿ ವಿರಕ್ತಮಠದ ಡಾ.ಆಭಿನವ ಮಲ್ಲಿಕಾಜು೯ನ ಮಹಾಸ್ವಾಮಿಗಳು ಉದ್ಘಾಟಿಸಲಿರುವ ಈ ಸಭೆಯ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ ಬಾಬು ವಹಿಸುವರು. ಮಾಜಿ ಶಾಸಕರುಗಳಾದ ಕೆ.ಎಸ್.ಕಿರಣ್ ಕುಮಾರ್, ಜೆ.ಸಿ.ಮಾಧುಸ್ವಾಮಿ, ಜಿ.ಪಂ.ಮಾಜಿ ಅಧ್ಯಕ್ಷ ರಘುನಾಥ್, ಅವರು ಮುಖ್ಯ ಅತಿಥಿಗಳಾಗಿ ಆಗಮಹಿಸುವರು. ತಾ.ಪಂ.ಮಾಜಿ ಅಧ್ಯಕ್ಷ ಶಿವಕುಮಾರ್, ಗ್ರಾ.ಪಂ.ಅಧ್ಯಕ್ಷ ನಾಗಪ್ಪ, ಉಪಾಧ್ಯಕ್ಷ ದೊಡ್ಡಯ್ಯ, ಸದಸ್ಯರ

ಹುಳಿಯಾರಿನಲ್ಲಿ ಭಾನುವಾರ ನಿವೃತ್ತ ನೌಕರರ ದಿನಾಚರಣೆ

ಚಿಕ್ಕನಾಯಕನಹಳ್ಳಿ ತಾಲೂಕು ನಿವೃತ್ತ ನೌಕರರ ಸಂಘ ವತಿಯಿಂದ ಹುಳಿಯಾರಿನ ಶ್ರೀ ಸೀತಾರಾಮ ಕಲ್ಯಾಣ ಮಂದಿರದಲ್ಲಿ ಡಿಸೆಂಬರ್ 19 ರ ಭಾನುವಾರ ಬೆಳಿಗ್ಗೆ 10-30 ಕ್ಕೆ 26 ನೇ ವರ್ಷದ ವಾಷಿ೯ಕ ಸಮಾರಂಭ ಹಾಗೂ ನಕರ ರವರ ಮತ್ತು ನಿವೃತ್ತ ನೌಕರರ ದಿನಾಚರಣೆ ಏರ್ಪಡಿಸಲಾಗಿದೆ. ರಾಜ್ಯ ಸಕಾ೯ರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಎನ್.ಸಂಪತ್ ಅವರು ಉದ್ಘಾಟಿಸಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ನರಸಿಂಹಯ್ಯ ಅವರು ವಹಿಸುವರು. ರಾಜ್ಯ ನೌಕರರ ಸಂಘದ ಅಧ್ಯಕ್ಷ ಎಲ್.ಭೈರಪ್ಪ ಅವರು ಹಿರಿಯ ನಿವೃತ್ತ ನೌಕರರಿಗೆ ಸನ್ಮಾನಿಸುವರು. ಪ್ರಧಾನ ಕಾರ್ಯದಶಿ೯ ರೇವಣಸಿದ್ಧಯ್ಯ ವರು ಹಿರಿಯ ಸಮಾಜ ಸೇವಕರಿಗೆ ಸನ್ಮಾನಿಸುವರು. ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಮಹದೇವರಾವ್ ಬೋಬಡೆ ಅವರು ದಿನಚರಣೆ ಬಗ್ಗೆ ಮಾಹಿತಿ ನೀಡುವರು. ನಿವೃತ್ತ ನ್ಯಾಯಾಧೀಶರಾದ ಎಂ.ಎಲ್.ಶಿವಣ್ಣ ಅವರು ಪ್ರತಿಭಾನ್ವಿತ ವಿದ್ಯಾಥಿ೯ಗಳಿಗೆ ಮಹಾದೇವರಾವ್ ಬೋಬಡೆ ಅವರು ಪುರಸ್ಕರಿಸುವರು. ಮುಖ್ಯ ಅತಿಥಿಗಳಾಗಿ ಜಿ.ಎಂ.ಸಣ್ಣಮುದ್ದಯ್ಯ, ಟಿ.ಜಿ.ಮಲ್ಲೇದೇವರು, ತು.ರಾ.ಸುಂದರರಾಜ್, ಸಾ.ಚಿ.ನಾಗೇಶ್, ಆರ್.ಪರಶಿವಮೂತಿ೯, ಎಚ್.ಎಂ.ಸುರೇಶ್, ಎಂ.ವಿ.ನಾಗರಾಜರಾವ್, ಆರ್.ಬಸವರಾಜು, ಶ್ರೀನಿವಾಸಮೂತಿ೯ ಅವರು ಆಗಮಿಸಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ತಾಲೂಕು ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಸಿ.ರಾ

