ವಿಷಯಕ್ಕೆ ಹೋಗಿ

ನಡಿಗೆಯಿಂದಷ್ಟೇ ನಾವು ಎಲ್ಲ ವರ್ಗದವರ ಸಂಬಂಧವನ್ನು ಬೆಳೆಸಬಹುದು:ವಾಕ್ ಆಫ್ ಜಾಯ್ ಖ್ಯಾತಿಯ ಬ್ರಿಟನ್ ಪ್ರಜೆ ಡೇವಿಡ್ ಅಥೋವಾ

ಹುಳಿಯಾರು: ವಾಕ್ ಆಫ್ ಜಾಯ್ ಖ್ಯಾತಿಯ ಬ್ರಿಟನ್ ಪ್ರಜೆ ಡೇವಿಡ್ ಅಥೋವಾ ಅವರು ಸೋಮವಾರ ಬೆಳಗ್ಗೆ ಹುಳಿಯಾರಿಗೆ ಆಗಮಿಸಿದ್ದು ಅವರನ್ನು ಕಲ್ಪತರು ಆಗ್ರೋ ಕೇಂದ್ರದ ಬಳಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.


     ಚಿಕ್ಕನಾಯಕನಹಳ್ಳಿಯಿಂದ ಬೆಳಗುಲಿ,ಗೂಬೇಹಳ್ಳಿ ಮಾರ್ಗವಾಗಿ ಹುಳಿಯಾರಿಗೆ ಆಗಮಿಸಿದ ಅವರೊಂದಿಗೆ ಪಟ್ಟಣದೆಲ್ಲಡೆ ರೈತ ಸಂಘದ ಪ್ರತಿನಿಧಿಗಳು,ವಿವಿಧ ಸಂಘ ಸಂಸ್ಥೆಯವರು ನಡಿಗೆಯ ಹೆಜ್ಜೆ ಹಾಕಿದರು.

        ತಾವು ಆರಂಭಿಸಿರುವ ವಾಕ್ ಆಫ್ ಜಾಯ್ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ನಡಿಗೆಯ ಮುಖಾಂತರವೇ ತಾವು ದೇಶ ವಿದೇಶ ಸಂಚರಿಸಿದ್ದು , ನಡಿಗೆಯಿಂದಾಗುವ ಲಾಭ ಹಾಗೂ ಸುಸ್ಥಿರಕೃಷಿ,ಸಿರಿಧಾನ್ಯದ ಬಗ್ಗೆ ತಮ್ಮ ಸಂಚಾರ ಸಮಯದಲ್ಲಿ ಕಂಡುಕೊಂಡ ಅನುಭವದ ಬಗ್ಗೆ ವಿವರಿಸಿದರು.
        ಆಧುನಿಕ ಸಂಪರ್ಕ ಸಾಧನಗಳಲ್ಲಿ ಇತ್ತೀಚೆಗೆ ಮೊಬೈಲ್ ಎಲ್ಲರಿಗೂ ಸರ್ವಸ್ವವಾಗಿದ್ದು ಅವುಗಳಿಂದ ಎಲ್ಲಾ ವರ್ಗದ ಜನರನ್ನು ತಲುಪಲು ಸಾಧ್ಯವಿಲ್ಲ.ನಾವು ವೇಗವಾದ ಬೆಳವಣಿಗೆಯಿಂದಲೇ ಹಾಳಾಗುತ್ತಿದ್ದು ನಡಿಗೆಯಿಂದಷ್ಟೇ ನಾವು ಎಲ್ಲ ವರ್ಗದವರ ಸಂಬಂಧವನ್ನು ಬೆಳೆಸಬಹುದು ಎಂದು ಅಭಿಪ್ರಾಯಪಟ್ಟರು.

       ನಡಿಗೆ ನಮಗೆ ಸಮಾಧಾನ,ಸಾವಧಾನ ಕಲಿಸುತ್ತದೆ, ಸಂಬಂಧ ಬೆಳೆಸುತ್ತದೆ.ಸಂಚಾರ ಸಂದರ್ಭದಲ್ಲಿ ನಾನಾ ರೀತಿಯ ಜನಗಳೊಂದಿಗೆ ಬೇರೆಯುವುದರ ಮೂಲಕ ದೇಶದ ಸಮಗ್ರ ವೈವಿಧ್ಯತೆಯನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದರು.

