ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಾರ್ಚ್, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪೋಟೊ ಕ್ಯಾಪ್ಷನ್

ಹುಳಿಯಾರಿನ ಮಾರುತಿ ನಗರದ ಶ್ರೀಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀರಾಮನವಮಿಯಂಗವಾಗಿ ಜೈ ಮಾರುತಿ ಸಂಘದವರು ಭಕ್ತಾಧಿಗಳಿಗೆ ಪಾನಕ,ಮಜ್ಜನಿಗೆ,ಕಡಲೆಕಾಳು ಹುಸಲಿಯನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

ಬಿಸಿಲ ಧಗೆಯನ್ನು ಲೆಕ್ಕಿಸದೇ ಹುಳಿಯಾರಿನಲ್ಲಿ ರಾಮನವಮಿಯ ಸಂಭ್ರಮದ ಆಚರಣೆ

ಹುಳಿಯಾರಿನಲ್ಲಿ ಶನಿವಾರ ಶ್ರೀರಾಮನವಮಿ ಅಂಗವಾಗಿ ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ ಆಗಮಿಸಿದ್ದ ಗ್ರಾಮದೇವತೆಗಳಾದ ದುರ್ಗಮ್ಮ,ಹುಳಿಯಾರಮ್ಮ ಹಾಗೂ ಲಿಂಗಪ್ಪನ ಪಾಳ್ಯದ ಶ್ರೀರಾಮ ದೇವರುಗಳು. ಇಲ್ಲಿನ ಮನೆಮನೆಗಳಲ್ಲಿ, ದೇವಸ್ಥಾನಗಳಲ್ಲಿ ಕೋಸಂಬರಿ ಬೇಲದ ಹಣ್ಣಿನ ಪಾನಕ,ಮಜ್ಜಿಗೆ ಸಂತರ್ಪಣೆ ಮಾಡುತ್ತ ಶ್ರೀರಾಮಚಂದ್ರನ ಜನ್ಮ ದಿನವಾದ ರಾಮನವಮಿ ಹಬ್ಬವನ್ನು ಶನಿವಾರದಂದು ಅದ್ಧೂರಿಯಾಗಿ ಆಚರಿಸಲಾಯಿತು. ಶ್ರೀರಾಮಚಂದ್ರ ಹುಟ್ಟಿದ ದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯ ದಿನವಾದ ಶನಿವಾರ ಬೆಳಗಿನಿಂದಲೇ ಮನೆಗಳಲ್ಲಿ,ಗುಡಿಗೋಪುರಗಳಲ್ಲಿ ಶ್ರೀರಾಮನಿಗೆ ಮತ್ತು ಆಂಜನೇಯನಿಗೆ ವಿಶೇಷ ಅರ್ಚನೆ, ಪೂಜೆ ಕೈಂಕರ್ಯಗಳು ವಿಜೃಂಭಣೆಯಿಂದ ಜರುಗಿದವು. ಪ್ರತಿ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಬೇಸಿಗೆಯ ಧಗೆಯನ್ನು ತಣ್ಣಗಾಗಿಸಲು ಪಾನಕ, ಕಡಲೆಕಾಳು ಕೋಸಂಬರಿ, ಮಜ್ಜಿಗೆ ಸಂತರ್ಪಣೆ ನಡಯಿತು. ರಂಗನಾಥ ಸ್ವಾಮಿ ದೇವಾಲಯ,ಗಾಂಧಿಪೇಟೆಯ ಶ್ರೀ ಶನೇಶ್ವರಸ್ವಾಮಿ ಹಾಗೂ ಆಂಜನೇಯ ದೇವಾಲಯದಲ್ಲಿ ಹಾಗೂ ಆಂಜನೇಯಸ್ವಾಮಿ ದೇವಾಲಯಕ್ಕೆ ಆಗಮಿಸಿದ್ದ ಗ್ರಾಮದೇವತೆಗಳಾದ ಹುಳಿಯಾರಮ್ಮ,ದುರ್ಗಮ್ಮ ಮತ್ತು ಲಿಂಗಪ್ಪನಪಾಳ್ಯದ ಶ್ರೀರಾಮ ಮೂರ್ತಿಗೆ ಪೂಜೆ ಸಲ್ಲಿಸಿ ಬಂದಿದ್ದ ಭಕ್ತಾಧಿಗಳಿಗೆ ಪಾನಕ ಪನಿವಾರ ವಿತರಿಸಲಾಯಿತು. ಭಕ್ತಾಧಿಗಳು ಬೇಸಿಗೆಯ ಧಗೆಯನ್ನು ಲೆಕ್ಕಿಸದೆ ಆಗಮಿಸಿ ಪೂಜೆ ಜಪಗಳ ಕಾರ್ಯಗಳಲ್ಲಿ ಬಾಗವಹಿಸಿದ್ದರಲ್ಲದೆ, ರಾಮ ಅಷ್ಟೋತ್ತರ,ರಾಮ ರಕ್ಷಾ ಸ್ತೋತ್ರ,ರಾಮ ಅಷ್ಟಕ