ಹೊಯ್ಸಲಕಟ್ಟೆ ಜಿ.ಪಂ.ಸದಸ್ಯ ಈರಣ್ಣ ಜೆಡಿಎಸ್ ಗೆ

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ಹೊಯ್ಸಲಕಟ್ಟೆ ಜಿ.ಪಂ.ಸದಸ್ಯ ಈರಣ್ಣ ಅವರು ಬಿಜೆಪಿಗೆ ಗುಡ್ಬೈ ಹೇಳಿ ಜೆಡಿಎಸ್ ಗೆ ಸೇರಿ ಕಂದಿಕೆರೆ ಕ್ಷೇತ್ರದಿಂದ ಜೆಡಿಎಸ್ ಅಭ್ಯಥಿ೯ಯಾಗಿ ಚುನಾವಣ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಎಸ್ಸಿ ಮೀಸಲು ಕ್ಷೇತ್ರ ಹೊಯ್ಸಲಕಟ್ಟೆಯಿಂದ ಬಿಜೆಪಿ ಅಭ್ಯಥಿ೯ಯಾಗಿ ಇವರು ಗೆದ್ದಿದ್ದರು.ಸಧ್ಯ ಮೀಸಲಾತಿ ಬದಲಾವಣೆಯಾಗಿ ಹೊಯ್ಸಳಕಟ್ಟೆಗೆ ಬಿಸಿಎಂ ಎ ಮಹಿಳೆ ಬಂದಿದ್ದು ಪಕ್ಕದ ಕಂದಿಕೆರೆಗೆ ಎಸ್ಸಿ ಮೀಸಲಾತಿ ಬಂದಿರುವ ಕಾರಣ ಅಲ್ಲಿ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯಥಿ೯ಯಾಗಿ ತಮ್ಮ ಅದೃಷ್ಠ ಪರೀಕ್ಷೆಗಿಳಿದಿದ್ದಾರೆ. ಪಕ್ಷ ಸೇರ್ಪಡೆ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಈ ಹಿಂದೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಪ್ರತಿ ಕ್ಷೇತ್ರಕ್ಕೆ ಪ್ರತಿ ವರ್ಷ 1 ಕೋಟಿ ಅನುದಾನ ನೀಡುತ್ತಿದ್ದರು. ಆಗ ತಾವು ಹೊಯ್ಸಳಕಟ್ಟೆ ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಸಮುದಾಯ ಭವನ ಹೀಗೆ ಅನೇಕ ಅಭಿವೃದ್ಧಿ ಕೆಲಸ ಮಾಡಿಸಿದ್ದೇನೆ. ಆದರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ನಂತರ ಕ್ಷೇತ್ರಗಳಿಗೆ ಒಂದೇ ಒಂದು ರು. ಅನುಧಾನ ಬಿಡುಗಡೆ ಮಾಡದೆ ಜಿ.ಪಂ.ಸದಸ್ಯರು ಯವುದೇ ಅಭಿವೃದ್ಧಿ ಕೆಲಸ ಮಾಡಿಸಲಾಗದೆ ಕೈ ಕಟ್ಟಿ ಕೂರುವಂತಾಗಿತ್ತು ಎಂದ ಅವರು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಸ್ವಜನ ಪಕ್ಷಪಾತ ಎಸಗಿ ತಮ್ಮ ಕುಟುಂಬದವರಿಗೆ ಭೂ ಹಂಚಿಕೆ ಮಾಡಿದ್ದಾರೆ.ಹಿಂದುಳಿದವರಿಗೆ ಹಾಗೂ ಅಹಿಂದ ವರ್ಗದವರಿಗೆ ಅಲ್