        ಭಾರತದಲ್ಲಿ 6000 ಕಿಲೋಮೀಟರ್ ದೂರ ಕ್ರಮಿಸುವ ಉದ್ದೇಶ ಹೊಂದಿರುವ ಅವರು ತಾವೀಗ ಪ್ರಾರಂಭಿಸಿರುವ ಮೊದಲನೇ ಹಂತದ ನಡಿಗೆ ಇದೇ ಡಿಸಂಬರ್ ಗೆ ಮುಗಿಯಲಿದ್ದು ಜನವರಿಯಿಂದ 2018ರಿಂದ ಎರಡನೇ ಹಂತದ ನಡಿಗೆಯನ್ನು ಪಶ್ಚಿಮ ಬಂಗಾಳದಿಂದ ಪ್ರಾರಂಭಿಸಿ ಜಾರ್ಖಂಡ್,ಬಿಹಾರ,ಉತ್ತರಪ್ರದೇಶ,ಹರಿಯಾಣದ ಮುಖಾಂತರ ಪಂಜಾಬಿನ ಅಮೃತಸರದಲ್ಲಿ ಭಾರತ ದೇಶದ ಸಂಚಾರ ಮುಗಿಸುವುದಾಗಿ ಹೇಳಿದರು

            ಹುಳಿಯಾರಿನ ಜಸ್ಟ್ ರಿಲ್ಯಾಕ್ಸ್ ಕಾಫಿ ಕೇಂದ್ರದಲ್ಲಿ ವಾಸ್ತವ್ಯ ಹೂಡಿದ ಅವರು ತೆಂಗಿನಿಂದ ನೀರಾ ಇಳಿಸುವ ರೀತಿಯನ್ನು ತೋಟಕ್ಕೆ ಹೋಗಿ ನೋಡಿದ್ದಲ್ಲದೆ ಗಾಂಧಿ ಪೇಟೆಯಲ್ಲಿರುವ ಎಲ್.ಆರ್.ಚಂದ್ರಶೇಖರ್ ಅವರ ನಾರಿನ ಕೈಗಾರಿಕಾ ಕೇಂದ್ರಕ್ಕೆ ಭೇಟಿ ನೀಡಿ ನಾರು ತಯಾರಿಸುವ ವಿಧಾನವನ್ನು ವೀಕ್ಷಿಸಿದರು.


         ಈ ಸಂದರ್ಭದಲ್ಲಿ ಚಿಕ್ಕನಾಯಕನಹಳ್ಳಿಯ ನೆರಳು ಸಂಘಟನೆಯ ಗುಂಡ ಮಹಮ್ಮದ್ ಹುಸೇನ್ ,ಹುಳಿಯಾರಿನ ಕಲ್ಪತರು ಅಗ್ರೋ ಕೇಂದ್ರದ ಸತೀಶ್,ಪ್ರೋ/ ಬಿಳಿಗೆರೆ ಕೃಷ್ಣಮೂರ್ತಿ, ರಾಜು ಬಡಗಿ,ನಾಗರಾಜ ಪೂಜಾರಿ,ತೋಟದ ಮನೆ ಸೋಮಶೇಖರ್, ರಂಗನಾಥ್ ಪ್ರಸಾದ್, ಇಮ್ರಾಜ್,ರಂಗನಕೆರೆ ವಿರೂಪಾಕ್ಷ,ರೈತ ಸಂಘದ ಪಾತ್ರೆ ಸತೀಶ್,ಕಂಪನಹಳ್ಳಿ ಪ್ರಕಾಶ್,ಮಂಜಣ್ಣ,ಯೋಗಣ್ಣ,ಮರುಳಪ್ಪ,ಗಂಗಣ್ಣ ಸೇರಿದಂತೆ ಸಂಘಸಂಸ್ಥೆಗಳ ಸದಸ್ಯರು ಇದ್ದರು.
--------------------------
ನಗುವಿಗೆ ಮಾತ್ರ ಎಲ್ಲರನ್ನೂ ಒಂದು ಮಾಡುವ ಶಕ್ತಿ ಇದ್ದು ಮುಂದಿನ ಪೀಳಿಗೆಗೆ ಅದನ್ನು ಪ್ರಚಾರ ಪಡಿಸುವ ಉದ್ದೇಶದಿಂದ ತಾವು ವಾಕ್ ಆಫ್ ಜಾಯ್ ಪ್ರವಾಸ ಕೈಗೊಂಡಿದ್ದು ಇದೇ ಜುಲೈ 15ರಿಂದ ಕೇರಳದ ಕನ್ಯಾಕುಮಾರಿ ಮೂಲಕ ತಾವು ಭಾರತ ಪ್ರವಾಸವನ್ನು ಕೈಗೊಂಡಿರುವೆ..ಸದ್ಯ 900 ಕಿಲೋಮೀಟರ್ ದೂರ ಕ್ರಮಿಸಿದ್ದು ಇಲ್ಲಿಂದ ಸಾಣೇಹಳ್ಳಿ, ಕಡೂರು,ತರೀಕೆರೆ,ಶಿವಮೊಗ್ಗ,ಶಿರಸಿ,ಕಾರವಾರದ ಮೂಲಕ ಗೋವಾ,ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನಕ್ಕೆ ಭೇಟಿ ನೀಡುವ ಉದ್ದೇಶ ಹೊಂದಿರುವೆ:ಡೇವಿಡ್ ಅಥೋವಾ

--------------------------------

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...