ಹುಳಿಯಾರು ಹೋಬಳಿ ಕೆಂಕೆರೆಯ ಶ್ರೀ ಚನ್ನಬಸವೇಶ್ವರ ಸ್ವಾಮಿಯ ಯ ರಥೋತ್ಸವದಲ್ಲಿ ಸೇರಿದ್ದ ನೂರಾರು ಮಂದಿ ಭಕ್ತರು ತೆರನ್ನೇಳೆಯುತ್ತಿರುವುದು.
ಹೋಬಳಿ ಕೆಂಕೆರೆ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀ ಚನ್ನಬಸವೇಶ್ವರ ಸ್ವಾಮಿಯ ಯ ರಥೋತ್ಸವ ಏ.24 ರ ಮಂಗಳವಾರ ಮಧ್ಯಾಹ್ನ ನೂರಾರು ಜನರ ಸಮ್ಮುಖದಲ್ಲಿ ನಡೆದ ಮೂರು ದಿನದ ಜಾತ್ರೆಗೆ ತೆರೆ ಹಾಕಲಾಯಿತು..
ರಥೋತ್ಸವದ ಅಂಗವಾಗಿ ಏ.21ರ ಶನಿವಾರ ಸ್ವಾಮಿಯವರ ಧ್ವಜಾರೋಹಣದೊಂದಿಗೆ ಪ್ರಾರಂಭಗೊಂಡು,ಏ.22ರ ಭಾನುವಾರ ಸ್ವಾಮಿಯ ಮೂಲಸ್ಥಾನವಾದ ಕೆಂಕೆರೆಯಿಂದ 3 ಕಿ.ಮೀ.ದೂರದ ಪುರದಮಠಕ್ಕೆ ಸ್ವಾಮಿ ಸೇರಿದಂತೆ ಗ್ರಾಮದೇವತೆ ಲೋಕಮಾತೆ ಕಾಳಮ್ಮ ,ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ,ಗೌಡಗೆರೆ ದುರ್ಗಮ್ಮ ದೇವಿಯವರೊಂದಿಗೆ ಕಾಲ್ನೆಡಿಗೆಯಲ್ಲಿ ಹೋಗಿ,ನಂತರ ಏ.೨೩ರ ಸೋಮವಾರ ಬೆಳಗಿನ ಝಾವ ಸ್ವಾಮಿಯ ಗಂಗಾಪ್ರವೇಶ,ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾಕಾರ್ಯಗಳು ಹಾಗೂ ಪ್ರಸಾದ ವಿನಿಯೋಗ ನಡೆದು,ಅದೇ ದಿನ ಕೆಂಕೆರೆ ಗ್ರಾಮಕ್ಕೆ ಆಗಮಿಸಿದ ಸ್ವಾಮಿಯನ್ನು ನೆಡಮುಡಿಯೊಂದಿಗೆ ದೇವಾಲಯಕ್ಕೆ ಕರೆತರಲಾಯಿತು.ಏ.24 ರ ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಮಹದೇವಮ್ಮ ಮತ್ತು ಚನ್ನಬಸವಯ್ಯ,ಈಶ್ವರಪ್ಪ ನವರಿಂದ ರಥಕ್ಕೆ ಪುಣ್ಯದ ಕಾರ್ಯ ನಂತರ ಕಳಸ ಸ್ಥಾಪನೆ ನಡೆಸಿ,ನಂತರ ಸ್ವಾಮಿಯನ್ನು ಧ್ವಜದ ಕುಣಿತದೊಂದಿಗೆ ಕರೆತಂದು,ರಂಗುರಂಗಿನ ಬಾವುಟ,ಎಳನೀರ ಗೊಂಚಲು,ಬಾಳೆಗೊನೆ ಹಾಗೂ ವಿವಿಧ ಮಾದರಿಯ ಹಾರಗಳಿಂದ ಶೃಂಗರಿಸಿದ್ದ ರಥಕ್ಕೆ ಸ್ವಾಮಿ ಹಾಗೂ ಕಾಳಿಕಾಂಬ ದೇವಿಯನ್ನು ಕುಳ್ಳಿರಿಸಿ, ಜಯಘೋಷಗಳಾನ್ನು ಕೂಗುತ್ತಾ ಮೂರುಬಾರಿ ತೆರನ್ನೇಳೆಯಲಾಯಿತು.ಮಹಿಳೆಯರು ,ಮಕ್ಕಳು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದವರು ರಥದ ಗಾಲಿಗೆ ಕಾಯಿ ಹೊಡೆದು ಪೂಜೆ ಸಲ್ಲಿಸಿದರು.
ನಂತರ ಆಗಮಿಸಿದ್ದ ಭಕ್ತಾಧಿಗಳಿಗೆ ಪಾನಕ,ಪನಿವಾರ ಹಾಗೂ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು.ಇದೇ ದಿನ ರಾತ್ರಿ ಗ್ರಾಮದ ಜಯಕರ್ನಾಟಕ ಸಂಘದವರು ರಸಮಂಜರಿ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