ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಡಿಗೆಯಿಂದಷ್ಟೇ ನಾವು ಎಲ್ಲ ವರ್ಗದವರ ಸಂಬಂಧವನ್ನು ಬೆಳೆಸಬಹುದು:ವಾಕ್ ಆಫ್ ಜಾಯ್ ಖ್ಯಾತಿಯ ಬ್ರಿಟನ್ ಪ್ರಜೆ ಡೇವಿಡ್ ಅಥೋವಾ

ಹುಳಿಯಾರು: ವಾಕ್ ಆಫ್ ಜಾಯ್ ಖ್ಯಾತಿಯ ಬ್ರಿಟನ್ ಪ್ರಜೆ ಡೇವಿಡ್ ಅಥೋವಾ ಅವರು ಸೋಮವಾರ ಬೆಳಗ್ಗೆ ಹುಳಿಯಾರಿಗೆ ಆಗಮಿಸಿದ್ದು ಅವರನ್ನು ಕಲ್ಪತರು ಆಗ್ರೋ ಕೇಂದ್ರದ ಬಳಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.      ಚಿಕ್ಕನಾಯಕನಹಳ್ಳಿಯಿಂದ ಬೆಳಗುಲಿ,ಗೂಬೇಹಳ್ಳಿ ಮಾರ್ಗವಾಗಿ ಹುಳಿಯಾರಿಗೆ ಆಗಮಿಸಿದ ಅವರೊಂದಿಗೆ ಪಟ್ಟಣದೆಲ್ಲಡೆ ರೈತ ಸಂಘದ ಪ್ರತಿನಿಧಿಗಳು,ವಿವಿಧ ಸಂಘ ಸಂಸ್ಥೆಯವರು ನಡಿಗೆಯ ಹೆಜ್ಜೆ ಹಾಕಿದರು.         ತಾವು ಆರಂಭಿಸಿರುವ ವಾಕ್ ಆಫ್ ಜಾಯ್ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ನಡಿಗೆಯ ಮುಖಾಂತರವೇ ತಾವು ದೇಶ ವಿದೇಶ ಸಂಚರಿಸಿದ್ದು , ನಡಿಗೆಯಿಂದಾಗುವ ಲಾಭ ಹಾಗೂ ಸುಸ್ಥಿರಕೃಷಿ,ಸಿರಿಧಾನ್ಯದ ಬಗ್ಗೆ ತಮ್ಮ ಸಂಚಾರ ಸಮಯದಲ್ಲಿ ಕಂಡುಕೊಂಡ ಅನುಭವದ ಬಗ್ಗೆ ವಿವರಿಸಿದರು.         ಆಧುನಿಕ ಸಂಪರ್ಕ ಸಾಧನಗಳಲ್ಲಿ ಇತ್ತೀಚೆಗೆ ಮೊಬೈಲ್ ಎಲ್ಲರಿಗೂ ಸರ್ವಸ್ವವಾಗಿದ್ದು ಅವುಗಳಿಂದ ಎಲ್ಲಾ ವರ್ಗದ ಜನರನ್ನು ತಲುಪಲು ಸಾಧ್ಯವಿಲ್ಲ.ನಾವು ವೇಗವಾದ ಬೆಳವಣಿಗೆಯಿಂದಲೇ ಹಾಳಾಗುತ್ತಿದ್ದು ನಡಿಗೆಯಿಂದಷ್ಟೇ ನಾವು ಎಲ್ಲ ವರ್ಗದವರ ಸಂಬಂಧವನ್ನು ಬೆಳೆಸಬಹುದು ಎಂದು ಅಭಿಪ್ರಾಯಪಟ್ಟರು.        ನಡಿಗೆ ನಮಗೆ ಸಮಾಧಾನ,ಸಾವಧಾನ ಕಲಿಸುತ್ತದೆ, ಸಂಬಂಧ ಬೆಳೆಸುತ್ತದೆ.ಸಂಚಾರ ಸಂದರ್ಭದಲ್ಲಿ ನಾನಾ ರೀತಿಯ ಜನಗಳೊಂದಿಗೆ ಬೇರೆಯುವುದರ ಮೂಲಕ ದೇಶದ ಸಮಗ್ರ ವೈವಿಧ್ಯತೆಯನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದರು.      

