ಹುಳಿಯಾರು ಒಳಾಂಗಣ ಕ್ರೀಡಾಂಗಣ ನಿರ್ಮಾಣ ಸಹಾಯಾರ್ಥ
ಉಚಿತ ನಾಟಕ ಪ್ರದರ್ಶನಕ್ಕೆ ಸಿದ್ಧ: ಡಾ.ಮಾಸ್ಟರ್ ಹಿರಣ್ಣಯ್ಯ
----------------------------------
ರಂಗಕಲೆಯ ರೀತಿ ಕ್ರೀಡೆಯೂ ಸಹ ಮನರಂಜನಾ ಚಟುವಟಿಕೆಯಾಗಿದ್ದು ಹುಳಿಯಾರಿನಲ್ಲಿ ಕ್ರೀಡೆಗೆ ಒತ್ತು ನೀಡುವ ನಿಟ್ಟಿನಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಸಹಾಯಾರ್ಥ ತಮ್ಮ ಸಂಸ್ಥೆಯಿಂದ ಉಚಿತ ನಾಟಕ ಪ್ರದರ್ಶನ ನೀಡುವುದಾಗಿ ನಟರತ್ನಾಕರ ಡಾ.ಮಾಸ್ಟರ್ ಹಿರಣ್ಣಯ್ಯ ಘೋಷಿಸಿದರು.
ಹುಳಿಯಾರಿನಲ್ಲಿ ಶಿವರಾತ್ರಿ ಜಾಗರಣೆ ಅಂಗವಾಗಿ ಕೆನರಾ ಬ್ಯಾಂಕ್, ಸ್ಪೊರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಹಾಗೂ ನೆಹರು ಯುವ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಹೊನಲು ಬೆಳಕಿನ ಕ್ರೀಡಾಕೂಟವನ್ನು ಹಗ್ಗ ಜಗ್ಗಾಟ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಈ ಬೆನಿಫಿಟ್ ಶೋ ಸಂಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ವಹಿಸಿಕೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದರಲ್ಲದೆ ಕಾರ್ಯಕ್ರಮ ಮುಗಿದ ನಂತರ ತಾವೇ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕ್ರೀಡಾಂಗಣ ನಿರ್ಮಾಣದ ತಮ್ಮ ನಿಲುವು ಹಾಗೂ ಆಶಯ ತಿಳಿಸಿ ಶೀಘ್ರ ಪ್ರದರ್ಶನದ ವ್ಯವಸ್ಥೆಯನ್ನು ಮಾಡುವಂತೆ ತಿಳಿಸಿದರು.
ಜಾಗರಣೆ ಸಂಸ್ಕೃತಿ ಮರೆಯಾಗುತ್ತಿರುವ ಇಂದಿನ ಕಾಲದಲ್ಲಿ ಇಡೀ ರಾತ್ರಿ ಹೊನಲು ಬೆಳಕಿನ ಕ್ರೀಡಾಕೂಟವನ್ನು ಏರ್ಪಡಿಸುವ ಮೂಲಕ ಯುವಕರಲ್ಲಿ ಮನರಂಜನೆ ಸಹಿತ ಜಾಗರಣೆಯ ಪರಂಪರೆ ಹುಟ್ಟುಹಾಕುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ ಎಂದರಲ್ಲದೆ ಮುಂದಿನ ಜಾಗರಣೆ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿಕೊಂಡು ಈ ಕಾರ್ಯಕ್ಕೆ ಮತ್ತೊಷ್ಟು ಉತ್ತೇಜನ ನೀಡುವುದಾಗಿ ಪ್ರಕಟಿಸಿದರು.
ವಯಸ್ಸಾದ ತಂದೆ ತಾಯಿಯರು ತಮ್ಮ ಮಕ್ಕಳಿಂದ 2 ಹೊತ್ತಿನ ಊಟ, ಅರ್ಧ ಗಂಟೆ ಮೊಮ್ಮೊಗುವನ್ನು ತೊಡೆಯ ಮೇಲೆ ಆಡಿಸುವ ಸ್ವಾತಂತ್ರ ಬಿಟ್ಟು ಬೇರೇನನ್ನೂ ನಿರೀಕ್ಷಿಸುವುದಿಲ್ಲ. ತಮ್ಮನ್ನು ಇಪ್ಪತ್ತು ವರ್ಷ ಸಾಕಿ ಸಲುಹಿದವರಿಗೆ ಇಷ್ಟೂ ಕೊಡಲಾಗುವುದಿಲ್ಲವೆ ಎಂದು ಪ್ರಶ್ನಿಸಿ ಮುಂದೊಂದು ದಿನ ತಮಗೂ ವಯಸ್ಸಾಗುತ್ತದೆ ಎಂಬುದನ್ನು ಮರೆಯಬೇಡಿ ಎಂದು ಯುವ ಜನತೆಗೆ ಕಿವಿ ಮಾತು ಹೇಳಿದರು.
