ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಕ್ಕಳ ಮನಸ್ಸು ಬಿಳಿ ಹಾಳೆಯಂತೆ ಶುಭ್ರವಾದದ್ದು : ವಿಜ್ಞಾನಿ ಕೆ.ಹರೀಶ್

ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ನಡೆದ ಸಾಂಸ್ಕೃತಿಕ ಹಬ್ಬದ ಸಮಾರಂಭವನ್ನು ವಾಗ್ದೇವಿ ವಿಲಾಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಇಸ್ರೋದಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸಿದ್ದ ಕೆ.ಹರೀಶ್ ಅವರು ಉದ್ಘಾಟಿಸಿದರು. ಮಕ್ಕಳ ಮನಸ್ಸು ಬಿಳಿಹಾಳೆಯಂತೆ ಶುಭ್ರವಾದದ್ದು ಅದರ ಮೇಲೆ ಉತ್ತಮ ಚಿತ್ರಗಳನ್ನು ಬಿಡಿಸಬೇಕಾದ್ದು ಪೋಷಕ ಹಾಗೂ ಶಿಕ್ಷಕರ ಕರ್ತವ್ಯ ಹಾಗೂ ಜವಬ್ದಾರಿಯಾಗಿದೆ ಎಂದು ಬೆಂಗಳೂರಿನ ವಾಗ್ದೇವಿ ವಿಲಾಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಇಸ್ರೋದಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸಿದ್ದ ಕೆ.ಹರೀಶ್ ಅಭಿಪ್ರಾಯಪಟ್ಟರು. ಹೋಬಳಿಯ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ 5 ನೇ ವರ್ಷದ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ನಡೆದ ಸಾಂಸ್ಕೃತಿಕ ಹಬ್ಬದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಪ್ರತಿಯೊಂದು ಮಗುವಿನಲ್ಲಿ ಒಂದಲ್ಲ ಒಂದು ಪ್ರತಿಭೆ ಸುಪ್ತವಾಗಿರುತ್ತದೆ,ಅದನ್ನು ಹೊರ ತರುವ ಕಾರ್ಯ ಉತ್ತಮ ಹಾಗೂ ಪ್ರಜ್ಞಾವಂತ ಶಿಕ್ಷಕರು ಶಿಕ್ಷಣವನ್ನು ಒಂದು ಸಾಧನವಾಗಿ ಮಾಡಿಕೊಂಡಾಗ ಮಾತ್ರ ಸಾಧ್ಯೆವೆಂದರು. ಇಂದು ಮಕ್ಕಳ ಇಷ್ಟಕ್ಕೆ ಅನುಸಾರವಾಗಿ ಅವರಿಗೆ ಅಭ್ಯಾಸ ಮಾಡಿಸಬೇಕಿದೆ. ಪೋಷಕರು ತಮ್ಮ ಮಕ್ಕಳ ಆಸೆ ಆಕಾಂಕ್ಷೆಗಳನ್ನು ತಿಳಿದು ಅವರ ಆಭಿರುಚಿಗೆ ತಕ್ಕಂತೆ ಬಿಟ್ಟು,ಅವರು ಉತ್ತಮ ಮಾರ್ಗದಲ್ಲಿ ನಡೆಯುತಿದ್ದಾರೆಯೇ ಎಂದು ಗಮನಿಸಬೇಕಿದೆ,ಅವರು ತಪ್ಪು ಮಾಡಿದಾಗ ಅವರನ್ನು ಮತ್ತೊಬ್ಬರೊಂದ

ಪೋಟೊ ಕ್ಯಾಪ್ಷನ್

ತುಮಕೂರಿನಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಹುಳಿಯಾರಿನ ಟಿಪ್ಪುಸಂಘದ ಉಪಾಧ್ಯಕ್ಷ ಅಪ್ಸರ್ ಅವರನ್ನು ಇಂಧನ ಸಚಿವೆ ಶೋಭಾಕರಂದ್ಲಾಜಿ ಅವರು ಗಣರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು.ಶಾಸಕ ಸೊಗಡು ಶಿವಣ್ಣ ಹಾಗೂ ಇತರರಿದ್ದಾರೆ. ಹುಳಿಯಾರಿನ ವಿಧ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಶುಕ್ರವಾರ ಸಂಜೆ ನಡೆದ 5ನೇ ವರ್ಷದ ಶಾಲಾ ವಾರ್ಷಿಕೋತ್ಸವದಲ್ಲಿನ ಸಾಂಸ್ಕೃತಿಕ ಹಬ್ಬದಲ್ಲಿ ಮಕ್ಕಳು ನಡೆಸಿದ ಜಿಮ್ನಾಸ್ಟಿಕ್ ನೋಡುಗರ ಮನ ಸೆಳೆಯಿತು. ಹುಳಿಯಾರು-ಕೆಂಕೆರೆ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿಹೋಬಳಿಯ ಟಿಪ್ಪು ಯುವಕ ಸಂಘ,ರೋಟರಿ ಸಂಸ್ಥೆ,ಥಿಯೋಸೊಫಿಕಲ್ ಸೊಸೈಟಿಯರು ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ಹಣ್ಣು ವಿತರಿಸಿದರು.

ರಕ್ತದಾನ ಶಿಬಿರ : ರಕ್ತದಾನಕ್ಕೆ ಮುಂದಾದ ಉಪನ್ಯಾಸಕರು

ಹುಳಿಯಾರು: ಹೋಬಳಿಯ ಹುಳಿಯಾರು-ಕೆಂಕೆರೆ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಎಸ್.ಎಸ್. ಘಟಕ ಹಾಗೂ ರೆಡ್ ರಿಬ್ಬನ್ ವತಿಯಿಂದ ತುಮಕೂರು ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ನಡೆಸಿದ ಸ್ವಯಂ ಪ್ರೇರಿತ ರಕ್ತದಾನ ಶೀಬಿರದಲ್ಲಿ ಉಪನ್ಯಾಸಕರೇ ರಕ್ತದಾನ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ವಿದ್ಯಾರ್ಥಿಗಳು ರಕ್ತದಾನ ಮಾಡಲು ಮೀನಾಮೇಷ ಎಣಿಸುತ್ತಿದ್ದಾಗ ಕಾಲೇಜಿನ ಮೂವರು ಉಪನ್ಯಾಸಕರು ರಕ್ತದಾನ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ರಕ್ತದಾನದ ಬಗೆಗಿದ್ದ ತೊಳಲಾಟವನ್ನು ತೊಡೆದುಹಾಕಿ,ರಕ್ತದಾನ ಮಾಡುವುದರಿಂದ ಯಾವುದೇ ತೊಂದರೆಯಾಗುವುದಿಲ್ಲವೆಂದು ತಿಳಿಸಿದ್ದಾರೆ.ನಂತರ ಸುಮಾರು 32 ಮಂದಿ ವಿದ್ಯಾರ್ಥಿಗಳು ಸ್ವತಃ ತಾವೇ ರಕ್ತದಾನ ಮಾಡಲು ಮುಂದಾದರು. ಪ್ರಾಚಾರ್ಯ ಎಂ.ಎನ್.ನಾಗರಾಜು, ಎನ್.ಎಸ್.ಎಸ್. ಅಧಿಕಾರಿಗಳಾದ ಶಂಕರಲಿಂಗಯ್ಯ,ಸೈಯ್ಯದ್ ಇಬ್ರಾಹಿಂ,ಹಿರಿಯ ಉಪನ್ಯಾಸಕ ಮೂಗೇಶಪ್ಪ ಶಿಬಿರದ ನೇತೃತ್ವವಹಿಸಿದ್ದು, ಕಾಲೇಜಿನ ಉಪನ್ಯಾಸಕರು ಸೇರಿದಂತೆ ಸಿಬ್ಬಂದಿವರ್ಗದವರು ಸಕ್ರೀಯವಾಗಿ ಪಾಲ್ಗೊಂಡಿದ್ದರು.ಅಲ್ಲದೆ ಹೋಬಳಿಯ ಟಿಪ್ಪು ಯುವಕ ಸಂಘ,ರೋಟರಿ ಸಂಸ್ಥೆ,ಥಿಯೋಸೊಫಿಕಲ್ ಸೊಸೈಟಿಯರು ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ಹಣ್ಣು ವಿತರಿಸಿದರು. ಹುಳಿಯಾರು-ಕೆಂಕೆರೆ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಪ್ರಾಧ್ಯಾಪಕ ಶ್ರೀನಿವಾಸ್ ರಕ್ತದಾನ ಮಾಡುವ ಮೂಲಕ ವಿದ್ಯಾಥಿಗಳಿಗೆ ಮಾದ

ಮೇವಿನ ಜೋಳದ ಬೀಜ ವಿತರಣೆ

ಹುಳಿಯಾರು ಸಮೀಪದ ಗಾಣಧಾಳು ಪಶು ಚಿಕಿತ್ಸಾಲಯದಲ್ಲಿ ೨ನೇಬಾರಿ ಬರಪರಿಹಾರ ಯೋಜನೆಯಡಿ ಮಂಜುರಾಗಿದ್ದ ಮೇವಿನ ಜೋಳದ ಬೀಜಗಳನ್ನು ಅತೀ ಸಣ್ಣರೈತರಿಗೆ ವಿತರಿಸಿಸಲಾಯಿತು. ಪಶುವೈದ್ಯ ಪರೀಕ್ಷಕ ವೆಂಕಟಪ್ಪ,ತಾ.ಪಂ.ಸದಸ್ಯ ವಸಂತಯ್ಯ,ಗ್ರಾ.ಪಂ.ಗುಂಡಯ್ಯ ಹಾಗೂ ಸ್ಥಳೀಯ ರೈತರಿದ್ದಾರೆ.