ಹುಳಿಯಾರು:ಕೊಬ್ಬರಿ ದರ ದಿಢೀರ್ ಏರಿಕೆ

ಕೊಬ್ಬರಿಗೆ ಬಂಪರ್ ಬೆಲೆ: 11011 ರೂಪಾಯಿಗೆ ನಿಂತ ಹರಾಜು ಹುಳಿಯಾರು: ಕಳೆದ ಕೆಲವು ತಿಂಗಳುಗಳಿಂದ ಇಳಿಮುಖವಾಗಿದ್ದ ಕೊಬ್ಬರಿ ಬೆಲೆ ಇದೀಗ ದಿಢೀರ್ ಏರಿಕೆ ಕಂಡು ಮಳೆ ಬೆಳೆ ಇಲ್ಲದೆ ಕಂಗೆಟ್ಟಿದ್ದ ರೈತರಿಗೆ ಹಬ್ಬದ ಸಾಲಿನಲ್ಲಿ ಹರುಷ ಮೂಡಿಸಲು ಕಾರಣವಾಗಿದೆ.          ಕಳೆದ ಒಂದು ವರ್ಷದಿಂದಲೂ ಏರಿಕೆ ಕಾಣದ ಕೊಬ್ಬರಿಗೆ , ಬೆಂಬಲ ಬೆಲೆ ನೀಡಿ ಖರೀದಿಸಿ ಎಂದು ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆ ಮುಂಭಾಗದಲ್ಲಿ ಸುಮಾರು ನೂರ ಎಂಭತ್ತು ದಿನಗಳ ಕಾಲ ಪ್ರತಿಭಟನೆ ನಡೆದಿತ್ತು.ಕೊಬ್ಬರಿ ಬೆಲೆ ಏರಿಕೆಗಾಗಿ ಸಾಕಷ್ಟು ಹೋರಾಟ ನಡೆದು, ಬೆಲೆ ಏರಿಕೆ ಆಗುವುದೇ ಇಲ್ಲ ಎಂದು ದಿಗಿಲುಕೊಂಡಿದ್ದ ರೈತರಿಗೆ ಇದೀಗ ದಿಢೀರ್ ಬೆಲೆ ಹೆಚ್ಚಳ ಸಂತಸಕ್ಕೆ ಕಾರಣವಾಗಿದೆ.        ದಾಸ್ತಾನು ಕೊರತೆ ,ಬೇಡಿಕೆಯಲ್ಲಿ ಹೆಚ್ಚಳದ ಹಿನ್ನೆಲೆಯೇ ಬೆಲೆ ಏರಿಕೆಯಾಗಲು ಕಾರಣ ಎನ್ನುತ್ತಾರೆ ಹುಳಿಯಾರಿನ ಕೊಬ್ಬರಿ ರವಾನೆದಾರ ಸಪ್ತಗಿರಿ ಎಂಟರ್ ಪ್ರೈಸಸ್ ನ ಎಲ್.ಆರ್.ಬಾಲಾಜಿ.ಕಲ್ಪತರು ನಾಡೆಂದು ಹೆಸರಾಗಿರುವ ಈ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಕೊಬ್ಬರಿ ಆವಕ ಇಳಿಮುಖವಾಗುತ್ತಿದ್ದು ಇದೇ ಸಮಯದಲ್ಲಿ ತಮಿಳುನಾಡಿನಲ್ಲಿ ಕೊಬ್ಬರಿ ಎಣ್ಣೆಗೆ ಧಾರಣೆ ಹೆಚ್ಚಳವಾದರೆ ಉತ್ತರ ಭಾರತದ ಕಡೆ ಕೊಬ್ಬರಿಗೆ ಬಲು ಬೇಡಿಕೆ ಕಂಡು ಬಂದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.            ಈ ಹಿನ್ನೆಲೆಯಲ್ಲಿ ಏಳು ಸಾವಿರ-ಎಂಟು ಸಾವಿರದ ಆಸುಪಾಸಿನಲ್ಲಿದ್ದ ಕೊಬ್ಬರಿ ಬೆಲೆ

ಹುಳಿಯಾರು:ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಚೆನೌಕರರ ಅನಿರ್ಧಿಷ್ಠಾವಧಿ ಮುಷ್ಕರ

ಹುಳಿಯಾರು: ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ರಾಷ್ಟ್ರವ್ಯಾಪ್ತಿ ಅನಿರ್ದಿಷ್ಟ ಅವಧಿ ಮುಷ್ಕರ ಬೆಂಬಲಿಸಿ, ಜಿಡಿಎಸ್ ಸಮಿತಿಯಿಂದ ಶಿಫಾರಸ್ಸು ಮಾಡಿದ ಬೇಡಿಕೆಗಳನ್ನು ಈಡೇರಿಸುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ಅಂಚೆ ಕಚೇರಿ ಎದುರು ಹುಳಿಯಾರು ಹೋಬಳಿ ವ್ಯಾಪ್ತಿಯ ಗ್ರಾಮೀಣ ಅಂಚೆ ನೌಕರರು ಮುಷ್ಕರ ನಡೆಸಿದರು. ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ರಾಷ್ಟ್ರವ್ಯಾಪ್ತಿ ಅನಿರ್ದಿಷ್ಟ ಅವಧಿ ಮುಷ್ಕರ ಬೆಂಬಲಿಸಿ ಹುಳಿಯಾರು ಹೋಬಳಿ ವ್ಯಾಪ್ತಿಯ ಗ್ರಾಮೀಣ ಅಂಚೆ ನೌಕರರು ಮುಷ್ಕರ ನಡೆಸಿದರು.          ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷ ಪಂಚಾಕ್ಷರಯ್ಯ ಏಳನೇ ವೇತನ ಆಯೋಗ ರಚನೆಯಾದರೂ ಜಾರಿಗೊಳಿಸುವಲ್ಲಿ ಕೇಂದ್ರಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ.ಇದರಿಂದ ದೇಶಾದ್ಯಂತ 2.5ಲಕ್ಷಕ್ಕೂ ಹೆಚ್ಚು ಗ್ರಾಮೀಣ ಅಂಚೆ ನೌಕರರು ಶೋಷಣೆಗೆ ಒಳಗಾಗಿದ್ದಾರೆ.ಆದ್ದರಿಂದ ತ್ವರಿತವಾಗಿ ಆಯೋಗದ ವರದಿಯನ್ನು ಜಾರಿಗೊಳಿಸಲು ಒತ್ತಾಯಿಸಿ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸುವುದಾಗಿ ತಿಳಿಸಿದರು.            ಯಳನಾಡು ಬಿಒ ರಂಗಯ್ಯ ಮಾತನಾಡಿ ನಮ್ಮ ಬೇಡೆಕೆಗಳ ಬಗ್ಗೆ ಗಮನ ಸೆಳೆಯಲು ಅನೇಕ ಬಾರಿ ಡಿವಿಷನ್ ಲೆವೆಲ್, ಸರ್ಕಲ್ ಲೆವೆಲ್ ಹಾಗೂ ಆಯಾಯ ತಾಲೂಕು ಮಟ್ಟದಲ್ಲಿ ಬೈಕ್ ರ್ಯಾಲಿ ಮಾಡುವ ಮೂಲಕ ಕೂಡಾ ಸರ್ಕಾರವನ್ನು ಎಚ್ಚರಿಸಿದ್ದೆವು.ಆದರೂ ಕೂಡ ಸರಕಾರ ಈ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜ್ವರಕ್ಕೆ ಬಲಿ

