ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಹುಳಿಯಾರು ಸಮೀಪದ ಚಿಕ್ಕನಾಯಕನಹಳ್ಳಿ ಗಡಿ ಭಾಗದ ಹೋಸದುರ್ಗ ತಾಲ್ಲೂಕು ಡಿ.ಬಿ.ಕೆರೆ ಶ್ರೀಆಂಜನೇಯಸ್ವಾಮಿಯ ನೂತನ ದೇವಾಲಯದ ಕಳಸ ಸ್ಥಾಪನೆ ಹಾಗೂ ಪ್ರಾರಂಭೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಾರ್ಗಮಧ್ಯೆ ಕೆಂಕೆರೆಯ ತಾ.ಪಂ.ಸದಸ್ಯ ನವೀನ್ ಅವರ ನಿವಾಸಕ್ಕೆ ತೆರಳಿ,ಅವರ ಆತಿಥ್ಯ ಸ್ವೀಕರಿಸಿದರು. ಇಂದು ಉತ್ತಮ ಸಮಾಜ ನಿರ್ಮಾಣವಾಗಬೇಕಾದಲ್ಲಿ ಉತ್ತಮ ಮಕ್ಕಳ,ಪ್ರಜೆಗಳ ಅವಶ್ಯಕತೆಯಿದ್ದು,ಪೋಷಕರು ತಮ್ಮ ಮಕ್ಕಳಿಗೆ ಇಂದಿನಿಂದಲೇ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಮೂಲಕ ಅವರನ್ನು ಸುಸಂಸ್ಕೃತ ಪ್ರಜೆಗಳಾನ್ನಾಗಿ ರೂಪಿಸುವ ಕಾರ್ಯವಾಗಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅಭಿಪ್ರಾಯಪಟ್ಟರು. ಹುಳಿಯಾರು ಸಮೀಪದ ಚಿಕ್ಕನಾಯಕನಹಳ್ಳಿ ಗಡಿ ಭಾಗವಾದ ಹೋಸದುರ್ಗ ತಾಲ್ಲೂಕು ಮತ್ತೋಡು ಹೋಬಳಿಯ ದೊಡ್ಡಬ್ಯಾಲದಕೆರೆ ಶ್ರೀ ಆಂಜನೇಯಸ್ವಾಮಿಯ ನೂತನ ದೇವಾಲಯದ ಕಳಸ ಸ್ಥಾಪನೆ ಹಾಗೂ ಪ್ರಾರಂಭೋತ್ಸವದ ಅಂಗವಾಗಿ ಭಾನುವಾರ ನಡೆದ ಧಾರ್ಮಿಕ ಸಭೆಯ ಉದ್ಘಾಟನೆ ನೆರವೇರಿಸಿದ ಅವರು ಮಾತನಾಡಿದರು. ನಮ್ಮ ಕರ್ನಾಟಾಕ ರಾಜ್ಯ ಪುಣ್ಯಭೂಮಿ,ಧರ್ಮಭೂಮಿ,ಇಲ್ಲಿ ರಾಮನ ಪರಮ ಭಂಟ ಹನುಮಂತ ಜನಿಸಿದ್ದಾನೆ,ಇಲ್ಲಿ ಹುಟಿದ್ದ ನಾವೆಲ್ಲರೂ ಪುಣ್ಯವಂತರು ಎಂದರು.ದೇಶದ,ರಾಜ್ಯದ ಓಟ್ಟು ಭವಿಷ್ಯ ಅಲ್ಲಿನ ಮತದಾರರ ಮತದಾನದಲ್ಲಿದ್ದು, ಗಾಳಿಪಟದಂತೆ ಜನಪ್ರತಿನಿಧಿಗಳನ್ನು ಹಾರಿಸದೇ,ರಾಜ್ಯದ

ಇಂದು(ತಾ.29) ಧಾರ್ಮಿಕ ಸಭೆ

ಸಮೀಪದ ಚಿಕ್ಕನಾಯಕನಹಳ್ಳಿ ಗಡಿ ಭಾಗವಾದ ಹೋಸದುರ್ಗ ತಾಲ್ಲೂಕು ಮತ್ತೋಡು ಹೋಬಳಿಯ ದೊಡ್ಡಬ್ಯಾಲದಕೆರೆ ಶ್ರೀ ಆಂಜನೇಯಸ್ವಾಮಿಯ ನೂತನ ದೇವಾಲಯದ ಕಳಸ ಸ್ಥಾಪನೆ ಹಾಗೂ ಪ್ರಾರಂಭೋತ್ಸವದ ಅಂಗವಾಗಿ ಇಂದು (ತಾ.29) ಭಾನುವಾರ ಬೆಳಿಗ್ಗೆ ಧಾರ್ಮಿಕ ಸಭೆಯನ್ನು ಏರ್ಪಡಿಸಲಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಉದ್ಘಾಟಿಸಲಿರುವ ಧಾರ್ಮಿಕ ಸಭೆಯಲ್ಲಿ ಭೂದಿಹಾಲ್ ವಿರಕ್ತಮಠದ ಶ್ರೀ ರಾಜಶೇಖರ ಸ್ವಾಮಿಯವರು ಅಧ್ಯಕ್ಷತೆವಹಿಸಲಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿ ವಿಪುಲ್ ಬನ್ಸಾರ್,ಜಿಲ್ಲಾ ಅಧೀಕ್ಷಕ ಲಾಭುರಾಂ,ತಹಶೀಲ್ದಾರ್ ಬಾಲಕೃಷ್ಣ,ಸಿ.ಪಿ.ಐ.ರವಿಪ್ರಸಾದ್, ಪಿಎಸೈ ರಮೇಶ್ ಕುಲಕರ್ಣಿ,ಮಾಜಿ ಶಾಸಕರಾದ ಮಾಧುಸ್ವಾಮಿ,ಕೆ.ಎಸ್.ಕಿರಣ್ ಕುಮಾರ್,ಇಲ್ಕಲ್ ವಿಜಯ್ ಕುಮಾರ್,ಲೋಕಸಭಾ ಸದಸ್ಯ ಜನಾರ್ಧನಸ್ವಾಮಿ,ಎಂ.ಎಲ್,ಸಿ ನಾರಾಯಣಸ್ವಾಮಿ,ತಿಪ್ಪಾರೆಡ್ಡಿ,ಜಿಲ್ಲಾ ಪಂಚಾಯ್ತ ಸದಸ್ಯ ಪರುಶುರಾಮಪ್ಪ,ಮಾಜಿ ಸದಸ್ಯ ಜಯಣ್ಣ,ಹೊಸದುರ್ಗ ಬೆಸ್ಕಾಂನ ಎಇಓ ಡಿ.ಜಯಣ್ಣ, ರವಿ ಮಿನರಲ್ಸ್ ನ ಪುಟ್ಟಸ್ವಾಮಿ ಗೌಡ ಹಾಗೂ ಸುಶೀಲಮ್ಮನವರು,ಬಳ್ಳಾರಿ ಮೈನ್ಸ್ ನ ಶ್ರೀನಿವಾಸಲು,ರಾಜ್ ಮಿನರಲ್ಸ್ ನ ಆಶ್ವಕ್ ಅಹ್ಮದ್ಖಾನ್, ಮಾರೀಸ್ ಮೈನ್ಸ್ ನ ಪಳನಿಸ್ವಾಮಿ,ಕೌಶಿಕ್ ಬಾಬು ಸೇರಿದಂತೆ ಇತರರು ಆಗಮಿಸಲಿದ್ದಾರೆ. ಇದೇ ದಿನ ಬೆಳಿಗ್ಗೆ ಭಗೀರಥ ಪೀಠದ ಯುಗಧರ್ಮ ರಾಮಣ್ಣ ಮತ್ತು ಸಂಘಡಿಗರಿಂದ ಜಾನಪದ ತತ್ವ ಪ್ರಚಾರ ಕಾರ್ಯಕ್ರಮ ಹಾಗೂ ಸಂಜೆ ಕಂಚಿವರದರಾಜ ಸ್ವ

