ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪ್ರಭುತ್ವಕ್ಕೆ ಬೇಡ ಭಾಷೆ-ಸಂಸ್ಕೃತಿ ಹೊಣೆ: ಕಣವಿ

ಪ್ರಭುತ್ವಕ್ಕೆ ಬೇಡ ಭಾಷೆ-ಸಂಸ್ಕೃತಿ ಹೊಣೆ: ಕಣವಿ ದಾನ ಚಿಂತಾಮಣಿ ಅತ್ತಿಮಬ್ಬೆ ವೇದಿಕೆ(ಗದಗ) 19- ಭಾಷೆ-ಸಂಸ್ಕೃತಿ ರೂಪಿಸುವ ಇಲ್ಲವೇ ನಿರ್ವಹಿಸುವ ಅಥವಾ ನಿರ್ಧರಿಸುವ ಕಾರ್ಯವನ್ನು ನಾವೆಂದಿಗೂ ಪ್ರಭುತ್ವಕ್ಕೆ ಒಪ್ಪಿಸಬಾರದು. ಅದು ಪ್ರಜಾಸತ್ತಾತ್ಮಕವಾದ ಚೌಕಟ್ಟಿನಲ್ಲಿಯೇ ನಡೆಯಬೇಕು ಎಂದು ಚೆಂಬೆಳಕಿನ ಕವಿ ನಾಡೋಜ ಡಾ. ಚನ್ನವೀರ ಕಣವಿ ಹೇಳಿದರು. ಶುಕ್ರವಾರ ಇಲ್ಲಿ ಆರಂಭವಾದ 76ನೇ ಅ. ಭಾ. ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು. ಇಂದು ರಾಜಕೀಯ ಭ್ರಷ್ಟತೆ, ಭಂಡತನ ಅತಿಯಾಗಿದೆ. ಸಂಸ್ಕೃತಿ ಬಗೆಗಿನ ರಾಜಕಾರಣಿಗಳ ಅಜ್ಞಾನ ಹೆಚ್ಚಿದೆ. ಅಲ್ಲದೇ ಸಂಸ್ಕೃತಿ ಮೇಲೆ ನಾಗರಿಕತೆಯ ದಾಳಿ ನಡೆದಿದೆ. ಕನ್ನಡನಾಡು ಇಂದು ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಕೆಲವೊಂದು ತಾನೇ ತನ್ನ ಮೈಮೇಲೆ ಎಳೆದುಕೊಂಡ ಬಿಕ್ಕಟ್ಟುಗಳು. ರಾಜಕೀಯ ಎಲ್ಲರನ್ನೂ ಹೆಡೆಮುರಿಗೆ ಕಟ್ಟಿ ಉಸಿರುಗಟ್ಟಿಸುವಂತ ಸ್ಥಿತಿಗೆ ತಲುಪಿಸಿದೆ. ಶಾಂತಿ, ಸಹಿಷ್ಣುತೆ, ಸಹಬಾಳ್ವೆಗೆ ಹೆಸರಾಗಿದ್ದ ನಮ್ಮ ನಾಡಿನಲ್ಲಿ ಇಂದು ಸೇಡು, ಹಿಂಸೆ, ದ್ವೇಷ, ಕ್ರೌರ್ಯ ತಾಂಡವವಾಡುತ್ತಿರುವುದು ದೊಡ್ಡ ವಿರೋಧಾಭಾಸ ಎಂದು ವಿಷಾದಿಸಿದರು. ಪರವಿಚಾರ, ಪರಧರ್ಮವನ್ನು ಸೈರಿಸುವುದೇ ಬದುಕಿನ ಬಂಗಾರ ಎಂದು ಹೇಳಿದ ಕವಿರಾಜ ಮಾರ್ಗದ ಚಕ್ರವರ್ತಿ ನೃಪತಂಗನ ಮುತ್ತಿನಂಥ ಮಾತನ್ನು ನಾವು ಮರೆತಿದ್ದೇವೆ ಎಂದ ಕಣವಿಯವ

ಕುಮಾರವ್ಯಾಸನ ನಾಡಲ್ಲಿ ಆರಂಭವಾಯ್ತು ಕನ್ನಡಾಂಬೆಯ ಉಘೇ.... ಉಘೇ....

ಕುಮಾರವ್ಯಾಸನ ನಾಡಲ್ಲಿ ಆರಂಭವಾಯ್ತು ಕನ್ನಡಾಂಬೆಯ ಉಘೇ.... ಉಘೇ.... ಗದಗ, 19- ಜಾತ್ರೆ ಎನ್ನಿ. ಪರಿಷೆ ಎನ್ನಿ. ತೇರು ಎನ್ನಿ. ರಥೋತ್ಸವ ಎನ್ನಿ. ಹಬ್ಬ ಎನ್ನಿ. ಅವರವರ ಭಾವಕ್ಕೆ ತಕ್ಕಂತೆ ಏನೇ ಹೆಸರಿಟ್ಟು ಕರೆಯಬಹುದು. ಆದರೆ ಅಲ್ಲಿ ನಡೆದಿದ್ದು ಮಾತ್ರ ಕನ್ನಡ ತಾಯಿಯ ಉಘೇ.... ಉಘೇ.... ಅಲ್ಲಿ ಉತ್ತರದ ಆತಿಥೇಯರಿದ್ದರು. ದಕ್ಷಿಣದ ಜನರಿದ್ದರು. ಪಶ್ಚಿಮದ ನಾಗರಿಕರಿದ್ದರು. ಪೂರ್ವದ ಮಂದಿಯಿದ್ದರು. ಎಲ್ಲರೂ ಕನ್ನಡಾಂಬೆಯ ಮಡಿಲ ಮಕ್ಕಳಾಗಿದ್ದರು. ಎಲ್ಲರಿಗೂ ಇದ್ದುದು ಕನ್ನಡ ನುಡಿನಮನದ ತುಡಿತ. ಕನ್ನಡಕ್ಕಾಗಿ ಕೊರಳೆತ್ತು ಎನ್ನುವ ತವಕ. ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ ಎಂದು ಹಾಡಿದ ಕುಮಾರವ್ಯಾಸನ ನಾಡಿನವರು ನಾವು ಎಂಬ ಹೆಮ್ಮೆ ಅಲ್ಲಿ ನೆರೆದಿದ್ದ ಆತಿಥೇಯರ ಕಣ್ಣುಗಳಲ್ಲಿ ತುಂಬಿತುಳುಕುತ್ತಿತ್ತು. ಪೂರ್ಣಕುಂಭದ ಮೆರವಣಿಗೆ ಬಿರುಬಿಸಿಲಿನಲ್ಲಿ ನಡೆದರೂ, ಬೆವರು ದಳದಳನೆ ಇಳಿಯುತ್ತಿದ್ದರೂ, ಉತ್ಸಾಹ ಮಾತ್ರ ಕೊಂಚವೂ ಕುಗ್ಗದೇ ಇದ್ದುದು ಇಲ್ಲಿನ ಕನ್ನಡಿಗರೆಷ್ಟು ಉತ್ಸಾಹದ ಬುಗ್ಗೆಗಳು ಎಂಬುದನ್ನು ತೆರೆದಿಡುವಂತಿತ್ತು. ಕನ್ನಡಾಂಬೆಯ ಮಕ್ಕಳ ಉತ್ಸಾಹಕ್ಕೆ ನೀನೇಕೆ ಕುಂದು ತರುತ್ತಿರುವೇ ಎಂಬಂತೆ ಸೂರ್ಯದೇವನ ಪ್ರಖರತೆಗೆ ಛತ್ರಿ ಹಿಡಿದ ಹಾಗೆ ಮೇಘರಾಜ ಆಗಾಗ ಮೋಡಗಳ ಮೆರವಣಿಗೆಯನ್ನು ಹೊರಡಿಸುತ್ತಿದ್ದ. ನುಡಿ ಹಬ್ಬದ ಕೇಂದ್ರಬಿಂದು ನಾಡೋಜ ಡಾ. ಗೀತಾ ನಾಗಭೂಷಣ ಅವರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಪೂರ್ಣ ಕುಂಭ ಮೆರವಣೆಗೆಯಲ್ಲಿ ಕರೆತರಲಾಯಿ