ಶ್ರೀಕೃಷ್ಣ ದೇವಸ್ಥಾನ ಅಷ್ಟಮಠಕ್ಕೆ ವರ್ಗಾವಣೆ ವಿರೋಧಿಸಿ: ಸಿ.ಡಿ.ಚಂದ್ರಶೇಖರ್

( ಹುಳಿಯಾರು ಸಮೀಪ ಲಿಂಗಪ್ಪನ ಪಾಳ್ಯದಲ್ಲಿ ಏರ್ಪಡಿಸಿದ್ದ ಕನಕಜಯಂತಿ ಕಾರ್ಯಕ್ರಮದಲ್ಲಿ ಪಿ.ಎಸ್.ಶಿವಣ್ಣ, ರಂಗಯ್ಯ, ಸಿ.ಡಿ.ಚಂದ್ರಶೇಖರ್, ಚಿದಾನಂದ್ ಮತ್ತಿತರರು ಇದ್ದಾರೆ .) ಮುಜರಾಯಿ ಇಲಾಖೆಯ ಅದೀನದಲ್ಲಿದ್ದ ಉಡುಪಿಯ ಶ್ರೀ ಕೃಷ್ಣ ದೇವಸ್ಥಾನವನ್ನು ಅಷ್ಟಮಠಗಳಿಗೆ ವರ್ಗಯಿಸುತ್ತಿರುವುದನ್ನು ಹಿಂದುಳಿದ ವರ್ಗಗಳು ವಿರೋಧಿಸಬೇಕು ಎಂದು ಚಿ.ನಾ.ಹಳ್ಳಿ ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅವರು ಕರೆ ನೀಡಿದರು. ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯದಲ್ಲಿ ಶನಿವಾರ ರಾತ್ರಿ ಏರ್ಪಡಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶ್ರೀ ಕೃಷ್ಣ ದೇವಸ್ಥಾನವನ್ನು ಅಷ್ಟಮಠಗಳಿಗೆ ನೀಡಿರುವುದರಿಂದ ಶ್ರೀ ಕೃಷ್ಣ ಮತ್ತು ಕನಕದಾಸರ ಪರಂಪರೆಗೆ ಅಪಚಾರ ಮಾಡಿದಂತಾಗಿದೆ. ಐತಿಹ್ಯ ಕನಕನ ಕಿಂಡಿಗೆ ಧಕ್ಕೆ ಆಗುತ್ತದೆ. ಸಕರ್ಾರ ಕೇವಲ ಕನಕನ ಜಯಂತಿಗೆ ಸಕರ್ಾರಿ ರಜೆ ಕೊಟ್ಟರೆ ಸಾಲದು, ಕನಕನ ಅಸ್ಥೀತ್ವದ ಕುರುಹುಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು. ಕನಕನ ಜಯಂತಿಯನ್ನು ಹಬ್ಬಗಳ ರೀತಿಯಲ್ಲಿ ಆಚರಿಸುವ ಜೊತೆಗೆ ಅವರ ತತ್ವ, ಆದರ್ಶ, ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಕನಕನು 14 ನೇ ಶತಮಾನದಲ್ಲಿಯೇ ಹಿಂದುಳಿದವರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯಾಗಿ ಪ್ರಭಾವಿಗಳಾಗಬೇಕು ಎಂಬುದನ್ನು ಪ್ರತಿಪಾದಿಸಿದ್ದು ಕೀರ್ತನಗಳಲ್ಲಿ ಇದು ಅನಾವರಣ ಗೊಳ್ಳುತ್ತದೆ. ಆದರೆ ಇಂದಿಗೂ ಹಿಂದುಳಿದವರ್ಗಗಳ ಒಗ್ಗಟ್ಟಿನ ಕೊರ

