ವಿಷಯಕ್ಕೆ ಹೋಗಿ

ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಹುಳಿಯಾರು ಸಮೀಪದ ಚಿಕ್ಕನಾಯಕನಹಳ್ಳಿ ಗಡಿ ಭಾಗದ ಹೋಸದುರ್ಗ ತಾಲ್ಲೂಕು ಡಿ.ಬಿ.ಕೆರೆ ಶ್ರೀಆಂಜನೇಯಸ್ವಾಮಿಯ ನೂತನ ದೇವಾಲಯದ ಕಳಸ ಸ್ಥಾಪನೆ ಹಾಗೂ ಪ್ರಾರಂಭೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಾರ್ಗಮಧ್ಯೆ ಕೆಂಕೆರೆಯ ತಾ.ಪಂ.ಸದಸ್ಯ ನವೀನ್ ಅವರ ನಿವಾಸಕ್ಕೆ ತೆರಳಿ,ಅವರ ಆತಿಥ್ಯ ಸ್ವೀಕರಿಸಿದರು.

ಇಂದು ಉತ್ತಮ ಸಮಾಜ ನಿರ್ಮಾಣವಾಗಬೇಕಾದಲ್ಲಿ ಉತ್ತಮ ಮಕ್ಕಳ,ಪ್ರಜೆಗಳ ಅವಶ್ಯಕತೆಯಿದ್ದು,ಪೋಷಕರು ತಮ್ಮ ಮಕ್ಕಳಿಗೆ ಇಂದಿನಿಂದಲೇ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಮೂಲಕ ಅವರನ್ನು ಸುಸಂಸ್ಕೃತ ಪ್ರಜೆಗಳಾನ್ನಾಗಿ ರೂಪಿಸುವ ಕಾರ್ಯವಾಗಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅಭಿಪ್ರಾಯಪಟ್ಟರು.

ಹುಳಿಯಾರು ಸಮೀಪದ ಚಿಕ್ಕನಾಯಕನಹಳ್ಳಿ ಗಡಿ ಭಾಗವಾದ ಹೋಸದುರ್ಗ ತಾಲ್ಲೂಕು ಮತ್ತೋಡು ಹೋಬಳಿಯ ದೊಡ್ಡಬ್ಯಾಲದಕೆರೆ ಶ್ರೀ ಆಂಜನೇಯಸ್ವಾಮಿಯ ನೂತನ ದೇವಾಲಯದ ಕಳಸ ಸ್ಥಾಪನೆ ಹಾಗೂ ಪ್ರಾರಂಭೋತ್ಸವದ ಅಂಗವಾಗಿ ಭಾನುವಾರ ನಡೆದ ಧಾರ್ಮಿಕ ಸಭೆಯ ಉದ್ಘಾಟನೆ ನೆರವೇರಿಸಿದ ಅವರು ಮಾತನಾಡಿದರು.

ನಮ್ಮ ಕರ್ನಾಟಾಕ ರಾಜ್ಯ ಪುಣ್ಯಭೂಮಿ,ಧರ್ಮಭೂಮಿ,ಇಲ್ಲಿ ರಾಮನ ಪರಮ ಭಂಟ ಹನುಮಂತ ಜನಿಸಿದ್ದಾನೆ,ಇಲ್ಲಿ ಹುಟಿದ್ದ ನಾವೆಲ್ಲರೂ ಪುಣ್ಯವಂತರು ಎಂದರು.ದೇಶದ,ರಾಜ್ಯದ ಓಟ್ಟು ಭವಿಷ್ಯ ಅಲ್ಲಿನ ಮತದಾರರ ಮತದಾನದಲ್ಲಿದ್ದು, ಗಾಳಿಪಟದಂತೆ ಜನಪ್ರತಿನಿಧಿಗಳನ್ನು ಹಾರಿಸದೇ,ರಾಜ್ಯದ ಹಿತಕಾಯುವವರನ್ನು ಗುರ್ತಿಸಿ,ಸೊಕ್ಕಿನಿಂದ ಮೆರೆಯುವವರನ್ನು ನೆಲಕ್ಕಪ್ಪಳಿಸುವಂತೆ ಮಾಡುವ ಶಕ್ತಿ ಮತದಾರರಲ್ಲಿದೆ ಎಂದು ತಿಳಿಸಿದರು.

