ಹುಳಿಯಾರು: ಹುಳಿಯಾರಿನ ಟೌನ್ ವಿವಿಧೋದ್ದೇಶ ಕೋ ಆಪರೇಟಿವ್ ಸೊಸೈಟಿಯು ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಲು ಮತ್ತು ಹೆಚ್ಚು ಸದಸ್ಯರನ್ನು ತಲುಪುವ ಉದ್ದೇಶದಿಂದ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಸೊಸೈಟಿಯ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷರಾದ ಎಚ್. ಎನ್. ಸತೀಶ್ ಅವರು ಮಾಹಿತಿ ನೀಡಿದರು.
ಅವರು ಹುಳಿಯಾರಿನ ಕೆಂಚಮ್ಮ ಸಮುದಾಯ ಭವನದಲ್ಲಿ ಯಶಸ್ವಿಯಾಗಿ ಜರುಗಿದ ಸೊಸೈಟಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು
ಪ್ರಸ್ತುತ ಸೊಸೈಟಿಯಲ್ಲಿರುವ 100 ಷೇರುದಾರರ ಸಂಖ್ಯೆಯನ್ನು 300 ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದ ಅವರು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸದಸ್ಯರು ಷೇರುಗಳನ್ನು ಪಡೆಯುವ ಅವಕಾಶವನ್ನು ಕಲ್ಪಿಸಲಾಗುವುದು ಎಂದೂ ಭರವಸೆ ನೀಡಿದರು.
ಮುಂದುವರೆದು ಮಾತನಾಡಿದ ಅವರು"ಸದಸ್ಯರ ಸಹಕಾರದಿಂದ ಸಂಘವು ಲಾಭದಾಯಕವಾಗಿ ನಡೆಯುತ್ತಿದ್ದು ಮುಂದೆಯೂ ಇದೇ ರೀತಿ ನಿಮ್ಮ ಸಹಕಾರ ಮುಂದುವರೆಯಲಿ" ಎಂದರು.
ಮರಣೋತ್ತರ ನಿಧಿ: ಮರಣೋತ್ತರ ನಿಧಿಯ ಕುರಿತು ಮಾತನಾಡಿದ ಅವರು, ಪ್ರಸ್ತುತ ನೀಡಲಾಗುತ್ತಿರುವ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಕಾರ್ಯಕಾರಿ ಮಂಡಳಿಯೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಪ್ರತಿಭಾ ಪುರಸ್ಕಾರ: ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಷೇರುದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಆಡಿಟ್ ವರದಿ ಅಂಗೀಕಾರ: ಸಭೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಬಿ. ಮಂಗಳ ಅವರು 2024-25ನೇ ಸಾಲಿನ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿದರು, ಮತ್ತು ಅದನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಥಿಯಾಸಫಿಕಲ್ ಸೊಸೈಟಿಯ ಜಗದೀಶ್ ಮಾಸ್ಟರ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ, ಸೊಸೈಟಿಯ ಆಡಳಿತದ ಬಗ್ಗೆ ಅಮೂಲ್ಯ ಸಲಹೆಗಳನ್ನು ನೀಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಶ್ಯಾಮ ಪ್ರಸಾದ್, ನಿರ್ದೇಶಕ ಎಚ್.ಕೆ. ವಿಶ್ವನಾಥ್ ಮತ್ತು ಹಿರಿಯ ಸದಸ್ಯ ಶಂಕ್ರಯ್ಯ ಕೆ.ಎನ್. ಉಪಸ್ಥಿತರಿದ್ದರು.
ಅಲ್ಲದೆ, ಕಾರ್ಯಕಾರಿ ಮಂಡಳಿ ಸದಸ್ಯರುಗಳಾದ ಎಂ.ಆರ್. ಕುಮಾರ್, ದೇವಾನಂದ್, ಚೇತನ್, ಈಶ್ವರ್, ಡಿ.ಜೆ. ಕೃಷ್ಣಮೂರ್ತಿ, ಸಿದ್ದರಾಮಕ್ಕ, ಸಿದ್ದಗಂಗಮ್ಮ ಸೇರಿದಂತೆ ಅನೇಕ ಷೇರುದಾರರು ಮತ್ತು ವಿವಿಧ ಸಂಘ ಸಂಸ್ಥೆಗಳ ಗಣ್ಯರು ಸಭೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿಸಿದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