ಹೀಗೊಂದು ಇಂಗ್ಲೀಷ್ ಅಂಕೆಗಳಿಲ್ಲದ ಸಂಪೂರ್ಣ ಕನ್ನಡಅಂಕಿಗಳ ಕ್ಯಾಲೆಂಡರ್

ವರ್ಷದ ಕೊನೆ ತಿಂಗಳಲ್ಲಿ ಮುಂದಿನ ಹೊಸ ವರ್ಷದ ಕ್ಯಾಲೆಂಡರ್ ಮಾರಾಟದ ಭರಾಟೆ ಬಲು ಜೋರು.ಮುಂಚಿನ ದಿನಗಳಂತೆ ಕೇವಲ ದಿನಾಂಕಗಳಿಗೆ ಒತ್ತು ನೀಡದೆ ಕೆಲವೊಂದು ವಿಶೇಷಗಳ ಸಂಪೂರ್ಣ ಮಾಹಿತಿ ನೀಡುವುದು ಇತ್ತೀಚಿನ ಬೆಳವಣಿಗೆ. ಕೆಲವು ಕ್ಯಾಲೆಂಡರ್ ಗಳಲ್ಲಿ ತಿಂಗಳ ಭವಿಷ್ಯ, ಧಾರ್ಮಿಕ ಆಚರಣೆಗಳ ಮಾಹಿತಿ ಬಗ್ಗೆ ಮಹತ್ವ ನೀಡಿದರೆ ಇನ್ನು ಕೆಲವದರಲ್ಲಿ ನಕ್ಷತ್ರ, ವಾರ ತಿಥಿ, ಮಳೆ ಮುಂತಾದ ವಿಶೇಷ ವಿಷಯಗಳಿಗೆ ಒತ್ತು ನೀಡಲಾಗುತ್ತದೆ. ಬಹುತೇಕ ಕ್ಯಾಲೆಂಡರ್ ಗಳು ರೂಪದರ್ಶಿಗಳ ಹಾಗೂ ದೇವಾನುದೇವತೆಗಳ ಚಿತ್ರಗಳೊಂದಿಗೆ ವಿನ್ಯಾಸಗೊಂಡು ಉಚಿತವಾಗಿ ಹಂಚಲ್ಪಡುತ್ತದೆ. ಆದರೆ ಈ ಎಲ್ಲಾ ಕ್ಯಾಲೆಂಡರುಗಳಲ್ಲಿಯೂ ತಾರೀಖು ಮಾತ್ರ ಇಂಗ್ಲೀಷ್ ಅಂಕಿಗಳಲ್ಲಿ ಮುದ್ರಿಸಲ್ಪಟ್ಟಿರುವುದು ಗಮನಿಸಬೇಕಾದ ಅಂಶ. ಆದರೆ ಹುಳಿಯಾರಿನ ನಿವೃತ್ತ ಉಪನ್ಯಾಸಕರೂ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತ.ಶಿ.ಬಸವಮೂರತಿ೯ ಅವರು ಇಂಗ್ಲೀಷ್ ಅಂಕೆ ಬಳಕೆ ಮಾಡದೆ ಸಂಪೂರ್ಣ ಕನ್ನಡಮಯ ಕ್ಯಾಲೆಂಡರ್ ಹೊರತಂದಿರುವುದಲ್ಲದೆ ಸಂಪೂರ್ಣವಾಗಿ ಸಾಹಿತ್ಯ ಲೋಕದ ಸ್ಪರ್ಶ ನೀಡಿದ್ದಾರೆ. ಸ್ಪಧಾ೯ತ್ಮಕ ಪರೀಕ್ಷೆಗೆ ನೆರವಾಗುವ ಗೈಡಾಗಿ ಮಾರ್ಪಡಿಸಿದ್ದಾರೆ. ಇಂದಿನ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ. ಕವಿ ಪರಂಪರೆ ಪರಿಚಯಿಸುವ ಕಿರು ಪ್ರಯತ್ನ ಮಾಡಿದ್ದಾರೆ. ಇದರೊಂದಿಗೆ ವಾರ, ತಿಥಿ, ಯೋಗ, ಕರಣ, ನಕ್ಷತ್ರ, ಸಕಾ೯ರಿ ರಜಾ ದಿನಗಳು, ಹಬ್ಬ ಹರಿದಿನಗಳು ಮೊದಲಾದ ಮಾಹಿತಿಯೂ ಇದೆ. 'ಕನ್ನಡ' ಎಂಬ ಹೆಸರಿನ