ಹೆಚ್ಚಿನ ಸಾಮಾಜಿಕ ಸೌಲಭ್ಯ ಪಡೆಯುವ ಮೂಲಕ ಮಹಿಳೆಯರು ಸಬಲರಾಗಬೇಕು : ಪ್ರಾಚಾರ್ಯ ಇಂದಿರಮ್ಮ

ಇಂದು ಎಲ್ಲಾ ಕ್ಷೇತ್ರಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿರುವ ಇಂದಿನ ಮಹಿಳೆಯರು,ಪುರುಷರಿಗೆ ತಾವೇನೂ ಕಡಿಮೆಯಲ್ಲ ಎಂಬುದನ್ನು ತೋರ್ಪಡಿಸುತ್ತಿದ್ದು, ಮಹಿಳೆಯರು ಇನ್ನೂ ಹೆಚ್ಚಿನ ಸಾಮಾಜಿಕ ಸೌಲಭ್ಯಗಳನ್ನು ಪಡೆಯುವ ಮೂಲಕ ಸಬಲರಾಬೇಕು ಎಂದು ಪ್ರಾಚಾರ್ಯ ಎನ್.ಇಂದಿರಮ್ಮ ಅಭಿಪ್ರಾಯಪಟ್ಟರು. ಇಲ್ಲಿನ ಬಸವೇಶ್ವರ ನಗರದಲ್ಲಿ ಸೃಜನ ಸಂಘದವರು ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಮಹಿಳೆ ಮತ್ತು ಸಮಾಜ ಎಂಬ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಮಾತನಾಡಿದರು. ಪ್ರಕೃತಿದತ್ತವಾಗಿ ಮಾನವ,ಮನುಷ್ಯ ಎಂದು ಕರೆಯಲ್ಪಡುವ ಜೀವಿಗಳಲ್ಲಿ ಗಂಡು-ಹೆಣ್ಣು ಎಂಬ ಎರಡು ಲಿಂಗಗಳನ್ನು ಮಾತ್ರ ಗುರ್ತಿಸಿದ್ದು, ಇಂದಿನ ಸಮಾಜದಲ್ಲಿ ಪುರುಷ,ಮಹಿಳೆ ಎಂಬ ಯಾವುದೇ ಬೇಧ ಭಾವವಿಲ್ಲ ಎಂದರು.ಅದೇ ನಿಟ್ಟಿನಲ್ಲಿ ಸೃಜನಾ ಮಹಿಳಾ ಸಂಘಟನೆಯು ಗಂಡು-ಹೆಣ್ಣು ಎಂದು ಪ್ರತ್ಯೇಕವಾಗಿ ನೋಡದೇ,ತಮ್ಮಲ್ಲಿನ ಸಂಘಟನೆಯನ್ನು ಬಿಂಬಿಸುತ್ತಿದೆ ಎಂದು ತಿಳಿಸಿದರು.ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗಿಂತ ಪುರುಷರು ಅನೇಕ ಮಾರಕ ರೋಗಗಳಿಂದ ಬಳಲುತ್ತಿದ್ದಾರೆ.ಅದರಂತೇ ಮಹಿಳೆಯರು ಸಹ ಏಡ್ಸ್,ಸ್ತನಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅದಕ್ಕಾಗಿ ಉತ್ತಮ ಆರೋಗ್ಯದ ಬಗೆಗಿನ ವಿಚಾರಗಳನ್ನು,ಕಾನೂನುಗಳನ್ನು ತಿಳಿಯುವುದರೊಂದಿಗೆ ಅನೇಕ ಸಾಮಾಜಿಕ ಸೌಲಭ್ಯಗಳನ್ನು ಮಹಿಳೆಯರು ಪಡೆಯುವ ಮೂಲಕ ಸಮಾಜದಲ್ಲಿ ಸಬಲರಾಗಿ ಬಾಳಬೇಕಿದೆ ಎಂದು ಸಲಹೆ ನೀಡಿದರು. ಮಹಿಳೆ