ಎಲ್ಲಿದ್ದಾರೆ ಅವರೆಲ್ಲ....? ನಲ್ಲೂರು ಸಿಡಿಮಿಡಿ

ಎಲ್ಲಿದ್ದಾರೆ ಅವರೆಲ್ಲ....? ನಲ್ಲೂರು ಸಿಡಿಮಿಡಿ ಗದಗ, 19- ಎಲ್ಲಿದ್ದಾರೆ ಅವರೆಲ್ಲ....? ಮೆರವಣಿಗೆ ಸಮಿತಿ ಸಮೀಪದಲ್ಲಿಯೇ ಇಲ್ಲ.... ಮೆರವಣಿಗೆ ಸಮಿತಿ ವೇಳೆ ಮೀರುತ್ತಲಿದೆ. ಛೆ.... ಛೇ.... ಎಂದು ಅಸಮಾಧಾನ ವ್ಯಕ್ತಪಡಿಸಿ ಸಿಡಿಮಿಡಿಗೊಂಡವರು ರಾಜ್ಯಾಧ್ಯಕ್ಷ ನಲ್ಲೂರು ಪ್ರಸಾದ. ಶುಕ್ರವಾರ ಬೆಳಗ್ಗೆ ಸರಿಯಾಗಿ 10:00 ಗಂಟೆಗೆ ಆರಂಭವಾಗಬೇಕಿದ್ದ ಸರ್ವಾಧ್ಯಕ್ಷರ ಕುಂಭ ಮೇಳದ ಮೆರವಣಿಗೆ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಒಂದೂವರೆ ಗಂಟೆ ವಿಳಂಬವಾಗಿದ್ದಕ್ಕೆ ಸಿಡಿಮಿಡಿಗೊಂಡಿದ್ದು ಹೀಗೆ.. ತೋಂಟದಾರ್ಯ ಶಾಲಾ ಆವರಣದಿಂದ ಸಮ್ಮೇಳನದ ಅತ್ತಿಮಬ್ಬೆ ವೇದಿಕೆವರೆಗೆ ಸಾಗಬೇಕಾಗಿದ್ದ ಮೆರವಣಿಗೆ 10:30 ಗಂಟೆ ಮೀರಿದ್ದರೂ ಚಾಲನೆ ಸಿಕ್ಕಿರಲಿಲ್ಲ. ಮೆರವಣಿಗೆಯಲ್ಲಿ ಸರ್ವಾಧ್ಯಕ್ಷ ಡಾ. ಗೀತಾ ನಾಗಭೂಷಣ ಅವರನ್ನು ಕರೆದುಕೊಂಡು ಹೋಗಬೇಕಿದ್ದ ತೆರೆದ ಜೀಪಿಗಾಗಿ ಶಾಸಕರು, ಗದಗ ಜಿಲ್ಲಾ ಕಸಾಪ ಅಧ್ಯಕ್ಷರಿಬ್ಬರೇ ಅಲ್ಲಿ ತಡಕಾಡುತ್ತಿದ್ದರು. ಶಾಸಕ ಬಿದರೂರು ಅತ್ತಿಂದಿತ್ತ ಶತಪಥ ಹಾಕುತ್ತಿದ್ದು, ಓಡಾಟ ನಡೆಸಿದ್ದರೆ ಹೊರೆ ಹೆಚ್ಚಾಯಿತು ಎಂಬ ಛಾಯೆಯಲ್ಲಿ ಜಿಲ್ಲಾಧ್ಯಕ್ಷ ಎ. ಬಿ. ಪಾಟೀಲರು ವಯೋಮಾನದ ಅಡ್ಡಿಯಿಂದಾಗಿ ಏಕಾಂಗಿಯಾಗಿ ಓಡಾಟದಲ್ಲಿದ್ದರು. ನಲ್ಲೂರು ಗುಡುಗಿದರೂ, ಅಸಮಾಧಾನ ವ್ಯಕ್ತಪಡಿಸಿದರೂ, ತಮ್ಮ ಕೇಂದ್ರ ಸಮಿತಿಯಿಂದ ಕರೆ ಕಳುಹಿಸಿದರೂ ಶಾಸಕರು ಸಂಪರ್ಕಕ್ಕೆ ತಕ್ಷಣವೇ ದೊರೆಯದಿದ್ದುದಕ್ಕಾಗಿ ತಾವೇ ಆವರಣದ ಮುಖ್ಯದ್ವಾರದ ಬಳಿ ಬಂದು ನಿಂತುಕೊಂಡಿದ್ದ
ರೈತರು ನಡೆಸಿದ ಬೆಸ್ಕಾಂ ವಿರುದ್ಧ ಪತ್ರಿಭಟನೆಗೆ ಬೆಂಬಲ ಸೂಚಿಸಿ ತಿಮ್ಮನಹಳ್ಳಿಯಲ್ಲಿ ಅವಮಾನಕ್ಕೀಡಾದ ಶಾಸಕ ಸಿ.ಬಿ.ಸುರೇಶ್ ಬಾಬು! ------------------------------------------------------------------------------------ @ ಅವಾಚ್ಯ ಶಬ್ಧಗಳ ಬಳಕೆ @ ಬೆಸ್ಕಾಂ ಕಾಂಪೌಂಡಿನಲ್ಲಿ ದಿಗ್ಬಂಧನ @ ಕಾರಿಗೆ ಅಡ್ಡ ಮಲಗಿ ಅಸಭ್ಯ ವರ್ತನೆ ಬೆಸ್ಕಾಂನ ಸೆಕ್ಷನ್ ಆಫೀಸರ್ ನ ಅನುಚಿತ ವರ್ತನೆ, ಆತನ ಲಂಚಗುಳಿತನ ಹಾಗೂ ಅಸಮರ್ಪಕ ವಿದ್ಯುತ್ ಪೂರೈಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕಡೆ ಘಳಿಗೆಯಲ್ಲಿ ನಡೆದ ನಾಟಕೀಯ ಬೆಳವಣಿಗೆಯೊಂದರಲ್ಲಿ ಪ್ರತಿಭಟನೆಗೆ ಬೆಂಬಲ ಸೂಚಿಸಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಶಾಸಕ ಸಿ.ಬಿ.