ಹುಳಿಯಾರು: ಶಂಕಿತ ಡೆಂಗ್ಯೂ ಜ್ವರದಿಂದ ಮೊನ್ನೆಯಷ್ಟೆ ಚಿಕ್ಕನಾಯಕನಹಳ್ಳಿಯಲ್ಲಿ ಸುಷ್ಮಿತಾ ಸಾವನ್ನಪ್ಪಿರುವ ಘಟನೆ ಇನ್ನು ಹಸಿಯಾಗಿರುವಾಗಲೇ ಮತ್ತದೇ ಜ್ವರದ ಭಾಧೆಯಿಂದ ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಸಮೀಪದ ದೊಡ್ಡೇಣ್ಣೇಗೆರೆಯ ನಿವಾಸಿ ಶಿಕ್ಷಕ ವೈ.ನಾಗರಾಜು ಇವರ ಮೂರನೇ ಪುತ್ರ ಒ.ಎನ್.ವಿಶ್ವನಾಥ್ (೧೬)ವರ್ಷ ಶಂಕಿತ ಡೆಂಗ್ಯುಗೆ ಬಲಿಯಾದ ದುರ್ದೈವಿಯಾಗಿದ್ದಾನೆ. ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಈತನಿಗೆ ಹುಳಿಯಾರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ.ಗುರುವಾರ ಮಧ್ಯಾಹ್ನ ಜ್ವರ ಹೆಚ್ಚಾದ ಕಾರಣ ಆತನನ್ನು ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲಿ ನಿಧನ ಹೊಂದಿದ್ದಾನೆ. ವಿಶ್ವನಾಥ್ ಹುಳಿಯಾರು- ಕೆಂಕೆರೆ ಪ್ರೌಢಶಾಲೆಯಲ್ಲಿ ೧೦ನೇತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.  ಮೃತ ಬಾಲಕನ ಅಂತ್ಯಸಂಸ್ಕಾರ ಪಾವಗಡ ತಾಲ್ಲೂಕಿನ ಪೋಷಕರ ಗ್ರಾಮದಲ್ಲಿ ನಡೆಯಿತು.

49 ಲಕ್ಷ ವೆಚ್ಚದ ಬಾಲಕಿಯರ ಕಾಲೇಜು ಕೊಠಡಿಗೆ ಶಾಸಕರ ಶಂಕುಸ್ಥಾಪನೆ

ಹುಳಿಯಾರು: ಅಗತ್ಯ ಮೂಲಭೂತ ಸೌಕರ್ಯ ಹಾಗೂ ಕೊಠಡಿ ಕೊರತೆ ಎದುರಿಸುತ್ತಿದ್ದ ಪಟ್ಟಣದ ಬಾಲಕಿಯರ ಸರಕಾರಿ ಪದವಿ ಪೂರ್ವಕಾಲೇಜಿಗೆ ೪೯ ಲಕ್ಷ ವೆಚ್ಚದಲ್ಲಿ ಶೌಚಾಲಯ ಹಾಗೂ ೨ ನೂತನ ಕೊಠಡಿ ನಿರ್ಮಾಣಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು ಗುರುವಾರದಂದು ಗುದ್ದಲಿಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು ಮಕ್ಕಳ ಉತ್ತಮ ವಿದ್ಯಾಭ್ಯಾಸ ದೃಷ್ಟಿಯಿಂದ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿದ್ದು ,ಕಾಲೇಜ್ ಕೊಠಡಿ ನಿರ್ಮಾಣದ ಕಾಮಗಾರಿಯೂ ಸಹ ಪಾಠಪ್ರವಚನಕ್ಕೆ ತೊಂದರೆಯಾಗದಂತೆ ಬೇಗನೆ ಪೂರ್ತಿಗೊಳಿಸಲಾಗುವುದು ಎಂದರು.ಶೀಘ್ರವಾಗಿ ಪೂರ್ತಿಮಾಡಿಕೊಡುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಿದರು.           ಇಲ್ಲಿನ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ನೀರಿನ ಸಮಸ್ಯೆಯಿರುವುದನ್ನು ಮನಗಂಡ ಅವರು ಬೋರ್ ವೆಲ್ ಕೊರಿಸಿಕೊಡುವುದಾಗಿ ಹೇಳಿದರಲ್ಲದೆ ಇದೇ ಆವರಣದಲ್ಲಿ ಶುದ್ಧ ಶುದ್ದ ನೀರಿನ ಘಟಕ ಸ್ಥಾಪಿಸುವುದಾಗಿ ಭರವಸೆ ನೀಡಿದರು.           ಈ ಕಾರ್ಯಕ್ರಮದಲ್ಲಿ ಹುಳಿಯಾರು ತಾಪಂ ಸದಸ್ಯರಾದ ಹೆಚ್.ಎನ್.ಕುಮಾರ್,ಯಳನಾಡು ತಾಪಂ ಸದಸ್ಯರಾದ ಯತೀಶ್, ದಸೂಡಿ ತಾಪಂ ಸದಸ್ಯರಾದ ಪ್ರಸನ್ನಕುಮಾರ್,ಹುಳಿಯಾರು ಗ್ರಾಪಂ ಉಪಾಧ್ಯಕ್ಷ ಗಣೇಶ್, ಸದಸ್ಯರುಗಳಾದ ಗೀತಾಬಾಬು, ಅಹ್ಮದ್‌ಖಾನ್, ಪುಟ್ಟಮ್ಮ,ಚಿ.ನಾ.ಹಳ್ಳಿ ಪುರಸಭೆ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಕಾಲೇಜ್ ಪ್ರಾಂಶುಪಾಲ ನಂಜುಂಡಪ್ಪ, ಶಿಕ್ಷಕರಾದ ನಂದವಾಡಗಿ, ಕಿರುತೆರೆಯ ಕಲಾವಿದ ಗೌಡಿ ಸ