ಸ್ವಾತಂತ್ರದಿನದಷ್ಟೇ ಮಹತ್ವವಾದ್ದು ಗಣರಾಜ್ಯದಿನ

ಹುಳಿಯಾರು-ಕೆಂಕರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 63ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯದಲ್ಲಿ ಜೆಡಿಎಸ್ ಮುಖಂಡರಾದ ನಂದಿಹಳ್ಳಿ ಶಿವಣ್ಣ ,ಪ್ರಾಚಾರ್ಯ ಎಂ.ಎನ್.ನಾಗರಾಜು ,ಹಿರಿಯ ಪ್ರಾಧ್ಯಾಪಕ ಪ್ರೋ. ಮೂಗೇಶಪ್ಪ,ಹೆಚ್.ಓ.ಡಿ.ಇಬ್ರಾಹಿಂ , ಉಪನ್ಯಾಸಕ ಶಂಕರಲಿಂಗಯ್ಯ,ಎಸ್.ಡಿ.ಎಂ.ಸಿ ಯ ಜಲಾಲ್ ಸಾಬ್ ಇದ್ದಾರೆ. ನಾವು ಯಾವರೀತಿಯಲ್ಲಿ ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತೇವೆ ಅದೇರೀತಿ ಜನವರಿ 26ರ ಗಣರಾಜ್ಯೋತ್ಸವವನ್ನು ಆಚರಿಸುವ ಮೂಲಕ ನಮ್ಮ ದೇಶಕ್ಕೆ ಗೌರವ ಸಲ್ಲಿಸಬೇಕು ಎಂದು ಜೆಡಿಎಸ್ ಮುಖಂಡರಾದ ನಂದಿಹಳ್ಳಿ ಶಿವಣ್ಣ ತಿಳಿಸಿದರು. ಹುಳಿಯಾರು-ಕೆಂಕರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 63ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯದಲ್ಲಿ ಭಾಗವಹಿಸಿದ್ದ ಅವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ಇಂದಿನ ಶಾಲಾ ಮಕ್ಕಳಲ್ಲಿ ಒಂದು ದಿನ ರಜೆ ಸಿಕ್ಕರೆ ಸಾಕು ಆರಾಮಾಗಿರಬಹುದು ಎಂಬ ಮನೋಭಾವವಿದೆ.ಆದರೆ ಈ ಮನೋಭಾವವನ್ನು ತೊಡೆದು ಹಾಕಿ ರಾಷ್ಟ್ರೀಯ ದಿನಗಳನ್ನು ಶ್ರದ್ದಾಭಕ್ತಿಯಿಂದ ಆಚರಿಸಿದ್ದೇ ಆದರೆ ಅದು ನಮ್ಮ ರಾಷ್ಟ್ರಕ್ಕೆ ನಾವು ಸಲ್ಲಿಸಿದ ಮಹತ್ವದ ಸೇವೆಯಾಗಿರುತ್ತದೆ ಎಂದರು. ವಿದ್ಯಾರ್ಥಿಗಳು ನಮ್ಮ ದೇಶದ ಸಂಪತ್ತಾಗಿದ್ದು ರಾಷ್ಟ್ರಕ್ಕೆ,ಸಂವಿದಾನಕ್ಕೆ ಧಕ್ಕೆ ಉಂಟಾಗದಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದರು. ಪ್ರಾಚಾರ್ಯ ಎಂ.ಎನ್.ನಾಗರಾಜು ಮಾತನಾಡಿ ಸಂವಿಧಾನ

ಕೆಇಬಿ ಕಛೇರಿಯಲ್ಲಿ ಹಾರದ ರಾಷ್ಟ್ರಧ್ವಜ

ಹುಳಿಯಾರಿನ ಬೆಸ್ಕಾಂ ಕಚೇರಿ ಆವರಣದಲ್ಲಿ ರಾಷ್ಟ್ರಭಾವುಟ ಹಾರಿಸದೇ ಖಾಲಿ ಇರುವ ರಾಷ್ಟ್ರಧ್ವಜಸ್ತಂಭ. ಜನವರಿ 26 ರಂದು ದೇಶಾದ್ಯಂತ ಎಲ್ಲಾ ಸರ್ಕಾರಿ ಕಛೇರಿ,ಶಾಲಾ-ಕಾಲೇಜುಗಳಲ್ಲಿ,ಸಂಘ ಸಂಸ್ಥೆಗಳಲ್ಲಿ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರಬಾವುಟವನ್ನು ಹಾರಿಸಿ ರಾಷ್ಟ್ರಕ್ಕೆ ಗೌರವ ಸಲ್ಲಿಸಿದರೆ,ಹೋಬಳಿಯ ಬೆಸ್ಕಾಂನ ಕಛೇರಿ ಆವರಣದಲ್ಲಿ ರಾಷ್ಟ್ರಧ್ವಜ ಹಾರಿಸುವ ಗೋಜಿಗೆ ಹೋಗದಿರುವುದು ಸಾರ್ವಜನಿಕರಲ್ಲಿ ಪ್ರಶ್ನೆ ಉಂಟುಮಾಡಿದೆ. ಗುರುವಾರ ಕಛೇರಿಗೆ ಎಂದಿನಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಆಗಮಿಸಿದ್ದರು ಸಹ ಗಣರಾಜ್ಯದದಿನ ರಾಷ್ಟ್ರಭಾವುಟ ಹಾರಿಸಬೇಕೆಂದು ಯಾರಿಗೂ ತಿಳಿದಿಲ್ಲದಂತೆ ಇದ್ದುದ್ದು ಕಂಡುಬಂದಿತು.ಇದೇ ಕಛೇರಿಯಲ್ಲಿ ಕೆಲವು ತಿಂಗಳ ಹಿಂದೆ ಕನಕದಾಸ ಜಯಂತಿಯಂದು ಕನಕದಾಸರಿಗೆ ಸಂಬಂದಿಸಿದ ಬಾವುಟವನ್ನು ಇದೇ ರಾಷ್ಟ್ರಧ್ವಜದಲ್ಲಿ ಹಾರಿಸಿದ್ದ ಇವರು ಇಂದು ದೇಶಾಭಿಮಾವನ್ನು ಮರೆತು ಕುಳಿತ್ತಿದ್ದಾರೆ.
ಹುಳಿಯಾರಿನ ಮಾರುತಿ ನಗರದಲ್ಲಿ ನಡೆದ 63ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯದಲ್ಲಿ ಗ್ರಾ.ಪಂ.ಸದಸ್ಯರಾದ ಅಶೋಕ್ ಬಾಬು,ಜಹೀರ್ ಸಾಬ್ ಹಾಗೂ ಬಡಾವಣೆಯವರು ಪಾಲ್ಗೊಂಡಿದ್ದರು. ಹುಳಿಯಾರಿನ ಹೆಚ್.ಎಂ.ಜಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ನಡೆದ 63ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯದಲ್ಲಿ ತಾ.ಪಂ.ಉಪಾಧ್ಯಕ್ಷೆ ಬೀಬೀ ಫಾತೀಮ, ಜಹೀರ್ ಸಾಬ್,ವರ್ತಕ ಇಲಾಹಿ,ಎಬಿವಿಪಿ ಇಮ್ರಾಜ್ ಭಾಗವಹಿಸಿದ್ದರು. ಹುಳಿಯಾರು ಹೋಬಳಿ ಗಾಣಧಾಳು ಗ್ರಾಮ ಪಂಚಾಯ್ತಿಯ ಜಿ.ಗೋಲ್ಲರಹಟ್ಟಿ ಸರ್ಕಾರಿ ಹಿರಿಯಪ್ರಾಥಮಿಕ ಪಾಠಶಾಲೆಯಲ್ಲಿ ನಡೆದ 63ನೇ ಗಣರಾಜ್ಯೋತ್ಸವದಲ್ಲಿ ಎಸ್.ಡಿ.ಎಂ.ಸಿ.ಯ ಆರ್.ಸಿ.ಮಹೇಶ್ ಧ್ವಜಾರೋಹಣ ನೆರವೇರಿಸಿದರು.ತಾ.ಪಂ.ಸದಸ್ಯ ವಸಂತಯ್ಯ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಹುಳಿಯಾರಿನ ವಿವಿಧೆಡೆ ಸಂಭ್ರಮದ 63ನೇ ಗಣರಾಜ್ಯೋತ್ಸವ ಆಚರಣೆ