ಸುರೇಶ್ ಬಾಭು ಅವರ ವಿರುದ್ಧವೇ ತಿರುಗಿ ಬಿದ್ದು ಅವಾಚ್ಯ ಶಬ್ಧಗಳ ಬಳಕೆ ಹಾಗೂ ಕಾರಿಗೆ ಅಡ್ಡ ಮಲಗಿ ಅಸಭ್ಯ ರೀತಿಯಿಂದ ವರ್ತಿಸಿ ಅವಮಾನಿಸಿದ ಹೀನ ಘಟನೆ ಹುಳಿಯರು ಸಮೀಪದ ತಿಮ್ಮನಹಳ್ಳಿಯಲ್ಲಿ ಭಾನುವಾರ ಜರುಗಿದೆ. ತಿಮ್ಮನಹಳ್ಳಿಯ ಬೆಸ್ಕಾಂ ಕಛೇರಿಯ ಸೆಕ್ಷನ್ ಆಫೀಸರ್ ಬಸವರಾಜು ಅವರು ಹಗಲಿನ ವೇಳೆಯಲ್ಲಿಯೇ ಮದ್ಯ ಸೇವಿಸಿ ಕೆಲಸ ನಿರ್ವಯಿಸುತ್ತಿದ್ದು ಗ್ರಾಹಕರ ಜೊತೆ ಅಶ್ಲೀಲ ಪದ ಬಳಸಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಅಲ್ಲದೆ ಟಿ.ಸಿ ಅಳವಡಿಸಲು ಸಾವಿರಾರು ರು. ಹಣ ಪಡೆಯುತ್ತಿದ್ದಾರೆ ಹಾಗೂ ಸರ್ಕಾರ ನಿಗಧಿ ಮಾಡಿರುವ ಅನುಸಾರ 6 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯತ್ ನೀಡುತ್ತಿಲ್ಲ ಎಂದು ಆರೋಪಿಸಿ ರೈತ ಸಂಘದ
ರೈತರು ನಡೆಸಿದ ಬೆಸ್ಕಾಂ ವಿರುದ್ಧ ಪತ್ರಿಭಟನೆಗೆ ಬೆಂಬಲ ಸೂಚಿಸಿದ ಘೋರ ತಪ್ಪಿಗೆ ತಿಮ್ಮನಹಳ್ಳಿಯಲ್ಲಿ ಅವಮಾನಕ್ಕೀಡಾದ ಶಾಸಕ ಸಿ.ಬಿ.ಸುರೇಶ್ ಬಾಬು! --------------------------------------- @ ಅವಾಚ್ಯ ಶಬ್ಧಗಳ ಬಳಕೆ @ ಬೆಸ್ಕಾಂ ಕಾಂಪೌಂಡಿನಲ್ಲಿ ದಿಗ್ಬಂಧನ @ ಕಾರಿಗೆ ಅಡ್ಡ ಮಲಗಿ ಅಸಭ್ಯ ವರ್ತನೆ ಹುಳಿಯಾರು: ಬೆಸ್ಕಾಂನ ಸೆಕ್ಷನ್ ಆಫೀಸರ್ ನ ಅನುಚಿತ ವರ್ತನೆ, ಆತನ ಲಂಚಗುಳಿತನ ಹಾಗೂ ಅಸಮರ್ಪಕ ವಿದ್ಯುತ್ ಪೂರೈಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕಡೆ ಘಳಿಗೆಯಲ್ಲಿ ನಡೆದ ನಾಟಕೀಯ ಬೆಳವಣಿಗೆಯೊಂದರಲ್ಲಿ ಪ್ರತಿಭಟನೆಗೆ ಬೆಂಬಲ ಸೂಚಿಸಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಶಾಸಕ ಸಿ.ಬಿ.ಸುರೇಶ್ ಬಾಭು ಅವರ ವಿರುದ್ಧವೇ ತಿರುಗಿ ಬಿದ್ದು ಅವಾಚ್ಯ ಶಬ್ಧಗಳ ಬಳಕೆ ಹಾಗೂ ಕಾರಿಗೆ ಅಡ್ಡ ಮಲಗಿ ಅಸಭ್ಯ ರೀತಿಯಿಂದ ವರ್ತಿಸಿ ಅವಮಾನಿಸಿದ ಹೀನ ಘಟನೆ ಹುಳಿಯರು ಸಮೀಪದ ತಿಮ್ಮನಹಳ್ಳಿಯಲ್ಲಿ ಭಾನುವಾರ ಜರುಗಿದೆ. ತಿಮ್ಮನಹಳ್ಳಿಯ ಬೆಸ್ಕಾಂ ಕಛೇರಿಯ ಸೆಕ್ಷನ್ ಆಫೀಸರ್ ಬಸವರಾಜು ಅವರು ಹಗಲಿನ ವೇಳೆಯಲ್ಲಿಯೇ ಮದ್ಯ ಸೇವಿಸಿ ಕೆಲಸ ನಿರ್ವಯಿಸುತ್ತಿದ್ದು ಗ್ರಾಹಕರ ಜೊತೆ ಅಶ್ಲೀಲ ಪದ ಬಳಸಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಅಲ್ಲದೆ ಟಿ.ಸಿ ಅಳವಡಿಸಲು ಸಾವಿರಾರು ರು. ಹಣ ಪಡೆಯುತ್ತಿದ್ದಾರೆ ಹಾಗೂ ಸರ್ಕಾರ ನಿಗಧಿ ಮಾಡಿರುವ ಅನುಸಾರ 6 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯತ್ ನೀಡುತ್ತಿಲ್ಲ ಎಂದು ಆರೋಪಿಸಿ ರೈತ ಸಂಘದ ನೇತೃತ್ವದಲ್ಲಿ ಭಾನುವಾರ