ಹೆಚ್ಚಿನ ಸಾಮಾಜಿಕ ಸೌಲಭ್ಯ ಪಡೆಯುವ ಮೂಲಕ ಮಹಿಳೆಯರು ಸಬಲರಾಗಬೇಕು : ಪ್ರಾಚಾರ್ಯ ಇಂದಿರಮ್ಮ

ಇಂದು ಎಲ್ಲಾ ಕ್ಷೇತ್ರಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿರುವ ಇಂದಿನ ಮಹಿಳೆಯರು,ಪುರುಷರಿಗೆ ತಾವೇನೂ ಕಡಿಮೆಯಲ್ಲ ಎಂಬುದನ್ನು ತೋರ್ಪಡಿಸುತ್ತಿದ್ದು, ಮಹಿಳೆಯರು ಇನ್ನೂ ಹೆಚ್ಚಿನ ಸಾಮಾಜಿಕ ಸೌಲಭ್ಯಗಳನ್ನು ಪಡೆಯುವ ಮೂಲಕ ಸಬಲರಾಬೇಕು ಎಂದು ಪ್ರಾಚಾರ್ಯ ಎನ್.ಇಂದಿರಮ್ಮ ಅಭಿಪ್ರಾಯಪಟ್ಟರು. ಇಲ್ಲಿನ ಬಸವೇಶ್ವರ ನಗರದಲ್ಲಿ ಸೃಜನ ಸಂಘದವರು ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಮಹಿಳೆ ಮತ್ತು ಸಮಾಜ ಎಂಬ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಮಾತನಾಡಿದರು. ಪ್ರಕೃತಿದತ್ತವಾಗಿ ಮಾನವ,ಮನುಷ್ಯ ಎಂದು ಕರೆಯಲ್ಪಡುವ ಜೀವಿಗಳಲ್ಲಿ ಗಂಡು-ಹೆಣ್ಣು ಎಂಬ ಎರಡು ಲಿಂಗಗಳನ್ನು ಮಾತ್ರ ಗುರ್ತಿಸಿದ್ದು, ಇಂದಿನ ಸಮಾಜದಲ್ಲಿ ಪುರುಷ,ಮಹಿಳೆ ಎಂಬ ಯಾವುದೇ ಬೇಧ ಭಾವವಿಲ್ಲ ಎಂದರು.ಅದೇ ನಿಟ್ಟಿನಲ್ಲಿ ಸೃಜನಾ ಮಹಿಳಾ ಸಂಘಟನೆಯು ಗಂಡು-ಹೆಣ್ಣು ಎಂದು ಪ್ರತ್ಯೇಕವಾಗಿ ನೋಡದೇ,ತಮ್ಮಲ್ಲಿನ ಸಂಘಟನೆಯನ್ನು ಬಿಂಬಿಸುತ್ತಿದೆ ಎಂದು ತಿಳಿಸಿದರು.ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗಿಂತ ಪುರುಷರು ಅನೇಕ ಮಾರಕ ರೋಗಗಳಿಂದ ಬಳಲುತ್ತಿದ್ದಾರೆ.ಅದರಂತೇ ಮಹಿಳೆಯರು ಸಹ ಏಡ್ಸ್,ಸ್ತನಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅದಕ್ಕಾಗಿ ಉತ್ತಮ ಆರೋಗ್ಯದ ಬಗೆಗಿನ ವಿಚಾರಗಳನ್ನು,ಕಾನೂನುಗಳನ್ನು ತಿಳಿಯುವುದರೊಂದಿಗೆ ಅನೇಕ ಸಾಮಾಜಿಕ ಸೌಲಭ್ಯಗಳನ್ನು ಮಹಿಳೆಯರು ಪಡೆಯುವ ಮೂಲಕ ಸಮಾಜದಲ್ಲಿ ಸಬಲರಾಗಿ ಬಾಳಬೇಕಿದೆ ಎಂದು ಸಲಹೆ ನೀಡಿದರು. ಮಹಿಳೆ ಮತ್ತು

