ವಿಷಯಕ್ಕೆ ಹೋಗಿ

ಬೆಸ್ಕಾಂ ಗ್ಯಾಂಗ್‌ಮನ್‌ ತಂಡಕ್ಕೆ ಸಂಬಳವೂ ಇಲ್ಲಾ,ಕೆಲಸವೂ ಇಲ್ಲಾ.

ಅಪಾಯಕಾರಿ ಕೆಲಸ ನಿರ್ವಹಿಸುವ ಇವರಿಗೆ ಒಪ್ಪತ್ತಿನ ಊಟಕ್ಕೂ ತತ್ವಾರ
---------------------------------------------------------
ವರದಿ:ಡಿ.ಆರ್.ನರೇಂದ್ರ ಬಾಬು
ಹುಳಿಯಾರು: ತಿಪಟೂರು ಬೆ.ವಿ.ಕಂ ವಿಭಾಗದ ಮಾನ್ಸೂನ್ ಗ್ಯಾಂಗ್ಮನ್ ಉದ್ಯೋಗಿಗಳಿಗೆ ಇತ್ತ ಕೆಲಸವೂ ಇಲ್ಲ,ಅತ್ತ ಸಂಬಳವೂ ಇಲ್ಲ ಎಂಬ ತ್ರಿಶುಂಕು ಸ್ಥಿತಿ ನಿರ್ಮಾಣವಾಗಿದೆ.

ಯಾರಿವರು:ಮಳೆಗಾಲದಲ್ಲಿ ಸಮರ್ಪಕವಾದ ವಿದ್ಯುತ್ ಸರಬರಾಜು ಮಾಡುವ ಉದ್ದೇಶದಿಂದ ಇಲಾಖೆ ಮಾನ್ಸೂನ್ ಸಿಬ್ಬಂದಿಯನ್ನು ಅಲ್ಪ ಅವಧಿಗಾಗಿ ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳತ್ತದೆ. ಮಳೆಗಾಳಿಯಿಂದ ವಿದ್ಯುತ್‌ ತಂತಿಗಳ ಮೇಲೆ ಬೀಳುವ ಮರಗಳು ಅಥವಾ ಹೊಸದಾಗಿ ಸಂಪರ್ಕ ಮಾರ್ಗದ ಕಾಮಗಾರಿ ಕೈಗೊಳ್ಳುವಾಗ ಅಡ್ಡವಾಗುವ ಮರಗಳ ತೆರವಿಗೆ ಇವರುಗಳನ್ನು ಬಳಸಿಕೊಳ್ಳಲಾಗುತ್ತದೆ.ಇದಕ್ಕಾಗಿ ಹೊರಗುತ್ತಿಗೆ ಪಡೆಯುವ ಖಾಸಗಿ ಕಂಪೆನಿಗಳು ಮೇ ತಿಂಗಳಿನಿಂದ ಅಕ್ಟೋಬರ್‌ವರೆಗೆ ಅಂದರೆ ಮಾನ್ಸೂನ್ ಆರಂಭದ ಸಮಯದಲ್ಲಿ ದಿನಗೂಲಿ ಆಧಾರದಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳುವುದಿದ್ದು ಇವರುಗಳನ್ನು 'ಮಾನ್ಸೂನ್ ಗ್ಯಾಂಗ್ ಮನ್‌ಗಳು' ಎನ್ನುತ್ತಾರೆ.
ಹುಳಿಯಾರು ಬೆ.ವಿ.ಕಂ ಕಚೇರಿ.
ವರ್ಷಕ್ಕೆ ೬ ತಿಂಗಳಿಗೆ ಮಳೆಗಾಲದ ಅವಧಿಗೆ ಮಾತ್ರ ಕೆಲಸ ನೀಡುವ ಗುತ್ತಿಗೆದಾರರು ಇವರನ್ನು ಮೂರು ತಿಂಗಳಿನ ನಂತರ ಮುಂದಿನ ಆರು ತಿಂಗಳಿಗೆ ಪುನಃ ನೇಮಿಸಿಕೊಳ್ಳುತ್ತದೆ.