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಮಾಸ್ಟರ್ ಹಿರಣ್ಣಯ್ಯ ಹೀಗಿದ್ದಾರೆ ನೋಡಿ

ಮಾಸ್ಟರ್ ಹಿರಣ್ಣಯ್ಯ ನಮಗೆ ಇಷ್ಟವಾಗುವುದು ಅವರು ನಮ್ಮ ಪರವಾಗಿ ಪಟ್ಟಭದ್ರರನ್ನು, ಭ್ರಷ್ಟ ರಾಜಕಾರಣಿಗಳನ್ನು, ಲಂಚಾವತಾರಿ ಅಧಿಕಾರಿಗಳನ್ನು ಬೈಯ್ಯುತ್ತಾರೆ ಎನ್ನುವ ಕಾರಣಕ್ಕೆ. ಜನಸಾಮಾನ್ಯರು ಯಾರ್ಯಾರನ್ನೆಲ್ಲಾ ಬೈಯ್ಯುವುದಕ್ಕೆ ತುಂಬಾ ಸಮಯದಿಂದ ಕಾಯುತ್ತಿರುತ್ತಾರೋ ಅಂಥವರನ್ನೆಲ್ಲಾ ಬೈಯ್ಯುತ್ತಾ ಹೋಗುವ ಹಿರಣ್ಣಯ್ಯ ಎಷ್ಟೋ ಸಲ ನಮ್ಮೊಳಗಿನ ಕ್ರೋಧದ ದನಿಯಾಗಿಬಿಡುತ್ತಾರೆ, ಜನರೊಳಗಿನ ಜ್ವಾಲಾಮುಖಿಯ ಮುಖವಾಗಿಬಿಡುತ್ತಾರೆ. ಇವರು ಭ್ರಷ್ಟರನ್ನು ಕೆಣಕಲು, ಚುಚ್ಚಲು ಆಯ್ದುಕೊಂಡದ್ದು ರಂಗಭೂಮಿಯನ್ನು. ತಮ್ಮ ಮನೋಜ್ಞ ಅಭಿನಯದಿಂದ ಅಪ್ರತಿಮ ಹಾಸ್ಯ ಪ್ರಜ್ಞೆಯಿಂದ ಜನರ ಮನಸ್ಸಿಗೆ ಹತ್ತಿರವಾದವರು. ಜನತಾ ದರ್ಬಾರಿನ ತೆನಾಲಿ ರಾಮನಾದರು. ಹಾಸ್ಯದ ರಸಾಯನದೊಂದಿಗೆ ವಾಸ್ತವದ ಕಹಿಗುಳಿಗೆಗಳನ್ನು ಉಣಬಡಿಸಿದರು. ಅದೊಂದೇ ಕಾರಣಕ್ಕಾಗಿ ಅವರು ಅಗ್ಗದ ಹಾಸ್ಯ ನಟರಾಗುವ ಅಪಾಯದಿಂದ ಪಾರಾದರು. ಮಾಸ್ಟರ್ ಹಿರಣ್ಣಯ್ಯನವರ ಕುರಿತಂತೆ ourkarnataka.comನಲ್ಲಿ ಪ್ರಕಟಿತವಾಗಿರುವ ಲೇಖನ ಹಾಗಿ ಸಂವಾದಕ್ಕಾಗಿ ಈ ಕಳಗಿನ ಲಿಂಕ್ ಕ್ಲಿಕ್ ಮಾಡಿ http://www.ourkarnataka.com/masterhiranniaha/hiranniaha_main.htm http://www.ourkarnataka.com/masterhiranniaha/darabendre1.htm http://www.ourkarnataka.com/masterhiranniaha/darabendre2.htm ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರ ಕುರಿತು ಮಾಸ್ಟರ್ ಹೇಳಿರುವುದು ಹೀಗೆ. ಇದನ್ನು

