ಮೊದಲು ಕಾಲೇಜಿನ ಕಛೇರಿಗೆ ಭೇಟಿ ನೀಡಿ ಹಲವಾರು ದಾಖಲೆ ಪರಿಶೀಲಿಸಿದರು.ವಿದ್ಯಾರ್ಥಿಗಳ ಪ್ರವೇಶಾತಿ,ಕಾಲೇಜು ಸಂಗ್ರಹಿಸುವ ವಿವಿಧ ಶುಲ್ಕಗಳ ಮಾಹಿತಿ,ಪ್ರವೇಶಾತಿ ಸಮಯದಲ್ಲಿ ನೀಡಲಾಗುವ ಕಾಲೇಜು ಕೈಪಿಡಿ,ವಿದ್ಯಾರ್ಥಿಗಳಿಗೆ ನೀಡಲಾಗುವ ಶಿಷ್ಯವೇತನ, ಪರೀಕ್ಷಾ ಸಂಬಂಧಿತ ಶುಲ್ಕ,ಪ್ರವೇಶ ಪತ್ರ, ಅಂಕಪಟ್ಟಿ ವಿತರಣೆ....ಹೀಗೆ ಹಲವಾರು ವಿಷಯಗಳ ಕುರಿತು ದಾಖಲೆ ಪರಿಶೀಲಿಸಿದರು.ಕೆಲವು ಸಲಹೆ-ಸೂಚನೆ ನೀಡಿದರು.ಕಾಲೇಜು ಕೈಪಿಡಿ ಪುಸ್ತಕ ಆಕರ್ಷಣಿಯವಾಗಿರಲಿ ಎಂದು ಸಲಹೆ ನೀಡಿದರು.
ಈ ಸಭೆಯಲ್ಲಿ ನ್ಯಾಕ್ ಪೀರ್ ತಂಡದ ಸದಸ್ಯರು,ಪ್ರಾಂಶುಪಾಲರು, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿದರು.IQAC ಸಂಚಾಲಕರಾದ ಡಾ.ಸುಷ್ಮಾ ಎಲ್ ಬಿರಾದಾರ್ ಸ್ವಾಗತಿಸಿದರು.
ನ್ಯಾಕ್ ತಂಡದ ಮತ್ತೊಬ್ಬ ಸದಸ್ಯ ಡಾ.ಪ್ರಕಾಶ್ ಬನ್ಮೇರು ಅಧ್ಯಾಪಕರೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತಾ, ಅಧ್ಯಾಪಕರು ಸಂಶೋಧನಾ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು.ಹೆಚ್ಚು ಲೇಖನ,ಪುಸ್ತಕ ಪ್ರಕಟಿಸಬೇಕು ಎಂದು ಸಲಹೆ ನೀಡಿದರು.ಕಾಲೇಜಿಗೆ ಇನ್ನೂ ಹೆಚ್ಚಿನ ಮೂಲಭೂತ ಸೌಕರ್ಯಗಳು ಒದಗಿಸುವಂತೆ ಕಾಲೇಜು ಅಭಿವೃದ್ಧಿ ಸಮಿತಿಗೆ ಒತ್ತಾಯಿಸಬೇಕು ಎಂದು ಕಿವಿಮಾತು ಹೇಳಿದರು.ನ್ಯಾಕ್ ನ ಮಾದರಿಗೆ ಅನುಗುಣವಾಗಿ ದಾಖಲೆಗಳ ನಿರ್ವಹಣೆ ಮಾಡಿದ್ದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಗ್ರೇಡ್ ಪಡೆಯಲು ಅನುಕೂಲವಾಗಬಹುದು ಎಂದು ತಿಳಿಸಿದರು.
ಪ್ರಾಂಶುಪಾಲರಾದ ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ ನಮ್ಮ ಕಾಲೇಜಿನಲ್ಲಿ ಎಲ್ಲಾ ಸಿಬ್ಬಂದಿಗಳು ಒಂದು ತಂಡವಾಗಿ ಕೆಲಸ ಮಾಡಿದ್ದೇವೆ.ಅದು ನಮ್ಮ ಯಶಸ್ಸಿನ ಮೂಲಮಂತ್ರ ಎಂದು ಅಭಿಪ್ರಾಯಪಟ್ಟರು.
IQAC ಸಹ ಸಂಚಾಲಕರಾದ ಶ್ರೀ ಮಲ್ಲಿಕಾರ್ಜುನರವರು ಎಲ್ಲರಿಗೂ ವಂದಿಸಿದರು.
---------------------------------
ಜಾಹಿರಾತು
ಹುಳಿಯಾರಿನಲ್ಲಿ ವೈದ್ಯಕೀಯ ಸೇವೆಗೆ ಹೆಸರಾಗಿರುವ ಕಲ್ಬತರು ಆಸ್ಪತ್ರೆಗೆ ಪ್ರತಿ ಶುಕ್ರವಾರ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಬಂಜೆತನ ನಿವಾರಣಾ ತಜ್ಞರು, ಭೇಟಿ ಸೌಲಭ್ಯ ಕಲ್ಪಿಸಲಾಗಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