ಕೋಲ್ಲಾಪುರಿ ಮಹಾಲಕ್ಷ್ಮಿಯ ಜಾತ್ರೆಗೆ ಚಾಲನೆ

ಹೋಬಳಿ ಜೋಡಿತಿರುಮಾಲಾಫುರದ ಗ್ರಾಮದೇವತೆ ಶ್ರೀ ಕೋಲ್ಲಾಪುರಿ ಮಹಾಲಕ್ಷ್ಮಿಯ ಜಾತ್ರಾಮಹೋತ್ಸವ ಏ.28ರ ಶನಿವಾರ ಆಂಜನೇಯಸ್ವಾಮಿಗೆ ರುದ್ರಾಭಿಷೇಕ,ನೂರೊಂದೆಡೆ ಸೇವೆಯೊಂದಿಗೆ ಪ್ರಾರಂಭಗೊಂಡಿದ್ದು, ಮೇ.6ರಭಾನುವಾರದವರೆಗೆ ಒಂದು ವಾರಗಳ ಕಾಲ ನಡೆಯಲಿದೆ. ಏ.29, 30 ರಂದು ಅಮ್ಮನವರಿಗೆ ಹಾಗೂ ಸ್ವಾಮಿಗೆ ವಿವಿಧ ಪೂಜೆ ಕಾರ್ಯಗಳು ನಡೆಯಲಿದ್ದು,ಮೇ.1ರ ಮಂಗಳವಾರ ಬೆಳಿಗ್ಗೆ ಧ್ವಜಾರೋಹಣ ಕಾರ್ಯ,ಸಂಜೆ ಹನುಮಂತಯ್ಯನವರ ಮನೆಯಲ್ಲಿ ಅಮ್ಮನವರು ಮದುವಣಗಿತ್ತಿಯಾಗಿ ಆರತಿಬಾನದೊಂದಿಗೆ ಮೂಲಸ್ಥಾನಕ್ಕೆ ಬರುವ ಕಾರ್ಯ.ಮೇ.2ರ ಬುಧವಾರ ಹೊಸಳ್ಳಿ ಕೊಲ್ಲಾಪುರದಮ್ಮ,ಪಾಳ್ಯದ ಅಂತರಘಟ್ಟೆಯಮ್ಮ,ಹುಳಿಯಾರು ದುರ್ಗಮ್ಮನವರ ಆಗಮನದೊಂದಿಗೆ ಕೂಡು ಬೇಟಿ ನಡೆದು,ಚಂದ್ರಮೌಳೀಶ್ವರ ದೇವಾಲಯದಲ್ಲಿ ಆಗಮಿಸಿದ್ದ ದೇವರುಗಳಾನ್ನು ಬಿಜಯಂಗೈಯುವುದು.ಮೇ.3ರ ಗುರುವಾರ ಬೆಳಿಗ್ಗೆ ಕಳಸ ಸ್ಥಾಪನೆ ಹಾಗೂ ಅಮ್ಮನವರಿಗೆ ಗಂಗಾಸ್ನಾನ ನಡೆದು,ನೆಡಮುಡಿಯೊಂದಿಗೆ ಊರ ಹೊರಗಿನ ದೇವಸ್ಥಾನಕ್ಕೆ ದಯಮಾಡಿಸಿ,ನಂತರ ಅನ್ನಸಂತರ್ಪಣೆ ನಡೆಯಲಿದೆ. ಮೇ.4ರ ಶುಕ್ರವಾರ ಬೆಳಿಗ್ಗೆ 11.30ಕ್ಕೆಅಮ್ಮನವರ ಬ್ರಹ್ಮರಥೋತ್ಸವ ಜರುಗಿ,ಪಾನಕ ಪನಿವಾರ ವಿತರಣೆ ನಡೆಯಲಿದೆ.ಇದೇ ದಿನ ಸಂಜೆ ತುಮಕೂರಿನ ಜ್ಯೋತಿ ಮೆಲೋಡಿಸ್ ಅವರಿಂದ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.ಮೇ.5ರ ಶನಿವಾರ ಬೆಳಿಗ್ಗೆ ಸಿಡಿ ಉತ್ಸವ ನಡೆದು,ನಂತರ ಓಕಳಿಭಂಡಾರ ಸೇವೆ ನಡೆಯಲಿದೆ.ಮೇ.6ರ ಭಾನುವಾರ ಗ್ರಾಮದಲ್ಲಿ ಮಡಲಕ್ಕಿ ಸೇವೆ

ಸಿಡಿಲು ಬಡಿದು ಸಾವನಪ್ಪಿದ ಕುಟುಂಬದವರಿಗೆ ಶಾಸಕರಿಂದ ಒಂದೂವರೆಲಕ್ಷ ಪರಿಹಾರ

ಹುಳಿಯಾರು ಸಮೀಪದ ಬೋರನಕಣಿವೆಯಲ್ಲಿ ಸಿಡಿಲು ಬಡಿದು ಸಾವನಪ್ಪಿದ ಜಯಚಂದ್ರ ನಗರ4 ಕುಟುಂಬದವರಿಗೆ ತಲಾಒಂದೂವರೆಲಕ್ಷ ಪರಿಹಾರ ಹಣದ ಚೆಕನ್ನು ಶಾಸಕ ಸಿ.ಬಿ.ಸುರೇಶ್ ಬಾಬು ವಿತರಿಸಿದರು. ಸಮೀಪದ ಬೋರನಕಣಿವೆಯಲ್ಲಿ ಸಿಡಿಲು ಬಡಿದು ಸಾವನಪ್ಪಿದ ಜಯಚಂದ್ರ ನಗರ 4 ಕುಟುಂಬದವರಿಗೆ ತಲಾಒಂದೂವರೆಲಕ್ಷ ಪರಿಹಾರವನ್ನು ಶಾಸಕ ಸಿ.ಬಿ.ಸುರೇಶ್ ಬಾಬು ವಿತರಿಸಿದರು. ಹಿನ್ನಲೆ: ಸಮೀಪದ ಬೋರನಕಣಿವೆಯ ಹಿನ್ನೀರು ಪ್ರದೇಶದ ಬೆಳವಾಡಿ ಕೋವೆಯಲ್ಲಿ ಏ.26ರ ಗುರುವಾರ ಮಧ್ಯಾಹ್ನ ಗುಡುಗು ಸಹಿತ ಬಾರಿ ಮಳೆಯ ಪರಿಣಾಮವಾಗಿ ಉಂಟಾದ ಸಿಡಿಲಿನ ಅಘಾತಕ್ಕೆ 4 ಜನ ಸಾವನ್ನಪ್ಪಿದ್ದರು.ಘಟನೆ ಸಂಭವಿಸಿದಾಗ ಶಾಸಕರು ಬೆಂಗಳೂರಿನಲ್ಲಿದ್ದ ಕಾರಣ ಘಟನಾ ಸ್ಥಳಕ್ಕೆ ಬರಲು ಸಾಧ್ಯವಾಗಲಿಲ್ಲ,ಅದರೂ ವಿಷಯ ತಿಳಿದ ತಕ್ಷಣ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮೃತಕುಟುಂಬದವರಿಗೆ ತಲಾ ಒಂದೂವರೆಲಕ್ಷ ಪರಿಹಾರ ಕೊಡುವಂತೆ ಮನವೊಲಿಸಿದ್ದರು. ಇಂದು ಶುಕ್ರವಾರ ಜಯಚಂದ್ರ ನಗರದ ಹಾಗೂ ಖಾಸಿಂಸಾಬ್ ಪಾಳ್ಯದ ಮೃತ ಕುಟುಂಬದವರ ಮನೆಗೆ ಭೇಟಿ ನೀಡಿ,ಮೃತರ ದರ್ಶನ ಪಡೆದು, ಮೃತ ಕುಟುಂಬದವರಿಗೆ ಸಾಂತ್ವಾನ ಹೇಳಿದರು.ಇದೊಂದು ಆಕಸ್ಮಿಕ ದುರ್ಘಟನೆಯಾಗಿದ್ದು,ಪಕೃತಿಯ ವಿಕೋಪಗಳನ್ನು ಯಾರೂ ತಡೆದು ನಿಲ್ಲಿಸಲಾಗುವುದಿಲ್ಲ ಎಂದರು. ಸಾವನ್ನಪ್ಪಿದ್ದ ಗಂಗಜ್ಜ ,ಗಂಗಯ್ಯ,ಮಂಜಣ್ಣ,ಖಾಸಿಂಸಾಬ್ ಪಾಳ್ಯದ ಜಬೀವುಲ್ಲಾ ಅವರ ಕುಟುಂಬಗಳಿಗೆ ಸರ್ಕಾರದವತಿಯಿಂದ ತಲಾ ಒಂದೂವರೆಲಕ್ಷ ಪರಿಹಾರ ಹಾಗೂ ವೈಯಕ್ತಿಕ

