ವಿಷಯಕ್ಕೆ ಹೋಗಿ

ಎಪಿಯಂಸಿ ಚುನಾವಣೆ ವಿಜಯೋತ್ಸವ

              ಇಲ್ಲಿನ ಎಪಿಯಂಸಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಮಂಗಳವಾರದಂದು ಹೊರಬಿದಿದ್ದು ವ್ಯವಸಾಯಗಾರರ ಹುಳಿಯಾರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಆರ್.ಪಿ.ವಸಂತಯ್ಯ ಹಾಗೂ ವ್ಯವಸಾಯಗಾರರ ಯಳನಡು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ವೈ.ಸಿ.ಸಿದ್ರಾಮಯ್ಯ ವಿಜೇತರಾಗಿದ್ದು ಇಂದು ತಮ್ಮ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿಕೊಂಡರು.ಮೊದಲಿಗೆ ಬಿಜೆಪಿ ಅಭ್ಯರ್ಥಿ ಆರ್.ಪಿ.ವಸಂತಯ್ಯ ವಿಜೇತರಾದ ಸುದ್ದಿ ಹೊರಬೀಳುತ್ತಿದ್ದಂತೆ ಕಾರ್ಯಕರ್ತರುಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ವಾದ್ಯದೊಂದಿಗೆ ಪಟ್ಟಣದ ಎಲ್ಲಾ ಬೀದಿಗಳಲ್ಲೂ ಬಿಜೆಪಿ ಪರ ಘೋಷಣೆ ಕೂಗುತಾ ಸಂಭ್ರಮಿಸಿದರು.ತಾ.ಪಂ.ಸದಸ್ಯ ನವೀನ್,ಯುಸಿ ಗೌಡ,ಪ್ರಸನ್ನ ಕುಮಾರ್,ರಾಘವೇಂದ್ರ ,ರಾಮಣ್ಣ ಮುಂತಾದವರಿದ್ದರು.ಕಾಂಗ್ರೆಸ್ ಅಭ್ಯರ್ಥಿ ವೈ.ಸಿ.ಸಿದ್ರಾಮಯ್ಯ 614 ಮತ ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಲಕ್ಷ್ಮಯ್ಯನಿಗಿಂತ 129 ಮತಗಳ ಅಂತರದಿಂದ ಜಯಗಳಿಸಿದ ಸುದ್ದಿ ತಿಳಿಯುತಿದ್ದಂತೆ ಕಾರ್ಯಕರ್ತರುಗಳು ಪ್ರಮುಖ ಬಿದಿಗಳಲ್ಲಿ ಮೆರವಣಿಗೆ ಮಾಡಿದರು. ಯುವ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್,ಅಶೋಕ್,ರಂಗನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಒಟ್ಟಾರೆ ಹುಳಿಯಾರು ಎ.ಪಿ.ಎಂ.ಸಿ ಯ ಚುನಾವಣೆಯ ಒಟ್ಟು 12 ಕ್ಷೇತ್ರ ಗಳಲ್ಲಿನ ಸ್ಪರ್ಧಿಗಳು ಪಡೆದ ಮತಗಳಿಕೆ ಈಗಿದೆ.
1)ಹುಳಿಯಾರು ಕ್ಷೇತ್ರ:-ಆರ್.ಪಿ.ವಸಂತಯ್ಯ-842, ಕೆ.ಎಮ್.ರಾಜಶೇಖರಪ್ಪ-687, ಸೈಯದ್ ಜಲಾಲ್-257, ಹೆಚ್.ಆರ್.ರಂಗನಾಥ್-122,
ಬಿಜೆಪಿಯ ಆರ್.ಪಿ.ವಸಂತಯ್ಯ ಜಯಗಳಿಸಿದ್ದಾರೆ.
2) ಹೊಯ್ಸಳಕಟ್ಟೆ ಕ್ಷೇತ್ರ :- ರುದ್ರಪ್ಪ-444, ಡಿ.ಜಿ.ರಾಜಶೇಖರ ನಾಯ್ಕ-258, ಲಚ್ಚಾನಾಯ್ಕ-192, ರಾಮಾನಾಯ್ಕ-140, ಸೋಮಶೇಖರನಾಯ್ಕ-74,
ಜೆಡಿಎಸ್ ಪಕ್ಷದ ರುದ್ರಪ್ಪ ಜಯಗಳಿಸಿದ್ದಾರೆ.
3)ಯಳನಡು ಕ್ಷೇತ್ರ:-ವೈ.ಸಿ.ಸಿದ್ದರಾಮಯ್ಯ-614, ಲಕ್ಷ್ಮಯ್ಯ-485, ರಮೇಶ್ ಟಿ.ಕೆ.-280, ಕರಿಯಪ್ಪ ಪೂಜಾರಿ-208
ಕಾಂಗ್ರೇಸ್ ಪಕ್ಷದ ವೈ.ಸಿ.ಸಿದ್ದರಾಮಯ್ಯ ಜಯಗಳಿಸಿದ್ದಾರೆ.
