ರೈತ ಸಂಘದ ಧ್ಯೇಯದ ಬಗ್ಗೆ ಲವಲೇಶವು ಅರಿಯದ ಕೆಲವರು ಹಣ ಗಳಿಸುವ ಸಲುವಾಗಿ ಹಸಿರು ಟವಲ್ ಹಾಕುತ್ತಿದ್ದಾರೆ. ರಸ್ತೆ, ನೀರಾವರಿ, ವಿದ್ಯುತ್ ಮುಂತಾದ ಮೂಲಸೌಲಭ್ಯ ಪಡೆದು ಅಭಿವೃದ್ಧಿ ಹೊಂದುವುದು ರೈತ ಸಂಘದ ನಿಜವಾದ ಧ್ಯೇಯ. ಈ ನಿಟ್ಟಿನಲ್ಲಿ ಕೌರವರ ರೀತಿ 100 ಮಂದಿ ವಂಚಕರನ್ನು ಸಂಘಕ್ಕೆ ಸೇರಿಸಿಕೊಳ್ಳುವುದ ಬಿಟ್ಟು ಪ್ರಾಮಾಣಿಕತೆ, ನಿಷ್ಠೆ, ತತ್ವವುಳ್ಳ ಐದೇಐದು ಮಂದಿ ಪಾಂಡವರಂತಹವರನ್ನು ಸೇರಿಸಿಕೊಳ್ಳುವುದು ಒಳಿತು ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಸೋಮಗುದ್ದ ರಂಗಸ್ವಾಮಿ ಅವರು ಅಭಿಪ್ರಾಯ ಪಟ್ಟರು.
ಕಂದಿಕೆರೆ ಹೋಬಳಿ ಗಂಟೇನಹಳ್ಳಿಯಲ್ಲಿ ನಡೆದ ಕಂದಿಕೆರೆ ಹೋಬಳಿ ರೈತರ ಸಮಾವೇಶವನ್ನು ಸಸಿಗಳಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ರಾಜಕಾರಣಿಗಳು ಊರಿಗೆ ಬಂದಾಗ ಕೈಮುಗಿದು ಆರತಿ ಎತ್ತಿ ಸ್ವಾಗತಿಸಿ ಜೈಕಾರ ಕೂಗಿ ಮೆರವಣಿಗೆ ಮಾಡಿ ಭೂರಿ ಭೋಜನ ಮಾಡಿಸಿ ಕಳುಹಿಸುವುದು ರೈತರ ಬಹುದೊಡ್ಡ ದೌರ್ಬಲ್ಯ. ರಾಜಕಾರಣಿಗಳಿಂದ ನಾವಲ್ಲ, ನಮ್ಮಿಂದ ರಾಜಕಾರಣಿಗಳು ಎಂಬ ಸತ್ಯ ಅರಿತು ಅವರನ್ನು ನಿರ್ಲಕ್ಷ್ಯಿಸಿದಲ್ಲಿ ಅವರೇ ನಮ್ಮ ಮನೆ ಬಾಗಿಲಿಗೆ ಬಂದು ನಮ್ಮಗಳ ಕೆಲಸ ಮಾಡಿಕೊಡುತ್ತಾರೆ ಎಂದರು.