ಹಿರಣ್ಣಯ್ಯನವರ ಭಾಷಣ ಎಂದರೆ ಅಲ್ಲಿ ನಗೆ ಚಟಾಕಿಗಳಿಗೆ ಕೊರತೆಯಿಲ್ಲ. ಇಲ್ಲಿಯೂ ಸಹ ಅನೇಕ ಹಾಸ್ಯ ಚಟಾಕಿ ಮಿಶ್ರಿತ ನುಡಿ ಮುತ್ತುಗಳನ್ನು ಉದುರಿಸಿದ್ದು ದೇವರಿಗೆ ಕಲಾವಿದರ ಮೇಲೆಯೇ ಕಣ್ಣು ರಾಜ್, ವಿಷ್ಣು ಸೇರಿದಂತೆ ಅನೇಕ ಕಲಾರತ್ನಗಳನ್ನು ಕರೆದುಕೊಂಡಿದ್ದಾನೆ. ಮನೆಗೆ ಇಬ್ಬಿಬ್ಬರಂತೆ ವಿಧಾನಸೌಧದಲ್ಲಿ ಅನೇಕ ರಾಜಕಾರಣಿಗಳು ಇದ್ದರೂ ಕೂಡ ಕಲಾವಿಧರನ್ನೇ ಕರೆದುಕೊಳ್ಳುತ್ತಿದ್ದಾನೆ ಎಂದರೆ ರಾಜಕಾರಣಿಗಳನ್ನು ಕರೆದುಕೊಂಡರೆ ತಮ್ಮ ಸೀಟುಗಳನ್ನು ಇವರೆಲ್ಲಿ ಕಿತ್ತುಕೊಳ್ಳುತ್ತಾರೋ ಎಂಬ ಭಯ ಇರಬಹುದು ಎಂಬ ಹಾಸ್ಯ ಇದರಲ್ಲಿ ಒಂದಾಗಿತ್ತು.
ತಹಸೀಲ್ದಾರ್ ಟಿ.ಸಿ.ಕಾಂತರಾಜು, ಆರಕ್ಷಕ ಠಾಣಾಧಿಕಾರಿ ಪಾರ್ವತಮ್ಮ ಯಾದವ್, ಕೆನರಾ ಬ್ಯಾಂಕ್ ಮ್ಯಾನೇಕರ್ ಎಚ್.ಎಸ್.ಸತೀಶ್, ತಾಲೂಕು ಪತ್ರಕರ್ತರ ಸಂಘದ ಖಜಾಂಜಿ ನರೇಂದ್ರ ಬಾಬು, ಹಿರಿಯ ದೈಹಿಕ ಶಿಕ್ಷಕ ರಾಜ್ ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಹುಳಿಯಾರ್ ಸ್ಪೊರ್ಟ್ಸ್ ಅಸೋಸಿಯೇಷನ್ನ ಬಳೆ ಕುಮಾರ್, ಮೆಡಿಕಲ್ ಶ್ರೀನಿವಾಸ್, ಲೇತ್ ರಂಗನಾಥ್, ಎಚ್.ಬಿ.ಕಿರಣ್ ಕುಮಾರ್, ಕಂಠಯ್ಯ, ಎಚ್.ಎ.ರಮೇಶ್, ಕಾರ್ಗಿಲ್ ಸತೀಶ್, ಸುಂದರ್, ರಾಘವೇಂದ್ರ, ಗುರುಪ್ರಸಾದ್, ರೇಣುಕ ಪ್ರಸಾದ್, ದೈಹಿಕ ಶಿಕ್ಷಕರಾದ ಜಗಧೀಶ್, ತ್ಯಾಗರಾಜ್, ಮೋಹನ್ ಕುಮಾರ್, ಕೆ.ಎನ್.ಕುಮಾರಯ್ಯ, ಕುಮಾರ್, ಕೆ.ಮಂಜುನಾಥ್ ಮತ್ತಿತರರು ಇದ್ದರು.