ಗುರುವಾರ 63ನೇ ಗಣರಾಜ್ಯೋತ್ಸವದ ಅಂಗವಾಗಿ ನಗರಾದ್ಯಂತ ಸಡಗರ-ಸಂಭ್ರಮದಿಂದ ಗಣರಾಜ್ಯೋತ್ಸವದ ಆಚರಣೆ ನಡೆಯಿತು. ಸಮವಸ್ತ್ರ ಧರಿಸಿದ್ದ ಶಾಲಾ ಮಕ್ಕಳು ಬೆಳಗ್ಗಿನಿಂದಲೇ ಹೂ,ಬಾಳೆಕಂದು,ಮಾವಿನ ಎಲೆ ತಂದು ತೋರಣ ಕಟ್ಟಿ ರಾಷ್ಟ್ರಧ್ವಜ ಹಾಗೂ ಶಾಲಾ ಆವರಣವನ್ನು ಸಿಂಗರಿಸುತ್ತಿದ್ದುದು ಕಂಡುಬಂದಿತು. ಹೋಬಳಿಯ ವಾಸವಿ ಶಾಲೆ,ಕನಕದಾಸ ಶಾಲೆ,ಎಂ.ಪಿ.ಎಸ್ ಶಾಲೆ,ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆ, ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆ,ಬಿ.ಎಂ.ಎಸ್.ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಹೋಬಳಿಯ ಎಲ್ಲಾ ಶಾಲೆಗಳಲ್ಲಿ ಹಾಗೂ ಆಸ್ಪತ್ರೆ,ದೂರವಾಣಿ ಸಂಪರ್ಕ ಕೇಂದ್ರ, ಅಂಚೆ ಕಛೇರಿ,ಗ್ರಾಮ ಪಂಚಾಯ್ತಿ,ಪೋಲೀಸ್ ಠಾಣೆ,ನಾಢಕಛೇರಿ, ಬ್ಯಾಂಕ್ ಗಳಲ್ಲಿಯೂ ತ್ರಿವರ್ಣಧ್ವಜ ಕಂಗೊಳಿಸುತ್ತಿತ್ತು. ಶಾಲೆಗಳಲ್ಲಿ ಮಕ್ಕಳು ಸಮವಸ್ತ್ರ ಧರಿಸಿ ಸಾಲಾಗಿ ನಿಂತು ಸೆಲ್ಯೂಟ್ ಮಾಡಿ ರಾಷ್ಟ್ರಧ್ವಜಕ್ಕೆ ಗೌರವ ನಮನ ಸಲ್ಲಿಸಿದರು,ನಂತರ ಸಿಹಿ ಹಂಚಿಕೆ,ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಸಿಕ್ಕಿಬಿದ್ದ ಕಳ್ಳನಿಗೆ ರೈತರಿಂದ ಧರ್ಮದೇಟು

ಹುಳಿಯಾರು ಹೋಬಳಿಯ ಬಳ್ಳೆಕಟ್ಟೆ ಗ್ರಾಮದ ಬಳಿಯ ತೊರೆ ಸಮೀಪದ ಸಿದ್ದಮರಿಯಪ್ಪ ಎಂಬುವರ ತೋಟದಲ್ಲಿ ಮಂಗಳವಾರ ರಾತ್ರಿ ವಿದ್ಯುತ್ ಮೋಟಾರ್ ನ ಕೇಬಲ್ ಕಳ್ಳತನ ಮಾಡುತ್ತಿದ್ದಾಗ ಸಿಕ್ಕಿಬಿದ್ದ ಕಳ್ಳನಿಗೆ ರೈತರೇ ಕಂಬಕ್ಕೆ ಕಟ್ಟಿ ಹಾಕಿ ಧರ್ಮದೇಟು ಕೊಟ್ಟಿದ್ದಾರೆ. ಇಲ್ಲಿನ ಸುತ್ತಮುತ್ತಲ ಗ್ರಾಮದ ತೋಟದ ಮನೆಗಳ ಪಂಪ್ ಸೆಟ್ ಬಾವಿಗಳಲ್ಲಿ ಕೆಲ ವರ್ಷಗಳಿಂದ ಮೋಟಾರ್ ಕೇಬಲ್ ಕಳ್ಳತನ ನಡೆಯುತ್ತಲೇ ಇತ್ತು,ಆದರೆ ಕಳ್ಳರು ಮಾತ್ರ ಸಿಗುತ್ತಿರಲಿಲ್ಲ,ಇದರಿಂದ ಕಂಗೆಟ್ಟಿದ್ದ ರೈತರು ಪೋಲೀಸರಿಗೆ ದೂರು ನೀಡಿದ್ದರು ಸಹ ಯಾವುದೇ ಫಲ ಲಭಿಸಿರಲಿಲ್ಲ. ಆದರೆ ರೈತರು ಇಷ್ಟಕ್ಕೆ ಸುಮ್ಮನಾಗದೆ ತಾವೇ ಕಳ್ಳರನ್ನು ಹಿಡಿಯಲು ಪತ್ತೆಕಾರ್ಯದಲ್ಲಿ ತೊಡಗಿದ್ದರು. ಅದರಂತೆ ಮಂಗಳವಾರ ರಾತ್ರಿ ಸಿದ್ದಮರಿಯಪ್ಪ ಎಂಬುವರ ತೋಟದಲ್ಲಿ ಕಳ್ಳರಿದ್ದಾರೆ ಎಂಬ ಸುಳಿವನ್ನು ಅರಿತು ಹೊರಟ ರೈತರಿಗೆ ಕಳ್ಳತನ ಮಾಡುತ್ತಿದ್ದ 3-4 ಮಂದಿಯಲ್ಲಿ ಸಿಕ್ಕಿಬಿದ್ದಿದ್ದು ಒಬ್ಬ ಕಳ್ಳ ಮಾತ್ರ.ಅವನನ್ನು ಹಿಡಿದು ತಂದು ಸಾರ್ವಜನಿಕವಾಗಿ ಕಂಬಕ್ಕೆ ಕಟ್ಟಿ ಧರ್ಮದೇಟು ಕೊಟ್ಟಿದ್ದಾರೆ.ಆದರೆ ಕಳ್ಳ ಮಾತ್ರ ತನ್ನ ಸಹಪಾಠಿಗಳ ಬಗ್ಗೆ ತಿಳಿಸಲಿಲ್ಲ. ನಂತರ ಆತನನ್ನು ಹುಳಿಯಾರು ಪೋಲಿಸರ ವಶಕ್ಕೆ ಒಪ್ಪಿಸಲಾಯಿತು.