ಆಕಸ್ಮಿಕ ಬೆಂಕಿ :11 ಗುಡಿಸಲು ಸಂಪೂರ್ಣ ಭಸ್ಮ: ಬೀದಿ ಬಿದ್ದ ಜನ

ಹುಳಿಯಾರು ಶಂಕರಪುರ ಬಡಾವಣೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಆಕಸ್ಮಿಕ ಬೆಂಕಿಯಿಂದ ಸುಟ್ಟು ಕರಕಲಾಗಿರುವ ಬೈಕ್ ನ ಉಳಿದ ಅವಶೇಷ. ಹುಳಿಯಾರು ಶಂಕರಪುರ ಬಡಾವಣೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಆಕಸ್ಮಿಕ ಬೆಂಕಿಯಿಂದಾಗಿ ಸುಟ್ಟುಕರಕಲಾಗಿರುವ ೧೧ ಗುಡಿಸಲುಗಳು ಹಾಗೂ ಅದರಲ್ಲಿ ಆಳಿದುಳಿದ ವಸ್ತುಗಳು. ಇಲ್ಲಿನ ಶಂಕರಪುರ ಬಡಾವಣೆಯಲ್ಲಿ ಬುಧವಾರ ಮಧ್ಯರಾತ್ರಿ ಸಂಭವಿಸಿದ ಆಕಸ್ಮಿಕ ಬೆಂಕಿಯಿಂದ ಸುಮಾರು 11 ಗುಡಿಸಲುಗಳು ಸಂಪೂರ್ಣ ಭಸ್ಮವಾಗಿದ್ದು,ಅದರಲ್ಲಿ ವಾಸಿಸುತ್ತಿದ್ದ ಸುಮಾರು 50ಕ್ಕೂ ಹೆಚ್ಚು ಮಂದಿ ಬೀದಿಗೆ ಬಿದ್ದಿರುವ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ಬುಧವಾರ ಮಧ್ಯರಾತ್ರಿ ಸರಿಸುಮಾರು 12ರ ಸಮಯದಲ್ಲಿ ಆಕಸ್ಮಿಕವಾಗಿ ಒಂದು ಗುಡಿಸಲಿನಲ್ಲಿ ಹತ್ತಿಕೊಂಡ ಬೆಂಕಿ ಕೆಲವೇ ಸಮಯದಲ್ಲಿ ತನ್ನ ಕೆನ್ನಾಲಿಗೆಯಿಂದ ತನ್ನ ಸುತ್ತಲಿನ 1೦ ಗುಡಿಸಲಿಗೆ ವ್ಯಾಪಿಸಿದ್ದರಿಂದ ಗುಡಿಸಲುಗಳು ಸಂಪೂರ್ಣ ಸುಟ್ಟುಕರಕಲಾಗಿವೆ. ಬೆಂಕಿಗಾಹುತಿಯಾಗಿರುವ ಗುಡಿಸಲುಗಳು ರಾಮಣ್ಣ,ರಂಗಸ್ವಾಮಿ, ದುರ್ಗಜ್ಜಿ,ರಂಗಮ್ಮ,ಶಬ್ಬೀನ,ಭಾಗ್ಯಮ್ಮ, ಸತೀಶ್,ರಂಗಣ್ಣ,ನಾಗಣ್ಣ, ದುರ್ಗಣ್ಣ,ಕೃಷ್ಣಪ್ಪ ಎಂಬುವರು ಎಂದು ತಿಳಿದು ಬಂದಿದ್ದು, ಓಲೆ,ಸೀರೆ,3ಸೈಕಲ್,ಹೊಲಿಗೆ ಯಂತ್ರ ಸೇರಿದಂತೆ ದಿನಸಿ ಪದಾರ್ಥಗಳು,ಮಕ್ಕಳ ಓದಿನ ಪುಸ್ತಕಗಳು,ಬಟ್ಟೆ-ಬರೆ,ಒಂದು ಬೈಕ್,ನಾರಿನ ಹಗ್ಗ ಹಾಗೂ ಸಾಕಿದ್ದ ಕೋಳಿಗಳು ಬೆಂಕಿಯ ಸುಳಿಗೆ ಸಿಕ್ಕಿ ಬೂದಿಯಾಗಿದ್ದು ಸುಮಾರು ಲಕ್ಷಾಂತರ ರೂ ನಷ್ಟ ಸಂಭವಿಸಿದೆ

