ಬೈಫ್ ಇನ್ಸ್ಟಿಟ್ಯೂಟ್ ಫಾರ್ ರೂರಲ್ ಡೆವೆಲಪ್ಮೆಂಟ್ ಕರ್ನಾಟಕದ ಉಪಾಧ್ಯಕ್ಷರು ಹಾಗೂ ಅಕ್ಷಯಕಲ್ಪ ಸಂಸ್ಥೆಯ ಸಂಸ್ಥಾಪಕರಾದ
ಡಾ|| ಜಿ.ಎನ್.ಎಸ್. ರೆಡ್ಡಿಯವರನ್ನು
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೆಸರಾಂತ ಮಠವಾದ ಶ್ರೀ ಚರಪಟ್ಟಾಧ್ಯಕ್ಷರ ಮಠಾಧಿಪತಿಗಳಾದ ಶ್ರೀ ಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿಗಳು
ಈ ಸಂದರ್ಭದಲ್ಲಿ ಡಾ|| ಜಿ.ಎನ್.ಎಸ್. ರೆಡ್ಡಿಯವರು ಗ್ರಾಮೀಣ ಅಭಿವೃದ್ಧಿ, ಹೈನುಗಾರಿಕೆ, ಅರಣ್ಯ ಕೃಷಿ, ಸುಸ್ಥಿರ ಕೃಷಿ, ರೇಷ್ಮೆ ಕೃಷಿ, ಮಹಿಳಾ ಸಬಲೀಕರಣ, ಜಲಾನಯನ ಅಭಿವೃದ್ಧಿ, ಮಳೆನೀರು ಕೊಯ್ಲು ಸಂರಕ್ಷಣೆ, ಕೆರೆ ಸಂರಕ್ಷಣೆ,
ಅಂತರ್ಜಲ ಅಭಿವೃದ್ಧಿ, ಮೈಕ್ರೋ ಫೈನಾನ್ಸ್ ಹಾಗೂ ಹಲವಾರು ಯೋಜನೆಗಳನ್ನು ಇಡೀ ಕರ್ನಾಟಕದ ಉದ್ದಗಲಕ್ಕೂ ಹಾಗೂ ವಿಶೇಷವಾಗಿ ನಮ್ಮ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಅನುಷ್ಠಾನಕ್ಕೆ ತರುವಲ್ಲಿ ವಹಿಸಿದ್ದ ಪಾತ್ರವನ್ನು ನೆನಪಿಸಿಕೊಂಡು ಅದಕ್ಕಾಗಿ ಅವರಿಗೆ ಜನತೆಯ ಪರವಾಗಿ ಅಭಿನಂದನೆ ಮತ್ತು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ನಮ್ಮ ತಾಲೂಕಿನ ಮಂಜುನಾಥಪುರಕ್ಕೆ ಅಂದಿನ ರಾಷ್ಟ್ರಪತಿಗಳಾದ ಶ್ರಿ ಅಬ್ದುಲ್ ಕಲಾಂ ಅವರು ಭೇಟಿನೀಡುವಲ್ಲಿ ಶ್ರೀ ರೆಡ್ಡಿಯವರ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಬದ್ಧತೆ, ಗುಣಾತ್ಮಕ ಕ್ರಿಯಾಶೀಲತೆ ಇಡೀ ಭಾರತದ ಮಟ್ಟದಲ್ಲಿ ಹೆಸರುವಾಸಿಯಾಗಿದ್ದನ್ನು
ನೆನಪಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಶ್ರೀ ಮಠದ ವತಿಯಿಂದ ಭಕ್ತಾಧಿಗಳು ಹಾಗೂ ಜೆ.ಸಿ.ಪುರ ಪಂಚಾಯಿತಿ ಮಾಜಿ ಛೇರ್ಮನ್ ಶಂಕರಲಿಂಗಪ್ಪನವರ ಮಕ್ಕಳಾದ ಶ್ರೀ ಷಡಕ್ಷರಿ ಶಂಕರಲಿಂಗಪ್ಪ ಕುಟುಂಬದ ಸದಸ್ಯರು ಹಾಗೂ ಶ್ರೀ ಷಫೀ ಅಹಮದ್ ಇನ್ನಿತರ ಗ್ರಾಮಸ್ಥರು ಹಾಜರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