ಜ.27 ರಿಂದ ಸಾಂಸ್ಕೃತಿಕ ಹಬ್ಬ

ಹುಳಿಯಾರು ಹೋಬಳಿಯ ಬಳ್ಳೆಕಟ್ಟೆಯ ಸುವರ್ಣಮುಖಿ ಕ್ಯಾಂಪಸ್ ನ ಬಸಪ್ಪ,ಮರುಳಪ್ಪ ಸೇವಾ ಟ್ರಸ್ಟ್ ನ ವಿದ್ಯಾವಾರಿಧಿ ಇಂಟರ್ ನ್ಯಾಷಶನಲ್ ಸ್ಕೂಲ್ ನಲ್ಲಿ 5ನೇ ವರ್ಷದ ವಾಷರ್ಿಕೋತ್ಸವದ ಅಂಗವಾಗಿ ಸಾಂಸ್ಕೃತಿಕ ಹಬ್ಬ ಜ.27ರ ಶುಕ್ರವಾರ ಮತ್ತು ಜ.28ರ ಶನಿವಾರ ಸಂಜೆ 5 ಗಂಟೆಗೆ ನಡೆಯಲಿದೆ. ಎಸ್.ಬಿ.ಎಮ್.ಎಸ್.ಟಿ ಯ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಸಮಾರಂಭದ ಅಧ್ಯಕ್ಷತೆವಹಿಸುವರು.ಶಾಲೆಯ ಕಾರ್ಯದಶರ್ಿ ಕವಿತಾ ಕಿರಣ್ ಕಿರಣ್ ಕುಮಾರ್,ಬೆಂಗಳೂರು ವಾಗ್ದೇವಿ ವಿಲಾಸ್ ಸಂಸ್ಥೆಯ ಛೇರ್ ಮನ್ ಕೆ.ಹರೀಶ್, ಚಿ.ನಾ.ಹಳ್ಳಿ ಸ.ಪ್ರ.ದ.ಕಾಲೇಜಿನ ಪ್ರಾಚಾರ್ಯ ಎ.ಎನ್,ವಿಶ್ವೇಶ್ವರಯ್ಯ ಅವರು ಅತಿಥಿಗಳಾಗಿ ಆಗಮಿಸುವರು. ಮಕ್ಕಳಿಂದ ಜಿಮ್ನಾಸ್ಟಿಕ್,ವೀರಗಾಸೆ,ಶ್ರೀಕೃಷ್ಣಸಂದಾನ,ಜಾನಪದ ನೃತ್ಯ,ಜೋದಾ ಅಕ್ಬರ್ ಅಂತಹ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಸ್ಕಾಂ ಹಿರಿಯ ಸಹಾಯಕಾಧಿಕಾರಿಯಿಂದ ಜಿ.ವಿ.ಪಿ(ಗ್ರಾಮ ವಿದ್ಯುತ್ ಪ್ರತಿನಿಧಿಗಳು) ಗಳಿಗೆ ಕಿರುಕುಳ

ಹುಳಿಯಾರಿನ ಕೆ.ಇ.ಬಿ ಕಛೇರಿ ಜಿ.ವಿ.ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನ್,ಆನಾರೋಗ್ಯದ ಕಾರಣ ಕೆಲಸಕ್ಕೆ ಬಾರದಿದ್ದು,ನಂತ ಕೆಲಸಕ್ಕೆ ಹಾಜರಾದಾಗ ಅವರಿಗೆ ಕಛೇರಿಯಲ್ಲಿ ಕಿರುಕುಳ ನೀಡುತ್ತಿದ್ದಾರೆಂದು ಹೋಬಳಿ ವಿಭಾಗ ಎಲ್ಲಾ ಗ್ರಾಮ ವಿದ್ಯುತ್ ಪ್ರತಿನಿಧಿಗಳು(ಜಿ.ವಿ.ಪಿ) ಒಟ್ಟಾಗಿ ಸೇರಿ ಕಛೇರಿ ಆವರಣದ ಮುಂದೆ ಮಂಗಳವಾರ ಧರಣಿ ನಡೆಸಿದರು. ಹುಳಿಯಾರು ಹೋಬಳಿಯ ಬೆಸ್ಕಾಂ ಕಛೇರಿ ಆವರಣದಲ್ಲಿ ಬುಧವಾರ ಹೋಬಳಿಯ 13 ವಿಭಾಗದ ಗ್ರಾಮ ವಿದ್ಯುತ್ ಪ್ರತಿನಿಧಿಗಳು ಸೇರಿ ಬೆಸ್ಕಾಂನ ಹಿರಿಯ ಸಹಾಯಕಾಧಿಕಾರಿಯ ವಿರುದ್ದ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸಲು ಕಾರಣ ಕೆಂಕೆರೆ ಗ್ರಾಮದ ಗ್ರಾಮ ವಿದ್ಯುತ್ ಪ್ರತಿನಿಧಿಯಾಗಿ ಕೆ.ಜಿ.ಮಲ್ಲಿಕಾರ್ಜುನ್ ಎಂಬಾತ ಕಾರ್ಯ ನಿರ್ವಹಿಸುತ್ತಿದ್ದು, ಇತ ಆನಾರೋಗ್ಯದ ಕಾರಣ 2 ತಿಂಗಳು ಕೆಲಸಕ್ಕೆ ರಜೆ ಹಾಕಿದ್ದು, ನಂತರ ಕೆಲಸಕ್ಕೆ ಪುನಃ ಹಾಜರಾದಾಗ ತಾವು ವಸೂಲಿ ಮಾಡಿದ ಬಿಲ್ ಗೆ ತಮಗೆ ಬರಬೇಕಿದ್ದ ಕಮಿಷನ್ ಕೇಳಿದಾಗ ಅದಕ್ಕೆ ಮೇಲಾಧಿಕಾರಿಗಳಿಗೆ ಅರ್ಜಿ ಕೊಡಿ ಎಂದು ತಿಳಿಸಿದ್ದರು, ಅದೇ ರೀತಿ ಅವರು ಅರ್ಜಿಯನ್ನು ಮೂರು-ನ್ಕಾಲು ಬಾರಿ ಕೊಟ್ಟರು ಸಹ ಅವರಿಗೆ ಕೊಡಬೇಕಾದ ಹಣವನ್ನು ನೀಡಿಲ್ಲ. ಅಲ್ಲದೆ ಈ ಜಿ.ವಿ.ಪಿ ಗಳು ಕೆಲಸಕ್ಕೆ ಸೇರಿಕೊಳ್ಳುವಾಗ ಮಾಡಿಕೊಂಡ ಕರಾರಿ ನಂತೆ ಜಿವಿಪಿಗಳು ಕಲೆಕ್ಟ್ ಮಾಡಿದ ಹಣ ಮತ್ತು ಕಛೇರಿಯಲ್ಲಿ ಜನರು ಕಟ್ಟುವ ಸಂಪೂರ್ಣ ಹಣ ಸೇರಿ ಕಮಿಷನ್ ನೀಡುವುದಾಗಿತ್ತು,ಆದರೆ ಈಗ ಅಧಿಕಾರಿಗ

ಇಂದು(ತಾ.25) ದಸೂಡಿಯಲ್ಲಿ ಇರುಮುಡಿ ಕಾರ್ಯಕ್ರಮ

ಹುಳಿಯಾರು ಹೋಬಳಿ ದಸೂಡಿ ಗ್ರಾಮದ ಆರ್ಯವೈಶ್ಯ ಮಂಡಳಿ,ಮಹಿಳಾ ಮಂಡಳಿ ಹಾಗೂ ಶ್ರೀಲಕ್ಷ್ಮೀಶ್ರೀನಿವಾಸ ಭಜನಾ ಮಂಡಳಿಯ ಸಹಯೋಗದಲ್ಲಿ ವಾಸವಿ ದೀಕ್ಷಾ ಸಂಘದವರು ಸತತ 10ನೇ ವರ್ಷದ ದೀಕ್ಷಾ ಹಾಗೂ ಇರುಮುಡಿ ಕಾರ್ಯಕ್ರಮವನ್ನು ಇಂದು (ತಾ.25) ಬುಧವಾರ ಹಮ್ಮಿಕೊಂಡಿದ್ದಾರೆ. ತಾ.22ರ ಭಾನುವಾರ ಕಳಸ ಸ್ಥಾಪನೆ,ಕುಂಕುಮಾರ್ಚನೆಯೊಂದಿಗೆ ಪ್ರಾರಂಭಗೊಂಡಿರುವ ದೀಕ್ಷಾ ಕಾರ್ಯಕ್ರಮದಲ್ಲಿ ಇಂದು ಬೆಳಿಗ್ಗೆ 7ಕ್ಕೆ ಇರುಮುಡಿ ಕಾರ್ಯ, 10ಕ್ಕೆ ಹಿರಿಯೂರಿನ ಪುರೋಹಿತರಾದ ಶ್ರೀನಿವಾಸಮೂರ್ತಿಗಳ ಸಮ್ಮುಖದಲ್ಲಿ ವಾಸವಿ ಹೋಮ,ಮಹಾಮಂಗಳಾರತಿ ನಡೆಯಲಿದ್ದು, ಆಗಮಿಸಿದ್ದ ಭಕ್ತಾಧಿಗಳಿಗೆ ಮಧ್ಯಾಹ್ನ ಅನ್ನಸಂರ್ಪಣೆಯು ನಡೆಯಲಿದೆ. ಸಂಜೆ ವಾಸವಿ ಅಮ್ಮನವರ ಮೆರವಣಿಗೆ ಕಾರ್ಯದ ನಂತರ ಅಗ್ನಿಂಕುಂಡ ಕಾರ್ಯ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತಾಧಿಗಳು ಪಾಲ್ಗೊಳ್ಳಬೇಕೆಂದು ವಾಸವಿ ದೀಕ್ಷಾ ಸಂಘದವರು ಕೋರಿದ್ದಾರೆ.