ಹುಳಿಯಾರು ಹೋಬಳಿ ಎ ವಿಭಾಗದ ಪ್ರೌಢ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟ

ಸತತ ಪ್ರಯತ್ನಗಳಿಂದ ಸೋತವರು ಗೆಲುವು ಸಾಧಿಸಬಹುದು : ಪಿಎಸೈ ವೈ.ವಿ. ರವೀಂದ್ರ ಹುಳಿಯಾರು: ಶಿಕ್ಷಣ ಮತ್ತು ಕ್ರೀಡೆ ನಾಣ್ಯದ ಎರಡು ಮುಖವಿದ್ದಂತೆ .ಆಟದಲ್ಲಿ ಸೋಲು ಗೆಲುವು ಸಹಜ .ಆದರೆ ಸತತ ಪ್ರಯತ್ನಗಳಿಂದ ಸೋತವರು ಗೆಲುವು ಸಾಧಿಸಬಹುದು. ಆದ್ದರಿಂದ ಯಾರೂ ಸೋಲಿಗೆ ನಿರಾಶರಾಗದೆ ಕ್ರೀಡಾ ಸ್ಫೂರ್ತಿ ಹಾಗೂ ಆತ್ಮವಿಶ್ವಾಸದಿಂದ ಭಾಗವಹಿಸಿ ಗೆಲುವಿನ ನಗೆ ಬೀರಿ ಎಂದು ಹುಳಿಯಾರು ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ವೈ.ವಿ. ರವೀಂದ್ರ ಕರೆ ನೀಡಿದರು. ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದವತಿಯಿಂದ ಬುಧವಾರ ನಡೆದ ಎರಡು ದಿನಗಳ ಕಾಲದ ಹುಳಿಯಾರು ಹೋಬಳಿ ಎ ವಿಭಾಗದ ಪ್ರೌಢ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಪಿಎಸೈ ವೈ.ವಿ. ರವೀಂದ್ರ ಮಾತನಾಡಿದರು  ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದವತಿಯಿಂದ ಬುಧವಾರ ನಡೆದ ಎರಡು ದಿನಗಳ ಕಾಲದ ಹುಳಿಯಾರು ಹೋಬಳಿ ಎ ವಿಭಾಗದ ಪ್ರೌಢ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಬಾಲ್ ಚಿಮ್ಮುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು . ಕ್ರೀಡಾ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಸಿ. ಸಿದ್ದರಾಮಯ್ಯ ಮಾತನಾಡಿ ಸೋಲು ಗೆಲುವು ಕ್ರೀಡೆಯ ಎರಡು ಮುಖವಿದ್ದಂತೆ.ಆಟದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವುದನ್ನು ಕಲಿತಲ್ಲಿ ಬಾಳಿನಲ್ಲಿ ಸಮಚಿತ್ತವಾಗಿರುವುದನ್ನು ಕಲಿತಂತೆ ಎಂದರು . ಕ್ರೀ