4) ಹಂದನಕೆರೆ ಕ್ಷೇತ್ರ :-ಸೋಮಶೇಖರಯ್ಯ-1050, ಚಂದ್ರಣ್ಣ-895, ಆರ್.ಜಿ.ನೀಲಕಂಠಪ್ಪ-95, ಕಾಂತರಾಜ್ ಅರಸ್-03,
ಜೆಡಿಯುನಿಂದ ಸೋಮಶೇಖರಯ್ಯ ಜಯಗಳಿಸಿದ್ದಾರೆ.
5) ತಿಮ್ಮನಹಳ್ಳಿ ಕ್ಷೇತ್ರ :-ಸಣ್ಣಕರಿಯಪ್ಪ-473, ರಾಮಚಂದ್ರಯ್ಯ-330 ಎಸ್.ಆರ್. ಸ್ವಾಮಿನಾಥ್-288, ಬಸವರಾಜು-25
ಜೆಡಿಯು ಪಕ್ಷದ ಸಣ್ಣ ಕರಿಯಪ್ಪ ಜಯಗಳಿಸಿದ್ದಾರೆ.
6) ತೀರ್ಥಪುರ ಕ್ಷೇತ್ರ :- ದ್ರಾಕ್ಷಾಯಣಮ್ಮ-798, ವಸಂತ ಲಕ್ಷ್ಮೀ-790, ಲತಾ-258, ಈರಮ್ಮ-145
ಜೆಡಿಯು ಪಕ್ಷದ ದ್ರಾಕ್ಷಾಯಣಮ್ಮ ಜಯಗಳಿಸಿದ್ದಾರೆ.
7) ಕಂದಿಕೆರೆ ಕ್ಷೇತ್ರ :- ಸಣ್ಣಯ್ಯ-773, ಬಿ.ಕೆ.ಜಯಣ್ಣ-745, ಬಿ.ಪಂಚಾಕ್ಷರಯ್ಯ-116
ಜೆಡಿಯುನ ಸಣ್ಣಯ್ಯ ಜಯಗಳಿಸಿದ್ದಾರೆ.
8) ಕಸಬಾ ಕ್ಷೇತ್ರ :- ಸಿ.ಎಂ.ರಂಗಸ್ವಾಮಿ-679, ಲಿಂಗರಾಜು-310, ಸಿ.ಕೆ.ಶಾಂತಕುಮಾರ್-104, ಕೆ.ಶಿವಣ್ಣ-104, ಬಸವರಾಜು-51, ಸಿ.ಕೆ.ಗುರುಸಿದ್ದಯ್ಯ-39, ಶಾಂತಕುಮಾರ್-12
ಜೆಡಿಎಸ್ ನ ಸಿ.ಎಂ.ರಂಗಸ್ವಾಮಿಯವರು ಜಯಗಳಿಸಿದ್ದಾರೆ.
9) ಮತಿಘಟ್ಟ ಕ್ಷೇತ್ರ :-ಹೆಚ್.ಕೆ.ಬಸವರಾಜು-863, ನಟರಾಜು-688, ಬಸವರಾಜು-467
ಜೆಡಿಯುನ ಹೆಚ್.ಕೆ.ಬಸವರಾಜು ಜಯಗಳಿಸಿದ್ದಾರೆ.
10) ಶೆಟ್ಟಿಕೆರೆ ಕ್ಷೇತ್ರ :-ಕೆ.ಎಂ. ಈಶ್ವರಮೂರ್ತಿ-870, ಕೃಷ್ಣಮೂರ್ತಿ-602,ಎನ್.ಬಿ. ಸಿದ್ದೇಗೌಡ-368, ಬಿ.ಸಿ.ಶಿವಕುಮಾರಸ್ವಾಮಿ-70
ಜೆಡಿಯುಪಕ್ಷದ ಕೆ.ಎಂ.ಈಶ್ವರಮೂರ್ತಿಯವರು ಜಯಗಳಿಸಿದ್ದಾರೆ.
11) ಜೆ.ಸಿ.ಪುರ ಕ್ಷೇತ್ರ :- ಎಂ.ಎಸ್.ಶಿವರಾಜು-1094, ಗಂಗಾಧರಯ್ಯ-389, ಎಸ್.ಜಿ.ಮಹೇಶ್-356, ಬಿ.ಶಿವಶಂಕರಯ್ಯ-93, ನಿಜಾನಂದಮೂರ್ತಿ-81
ಜೆಡಿಯು ಪಕ್ಷದ ಎಂ.ಎಸ್.ಶಿವರಾಜು ಜಯಗಳಿಸಿದ್ದಾರೆ.
12) ವರ್ತಕರ ಕ್ಷೇತ್ರ :- ಸಿ.ಎಸ್.ಶಾಂತಕುಮಾರ್-52,ಎಲ್.ಆರ್.ಬಾಲಾಜಿ-36, ವೈ.ಎ.ರಿಯಾಜ್ ಅಹಮದ್-04, ಕೆ.ನಿಂಗರಾಜು-01
ಜೆಡಿಯುನ ಸಿ.ಎಸ್.ಶಾಂತಕುಮಾರ್ ಜಯಗಳಿಸಿದ್ದಾರೆ.
ಒಟ್ಟು 12 ಕ್ಷೇತ್ರಗಳಲ್ಲಿ 08 ಕ್ಷೇತ್ರಗಳಲ್ಲಿ ಜೆಡಿಯು ಹಾಗು ಜೆಡಿಎಸ್ 02 ಬಿಜೆಪಿ ಹಾಗು ಕಾಂಗ್ರೇಸ್ ತಲಾ ಒಂದೊಂದು ಸ್ಥಾನಗಳಲ್ಲಿ ಜಯಗಳಿಸಿದೆ.


ಹುಳಿಯಾರಿನ ಎಪಿಯಂಸಿಗೆ ನಡೆದಿದ್ದ ಚುನಾವಣೆಯಲ್ಲಿ ವ್ಯವಸಾಯಗಾರರ ಹುಳಿಯಾರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಆರ್.ಪಿ.ವಸಂತಯ್ಯನ ವಿಜಯೋತ್ಸವ.
ಯಳನಡು ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ವೈ.ಸಿ.ಸಿದ್ರಾಮಯ್ಯ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.