ಮೇಗಲಹಳ್ಳಿಯಲ್ಲಿ ನೂತನವಾಗಿ ಉದ್ಘಾಟನೆಗೊಂಡ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ

ಹುಳಿಯಾರು ಹೋಬಳಿ ಹೆಚ್.ಮೇಗಲಹಳ್ಳಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ನೂತನವಾಗಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ತಿಪಟೂರಿನ ವಿರಶೈವಾನಂದಾಶ್ರಮದ ಬಸವಾನುಭವ ಸ್ವಾಮೀಜಿ ಆಶೀರ್ವಚನ ನೀಡಿದರು. ಹುಳಿಯಾರು ಹೋಬಳಿಯ ಗಾಣಧಾಳು ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಹಾಗೂ ಜಿಲ್ಲೆಯ ಗಡಿಭಾಗವೂ ಆಗಿರುವ ಹೆಚ್.ಮೇಗಲಹಳ್ಳಿಯಲ್ಲಿ ಭಾನುವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ನೂತನವಾಗಿ ಪ್ರಗತಿಬಂಧು ಹಾಗೂ ಸ್ವಸಹಾಯ ಸಂಘಗಳ ಒಕ್ಕೂಟದ ಉದ್ಘಾಟನಾ ಸಮಾರಂಭ ಯಶಸ್ವಿಯಾಗಿ ನೆರವೇರಿತು. ಸಮಾರಂಭದ ಸಾನಿಧ್ಯವಹಿದ್ದ ತಿಪಟೂರಿನ ವಿರಶೈವಾನಂದಾಶ್ರಮದ ಬಸವಾನುಭವ ಸ್ವಾಮೀಜಿ ಮಾತನಾಡಿ,ಇಂದಿನ ದಿನಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ಕೈಗೊಂಡಿರುವ ಸಾಮಾಜಿಕ ಕಾರ್ಯಗಳು ಹತ್ತು ಹಲವು,ಅವುಗಳು ಜನಸಾಮಾನ್ಯರ ಅಭಿವೃದ್ದಿಗಾಗಿ,ಏಳ್ಗೆಗಾಗಿ,ಗ್ರಾಮಾಂತರ ಜನರ ಯಶಸ್ಸನ್ನು ಬಯಸುತ್ತವೆ,ಈ ಸಂಘಗಗಳಿಂದ ದೊರೆಯುವ ಹಣವನ್ನು ದುರುಪಯೋಗ ಮಾಡದೆ,ಉತ್ತಮ ಕಾರ್ಯಕ್ಕೆ ವಿನಿಯೋಗಿಸಿಕೊಂಡು ಅದರಿಂದ ಸಾಮಾಜಿಕ ಪರಿವರ್ತನೆಯಾಗುವಂತೆ ಮಾಡಬೇಕು ಎಂದರು. ಉದ್ಘಾಟನೆ ನೆರವೇರಿಸಿದ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಮಾತನಾಡಿ ಜನಸಾಮಾನ್ಯರಿಗಾಗಿ ಸರ್ಕಾರದಿಂದ ಸಂಘಗಳು ಮುಂಜುರಾಗಿದ್ದರೂ ಸಹ ಅವುಗಳ ನಿರ್ವಹಣೆ ಉತ್ತಮವಾಗಿಲ್ಲ,ಅದಕ್ಕೆ ಕಾರಣ ಕೆಲವು ಅಧಿಕಾರಿಗಳ ಬೇಜವಬ್ದಾರಿತನವೇ ಆಗಿದೆ. ಪುಣ್ಯ ಕ್ಷ

ಪೋಟೊ ಕ್ಯಾಪ್ಷನ್

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವಕಾಲೆಜಿನಲ್ಲಿ ಸೋಮವಾರ ನಡೆದ 2011-12ನೇಸಾಲಿನ ಸಮಾರೋಪ ಸಮಾರಂಭದಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿದರು.ತಾ.ಪಂ.ಉಪಾಧ್ಯಕ್ಷೆ ಬೀಬೀಫಾತೀಮ,ಪ್ರಾಂಶುಪಾಲ ನಟರಾಜು,ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ರಾಮಯ್ಯ ,ಜಲಾಲ್ ಸಾಬ್ ಹಾಗೂ ಉಪನ್ಯಾಸಕರು ಇದ್ದಾರೆ. ಹುಳಿಯಾರು ಹೋಬಳಿಯ ಗಾಣಧಾಳು ಮಜುರೆ ಜಿ.ಗೋಲ್ಲರಹಟ್ಟಿಯಲ್ಲಿ ಶಾಲೆಗಾಗಿ ನಾವು ನೀವು ಕಾರ್ಯಕ್ರಮದಲ್ಲಿ ಶಾಲೆಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಿ ಎಂಬ ಘೋಷಣೆಗಳನ್ನು ಕೂಗುತ್ತಾ ಊರಿನ ಪ್ರಮುಖ ಬೀದಿಗಳಲ್ಲಿ ಮಕ್ಕಳು ಜಾಥಾ ನಡೆಸಿದರು.

ಪೋಟೊ ಕ್ಯಾಪ್ಷನ್

ಹುಳಿಯಾರಿನ ಬಸವೇಶ್ವರ ಪ್ರೌಢಶಾಲೆಯಲ್ಲಿ ಪ್ರವಾಸ ಹೋಗಿದ್ದಾಗ ಬಸ್ ನಲ್ಲಿ ಬೆಂಕಿ ಹತ್ತಿಕೊಂಡಿದ್ದರ ಪರಿಣಾಮ ತಮ್ಮ ಬಟ್ಟೆಕಳೆದುಕೊಂಡ ಮಕ್ಕಗಳಿಗೆ 2ನೇಬಾರಿ ಪಟ್ಟಣದ ವರ್ತಕ ಇಲಾಹಿ ಅವರು ಬಟ್ಟೆ ವಿತರಿಸಿದರು.ಜೊತೆಯಲ್ಲಿ ಸ್ವಾತಂತ್ರ ಹೋರಾಟಗಾರ ಕೆಂಕೆರೆ ಕೃಷ್ಣಮುರ್ತಿ,ಶಿಕ್ಷಕರು ಇದ್ದಾರೆ.

ನಿಧನ ವಾರ್ತೆ

ಹುಳಿಯಾರು ಹೋಬಳಿಯ ಹೆಚ್.ಮೇಲನಹಳ್ಳಿ ಗ್ರಾಮದ ಕೆ.ಲಕ್ಷ್ಮಯ್ಯ (ಬುಡ್ಡಯ್ಯ)(56) ಬುಧವಾರ ರಾತ್ರಿ ಹೃದಯಾಗಾತದಿಂದ ಮೃತರಾಗಿದ್ದಾರೆ. ಇವರು ತಮ್ಮ ಮನೆಯಲ್ಲಿ ನಾಟಿಜೌಷಧಿ ಕೊಡುವ ಕಾರ್ಯಮಾಡುತ್ತಿದ್ದು ಹಾವು,ಚೇಳು,ಜಿರಿ ಕಡಿತ ಹಾಗೂ ಲಕ್ವ ಮುಂತಾದ ಅನೇಕ ಖಾಯಿಲೆಗಳಿಗೆ ಔಷಧಿಯನ್ನು ನೀಡುತ್ತಿದ್ದರು, ಇವರಲ್ಲಿಗೆ ತಿಪಟೂರು,ಹಿರಿಯೂರು,ಹೋಸದುರ್ಗ ತಾಲ್ಲೂಕಿನಿಂದ ಅನೇಕ ಜನರು ಬಂದು ಔಷಧಿಯನ್ನು ಪಡೆಯುತತಿದ್ದರು. ಮೃತರಿಗೆ 3ಮಕ್ಕಳು, 2ಮೊಮ್ಮಕ್ಕಳು ಇದ್ದರು. ಕಾಟಂಲಿಂಗೇಶ್ವರ ಸಂಘದವರು,ವಕೀಲ ಸದಾಶಿವ ಇತರರು ಅಂತಿಮ ದರ್ಶನ ಪಡೆದರು.