ಉಚಿತ ನಾಟಕ ಪ್ರದರ್ಶನಕ್ಕೆ ಸಿದ್ಧ: ಡಾ.ಮಾಸ್ಟರ್ ಹಿರಣ್ಣಯ್ಯ
----------------------------------
ರಂಗಕಲೆಯ ರೀತಿ ಕ್ರೀಡೆಯೂ ಸಹ ಮನರಂಜನಾ ಚಟುವಟಿಕೆಯಾಗಿದ್ದು ಹುಳಿಯಾರಿನಲ್ಲಿ ಕ್ರೀಡೆಗೆ ಒತ್ತು ನೀಡುವ ನಿಟ್ಟಿನಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಸಹಾಯಾರ್ಥ ತಮ್ಮ ಸಂಸ್ಥೆಯಿಂದ ಉಚಿತ ನಾಟಕ ಪ್ರದರ್ಶನ ನೀಡುವುದಾಗಿ ನಟರತ್ನಾಕರ ಡಾ.ಮಾಸ್ಟರ್ ಹಿರಣ್ಣಯ್ಯ ಘೋಷಿಸಿದರು.
ಹುಳಿಯಾರಿನಲ್ಲಿ ಶಿವರಾತ್ರಿ ಜಾಗರಣೆ ಅಂಗವಾಗಿ ಕೆನರಾ ಬ್ಯಾಂಕ್, ಸ್ಪೊರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಹಾಗೂ ನೆಹರು ಯುವ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಹೊನಲು ಬೆಳಕಿನ ಕ್ರೀಡಾಕೂಟವನ್ನು ಹಗ್ಗ ಜಗ್ಗಾಟ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಈ ಬೆನಿಫಿಟ್ ಶೋ ಸಂಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ವಹಿಸಿಕೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದರಲ್ಲದೆ ಕಾರ್ಯಕ್ರಮ ಮುಗಿದ ನಂತರ ತಾವೇ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕ್ರೀಡಾಂಗಣ ನಿರ್ಮಾಣದ ತಮ್ಮ ನಿಲುವು ಹಾಗೂ ಆಶಯ ತಿಳಿಸಿ ಶೀಘ್ರ ಪ್ರದರ್ಶನದ ವ್ಯವಸ್ಥೆಯನ್ನು ಮಾಡುವಂತೆ ತಿಳಿಸಿದರು.
ಜಾಗರಣೆ ಸಂಸ್ಕೃತಿ ಮರೆಯಾಗುತ್ತಿರುವ ಇಂದಿನ ಕಾಲದಲ್ಲಿ ಇಡೀ ರಾತ್ರಿ ಹೊನಲು ಬೆಳಕಿನ ಕ್ರೀಡಾಕೂಟವನ್ನು ಏರ್ಪಡಿಸುವ ಮೂಲಕ ಯುವಕರಲ್ಲಿ ಮನರಂಜನೆ ಸಹಿತ ಜಾಗರಣೆಯ ಪರಂಪರೆ ಹುಟ್ಟುಹಾಕುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ ಎಂದರಲ್ಲದೆ ಮುಂದಿನ ಜಾಗರಣೆ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿಕೊಂಡು ಈ ಕಾರ್ಯಕ್ಕೆ ಮತ್ತೊಷ್ಟು ಉತ್ತೇಜನ ನೀಡುವುದಾಗಿ ಪ್ರಕಟಿಸಿದರು.
ವಯಸ್ಸಾದ ತಂದೆ ತಾಯಿಯರು ತಮ್ಮ ಮಕ್ಕಳಿಂದ 2 ಹೊತ್ತಿನ ಊಟ, ಅರ್ಧ ಗಂಟೆ ಮೊಮ್ಮೊಗುವನ್ನು ತೊಡೆಯ ಮೇಲೆ ಆಡಿಸುವ ಸ್ವಾತಂತ್ರ ಬಿಟ್ಟು ಬೇರೇನನ್ನೂ ನಿರೀಕ್ಷಿಸುವುದಿಲ್ಲ. ತಮ್ಮನ್ನು ಇಪ್ಪತ್ತು ವರ್ಷ ಸಾಕಿ ಸಲುಹಿದವರಿಗೆ ಇಷ್ಟೂ ಕೊಡಲಾಗುವುದಿಲ್ಲವೆ ಎಂದು ಪ್ರಶ್ನಿಸಿ ಮುಂದೊಂದು ದಿನ ತಮಗೂ ವಯಸ್ಸಾಗುತ್ತದೆ ಎಂಬುದನ್ನು ಮರೆಯಬೇಡಿ ಎಂದು ಯುವ ಜನತೆಗೆ ಕಿವಿ ಮಾತು ಹೇಳಿದರು.