ರಾಜ್ಯ ಹಸಿರು ಸೇನೆ ಅಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿ ರಾಜ್ಯ ರೈತ ಸಂಘವು ರಾಜ್ಯದ ಅಷ್ಟೂ ರೈತ ಸಮುದಾಯದ ಹಿತ ಕಾಪಾಡುವ ಸಲುವಾಗಿದ್ದು ರೈತರ ವಾಹನ, ಮನೆ, ದಿನಸಿಯನ್ನು ಸಾಲಗಾರರು ಜಪ್ತಿ ಮಾಡಲು ಮುಂದಾದಲ್ಲಿ, ಅಧಿಕಾರಿಗಳು ಅನಗತ್ಯ ಕಿರುಕುಳ ನೀಡಿದಲ್ಲಿ ಪ್ರಾಣವನ್ನಾದರೂ ಒತ್ತೆ ಇಟ್ಟು ತಮ್ಮ ರಕ್ಷಣೆಗೆ ನಿಲ್ಲುತ್ತೇವೆ. ಹಾಗಾಗಿ ರೈತರು ಸಾಲಕ್ಕೆ ಹೆದರಿ ಆತ್ಮಹತ್ಯೆಯ ನಿರ್ಧಾರ ಕೈಗೊಳ್ಳಬಾರದು ಎಂದರಲ್ಲದೆ ಚೀನ ಸರ್ಕಾರ ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಹಸು ಸಾಕಾಣಿಕೆಗಾಗಿ ಪ್ರತಿ ದಿನ 100 ರು. ಸಹಾಯ ಧನ ಹಾಗೂ ರೈತನ ಬೆಳೆಗೆ ತಕ್ಕುದಾದ ವೈಜ್ಞಾನಿಕ ಬೆಲೆ ನೀಡು ನೀಡುವುದಲ್ಲದೆ, ಬೆಳೆ ನಷ್ಠವಾದಲ್ಲಿ ವೆಚ್ಚದ ಅರ್ಧದಷ್ಟು ಹಣವನ್ನು ಪುಕ್ಕಟ್ಟೆ ನೀಡಿ ಪ್ರೋತ್ಸಾಹಿಸುತ್ತಿದ್ದು ಭಾರತದಲ್ಲೂ ಈ ರೀತಿಯ ರೈತ ಪರ ನಿಲುವನ್ನು ರಾಜಕಾರಣಿಗಳು ಪ್ರಕಟಿಸಬೇಕು ಆಗ್ರಹಿಸಿದರು.
ಚಿ.ನಾ.ಹಳ್ಳಿ ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಪಿ.ಮಲ್ಲೇಶ್ ಅವರು ಮಾತನಾಡಿ ಇಂದಿನ ಎಲ್ಲಾ ಸರ್ಕಾರಗಳು ತಮಿಳಿಗರನ್ನು ಓಲೈಸುವ ಸಲುವಾಗಿ ಕನ್ನಡಿಗರಿಗೆ ಮೋಸ ಮಾಡಿ ಮೂಲ ಒಪ್ಪಂದಕ್ಕಿಂತ ಹೆಚ್ಚಾಗಿ ಪ್ರತಿವರ್ಷ 100 ಟಿ.ಎಂ.ಸಿ ಕಾವೇರಿ ನೀರನ್ನು ತಮಿಳು ನಾಡಿಗೆ ಬಿಡಲಾಗುತ್ತಿದೆ. ಸರ್ಕಾರಕ್ಕೆ ರೈತರ ಮೇಲೆ ನಿಜವಾದ ಕಾಳಜಿಯಿದ್ದರೆ ಹೆಚ್ಚುವರಿಯಾಗಿ ಬಿಡುವ ನೀರನ್ನು ಇಲ್ಲಿನ ಬರಪೀಡಿತ ಪ್ರದೇಶಗಳಿಗೆ ಹರಿಸಿ ರೈತರ ಕೃಷಿಗೆ ಅನುಕೂಲ ಮಾಡಬೇಕು. ಅಲ್ಲದೆ ಕಡಿಮೆ ಭೂಮಿಯಲ್ಲಿ ಹೆಚ್ಚು ಬೆಳೆ ಬೆಳೆಯುವ ರೈತರಿಗೆ ಈ ಹಿಂದೆ ಇದ್ದ 1 ಲಕ್ಷ ಪ್ರಶಸ್ತಿಯನ್ನು 30 ಸಾವಿರಕ್ಕೆ ಇಳಿಸಲಾಗಿದ್ದು ಕೂಡಲೇ ಈ ಹಣವನ್ನು ಹೆಚ್ಚಿಸಬೇಕು ಎಂದರು.