ಸಮಾಜದಲ್ಲಿ ನಾನು,ನನ್ನದು ಎನ್ನುವುದಕ್ಕಿಂತ ನಾವು,ನಮ್ಮದು ಎಂದು ಬಾಳಿ : ಸಾ.ಚಿ.ನಾಗೇಶ್

ಹುಳಿಯಾರಿನ ಕನಕದಾಸ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಸಂಜೆ ನಡೆದ ಶಾಲಾವಾರ್ಷಿಕೋತ್ಸವ ಸಮಾರಭದಲ್ಲಿ ಮಕ್ಕಳು ಪ್ರದರ್ಶಿಸಿದ ಶಿವತಾಂಡವ ನೃತ್ಯದ ನೋಟ ನೋಡುಗರ ಕಣ್ಮನಸೆಳೆಯಿತು. ಸಮಾಜದಲ್ಲಿ ನಾನು.ನನ್ನದು ಎಂದು ಸ್ವಾರ್ಥ ಜೀವನ ನಡೆಸುವುದಕ್ಕಿಂತ ನಾವು,ನಮ್ಮದು ಎಂಬ ಮನೋಭಾವನೆ ಬೆಳೆಸಿಕೊಂಡು ಬಾಳಬೇಕೆಂದು ಚಿ.ನಾ.ಹಳ್ಳಿ ಕ್ಷೇತ್ರಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ತಿಳಿಸಿದರು. ಹುಳಿಯಾರಿನ ಕನಕದಾಸ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ 2011-12ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿದ ಅವರು ಮಾತನಾಡಿದರು. ನಮ್ಮ ಮಾನವ ಜನ್ಮ ಎಲ್ಲದಕ್ಕಿಂತಲೂ ಅಮೂಲ್ಯವಾದ್ದು,ಅದಕ್ಕಾಗಿ ನಾವು ಸಮಾಜದಲ್ಲಿ ಮಾನವೀಯ ಗುಣಗಳನ್ನು,ಉತ್ತಮ ಮೌಲ್ಯಗಳನ್ನು ಬೆಳೆಸಿಕೊಂಡು,ಇತರರಿಗೆ ನೋವುಂಟುಮಾಡದಂತೆ ಸಹಬಾಳ್ವೆಯಿಂದ ಜೀವಿಸಬೇಕಿದೆ ಎಂದರು. ಅಲ್ಲದೆ ಮುಂದಿನ 77ದಿನಗಳಲ್ಲಿ 10ನೇ ತರಗತಿ ಪರೀಕ್ಷೆಗಳು ಪ್ರಾರಂಭವಾಗಲಿದ್ದು,ಇನ್ನಾದರೂ ಕಠಿಣ ಪರಿಶ್ರಮದಿಂದ ಓದಿ,ಶಾಲೆಗೆ,ಪೋಷಕರಿಗೆ ಕೀರ್ತಿ,ಯಶಸ್ಸನ್ನು ತನ್ನಿ ಎಂದು ಮಕ್ಕಳಿಗೆ ಹಾರೈಸಿದರು. ಚಿ.ನಾ.ಹಳ್ಳಿ ಪ್ರಾಚಾರ್ಯ ಸಂಘದ ಕಾರ್ಯದರ್ಶಿಗಳಾದ ಕರಿಸಿದ್ದಪ್ಪನವರು ಮಾತನಾಡಿ ಪ್ರತಿಯೊಂದು ಶಾಲೆಗಳಲ್ಲೂ ಚರ್ಚಾಸ್ಪರ್ಧೆ,ರಸಪ್ರಶ್ನೆ, ಆಟೋಟಗಳು,ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಇನ್ನೂ ಮುಂತಾದ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಮಕ್ಕಳಲ್ಲಿ ಸಹಕಾರ,ಒಗ್ಗೂಡುವಿಕೆ,ನಾಯಕತ್ವ ಗುಣಗಳನ್ನು

ಪೋಟೊ ಕ್ಯಾಪ್ಷನ್

ಹುಳಿಯಾರು ಸಮೀಪದ ಯಳನಡು ಗ್ರಾಮದಲ್ಲಿ ಶ್ರೀ ರಾಜಯೋಗಿ ಸಿದ್ದರಾಮೇಶ್ವರ ಸ್ವಾಮಿಯ ಜಯಂತಿ ಮಹೋತ್ಸವದಲ್ಲಿ ಸ್ವಾಮಿ ಸುಪ್ರಭಾತ ಮತ್ತು ಭಕ್ತಿಗೀತೆಯನ್ನೊಳಗೊಂಡ ಸಿ.ಡಿ ಯನ್ನು ಬಿಡುಗಡೆ ಮಾಡಲಾಯಿತು.

ಪೋಟೊ ಸುದ್ದಿ

ಹುಳಿಯಾರು ಸಮೀಪದ ಸೋರಲಮಾವು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ವಶಿಕ್ಷಣ ಅಭಿಯಾನದಡಿ ಹಮ್ಮಿಕೊಂಡಿದ್ದ ಪೋಷಕರ ಮೇಳದ ಅಂಗವಾಗಿ ಶಾಲಾಮಕ್ಕಳು ಗ್ರಾಮದಲ್ಲಿ ಜಾಥಾವನ್ನು ನಡೆಸಿದರು. ಹುಳಿಯಾರು ಸಮೀಪದ ಹಂದನಕೆರೆಯ ಪುರಾಣ ಪ್ರಸಿದ್ದ ಶ್ರೀ ಸಿದ್ದೇಶ್ವಸ್ವಾಮಿ ಸನ್ನಿಧಾನಕ್ಕೆ ಮಂಗಳವಾರ ಭೇಟಿ ನೀಡಿದ್ದ ಮಾಜಿ ಮಂತ್ರಿ ಹಾಗೂ ಹಾಲಿಸಂಸದರು ಆದ ಚಲುವರಾಯಸ್ವಾಮಿ ಹಾಗೂ ಅವರ ಪತ್ನಿ ಸ್ವಾಮಿಗೆ ಪೂಜೆ ಸಲ್ಲಿಸಿದರು.

ಇಂದಿನ ಯುಜಜನತೆಯಲ್ಲಿ ಏಡ್ಸ್ ಬಗ್ಗೆ ಜಾಗೃತಿ ಮೂಡಬೇಕಿದೆ

ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್ ರಿಬ್ಬನ್ ಕ್ಲಬ್,ರಾಜ್ಯ ಏಡ್ಸ್ ಪ್ರಿವೆನ್ಸ್ ನ್ ಸಂಸ್ಥೆ,ಕಾಲೇಜಿನ ಎನ್.ಎಸ್.ಎಸ್. ಘಟಕವರು ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಪಕ ಮಾ.ಚಿ. ಕೈಲಾಸನಾಥ್ ಮಾತನಾಡಿದರು.ಡಾರಜನೀಶ್ ಬಾಬು,ಪ್ರಾಂಶುಪಾಲ ಎಂ.ಎನ್.ನಾಗರಾಜು, ಡಾಜಯಶೀಲಾ ಇದ್ದಾರೆ. ಇಂದಿನ ದಿನಗಳಲ್ಲಿ ಏಡ್ಸ್ ಎಂಬ ಮಹಾಮಾರಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿರುವುದು ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಹಾಗೂ ಯುವಜನತೆಯಲ್ಲಿ, ಅದಕ್ಕಾಗಿ ಏಡ್ಸ್ ಬಗ್ಗೆ ಯುವಜನತೆಯಲ್ಲಿ ಜಾಗೃತಿಯನ್ನು ಮೂಡಿಸಬೇಕಿದೆ ಎಂದು ಚಿ.ನಾ.ಹಳ್ಳಿಯ ನಿವೃತ್ತ ಪ್ರಾಧ್ಯಪಕ ಮಾ.ಚಿ. ಕೈಲಾಸನಾಥ್ ಆಭಿಪ್ರಾಯಪಟ್ಟರು. ಹೋಬಳಿಯ ಹುಳಿಯಾರು-ಕೆಂಕರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್ ರಿಬ್ಬನ್ ಕ್ಲಬ್,ರಾಜ್ಯ ಏಡ್ಸ್ ಪ್ರಿವೆನ್ಸ್ ನ್ ಸಂಸ್ಥೆ,ಕಾಲೇಜಿನ ಎನ್.ಎಸ್.ಎಸ್. ಘಟಕವರು ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಆತಿಥಿಯಾಗಿ ಆಗಮಿಸಿದ್ದ ಅವರು ಮಾತನಾಡಿದರು. ಏಡ್ಸ್ ರೋಗ ಹೆಚ್.ಐ.ವಿ ಎಂಬ ವೈರಸ್ ನಿಂದ ಹರಡುವಂತ ರೋಗವಾಗಿದ್ದು,ಇದು ಮೂಲತಃ ಅಮೇರಿಕಾದ ಚಿಕಾಗೋದಿಂದ ಭಾರತವನ್ನು ಪ್ರವೇಶಿಸಿತು.ಜೊತೆಗೆ ಈಡಿ ಜಗತ್ತಿನಾದ್ಯಂತ ಹರಡುವ ಮೂಲಕ ಮಹಾಮಾರಿ ರೋಗವೆಂದು ಗುರ್ತಿಸಿಕೊಂಡಿದೆ. ಇದಕ್ಕೆ ಹೆಚ್ಚಿನದಾಗಿ ಯುವಜನತೆ ಏಕೆ

