ವಿಷಯಕ್ಕೆ ಹೋಗಿ

ಎಪಿಯಂಸಿ ಚುನಾವಣೆ ವಿಜಯೋತ್ಸವ

              ಇಲ್ಲಿನ ಎಪಿಯಂಸಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಮಂಗಳವಾರದಂದು ಹೊರಬಿದಿದ್ದು ವ್ಯವಸಾಯಗಾರರ ಹುಳಿಯಾರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಆರ್.ಪಿ.ವಸಂತಯ್ಯ ಹಾಗೂ ವ್ಯವಸಾಯಗಾರರ ಯಳನಡು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ವೈ.ಸಿ.ಸಿದ್ರಾಮಯ್ಯ ವಿಜೇತರಾಗಿದ್ದು ಇಂದು ತಮ್ಮ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿಕೊಂಡರು.ಮೊದಲಿಗೆ ಬಿಜೆಪಿ ಅಭ್ಯರ್ಥಿ ಆರ್.ಪಿ.ವಸಂತಯ್ಯ ವಿಜೇತರಾದ ಸುದ್ದಿ ಹೊರಬೀಳುತ್ತಿದ್ದಂತೆ ಕಾರ್ಯಕರ್ತರುಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ವಾದ್ಯದೊಂದಿಗೆ ಪಟ್ಟಣದ ಎಲ್ಲಾ ಬೀದಿಗಳಲ್ಲೂ ಬಿಜೆಪಿ ಪರ ಘೋಷಣೆ ಕೂಗುತಾ ಸಂಭ್ರಮಿಸಿದರು.ತಾ.ಪಂ.ಸದಸ್ಯ ನವೀನ್,ಯುಸಿ ಗೌಡ,ಪ್ರಸನ್ನ ಕುಮಾರ್,ರಾಘವೇಂದ್ರ ,ರಾಮಣ್ಣ ಮುಂತಾದವರಿದ್ದರು.ಕಾಂಗ್ರೆಸ್ ಅಭ್ಯರ್ಥಿ ವೈ.ಸಿ.ಸಿದ್ರಾಮಯ್ಯ 614 ಮತ ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಲಕ್ಷ್ಮಯ್ಯನಿಗಿಂತ 129 ಮತಗಳ ಅಂತರದಿಂದ ಜಯಗಳಿಸಿದ ಸುದ್ದಿ ತಿಳಿಯುತಿದ್ದಂತೆ ಕಾರ್ಯಕರ್ತರುಗಳು ಪ್ರಮುಖ ಬಿದಿಗಳಲ್ಲಿ ಮೆರವಣಿಗೆ ಮಾಡಿದರು. ಯುವ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್,ಅಶೋಕ್,ರಂಗನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಒಟ್ಟಾರೆ ಹುಳಿಯಾರು ಎ.ಪಿ.ಎಂ.ಸಿ ಯ ಚುನಾವಣೆಯ ಒಟ್ಟು 12 ಕ್ಷೇತ್ರ ಗಳಲ್ಲಿನ ಸ್ಪರ್ಧಿಗಳು ಪಡೆದ ಮತಗಳಿಕೆ ಈಗಿದೆ.
1)ಹುಳಿಯಾರು ಕ್ಷೇತ್ರ:-ಆರ್.ಪಿ.ವಸಂತಯ್ಯ-842, ಕೆ.ಎಮ್.ರಾಜಶೇಖರಪ್ಪ-687, ಸೈಯದ್ ಜಲಾಲ್-257, ಹೆಚ್.ಆರ್.ರಂಗನಾಥ್-122,
ಬಿಜೆಪಿಯ ಆರ್.ಪಿ.ವಸಂತಯ್ಯ ಜಯಗಳಿಸಿದ್ದಾರೆ.
2) ಹೊಯ್ಸಳಕಟ್ಟೆ ಕ್ಷೇತ್ರ :- ರುದ್ರಪ್ಪ-444, ಡಿ.ಜಿ.ರಾಜಶೇಖರ ನಾಯ್ಕ-258, ಲಚ್ಚಾನಾಯ್ಕ-192, ರಾಮಾನಾಯ್ಕ-140, ಸೋಮಶೇಖರನಾಯ್ಕ-74,
ಜೆಡಿಎಸ್ ಪಕ್ಷದ ರುದ್ರಪ್ಪ ಜಯಗಳಿಸಿದ್ದಾರೆ.
3)ಯಳನಡು ಕ್ಷೇತ್ರ:-ವೈ.ಸಿ.ಸಿದ್ದರಾಮಯ್ಯ-614, ಲಕ್ಷ್ಮಯ್ಯ-485, ರಮೇಶ್ ಟಿ.ಕೆ.-280, ಕರಿಯಪ್ಪ ಪೂಜಾರಿ-208
ಕಾಂಗ್ರೇಸ್ ಪಕ್ಷದ ವೈ.ಸಿ.ಸಿದ್ದರಾಮಯ್ಯ ಜಯಗಳಿಸಿದ್ದಾರೆ.