ಹಿರಣ್ಣಯ್ಯನವರ ಭಾಷಣ ಎಂದರೆ ಅಲ್ಲಿ ನಗೆ ಚಟಾಕಿಗಳಿಗೆ ಕೊರತೆಯಿಲ್ಲ. ಇಲ್ಲಿಯೂ ಸಹ ಅನೇಕ ಹಾಸ್ಯ ಚಟಾಕಿ ಮಿಶ್ರಿತ ನುಡಿ ಮುತ್ತುಗಳನ್ನು ಉದುರಿಸಿದ್ದು ದೇವರಿಗೆ ಕಲಾವಿದರ ಮೇಲೆಯೇ ಕಣ್ಣು ರಾಜ್, ವಿಷ್ಣು ಸೇರಿದಂತೆ ಅನೇಕ ಕಲಾರತ್ನಗಳನ್ನು ಕರೆದುಕೊಂಡಿದ್ದಾನೆ. ಮನೆಗೆ ಇಬ್ಬಿಬ್ಬರಂತೆ ವಿಧಾನಸೌಧದಲ್ಲಿ ಅನೇಕ ರಾಜಕಾರಣಿಗಳು ಇದ್ದರೂ ಕೂಡ ಕಲಾವಿಧರನ್ನೇ ಕರೆದುಕೊಳ್ಳುತ್ತಿದ್ದಾನೆ ಎಂದರೆ ರಾಜಕಾರಣಿಗಳನ್ನು ಕರೆದುಕೊಂಡರೆ ತಮ್ಮ ಸೀಟುಗಳನ್ನು ಇವರೆಲ್ಲಿ ಕಿತ್ತುಕೊಳ್ಳುತ್ತಾರೋ ಎಂಬ ಭಯ ಇರಬಹುದು ಎಂಬ ಹಾಸ್ಯ ಇದರಲ್ಲಿ ಒಂದಾಗಿತ್ತು.
ತಹಸೀಲ್ದಾರ್ ಟಿ.ಸಿ.ಕಾಂತರಾಜು, ಆರಕ್ಷಕ ಠಾಣಾಧಿಕಾರಿ ಪಾರ್ವತಮ್ಮ ಯಾದವ್, ಕೆನರಾ ಬ್ಯಾಂಕ್ ಮ್ಯಾನೇಕರ್ ಎಚ್.ಎಸ್.ಸತೀಶ್, ತಾಲೂಕು ಪತ್ರಕರ್ತರ ಸಂಘದ ಖಜಾಂಜಿ ನರೇಂದ್ರ ಬಾಬು, ಹಿರಿಯ ದೈಹಿಕ ಶಿಕ್ಷಕ ರಾಜ್ ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಹುಳಿಯಾರ್ ಸ್ಪೊರ್ಟ್ಸ್ ಅಸೋಸಿಯೇಷನ್ನ ಬಳೆ ಕುಮಾರ್, ಮೆಡಿಕಲ್ ಶ್ರೀನಿವಾಸ್, ಲೇತ್ ರಂಗನಾಥ್, ಎಚ್.ಬಿ.ಕಿರಣ್ ಕುಮಾರ್, ಕಂಠಯ್ಯ, ಎಚ್.ಎ.ರಮೇಶ್, ಕಾರ್ಗಿಲ್ ಸತೀಶ್, ಸುಂದರ್, ರಾಘವೇಂದ್ರ, ಗುರುಪ್ರಸಾದ್, ರೇಣುಕ ಪ್ರಸಾದ್, ದೈಹಿಕ ಶಿಕ್ಷಕರಾದ ಜಗಧೀಶ್, ತ್ಯಾಗರಾಜ್, ಮೋಹನ್ ಕುಮಾರ್, ಕೆ.ಎನ್.ಕುಮಾರಯ್ಯ, ಕುಮಾರ್, ಕೆ.ಮಂಜುನಾಥ್ ಮತ್ತಿತರರು ಇದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