ವಿಷಯಕ್ಕೆ ಹೋಗಿ

ಬೆಸ್ಕಾಂ ಗ್ಯಾಂಗ್‌ಮನ್‌ ತಂಡಕ್ಕೆ ಸಂಬಳವೂ ಇಲ್ಲಾ,ಕೆಲಸವೂ ಇಲ್ಲಾ.

ಅಪಾಯಕಾರಿ ಕೆಲಸ ನಿರ್ವಹಿಸುವ ಇವರಿಗೆ ಒಪ್ಪತ್ತಿನ ಊಟಕ್ಕೂ ತತ್ವಾರ
---------------------------------------------------------
ವರದಿ:ಡಿ.ಆರ್.ನರೇಂದ್ರ ಬಾಬು
ಹುಳಿಯಾರು: ತಿಪಟೂರು ಬೆ.ವಿ.ಕಂ ವಿಭಾಗದ ಮಾನ್ಸೂನ್ ಗ್ಯಾಂಗ್ಮನ್ ಉದ್ಯೋಗಿಗಳಿಗೆ ಇತ್ತ ಕೆಲಸವೂ ಇಲ್ಲ,ಅತ್ತ ಸಂಬಳವೂ ಇಲ್ಲ ಎಂಬ ತ್ರಿಶುಂಕು ಸ್ಥಿತಿ ನಿರ್ಮಾಣವಾಗಿದೆ.

ಯಾರಿವರು:ಮಳೆಗಾಲದಲ್ಲಿ ಸಮರ್ಪಕವಾದ ವಿದ್ಯುತ್ ಸರಬರಾಜು ಮಾಡುವ ಉದ್ದೇಶದಿಂದ ಇಲಾಖೆ ಮಾನ್ಸೂನ್ ಸಿಬ್ಬಂದಿಯನ್ನು ಅಲ್ಪ ಅವಧಿಗಾಗಿ ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳತ್ತದೆ. ಮಳೆಗಾಳಿಯಿಂದ ವಿದ್ಯುತ್‌ ತಂತಿಗಳ ಮೇಲೆ ಬೀಳುವ ಮರಗಳು ಅಥವಾ ಹೊಸದಾಗಿ ಸಂಪರ್ಕ ಮಾರ್ಗದ ಕಾಮಗಾರಿ ಕೈಗೊಳ್ಳುವಾಗ ಅಡ್ಡವಾಗುವ ಮರಗಳ ತೆರವಿಗೆ ಇವರುಗಳನ್ನು ಬಳಸಿಕೊಳ್ಳಲಾಗುತ್ತದೆ.ಇದಕ್ಕಾಗಿ ಹೊರಗುತ್ತಿಗೆ ಪಡೆಯುವ ಖಾಸಗಿ ಕಂಪೆನಿಗಳು ಮೇ ತಿಂಗಳಿನಿಂದ ಅಕ್ಟೋಬರ್‌ವರೆಗೆ ಅಂದರೆ ಮಾನ್ಸೂನ್ ಆರಂಭದ ಸಮಯದಲ್ಲಿ ದಿನಗೂಲಿ ಆಧಾರದಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳುವುದಿದ್ದು ಇವರುಗಳನ್ನು 'ಮಾನ್ಸೂನ್ ಗ್ಯಾಂಗ್ ಮನ್‌ಗಳು' ಎನ್ನುತ್ತಾರೆ.
ಹುಳಿಯಾರು ಬೆ.ವಿ.ಕಂ ಕಚೇರಿ.
ವರ್ಷಕ್ಕೆ ೬ ತಿಂಗಳಿಗೆ ಮಳೆಗಾಲದ ಅವಧಿಗೆ ಮಾತ್ರ ಕೆಲಸ ನೀಡುವ ಗುತ್ತಿಗೆದಾರರು ಇವರನ್ನು ಮೂರು ತಿಂಗಳಿನ ನಂತರ ಮುಂದಿನ ಆರು ತಿಂಗಳಿಗೆ ಪುನಃ ನೇಮಿಸಿಕೊಳ್ಳುತ್ತದೆ.

