ವಿಷಯಕ್ಕೆ ಹೋಗಿ

ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ನಲ್ಲಿ ವಿಜಯಮಾಲೆ ಧರಿಸಿದ ಕರ್ನಾಟಕ ತಂಡ

ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ನಲ್ಲಿ ವಿಜಯಮಾಲೆ ಧರಿಸಿದ ಕರ್ನಾಟಕ ತಂಡ

-----------------------------------------------------------------------------


ಹೈದರಾಬಾದ್ ನ ಬಾಲನಗರದ ಎಚ್.ಎ.ಎಲ್ ಗ್ರೌಂಡ್ ನಲ್ಲಿ ನಡೆದ 57ನೇ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆತೀಥೆಯ ಹೈದರಾಬಾದ್ ತಂಡವನ್ನು ಮಣಿಸುವ ಮೂಲಕ ವಿಜಯಮಾಲೆಯನ್ನು ತನ್ನ ಮಡಿಲಿಗೆ ಹಾಕಿಕೊಂಡು 3ನೇ ಬಾರಿಗೆ ರಾಷ್ಟ್ರೀಯ ಚಾಂಪಿಯನ್ ಆಗಿರುವ ಕರ್ನಾಟಕ ರಾಜ್ಯದ ಪುರುಷರ ಸೀನಿಯರ್ಸ್ ತಂಡ.

ಹೈದರಾಬಾದ್ ನ ಬಾಲನಗರದ ಎಚ್.ಎ.ಎಲ್ ಗ್ರೌಂಡ್ ನಲ್ಲಿ ಕಳೆದ ಜನವರಿ 10 ರಿಂದ 17ರವರೆಗೆ ನಡೆದ 57ನೇ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕರ್ನಾಟಕ ರಾಜ್ಯದ ಪುರುಷರ ಸೀನಿಯರ್ಸ್ ತಂಡ ಆತೀಥೆಯ ಹೈದರಾಬಾದ್ ತಂಡವನ್ನು ಮಣಿಸುವ ಮೂಲಕ ವಿಜಯಮಾಲೆಯನ್ನು ತನ್ನ ಮಡಿಲಿಗೆ ಹಾಕಿಕೊಂಡು 3ನೇ ಬಾರಿಗೆ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.


ಜನವರಿ 10ರಿಂದ 13ರವರೆಗೆ ಪುರುಷ ಹಾಗೂ ಮಹಿಳೆಯರ ಸೀನಿಯರ್ಸ್ ವಿಭಾಗ ಹಾಗೂ ಜ.14 ರಿಂದ 17ರವರೆಗೆ ಜೂನಿಯರ್ಸ್ ವಿಭಾಗಕ್ಕೆ ನಡೆದ ಟೂರ್ನಿಯಲ್ಲಿ 26 ರಾಜ್ಯದ 800 ಜನ ಕ್ರೀಡಾಪಟುಗಳು ಭಾಗವಹಿಸಿದ್ದರು.ಪ್ರಾರಂಭದಿಂದಲೂ ಕರ್ನಾಟಕ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು,ಲೀಗ್ ಪಂದ್ಯದಲ್ಲಿ ಚತ್ತೀಸ್ ಘಡ್,ಚಂಡೀಘಡ್,ಬಿಹಾರ ಹಾಗೂ ಮಹಾರಾಷ್ಟ್ರ ತಂಡಗಳನ್ನು ಮಣಿಸಿ,ಕ್ವಾಟರ್ ಫೈನಲ್ ನಲ್ಲಿ ಕೇರಳ ತಂಡದ ವಿರುದ್ದ ಜಯಿಸಿತು.ಜ.12ರಂದು ನಡೆದ ಸೆಮಿಫೈನಲ್ ನಲ್ಲಿ ತಮಿಳಿನಾಡು ತಂಡವನ್ನು 29-28,29-19ರ ನೇರ ಸೆಟ್ ನಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿತು.ಜ.13ರಂದು ನಡೆದ ಹೊನಲು ಬೆಳಕಿನ ಫೈನಲ್ ಪಂದ್ಯದಲ್ಲಿ ಹೈದರಾಬಾದ್ ತಂಡದ ಎದುರು 29-24,29-06ರ ನೇರ ಸೆಟ್ ಗಳಲ್ಲಿ ಜಯಿಸಿ ವಿಜಯಮಾಲೆಯನ್ನು ತನ್ನ ಮುಡಿಗೇರಿಸಿಕೊಂಡಿದೆ.