ವಿವೇಕಾನಂದರ ಆದರ್ಶಗುಣಗಳು ಇಂದಿನ ಯುವಜನತೆಗೆ ಅಗತ್ಯ : ಕೆಂಕೆರೆ ಸತೀಶ್

ಹುಳಿಯಾರಿನ ಟಿಪ್ಪು ಯುವಕ ಸಂಘದವರು ನಡೆಸಿದ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವಕ ದಿನವನ್ನು ರಾಜ್ಯ ರೈತ ಸಂಘದ ಕೆಂಕೆರೆ ಸತೀಶ್ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ನರೇಂದ್ರಬಾಬು,ರಾಘವೇಂದ್ರ,ಡಿಶ್ ಬಾಬು,ಆಶೋಕ್ ಬಾಬು, ಕರವೇ ರಘು,ಟಿಪ್ಪು ಸಂಘದ ಪದಾಧಿಕಾರಿಗಳು ಇದ್ದಾರೆ. ಇಂದಿನ ಯುವಕರು ತಾವು ಕೈಗೊಳ್ಳುವ ಕಾರ್ಯಗಳಲ್ಲಿ ಯಶಸ್ಸು ಗಳಿಸಿ,ಸಮಾಜದಲ್ಲಿ ಇಂದು ಉನ್ನತ ಸ್ಥಾನ ಪಡೆಯಬೇಕಾದರೆ ಅವರಿಗೆ ಸ್ವಾಮಿ ವಿವೇಕಾನಂದರಂತಹ ಮಹಾನ್ ವ್ಯಕ್ತಿಗಳ ಆದರ್ಶ ಗುಣಗಳು ಹಾಗೂ ತತ್ವಗಳ ಅರಿವು ಅತ್ಯಗತ್ಯವೆಂದು ರಾಜ್ಯ ರೈತ ಸಂಘದ ಸಂಚಾಲಕ ಕೆಂಕೆರೆ ಸತೀಶ್ ಕರೆನೀಡಿದ್ದಾರೆ. ಹೋಬಳಿಯ ಟಿಪ್ಪುಸುಲ್ತಾನ್ ಯುವಕಸಂಘದವರು ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನ ಹಾಗೂ ರಾಷ್ಟ್ರೀಯ ಯುವ ದಿನದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದರು ಒಬ್ಬ ಮಹಾನ್ ವ್ಯಕ್ತಿ ಉತ್ತಮ ಚಿಂತನೆಗಳನ್ನು,ಆದರ್ಶಗಳನ್ನು ಹೊಂದಿದ್ದು,ನಮ್ಮ ದೇಶದ ಬಗ್ಗೆ ಇತರೆ ರಾಷ್ಟ್ರಗಳಿಗೆ ತಿಳಿಸಿದಂತಹವರು. ಅವರು ಯುವ ಪೀಳಿಗೆಯ ಉದ್ದಾರಕ್ಕಾಗಿ ಹತ್ತು ಹಲವು ಮಾರ್ಗಗಳನ್ನು ಹಾಕಿಕೊಟ್ಟಿದ್ದು,ಅದರಂತೆ ನೆಡೆಯುವುದು ನಮ್ಮೆಲರ ಹೊಣೆಯಾಗಿದೆ ಎಂದರು. ಅಲ್ಲದೆ ನಾವು ಸದಾ ಕಾಲ ಸದೃಢ ಮನಸ್ಸನ್ನು ಹೊಂದಿದ್ದೇ ಆದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು.ಅಲ್ಲದೆ ಟಿಪ್ಪು ಸಂಘದವರು ಇಂತಹ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದು,ಮುಂದಿನ ದಿನಗ

ಹುಳಿಯಾರಿನ ಅಯ್ಯಪ್ಪ ಸನ್ನಿಧಿಯಲ್ಲಿ ಗರುಡ ದರ್ಶನ ಪಡೆದ ಭಕ್ತರು

ಹುಳಿಯಾರಿನ ಅಯ್ಯಪ್ಪ ಸನ್ನಿಧಿಯನ್ನು ಸತತ 3ನೇ ವರ್ಷ ಪ್ರದಕ್ಷಿಣೆ ಹಾಕಿದ ಗರುಡ ಪಕ್ಷಿ. ಹುಳಿಯಾರು ಇಲ್ಲಿನ ಗಾಂಧೀಪೇಟೆಯಲ್ಲಿರುವ ಪ್ರಸಿದ್ದ ಶ್ರೀಅಯ್ಯಪ್ಪನ ಸನ್ನಿಧಿಯಲ್ಲಿ ಸಂಕ್ರಾಂತಿ ದಿನದಂದು ಮಧ್ಯಾಹ್ನ ಗರುಡಪಕ್ಷಿಯು ದರ್ಶನ ನೀಡಿದ್ದು, ಅಯ್ಯಪ್ಪನ ಭಕ್ತರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಇದು ಸತತ 3ನೇಬಾರಿ ಗರುಡ ಪಕ್ಷಿ ಅಯ್ಯಪ್ಪನ ಸನ್ನಿಧಿಗೆ ಬಂದು ಪ್ರದಕ್ಷಿಣೆ ಹಾಕುತ್ತಿದೆ ಎಂದು ನೆರೆದಿದ್ದ ಗುರುಸ್ವಾಮಿಗಳು ತಿಳಿಸಿದ್ದಾರೆ. ಶಬರಿಮಲೆಯಲ್ಲಿ ಅಯ್ಯಪ್ಪನ ಒಡವೆಗಳನ್ನು ಕಾವಲು ಕಾಯಲು ಬರುವ ಗರುಡದಂತೆ ಇಲ್ಲಿಯೂ ಸಹ ಗರುಡ ಬರುತ್ತಿರುವುದು ನೊಡುಗರಲ್ಲಿ ಕುತೂಹಲವನ್ನುಂಟುಮಾಡಿದೆ.ಅಲ್ಲದೆ ಗರುಡ ದೇವಾಲಯವನ್ನು ಪ್ರದಕ್ಷಿಣೆಹಾಕುವುದನ್ನು ನೋಡಲು ಜನಸಾಗರೇ ಸೇರಿ,ಅಯ್ಯಪ್ಪನ ನಾಮಸ್ಮರಣೆಯಲ್ಲಿ ತೊಡಗಿದ್ದು, ಈ ದರ್ಶನದಿಂದ ನಮ್ಮ ಜನ್ಮ ಪುನೀತವೆಂದುಕೊಳ್ಳುತ್ತಿದ್ದರು.

ಹುಳಿಯಾರಿನ ಅಯ್ಯಪ್ಪ ಸನ್ನಿಧಿಯಲ್ಲಿ ಗರುಡ ದರ್ಶನ ಪಡೆದ ಭಕ್ತರು

ಹುಳಿಯಾರಿನ ಅಯ್ಯಪ್ಪ ಸನ್ನಿಧಿಯನ್ನು ಸತತ 3ನೇ ವರ್ಷ ಪ್ರದಕ್ಷಿಣೆ ಹಾಕಿದ ಗರುಡ ಪಕ್ಷಿ. ಹುಳಿಯಾರು ಇಲ್ಲಿನ ಗಾಂಧೀಪೇಟೆಯಲ್ಲಿರುವ ಪ್ರಸಿದ್ದ ಶ್ರೀಅಯ್ಯಪ್ಪನ ಸನ್ನಿಧಿಯಲ್ಲಿ ಸಂಕ್ರಾಂತಿ ದಿನದಂದು ಮಧ್ಯಾಹ್ನ ಗರುಡಪಕ್ಷಿಯು ದರ್ಶನ ನೀಡಿದ್ದು, ಅಯ್ಯಪ್ಪನ ಭಕ್ತರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಇದು ಸತತ 3ನೇಬಾರಿ ಗರುಡ ಪಕ್ಷಿ ಅಯ್ಯಪ್ಪನ ಸನ್ನಿಧಿಗೆ ಬಂದು ಪ್ರದಕ್ಷಿಣೆ ಹಾಕುತ್ತಿದೆ ಎಂದು ನೆರೆದಿದ್ದ ಗುರುಸ್ವಾಮಿಗಳು ತಿಳಿಸಿದ್ದಾರೆ. ಶಬರಿಮಲೆಯಲ್ಲಿ ಅಯ್ಯಪ್ಪನ ಒಡವೆಗಳನ್ನು ಕಾವಲು ಕಾಯಲು ಬರುವ ಗರುಡದಂತೆ ಇಲ್ಲಿಯೂ ಸಹ ಗರುಡ ಬರುತ್ತಿರುವುದು ನೊಡುಗರಲ್ಲಿ ಕುತೂಹಲವನ್ನುಂಟುಮಾಡಿದೆ.ಅಲ್ಲದೆ ಗರುಡ ದೇವಾಲಯವನ್ನು ಪ್ರದಕ್ಷಿಣೆಹಾಕುವುದನ್ನು ನೋಡಲು ಜನಸಾಗರೇ ಸೇರಿ,ಅಯ್ಯಪ್ಪನ ನಾಮಸ್ಮರಣೆಯಲ್ಲಿ ತೊಡಗಿದ್ದು, ಈ ದರ್ಶನದಿಂದ ನಮ್ಮ ಜನ್ಮ ಪುನೀತವೆಂದುಕೊಳ್ಳುತ್ತಿದ್ದರು.