ತಿಪಟೂರು ಬೆ.ವಿ.ಕಂ ವಿಭಾಗದಲ್ಲಿ ೬೦ ಮಂದಿ ಮಾನ್ಸೂನ್ ಗ್ಯಾಂಗ್ಮನ್ ಗಳಿದ್ದು ಮೂರು ಉಪವಿಭಾಗಗಳಾದ ತುರುವೇಕೆರೆ, ಚಿ.ನಾ ಹಳ್ಳಿ ಹಾಗೂ ತಿಪಟೂರುನಲ್ಲಿ ತಲಾ ೨೦ರಂತೆ ಗ್ಯಾಂಗ್ಮನ್ ಉದ್ಯೋಗಿಗಳು ಕೆಲಸಮಾಡುತ್ತಿದ್ದಾರೆ. ಇವರುಗಳನ್ನು ದಾವಣಗೆರೆಯ ಶ್ರೀ ಮಂಜುನಾಥಸ್ವಾಮಿ ಎಲೆಕ್ಟ್ರಿಕಲ್ಸ್ ೨೦೦೯-೧೦ ರಿಂದಲೂ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ನೇಮಿಸಿಕೊಟ್ಟಿದೆ.

ಇದೀಗ ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ಉಪವಿಭಾಗದ ವ್ಯಾಪ್ತಿಯ ೨೦ ಮಂದಿ ಗ್ಯಾಂಗ್ಮನ್ ಅವಧಿ ಡಿಸಂಬರ್ ಗೆ ಮುಗಿದಿದ್ದು ಫೆಬ್ರವರಿಯವರೆಗೆಅವಧಿ ವಿಸ್ತರಿಸಲಾಗಿತ್ತು. ಇದೀಗ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಪುನಹ ಕೆಲಸಕ್ಕೆ ತೆಗೆದುಕೊಳ್ಳದ ಗುತ್ತಿಗೆದಾರರು ಡಿಸಂಬರ್ ನಿಂದ ಕೊಡಬೇಕಿದ್ದ ಮೂರು ತಿಂಗಳ ಸಂಬಳವನ್ನು ಹಾಗೂ ಒಂದೂವರೆ ವರ್ಷದ ಪಿ.ಎಫ್ ಅನ್ನು ಇದುರೆಗೂ ನೀಡಿಲ್ಲ.ಇತ್ತ ಸಂಬಳವೂ ಇಲ್ಲದೆ ಪುನಃ ಕೆಲಸಕ್ಕೂ ತೆಗೆದುಕೊಳ್ಳದಿರುವುದರಿಂದ ಇವರುಗಳಿಗೆ ಒಪ್ಪತ್ತಿನ ಊಟಕ್ಕೂ ತತ್ವಾರವಾಗಿದೆ.

         ವಿದ್ಯುತ್ ಕೆಲಸವೇ ಅಪಾಯ.ಅದರಲ್ಲೂ ಮಳೆಗಾಲದಲ್ಲಿ ಕೆಲಸಮಾಡುವುದು ಇನ್ನೂ ಹೆಚ್ಚಿನ ಅಪಾಯಕಾರಿಯಾಗಿದ್ದು ಇವರುಗಳ ಜೀವಕ್ಕೆ ಹಾಗೂ ಕೆಲಸಕ್ಕೆ ಯಾವುದೇ ಭದ್ರತೆಯಿರುವುದಿಲ್ಲ
ಇವರಿಗೆ ಕಾನೂನು ಪ್ರಕಾರ ಭವಿಷ್ಯನಿಧಿ, ವೈದ್ಯಕೀಯ ಸೌಲಭ್ಯವಿದ್ದರೂ ಸಹ ಈ ಬಗ್ಗೆ ಅರಿವಿಲ್ಲದಿರುವುದರಿಂದ ಗುತ್ತಿಗೆದಾರರಿಂದ ಶೋಷಣೆ ತಪ್ಪಿಲ್ಲ.

             ಹೋಗಲಿ ಸಂಬಳವಾದರೂ ಸರಿಯಾಗಿ ನೀಡುತ್ತಾರಾ ಎಂದರೆ ಅದರಲ್ಲೂ ಅರ್ಧ ವೇತನಕ್ಕೆ ತೃಪ್ತಿಗೊಳ್ಳುವಂತಾಗಿದೆ.ಇಲಾಖೆಯು ಒಬ್ಬರಿಗೆ ತಲಾ 8,729 ರೂ ನಂತೆ ಗುತ್ತಿಗೆದಾರನಿಗೆ ಬಿಲ್ ಮಾಡಿಕೊಟ್ಟರೂ ಸಹ ಗುತ್ತಿಗೆದಾರ ಇವರಿಗೆ ನೀಡುವ ಸಂಬಳ ಕೇವಲ ರೂ. 4,500 ಮಾತ್ರ.ಮಳೆ ಮತ್ತೊಂದು ಕಾರಣಕ್ಕೂ ಒಂದಿನವೇನಾದರೂ ಕೆಲಸಕ್ಕೆ ಹಾಜರಾಗದಿದ್ದರೆ ಆ ದಿನದ ವೇತನ ಸಹ ಕಡಿತ ಮಾಡುತ್ತಾರೆ.ಪಗಾರವೇ ಅರ್ಧ ಎಂಬತ್ತಾಗಿರುವುದರಿಂದ ಇನ್ನೂ ಭತ್ಯೆಗಳು ದೂರದ ಮಾತಾಗಿದೆ.

