ದೇವಿಯ ಪೀಠದಡಿಯಲ್ಲಿ ನಿಧಿಯಿರಬಹುದೆಂದು ಬಗೆದ ಕಳ್ಳರು ದೇವಸ್ಥಾನದ ಬಾಗಿಲು ಬಗ್ಗಿಸಿ ಅಮ್ಮನವರ ಮೂರ್ತಿಯನ್ನು ಕಿತ್ತು ಪಕ್ಕಕ್ಕೆಸದು ಪೀಠದ ಸುತ್ತ ಹುಡುಕಾಡಿ ಏನೂ ದೊರೆಯದೆ ಹಾಗೆ ಬಿಟ್ಟು ಪರಾರಿಯಾಗಿರುವ ಘಟನೆ ಪಟ್ಟಣದ ಹೊರವಲಯದಲ್ಲಿರುವ ಕೆಂಚಮ್ಮನ ತೋಪಿನ ಕೆಂಚಮ್ಮನ ದೇವಾಲಯದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ದುರ್ಗಾಪರಮೇಶ್ವರಿ ದೇವಾಲಯದ ಧರ್ಮದರ್ಶಿ ಶಿವಕುಮಾರ್, ಕೆಂಚಮ್ಮನ ದೇವಾಲಯದ ಕಾರ್ಯದರ್ಶಿ ಷಡಾಕ್ಷರಿ, ನಂಜುಂಡಪ್ಪ,ಮಲ್ಲಿಕಾರ್ಜುನಯ್ಯ, ಕುಮಾರ್,

ಒಟ್ಟಾರೆ ಘಟನೆಯಿಂದ ಊರಿನ ಎಲ್ಲಾ ದೇವಸ್ಥಾನ ಸಮಿತಿಯವರಿಗೆ ಆತಂಕ ಸೃಷ್ಟಿಯಾಗಿದೆ.
ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸೈ ಪ್ರವೀಣ್ ಕುಮಾರ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