ಕನ್ನಡ ಕವಿಕಾವ್ಯಗೋಷ್ಠಿ

ಹುಳಿಯಾರು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬನಶಂಕರಿ ದೇವಾಲಯದಲ್ಲಿ ನಡೆದೆ ಮನೆಮನೆಗಳಲ್ಲಿ ಕನ್ನಡ ಕವಿಕಾವ್ಯಗೋಷ್ಠಿ ಕಾರ್ಯಕ್ರಮದ ಉದ್ಘಾಟನೆಯಲ್ಲಿ ದೇವಾಂಗ ದಾಸಿಮಯ್ಯ ಸಮಿತಿಯ ಅನಂತ್ ಕುಮಾರ್,ದಾಸಪ್ಪ,ಶ್ರೀನಿವಾಸ್,ಹೆಚ್,ಕೆ,ರಾಮಯ್ಯ,ರಮೇಶ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ನ ತ.ಶಿ.ಬಸವಮೂರ್ತಿ ಇದ್ದಾರೆ.

ಹುಳಿಯಾರು ಮತದಾನ ಕೇಂದ್ರವನ್ನು ರದ್ದು ಮಾಡಿದ್ದೇಕೆ ? : ಸಂಚಾಲಕ ತ.ಶಿ.ಬಸವಮೂರ್ತಿ

ಹೋಬಳಿ ಸಾಹಿತ್ಯ ಪರಿಷತ್ ನ ಸಂಚಾಲಕರಾದ ತ.ಶಿ.ಬಸವಮೂರ್ತಿ . ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಬರುವ ಏಪ್ರಿಲ್ ತಿಂಗಳಿನಲ್ಲಿ ತ್ರೈವಾರ್ಷಿಕ ಚುನಾವಣೆ ನಡೆಸಲಿದ್ದು,ಹುಳಿಯಾರು ಹೋಬಳಿ ಘಟಕದ ಮತ ಕೇಂದ್ರವನ್ನು ರಾಜ್ಯಸಾಹಿತ್ಯ ಪರಿಷತ್ ಕೈಬಿಟ್ಟಿರುವುದನ್ನು ಹೊಬಳಿ ಕನ್ನಡ ಸಾಹಿತ್ಯ ಪರಿಷತ್ ನ ಸಂಚಾಲಕರಾದ ತ.ಶಿ.