ಬೋರನಕಣಿವೆ ಬಳಿ ಸಿಡಿಲು ಬಡಿದು 4 ಜನರ ಧಾರುಣ ಸಾವು

ಹುಳಿಯಾರು ಸೇರಿದಂತೆ ಸುತ್ತಮುತ್ತ ಗುರುವಾರ ಮಧ್ಯಾಹ್ನ ಗುಡುಗು ಸಹಿತ ಬಾರಿ ಮಳೆ ಸುರಿದ್ದಿದ್ದು, ಇದರ ಪರಿಣಾಮವಾಗಿ ಉಂಟಾದ ಸಿಡಿಲು ಬಡಿದು 4 ಜನ ಸಾವನ್ನಪ್ಪಿ,ಮೂವರಿಗೆ ಗಾಯಗಳಗಿರುವ ಘಟನೆ ಸಮೀಪದ ಬೋರನಕಣಿವೆಯ ಹಿನ್ನೀರು ಪ್ರದೇಶದ ಬೆಳವಾಡಿ ಕೋವೆಯಲ್ಲಿ ಸಂಭವಿಸಿದೆ. ಜಯಚಂದ್ರ ನಗರದ ಗಂಗಜ್ಜ (60),ಗಂಗಯ್ಯ(35),ಮಂಜಣ್ಣ(35),ಖಾಸಿಂಸಾಬ್ ಪಾಳ್ಯದ ಜಬೀವುಲ್ಲಾ(25) ಸಾವನ್ನಪ್ಪಿದ್ದು,ಹರೀಶ್,ಮಾರೇಶ್,ರಾಮಾಂಜನೇಯ್ಯ ಎಂಬುವರಿಗೆ ತೀವ್ರ ಗಾಯಗಳಾಗಿವೆ. ಘಟನೆ ವಿವರ: ಗುರುವಾರದಂದು ಬೋರನಕಣಿವೆ ಜಲಾಶಯದಲ್ಲಿ ಮೀನು ಹಿಡಿಯುವ ಸಲುವಾಗಿ ಬೆಳವಾಡಿ ಕೋವೆಯ ಬಳಿಯಿಂದ ಬಲೆ ಹಾಕಲು ಒಟ್ಟು ಏಳು ಜನ ತೆರಳಿದ್ದರು, ಮಧ್ಯಾಹ್ನ 3ರ ನೀರಿನಲ್ಲಿ ಬಲೆ ಬಿಟ್ಟು ವಾಪಸ್ ದಡ ಸೇರಿದ ಸಮಯದಲ್ಲಿ ಮಳೆ ಪ್ರಾರಂಭಗೊಂಡಿದ್ದರಿಂದ ಇವರುಗಳು ಮಳೆಯಿಂದ ತಪ್ಪಿಸಿಕೊಳ್ಳಲು ತಾವು ತೆರಳಿದ್ದ ತೆಪ್ಪಗಳನ್ನೇ ಹುಟ್ಟಿಗೆ ಒಂದಕ್ಕೋಂದು ಬೋರಲು ಹಾಕಿ ಒರಗಿಸಿ ಅದರಡಿಯಲ್ಲಿ ಎಲ್ಲರೂ ಆಶ್ರಯ ಪಡೆದಿದ್ದಾರೆ. ಮಳೆಯ ಆರ್ಭಟಕ್ಕೆ ಆ ಸಮಯದಲ್ಲಿ ಆಗಸದಲ್ಲಿ ಕಂಡ ಬಾರಿ ಸಿಡಿಲು ಇವರಿಗೆ ಬಡಿದ ಪರಿಣಾಮ ಮುಂಭಾಗದಲ್ಲಿ ಕುಳಿತಿದ್ದ ನಾಲ್ವರಲ್ಲಿ ಮೂವರು ಸ್ಥಳದಲ್ಲೇ ಮೃತಪಟರೇ, ಮತ್ತೊಬ್ಬ ಮಾರ್ಗ ಮಧ್ಯೆ ಸಾವನಪ್ಪಿದ್ದಾನೆ.ಹಿಂಭಾಗದಲ್ಲಿದ್ದ ಮೂವರಿಗೆ ಸಿಡಿಲು ಬಡಿತದಿಂದ ಪಾರಾಗಿದ್ದೂ ಅಲ್ಪ ಸ್ವಲ್ಪ ಗಾಯಗಳಾಗಿವೆ. ಅದೃಷ್ಠವಶಾತ್ ಪ್ರಾಣಾಪಾಯದಿಂದ ಪಾರಾದ ಇವರುಗಳನ್ನು ಹುಳಿಯಾರು

ಹುಳಿಯಾರಿನಲ್ಲಿ ಶಂಕರಜಯಂತಿ ಆಚರಣೆ

ಇಲ್ಲಿನ ಸೀತಾರಾಮ ಪ್ರತಿಷ್ಠಾನ ಟ್ರಸ್ಟ್ ಹಾಗೂ ವಿಪ್ರ ಮಹಿಳಾ ಸಂಘದಿಂದ ಶಂಕರರ ಜಯಂತಿಯನ್ನು ಹಾಗೂ ಸಾಮೂಹಿಕ ಉಪನಯನ ಕಾರ್ಯಕ್ರಮವನ್ನು ಪಟ್ಟಣದ ಶ್ರೀ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಆಚರಿಸಲಾಯಿತು.ಸುಬ್ರಮಣ್ಯ ಲಕ್ಷ್ಮಿ ದಂಪತಿಗಳಿಂದ ಶಂಕರಭಗವತ್ಪಾದರ ಪೂಜಾ ಕಾರ್ಯಕ್ರಮ ಸೇರಿದಂತೆ ವಿವಿಧ ಹೋಮ ಹವನಾದಿಗಳನ್ನು ನೆರವೇರಿಸಲಾಯಿತು.ಶ್ರೀ ಶಂಕರ ವಿರಚಿತ ಶಿವಾನಂದ ಲಹರಿ ಹಾಗೂ ಸೌಂದರ್ಯ ಲಹರಿ ಪಠಣ ಮಾಡಲಾಯಿತು. ಶ್ರೀ ಆದಿಶಂಕರಾಚಾರ್ಯರ ಬಗ್ಗೆ ಉಪನ್ಯಾಸ ನೀಡಲಾಯಿತು. ಇಬ್ಬರು ವಟುಗಳಿಗೆ ಉಪನಯನ ನೆರವೇರಿಸಲಾಯಿತು. ಉಚಿತ ಸಾಮೂಹಿಕ ಉಪನಯನಕ್ಕೆ ಸಹಕರಿಸಿದ ವಿಪ್ರ ಬಾಂಧವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶ್ರೀ ಸೀತಾರಾಮ ಪ್ರತಿಷ್ಠಾನದ ಗೌರವಾಧ್ಯಕ್ಷ ಹೆಚ್.ಕೆ.ಅನಂತರಾಮಯ್ಯ,ಅಧ್ಯಕ್ಷ ನರೇಂದ್ರಬಾಬು,ಕಾರ್ಯದರ್ಶಿ ವಿಶ್ವನಾಥ್,ಎಂ.ಎ.ಲೋಕೇಶ್, ರಂಗನಾಥ್ ಪ್ರಸಾದ್,ಹೆಚ್,ಎಸ್,ಲಕ್ಷ್ಮಿ ನರಸಿಂಹಯ್ಯ ಸೇರಿದಂತೆ ಸಮಾಜ ಭಾಂದವರು ಭಾಗವಹಿಸಿದ್ದರು.

ಕೆಂಕೆರೆ ಚನ್ನಬಸವೇಶ್ವರ ಸ್ವಾಮಿ ಜಾತ್ರೆಗೆ ತೆರೆ

ಹುಳಿಯಾರು ಹೋಬಳಿ ಕೆಂಕೆರೆಯ ಶ್ರೀ ಚನ್ನಬಸವೇಶ್ವರ ಸ್ವಾಮಿಯ ಯ ರಥೋತ್ಸವದಲ್ಲಿ ಸೇರಿದ್ದ ನೂರಾರು ಮಂದಿ ಭಕ್ತರು ತೆರನ್ನೇಳೆಯುತ್ತಿರುವುದು. ಹೋಬಳಿ ಕೆಂಕೆರೆ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀ ಚನ್ನಬಸವೇಶ್ವರ ಸ್ವಾಮಿಯ ಯ ರಥೋತ್ಸವ ಏ.24 ರ ಮಂಗಳವಾರ ಮಧ್ಯಾಹ್ನ ನೂರಾರು ಜನರ ಸಮ್ಮುಖದಲ್ಲಿ ನಡೆದ ಮೂರು ದಿನದ ಜಾತ್ರೆಗೆ ತೆರೆ ಹಾಕಲಾಯಿತು.. ರಥೋತ್ಸವದ ಅಂಗವಾಗಿ ಏ.21ರ ಶನಿವಾರ ಸ್ವಾಮಿಯವರ ಧ್ವಜಾರೋಹಣದೊಂದಿಗೆ ಪ್ರಾರಂಭಗೊಂಡು,ಏ.22ರ ಭಾನುವಾರ ಸ್ವಾಮಿಯ ಮೂಲಸ್ಥಾನವಾದ ಕೆಂಕೆರೆಯಿಂದ 3 ಕಿ.ಮೀ.ದೂರದ ಪುರದಮಠಕ್ಕೆ ಸ್ವಾಮಿ ಸೇರಿದಂತೆ ಗ್ರಾಮದೇವತೆ ಲೋಕಮಾತೆ ಕಾಳಮ್ಮ ,ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ,ಗೌಡಗೆರೆ ದುರ್ಗಮ್ಮ ದೇವಿಯವರೊಂದಿಗೆ ಕಾಲ್ನೆಡಿಗೆಯಲ್ಲಿ ಹೋಗಿ,ನಂತರ ಏ.೨೩ರ ಸೋಮವಾರ ಬೆಳಗಿನ ಝಾವ ಸ್ವಾಮಿಯ ಗಂಗಾಪ್ರವೇಶ,ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾಕಾರ್ಯಗಳು ಹಾಗೂ ಪ್ರಸಾದ ವಿನಿಯೋಗ ನಡೆದು,ಅದೇ ದಿನ ಕೆಂಕೆರೆ ಗ್ರಾಮಕ್ಕೆ ಆಗಮಿಸಿದ ಸ್ವಾಮಿಯನ್ನು ನೆಡಮುಡಿಯೊಂದಿಗೆ ದೇವಾಲಯಕ್ಕೆ ಕರೆತರಲಾಯಿತು.ಏ.24 ರ ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಮಹದೇವಮ್ಮ ಮತ್ತು ಚನ್ನಬಸವಯ್ಯ,ಈಶ್ವರಪ್ಪ ನವರಿಂದ ರಥಕ್ಕೆ ಪುಣ್ಯದ ಕಾರ್ಯ ನಂತರ ಕಳಸ ಸ್ಥಾಪನೆ ನಡೆಸಿ,ನಂತರ ಸ್ವಾಮಿಯನ್ನು ಧ್ವಜದ ಕುಣಿತದೊಂದಿಗೆ ಕರೆತಂದು,ರಂಗುರಂಗಿನ ಬಾವುಟ,ಎಳನೀರ ಗೊಂಚಲು,ಬಾಳೆಗೊನೆ ಹಾಗೂ ವಿವಿಧ ಮಾದರಿಯ ಹಾರಗಳಿಂದ ಶೃಂಗರಿಸಿದ್ದ ರಥಕ್ಕೆ ಸ್ವಾ

ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯಿಂದ ವಿಧಾನ ಸೌಧ ಮುತ್ತಿಗೆ

ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯಿಂದ ತಾ.25ರ ಬುಧವಾರ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರಂಗವಾಗಿ ಹೋಬಳಿಯ ಪರಿವೀಕ್ಷಣ ಮಂದಿರದಲ್ಲಿ ನಡೆದ ಪತ್ರಿಕಾ ಬೇಟಿಯಲ್ಲಿ ಹಾಜರಿದ್ದ ರೈತಸಂಘ ಹಾಗೂ ಹಸಿರು ಸೇನೆಯವರು. ರಾಜ್ಯದಲ್ಲಿ ಮಳೆಯ ಅಭಾವದಿಂದಾಗಿ ಭೀಕರ ಬರಗಾಲ ಉಂಟಾಗಿದ್ದು,ಜನ,ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ,ಆಹಾರ,ಮೇವಿನ ಕೊರತೆಯುಂಟಾಗಿರುವುದ ಜೊತೆಗೆ ಕೃಷಿ ಮಾಡಲು ನೀರಿನ ಸೌಲಭ್ಯವಿಲ್ಲದೆ ಕಂಗಾಲಾಗಿರುವ ರೈತರು ದನಕರುಗಳನ್ನು ಖಸಾಯಿಖಾನೆಗೆ ಕೊಟ್ಟು, ತಮ್ಮ ಪ್ರದೇಶಗಳನ್ನು ತೊರೆದು ಗುಳೆ ಹೋಗುತ್ತಿದ್ದರೂ ಸಹ ಸರ್ಕಾರ ಇದರ ಕಡೆ ಗಮನ ಹರಿಸಿಲ್ಲ,ನಮ್ಮ ರೈತರ ಸಮಸ್ಯೆಗಳನ್ನು ಸರ್ಕಾರದ ಮುಂದಿಡುವ ನಿಟ್ಟಿನಲ್ಲಿ ವಿಧಾನ ಸೌಧಕ್ಕೆ ಮುತ್ತಿಗೆಗೆ ಹಾಕುವುದಾಗಿ ಜಿಲ್ಲಾ ಹಸಿರು ಸೇನೆಯ ಕೆಂಕೆರೆ ಸತೀಶ್ ತಿಳಿಸಿದರು. ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯಿಂದ ತಾ.25ರ ಬುಧವಾರ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಹಿನ್ನಲೆಯಲ್ಲಿ ಹೋಬಳಿಯ ಪರಿವೀಕ್ಷಣ ಮಂದಿರದಲ್ಲಿ ನಡೆದ ಪತ್ರಿಕಾ ಬೇಟಿಯಲ್ಲಿ ಅವರು ತಿಳಿಸಿದರು. ರೈತರ ಸಂಕಷ್ಟವನ್ನು ತಿಳಿಯದ ಮುಖ್ಯಮಂತ್ರಿಗಳು ತಮ್ಮ ಖುರ್ಚಿಯನ್ನು ಬಲಪಡಿಸಿಕೊಳ್ಳುವಲ್ಲಿ ಮಗ್ನರಾಗಿದ್ದಾರೆ,ಅಲ್ಲದೆ ಕೃಷಿಗೆ ಸಂಬಂಧಿಸಿದ ನೀರಾವರಿ,ತೋಟಗಾರಿಕೆ,ವಿದ್ಯುತ್ ಚ್ಚಕ್ತಿ ವಿಭಾಗದ ಮಂತ್ರಿಗಳು ಉತ್ತಮ ಕಾರ್ಯ ಮಾಡುವಲ್ಲಿ ವಿಫಲಾವಾಗಿ