ಶಿವರಾತ್ರಿ ಶಿವನ ದಿವ್ಯ ಆವತರಣೆ ಹಾಗೂ ದಿವ್ಯ ಕರ್ಮವನ್ನು ನೆನಪಿಸುವ ಹಬ್ಬ

ಶಿವರಾತ್ರಿ ಶಿವನ ದಿವ್ಯ ಆವತರಣೆ ಹಾಗೂ ದಿವ್ಯ ಕರ್ಮವನ್ನು ನೆನಪಿಸುವ ಹಬ್ಬ ಲೇಖನ: ಬ್ರಹ್ಮಕುಮಾರಿ ಗೀತಕ್ಕ ಆಧ್ಯಾತ್ಮ ಶಿಕ್ಷಕರು ಪ್ರಜಾಪಿತ ಬ್ಯಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ ಹುಳಿಯಾರು ಭಾರತ ದೇಶ ಆಧ್ಯಾತ್ಮ ಪ್ರಧಾನ ದೇಶವಾಗಿದೆ. ಇಲ್ಲಿ ಆಚರಿಸುವಷ್ಟು ಹಬ್ಬಗಳನ್ನು ಬಹುಶಃ ಬೇರೆ ಯಾವ ದೇಶಗಳಲ್ಲಿಯೂ ಆಚರಿಸಲಿಕ್ಕಿಲ್ಲ.ಸಮಯ ಪ್ರತಿ ಸಮಯವಾಗಿ ಈ ಹಬ್ಬಗಳು ಆಧ್ಯಾತ್ಮಿಕತೆಯ ರಹಸ್ಯವನ್ನು ಜಾಗೃತ ಮಾಡುತ್ತವೆ. ಇದರಲ್ಲಿ ಶಿವರಾತ್ರಿಯೂ ಸಹ ಒಂದು ವಿಶಿಷ್ಟ ಹಾಗೂ ಮುಖ್ಯವಾದ ಹಬ್ಬವಾಗಿದೆ. ಮಹಾಶಿವರಾತ್ರಿ ಹೆಸರಿನಂತೆಯೇ ಮಹಾನ್ ಕೂಡಾವಾಗಿದೆ.ಏಕೆಂದರೆ ಈ ಮಹಾನತೆಯಿಂದ ಕೂಡಿದ ಹಬ್ಬ ಸಮಸ್ತ ಸಂಸಾರದ ಸರ್ವಆತ್ಮಗಳಿಗೆ ಪರಮಪಿತ ಪರಮಾತ್ಮ ಶಿವನ ಸ್ಮೃತಿಯನ್ನು ತರಿಸುತ್ತವೆ. ಭಾರತದಲ್ಲಿ ಶಿವಲಿಂಗ ಇರುವಂತಹ ಮಂದಿರಗಳು ಲಕ್ಷಾಂತರ. ಬಹುಶಃ ಎಲ್ಲಿ ಹೋದರೂ ಎಲ್ಲಾ ಮಂದಿರದಲ್ಲಿಯೂ ಅವಶ್ಯ ಶಿವಲಿಂಗವನ್ನು ನೋಡುತ್ತೇವೆ. ಶಿವನ ಗಾಯನ ವಿಲ್ಲದ ಗ್ರಂಥವೇ ಇಲ್ಲಾ, ಆದರೂ ಸಹ ವಿಚಿತ್ರವೇನೆಂದರೆ ಶಿವನ ಪರಿಚಯಕ್ಕೆ ಮನುಷ್ಯಾತ್ಮರು ಅಪರಿಚಿತರಾಗಿದ್ದಾರೆ. ಭಾರತದ ಮೂಲೆ ಮೂಲೆಗಳಲ್ಲಿ ಶಿವನ ಭಿನ್ನ ಭಿನ್ನ ಹೆಸರುಗಳಲ್ಲಿ ನಿರಾತಾರ ಜ್ಯೋರ್ತಲಿಂಗಾ ಶಿವಪರಮಾತ್ಮನ ಆರಾಧನೆ ನಡೆಯುತ್ತದೆ. ಉದಾಹರಣೆಗೆ ಅಮರನಾಥ, ವಿಶ್ವನಾಥ, ಸೋಮನಾಥ, ಬಬಲನಾಥ, ಪಶುಪತಿನಾಥ ಇತ್ಯಾದಿ ವಾಸ್ತವಿಕವಾಗಿ ಶ್ರೀಕೃಷ್ಣ ಹಾಗೂ ಮರ್ಯಾದ ಪುರುಷೋತ್ತಮ ಶ್ರೀರಾಮನಿಗೂ ಇಷ್ಟವಾದ ದೇವರೆ

ದುರ್ಗದ ಸ್ಪೈಡರ್ ಮ್ಯಾನ್ ಜ್ಯೋತಿರಾಜ್

ಇತ್ತೀಚೆಗೆ ಚಿತ್ರದುರ್ಗದ ಕೋಟೆಗೆ ಹೋದವರಿಗೆ ಸ್ಪೈಡರ್ ಮ್ಯಾನ್ ಜ್ಯೋತಿರಾಜ್ ಕೋಟೆಯ ಆವರಣದಲ್ಲಿ ಕಂಡು ಬರ್ತಾನೆ.ಕೋಟೆಗೋಡೆ ಹತ್ತುವ ಅವನ ಸಾಹಸ ಎಂತಹ ಗಂಡೆದೆಯವರನ್ನು ಉಸಿರು ಬಿಗಿ ಹಿಡಿಯುವಂತೆ ಮಾಡುತ್ತದೆ." "ಕೋತಿ ರಾಮ" ಎಂದೇ ಖ್ಯಾತರಾದ ತಮಿಳುನಾಡಿನ ಮೂಲದವರಾದ ಜ್ಯೋತಿರಾಜ್, ದುರ್ಗದ ಕೋಟೆಯ ಗೋಡೆಯನ್ನು ಉಡದಂತೆ ಯಾವುದರ ಸಹಾಯವೂ ಇಲ್ಲದೇ ಲೀಲಾಜಾಲವಾಗಿ ಏರ ಬಲ್ಲರು. ಬರೀ ಏರುವುದಷ್ಟೇ ಅಲ್ಲದೆ ಗೋಡೆ ಹತ್ತುತ್ತಾ ಲಾಗ ಕೂಡ ಹಾಕಬಲ್ಲರು. ರಾಕ್ ಕ್ಲೈಂಬಿಂಗಿನಲ್ಲಿ ಪ್ರಪಂಚದಲ್ಲಿ ಮೂರನೇ ಸ್ಥಾನ ಎಂದು ಅವರನ್ನು ಮಾತನಾಡಿಸಿದಾಗ ತಿಳಿದು ಬಂದ ಸಂಗತಿ." ಅವನ ಬಗ್ಗೆ ಪುಟಗಟ್ಟಲೆ ಬರೆದು ಅವನ ಚಿತ್ರಣ ಕಟ್ಟಿಕೊಡುವ ಬದಲು ಅವನ ಬಗ್ಗೆ ಇರುವ ವಿಡಿಯೋ ತುಣುಕುಗಳನ್ನು ಇದರೊಂದಿಗೆ ಲಿಂಕ್ ಮಾಡಿ ಅವನ ಸಾಹಸದ ಪ್ರತ್ಯಕ್ಷದರ್ಶನ ಮಾಡಿಸುವ ಪ್ರಯತ್ನ ಮಾಡಿದ್ದೇನೆ. ದುರ್ಗದ ಸ್ಪೈಡರ್ ಮ್ಯಾನ್ ಜ್ಯೋತಿರಾಜ್ ಬಗ್ಗೆ ಬರೆಯಲು ಹೊರಟಾಗ ಬ್ಲಾಗ್ ಗಳಲ್ಲಿ ಅವನ ಬಗ್ಗೆ ದೊರತ ಮಾಹಿತಿಯನ್ನು ಲಿಂಕ್ ಮಾಡಿದ್ದೇನೆ. ಸಾದ್ಯವಾದರೆ ಚಿತ್ರದುರ್ಗಕ್ಕೆ ಹೋಗಿ ಕಣ್ಣಾರೆ ನೋಡಿ.ಇಲ್ಲವಾದರೆ ಕೆಳಗಿರುವ ಲಿಂಕ್ ಫಾಲೋ ಮಾಡಿ ಅವನ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿ. 1.ಚಿತ್ರದುರ್ಗದ ಪತ್ರಕರ್ತರ ಒಳಗೂ..ಹೊರಗೂ ಬ್ಲಾಗ್ ನಲ್ಲಿ ಹೀಗಿದೆ. http://olagoo-horagoo.blogspot.com/2009/07/blog-post_23.html 2.ಅಧ್ಭುತವಾದ ಫೋಟೊ ಹಾಗು ವಿಡಿಯೋ