ಬಸವಮೂರ್ತಿ ಅವರು ಪ್ರಶ್ನಿಸಿದ್ದಾರೆ. ಇಡೀ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ೧೦೦ಕ್ಕೂ ಹೆಚ್ಚಿನ ಸಂಖ್ಯೆಯ ಅಜೀವ ಸದಸ್ಯರನ್ನು ಹೊಂದಿರುವಂತ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕ ಹುಳಿಯಾರು ಆಗಿದ್ದು,ಕಳೆದೆರಡು ತ್ರೈವಾರ್ಷಿಕ ಚುನಾವಣೆಗಳನ್ನು ಉಪ ತಹಶೀಲ್ದಾರ್ ಅವರ ಮೇಲುಸ್ತವಾರಿಯಲ್ಲಿ ಯಾವುದೇ ಲೋಪ ದೋಷಗಳಿಲ್ಲದಂತೆ,ಯಾವುದೇ ಅಡ್ಡಿಯಿಲ್ಲದಂತೆ ಮತದಾನ ಕಾರ್ಯ ನಡೆದಿತ್ತು.ಆದರೆ ಈಗ ಏಕಾಏಕಿ ಹಾಲಿ ಚಾಲನೆಯಲ್ಲಿರುವಂತಹ ಮತ ಕೇಂದ್ರವನ್ನು ರದ್ದು ಮಾಡಿರುವುದು,ಇಲ್ಲಿನ ೧೫೦ಕ್ಕೂ ಹೆಚ್ಚಿನ ಮತದಾರರಿಗೆ ತೊಂದರೆಯುಂಟಾಗುವಂತೆ ಮಾಡಿರುವುದಲ್ಲದೆ,ಮತದಾನಕ್ಕಾಗಿ ತಾಲ್ಲೂಕು ಕೇಂದ್ರಕ್ಕೆ ಹೋಗಬೇಕಿದ್ದು,ವೃತಾ ದುಂದು ವೆಚ್ಚ ಹಾಗೂ ಉರಿಬಿಸಿಲಿನಲ್ಲಿ ಮತದಾರರು ಪರದಾಡುವಂತಾಗುತ್ತದೆ ಎಂದಿದ್ದಾರೆ. ಅಧಿಕಾರ ವಿಕೇಂದ್ರೀಕರಣದ ನಿಟ್ಟಿನಲ್ಲಿ ಕೇವಲ ಕಾನೂನು ಪಾಲನೆಯಷ್ಟೇ ಮುಖ್ಯವಲ್ಲ,ಜೊತೆಗೆ ಮಾನವೀಯತೆಯೂ ಸಹ ಇರಬೇಕು.ಕೆಲವು ತಾಲ್ಲೂಕು ಸಾಹಿತ್ಯ ಪರಿಷತ್ ಘಟಕಗಳಲ್ಲಿ ೧೦೦ಕ್ಕೂ ಕಡಿಮೆ ಸದಸ್ಯರಿದ್ದು,ಪಕ್ಕದ ತಾಲ್ಲೂಕು ಕೇಂದ್ರಗಳಿಗೆ ಹೋಗ