ಏಳನೇ ವೇತನ ಆಯೋಗದ ಜಾರಿಗೆ ಒತ್ತಾಯಿಸಿ ಬೈಕ್ ರ್ಯಾಲಿ

ಏಳನೇ ವೇತನ ಆಯೋಗದ ಜಾರಿಗೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರು ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸಿದರು. ಕೇಂದ್ರ ಸಂಘದ ಆದೇಶದಂತೆ ದೇಶಾದ್ಯಂತ ಗ್ರಾಮೀಣ ಅಂಚೆನೌಕರರಿಂದ ಇಂದು ಬೈಕ್ ರ್ಯಾಲಿ ನಡೆದಿದೆ. ಈ ನಿಟ್ಟನಲ್ಲಿ ತಾಲ್ಲೂಕಿನ ಗ್ರಾಮೀಣ ಅಂಚೆನೌಕರರು ಇಂದು ಇಲ್ಲಿನ ಅಂಚೆ ಕಚೇರಿ ಮುಂಭಾಗದಿಂದ ಊರಿನ ಮುಖ್ಯರಸ್ತೆಯಲ್ಲಿ ಬೈಕ್ ರ್ಯಾಲಿ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷ ಪಂಚಾಕ್ಷರಯ್ಯ ಮಾತನಾಡಿ ಕಳೆದ ಒಂದು ವರ್ಷದಿಂದ ಏಳನೇ ವೇತನ ಆಯೋಗ ರಚನೆಯಾದರೂ ಜಾರಿಗೊಳಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಇದರಿಂದ ದೇಶಾದ್ಯಂತ ಇರುವ 2.5 ಲಕ್ಷ ಗ್ರಾಮೀಣ ಅಂಚೆ ನೌಕರರು ಶೋಷಣೆ ಅನುಭವಿಸುತ್ತಿದ್ದಾರೆ. ಪ್ರಾಮಾಣಿಕವಾಗಿ ಅಂಚೆ ಇಲಾಖೆಯಲ್ಲಿ ಎಲ್ಲಾ ಋತುಗಳಲ್ಲೂ ಸಮಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸುತ್ತಿರುವ ನಮಗೆ ನ್ಯಾಯಯುತ ವೇತನದಲ್ಲಿ ತಾರತಮ್ಯವಿದೆ ಕೂಡಲೇ ಏಳನೇ ವೇತನ ಅಯೋಗ ಜಾರಿಗೆ ತರುವಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕಿದೆ. ಇದೇ ಆಗಷ್ಟ್ 16 ರಂದು ದೇಶಾದ್ಯಂತ ಅನಿರ್ದಾಷ್ಟಾವಧಿ ಮುಷ್ಕರ ನಡೆಸಲಾಗುವುದೆಂದರು.   ರ್ಯಾಲಿಯಲ್ಲಿ ನೌಕರರ ಸಂಘದ ಕಾರ್ಯದರ್ಶಿ ಹರೀಶ್, ರಾಜಣ್ಣ, ವೆಂಕಟೇಶ್, ಮಂಜುನಾಥ್ ಇತರರು ಇದ್ದರು. 

ಹುಳಿಯಾರು:ವರಮಹಾಲಕ್ಷ್ಮೀ ಹಬ್ಬಕ್ಕೆ ಹೂವು ಹಣ್ಣು ದುಬಾರಿ

ಹುಳಿಯಾರು: ವರಮಹಾಲಕ್ಷ್ಮೀ ಹಬ್ಬಕ್ಕೆ ಹೂವು, ಹಣ್ಣು ಬೆಲೆ ಗಗನಕ್ಕೇರಿದ್ದು ಸಾರ್ವಜನಿಕರಿಗೆ ಈ ಬಾರಿ ಹಬ್ಬ ದುಬಾರಿಯಾಗಿ ಪರಿಣಮಿಸಿದೆ. ಹುಳಿಯಾರಿನಲ್ಲಿ ಗುರುವಾರದ ಸಂತೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಹೂವಿನ ವ್ಯಾಪಾರ ಜೋರಾಗಿ ಸಾಗಿತ್ತು.            ಪಟ್ಟಣದಲ್ಲಿ ಗುರುವಾರ ನಡೆದ ಸಂತೆಯಲ್ಲಿ ಹೂವು, ಹಣ್ಣಿನ ಬೆಲೆಗಳು ದುಬಾರಿಯಾಗಿದ್ದರೆ ತರಕಾರಿ ಬೆಲೆ ಮಧ್ಯಮವಾಗಿತ್ತು. ಕಾಕಡ ಮಾರಿಗೆ ೫೦ ರೂ ಇದ್ದರೆ ಶಾವಂತಿಗೆ ಹೂ ಮಾರೊಂದಕ್ಕೆ ೧೦೦ ರೂ,ಬಟನ್ಸ್ ಮಾರಿಗೆ ೮೦ ಇತ್ತು. ಇನ್ನು ಬಿಡಿ ಹೂವಿನ ಬೆಲೆ ಕೆಜಿಗೆ ಇನ್ನೂರಕ್ಕೂ ಹೆಚ್ಚಿತ್ತು .ಡೇರಾ ಹೂವಿಗೆ 10 ರೂ ಇದ್ದರೆ ತಾವರೆ ಹೂವಿಗೆ ಕೆರೆಗಳಲ್ಲಿ ಹುಡುಕಾಟ ನಡೆದಿತ್ತು..ಯಾರು ಕೊಳ್ಳಲೊಲ್ಲದೆ ಕೇಜಿಗೆ ೩೦ರೂ ಆಸುಪಾಸಿನಲ್ಲಿರುತ್ತಿದ್ದ ಚೆಂಡು ಹೂವು ಕೂಡ ಕೆಜೆ ೬೦.ರೂ ನಂತೆ ಮಾರಾಟವಾಯಿತು.          ಹೂವಿನೊಂದಿಗೆ ಹಣ್ಣಿನೆ ಬೆಲೆಯೂ ಏರಿ ಗ್ರಾಹಕರನ್ನು ಕಂಗಾಲಾಗಿಸಿತ್ತು.ಸೇಬಿನ ಬೆಲೆ ಕೇಜಿ 100-120 ರೂ ಇದ್ದರೆ ಕರಿ ದ್ರಾಕ್ಷಿ ೧೨೦ ರೂ,ಸೀಡ್ ಲೆಸ್ ದ್ರಾಕ್ಷಿ ಕೇಜಿ ೧೬೦ ರೂ. ದಾಟಿತ್ತು. ಸೀಬೆ ಕೆಜಿಗೆ ೮೦ ರೂ ,ಮೋಸುಂಬೆ ೫೦-೬೦ ರೂ,ಮರಸೇಬು ಕೇಜಿಗೆ ೧೦೦ ರೂ,ಕಿತ್ತಳೆ ಕೂಡ ಕೇಜಿಗೆ ೧೦೦ ರೂ ತಲುಪಿತ್ತು. ಪಚ್ಚಬಾಳೆ ಕೆಜಿಗೆ ೫೦-೬೦ ಇದ್ದರೆ ಪುಟ್ಟಬಾಳೆ ೮೦ ರೂ ಇತ್ತು. ತರಕಾರಿಗಳ ಬೆಲೆ ಕೇಜಿಗೆ ಸರಾಸರಿ ೩೦-೪೦ ಇದ್ದರೆ ಸೊಪ್ಪಿನ ಬೆಲೆ ಮಾತ್ರ ತಳಕಚ್ಚ