ಹುಳಿಯಾರು ಹೋಬಳಿ ರೈತ ಸಂಘದ ಅಧ್ಯಕ್ಷ ತಮ್ಮಡಿಹಳ್ಳಿ ಮಲ್ಲಿಕಣ್ಣ ಅವರು ಮಾತನಾಡಿ ಜಯಚಂದ್ರ ಅವರಿಗೆ ರಾಜಕೀಯವಾಗಿ ಸಾಕಿಬೆಳೆಸಿ ಮಂತ್ರಿಗಿರಿ ಕೊಡಿಸಿದ ಹುಳಿಯಾರು ಭಾಗದಲ್ಲಿ ಹೇಮೆಗಾಗಿ ಹೋರಾಟ ನಡೆಯುತ್ತಿದ್ದರೂ ಸಹ ಈ ಕಡೆ ತಿರುಗಿಯೂ ಸಹ ನೋಡದೆ ಮದಲೂರು ಕೆರೆಗೆ ನೀರು ತೆಗೆದುಕೊಂಡು ಹೋಗಲು ಕೇಂದ್ರದಿಂದ ಹಣ ಬಿಡುಗಡೆ ಮಾಡಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರಲ್ಲದೆ ನಮ್ಮ ಬದುಕಿಗೆ ಅತ್ಯಗತ್ಯವಾದ ನೀರು, ಕರೆಂಟ್, ಟಿಸಿ, ರಸ್ತೆ ಹೀಗೆ ಪ್ರತಿಯೊಂದು ಮೂಲಭೂತ ಸೌಲಭ್ಯಕ್ಕೂ ನಾವುಗಳೆ ಹೋರಾಟ ಮಾಡಿ ಪಡೆದುಕೊಳ್ಳಬೇಕೆಂದಾದಲ್ಲಿ ಜನಪ್ರತಿನಿದಿಗಳು ಏಕೆ ಬೇಕು ಎಂದು ಪ್ರಶ್ನಿಸಿದರು.
ಸಮಾರಂಭದಲ್ಲಿ ತಾಲೂಕು ರೈತ ಸಂಘದ ಉಪಾಧ್ಯಕ್ಷ ಎ.ಬಿ.ಪ್ರಕಾಶಯ್ಯ, ಟ್ರಾಕ್ಟರ್ ಮಾಲೀಕರ ಸಂಘದ ಅಧ್ಯಕ್ಷ ಕಾಡಿನರಾಜ ನಾಗರಾಜು, ಗಂಗಣ್ಣ, ಹೂವಿನ ಬಸವರಾಜು, ಗಂಟೇಹಳ್ಳಿ ರೈತ ಸಂಘದ ಬಿ.ಕೆ.ಲೋಕೇಶ್, ಜಿ.ಮುದ್ದರಂಗಯ್ಯ, ಬುಡೇನ್ ಸಾಬ್, ಜಿ.ಆರ್.ವಸಂತಕುಮಾರ್, ಬಿ.ಎಂ.ಗಜೇಂದ್ರ ಬಿ.ಕೆ.ಕುಮಾರಯ್ಯ ಮತ್ತಿತರರು ಇದ್ದರು.
ಕಂದಿಕೆರೆ ಹೋಬಳಿ ಗಂಟೇನಹಳ್ಳಿಯಲ್ಲಿ ನಡೆದ ಕಂದಿಕೆರೆ ಹೋಬಳಿ ರೈತರ ಸಮಾವೇಶವನ್ನು ಸಸಿಗಳಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ರಾಜಕಾರಣಿಗಳು ಊರಿಗೆ ಬಂದಾಗ ಕೈಮುಗಿದು ಆರತಿ ಎತ್ತಿ ಸ್ವಾಗತಿಸಿ ಜೈಕಾರ ಕೂಗಿ ಮೆರವಣಿಗೆ ಮಾಡಿ ಭೂರಿ ಭೋಜನ ಮಾಡಿಸಿ ಕಳುಹಿಸುವುದು ರೈತರ ಬಹುದೊಡ್ಡ ದೌರ್ಬಲ್ಯ. ರಾಜಕಾರಣಿಗಳಿಂದ ನಾವಲ್ಲ, ನಮ್ಮಿಂದ ರಾಜಕಾರಣಿಗಳು ಎಂಬ ಸತ್ಯ ಅರಿತು ಅವರನ್ನು ನಿರ್ಲಕ್ಷ್ಯಿಸಿದಲ್ಲಿ ಅವರೇ ನಮ್ಮ ಮನೆ ಬಾಗಿಲಿಗೆ ಬಂದು ನಮ್ಮಗಳ ಕೆಲಸ ಮಾಡಿಕೊಡುತ್ತಾರೆ ಎಂದರು.