ಮಗುವಿಗೆ ಅಂಗನವಾಡಿ ಶಿಕ್ಷಕಿಯಿಂದ ಥಳಿತ

ಅಂಗನವಾಡಿ ಶಿಕ್ಷಕಿಯೋರ್ವರು ಏನೂ ಅರಿಯದ ಮೂರುವರೆ ವರ್ಷದ ಮುಗ್ಧ ಮಗುವಿಗೆ ಬಾಸುಂಡೆ ಬರುವಂತೆ ಹೊಡೆದಿರುವ ಅಮಾನುಷ ಘಟನೆಯ ದೂರನ್ನು ಇಪ್ಪತ್ತು ದಿನಗಳ ನಂತರ ಹುಳಿಯಾರು ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ. ಹೋಬಳಿಯ ಕೆಂಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬರದಲೇಪಾಳ್ಯದ ಅಂಗನವಾಡಿ ಕೇಂದ್ರದಲ್ಲಿ ಮಾರ್ಚ್ 3 ರಂದು ಪ್ರಕರಣ ನಡೆದಿದೆ ಎನ್ನಲಾಗಿದ್ದು ಈ ಬಗ್ಗೆ ಸಿಡಿಪಿಓ ಹಾಗೂ ಡಿ.ಡಿ.ಪಿ.ಓ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ಪೋಲಿಸ್ ಅಧೀಕ್ಷಕರ ಬಳಿ ದೂರನ್ನು ಕೊಂಡೊಯ್ದ ಪರಿಣಾಮ ಇದೀಗ ಹುಳಿಯಾರು ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಬರದಲೇಪಾಳ್ಯದ ಆರ್.ಉಮೇಶ್ ಎಂಬುವರ ಮೂರುವರೆ ವರ್ಷದ ಕಿಶೋರ್ ಎಂಬ ಮಗುವಿಗೆ ವಿನಾಕಾರಣ ಕೈಕಾಲುಗಳಲ್ಲಿ ಬಾಸುಂಡೆ ಬರುವಂತೆ ಅಂಗನವಾಡಿ ಶಿಕ್ಷಕಿ ಕೋಲಿನಿಂದ ಹಿಗ್ಗಾಮುಗ್ಗಾ ಹೊಡೆದಿದ್ದು, ಇದನ್ನು ಮನೆಯಲ್ಲಿ ಹೇಳದಂತೆ ಹೆದರಿಸಿದ್ದಾರೆ.ಮನೆಗೆ ಬಂದ ಮಗು ಮಂಕಾಗಿದ್ದನ್ನು ಕಂಡ ತಂದೆ ವಿಚಾರಿಸಿ,ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿಸಿದ್ದಾರೆ.ಅಲ್ಲದೆ ಈ ಬಗ್ಗೆ ಮಾಹಿತಿ ಪಡೆದ ಸಿಡಿಪಿಓ ಅಧಿಕಾರಿ ಮಾರನೆಯ ದಿನವೇ ಸ್ಥಳಕ್ಕೆ ಬಂದಿದ್ದರು ಸಹ ಶಿಕ್ಷಕಿ ಬಗ್ಗೆ ಯಾವುದೆ ಕ್ರಮ ತೆಗೆದುಕೊಂಡಿಲ್ಲ. ಇದಕ್ಕೆ ಸಂಬಂಧಿಸಿದಂತೆ ಡಿ.ಡಿ.ಪಿ.ಓ ಅಧಿಕಾರಿ ಬಳಿ ಮಗುವನ್ನು ಕರೆದುಕೊಂದು ಹೋಗಿ ವಿಷಯ ತಿಳಿಸಿದಾಗ,ಅವರು ಕಾಲಿನ