ಹುಳಿಯಾರಿನಲ್ಲಿ ಡಿಸೆಂಬರ್ 15 ರ ಬುಧವಾರ ಗಿರಿಜಾ ಕಲ್ಯಾಣೋತ್ಸವ

ಹುಳಿಯಾರಿನ ಆರ್ಯವೈಶ್ಯ ಮಂಡಲಿಯಿಂದ ಇಲ್ಲಿನ ಶ್ರೀ ವಾಸವಿ ಕಲ್ಯಾಣ ಮಂದಿರದಲ್ಲಿ ಡಿಸೆಂಬರ್ 15 ರ ಬುಧವಾರ ಗಿರಿಜಾ ಕಲ್ಯಾಣೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 8-55 ರಿಂದ 10-47 ಕ್ಕೆ ಸಲ್ಲುವ ಶುಭ ಧನುಸ್ಸು ಲಗ್ನದಲ್ಲಿ ಪಾರ್ವತಿ ಮತ್ತು ಪರಮೇಶ್ವರರಿಗೆ ಕಲ್ಯಾಣೋತ್ಸವ ನಡೆಸಲಿದ್ದು ಇದರ ಅಂಗವಾಗಿ ನಾಂದಿ, ವರಪೂಜೆ, ನಿಶ್ಚಿತಾರ್ಥ, ಮೂಹೂರ್ತ ಮುಂತಾದ ವಿವಾಹ ಸಂಬಂಧ ಚಟುವಟಿಕೆಗಳು ಜರುಗಲಿದೆ. ಇದೇ ಸಂದರ್ಭದಲ್ಲಿ ಮದುವೆ ಆಗದಿದ್ದವರಿಗೆ ಕಂಕಣಧಾರಣೆಗೆ ಅವಕಾಶವಿದ್ದು 101 ರು. ಕೊಟ್ಟು ಹೆಸರು ನೊಂದಾಯಿಸಬಹುದಾಗಿದೆ. ಅಲ್ಲದೆ, ಸಂಜೆ ಈಶ್ವರ ಮತ್ತು ಪಾರ್ವತಿಯರ ರಾಜ ಬೀದಿ ಉತ್ಸವ ನಡೆಸಿ ಡಿ.16 ರ ಗುರುವಾರ ಸಂಜೆ 4 ಕ್ಕೆ ತಿರುಮಲಾಪುರದ ಚಂದ್ರಮೌಳೇಶ್ವರ ದೇವಸ್ಥಾನದ ಬಳಿ ವಿಸರ್ಜನಾ ಕಾರ್ಯಕ್ರಮ ನಡೆಸಲಾಗುವುದು ಎಂದು ದೇವಸ್ಥಾನ ಸಮಿತಿ ಸಹ ಸಂಚಾಲಕ ಬಿ.ವಿ.ಶ್ರೀನಿವಾಸಮೂತಿ೯ ತಿಳಿಸಿದ್ದಾರೆ.