ರಾಜ್ಯ ಹಸಿರು ಸೇನೆ ಅಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿ ರಾಜ್ಯ ರೈತ ಸಂಘವು ರಾಜ್ಯದ ಅಷ್ಟೂ ರೈತ ಸಮುದಾಯದ ಹಿತ ಕಾಪಾಡುವ ಸಲುವಾಗಿದ್ದು ರೈತರ ವಾಹನ, ಮನೆ, ದಿನಸಿಯನ್ನು ಸಾಲಗಾರರು ಜಪ್ತಿ ಮಾಡಲು ಮುಂದಾದಲ್ಲಿ, ಅಧಿಕಾರಿಗಳು ಅನಗತ್ಯ ಕಿರುಕುಳ ನೀಡಿದಲ್ಲಿ ಪ್ರಾಣವನ್ನಾದರೂ ಒತ್ತೆ ಇಟ್ಟು ತಮ್ಮ ರಕ್ಷಣೆಗೆ ನಿಲ್ಲುತ್ತೇವೆ. ಹಾಗಾಗಿ ರೈತರು ಸಾಲಕ್ಕೆ ಹೆದರಿ ಆತ್ಮಹತ್ಯೆಯ ನಿರ್ಧಾರ ಕೈಗೊಳ್ಳಬಾರದು ಎಂದರಲ್ಲದೆ ಚೀನ ಸರ್ಕಾರ ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಹಸು ಸಾಕಾಣಿಕೆಗಾಗಿ ಪ್ರತಿ ದಿನ 100 ರು. ಸಹಾಯ ಧನ ಹಾಗೂ ರೈತನ ಬೆಳೆಗೆ ತಕ್ಕುದಾದ ವೈಜ್ಞಾನಿಕ ಬೆಲೆ ನೀಡು ನೀಡುವುದಲ್ಲದೆ, ಬೆಳೆ ನಷ್ಠವಾದಲ್ಲಿ ವೆಚ್ಚದ ಅರ್ಧದಷ್ಟು ಹಣವನ್ನು ಪುಕ್ಕಟ್ಟೆ ನೀಡಿ ಪ್ರೋತ್ಸಾಹಿಸುತ್ತಿದ್ದು ಭಾರತದಲ್ಲೂ ಈ ರೀತಿಯ ರೈತ ಪರ ನಿಲುವನ್ನು ರಾಜಕಾರಣಿಗಳು ಪ್ರಕಟಿಸಬೇಕು ಆಗ್ರಹಿಸಿದರು.
ಚಿ.ನಾ.ಹಳ್ಳಿ ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಪಿ.ಮಲ್ಲೇಶ್ ಅವರು ಮಾತನಾಡಿ ಇಂದಿನ ಎಲ್ಲಾ ಸರ್ಕಾರಗಳು ತಮಿಳಿಗರನ್ನು ಓಲೈಸುವ ಸಲುವಾಗಿ ಕನ್ನಡಿಗರಿಗೆ ಮೋಸ ಮಾಡಿ ಮೂಲ ಒಪ್ಪಂದಕ್ಕಿಂತ ಹೆಚ್ಚಾಗಿ ಪ್ರತಿವರ್ಷ 100 ಟಿ.ಎಂ.ಸಿ ಕಾವೇರಿ ನೀರನ್ನು ತಮಿಳು ನಾಡಿಗೆ ಬಿಡಲಾಗುತ್ತಿದೆ. ಸರ್ಕಾರಕ್ಕೆ ರೈತರ ಮೇಲೆ ನಿಜವಾದ ಕಾಳಜಿಯಿದ್ದರೆ ಹೆಚ್ಚುವರಿಯಾಗಿ ಬಿಡುವ ನೀರನ್ನು ಇಲ್ಲಿನ ಬರಪೀಡಿತ ಪ್ರದೇಶಗಳಿಗೆ ಹರಿಸಿ ರೈತರ ಕೃಷಿಗೆ ಅನುಕೂಲ ಮಾಡಬೇಕು. ಅಲ್ಲದೆ ಕಡಿಮೆ ಭೂಮಿಯಲ್ಲಿ ಹೆಚ್ಚು ಬೆಳೆ ಬೆಳೆಯುವ ರೈತರಿಗೆ ಈ ಹಿಂದೆ ಇದ್ದ 1 ಲಕ್ಷ ಪ್ರಶಸ್ತಿಯನ್ನು 30 ಸಾವಿರಕ್ಕೆ ಇಳಿಸಲಾಗಿದ್ದು ಕೂಡಲೇ ಈ ಹಣವನ್ನು ಹೆಚ್ಚಿಸಬೇಕು ಎಂದರು.