ಕಾಂಗ್ರೆಸ್ ಸಚಿವರ ಮನೆ ಮೇಲಿನ ಐಟಿ ದಾಳಿ ರಾಜಕೀಯ ಪ್ರೇರಿತ

ಹುಳಿಯಾರು: ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ಹುಳಿಯಾರು: ಐ.ಟಿ.ಅಧಿಕಾರಿಗಳನ್ನು ತನ್ನ ಕೈಗೊಂಬೆಮಾಡಿಕೊಂಡಿರುವ ಕೇಂದ್ರಸರಕಾರ ಕರ್ನಾಟಕ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಸಚಿವ ಡಿ.ಕೆ.ಶಿವಕುಮಾರ್ ಮನೆಮೇಲೆ ವಿನ:ಕಾರಣ ದಾಳಿಮಾಡಿಸುವ ಮುಲಕ ಕಿರುಕುಳ ನೀಡಿತ್ತಿದ್ದಾರೆಂದು ಆರೋಪಿಸಿ ಹುಳಿಯಾರಿನಲ್ಲಿ ಕಾಂಗ್ರೆಸ್ ಮುಖಂಡರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ಹಾಗೂ ಜಿ.ಪಂ. ಸದಸ್ಯ ವೈ.ಸಿ.ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರದಂದು ಪ್ರತಿಭಟನೆ ನಡೆಸಿದರು.         ಹುಳಿಯಾರಿನ ಪರಿವೀಕ್ಷಣಾಮಂದಿರದಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ನಾಡಕಚೇರಿ ತಲುಪಿ ಉಪತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.         ಈ ವೇಳೆ ಜಿಪಂ ಸದಸ್ಯ ವೈ.ಸಿ.ಸಿದ್ದರಾಮಯ್ಯ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿವೃದ್ಧಿ ಕಾರ್ಯ ಹಾಗೂ ಜನಪ್ರಿಯತೆ ಸಹಿಸದ ಕೇಂದ್ರದ ಬಿಜೆಪಿ ಸರಕಾರವು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸೋಲುತ್ತೆವೆ ಎಂಬ ಭಯದಿಂದ ಕಂಗಾಲಾಗಿ ಕಾಂಗ್ರೆಸ್‌ನ ಸಚಿವರ ಮನೆಮೇಲೆ ಐ.ಟಿ.ಅಧಿಕಾರಿಗಳನ್ನ ಕಳಿಸಿ ದಾಳಿಮಾಡಿಸಿ ಭಯದ ವಾತವರಣ ಸೃಷ್ಟಿಸಲು ಮುಂದಾಗಿರುವುದು ನಾಚಿಕೆಗೇಡಿತನವಾಗಿದೆ ಎಂದು ಕಿಡಿಕಾರಿದರು.         ರೈತರ ಪರ ಸ್ವಲ್ಪವು ಕನಿಕರವಿಲ್ಲದ ಪ್ರಧಾನ ಮಂತ್ರಿಗಳು ರೈತರ ಬೆಳೆದ ತೆಂಗಿನ ಕೊಬ್ಬರಿ, ಅಡಕೆಯ ಬೆಳೆಗೆ ನ್ಯಾಯಯುತವಾದ ಬ

