ಹುಳಿಯಾರು ಪಟ್ಟಣ ಸಂತೆ ಸ್ಥಳಾಂತರ ಮತ್ತು ನೆಲ ಬಾಡಿಗೆ ಹೊಸದಾಗಿ ನಿಗದಿ
ಸಂತೆ ವ್ಯಾಪಾರಿಗಳಿಗೆ APMC ಯಾರ್ಡ್ನಲ್ಲಿ ಸ್ಥಳ ಗುರುತು, ದರ ನಿಗದಿ: ಪಟ್ಟಣ ಪಂಚಾಯಿತಿ ತೀರ್ಮಾನ
ನೆಲ ಬಾಡಿಗೆ ನಿಗದಿ: ಈ ಕೆಳಕಂಡಂತೆ ವಾರದ ಸಂತೆಯ ದಿನಕ್ಕೆ ನೆಲ ಬಾಡಿಗೆ ನಿಗದಿಪಡಿಸಲಾಯಿತು.
5 x 5 ಅಡಿ ಅಳತೆಗೆ: ರೂ. 50/-.
10 x 10 ಅಡಿ ಅಳತೆಗೆ: ರೂ. 100/-.
10 x 15 ಅಡಿ ಅಳತೆಗೆ: ರೂ. 150/-.
ಸ್ಥಳ ಹಂಚಿಕೆ ಕುರಿತು ಕೌನ್ಸಿಲರ್ ದಯಾನಂದ್ ಸ್ಪಷ್ಟನೆ: ಸಭೆಯ ನಂತರ ಪಟ್ಟಣ ಪಂಚಾಯಿತಿ ಮುಂದೆ ಸೇರಿದ್ದ ನೂರಾರು ಸಂತೆ ವ್ಯಾಪಾರಸ್ಥರಿಗೆ ಈ ವಿಚಾರಗಳನ್ನು ತಿಳಿಸಲಾಯಿತು. ಈ ವೇಳೆ ಮಾತನಾಡಿದ ಕೌನ್ಸಿಲರ್ ದಯಾನಂದ್ ಅವರು, ನೆಲ ಬಾಡಿಗೆಯನ್ನು ಪ.ಪಂ. ಸ್ವಚ್ಛತೆ ಕಾಪಾಡಲು ಬಳಸಲಾಗುತ್ತದೆ ಎಂದು ತಿಳಿಸಿದರು.
ಸ್ಥಳ ಹಂಚಿಕೆ ಪ್ರಕ್ರಿಯೆ ಕುರಿತು ವಿವರಿಸಿದ ಅವರು, ಹಳೆಯ ಪಟ್ಟಿಯ ಪ್ರಕಾರ ಹಿಂದಿನಿಂದಲೂ ಇರುವ ವ್ಯಾಪಾರಿಗಳಿಗೆ ಮೊದಲ ಆದ್ಯತೆ ನೀಡುವುದು ಹಾಗೂ ಅವರಿಗೆ ಸ್ಥಳ ಹಂಚಿಕೆಯಾದ ನಂತರವೇ ಹೊಸಬರಿಗೆ ಅವಕಾಶ ನೀಡುವುದು ಎಂದು ವಿವರಿಸಿದರು.
ಸಂತೆ ಸ್ಥಳವನ್ನು ಮೂರು ಸಾಲುಗಳಲ್ಲಿ ಗುರುತಿಸಲಾಗಿದ್ದು, 5x5 ಅಳತೆ ಒಂದು ಸಾಲಿನಲ್ಲಿ, 10x10 ಅಳತೆ ಮತ್ತೊಂದು ಸಾಲಿನಲ್ಲಿ ಮತ್ತು 10x15 ಅಳತೆ ಇನ್ನೊಂದು ಸಾಲಿನಲ್ಲಿ ಬರುತ್ತದೆ ಎಂದು ತಿಳಿಸಿದರು.
ಗುರುತಿಸಿದ ಸ್ಥಳಗಳಿಗೆ ನಂಬರ್ ಹಾಕಿ, ಲಾಟರಿ ಎತ್ತುವ ಮುಖಾಂತರ ಯಾವ ವ್ಯಾಪಾರಿಗೆ ಯಾವ ನಂಬರ್ ಸಿಗುವುದೋ ಅದೇ ಸ್ಥಳದಲ್ಲಿ ವ್ಯಾಪಾರ ಮಾಡಬೇಕು. ತಮಗೆ ಬೇಕಾದಲ್ಲಿ, ಮುಂಭಾಗದಲ್ಲಿ, ಹಿಂಭಾಗದಲ್ಲಿ ಸ್ಥಳ ಕೇಳಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.ವ್ಯಾಪಾರಸ್ಥರಿಗೆ ಶೀಘ್ರವೇ ನೆರಳಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ವಿಶೇಷ ದಿನಗಳು ಅಥವಾ ಹಬ್ಬಗಳಂದು ನಡೆಯುವ ಸಂತೆ ದಿನ ಎಂದಿನ ಬಾಡಿಗೆಯನ್ನೆ ವಸೂಲಿ ಮಾಡಲಾಗುವುದು ಎಂದು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಕಾವ್ಯಾರಾಣಿ, ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ದಸ್ತಗೀರ್ ಸಾಬ್, ಸಿದ್ದಿಕ್, ಬಡಗಿ ರಾಜು, ಮಹಮ್ಮದ್ ಜುಬೇರ್, ದಯಾನಂದ್, ಮಂಜನಾಯ್ಕ ,ಜಹೀರ್ ಸಾಬ್ ಪ್ರೀತಿ ರಾಘವೇಂದ್ರ, ವೆಂಕಟೇಶ್ ಸೈಯದ್ ನೂರ್ ಫಕ್ರುದ್ದೀನ್, ಮುಖ್ಯಾಧಿಕಾರಿ ಮಂಜುನಾಥ್ ಇಂಜಿನಿಯರ್ ಮಂಜುನಾಥ್ ಮೊದಲಾದವರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