ಆಯ್ಕೆ

ರಾಜ್ಯಾದ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರ್ತಿಸಿ,ಅವರಿಗೆ ಉಚಿತ ವಿದ್ಯಾಭ್ಯಾಸ ನೀಡುವ ಧ್ಯೇಯಹೊಂದಿರುವ ರಾಷ್ಟ್ರೋತ್ತಾನ ಪರಿಷತ್ ಉಚಿತ ಪಿಯು ವಿಧ್ಯಾಭ್ಯಾಸಕ್ಕಾಗಿ 10ನೇ ತರಗತಿ ಮಕ್ಕಳಿಗೆ ನಡೆಸಿದ ಪ್ರತಿಭಾನೇಶ್ವಷಣಾ ಪರೀಕ್ಷೆಯಲ್ಲಿ ಹೋಬಳಿಯ ವಾಸವಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ದೊಡ್ಡಬಿದರೆಯ ಡಿ.ಆರ್.ಚಂದ್ರಶೇಖರ್ ಕಳೆದ ತಿಂಗಳಲ್ಲಿ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ಮೂಲಕ ಉಚಿತ ಪಿಯು ಶಿಕ್ಷಣಕ್ಕೆ ಆಯ್ಕೆಯಾಗಿದ್ದಾನೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು,ಈತ ಮಾತ್ರ ತೇರ್ಗಡೆಯಾಗಿದ್ದಾನೆ.ಅಲ್ಲದೆ ಆಯ್ಕೆಯಾದವರಿಗೆ ಬೆಂಗಳೂರಿನಲ್ಲಿ 2 ವರ್ಷಗಳ ಕಾಲ ಉಚಿತ ವಿಧ್ಯಾಭ್ಯಾಸದ ಜೊತೆಗೆ ಊಟ,ವಸತಿ ಸೌಲಭ್ಯವನ್ನು ರಾಷ್ಟ್ರೋತ್ತಾನ ಪರಿಷತ್ ನವರೆ ಒದಗಿಸಿಕೊಡುತ್ತಾರೆ. ಆಯ್ಕೆಯಾದ ವಿದ್ಯಾರ್ಥಿಯನ್ನು ಶಾಲೆಯ ಶಿಕ್ಷಕರು,ಪೋಷಕರು ಅಬಭಿನಂದಿಸಿದರು.
ಹುಳಿಯಾರು ಸಮೀಪದ ಹೊಸಳ್ಳಿಯ ಶ್ರೀಆಂಜನೇಯಸ್ವಾಮಿ ಹಾಗೂ ಶ್ರೀಕೊಲ್ಲಾಪುರದಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಅಗ್ನಿಕೊಂಡೊತ್ಸವ ಕಾರ್ಯ. ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಗ್ರಾಮದೇವತೆ ಶ್ರೀಕಾಳಿಕಾಂಬದೇವಿಯ ಜಾತ್ರಾಮಹೋತ್ಸವದ ಸಿಡಿ ಕಾರ್ಯಕ್ರಮ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು .
ಹುಳಿಯಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು ವರ್ಷಗಳ ಕಾಲದ ಹಳೆಯದಾದ ಕ್ಷಕಿರಣ ಯಂತ್ರ ಸರಿಯಾದ ನಿರ್ವಹಣೆಯಿಲ್ಲದೆ ಹಾಗೂ ಕೆಲವು ತಿಂಗಳುಗಳಿಂದ ರಿಪೇರಿಯಾದೇ ಧೂಳತ್ತಿ ಹೋಗಿದೆ
ಮಡಲಕ್ಕಿ ಸೇವೆಯೊಂದಿಗೆ ದುರ್ಗಮ್ಮನ ಜಾತ್ರೆಗೆ ತೆರೆ ಇಲ್ಲಿನ ಗ್ರಾಮದೇವತೆ ದುರ್ಗಾಪರಮೇಶ್ವರಿದೇವಿಯ 42ನೇ ವರ್ಷದ ಜಾತ್ರಾಮಹೋತ್ಸವಕ್ಕೆ ಭಾನುವಾರ ಗ್ರಾಮಸ್ಥರಿಂದ ಮಡಲಕ್ಕಿ ಸೇವೆ ಕಾರ್ಯ ನಡೆಯುವ ಮೂಲಕ ತಾ.7ರ ಶನಿವಾರ ರಿಂದ ತಾ.14ರ ಶನಿವಾರವರೆಗೆ ನಡೆದ ಎಂಟು ದಿನಗಳ ಕಾಲದ ಜಾತ್ರೆಗೆ ತೆರೆ ಎಳೆಯಲಾಗಿದೆ. ಜಾತ್ರೆಯುದ್ದಕ್ಕೂ ಪ್ರತಿನಿತ್ಯ ವಿವಿಧ ಪೂಜೆ, ಧಾರ್ಮಿಕ ಕೈಂಕರ್ಯಗಳನ್ನು ಕೈಗೊಂಡಿದ್ದು, ನೂರಾರು ಭಕ್ತರು ಆಗಮಿಸಿದ್ದರು. ತಾ.8ರ ಭಾನುವಾರ ಕಾಮಶೆಟ್ಟಿಪಾಳ್ಯ,ಸೋಮಜ್ಜನಪಾಳ್ಯದಲ್ಲಿ ಮಡಲಕ್ಕಿ ಸೇವೆ ನಡೆದು,ತಾ.9ರ ಸೋಮವಾರ ಅಮ್ಮನವರಿಗೆ ಎಡೆಸೇವೆ,ಧ್ವಜಾರೋಹಣ ಮತ್ತು ಅಂಕುರಾಪಣೆ ಕಾರ್ಯಗಳು ಹಾಗೂ ತಾ.10ರ ಮಂಗಳವಾರ ಆರತಿಬಾನ,ಎಡೆಸೇವೆ,ತಾ.11ರ ಬುಧವಾರ ರಾತ್ರಿ ಹುಳಿಯಾರಮ್ಮ,ಕೆಂಚಮ್ಮ,ಹೊಸಳ್ಳಿ ಕೊಲ್ಲಾಪುರದಮ್ಮ,ಗೌಡಗೆರೆ ದುರ್ಗಮ್ಮ,ತಿರುಮಲಾಪುರದ ಕೊಲ್ಲಾಪುರದಮ್ಮ ದೇವರುಗಳ ಆಗಮನದೊಂದಿಗೆ ಕೂಡು ಭೇಟಿ ಕಾರ್ಯ , ತಾ.12ರ ಗುರುವಾರ ಬೆಳಗಿನ ಜಾವ ಕಳಸ ಸ್ಥಾಪನೆ ಹಾಗೂ ಕಳಸೋತ್ಸವ ಹಾಗೂ ರಾತ್ರಿ ಅಮ್ಮನವರ ಉಯ್ಯಾಲೆ ಉತ್ಸವ ನಡೆದು, ತಾ.13ರ ಶುಕ್ರವಾರ ಬೆಳಿಗ್ಗೆಯಿಂದ ನಾಗರಾಜು ಅರ್ಚಕರ ನೇತೃತ್ವದಲ್ಲಿ ದುರ್ಗಾಹೋಮ,108 ತೆಂಗಿನಕಾಯಿ ಗಣಹೋಮ, ಕಲಾವೃದ್ದಿ ಹೋಮದೊಂದಿಗೆ ಪುರ್ಣಾಹುತಿ ಕಾರ್ಯ ಹಾಗೂ ಮಧ್ಯಾಹ್ನ ಅಮ್ಮನವರ ಬ್ರಹ್ಮರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.ಅಲ್ಲದೆ ದೇವಿಮಹಾತ್ಮೆ ಸಂಘದವರು ದೇವಿಮಹಾತ್ಮೆ

ಬಿಎಂಎಸ್ ಕಾಲೇಜಿನ ಬಿಬಿಎಂ ವಿದ್ಯಾರ್ಥಿಗಳಿಂದ ಸಂತೋಷಕೂಟ ಆಚರಣೆ

ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಬಿಎಂನ ನಿಸರ್ಗ ತಂಡದ ವಿದ್ಯಾರ್ಥಿಗಳು ಆಯೋಜಿಸಿದ್ದ ಸೊಷಿಯಲ್ ಡೇ ಸಮಾರಂಭದಲ್ಲಿ ಹಿರಿಯ ಉಪನ್ಯಾಸಕ ಆರ್.ಮೂಗೇಶಪ್ಪ ಅವರಿಗೆ ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು.ಪ್ರಾಚಾಯ್ರ ಎಂ.ಎನ್.ನಾಗರಾಜು ಹಾಗೂ ಇತರ ಉಪನ್ಯಾಸಕರಿದ್ದಾರೆ. ಪಟ್ಟಣದ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಬಿಎಂ ವಿದ್ಯಾರ್ಥಿಗಳು 2011-12 ನೇ ಸಾಲಿನ ಸೊಷಿಯಲ್ ಡೇ ಸಂತೋಷಕೂಟ ಸಮಾರಂಭವನ್ನು ವಿಶಿಷ್ಟವಾಗಿ ಆಚರಿಸಿದರು. ಪ್ರಾಂಶುಪಾಲರಾದ ಎಂ.ಎಸ್.ನಾಗರಾಜು ಸಮಾರಂಭದ ಉದ್ಘಾಟನೆ ನೆರವೇರಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಹಿರಿಯ ಉಪನ್ಯಾಸಕರಾದ ಪ್ರೋ.ಆರ್.ಮೂಗೇಶಪ್ಪ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು. ಸಮಾರಂಭದಲ್ಲಿ ಎಂ.ಎನ್.ನಾಗರಾಜು ಹಾಗೂ ಮೂಗೇಶಪ್ಪ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಉಪನ್ಯಾಸಕರು ಹಾಗೂ ಎನ್,ಎಸ್,ಎಸ್,ಅಧಿಕಾರಿ ಶಂಕರಲಿಂಗಯ್ಯ,ಇಬ್ರಾಹಿಂ,ಶ್ರೀನಿವಾಸ್ ಸೇರಿದಂತೆ ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ಸಿಬ್ಬಂದಿಯವರು ಹಾಜರಿದ್ದರು.ಕುಮಾರಿ ಸುಷ್ಮಾ ನಿರೂಪಿಸಿ,ವಂದಿಸಿದರು.

ಪೋಟೊ ಕ್ಯಾಪ್ಷನ್

ಹುಳಿಯಾರು ಗ್ರಾಮದೇವತೆ ಶ್ರೀ ದುರ್ಗಮ್ಮ ದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಶನಿವಾರ ನಡೆದ ಸಿಡಿ ಮಹೋತ್ಸವದಲ್ಲಿ ಬಿಸಿಲನ್ನು ಲೆಕ್ಕಿಸಿದೆ ನೆರೆದಿದ್ದ ನೂರಾರು ಭಕ್ತಾಧಿಗಳು. ತುಮಕೂರು ವಿಶ್ವವಿದ್ಯಾನಿಲಯ ತನ್ನ ಹಳೆಯ ಲಾಂಛನವನ್ನು ಬದಲಿಸಿರುವುದನ್ನು ಹುಳಿಯಾರಿನ ವಿದ್ಯಾರ್ಥಿ ಸಂಘದವರು ಖಂಡಿಸಿದ್ದು, ಸುಮಾರು 250ಕ್ಕೂ ಹೆಚ್ಚು ಅಂಚೆ ಕಾಗದಗಳಲ್ಲಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿ ಅಂಚೆ ಮೂಲಕ ರಾಜ್ಯಪಾಲರಿಗೆ ಕಳುಹಿಸಿದರು.