ಆನ್ ಲೈನ್ ಲಾಟರಿ ನಿಷೇದದಲ್ಲಿ ಪ್ರೋ.ನಂಜುಂಡಸ್ವಾಮಿಯವರ ಪಾತ್ರ

Prof.M.D.Nanjundaswamy who was called as a Champion of Farmers Rights and a Green Shawled Hero.He was actually a Socialist Leader.He was the only man who Re-Raided the Government Banks which was Exploiting Poor farmers by Raiding their houses. He was the first Person in the world to fight against WTO(world trade organisation),GM(Genetically modified Seeds and Crops),Genetic Engineering,GATT,Dunkel Draft.KFC(Kentucky Fried Chicken)He had also protested against Miss World 96.He was a big support for the Coconut Farmers to tap Neera(Coconut Sap)when there was a disease(NUSI) for the Coconut Trees in Karnataka.He was the first person to fight for the Scientific Price Policy and the Scientific Electricity Policy ಕಳೆದ ಎರಡು ವರ್ಷಗಳ ಹಿಂದೆ ವಿಜೃಂಭಿಸುತ್ತಿದ ಆನ್ ಲೈನ್ ಲಾಟರಿಯಿಂದ ಹಲವಾರು ಕುಟುಂಬಗಳು ಬೀದಿಪಾಲಾಗಿದ್ದು ಈಗ ಇತಿಹಾಸ.ಮದ್ಯಮವರ್ಗದ ಜನತೆಗೆ ಕಂಟಕ ಪ್ರಾಯವಾಗಿದ್ದ ಲಾಟರಿ ನಿಷೇದಿಸುವಂತೆ ನಡೆದ ಹೋರಾಟದಲ್ಲಿ ರೈತಸಂಘ ಹಾಗು ಪ್ರೋ.ನಂಜುಂಡಸ್ವಾಮಿಯವರ ಪಾತ್ರ ಎಷ್ಟಿತ್ತು ಎನ್ನುವುದನ್ನು ಈ ವಿಡಿಯೋ ತುಣುಕಿನಲ್ಲಿ ವೀಕ್ಷಿಸಬಹುದಾಗಿದೆ.

ಆನ್ ಲೈನ್ ಲಾಟರಿ ನಿಷೇದದಲ್ಲಿ ಪ್ರೋ.ನಂಜುಂಡಸ್ವಾಮಿಯವರ ಪಾತ್ರ

Prof.M.D.Nanjundaswamy who was called as a Champion of Farmers Rights and a Green Shawled Hero.He was actually a Socialist Leader.He was the only man who Re-Raided the Government Banks which was Exploiting Poor farmers by Raiding their houses. He was the first Person in the world to fight against WTO(world trade organisation),GM(Genetically modified Seeds and Crops),Genetic Engineering,GATT,Dunkel Draft.KFC(Kentucky Fried Chicken)He had also protested against Miss World 96.He was a big support for the Coconut Farmers to tap Neera(Coconut Sap)when there was a disease(NUSI) for the Coconut Trees in Karnataka.He was the first person to fight for the Scientific Price Policy and the Scientific Electricity Policy ಕಳೆದ ಎರಡು ವರ್ಷಗಳ ಹಿಂದೆ ವಿಜೃಂಭಿಸುತ್ತಿದ ಆನ್ ಲೈನ್ ಲಾಟರಿಯಿಂದ ಹಲವಾರು ಕುಟುಂಬಗಳು ಬೀದಿಪಾಲಾಗಿದ್ದು ಈಗ ಇತಿಹಾಸ.ಮದ್ಯಮವರ್ಗದ ಜನತೆಗೆ ಕಂಟಕ ಪ್ರಾಯವಾಗಿದ್ದ ಲಾಟರಿ ನಿಷೇದಿಸುವಂತೆ ನಡೆದ ಹೋರಾಟದಲ್ಲಿ ರೈತಸಂಘ ಹಾಗು ಪ್ರೋ.ನಂಜುಂಡಸ್ವಾಮಿಯವರ ಪಾತ್ರ ಎಷ್ಟಿತ್ತು ಎನ್ನುವುದನ್ನು ಈ ವಿಡಿಯೋ ತುಣುಕಿನಲ್ಲಿ ವೀಕ್ಷಿಸಬಹುದಾಗಿದೆ. ಈ ಕೆಳಗಿನ

ಲಾಟರಿ ನಿಷೇದಕ್ಕೆ ಪ್ರೋ.ನಂಜುಂಡಸ್ವಾಮಿಯವರ ಹೋರಾಟ

ಈ ಹಿಂದೆ ಆನ್ ಲೈನ್ ಲಾಟರಿ ಪಿಡುಗು ಎಷ್ಟು ಹೆಚ್ಚಿತ್ತು ಎಂದರೆ ಲಾಟರಿ ಗೀಳಿಗೆ ಬಿದಿದ್ದ ಬಡಬಗ್ಗರು ಲಾಟರಿ ಜೂಜಿನಲ್ಲಿ ತೊಡಗಿ ಮನೆ ಮಂದಿಗೆ ಎರಡು ಹೊತ್ತಿನ ಊಟಕ್ಕೂ ತತ್ವಾರ ಎಂಬ ಸ್ಥಿತಿ ನಿರ್ಮಾಣವಾಗಿತ್ತು.ಇದನ್ನು ನಿಷೇದಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲು ರೈತಸಂಘ ಹಾಗು ನಂಜುಂಡಸ್ವಾಮಿಯವರ ಹೋರಾಟ ಮಾಡಿ ಕಡೆಗು ಸರ್ಕಾರವನ್ನು ಮಣಿಸಿದ್ದು ಈಗ ಯಶೋಗಾಥೆ.ಬನ್ನಿ ಈ ಹೋರಾಟದ ವಿಡಿಯೋ ತುಣುಕೊಂದನ್ನು ವೀಕ್ಷಿಸೋಣ. ದಯಮಾಡಿ ಈ ಕೆಳಗಿನ ಯುಆರೆಲ್ ಒತ್ತಿ. http://www.youtube.com/watch?v=_9YWsXkuWAE