ತಿಪಟೂರು ಬೆ.ವಿ.ಕಂ ವಿಭಾಗದಲ್ಲಿ ೬೦ ಮಂದಿ ಮಾನ್ಸೂನ್ ಗ್ಯಾಂಗ್ಮನ್ ಗಳಿದ್ದು ಮೂರು ಉಪವಿಭಾಗಗಳಾದ ತುರುವೇಕೆರೆ, ಚಿ.ನಾ ಹಳ್ಳಿ ಹಾಗೂ ತಿಪಟೂರುನಲ್ಲಿ ತಲಾ ೨೦ರಂತೆ ಗ್ಯಾಂಗ್ಮನ್ ಉದ್ಯೋಗಿಗಳು ಕೆಲಸಮಾಡುತ್ತಿದ್ದಾರೆ. ಇವರುಗಳನ್ನು ದಾವಣಗೆರೆಯ ಶ್ರೀ ಮಂಜುನಾಥಸ್ವಾಮಿ ಎಲೆಕ್ಟ್ರಿಕಲ್ಸ್ ೨೦೦೯-೧೦ ರಿಂದಲೂ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ನೇಮಿಸಿಕೊಟ್ಟಿದೆ.

ಇದೀಗ ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ಉಪವಿಭಾಗದ ವ್ಯಾಪ್ತಿಯ ೨೦ ಮಂದಿ ಗ್ಯಾಂಗ್ಮನ್ ಅವಧಿ ಡಿಸಂಬರ್ ಗೆ ಮುಗಿದಿದ್ದು ಫೆಬ್ರವರಿಯವರೆಗೆಅವಧಿ ವಿಸ್ತರಿಸಲಾಗಿತ್ತು. ಇದೀಗ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಪುನಹ ಕೆಲಸಕ್ಕೆ ತೆಗೆದುಕೊಳ್ಳದ ಗುತ್ತಿಗೆದಾರರು ಡಿಸಂಬರ್ ನಿಂದ ಕೊಡಬೇಕಿದ್ದ ಮೂರು ತಿಂಗಳ ಸಂಬಳವನ್ನು ಹಾಗೂ ಒಂದೂವರೆ ವರ್ಷದ ಪಿ.ಎಫ್ ಅನ್ನು ಇದುರೆಗೂ ನೀಡಿಲ್ಲ.ಇತ್ತ ಸಂಬಳವೂ ಇಲ್ಲದೆ ಪುನಃ ಕೆಲಸಕ್ಕೂ ತೆಗೆದುಕೊಳ್ಳದಿರುವುದರಿಂದ ಇವರುಗಳಿಗೆ ಒಪ್ಪತ್ತಿನ ಊಟಕ್ಕೂ ತತ್ವಾರವಾಗಿದೆ.

         ವಿದ್ಯುತ್ ಕೆಲಸವೇ ಅಪಾಯ.ಅದರಲ್ಲೂ ಮಳೆಗಾಲದಲ್ಲಿ ಕೆಲಸಮಾಡುವುದು ಇನ್ನೂ ಹೆಚ್ಚಿನ ಅಪಾಯಕಾರಿಯಾಗಿದ್ದು ಇವರುಗಳ ಜೀವಕ್ಕೆ ಹಾಗೂ ಕೆಲಸಕ್ಕೆ ಯಾವುದೇ ಭದ್ರತೆಯಿರುವುದಿಲ್ಲ
ಇವರಿಗೆ ಕಾನೂನು ಪ್ರಕಾರ ಭವಿಷ್ಯನಿಧಿ, ವೈದ್ಯಕೀಯ ಸೌಲಭ್ಯವಿದ್ದರೂ ಸಹ ಈ ಬಗ್ಗೆ ಅರಿವಿಲ್ಲದಿರುವುದರಿಂದ ಗುತ್ತಿಗೆದಾರರಿಂದ ಶೋಷಣೆ ತಪ್ಪಿಲ್ಲ.

             ಹೋಗಲಿ ಸಂಬಳವಾದರೂ ಸರಿಯಾಗಿ ನೀಡುತ್ತಾರಾ ಎಂದರೆ ಅದರಲ್ಲೂ ಅರ್ಧ ವೇತನಕ್ಕೆ ತೃಪ್ತಿಗೊಳ್ಳುವಂತಾಗಿದೆ.ಇಲಾಖೆಯು ಒಬ್ಬರಿಗೆ ತಲಾ 8,729 ರೂ ನಂತೆ ಗುತ್ತಿಗೆದಾರನಿಗೆ ಬಿಲ್ ಮಾಡಿಕೊಟ್ಟರೂ ಸಹ ಗುತ್ತಿಗೆದಾರ ಇವರಿಗೆ ನೀಡುವ ಸಂಬಳ ಕೇವಲ ರೂ. 4,500 ಮಾತ್ರ.ಮಳೆ ಮತ್ತೊಂದು ಕಾರಣಕ್ಕೂ ಒಂದಿನವೇನಾದರೂ ಕೆಲಸಕ್ಕೆ ಹಾಜರಾಗದಿದ್ದರೆ ಆ ದಿನದ ವೇತನ ಸಹ ಕಡಿತ ಮಾಡುತ್ತಾರೆ.ಪಗಾರವೇ ಅರ್ಧ ಎಂಬತ್ತಾಗಿರುವುದರಿಂದ ಇನ್ನೂ ಭತ್ಯೆಗಳು ದೂರದ ಮಾತಾಗಿದೆ.