           ಮಳೆ ಚಳಿಯೆನ್ನದೆ ,ಹಗಲು ರಾತ್ರಿಯೆನ್ನದೆ ಹೊರ ಗುತ್ತಿಗೆಯಲ್ಲಿ ನೇಮಕಗೊಂಡು ಕರ್ತವ್ಯ ನಿರ್ವಹಿಸುವ ಶೋಚನೀಯ ಸ್ಥಿತಿಯಲ್ಲಿರುವ ಮಾನ್ಸೂನ್ ಗ್ಯಾಂಗ್ ಕಾಯಂ ನೌಕರರನ್ನಾಗಿ ಇಲಾಖೆ ಪರಿಗಣಿಸಬೇಕೆಂಬ ಬಹುದಿನಗಳ ಬೇಡಿಕೆಗೆ ಮನ್ನಣೆ ದೊರೆಯುವುದಾ ಕಾದು ನೋಡಬೇಕಿದೆ.
------------------------------------
ಗ್ಯಾಂಗ್ ಮನ್ ಗಳ ಸಮಸ್ಯೆ ಬಗ್ಗೆ ಅರಿವಿದೆ.ಹಾಗೂ ಸಂಬಳ ನೀಡಿಲ್ಲದ್ದರ ಬಗ್ಗೆಯೂ ಮೇಲಾಧಿಕಾರಿಗಳ ಗಮನಕ್ಕೆ ತಂದು ಗುತ್ತಿಗೆದಾರರ ವಿರುದ್ದ ಕ್ರಮಕೈಗೊಳ್ಳಲು ಸೂಚಿಸಿದೆ.
ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದು ಗ್ಯಾಂಗ್ ಮನ್ ಗಳ ಅವಶ್ಯಕತೆಯಿದೆ.ಆದರೆ ಮುಂದಿನ ಆರು ತಿಂಗಳ ಅವಧಿಗೆ ಇವರುಗಳ ಅಪ್ರೂವಲ್ ಆಗದಿರುವುದರಿಂದ ಸಮಸ್ಯೆಯಾಗಿದೆ: ಉಮೇಶ್ ನಾಯಕ್ ,ಸೆಕ್ಷನ್ ಆಫೀಸರ್,ಬೆಸ್ಕಾಂ

---------
ಹುಳಿಯಾರು ಸಬ್ ಸ್ಟೇಶನ್ ನಲ್ಲಿ ಎಂಟಕ್ಕೂ ಹೆಚ್ಚು ಹೊರ ಗುತ್ತಿಗೆಯ ಗ್ಯಾಂಗ್ಮನ್ ಗಳಿದ್ದು ಕಳೆದ ಆರುವರ್ಷಗಳಿಂದಲೂ ಮಳೆಚಳಿಯೆನ್ನದೆ ಕೆಲಸ ನಿರ್ವಹಿಸ್ಸುತ್ತಿರುವ ಇವರನ್ನು ಮುಂದಿನ ಅವಧಿಗೆ ನೇಮಿಸಿಕೊಳ್ಳುವುದಲ್ಲದೆ ಇವರನ್ನು ಕಾಯಂ ಮಾಡಬೇಕು.ಕಡೆ ಪಕ್ಷ ಎಲ್ಲಾ ಸವಲತ್ತುಗಳೊಂದಿಗೆ ಮಜುದೂರ್ ಗ್ಯಾಂಗ್ಮನ್ ಆಗಿ ನೇಮಿಸಿಕೊಳ್ಳಬೇಕು.ಈ ಬಗ್ಗೆ ಕಾನೂನು ಸಚಿವ ಜಯಚಂದ್ರ ಅವರಲ್ಲೂ ಸಹ ಮನವಿ ಮಾಡಲಾಗಿದೆ.ದಬ್ಬಗುಂಟೆ ರವಿಕುಮಾರ್- ಮಾಜಿ ಗ್ರಾಪಂ ಅಧ್ಯಕ್ಷ ,ದಸೂಡಿ, 

----------------------------

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...