4) ಹಂದನಕೆರೆ ಕ್ಷೇತ್ರ :-ಸೋಮಶೇಖರಯ್ಯ-1050, ಚಂದ್ರಣ್ಣ-895, ಆರ್.ಜಿ.ನೀಲಕಂಠಪ್ಪ-95, ಕಾಂತರಾಜ್ ಅರಸ್-03,
ಜೆಡಿಯುನಿಂದ ಸೋಮಶೇಖರಯ್ಯ ಜಯಗಳಿಸಿದ್ದಾರೆ.
5) ತಿಮ್ಮನಹಳ್ಳಿ ಕ್ಷೇತ್ರ :-ಸಣ್ಣಕರಿಯಪ್ಪ-473, ರಾಮಚಂದ್ರಯ್ಯ-330 ಎಸ್.ಆರ್. ಸ್ವಾಮಿನಾಥ್-288, ಬಸವರಾಜು-25
ಜೆಡಿಯು ಪಕ್ಷದ ಸಣ್ಣ ಕರಿಯಪ್ಪ ಜಯಗಳಿಸಿದ್ದಾರೆ.
6) ತೀರ್ಥಪುರ ಕ್ಷೇತ್ರ :- ದ್ರಾಕ್ಷಾಯಣಮ್ಮ-798, ವಸಂತ ಲಕ್ಷ್ಮೀ-790, ಲತಾ-258, ಈರಮ್ಮ-145
ಜೆಡಿಯು ಪಕ್ಷದ ದ್ರಾಕ್ಷಾಯಣಮ್ಮ ಜಯಗಳಿಸಿದ್ದಾರೆ.
7) ಕಂದಿಕೆರೆ ಕ್ಷೇತ್ರ :- ಸಣ್ಣಯ್ಯ-773, ಬಿ.ಕೆ.ಜಯಣ್ಣ-745, ಬಿ.ಪಂಚಾಕ್ಷರಯ್ಯ-116
ಜೆಡಿಯುನ ಸಣ್ಣಯ್ಯ ಜಯಗಳಿಸಿದ್ದಾರೆ.
8) ಕಸಬಾ ಕ್ಷೇತ್ರ :- ಸಿ.ಎಂ.ರಂಗಸ್ವಾಮಿ-679, ಲಿಂಗರಾಜು-310, ಸಿ.ಕೆ.ಶಾಂತಕುಮಾರ್-104, ಕೆ.ಶಿವಣ್ಣ-104, ಬಸವರಾಜು-51, ಸಿ.ಕೆ.ಗುರುಸಿದ್ದಯ್ಯ-39, ಶಾಂತಕುಮಾರ್-12
ಜೆಡಿಎಸ್ ನ ಸಿ.ಎಂ.ರಂಗಸ್ವಾಮಿಯವರು ಜಯಗಳಿಸಿದ್ದಾರೆ.
9) ಮತಿಘಟ್ಟ ಕ್ಷೇತ್ರ :-ಹೆಚ್.ಕೆ.ಬಸವರಾಜು-863, ನಟರಾಜು-688, ಬಸವರಾಜು-467
ಜೆಡಿಯುನ ಹೆಚ್.ಕೆ.ಬಸವರಾಜು ಜಯಗಳಿಸಿದ್ದಾರೆ.
10) ಶೆಟ್ಟಿಕೆರೆ ಕ್ಷೇತ್ರ :-ಕೆ.ಎಂ. ಈಶ್ವರಮೂರ್ತಿ-870, ಕೃಷ್ಣಮೂರ್ತಿ-602,ಎನ್.ಬಿ. ಸಿದ್ದೇಗೌಡ-368, ಬಿ.ಸಿ.ಶಿವಕುಮಾರಸ್ವಾಮಿ-70
ಜೆಡಿಯುಪಕ್ಷದ ಕೆ.ಎಂ.ಈಶ್ವರಮೂರ್ತಿಯವರು ಜಯಗಳಿಸಿದ್ದಾರೆ.
11) ಜೆ.ಸಿ.ಪುರ ಕ್ಷೇತ್ರ :- ಎಂ.ಎಸ್.ಶಿವರಾಜು-1094, ಗಂಗಾಧರಯ್ಯ-389, ಎಸ್.ಜಿ.ಮಹೇಶ್-356, ಬಿ.ಶಿವಶಂಕರಯ್ಯ-93, ನಿಜಾನಂದಮೂರ್ತಿ-81
ಜೆಡಿಯು ಪಕ್ಷದ ಎಂ.ಎಸ್.ಶಿವರಾಜು ಜಯಗಳಿಸಿದ್ದಾರೆ.
12) ವರ್ತಕರ ಕ್ಷೇತ್ರ :- ಸಿ.ಎಸ್.ಶಾಂತಕುಮಾರ್-52,ಎಲ್.ಆರ್.ಬಾಲಾಜಿ-36, ವೈ.ಎ.ರಿಯಾಜ್ ಅಹಮದ್-04, ಕೆ.ನಿಂಗರಾಜು-01
ಜೆಡಿಯುನ ಸಿ.ಎಸ್.ಶಾಂತಕುಮಾರ್ ಜಯಗಳಿಸಿದ್ದಾರೆ.
ಒಟ್ಟು 12 ಕ್ಷೇತ್ರಗಳಲ್ಲಿ 08 ಕ್ಷೇತ್ರಗಳಲ್ಲಿ ಜೆಡಿಯು ಹಾಗು ಜೆಡಿಎಸ್ 02 ಬಿಜೆಪಿ ಹಾಗು ಕಾಂಗ್ರೇಸ್ ತಲಾ ಒಂದೊಂದು ಸ್ಥಾನಗಳಲ್ಲಿ ಜಯಗಳಿಸಿದೆ.


ಹುಳಿಯಾರಿನ ಎಪಿಯಂಸಿಗೆ ನಡೆದಿದ್ದ ಚುನಾವಣೆಯಲ್ಲಿ ವ್ಯವಸಾಯಗಾರರ ಹುಳಿಯಾರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಆರ್.ಪಿ.ವಸಂತಯ್ಯನ ವಿಜಯೋತ್ಸವ.
ಯಳನಡು ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ವೈ.ಸಿ.ಸಿದ್ರಾಮಯ್ಯ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...