ಹುಳಿಯಾರಿನಲ್ಲಿ ಸಂಭ್ರಮದ ಯುಗಾದಿ ಆಚರಣೆ
ಹೊಸವರ್ಷಕ್ಕೆ ಮುನ್ನುಡಿಯಾಗಿರುವ ಹಿಂದೂ ಸಂಪ್ರದಾಯದ ಪ್ರಮುಖ ಹಾಗೂ ವಿಕೃತಿನಾಮ ಸಂವತ್ಸರದ ಮೊದಲ ದಿನವಾದ ಯುಗಾದಿ ಹಬ್ಬವನ್ನು ಮಂಗಳವಾರದಂದು ಹುಳಿಯಾರಿನಲ್ಲಿ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಸಂಪ್ರದಾಯದಂತೆ ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಮನೆಮಂದಿಯೆಲ್ಲ ಅಭ್ಯಂಜಯ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಜೀವನದಲ್ಲಿ ಕಷ್ಟಸುಖ ಸಮನಾಗಿ ಸ್ವೀಕಸಬೇಕೆಂಬ ಸಂಕೇತ ಸಾರುವ ಬೇವು-ಬೆಲ್ಲ ಸೇವಿಸಿದರು. ಸಂಜೆ ಕುಟುಂಬದೊಡನೆ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಹಬ್ಬದ ಪ್ರಯುಕ್ತ ಇಲ್ಲಿನ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ವಾಸವಿ ಹಾಗೂ ಬನಶಂಕರಿ ದೇವಾಲಯಗಳಲ್ಲಿ ಸಾಮೂಹಿಕ ಪಂಚಾಂಗ ಶ್ರವಣ ನಡೆಯಿತು. ನೂರಾರು ಮಂದಿ ಈ ವರ್ಷದ ಭವಿಷ್ಯಮ ಮಳೆ-ಬೆಳೆ, ಗ್ರಹ-ನಕ್ಷತ್ರಗಳ ಬಲಾಬಲ, ಮನೆಯ ಮಂದಿಯ ಭವಿಷ್ಯ ಕೇಳುತ್ತಿದ್ದು ವಿಶೇಷವಾಗಿತ್ತು. ಸಂಜೆ ಬಿದಿಗೆ ಚಂದ್ರನ ದರ್ಶನ ಪಡೆದರು. ಒಟ್ಟಾರೆ 2 ದಿನಗಳ ಕಾಲ ಯುಗಾದಿ ಸಂಭ್ರಮ ತುಂಬಿ ತುಳುಕುತ್ತಿತ್ತು.
ಜೂಜಾಟಕ್ಕೆ ಕಡಿವಾಣ : ಯುಗಾದಿ ಹಬ್ಬ ಬೇವು ಬೆಲ್ಲದಷ್ಟೆ ಈ ಭಾಗದಲ್ಲಿ ಜೂಜಾಟಕ್ಕೆ ಪ್ರಸಿದ್ಧಿ. ಬೇರೆ ಬೇರೆ ಊರುಗಳಿಂದ ಇಲ್ಲಿನ ಜೂಜಾಡಲು ಜನ ಆಗಮಿಸುವುದರಿಂದ ಬಸ್ ನಿಲ್ದಾಣ ಎನ್ನದೆ ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ಬೀದಿಗಳಲ್ಲಿ ಶಾಮಿಯಾನ ಹಾಕಿ 3 ದಿನಗಳ ಕಾಲ ಅಹೋ ರಾತ್ರಿ ಜೂಜಾಡುವುದು ವಾಡಿಕೆ.ಕಳೆದ ಹಲವಾರು ವರ್ಷಗಳಿಂದ ಇದೊಂದು ಸಂಪ್ರದಾಯ ಎಂಬಂತೆ ಎಗ್ಗಿಲ್ಲದೆ ನಡೆಯತ್ತ ಬಂದಿದ್ದು ಇಸ್ಪೀಟ್ ಜೂಜಾಟಕ್ಕೆ ಇದೇ ಪ್ರಥಮ ಬಾರಿಗೆ ಕಡಿವಾಣ ಹಾಕಲಾಗಿತ್ತು.ಯುಗಾದಿ ಎಂದರೆ ಜೂಜಾಟದ ಹಬ್ಬವೆಂದೆ ಭಾವನೆಯನ್ನು ಈ ಬಾರಿ ಎಸ್ಪಿ ಅವರು ಜಿಲ್ಲಾಧ್ಯಂತ ಜೂಜಾಟಕ್ಕೆ ನಿರ್ಭಂಧ ಹೇರುವುದರ ಮುಖಾಂತರ ಜೂಜು ಪ್ರಿಯರಿಗೆ ಬೇವನ್ನು ತಿನ್ನಿಸಿದರು. ಒಟ್ಟಾರೆ ಇಸ್ಪೀಟ್ ಮಾರಿಯಿಂದ ಹಲವಾರು ಸಂಸಾರಗಳು ಬೀದಿಗೆ ಬೀಳುವುದು ತಪ್ಪಿತಾದರೂ ಕೆಲವರು ಕದ್ದು ಮುಚ್ಚಿ ಮನೆ ಹಾಗೂ ತೋಟದ ಮನೆಗಳಲ್ಲಿ ಜೂಜಾಡಿ ತಮ್ಮ ವಾಂಛೆ ತೀರಿಸಿಕೊಂಡರು.