ಹುಳಿಯಾರಿನ ಅಯ್ಯಪ್ಪ ಸನ್ನಿಧಿಯಲ್ಲಿ ಗರುಡ ದರ್ಶನ ಪಡೆದ ಭಕ್ತರು

ಹುಳಿಯಾರಿನ ಅಯ್ಯಪ್ಪ ಸನ್ನಿಧಿಯನ್ನು ಸತತ 3ನೇ ವರ್ಷ ಪ್ರದಕ್ಷಿಣೆ ಹಾಕಿದ ಗರುಡ ಪಕ್ಷಿ. ಹುಳಿಯಾರು ಇಲ್ಲಿನ ಗಾಂಧೀಪೇಟೆಯಲ್ಲಿರುವ ಪ್ರಸಿದ್ದ ಶ್ರೀಅಯ್ಯಪ್ಪನ ಸನ್ನಿಧಿಯಲ್ಲಿ ಸಂಕ್ರಾಂತಿ ದಿನದಂದು ಮಧ್ಯಾಹ್ನ ಗರುಡಪಕ್ಷಿಯು ದರ್ಶನ ನೀಡಿದ್ದು, ಅಯ್ಯಪ್ಪನ ಭಕ್ತರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಇದು ಸತತ 3ನೇಬಾರಿ ಗರುಡ ಪಕ್ಷಿ ಅಯ್ಯಪ್ಪನ ಸನ್ನಿಧಿಗೆ ಬಂದು ಪ್ರದಕ್ಷಿಣೆ ಹಾಕುತ್ತಿದೆ ಎಂದು ನೆರೆದಿದ್ದ ಗುರುಸ್ವಾಮಿಗಳು ತಿಳಿಸಿದ್ದಾರೆ. ಶಬರಿಮಲೆಯಲ್ಲಿ ಅಯ್ಯಪ್ಪನ ಒಡವೆಗಳನ್ನು ಕಾವಲು ಕಾಯಲು ಬರುವ ಗರುಡದಂತೆ ಇಲ್ಲಿಯೂ ಸಹ ಗರುಡ ಬರುತ್ತಿರುವುದು ನೊಡುಗರಲ್ಲಿ ಕುತೂಹಲವನ್ನುಂಟುಮಾಡಿದೆ.ಅಲ್ಲದೆ ಗರುಡ ದೇವಾಲಯವನ್ನು ಪ್ರದಕ್ಷಿಣೆಹಾಕುವುದನ್ನು ನೋಡಲು ಜನಸಾಗರೇ ಸೇರಿ,ಅಯ್ಯಪ್ಪನ ನಾಮಸ್ಮರಣೆಯಲ್ಲಿ ತೊಡಗಿದ್ದು, ಈ ದರ್ಶನದಿಂದ ನಮ್ಮ ಜನ್ಮ ಪುನೀತವೆಂದುಕೊಳ್ಳುತ್ತಿದ್ದರು.

ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ನಲ್ಲಿ ವಿಜಯಮಾಲೆ ಧರಿಸಿದ ಕರ್ನಾಟಕ ತಂಡ

ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ನಲ್ಲಿ ವಿಜಯಮಾಲೆ ಧರಿಸಿದ ಕರ್ನಾಟಕ ತಂಡ ----------------------------------------------------------------------------- ಹೈದರಾಬಾದ್ ನ ಬಾಲನಗರದ ಎಚ್.ಎ.ಎಲ್ ಗ್ರೌಂಡ್ ನಲ್ಲಿ ನಡೆದ 57ನೇ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆತೀಥೆಯ ಹೈದರಾಬಾದ್ ತಂಡವನ್ನು ಮಣಿಸುವ ಮೂಲಕ ವಿಜಯಮಾಲೆಯನ್ನು ತನ್ನ ಮಡಿಲಿಗೆ ಹಾಕಿಕೊಂಡು 3ನೇ ಬಾರಿಗೆ ರಾಷ್ಟ್ರೀಯ ಚಾಂಪಿಯನ್ ಆಗಿರುವ ಕರ್ನಾಟಕ ರಾಜ್ಯದ ಪುರುಷರ ಸೀನಿಯರ್ಸ್ ತಂಡ. ಹೈದರಾಬಾದ್ ನ ಬಾಲನಗರದ ಎಚ್.ಎ.ಎಲ್ ಗ್ರೌಂಡ್ ನಲ್ಲಿ ಕಳೆದ ಜನವರಿ 10 ರಿಂದ 17ರವರೆಗೆ ನಡೆದ 57ನೇ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕರ್ನಾಟಕ ರಾಜ್ಯದ ಪುರುಷರ ಸೀನಿಯರ್ಸ್ ತಂಡ ಆತೀಥೆಯ ಹೈದರಾಬಾದ್ ತಂಡವನ್ನು ಮಣಿಸುವ ಮೂಲಕ ವಿಜಯಮಾಲೆಯನ್ನು ತನ್ನ ಮಡಿಲಿಗೆ ಹಾಕಿಕೊಂಡು 3ನೇ ಬಾರಿಗೆ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಜನವರಿ 10ರಿಂದ 13ರವರೆಗೆ ಪುರುಷ ಹಾಗೂ ಮಹಿಳೆಯರ ಸೀನಿಯರ್ಸ್ ವಿಭಾಗ ಹಾಗೂ ಜ.14 ರಿಂದ 17ರವರೆಗೆ ಜೂನಿಯರ್ಸ್ ವಿಭಾಗಕ್ಕೆ ನಡೆದ ಟೂರ್ನಿಯಲ್ಲಿ 26 ರಾಜ್ಯದ 800 ಜನ ಕ್ರೀಡಾಪಟುಗಳು ಭಾಗವಹಿಸಿದ್ದರು.ಪ್ರಾರಂಭದಿಂದಲೂ ಕರ್ನಾಟಕ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು,ಲೀಗ್ ಪಂದ್ಯದಲ್ಲಿ ಚತ್ತೀಸ್ ಘಡ್,ಚಂಡೀಘಡ್,ಬಿಹಾರ ಹಾಗೂ ಮಹಾರಾಷ್ಟ್ರ ತಂಡಗಳನ್ನು ಮಣಿಸಿ,ಕ್ವಾಟರ್ ಫೈನಲ್ ನಲ್ಲಿ ಕೇರಳ ತಂಡದ ವಿರುದ್ದ ಜಯಿ

ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಗೆ ರಾಜ್ಯ ತಂಡದ ಆಯ್ಕೆ ಪಟ್ಟಿ ಪ್ರಕಟ

ಟಿಪ್ಪು ಪಟ್ಟಾಭಿಷೇಕ ಮತ್ತು ಕುವೆಂಪು ಜನ್ಮದಿನಾಚರಣೆ

ಹುಳಿಯಾರಿನ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ವತಿಯಿಂದ ನಡೆದ ಟಿಪ್ಪು ಪಟ್ಟಾಭಿಷೇಕ ಮತ್ತು ಕುವೆಂಪು ಜನ್ಮದಿನಾಚರಣೆ ಸಮಾರಂಭದಲ್ಲಿ ಕುಪ್ಪೂರು ಗದ್ದಿಗೆಮಠದ ಯತೀಶ್ವರ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿದರು. ಹುಳಿಯಾರಿನ ಹಜರತ್ ಟಿಪ್ಪು ಸುಲ್ತಾನ್ ಶಹೀದ್ ಅಭಿಮಾನಿಗಳ ಮಹಾವೇದಿಕೆಯವರು ನಡೆಸಿದ ಟಿಪ್ಪು ಪಟ್ಟಾಭಿಷೇಕ ಮತ್ತು ಕುವೆಂಪು ಜನ್ಮದಿನಾಚರಣೆ ಸಮಾರಂಭದಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು ಅವರನ್ನು ಗೌರವಿಸಲಾಯಿತು. ಟಿಪ್ಪು ಪಟ್ಟಾಭಿಷೇಕ ಮತ್ತು ಕುವೆಂಪು ಜನ್ಮದಿನಾಚರಣೆ