Prof.M.D.Nanjundaswamy ಅವರ ರೈತ ಸಂಘದ ವಿಡಿಯೋ ತುಣುಕು

Prof.M.D.Nanjundaswamy who was called as a Champion of Farmers Rights and a Green Shawled Hero.He was actually a Socialist Leader.He was the only man who Re-Raided the Government Banks which was Exploiting Poor farmers by Raiding their houses. He was the first Person in the world to fight against WTO(world trade organisation),GM(Genetically modified Seeds and Crops),Genetic Engineering,GATT,Dunkel Draft.KFC(Kentucky Fried Chicken)He had also protested against Miss World 96.He was a big support for the Coconut Farmers to tap Neera(Coconut Sap)when there was a disease(NUSI) for the Coconut Trees in Karnataka.He was the first person to fight for the Scientific Price Policy and the Scientific Electricity Policy ಈ ಕೆಳಗಿನ ಲಿಂಕ್ ಫಾಲೋ ಮಾಡಿದರೆ ನಿಮಗೆ ವಿಡಿಯೋ ಪ್ರದರ್ಶನವಾಗುತ್ತದೆ. http://www.youtube.com/watch?v=c08Pxsltuvk

P Lankesh's Review about Budjet 1990

ಮುಂದಿನ ತಿಂಗಳು ಬಜೆಟ್ ಸಮಯ.ದಿವಂಗತ ಪಿ.ಲಂಕೇಶ್ ಬಜೆಟ್ ಬಗ್ಗೆ ೧೯೯೦ರಲ್ಲಿ ಹೇಳಿರುವುದು ಇಲ್ಲಿದೆ.ಈ ಲಿಂಕ್ ಫಾಲೋ ಮಾಡಿ www.youtube.com/watch?v=B38yzW2yc78

ಮಾವನೂರಿನಲ್ಲಿ ಮಾಸ್ಟರ್

ಮಾವನೂರಿನಲ್ಲಿ ಮಾಸ್ಟರ್ ಕಳೆದ ಮೂರು ವರ್ಷದ ಹಿಂದೆ(11.02.2007) ಹುಳಿಯಾರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಮಗೆ ಹೆಣ್ಣು ಕೊಟ್ಟ ಮಾವನ ದೊಡ್ಡಬಿದರೆಯಲ್ಲಿನ ಮನೆಯನ್ನು ವೀಕ್ಷಿಸುವ ಮೂಲಕ ತಮ್ಮ ವಿವಾಹ ದಿನಗಳನ್ನು ನೆನಪು ಮಾಡಿಕೊಳ್ಳುತ್ತಿರುವ ಮಾಸ್ಟರ್. http://huliyarnews.blogspot.com ನಲ್ಲಿ ಹುಳಿಯಾರಿಗೆ ಸಂಬಂಧಿಸಿದ ಸುದ್ದಿಗಳನ್ನು ವೀಕ್ಷಿಸಬಹುದು.

ಪೋಲಿಸ್ ಠಾಣೆಯ ಆವರಣದಲ್ಲಿ ಜನಸಂಪರ್ಕ ಸಭೆ

ಹುಳಿಯಾರು ಪಿಎಸ್ಐ ಪಾರ್ವತಿಯಾದವ್ 04.02.2010 ರಂದು ಪೋಲಿಸ್ ಠಾಣೆಯ ಆವರಣದಲ್ಲಿ ಜನಸಂಪರ್ಕ ಸಭೆ ನಡೆಸಿದರು.ಇದರ ವರದಿ DECCAN HERALD ಪತ್ರಿಕೆಯಲ್ಲಿ ದಿನಾಂಕ 6.02.2010 ರಂದು ಪ್ರಕಟವಾಗಿದೆ.

ಕಾಯಿ ತಿಮ್ಮನಹಳ್ಳಿಯಲ್ಲಿ ನಡೆದ ರೈತ ಸಮಾವೇಶ

3.02.2010ರಂದು ಕಾಯಿ ತಿಮ್ಮನಹಳ್ಳಿಯಲ್ಲಿ ನಡೆದ ರೈತ ಸಮಾವೇಶದ ವರದಿ DECCAN HERALD ಪತ್ರಿಕೆಯಲ್ಲಿ ದಿನಾಂಕ 6.02.2010 ರಂದು ಪ್ರಕಟವಾಗಿದೆ.

ಬಡಕೆಗುಡ್ಲುವಿನಲ್ಲಿ ನಡೆದ ರೈತ ಸಂಘದ ಉಧ್ಘಾಟನಾ ಸಮಾರಂಭ

ಫೆ. ೩ ನೇ ತಾರೀಖು ಬಡಕೆಗುಡ್ಲುವಿನಲ್ಲಿ ನಡೆದ ರೈತ ಸಂಘದ ಉಧ್ಘಾಟನಾ ಸಮಾರಂಭದ ವರದಿ.ದಿನಾಂಕ Feb 07.2010 ರ ಭಾನುವಾರದಂದು ಉದಯವಾಣಿ ಪತ್ರಿಕೆಯ ನಮ್ಮ ತುಮಕೂರು ವಿನಲ್ಲಿ ಪ್ರಕಟವಾಗಿದೆ.

ಕಾಯಿತಿಮ್ಮನಹಳ್ಳಿಯಲ್ಲಿ ನಡೆದ ರೈತ ಸಮಾವೇಶ

ಫೆ. ೩ ನೇ ತಾರೀಖು ಕಾಯಿತಿಮ್ಮನಹಳ್ಳಿಯಲ್ಲಿ ನಡೆದ ರೈತ ಸಮಾವೇಶದ ವರದಿ.ದಿನಾಂಕ Feb 07.2010 ರ ಭಾನುವಾರದಂದು ಉದಯವಾಣಿ ಪತ್ರಿಕೆಯ ನಮ್ಮ ತುಮಕೂರು ವಿನಲ್ಲಿ ಪ್ರಕಟವಾಗಿದೆ.