ಎಬಿವಿಪಿಯಿಂದ ಅಂಬೇಡ್ಕರ್ ರ 121ನೇ ಜಯಂತಿ ಆಚರಣೆ

ಹೋಬಳಿಯ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನ ಕಾರ್ಯಕರ್ತರು ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಶನಿವಾರ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ 121ನೇ ಜನ್ಮ ದಿನಾಚರಣೆಯನ್ನು ಆಚರಿಸಿದರು. ಈ ಸಂಧರ್ಭದಲ್ಲಿ ಎಬಿವಿಪಿ ಹೋಬಳಿ ಘಟಕದ ಅಧ್ಯಕ್ಷ ನರೇಂದ್ರಬಾಬು ಮಾತನಾಡಿ, ಸಮಾಜದಲ್ಲಿ ಸಮಾನತೆನ್ನು ತಂದು ಜಾತ್ಯಾತೀತತೆಯನ್ನು ಹೋಗಲಾಡಿಸಿ,ಅಸಮಾನತೆಯನ್ನು ತೊಲಗಿಸಲು ಅಂಬೇಡ್ಕರ್ ಹಾಕಿದ ಶ್ರಮದ ಪ್ರತಿಫಲವೇ ನಮ್ಮ ಸಂವಿಧಾನವಾಗಿದೆ. ಸಂವಿಧಾನ ರಚನೆ ಕಾರ್ಯದಲ್ಲಿ ಅನೇಕ ಎಡರು ತೊಡರುಗಳನ್ನು ಅನುಭವಿಸಿ,ಹಲವು ದೇಶಗಳ ಸಂವಿಧಾನಗಳನ್ನು ಅಭ್ಯಾಸಿಸಿ,ಭಾರದ ಬೃಹತ್ ಸಂವಿಧಾನವನ್ನು ರಚಿಸುವ ಮೂಲಕ ಸಂವಿಧಾನದ ಶಿಲ್ಪಿ ,ನೇತಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಅವರೇ ಡಾ ಬಿ.ಆರ್.ಅಂಬೇಡ್ಕರ್.ಇವರು ಹಾಕಿ ಕೊಟ್ಟಿರುವ ಸಂವಿಧಾನದ ಮಾರ್ಗವನ್ನು ಸರಿಯಾಗಿ ಉತ್ತಮ ರೀತಿಯಲ್ಲಿ ಅನುಸರಿಸಿಕೊಂಡು ಹೋಗಬೇಕಾದ್ದು ಭಾರತೀಯರಾದ ನಮ್ಮೆಲರ ಹೊಣೆಯಾಗಿದೆ ಎಂದರು. ಟಿಪ್ಪುಸಂಘದ ಉಪಾಧ್ಯಕ್ಷ ಅಪ್ಸರ್ ಅಲಿ ಮಾತನಾಡಿ ರಾಷ್ಟ್ರದಲ್ಲಿ ಸಮಾನತೆಯನ್ನು ತರುವ ದೃಷ್ಠಿಯಿಂದ ಹಾಗೂ ಜನರಲ್ಲಿ ತಾವೆಲ್ಲ ಒಂದೇ, ನಮ್ಮಲ್ಲಿ ಯಾವುದೇ ಭೇದ ಭಾವವಿಲ್ಲ ಎಂಬ ಮನೋಭಾವವನ್ನು ಮೂಡಿಸುವ ನಿಟ್ಟಿನಲ್ಲಿ , ಅಂದಿನ ಕಾಲದಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ಸಮಾಜದಿಂದ ಕಿತ್ತೆಸೆಯಲು ಮುಂದಾದ ಅಂಬೇಡ್ಕರ್ ಪ್ರಪಂಚದಲ್ಲೇ ಉತ್ತಮವಾದ ಲಿಖಿತ ಸಂವಿಧಾನವನ್ನು ಜಾರಿಗೆತಂದಿದ್ದಾರೆ.ಅಂಬೇ

ದುರ್ಗಾ ಹಾಗೂ ಕಲಾವೃದ್ದಿ ಹೋಮ

ಹುಳಿಯಾರು ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಿಯ ಬ್ರಹ್ಮ ರಥೋತ್ಸವದ ಅಂಗವಾಗಿ ಶುಕ್ರವಾರ ರಥೋತ್ಸವಕ್ಕೂ ಮುನ್ನ ನಡೆದ ದುರ್ಗಾ ಹಾಗೂ ಕಲಾವೃದ್ದಿ ಹೋಮದ ಪೂರ್ಣಾಹುತಿ ಕಾರ್ಯದ ಒಂದು ನೋಟ.

ಹುಳಿಯಾರು ದುರ್ಗಮ್ಮನ ತೇರನ್ನೆಳೆದ ಭಕ್ತಾಧಿಗಳ ಮೊಗದಲ್ಲಿ ಸಂತಸ

ಹುಳಿಯಾರು ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಿಯ ಬ್ರಹ್ಮ ರಥೋತ್ಸವ ಸೂರಾರು ಭಕ್ತರ ಹರ್ಷೊದ್ಗಾದ ನಡುವೆ ಸಡಗರ ಸಂಭ್ರಮದಿಂದ ನಡೆಯಿತು. ಹುಳಿಯಾರು ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ 42 ನೇ ವರ್ಷದ ರಥೋತ್ಸವವು ಅಸಂಖ್ಯಾತ ಭಕ್ತರ ಉಪಸ್ಥಿತಿಯಲ್ಲಿ ವಿವಿಧ ಗ್ರಾಮದೇವತೆಗಳ ಸಮ್ಮುಖದಲ್ಲಿ ವೇದ ಮಂತ್ರ ಘೋಷಗಳ ನಾದದಲ್ಲಿ ಸಡಗರ ಹಾಗೂ ಸಂಭ್ರಮದಿಂದ ಶುಕ್ರವಾರದಂದು ಯಶಸ್ವಿಯಾಗಿ ಜರುಗಿತು. ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ಧಾರ್ಮಿಕ ವಿಧಿವಿಧಾನಗಳು ಹಾಗೂ ಪೂಜಾಕೈಂಕರ್ಯಗಳು ಶಾಸ್ತ್ರೋಕ್ತವಾಗಿ ನಡೆಯಿತು.ಉತ್ತರ ಕರ್ನಾಟಕದ ತೆಕ್ಕಟೆಯ ಅರ್ಚಕರಾದ ನಾಗರಾಜು ಮತ್ತು ತಂಡದವರು ದುರ್ಗಾಹೋಮ,೧೦೮ ತೆಂಗಿನ ಕಾಯಿ ಗಣಹೋಮ,ಕಲಾವೃದ್ದಿಹೋಮಗಳನ್ನು ನೆರವೇರಿಸಿದರು. ಮಂಗಳವಾಧ್ಯದೊಂದಿಗೆ ಶ್ರೀ ದುರ್ಗಾಪರಮೇಶ್ವರಿ ದೇವಿಯು ಮೂಲ ದೇವತೆಗೆ ವಿಶೇಷ ಪೂಜೆ ಸಲ್ಲಿಸಿ ಗ್ರಾಮದೇವತೆ ಹುಳಿಯಾರಮ್ಮ,ತಿರುಮಲಾಪುರದ ಕೊಲ್ಲಾಪುರದಮ್ಮ,ಗೌಡಗೆರೆಯ ದುರ್ಗಮ್ಮ,ಹೊಸಹಳ್ಳಿಯ ಕೊಲ್ಲಾಪುರದಮ್ಮ ಹಾಗೂ ಹುಳಿಯಾರಿನ ಕೆಂಚಮ್ಮನವರೊಂದಿಗೆ ಭೇಟಿ ಮಾಡಿಸಿ,ದೇವಾಲಯವನ್ನು ಒಂದು ಸುತ್ತು ಪ್ರದಕ್ಷಣೆ ಮಾಡಿಸಿ, ಭಕ್ತಾಧಿಗಳ ಉದ್ಘೋಷದೊಂದಿಗೆ ಕರೆತಂದು ರಂಗು ರಂಗಿನ ಬಾವುಟಗಳು, ತಳಿರು ತೋರಣಗಳು ಹಾಗೂ ಹೂವಿನ ಹಾರಗಳಿಂದ ಸರ್ವಾಲಂಕೃತಗೊಂಡ ರಥಕ್ಕೆ ದುರ್ಗಾಪರಮೇಶ್ವರಿ ಅಮ್ಮನವರನ್ನು ಏರಿಸಲಾಯಿತು.ಮದ್ಯಾಹ್ನ 2 ಗಂಟೆಗೆ ರಥಕ್ಕೆ ಕಾಯಿ ಒಡೆಯುವ ಮೂಲಕ ಹಾಗೂ ವಿಶೇಷ ಪೂ

ಸ್ವಾತಂತ್ರ ಹೋರಾಟಗಾರ ಹುಳಿಯಾರ್ ನಂಜುಂಡಪ್ಪ ನಿಧನ

ಹುಳಿಯಾರ್ ನಂಜುಂಡಪ್ಪ ಅವರ ಭಾವಚಿತ್ರ. ಪಟ್ಟಣದ ಶಂಕರಪುರ ಬಡಾವಣೆಯಲ್ಲಿನ ಸ್ವಾತಂತ್ರ ಹೋರಾಟಗಾರ ಹುಳಿಯಾರ್ ನಂಜುಂಡಪ್ಪ(೯೬) ಕೆಲ ತಿಂಗಳುಗಳಿಂದ ಆನಾರೋಗ್ಯದ ಬಳಲುತ್ತಿದ್ದು ಬುಧವಾರ ರಾತ್ರಿ ೯ರ ಸಮಯದಲ್ಲಿ ವಿಧಿವಶರಾಗಿದ್ದಾರೆ. ಶ್ರೀಯುತರು ೧೯೪೭ರ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದಲ್ಲದೆ ಹಲವು ಬಾರಿ ಸೆರಮನೆವಾಸ ಅನುಭವಿಸಿದ್ದರು.ಅಲ್ಲದೆ ೧೯೬೨ರಲ್ಲಿ ಮೈಸೂರು ಪ್ರದೇಶ ಕಾಂಗ್ರೇಸ್ ನ ಸೇವಾದಳ ಶಿಬಿರದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದವರು.೧೯೯೬-೯೭ರಲ್ಲಿ ತುಮಕೂರಿನಲ್ಲಿ ನಡೆದ ೪೮ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಇವರನ್ನು ಸತ್ಮಾನಿಸಲಾಗಿದೆ.ಮೃತರು ಮಡದಿ,ಮಕ್ಕಳು ಹಾಗೂ ಮೊಮ್ಮಕಳನ್ನು ಆಗಲಿದ್ದಾರೆ.ಗ್ರಾಮ ಪಂಚಾಯ್ತಿ ಸದಸ್ಯರು,ಬಸ್ ಏಜೆಂಟರ್ ಸೆರಿದಂತೆ ವಿವಿಧ ಸಂಘಸಂಸ್ಥೆಯವರು ಮೃತರ ಅಂತಿಮ ದರ್ಶನ ಪಡೆದು ಮನೆಯವರಿಗೆ ಸಾಂತ್ವಾನ ಹೇಳಿದರು.