ಅಗಲಿದ ಗುರುಗಳಿಗೆ ಶಿಷ್ಯರಿಂದ ಪದಕ ಸಮರ್ಪಣೆ

ನಮ್ಮ ಅಮೋಘ ಸಾಧನೆಗೆ ಗುರುಗಳ ಪ್ರೋತ್ಸಾಹವೇ ಕಾರಣ ಎಂದ ಮಕ್ಕಳು ಹುಳಿಯಾರು: ತಮ್ಮ ಸಾಧನೆಗೆ ಗುರುಗಳ ಪ್ರೋತ್ಸಾಹ ಹಾಗೂ ಶ್ರೀ ರಕ್ಷೆಯೇ ಕಾರಣವಾಗಿದ್ದು ,ಇಂದು ನಮ್ಮ ತಂಡ ಪಡೆದ ಗೆಲುವು ಅವರಿಗಾಗಿ ಸಮರ್ಪಣೆ ಎಂದು ಬೆಳ್ಳಾರ ಶಾಲೆಯ ವಿದ್ಯಾರ್ಥಿಗಳು ತಮ್ಮ ಸಾಧನೆಯ ಹಿಂದಿನ ಕರ್ತೃವಾದ ಕಳೆದ ವಾರವಾಷ್ಟೆ ಅಗಲಿದ ದೈಹಿಕ ಶಿಕ್ಷಕ ತ್ಯಾಗರಾಜ್ ಗೆ ಸಮರ್ಪಿಸಿದ ಘಟನೆ ಹುಳಿಯಾರಿನಲ್ಲಿ ಬುಧವಾರ ಜರುಗಿದೆ . ಹುಳಿಯಾರಿನಲ್ಲಿ ದೈಹಿಕ ಶಿಕ್ಷಕ ತ್ಯಾಗರಾಜ್ ಅವರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಇವರ ಪ್ರೋತ್ಸಾಹದಿಂದಲೇ ನಾವು ಗೆಲುವು ಸಾಧಿಸಿದ್ದು ಎಂದ ಮಕ್ಕಳು ಪದಕವಿಟ್ಟು ಭಾಷ್ಪಾಂಜಲಿ ಸಮರ್ಪಿಸಿದರು          ಗುರುಗಳ ನಮ್ಮಲ್ಲಿ ಗೆಲ್ಲಲೇ ಬೇಕಂಬ ಸ್ಫೂರ್ತಿಯ ಸೆಲೆ ತುಂಬಿದ್ದು ನಮ್ಮ ಗೆಲುವಿಗೆ ಕಾರಣವೆಂದ ಮಕ್ಕಳು ಇಂದು ತಾವು ಪಡೆದ ಪದಕಗಳೆನೆಲ್ಲಾ ದೂರದ ಊರಿನಿಂದ ಹುಳಿಯಾರಿನ ಅಂತ್ಯಕ್ರಿಯೆ ನಡೆದಿದ್ದ ಸ್ಥಳಕ್ಕೆ ಆಗಮಿಸಿ ಗುಡ್ಡೆ ಮುಂದೆ ಪದಕಗಳನಿಟ್ಟು ಪೂಜೆ ಸಲ್ಲಿಸಿ ಸಮರ್ಪಿಸಿದ ಘಟನೆ        ಅಲ್ಲಿದ್ದವರ ಕಣ್ಣಂಚಿನಲ್ಲಿ ನೀರು ತಂದಿದಂತೂ ಸತ್ಯ.ದೈಹಿಕ ಶಿಕ್ಷಕ ತ್ಯಾಗರಾಜುವಿಗೆ ಮಕ್ಕಳ ಬಗ್ಗೆಗಿದ್ದ ಅಂತಕರಣ,ಮಮಕಾರಕ್ಕೆ ಈ ಘಟನೆ ಸಾಕ್ಷಿಯಾಯಿತು.                ಬೆಳ್ಳಾರ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ದೈಹಿಕ ಶಿಕ್ಷಕ ತ್ಯಾಗರಾಜ್ ಕಳೆದ ಬುಧವಾರ ರಾತ್ರಿ ಹುಳಿಯ

ಹುಳಿಯಾರು:ಕಾಯಂ ಉಪನ್ಯಾಸಕರ ನೇಮಕಕ್ಕೆ ಅಭಾವಿಪ ಒತ್ತಾಯ

ಹುಳಿಯಾರು ಕೆಂಕೆರೆಯ ಬಿಎಂಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಖಾಯಂ ಉಪನ್ಯಾಸಕರ ಕೊರತೆಯಿದ್ದು ಕಳೆದ ಹದಿನೈದು ದಿನಗಳಿಂದ ಕಾರ್ಯನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕರನ್ನು ಕೂಡಾ ಸರ್ಕಾರದ ಆದೇಶದಂತೆ ರದ್ದುಮಾಡಿರುವುದರಿಂದ ಪಾಠಪ್ರವಚನಕ್ಕೆ ತೊಂದರೆಯಾಗಿದ್ದು ಈ ಕೂಡಲೇ ಉಪನ್ಯಾಸಕರನ್ನು ನೇಮಿಸುವಂತೆ ಅಖಿಲಭಾರತೀಯ ವಿದ್ಯಾರ್ಥಿ ಪರಿಷತ್ತು ವತಿಯಿಂದ ನಾಡಕಛೇರಿಯ ಉಪತಹಸೀಲ್ದಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಉಪನ್ಯಾಸಕರನ್ನು ನೇಮಿಸುವಂತೆ ಅಖಿಲಭಾರತೀಯ ವಿದ್ಯಾರ್ಥಿ ಪರಿಷತ್ತು ವತಿಯಿಂದ ನಾಡಕಛೇರಿಯ ಉಪತಹಸೀಲ್ದಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.         ಮನವಿ ಸಲ್ಲಿಸಿ ಮಾತನಾಡಿದ ಎಬಿವಿಪಿ ನಗರಕಾರ್ಯದರ್ಶಿ ನವೀನ್ ಕಾಲೇಜು ಪ್ರಾರಂಭವಾಗಿ ಈಗಾಗಲೇ ಒಂದೂವರೆ ತಿಂಗಳಾಗಿದ್ದು ಉಪಸ್ಯಾಸಕರ ಕೊರತೆಯಿಂದ ಕೆಲವು ತರಗತಿಗಳು ನಡೆಯುತ್ತಿರಲಿಲ್ಲ.ಈಗ್ಗೆ ಹದಿನೈದು ದಿನಗಳ ಹಿಂದೆಯಷ್ಟೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ಸಮಸ್ಯೆ ಸರಿಯಾಯಿತು ಎನ್ನುವಷ್ಟರಲ್ಲೇ ಸರ್ಕಾರ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ರದ್ದುಪಡಿಸಿ ಆದೇಶ ಹೊರಡಿಸಿದ್ದರಿಂದ ಇಂದಿನಿಂದ ಅವರುಗಳು ಕೂಡ ತರಗತಿ ತೆಗೆದುಕೊಳ್ಳುತ್ತಿಲ್ಲ.ಇದರಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗಿದೆ.           ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಸರ್ಕಾರಿ ಕಾಲೇಜುಗಳೇ ಆಧಾರವಾಗಿದ್ದು ಇಲ್ಲಿ ಶಿಕ್ಷಕ