           ಮಳೆ ಚಳಿಯೆನ್ನದೆ ,ಹಗಲು ರಾತ್ರಿಯೆನ್ನದೆ ಹೊರ ಗುತ್ತಿಗೆಯಲ್ಲಿ ನೇಮಕಗೊಂಡು ಕರ್ತವ್ಯ ನಿರ್ವಹಿಸುವ ಶೋಚನೀಯ ಸ್ಥಿತಿಯಲ್ಲಿರುವ ಮಾನ್ಸೂನ್ ಗ್ಯಾಂಗ್ ಕಾಯಂ ನೌಕರರನ್ನಾಗಿ ಇಲಾಖೆ ಪರಿಗಣಿಸಬೇಕೆಂಬ ಬಹುದಿನಗಳ ಬೇಡಿಕೆಗೆ ಮನ್ನಣೆ ದೊರೆಯುವುದಾ ಕಾದು ನೋಡಬೇಕಿದೆ.
------------------------------------
ಗ್ಯಾಂಗ್ ಮನ್ ಗಳ ಸಮಸ್ಯೆ ಬಗ್ಗೆ ಅರಿವಿದೆ.ಹಾಗೂ ಸಂಬಳ ನೀಡಿಲ್ಲದ್ದರ ಬಗ್ಗೆಯೂ ಮೇಲಾಧಿಕಾರಿಗಳ ಗಮನಕ್ಕೆ ತಂದು ಗುತ್ತಿಗೆದಾರರ ವಿರುದ್ದ ಕ್ರಮಕೈಗೊಳ್ಳಲು ಸೂಚಿಸಿದೆ.
ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದು ಗ್ಯಾಂಗ್ ಮನ್ ಗಳ ಅವಶ್ಯಕತೆಯಿದೆ.ಆದರೆ ಮುಂದಿನ ಆರು ತಿಂಗಳ ಅವಧಿಗೆ ಇವರುಗಳ ಅಪ್ರೂವಲ್ ಆಗದಿರುವುದರಿಂದ ಸಮಸ್ಯೆಯಾಗಿದೆ: ಉಮೇಶ್ ನಾಯಕ್ ,ಸೆಕ್ಷನ್ ಆಫೀಸರ್,ಬೆಸ್ಕಾಂ

---------
ಹುಳಿಯಾರು ಸಬ್ ಸ್ಟೇಶನ್ ನಲ್ಲಿ ಎಂಟಕ್ಕೂ ಹೆಚ್ಚು ಹೊರ ಗುತ್ತಿಗೆಯ ಗ್ಯಾಂಗ್ಮನ್ ಗಳಿದ್ದು ಕಳೆದ ಆರುವರ್ಷಗಳಿಂದಲೂ ಮಳೆಚಳಿಯೆನ್ನದೆ ಕೆಲಸ ನಿರ್ವಹಿಸ್ಸುತ್ತಿರುವ ಇವರನ್ನು ಮುಂದಿನ ಅವಧಿಗೆ ನೇಮಿಸಿಕೊಳ್ಳುವುದಲ್ಲದೆ ಇವರನ್ನು ಕಾಯಂ ಮಾಡಬೇಕು.ಕಡೆ ಪಕ್ಷ ಎಲ್ಲಾ ಸವಲತ್ತುಗಳೊಂದಿಗೆ ಮಜುದೂರ್ ಗ್ಯಾಂಗ್ಮನ್ ಆಗಿ ನೇಮಿಸಿಕೊಳ್ಳಬೇಕು.ಈ ಬಗ್ಗೆ ಕಾನೂನು ಸಚಿವ ಜಯಚಂದ್ರ ಅವರಲ್ಲೂ ಸಹ ಮನವಿ ಮಾಡಲಾಗಿದೆ.ದಬ್ಬಗುಂಟೆ ರವಿಕುಮಾರ್- ಮಾಜಿ ಗ್ರಾಪಂ ಅಧ್ಯಕ್ಷ ,ದಸೂಡಿ, 

----------------------------

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.