ಟೂರ್ನಿಯಲ್ಲಿ ಕರ್ನಾಟಕದ ಪುರುಷರ ತಂಡಕ್ಕೆ ಶ್ರೀರಂಗಪಟ್ಟಣದ ಎಸ್.ಜಿ.ವೆಂಕಟರಾಮನ್ ನಾಯಕತ್ವವಹಿಸಿದ್ದು, ಹುಳಿಯಾರು ಕೆನರಾಬ್ಯಾಂಕ್ ನ ಎಚ್.ಎಲ್.ಸತೀಶ್,ಭದ್ರಾವತಿಯ ಜಗನ್ನಾಥ್,ದೊಡ್ಡಬಳ್ಳಾಪುರದ ಕಿರಣ್ ಕುಮಾರ್,ಬೆಂಗಳೂರು ಕೆನರಾಬ್ಯಾಂಕಿನ ಮಹದೇವ್, ಸುದರ್ಶನ್.ಬಿ, ಹಾಗೂ ಗಿರಿ ಪ್ರಸಾದ್ ,ತುಮಕೂರಿನ ಎಸ್.ದಿವಾಕರ್,ದಾವಣಗೆರೆಯ ಕುಮಾರ್ ಸ್ವಾಮಿ, ಬೆಂಗಳೂರಿನ ವಿಜಯ್ ಕುಮಾರ್ ಭಾಗವಹಿಸಿದ್ದ ತಂಡದಲ್ಲಿ ಎಸ್.ನರೇಂದ್ರ್ರ ಕೋಚ್ ಹಾಗೂ ಆರ್.ಶಿವಣ್ಣ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದರು.



ಕರ್ನಾಟಕದ ಪುರುಷರ ತಂಡವು ಈ ಮೊದಲು 2006-2007 ಪ್ರಥಮವಾಗಿ ಹಾಗೂ 2007-2008ರಲ್ಲಿ ದ್ವಿತೀಯ ಬಾರಿಗೆ ಪ್ರಶಸಿಯನ್ನು ಪಡೆದಿದ್ದು,ನಂತರ ಮೂರುವರ್ಷಗಳ ತರುವಾಯ ಮತ್ತೊಮ್ಮೆ ಕಠಿಣ ಪರಿಶ್ರಮದಿಂದಾಗಿ 3ನೇ ಬಾರಿ ಹೈದರಾಬಾದ್ ನಲ್ಲಿ ನಡೆದ ರಾಷ್ಟ್ರೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.


ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ನ ಛೇರ್ಮನ್ ರಾಜಶೇಖರ್,ಪ್ರಖ್ಯಾತ ಚಿತ್ರನಟ ಪವರ್ ಸ್ಟಾರ್ ಪವನ್ ಕಲ್ಯಾಣ್,ನಟ ಶಿವಾಜಿ ಅವರ ಉಪಸ್ಥಿತಿಯಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಟೂನರ್ಿಯಲ್ಲಿ ಉತ್ತಮ ಕ್ರೀಡಾಪಟುಗೆ ನೀಡುವ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿಯನ್ನು ಕರ್ನಾಟಕ ಪುರುಷರ ತಂಡದ ಶ್ರೀರಂಗಪಟ್ಟಣದ ಎಸ್.ಜಿ.ವೆಂಕಟರಾಮನ್ ಹಾಗೂ ತುಮಕೂರಿನ ದಿವಾಕರ್ ಅವರಿಗೆ ಪ್ರದಾನ ಮಾಡಲಾಯಿತು.