ಸಾಧು ಸಂತರಿಗೆ ಜನ್ಮವೆತ್ತ ನಮ್ಮನಾಡಲ್ಲಿ ,ದಾರ್ಶನಿಕರ ಮಾರ್ಗಗಳನ್ನು ಅನುಸರಿಸಬೇಕು.ಇಂದು ಗಮನಿಸಿದಂತೆ ಅನೇಕ ಸಭೆ ಸಮಾರಂಭಾಗಳಿಗೆ ಇಂದಿನ ಯುವಪೀಳಿಗೆ ಹೋಗಲು ಹಿಂದೇಟಕುತ್ತಿದ್ದಾರೆ,ಇದರಿಂದ ರಾಜ್ಯದ ಭವಿಷ್ಯಕ್ಕೆ ಕುತ್ತು ಬರುವ ಸಾಧ್ಯತೆಗಳಿವೆ. ಸಭೆ ಸಮಾರಂಭಾಗಳಲ್ಲಿ ಮಕ್ಕಳು ಭಾಗವಹಿಸುವುದರಿಂದ ಅನೇಕ ವಿದ್ಯಮಾನಗಳ ಬಗ್ಗೆ ಅರಿವು ಸಿಗುತ್ತದೆ,ಅಲ್ಲದೆ ರಾಜ್ಯದ ಹಿತ ಹಾಗೂ ರಾಜ್ಯ ಕಟ್ಟುವ ಸುಗಮವಾಗುತ್ತದೆ ಎಂದರು.ಹಿಂದೆ ದೇಶಕ್ಕಾಗಿ ಜನರಿದ್ದೇ,ಇಂದು ನಮಗಾಗಿಯೇ ಈ ದೇಶವೆಂದು ದೇಶವನ್ನೇ ಕೊಳ್ಳೇ ಹೊಡೆಯುಲೊರಟಿದ್ದಾರೆ.

ಈ ಬಾರಿ ತಾನು ರಾಜ್ಯದ ಬಜೆಟ್ ಮಂಡಿಸಿದ್ದರೇ ಮಕ್ಕಳಿಗೆ ಅವರ ವಿದ್ಯಾಭ್ಯಾಸಕ್ಕೆ,ಏಳ್ಗೆಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸುವ ಕನಸ್ಸೊತ್ತಿದೆ,ಅದರೆ ವಿಧಿಯಾಟ ಬೇರೆಯಿತ್ತು

ನಾವು ಪ್ರತಿನಿತ್ಯ ರೈತರನ್ನು ನೆನೆಯಬೇಕು,ನಮಗೆ ಅನ್ನ ನೀಡುವ ಅನ್ನದಾತ ರೈತ,ಶ್ರಮಪಟ್ಟು ವ್ಯವಸಾಯಮಾಡುವುದರಿಂದ ಕೋಟ್ಯಾಂತರ ಮಂದಿಗೆ ಅಹಾರವನ್ನು ಒದಗಿಸಿ ಕೊಡುತ್ತಿರುವ ರೈತನ ಕಾರ್ಯಕ್ಕೆ ಮತ್ತ್ಯಾರು ಸಾಟಿ ಎಂದು ಹೇಳುವಲ್ಲಿ ಅವರ ಮಾತುಗಳು ಕಣ್ಣ್ ತುಂಬಿಬಂದವು.ತಾನು ಪ್ರತಿನಿತ್ಯ ಆದೇವರಲ್ಲಿ ನಾನು ಕಷ್ಟ ಕೋಡಬೇಡವೆಂದು ಕೇಳುವುದಿಲ್ಲ, ನನಗೆ ಕಷ್ಟ ಕೋಡು,ಅದ ಜೊತೆಗೆ ಅದನ್ನು ಬಗೆಹರಿಸುವ ಶಕ್ತಿಯನ್ನು ಕಲ್ಪಿಸೆಂದು ಕೋರುವೆ. ನನ್ನಮೇಲಿರುವ ಇಲ್ಲ ಸಲ್ಲದ ಆರೋಪಗಳಿಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗುತ್ತದೆ,ನಾನು ಯಾವುದೇ ರೀತಿಯ ತಪ್ಪುಗಳನ್ನು ಮಾಡಿಲ್ಲವೆಂಬುದನ್ನು ರಕ್ತದಲ್ಲಿ ಬರೆದು ಕೊಡಲು ಸಿದ್ದ ಎಂದು ಘಂಟಾಘೋಷವಾಗಿ ನುಡಿದರು.