ಸಚಿವ ಟಿ.ಬಿ ಜಯಚಂದ್ರ ಅವರಿಂದ 288 ಫಲಾನುಭವಿಗಳಿಗೆ ಸಾಗುವಳಿ ಚೀಟಿ ವಿತರಣೆ

ದೊಡ್ಡಪ್ರಮಾಣದಲ್ಲಿ ಅಕ್ರಮ ಸಾಗುವಳಿದಾರರ ಅರ್ಜಿಗಳನ್ನು ಪರಿಶೀಲಿಸಿ ವಿತರಿಸುತ್ತಿರುವುದು ಜಿಲ್ಲೆಯಲ್ಲಿಯೇ ಪ್ರಥಮ ---------------------- ಚಿಕ್ಕನಾಯಕನಹಳ್ಳಿ ;ಹಲವಾರು ವರ್ಷಗಳಿಂದ ಇತ್ಯರ್ಥವಾಗದ ಬಗರಹುಕುಂ ಸಾಗುವಳಿದಾರರ ಅರ್ಜಿಗಳ ಪೈಕಿ ಈಗ ತಾಲ್ಲೂಕಿನ 288 ಫಲಾನುಭವಿಗಳಿಗೆ ಸಾಗುವಳಿ ಚೀಟಿಯನ್ನು ವಿತರಿಸಲಾಗಲಿದೆ ಎಂದು ಉಸ್ತುವರಿ ಸಚಿವ ಟಿ.ಬಿ ಜಯಚಂದ್ರ  ತಿಳಿಸಿದರು.  ಅವರು ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬಹರ್‌ಹುಕುಂ ಸಮಿತಿಯ ಮುಂದೆ ಹಲವಾರು ವರ್ಷಗಳಿಂದ ಇತ್ಯರ್ಥವಾಗದ ೯೦೦ ಅರ್ಜಿಗಳ ಪೈಕಿ ೨೮೮ ಅರ್ಜಿದಾರರಿಗೆ ಇಂದು ಸಾಗುವಳಿ ಚೀಟಿ ವಿತರಿಸಿ ಮಾತನಾಡಿದರು. ಗೋಮಾಳದಲ್ಲಿ ಅರ್ಜಿ ಹಾಕಿದ್ದ ರೈತರಿಗೆ ಉಚ್ಚನ್ಯಾಯಾಲಯದ ಆದೇಶದನ್ವಯ ಕೆಲವನ್ನು ವಿಲೆ ಇಡಲಾಗಿದೆ. ಉಳಿದಂತೆ ತಾಲ್ಲೂಕಿನ ಎಲ್ಲಾ ಭಾಗದಲ್ಲಿನ ಜಮೀನುಗಳನ್ನು ಸಮಿತಿಯ ಮೂಲಕ ಸ್ಥಳ ಪರಿಶೀಲನೆ ನಡೆಸಿ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಫಾರಂನಂ.೫೦ ರಲ್ಲಿ ಯಾವುದೇ ಅರ್ಜಿ ಉಳಿದಿಲ್ಲ, ಫಾರಂ ನಂ. ೫೩ರಲ್ಲಿ ೯೦೦ ಪ್ರಕರಣಗಳಲ್ಲಿ 288 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದು, ಇದರಲ್ಲಿ 164 ಪ್ರಕರಣಗಳಲ್ಲಿ ಸರ್ಕಾರಕ್ಕೆ ಕಿಮ್ಮತ್ತು ಕಟ್ಟಬೇಕಿದೆ. 540 ಪ್ರಕರಣಗಳಲ್ಲಿ ಈಗ 288 ಅರ್ಜಿದಾರರಿಗೆ ಇಂದು ಸಾಗುವಳಿ ಚೀಟಿ ವಿತರಿಸಲಿದ್ದು ಉಳಿದ 220 ಮಂದಿಗೆ ಇಪ್ಪತ್ತು ದಿನದೊಳಗೆ ವಿತರಿಸಲಾಗುವುದೆಂದರು. ಇಷ್ಟೊಂದು ದೊಡ್ಡಪ್ರಮಾಣದಲ್ಲಿ ಅ