ಪ್ರಶಸ್ತಿಯನ್ನು ಪಡೆದ ಕರ್ನಾಟಕ ತಂಡದ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ನ ಕ್ರೀಡಾಪಟು ಎಚ್.ಎಲ್.ಸತೀಶ್ ಪತ್ರಿಕೆಯೊಂದಿಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡು,ಹುಳಿಯಾರಿನಲ್ಲಿ ನಡೆದ ಫಿಟ್ ನೆಸ್ ಕ್ಯಾಂಪ್ ಆಟಗಾರರ ಸದೃಡತೆಗೆ ನೆರವಾಯಿತು. ಹುಳಿಯಾರಿನಲ್ಲಿ ಒಂದುವಾರಗಳ ಕಾಲ ನಡೆದ ಆಯ್ಕೆ ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಆಟಗಾರರಲ್ಲಿನ ಪ್ರತಿಭೆಯನ್ನು ಗುರ್ತಿಸಲು ಶಿಬಿರ ನಡೆಸಲು ನೆರವಾದ ಸುಶೀಲಮ್ಮ ಮೈನ್ಸ್ ಹಾಗೂ ಕ್ರಿಯಾಶೀಲಾ ಕ್ರೀಡಾ ಸಂಸ್ಥೆಯ ನರೇಂದ್ರಬಾಬು,ಸೀತಾರಾಮ ಪ್ರತಿಷ್ಠಾನದ ವಿಶ್ವನಾಥ್ ಮತ್ತು ರಂಗನಾಥ ಪ್ರಸಾದ್,ವಾಸವಿ ಸಂಸ್ಥೆಯ ಲಕ್ಷ್ಮಿಕಾಂತ್,ಚಂದ್ರಶೇಖರ್ ಹಾಗೂ ರೋಟರಿ ಸಂಸ್ಥೆಯ ಮಂಜುನಾಥ ಗುಪ್ತ ಅವರ ಸಹಕಾರಕ್ಕೆ ನಾವೆಲ್ಲರೂ ಆಬಾರಿಯಾಗಿದ್ದೇವೆ ಎಂದರು. ಬಾಲ್ ಬ್ಯಾಡ್ಮಿಂಟನ್ ಕ್ರೀಡೆ ಕಲಾತ್ಮಕ ಕ್ರೀಡೆಯಾಗಿದ್ದರೂ ಸಹ ಕೇವಲ ದಕ್ಷಿಣ ಭಾರತದ ಕ್ರೀಡೆ ಎಂಬ ನೆಪದಿಂದ ಪ್ರಚಾರದಿಂದ ಹೊರಗುಳಿದಿದೆ. ಈ ಕ್ರೀಡೆ ದಕ್ಷಿಣಭಾರತಕ್ಕೆ ಸೀಮಿತವಾಗಿರದೇ ಇಡೀ ದೇಶದ ಕ್ರೀಡೆಯಾಗುವಂತೆ ಮಾಡುವ ಗುರಿ ನಮ್ಮದಾಗಿದೆ ಎಂದರು. ಮಾದ್ಯಮಗಳಲ್ಲಿ ಇತರೆ ಕ್ರೀಡೆಗಳಿಗೆ ದೊರೆಯುವಷ್ಟು ಪ್ರಚಾರ ಈ ಕ್ರೀಡೆಗೆ ಸಿಗದಿರುವುದಕ್ಕೆ ಬೇಸಕ ವ್ಯಕ್ತಪಡಿಸಿದ ಅವರು ಇನ್ನಾದರೂ ಸಹ ಮಾದ್ಯಮಗಳು ಸಾಕಷ್ಟು ಪ್ರಚಾರ ನೀಡಿದಲ್ಲಿ ಹೆಚ್ಚನ ಕ್ರೀಡಾಪಟುಗಳು ಆಸಕ್ತಿವಹಿಸುವ ಮೂಲಕ ಇನ್ನಷ್ಟೂ ಸಾಧನೆಗೈಯಬಹುದೆಂದ ಅಭಿಪ್ರಾಯ ವ್ಯಕ್ತಪಡಿಸಿದರು.



ಈ ಟೂರ್ನಿಯಲ್ಲಿ ಕರ್ನಾಟಕದ ಸೀನಿಯರ್ಸ್ ಪುರುಷರ ತಂಡ ಮೊದಲ ಸ್ಥಾನ ಪಡೆದರೆ,ಫೈನಲ್ ಪ್ರವೇಶಿಸಿದ್ದ ಸೀನಿಯರ್ಸ್ ಮಹಿಳೆಯರ ತಂಡ ಕೂಡ ಫೈನಲ್ ಪ್ರವೇಶಿಸಿದ್ದರೂ ತಮಿಳುನಾಡು ತಂಡದ ವಿರುದ್ದ 29-24,29-26ರ ನೇರ ಸೆಟ್ ನ ಸಮೀಪದಲ್ಲಿ ಪರಾಭವಗೊಂಡು ದ್ವಿತೀಯ ಸ್ಥಾನಪಡೆದುಕೊಂಡಿದೆ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...