ಕೃಷಿಯಲ್ಲಿ ವೈವಿದ್ಯತೆ ಅಗತ್ಯ: ಶಿವಾನಂದ ಕಳವೆ

(ಹುಳಿಯಾರು ಹೋಬಳಿ ಡಿಂಕನಹಳ್ಳಿಯಲ್ಲಿ ಸಮೃದ್ಧ ಸಾವಯವ ಕೃಷಿ ಪರಿವಾರದ ತರಬೇತಿ ಶಿಬಿರದಲ್ಲಿ ಶಿವಾನಂದ ಕಳವೆ, ಡಾ.ಕೃಷ್ಣರಾಜ ಅರಸ್, ಕೆ.ರಂಗಯ್ಯ, ಎಸ್.ಎಚ್.ಚಂದ್ರಶೇಖರಯ್ಯ ಇದ್ದಾರೆ.) ಕೃಷಿಯಲ್ಲಿ ವೈವಿದ್ಯತೆ ಉಳಿಸಿಕೊಂಡರೆ ಮುಂದಿನ ದಿನಗಳಲ್ಲಿ ಹಳ್ಳಿಗಳು, ಕೃಷಿ ತಾಕುಗಳು ಮಾರಾಟವಾಗುವುದು ತಪ್ಪುತ್ತದೆ. ನೆಲ ಜಲ ಸಂರಕ್ಷಣೆಯಲ್ಲಿ ನಮ್ಮ ಹಿರಿಯರ ಪಾರಂಪಾರಿಕ ಜ್ಞಾನವನ್ನು, ಅನುಭವವನ್ನು ಅನುಕರಿಸಿದಲ್ಲಿ ಮುಂದೆ ಅದು ದಾರಿ ದೀಪವಾಗಲಿದೆ ಎಂದು ಅಡಿಕೆ ಪತ್ರಿಕೆ ಸಂಪಾದಕ ಶಿವಾನಂದ ಕಳವೆ ಅವರು ಹೇಳಿದರು ಹುಳಿಯಾರು ಹೋಬಳಿ ಡಿಂಕನಹಳ್ಳಿಯ ಶಿಕ್ಷಕ ಎಂ.ರಾಜಣ್ಣ ಅವರ ತೋಟದಲ್ಲಿ ಸಾವಯವ ಕೃಷಿ ಮಿಷನ್, ಕೃಷಿ ಇಲಾಖೆ ಹಾಗೂ ಸಮೃದ್ಧ ಸಾವಯವ ಕೃಷಿ ಪರಿವಾರದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು. ಮೂಡಿಗೆರೆ ಡಾ.ಕೃಷ್ಣರಾಜ ಅರಸ್ ಪಶು ಸಂಗೋಪನೆ ಮತ್ತು ಆಥಿ೯ಕತೆ ಕುರಿತು ಮಾತನಾಡಿ ಗೋವಿನ ಗಂಜಲ, ಸಗಣೆ, ಮಜ್ಜಿಗೆ, ಮೊಸರು ಮುಂತಾದವುಗಳ ಬಗ್ಗೆ ಪ್ರಸ್ತಾಪಿಸಿ ಗೋವು ನಮ್ಮ ಸಂಸ್ಕೃತಿಯ ಭಾಗವಾಗಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ರೈತರಿಗೆ ತಿಳಿಹೇಳಿದರು. ಕೃಷಿ ಅಧಿಕಾರಿ ಕೆ.ರಂಗಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಪರಿವಾರದ ಅಧ್ಯಕ್ಷರಾದ ಎಸ್.ಎಚ್.ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು. ರಾಮಕೃಷ್ಣಪ್ಪ, ಅಣೆಕಟ್ಟೆ ರಘುರಾಂ, ಅರುಣ್ ಕುಮಾರ್, ಓಂಕಾರಮೂತಿ೯, ಚನ್ನಬಸಪ್ಪ ಮುಂತಾದವರು ಉಪಸ್ಥಿತರಿದ್ದರು.