ಹೊಸವರ್ಷಕ್ಕೆ ಮುನ್ನುಡಿಯಾಗಿರುವ ಹಿಂದೂ ಸಂಪ್ರದಾಯದ ಪ್ರಮುಖ ಹಾಗೂ ವಿಕೃತಿನಾಮ ಸಂವತ್ಸರದ ಮೊದಲ ದಿನವಾದ ಯುಗಾದಿ ಹಬ್ಬವನ್ನು ಮಂಗಳವಾರದಂದು ಹುಳಿಯಾರಿನಲ್ಲಿ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಸಂಪ್ರದಾಯದಂತೆ ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಮನೆಮಂದಿಯೆಲ್ಲ ಅಭ್ಯಂಜಯ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಜೀವನದಲ್ಲಿ ಕಷ್ಟಸುಖ ಸಮನಾಗಿ ಸ್ವೀಕಸಬೇಕೆಂಬ ಸಂಕೇತ ಸಾರುವ ಬೇವು-ಬೆಲ್ಲ ಸೇವಿಸಿದರು. ಸಂಜೆ ಕುಟುಂಬದೊಡನೆ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಹಬ್ಬದ ಪ್ರಯುಕ್ತ ಇಲ್ಲಿನ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ವಾಸವಿ ಹಾಗೂ ಬನಶಂಕರಿ ದೇವಾಲಯಗಳಲ್ಲಿ ಸಾಮೂಹಿಕ ಪಂಚಾಂಗ ಶ್ರವಣ ನಡೆಯಿತು. ನೂರಾರು ಮಂದಿ ಈ ವರ್ಷದ ಭವಿಷ್ಯಮ ಮಳೆ-ಬೆಳೆ, ಗ್ರಹ-ನಕ್ಷತ್ರಗಳ ಬಲಾಬಲ, ಮನೆಯ ಮಂದಿಯ ಭವಿಷ್ಯ ಕೇಳುತ್ತಿದ್ದು ವಿಶೇಷವಾಗಿತ್ತು. ಸಂಜೆ ಬಿದಿಗೆ ಚಂದ್ರನ ದರ್ಶನ ಪಡೆದರು. ಒಟ್ಟಾರೆ 2 ದಿನಗಳ ಕಾಲ ಯುಗಾದಿ ಸಂಭ್ರಮ ತುಂಬಿ ತುಳುಕುತ್ತಿತ್ತು.
ಜೂಜಾಟಕ್ಕೆ ಕಡಿವಾಣ : ಯುಗಾದಿ ಹಬ್ಬ ಬೇವು ಬೆಲ್ಲದಷ್ಟೆ ಈ ಭಾಗದಲ್ಲಿ ಜೂಜಾಟಕ್ಕೆ ಪ್ರಸಿದ್ಧಿ. ಬೇರೆ ಬೇರೆ ಊರುಗಳಿಂದ ಇಲ್ಲಿನ ಜೂಜಾಡಲು ಜನ ಆಗಮಿಸುವುದರಿಂದ ಬಸ್ ನಿಲ್ದಾಣ ಎನ್ನದೆ ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ಬೀದಿಗಳಲ್ಲಿ ಶಾಮಿಯಾನ ಹಾಕಿ 3 ದಿನಗಳ ಕಾಲ ಅಹೋ ರಾತ್ರಿ ಜೂಜಾಡುವುದು ವಾಡಿಕೆ.ಕಳೆದ ಹಲವಾರು ವರ್ಷಗಳಿಂದ ಇದೊಂದು ಸಂಪ್ರದಾಯ ಎಂಬಂತೆ ಎಗ್ಗಿಲ್ಲದೆ ನಡೆಯತ್ತ ಬಂದಿದ್ದು ಇಸ್ಪೀಟ್ ಜೂಜಾಟಕ್ಕೆ ಇದೇ ಪ್ರಥಮ ಬಾರಿಗೆ ಕಡಿವಾಣ ಹಾಕಲಾಗಿತ್ತು.ಯುಗಾದಿ ಎಂದರೆ ಜೂಜಾಟದ ಹಬ್ಬವೆಂದೆ ಭಾವನೆಯನ್ನು ಈ ಬಾರಿ ಎಸ್ಪಿ ಅವರು ಜಿಲ್ಲಾಧ್ಯಂತ ಜೂಜಾಟಕ್ಕೆ ನಿರ್ಭಂಧ ಹೇರುವುದರ ಮುಖಾಂತರ ಜೂಜು ಪ್ರಿಯರಿಗೆ ಬೇವನ್ನು ತಿನ್ನಿಸಿದರು. ಒಟ್ಟಾರೆ ಇಸ್ಪೀಟ್ ಮಾರಿಯಿಂದ ಹಲವಾರು ಸಂಸಾರಗಳು ಬೀದಿಗೆ ಬೀಳುವುದು ತಪ್ಪಿತಾದರೂ ಕೆಲವರು ಕದ್ದು ಮುಚ್ಚಿ ಮನೆ ಹಾಗೂ ತೋಟದ ಮನೆಗಳಲ್ಲಿ ಜೂಜಾಡಿ ತಮ್ಮ ವಾಂಛೆ ತೀರಿಸಿಕೊಂಡರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