ಕಂದಿಕೆರೆ ಕಲ್ಪತರು ಗ್ರಾಮೀಣ ಬ್ಯಾಂಕಿನ ಕಾರ್ಯಕ್ರಮ

ಕಂದಿಕೆರೆ ಕಲ್ಪತರು ಗ್ರಾಮೀಣ ಬ್ಯಾಂಕಿನ ಕಾರ್ಯಕ್ರಮದ ವರದಿ. ದಿನಾಂಕ Feb 07.2010 ರ ಭಾನುವಾರದಂದು ಉದಯವಾಣಿ ಪತ್ರಿಕೆಯ ನಮ್ಮ ತುಮಕೂರು ವಿನಲ್ಲಿ ಪ್ರಕಟವಾಗಿದೆ

ಕೇಶವ ನಿಲಯದಲ್ಲಿ ಕೌಟಂಬಿಕ ಬೆಸುಗೆ

ಹುಳಿಯಾರಿನಲ್ಲಿ ಹೆಚ್.ಕೆ. ಅನಂತರಾಮಣ್ಣನವರ ಫ್ಯಾಮಿಲಿಯವರು ವಸಂತನಗರದಲ್ಲಿರುವ ಶ್ರೀ ಸೀತಾರಾಮ ಕಲ್ಯಣ ಮಂಟಪದಲ್ಲಿ ಜ.೧೭ರಂದು ಆಚರಿಸಿದ ಸಂತೋಷಕೂಟದ ವರದಿ.ಇದನ್ನು ಸಂಯುಕ್ತ ಕರ್ನಾಟಕ ಪತ್ರಿಕೆಗೆ ನಾನು ವರದಿ ಮಾಡಿದ್ದು ರಾಜ್ಯ ಸುದ್ದಿಯಲ್ಲಿ ಪುಟ ೧೨ರಲ್ಲಿ ದಿನಾಂಕ ೨೦ರಂದು ಪ್ರಕಟವಾಗಿದೆ.ಇದೆ ಸುದ್ದಿಯನ್ನು ಸಂಯುಕ್ತಕರ್ನಾಟಕ ಪತ್ರಿಕೆಯ ಇ-ಆವೃತಿಯಲ್ಲಿ ಸಹ ನೋಡಬಹುದು.

ಬೋರನಕಣಿವೆಗೆ ಹೇಮೆ ತರುವಲ್ಲಿ ವಿಫಲವಾದರೆ ಹಸಿರು ಶಾಲು ಹಾಕುವುದಿಲ್ಲ: ಸತೀಶ್ ಶಪಥ

ಬೋರನಕಣಿವೆಗೆ ಹೇಮೆ ತರುವಲ್ಲಿ ವಿಫಲವಾದರೆ ಹಸಿರು ಶಾಲು ಹಾಕುವುದಿಲ್ಲ: ಸತೀಶ್ ಶಪಥ ------------------------------------------------------- ಹುಳಿಯಾರು: ಬೋರನಕಣಿವೆ ಜಲಾಶಯಕ್ಕೆ ಚಿಕ್ಕನಾಯಕನಹಳ್ಳಿ ತಾಲೂಕಿನ ವಿವಿಧ ಕೆರೆಗಳ ಮೂಲಕ ನೈಸರ್ಗಿಕವಾಗಿ ಹೇಮಾವತಿ ನೀರನ್ನು ತರುವಲ್ಲಿ ವಿಫಲವಾದರೆ ಆ ಕ್ಷಣದಿಂದಲೇ ಹಸಿರು ಶಾಲು ಹಾಕುವುದಿಲ್ಲ ಎಂದು ರಾಜ್ಯ ಹಸಿರು ಸೇನೆ ಸಂಚಾಲಕ ಕೆಂಕೆರೆ ಸತೀಶ್ ಅವರು ಶಪಥ ಗೈದರು. ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಶ್ರೀ ಲಕ್ಷ್ಮೀವಿನಾಯಕ ರೈತ ಸಂಘ ಕಾಯಿ ತಿಮ್ಮನಹಳ್ಳಿಯಲ್ಲಿ ಏರ್ಪಡಿಸಿದ್ದ ಹೋಬಳಿ ಮಟ್ಟದ ರೈತ ಸಮಾವೇಶದಲ್ಲಿ ಅವರು ಮಾತನಾಡಿ ನೈಸರ್ಗಿಕವಾಗಿ ಬೋರನಕಣಿವೆಗೆ ನೀರು ಹರಿಯುವುದರಿಂದ ಅಂತರ್ಜಲ ವೃದ್ಧಿಯಾಗಿ, ಉದ್ಯೋಗ ಸೃಷ್ಠಿಯಾಗಿ ಪಟ್ಟಣಗಳಿಗೆ ಗುಳೆ ಹೋಗುವುದನ್ನು ತಪ್ಪಿಸಬಹುದಾಗಿದ್ದು ಈ ಭಾಗದ ಜನರ ಹಿತದೃಷ್ಠಿಯಿಂದ ಎಂತಹುದೇ ಪರಿಸ್ಥಿತಿ ನಿಮರ್ಾಣವಾದರೂ ಸಹ ನೀರಿನ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಸಾರಿದರು. ರಾಗಿ, ಕೊಬ್ಬರಿಗೆ ಬೆಂಬಲ ಬೆಲೆಗೆ, ನ್ಯಾಫೆಡ್ ಕೇಂದ್ರಕೆ, ಟಿಸಿಗಳಿಗೆ ಹೀಗೆ ಈ ಹಿಂದೆ ಮಾಡಿದ ಅನೇಕ ಹೋರಾಟದಲ್ಲಿ ಯಶಸ್ವಿಯಾಗಿದ್ದೇವೆ. ಈಗ ರಾಜಕಾರಣಿಗಳ ದಿವ್ಯ ನಿರ್ಲಕ್ಷ್ಯದಿಂದ ನೀರಿನ ಹಾಹಾಕಾರಕ್ಕೆ ತುತ್ತಾಗಿರುವ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ನೀರಿನ ಕ್ರಾಂತಿ ಮಾಡುವ ಸಲುವಾಗಿ ಹೇಮೆ ಹರಿಸುವ ಹೋರಾಟಕ್ಕೆ ಧುಮುಕಲಾಗಿದೆ. 3 ತಿಂಗಳ ವಿವಿಧ ಸ