ಗುಜರಾತ್ ಮಾದರಿಯಲ್ಲಿ ಹೈನುಗಾರಿಗೆ ಮಾಡಿ;ಹಳೇಮನೆ ಶಿವನಂಜಪ್ಪ

( ಹುಳಿಯಾರು ಸಮೀಪದ ತೊರೆಸೂರಗೊಂಡನಹಳ್ಳಿಯಲ್ಲಿ ಹಾಲು ಶೇಖರಣಾ ಉಪಕೇಂದ್ರವನ್ನು ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಹಳೇಮನೆ ಶಿವನಂಜಪ್ಪ ಉದ್ಘಾಟಿಸಿದರು. ಡಾ.ಸುಬ್ರಾಯಭಟ್, ಎ.ಪಿ.ಯರಗುಂಟಪ್ಪ, ಬುದ್ದಿಪ್ರಸಾದ್, ಉಷಾ ಕೃಷ್ಣಮೂರ್ತಿ ಇದ್ದಾರೆ.) ಗುಜರಾತಿನಲ್ಲಿ ರೈತರು ದುಪ್ಪಟ್ಟು ಹಣ ಕೊಡುತ್ತೇನೆಂದರೂ ಸಹಕಾರ ಸಂಘ ಬಿಟ್ಟು ಸ್ಥಳಿಯವಾಗಿ ಹಾಲು ಮಾರುವುದಿಲ್ಲ. ಇದರಿಂದ ರೈತರೈತರಲ್ಲಿಯೇ ಛಲ ಹುಟ್ಟಿ ಪ್ರತಿಯೊಬ್ಬರೂ ಹಸು ಕಟ್ಟುತ್ತಿದ್ದಾರೆ. ಜೊತೆಗೆ ದೇಶದಲ್ಲಿಯೇ ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ ಎಂದು ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಹಳೇಮನೆ ಶಿವನಂಜಪ್ಪ ತಿಳಿಸಿದರು. ಹುಳಿಯಾರು ಸಮೀಪದ ತೊರೆಸೂರಗೊಂಡನಹಳ್ಳಿಯಲ್ಲಿ ಗೂಬೇಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಹಾಲು ಶೇಖರಣಾ ಉಪಕೇಂದ್ರದ ಪ್ರಾರಂಭೋತ್ಸವವನ್ನು ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ಸಂಘಕ್ಕೆ ಮಾತ್ರವೇ ಹಾಲು ಹಾಕುವುದರಿಂದ ಅದರಿಂದ ದೊರೆಯುವ ಅನೇಕ ಸೌಲಭ್ಯಗಳನ್ನು ಪಡೆದು ರೈತ ಆರ್ಥಿಕವಾಗಿ ಉನ್ನತಿಯಾಗಬಹುದು. ಹಾಗಾಗಿ ಖಾಸಗಿ ಕೇಂದ್ರ ಹಾಗೂ ಸ್ಥಳಿಯವಾಗಿ ಹಾಲು ಮಾರದೆ ನೇರವಾಗಿ ಹಾಲು ಒಕ್ಕೂಟಕ್ಕೆ ಹಾಲು ಹಾಕುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ತುಮಕೂರು ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸುಬ್ರಾಯಭಟ್ ಅವರು ಮಾತನಾಡಿ ರೈತರು ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚು ಒತ್ತು ನ

ಎಲ್.ಲತಾಮಣಿಗೆ ರಾಜ್ಯ ಮಟ್ಟದ ವಿದ್ಯಾರ್ಥಿವೇತನ

ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ನಡೆಸಿದ ರಾಜ್ಯ ಮಟ್ಟದ ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ವಿದ್ಯಾರ್ಥಿವೇತನ ಪರೀಕ್ಷೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 9 ನೇ ತರಗತಿಯ ಎಲ್.ಲತಾಮಣಿ ಅವರು ಉತ್ತೀರ್ಣರಾಗಿ ಪ್ರತಿ ತಿಂಗಳು ಇಲಾಖೆ ನೀಡುವ 500 ರು. ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗಿದ್ದಾರೆ.