ಜಾತಿ ಗೊಂದಲದ ಬಗ್ಗೆ ಎಚ್ಚರಿಕೆ :ಸಮೀಕ್ಷೆಯ ಸಂದರ್ಭದಲ್ಲಿ ಕೆಲ ಪಟ್ಟ ಭದ್ರ ಹಿತಾಸಕ್ತಿಗಳು ಸಮುದಾಯದ ಜನರನ್ನು ದಾರಿ ತಪ್ಪಿಸಿ, ಕಾಡುಗೊಲ್ಲರ ಬದಲಿಗೆ ಕೇವಲ 'ಗೊಲ್ಲ' ಎಂದು ನಮೂದಿಸುವಂತೆ ಹುನ್ನಾರ ನಡೆಸುತ್ತಿದ್ದಾರೆ ಎಂದು ಡಾ. ಸತೀಶ್ ಆತಂಕ ವ್ಯಕ್ತಪಡಿಸಿದರು. ಇತರ ಜನಾಂಗದವರು ತಮ್ಮ ಸಮುದಾಯದ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಈ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಅವರು ದೂರಿದರು. ಆದರೆ, ಕಾಡುಗೊಲ್ಲ ಸಮುದಾಯದ ಸದಸ್ಯರು ಇಂತಹ ತಪ್ಪು ಮಾಹಿತಿಗೆ ಕಿವಿಗೊಡಬಾರದು ಎಂದು ಎಚ್ಚರಿಸಿದರು.ತಮ್ಮ ಸಮುದಾಯವರು ಸಮೀಕ್ಷೆಯ ವೇಳೆ 541ನೇ ಕ್ರಮ ಸಂಖ್ಯೆಯಡಿ ಕಾಡುಗೊಲ್ಲ ಹೆಸರನ್ನೇ ನಮೂದಿಸಬೇಕು ಎಂದು ಅವರು ಒತ್ತಿಹೇಳಿದರು.
ಕಾಡುಗೊಲ್ಲ ಸಮುದಾಯ ಒಂದು ಸ್ವತಂತ್ರ ಮತ್ತು ಪ್ರತ್ಯೇಕ ಜನಾಂಗವಾಗಿದೆ ಎಂದ ಅವರು ಇದು ಗೊಲ್ಲ ಸಮುದಾಯದ ಆಚರಣೆಗಳಿಗಿಂತ ಸಂಪೂರ್ಣವಾಗಿ ಭಿನ್ನವಾದ ಆಚರಣೆಯನ್ನು ಹೊಂದಿದೆ. ಆದ್ದರಿಂದ ಕಾಡುಗೊಲ್ಲರು ಗೊಲ್ಲ ಜಾತಿಯ ಉಪಜಾತಿ ಎಂಬುದು ಸುಳ್ಳು ಹೇಳಿಕೆಯಾಗಿದೆ ಎಂದರು.
ಸರ್ಕಾರದಿಂದಲೇ ಸ್ವತಂತ್ರ ಮಾನ್ಯತೆ : ಸಮುದಾಯದ ಈ ಸ್ವತಂತ್ರ ಅಸ್ತಿತ್ವಕ್ಕೆ ಸರ್ಕಾರ ನೀಡಿರುವ ಮಾನ್ಯತೆಯ ಬಗ್ಗೆ ಪುರಾವೆಗಳನ್ನು ನೀಡಿದ ಡಾ.ಸತೀಶ್ 2018ರಲ್ಲಿಯೇ ಸರ್ಕಾರವು ಕಾಡುಗೊಲ್ಲ ಸಮುದಾಯಕ್ಕೆ ಜಾತಿ ಪಟ್ಟಿಯಲ್ಲಿ ಸ್ಥಾನ ನೀಡಿದೆ. ಅಲ್ಲದೆ, ನಿಗಮ ಮಂಡಳಿಯಲ್ಲೂ ಪ್ರತ್ಯೇಕವಾಗಿ ಕಾಡುಗೊಲ್ಲರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಬೆಳವಣಿಗೆಯು ನಮ್ಮದು ಒಂದು ಸ್ವತಂತ್ರವಾದ ಮತ್ತು ಪ್ರತ್ಯೇಕವಾದ ಜಾತಿ ಎಂಬುದನ್ನು ಖಚಿತಪಡಿಸುತ್ತದೆ," ಎಂದು ವಿವರಿಸಿದರು.
ಈ ಹಿನ್ನೆಲೆಯಲ್ಲಿ ಸಮೀಕ್ಷೆಯಲ್ಲಿ ಭಾಗಿಗಳಾಗುವ ಕಾಡುಗೊಲ್ಲ ಸಮುದಾಯದ ಪ್ರತಿಯೊಬ್ಬರೂ ಜಾತಿ ಕಾಲಂನಲ್ಲಿ ಮತ್ತು ಉಪಜಾತಿ ಕಾಲಂನಲ್ಲಿ ಯಾವುದೇ ಗೊಂದಲವಿಲ್ಲದೆ 'ಕಾಡುಗೊಲ್ಲ' ಎಂದು ನಮೂದಿಸುವ ಮೂಲಕ ಸಮುದಾಯದ ಅಧಿಕೃತ ಅಸ್ಮಿತೆಯನ್ನು ಕಾಪಾಡಿಕೊಳ್ಳುವಂತೆ ಡಾ. ಸತೀಶ್ ಪುನರುಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಉಪಾಧ್ಯಕ್ಷ ಉಜ್ಜಜ್ಜಿ ರಾಜಣ್ಣ, ಅಂಕಸಂದ್ರ ರಾಜಣ್ಣ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