ಹುಳಿಯಾರು ಹೋಬಳಿಯ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದವತಿಯಿಂದ ನಂದಿಹಳ್ಳಿಯಲ್ಲಿ ಆಯೋಜಿಸಿರುವ 2011-12ನೇ ಸಾಲೀನ 7ದಿನಗಳ ಎನ್.ಎಸ್.ಎಸ್ ಶಿಬಿರದ 4ನೇ ದಿನವಾದ ಇಂದು(ತಾ.11) ಶನಿವಾರ ಮಧ್ಯಾಹ್ನ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವ ನಡೆಯಲಿದೆ.
ತಾಲ್ಲೂಕು ಸಮಾಜಕಲ್ಯಾಣ ಇಲಾಖೆ ಮತ್ತು ರೋಟರಿ ಕ್ಲಬ್ ನ ಅಧ್ಯಕ್ಷರಾದ ಕೆ.ಆರ್. ಚನ್ನಬಸಪ್ಪ ಅಧ್ಯಕ್ಷತೆವಹಿಸುವ ಸಮಾರಂಭದಲ್ಲಿ ಸಕ್ಕರೆ ಕಾಯಿಲೆ ಮತ್ತು ಅದರ ನಿರ್ವಹಣೆ ಹಾಗೂ ಆಸ್ಪೃಶ್ಯತಾ ನಿವಾರಣೆ ಎಂಬ ವಿಷಯದ ಬಗ್ಗೆ ಸಿದ್ದಶ್ರೀ ಕ್ಲಿನಿಕ್ ನ ಡಾ ವೈಜಿ.ಸಿದ್ದರಾಮಯ್ಯ ಉಪನ್ಯಾಸ ನೀಡಲಿದ್ದಾರೆ.ಅಲ್ಲದೆ ತಾಲ್ಲೂಕು ವೈದ್ಯ ಸಂಘದ ಕಾರ್ಯದರ್ಶಿ ಡಾ ಸಂಜೀವ್ ಕುಮಾರ್,ಡಾಪ್ರಶಾಂತಕುಮಾರ್,ಸ್ವಂದನ ನರ್ಸಿಂಗ್ ಹೋಂನ ಡಾ ನಾಗರಾಜು,ವೀರಭದ್ರೇಶ್ವರ ಕ್ಲಿನಿಕ್ ನ ಡಾ ರಾಜಶೇಖರ್, ಡಾಶಶಿಕಿರಣ್ , ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ದಾಸಪ್ಪ,ವ್ಯವಸ್ಥಾಪಕ ರಾಮಣ್ಣ, ಚನ್ನಬಸವಯ್ಯ, ಲಿಂಗದೇವರು,ಪ್ರಾಧ್ಯಾಪಕ ಹನುಮಂತಪ್ಪ ಸೆರಿದಂತೆ ಇತರರು ಭಾಗವಹಿಸುವ ಕಾರ್ಯಕ್ರಮಕ್ಕೆ ಗ್ರಾಮದ ಸುತ್ತಲಿನ ಸಾರ್ವಜನಿಕರು ಪಾಲ್ಗೊಂಡು ಅದರ ಬಗ್ಗೆ ಮಾಹಿತಿ ಪಡೆಯಬೇಕೆಂದು ಶಿಬಿರಾಧಿಕಾರಿ ಶಂಕರಲಿಂಗಯ್ಯ ಕೋರಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