ಹುಳಿಯಾರು: ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ದೆಹಲಿಯ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತೆ ಪರಿಷತ್ತಿನ ಕಮಿಟಿ ಇದೇ ತಿಂಗಳ 8 ಮತ್ತು 9 ರಂದು ಭೇಟಿ ನೀಡಿ ಕಾಲೇಜಿನ ಶೈಕ್ಷಣಿಕ ಗುಣಮಟ್ಟದ ಕುರಿತು ಮೌಲ್ಯಮಾಪನ ನಡೆಸಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಬಿ.ಆರ್ ಕೃಷ್ಣಮೂರ್ತಿ ತಿಳಿಸಿದರು.ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಕಮಿಟಿ ಭೇಟಿನೀಡುತ್ತಿರುವ ಕುರಿತು ಕಾಲೇಜಿನ ಪ್ರಾಂಶುಪಾಲ ಬಿ.ಆರ್ ಕೃಷ್ಣಮೂರ್ತಿ ಕಾಲೇಜಿನಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಂಥಪಾಲಕ ಡಾ|| ಲೋಕೇಶ್ ನಾಯ್ಕ್, ಪ್ರೊ.ಮಲ್ಲಿಕಾರ್ಜುನ ಹಾಜರಿದ್ದರು
ನ್ಯಾಕ್ ಕಮಿಟಿ ಪ್ರತಿ ಐದು ವರ್ಷಕ್ಕೊಮ್ಮೆ ಮೌಲ್ಯಮಾಪನ ನಡೆಸಲಿದ್ದು ಇದೀಗ ಮೂರನೇ ಆವೃತ್ತಿಯ ನ್ಯಾಕ್ ಮೌಲ್ಯಮಾಪನ ಪ್ರಕ್ರಿಯೆಗಾಗಿ ತಜ್ಞರ ಸಮಿತಿ ಕಾಲೇಜಿಗೆ ಭೇಟಿ ನೀಡಲಿದೆ ಎಂದರು. ಈ ಸಮಯದಲ್ಲಿ ಹಾಲಿ ವಿದ್ಯಾರ್ಥಿಗಳ ಪೋಷಕರು,ಕಾಲೇಜಿನ ಹಳೆ ವಿದ್ಯಾರ್ಥಿಗಳು, ಕಾಲೇಜಿನ ಹಿತೈಷಿಗಳು ಹಾಜರಿದ್ದು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.
ನ್ಯಾಕ್ ಕಮಿಟಿ ಕೋ-ಆರ್ಡಿನೇಟರ್ ಡಾ|| ಸುಷ್ಮಾ ಬಿರಾದಾರ್ ಮಾತನಾಡಿ ನ್ಯಾಕ್ ಕಮಿಟಿ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಆಡಳಿತ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ,ವಿವಿಧ ವಿಭಾಗಗಳು ಹಾಗೂ ಕಾಲೇಜಿನಲ್ಲಿ ದೊರೆಯಲ್ಲಿರುವ ಮೂಲಸೌಕರ್ಯಗಳ ಬಗ್ಗೆ ಪರಿಶೀಲಿಸಲಿದ್ದಾರೆ ಎಂದರು.
ಚತ್ತೀಸ್ ಘಡ್ ನ ಪಂಡಿತ್ ರವಿಶಂಕರ್ ಶುಕ್ಲಾ ಯುನಿವರ್ಸಿಟಿಯ ವೈಸ್ ಚಾನ್ಸಲರ್ ಡಾ|| ಕೇಶಾರಿ ಲಾಲ್ ವರ್ಮಾ ಅವರ ನ್ಯಾಕ್ ಕಮಿಟಿಯ ತಂಡದಲ್ಲಿ ಉತ್ತರಪ್ರದೇಶದ ಅಲಿಘರ್ ಮುಸ್ಲಿಂ ಯುನಿವರ್ಸಿಟಿಯ ಡೈರೆಕ್ಟರ್ ಡಾ|| ಜಾವಿದ್ ಅಕ್ತರ್, ಮಹಾರಾಷ್ಟ್ರದ ಬುಲ್ದಾನದ ಲೇ.ಕು.ದುರ್ಗಾ ಬನ್ಮೇರ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲ ಡಾ|| ಪ್ರಕಾಶ್ ಕೆ ಬನ್ಮೇರು ಆಗಮಿಸಲಿದ್ದು ಕಾಲೇಜಿನ ಆಡಳಿತ, ಶೈಕ್ಷಣಿಕ ಪ್ರಕ್ರಿಯೆ, ಫಲಿತಾಂಶ, ಮೂಲಸೌಕರ್ಯ, ಕಲಿಕಾ ಸಂಪನ್ಮೂಲಗಳ ಪರಿಶೀಲನೆ ಸೇರಿದಂತೆ ವಿದ್ಯಾರ್ಥಿಗಳ ವ್ಯಾಸಂಗದ ಪ್ರಗತಿ ಕುರಿತು ಸಂವಾದ ನಡೆಸಿ ಮಾಹಿತಿ ಪಡೆಯಲಿವೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸಚಿವ ಜೆ.ಸಿ.ಮಾಧುಸ್ವಾಮಿಯವರು ಸಹ ಆಗಮಿಸಲಿದ್ದು ನ್ಯಾಕ್ ಸಮಿತಿ ಅವರೊಂದಿಗೆ ಸೇರಿದಂತೆ ಹಳೆಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕರ ಸಭೆ ನಡೆಸಿ ಅಭಿಪ್ರಾಯ ಪಡೆಯಲಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಂಥಪಾಲಕ ಡಾ|| ಲೋಕೇಶ್ ನಾಯ್ಕ್, ಪ್ರೊ.ಮಲ್ಲಿಕಾರ್ಜುನ ಹಾಜರಿದ್ದರು
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