ಮಾಜಿ ಶಾಸಕ ಮಾಧುಸ್ವಾಮಿ ಮಾತನಾಡಿ,ಯಾರು ತಮ್ಮ ಕಾಯಕವನ್ನು ಮನಸಿಟ್ಟು,ಶ್ರದ್ದಾ ಭಕ್ತಿಯಿಂದ ಮಾಡುಬೇಕು,ಸ್ವಾಮಿ ನಿಷ್ಠೆ ಎಂಬುದು ತಮ್ಮ ಬದುಕನ್ನೇ ಎರವಲಾಗಿಟ್ಟಿಕೊಂಡಂತೆ ಎಂದರು.ಪ್ರತಿಯೊಬ್ಬರಲ್ಲೂ ಆಂತರಿಕ ಹಾಗೂ ಬಾಹ್ಯ ಮನಸ್ಸಿರುತ್ತದೆ,ಆದರೆ ಈ ಎರಡೂ ಮನಸಲ್ಲಿ ಯಾವುದಕ್ಕೆ ಅನುಗುಣವಾಗಿ ನಡೆಯಬೇಕು ಎಂಬುದನ್ನು ಚಿಂತಿಸಬೇಕು.ಬಾಹ್ಯ ಮನಸ್ಸು ನಮ್ಮನ್ನು ನಾಗಲೋಟದಲ್ಲಿ ಓಡುವಂತೆ ಮಾಡುವುದಲ್ಲದೆ,ಮಾನವನ ಹಿಡಿತದಿಂದ ದೂರವಾಗಿರುತ್ತದೆ.ಆದರೆ ಆಂತರಿಕ ಮನಸ್ಸು ನಮ್ಮ ಆಜ್ಞೆಗಳನ್ನು ಚಾಚು ತಪ್ಪದೇ ಪಾಲಿಸುತ್ತದೆ ಎಂದರು.

ಇಂದು ಹೆಚ್ಚಿನದಾನ ಮಾತಿನ ರೈತರಿದ್ದಾರೆ,ಕಾಯಕಕ್ಕೆ ಬಿಟ್ಟಾಗ ಮಾತ್ರ ಅವರ ನಿಜವಾದ ಬಣ್ಣ ತಿಳಿಯುತ್ತದೆ.ಯಡೆಯೂರಪ್ಪನವರು ಹೆಸರಿಗೆ ಮಾತ್ರ ಮಾಜಿ ಆಗಿರಬಹುದು ಆದರೆ ಅವರೇ ನಮ್ಮ ಮುಖ್ಯಮಂತ್ರಿಗಳು,ಇವರು ಒಂದು ಇತಿಹಾಸವನ್ನೇ ಸೃಷ್ಠಿಸುತ್ತಾರೆ ಎಂದರು.

ಭೂದಿಹಾಲ್ ವಿರಕ್ತಮಠದ ಶ್ರೀ ರಾಜಶೇಖರ ಸ್ವಾಮಿಯವರು ಅಧ್ಯಕ್ಷತೆವಹಿಸಿದ್ದ ಸಮಾರಂಭದಲ್ಲಿ ವಿಗ್ರಹ ದಾನಿಗಳಾದ ಶಿವನಂಜಪ್ಪ, ಮಾಜಿ ಶಾಸಕರಾದ ಮಾಧುಸ್ವಾಮಿ,ಕೆ.ಎಸ್.ಕಿರಣ್ ಕುಮಾರ್,ಇಲ್ಕಲ್ ವಿಜಯ್ ಕುಮಾರ್.ಜಿಲ್ಲಾ ಪಂಚಾಯ್ತ ಸದಸ್ಯ ಪರುಶುರಾಮಪ್ಪ,ಮಾಜಿ ಸದಸ್ಯ ಜಯಣ್ಣ,ಚಿ.ನಾ.ಹಳ್ಳಿ ತಾ.ಪಂ.ಅಧ್ಯಕ್ಷ ಸೀತಾರಾಂ,ಗ್ರಾ.ಪಂ.ಸದಸ್ಯರುಗಳು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.