ಹುಳಿಯಾರು ಹೋಬಳಿ ರೈತ ಸಂಘದ ಅಧ್ಯಕ್ಷ ತಮ್ಮಡಿಹಳ್ಳಿ ಮಲ್ಲಿಕಣ್ಣ ಅವರು ಮಾತನಾಡಿ ಜಯಚಂದ್ರ ಅವರಿಗೆ ರಾಜಕೀಯವಾಗಿ ಸಾಕಿಬೆಳೆಸಿ ಮಂತ್ರಿಗಿರಿ ಕೊಡಿಸಿದ ಹುಳಿಯಾರು ಭಾಗದಲ್ಲಿ ಹೇಮೆಗಾಗಿ ಹೋರಾಟ ನಡೆಯುತ್ತಿದ್ದರೂ ಸಹ ಈ ಕಡೆ ತಿರುಗಿಯೂ ಸಹ ನೋಡದೆ ಮದಲೂರು ಕೆರೆಗೆ ನೀರು ತೆಗೆದುಕೊಂಡು ಹೋಗಲು ಕೇಂದ್ರದಿಂದ ಹಣ ಬಿಡುಗಡೆ ಮಾಡಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರಲ್ಲದೆ ನಮ್ಮ ಬದುಕಿಗೆ ಅತ್ಯಗತ್ಯವಾದ ನೀರು, ಕರೆಂಟ್, ಟಿಸಿ, ರಸ್ತೆ ಹೀಗೆ ಪ್ರತಿಯೊಂದು ಮೂಲಭೂತ ಸೌಲಭ್ಯಕ್ಕೂ ನಾವುಗಳೆ ಹೋರಾಟ ಮಾಡಿ ಪಡೆದುಕೊಳ್ಳಬೇಕೆಂದಾದಲ್ಲಿ ಜನಪ್ರತಿನಿದಿಗಳು ಏಕೆ ಬೇಕು ಎಂದು ಪ್ರಶ್ನಿಸಿದರು.
ಸಮಾರಂಭದಲ್ಲಿ ತಾಲೂಕು ರೈತ ಸಂಘದ ಉಪಾಧ್ಯಕ್ಷ ಎ.ಬಿ.ಪ್ರಕಾಶಯ್ಯ, ಟ್ರಾಕ್ಟರ್ ಮಾಲೀಕರ ಸಂಘದ ಅಧ್ಯಕ್ಷ ಕಾಡಿನರಾಜ ನಾಗರಾಜು, ಗಂಗಣ್ಣ, ಹೂವಿನ ಬಸವರಾಜು, ಗಂಟೇಹಳ್ಳಿ ರೈತ ಸಂಘದ ಬಿ.ಕೆ.ಲೋಕೇಶ್, ಜಿ.ಮುದ್ದರಂಗಯ್ಯ, ಬುಡೇನ್ ಸಾಬ್, ಜಿ.ಆರ್.ವಸಂತಕುಮಾರ್, ಬಿ.ಎಂ.ಗಜೇಂದ್ರ ಬಿ.ಕೆ.ಕುಮಾರಯ್ಯ ಮತ್ತಿತರರು ಇದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