ಕ್ರಿಯಾತ್ಮಕ ಯೋಜನೆಗಳ ಮೂಲಕ ಪರಿಷತ್ತಿನ ಏಳ್ಗೆಗೆ ದುಡಿಯಲು ತಾನು ಸದಾ ಸಿದ್ದ : ಪ್ರೋ. ಚಂಪಾ

ಹುಳಿಯಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ನ ತ.ಶಿ.ಬಸವಮೂರ್ತಿ ಅವರ ಮನೆಗೆ ಆಗಮಿಸಿದ್ದ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷರಾದ ಚಂಪಾ ಅವರೊಂದಿಗೆ ಹೋಬಳಿ ಘಟಕದ ಸದಸ್ಯರುಗಳು. ಮೇ 15,2014 ಕ್ಕೆ ಪರಿಷತ್ ಶತಮಾನೋತ್ಸವಕ್ಕೆ ಕಾಲಿಡುತ್ತಿದ್ದು,ತನಗೆ ಮತ್ತೊಂದು ಸಲ ಪರಿಷತ್ತಿನ ಅಧ್ಯಕ್ಷತೆಯ ಜವಬ್ದಾರಿ ನೀಡಿದಲ್ಲಿ ಪರಿಷತಿಗೆ ಗಟ್ಟಿಯಾದ ಆರ್ಥಿಕ ಬುನಾದಿ ಹಾಕುವುದಲ್ಲದೆ,ಅನೆಕ ಕ್ರಿಯಾತ್ಮಕ ಯೋಜನೆಗಳ ಮೂಲಕ ಪರಿಷತ್ತಿನ ಏಳ್ಗೆಗೆ ದುಡಿಯಲು ತಾನು ಸದಾ ಸಿದ್ದ ಎಂದು ಚಂಪಾ ಹುಳಿಯಾರಿನಲ್ಲಿ ಘೋಷಿಸಿದರು. ಇದೇ ತಿಂಗಳ 29ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಮಾಜಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ ಅವರು ಚುನಾವಣ ಪ್ರಚಾರಕ್ಕಾಗಿ ಕರ್ನಾಟದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು,ಈ ಹಿನ್ನಲೆಯಲ್ಲಿ ಗುರುವಾರ ಹುಳಿಯಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ನ ಬಸವಮುರ್ತಿಯವರ ಮನೆಯಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮೇಲ್ಕಂಡಂತೆ ನುಡಿದರು. ಅವರು ಹೇಳಿದಿಷ್ಟು:- ಕನ್ನಡ ನಾಡು ನುಡಿ ಕಟ್ಟುವ ಕಾರ್ಯ ಆಗಬೆಕಿದ್ದು,ಅದಕ್ಕಾಗಿ ಎಲ್ಲರ ಶ್ರಮ ಅತ್ಯಗತ್ಯವಾಗಿದೆ.ವಾಸ್ತವವಾಗಿ ನೋಡಿದರೆ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಸಹ ಕನ್ನಡ ಸಾಹಿತ್ಯ ಪರಿಷತ್ ಗೆ ಯಾವುದೇ ರೀತಿಯ ಅನುದಾನಗಳನ್ನು ಕಡಿಮೆ ಮಾಡಿಲ್ಲ,ಆದರೆ ಅದನ್ನು ಕೇಳಿ ಪಡೆಯಬೇಕಿದೆ.ಅಂತಹ ಕಾರ್ಯ ಕನ್ನಡ ಸಾಹಿತ್ಯ

ಎನ್.ಎಸ್.ಎಸ್ ಶಿಬಿರದ ವಿಡಿಯೋ ಸಿ.ಡಿ.ಬಿಡುಗಡೆ

ಹುಳಿಯಾರ್-ಕೆಂಕೆರೆ ಬಿ.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೧೧-೧೨ನೇ ಸಾಲಿನ ಎನ್.ಎಸ್.ಎಸ್ ಸೇವಾ ಶಿಬಿರದ ಪ್ರತಿನಿತ್ಯದ ಕಾರ್ಯ ವೈಖರಿಗಳನ್ನೊಳಗೊಂಡ ವಿಡಿಯೋ ಸಿ.ಡಿ ಯನ್ನು ಕಾಲೇಜಿನ ಪ್ರಾಚಾರ್ಯ ಎಂ.ಎನ್.ನಾಗರಾಜ್ ಬಿಡುಗಡೆ ಮಾಡಿದರು. ಇಲ್ಲಿನ ಬಿ.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೧೧-೧೨ನೇ ಸಾಲಿನ ಎನ್.ಎಸ್.ಎಸ್ ಸೇವಾ ಶಿಬಿರವನ್ನು ನಂದಿಹಳ್ಳಿಯಲ್ಲಿ ಹಮ್ಮಿಕೊಂಡಿದ್ದು,ಶಿಬಿರದ ಪ್ರತಿನಿತ್ಯದ ಕಾರ್ಯ ವೈಖರಿಗಳು ಹಾಗೂ ಶಿಬಿರಾರ್ಥಿಗಳನ್ನು ಕೈಗೊಂಡಿದ್ದ ಕೆಲಸಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಪೂರ್ಣ ಚಿತ್ರಣವನ್ನೊಳಗೊಂಡ ವಿಡಿಯೋ ಸಿ.ಡಿ ಯನ್ನು ಕಾಲೇಜಿನ ಪ್ರಾಚಾರ್ಯ ಎಂ.ಎನ್.ನಾಗರಾಜ್ ಬಿಡುಗಡೆ ಮಾಡಿದರು. ವಿಡಿಯೋ ಸಿ.ಡಿ ಬಿಡುಗಡೆ ಮಾಡಿ ಮಾತನಾಡಿದ ಅವರು,ಈ ಸಿಡಿಯು ಎನ್.ಎಸ್.ಎಸ್ ಶಿಬಿರದಲ್ಲಿ ಶಿಬಿರಾರ್ಥಿಗಳ, ಶಿಬಿರಾಧಿಕಾರಿಗಳ ಹಾಗೂ ಶಿಬಿರಕ್ಕೆ ಆಗಮಿಸಿದ್ದ ಅತಿಥಿಗಳ ಅನುಭವಗಳಾನ್ನು ಶಾಶ್ವತವಾಗಿರಿಸುವುದರ ಜೊತೆಗೆ ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಮಾರ್ಗದರ್ಶಕವಾಗಿದೆ ಎಂದರು. ಸಮಾರಂಭ ಉದ್ಘಾಟಿಸಿದ ಕನ್ನಡ ಉಪನ್ಯಾಸಕ ಎಸ್.ಶಂಕರಲಿಂಗಯ್ಯ ಮಾತನಾಡಿ, ಹಿಂದಿನ ಭವ್ಯ ಸ್ಮಾರಕಗಳಿಂದ ಇಂದು ನಾವು ಅಂದಿನ ಇತಿಹಾಸ,ಸಂಸ್ಕೃತಿಯನ್ನು ಹಾಗೂ ನಾಗರೀಕತೆಯ ವಾಸ್ತವ ಚಿತ್ರಣವನ್ನು ತಿಳಿಯುತ್ತಿದ್ದೇವೆ.ಅದರಂತೇ ಹಿಂದೆ ನಡೆದು ಹೋದ ವಿಷಯಗಳ ಬಗ್ಗೆ ಮುಂದಿನವರಿಗೆ ತಿಳಿಸಬೇಕಾದರೆ ಇಂತಹ ಕುರುಹುಗಳು ಅತ್
ಜಿಲ್ಲಾ ನೆಹರು ಯುವಕೇಂದ್ರದ ವತಿಯಿಂದ ನಡೆದ ಸಾಮರ್ಥ್ಯ ಅಭಿವೃದ್ದಿ ತರಬೇತಿ ಶಿಭಿರದಲ್ಲಿ ಹುಳಿಯಾರು ಟಿಪ್ಪುಸಂಘದ ಉಪಾಧ್ಯಕ್ಷ ಮಹಮ್ಮದ್ ಅಪ್ಸರ್ ಅವರಿಗೆ ನೆಹರು ಯುವಕೇಂದ್ರದ ಜಿಲ್ಲಾ ಪ್ರಶಸ್ತಿ ಹಾಗೂ ಧನ ಸಹಾಯ ನೀಡಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಸಂಯೋಜಕರಾದ ಮೇಡಂ ಡೀಸೋಜ ಉಪಸ್ಥಿತರಿದ್ದರು.

ಹುಳಿಯಾರು ಅಲೆಮಾರಿ ಬುಡಕಟ್ಟು ಜನಾಂಗದವರಿಂದ ಪ್ರತಿಭಟನೆ

ಹುಳಿಯಾರು ಶಂಕರಪುರ ಬಡಾವಣೆಯಲ್ಲಿನ ಅಲೆಮಾರಿ ಬುಡಕಟ್ಟುಗಳ ಮಹಾವೇದಿಕೆಯವರು ಹಾಗೂ ಎಬಿವಿಪಿಯ ಸಹಯೋಗದಲ್ಲಿ ಸೋಮವಾರ ನಾಡ ಕಛೇರಿ ಆವಣದಲ್ಲಿ ಬುಡಕಟ್ಟು ಜನಾಂಗದವರು ಪ್ರತಿಭಟನೆ ನಡೆಸಿದರು. ಇಲ್ಲಿನ ಶಂಕರಪುರ ಬಡಾವಣೆಯಲ್ಲಿ ವಾಸವಾಗಿರುವಂತ ಅಲೆಮಾರಿ ಬುಡಕಟ್ಟು ಜನಾಂಗದವರು ತಮಗೆ ಸೂಕ್ತ ವಸತಿ ವ್ಯವಸ್ಥೆಯನ್ನು ಸರ್ಕಾರ ಒದಗಿಸಿ ಕೊಡಬೇಕೆಂದು ಒತ್ತಾಯಿಸಿ ಅಲೆಮಾರಿ ಬುಡಕಟ್ಟು ಮಹಾವೇದಿಕೆಯವರು ಹಾಗೂ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಹಯೋಗದಲ್ಲಿ ಸೋಮವಾರ ಬೆಳಗ್ಗಿನಿಂದ ನಾಡ ಕಛೇರಿ ಆವಣದಲ್ಲಿ ಪ್ರತಿಭಟನೆ ನಡೆಸಿದರು. ಹಿನ್ನಲೆ: ಮಾ.28 ಬುಧವಾರ ಮಧ್ಯರಾತ್ರಿ ಶಂಕರಪುರ ಬಡಾವಣೆಯಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿಯಿಂದ ಸುಮಾರು 11 ಗುಡಿಸಲುಗಳು ಸಂಪೂರ್ಣ ಭಸ್ಮವಾಗಿದ್ದು,ಅದರಲ್ಲಿ ವಾಸಿಸುತ್ತಿದ್ದ ಸುಮಾರು 50ಕ್ಕೂ ಹೆಚ್ಚು ಮಂದಿ ವಾಸಿಸಲು ಸೂರಿಲ್ಲದೆ ಬೀದಿಗೆ ಬಿದಿದ್ದಾರೆ. ಇವರಿಗೆ ಸರ್ಕಾರದಿಂದ ಯಾವುದೇ ರೀತಿಯ ತುರ್ತು ಪರಿಹಾರ ಬಂದಿರುವುದಿಲ್ಲ ಹಾಗೂ ಇವರ ಗೋಳಿಗೆ ಸ್ಥಳಿಯ ಅಧಿಕಾರಿಗಳು ಸ್ಪಂದಿಸದೇ ಹೋಗಿದ್ದಾರೆ.ಈ ಪ್ರದೇಶ ಹುಳಿಯಾರಿನ ಅಮಾನಿಕೆರೆ ಅಂಚಿನಲ್ಲಿದ್ದು,ಇಲ್ಲಿರುವ ಸುಮಾರು ಗುಡಿಸಲುಗಳಲ್ಲಿನ ಜನ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ.ಇಲ್ಲಿರುವಂತ ಜನರಿಗೆ ತಮ್ಮದೇ ಆದ ಒಂದು ಸ್ವಂತ ಜಾಗವಾಗಲಿ, ಮನೆಯಾಗಲಿ ಇಲ್ಲ, ಸುಮಾರು ವರ್ಷಗಳಿಂದ ಇಲ್ಲಯೇ ವಾಸಿಸುತ್ತಿರುವ ನಮ್ಮನ್ನು ಕೇವಲ ಚುನಾವಣೆಯ ಸಂದರ್ಭಗಳಲ್ಲಿ ಮಾತ್ರ ನ

ಲಿಂಗಪ್ಪನ ಪಾಳ್ಯದಲ್ಲಿ ರಾಮನವಮಿಯೇ ಊರಹಬ್ಬ:ಎಲ್ಲೇಲೋ ರಾಮ ಭಜನೆ

ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯದಲ್ಲಿ ಶ್ರೀರಾಮ ನವಮಿ ಅಂಗವಾಗಿ ಶ್ರೀರಾಮ ದೇವಾಲಯದ ಮುಂದೆ ನೂರೊಂದೆಡೆ ಸೇವೆ ನಡೆಸಲಾಯಿತು ಎಲ್ಲೆಡೆ ಸಾಮಾನ್ಯವಾಗಿ ಯುಗಾದಿ, ದೀಪಾವಳಿ ಹಬ್ಬಗಳನ್ನು ಮನೆಮಂದಿಯಲ್ಲಾ ಕೂಡಿ ಸಡಗರ ಸಂಭ್ರಮದಿಂದ ಆಚರಿಸಿ, ರಾಮನವಮಿಯಲ್ಲಿ ದೇವಸ್ಥಾನಕ್ಕೆ ತೆರಳಿ ಪೂಜಯಲ್ಲಿ ಪಾಲ್ಗೊಳ್ಳುವುದು ಪಾರಿಪಾಟವಿದ್ದರೆ. ಇಲ್ಲೊಂದು ಗ್ರಾಮವಿದೆ. ಅದೇ ಲಿಂಗಪ್ಪನ ಪಾಳ್ಯ. ಇಲ್ಲಿ ರಾಮನವಮಿಯನ್ನು ಆಚರಿಸುವ ರೀತಿಯೇ ಬೇರೆ. ಇಲ್ಲಿ ಒಂಬತ್ತು ದಿನಗಳ ಕಾಲ ನಡೆಯೋ ರಾಮನ ಉತ್ಸವ ಒಂದರ್ಥದಲ್ಲಿ ವಿಶೇಷವಾಗಿದ್ದು,ಶ್ರೀರಾಮಚಂದ್ರ ಹುಟ್ಟಿದ ದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಆಚರಿಸುವ ರಾಮನವಮಿಯನ್ನು ಕುಟುಂಬದ ಸದಸ್ಯರು ಹಾಗೂ ನೆಂಟರಿಸ್ಟರ ಜೋತೆ ಸೇರಿ ಮುಖ್ಯ ಹಬ್ಬವಾಗಿ ಆಚರಿಸುವ ಮೂಲಕ 9 ದಿನಗಳ ಕಾಲ ವಸಂತ ನವರಾತ್ರಿಯನ್ನು ಊರಿನಲ್ಲಿ ಆಚರಿಸುವುದು ವಾಡಿಕೆಯಾಗಿದೆ. ನವರಾತ್ರಿ ಎಂದರೆ ಶರನ್ನವರಾತ್ರಿ ಹಾಗೂ ಮೈಸೂರು ದಸರ ನೆನಪಿಗೆ ಬರುತ್ತದೆ. ಆದರೆ ಮತ್ತೊಂದು ನವರಾತ್ರಿಯ ಆಚರಣೆ ಇಲ್ಲಿ ನಡೆದುಕೊಂಡು ಬರುತ್ತಿದೆ. ಶರನ್ನವರಾತ್ರಿ ದುರ್ಗಾಪೂಜೆಗೆ ಮೀಸಲಾದರೆ ಇಲ್ಲಿ ಆಚರಣೆಯಲ್ಲಿರುವ ವಸಂತ ನವರಾತ್ರಿ ಶ್ರೀರಾಮನಿಗೆ ಮೀಸಲು. ಹೊಸ ಸಂವತ್ಸರದ ನಂತರ ಅಂದರೆ ಯುಗಾದಿ ಹಬ್ಬದ ಮೊದಲ ದಿನದಿಂದ ಪ್ರಾರಂಭಿಸಿ ರಾಮನು ಹುಟ್ಟಿದ ದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು,ಅಂದರೆ ಯುಗಾದಿಯಾದ 9ನೇದಿನದಂದು ಶ್ರೀರಾಮ ದೇವರಿಗೆ ಪೂಜೆ ಸ