ಮಗುವಿಗೆ ಅಂಗನವಾಡಿ ಶಿಕ್ಷಕಿಯಿಂದ ಥಳಿತ

ಅಂಗನವಾಡಿ ಶಿಕ್ಷಕಿಯೋರ್ವರು ಏನೂ ಅರಿಯದ ಮೂರುವರೆ ವರ್ಷದ ಮುಗ್ಧ ಮಗುವಿಗೆ ಬಾಸುಂಡೆ ಬರುವಂತೆ ಹೊಡೆದಿರುವ ಅಮಾನುಷ ಘಟನೆಯ ದೂರನ್ನು ಇಪ್ಪತ್ತು ದಿನಗಳ ನಂತರ ಹುಳಿಯಾರು ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ. ಹೋಬಳಿಯ ಕೆಂಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬರದಲೇಪಾಳ್ಯದ ಅಂಗನವಾಡಿ ಕೇಂದ್ರದಲ್ಲಿ ಮಾರ್ಚ್ 3 ರಂದು ಪ್ರಕರಣ ನಡೆದಿದೆ ಎನ್ನಲಾಗಿದ್ದು ಈ ಬಗ್ಗೆ ಸಿಡಿಪಿಓ ಹಾಗೂ ಡಿ.ಡಿ.ಪಿ.ಓ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ಪೋಲಿಸ್ ಅಧೀಕ್ಷಕರ ಬಳಿ ದೂರನ್ನು ಕೊಂಡೊಯ್ದ ಪರಿಣಾಮ ಇದೀಗ ಹುಳಿಯಾರು ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಬರದಲೇಪಾಳ್ಯದ ಆರ್.ಉಮೇಶ್ ಎಂಬುವರ ಮೂರುವರೆ ವರ್ಷದ ಕಿಶೋರ್ ಎಂಬ ಮಗುವಿಗೆ ವಿನಾಕಾರಣ ಕೈಕಾಲುಗಳಲ್ಲಿ ಬಾಸುಂಡೆ ಬರುವಂತೆ ಅಂಗನವಾಡಿ ಶಿಕ್ಷಕಿ ಕೋಲಿನಿಂದ ಹಿಗ್ಗಾಮುಗ್ಗಾ ಹೊಡೆದಿದ್ದು, ಇದನ್ನು ಮನೆಯಲ್ಲಿ ಹೇಳದಂತೆ ಹೆದರಿಸಿದ್ದಾರೆ.ಮನೆಗೆ ಬಂದ ಮಗು ಮಂಕಾಗಿದ್ದನ್ನು ಕಂಡ ತಂದೆ ವಿಚಾರಿಸಿ,ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿಸಿದ್ದಾರೆ.ಅಲ್ಲದೆ ಈ ಬಗ್ಗೆ ಮಾಹಿತಿ ಪಡೆದ ಸಿಡಿಪಿಓ ಅಧಿಕಾರಿ ಮಾರನೆಯ ದಿನವೇ ಸ್ಥಳಕ್ಕೆ ಬಂದಿದ್ದರು ಸಹ ಶಿಕ್ಷಕಿ ಬಗ್ಗೆ ಯಾವುದೆ ಕ್ರಮ ತೆಗೆದುಕೊಂಡಿಲ್ಲ. ಇದಕ್ಕೆ ಸಂಬಂಧಿಸಿದಂತೆ ಡಿ.ಡಿ.ಪಿ.ಓ ಅಧಿಕಾರಿ ಬಳಿ ಮಗುವನ್ನು ಕರೆದುಕೊಂದು ಹೋಗಿ ವಿಷಯ ತಿಳಿಸಿದಾಗ,ಅವರು ಕಾಲಿನ ಮ

ಗೋಶಾಲೆ ತೆರೆಯುವಂತೆ ತಾಲ್ಲೂಕು ಕೃಷಿಕ ಸಮಾಜದಿಂದ ಒತ್ತಾಯ

ಬರ ಪರಿಸ್ಠಿತಿ ಎದರಿಸುತ್ತಿರುವ ತುಮಕೂರು ಜಿಲ್ಲೆ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯ ಸುತ್ತಮುತ್ತ ಜಾನುವಾರುಗಳಿಗೆ ಕುಡಿಯುವ ನೀರು,ಮೇವಿನ ಕೊರತೆಯಾಗದಂತೆ ಗೋಶಾಲೆಯನ್ನು ಪ್ರಾರಂಭಿಸ ಬೇಕೆಂದು ತಾಲ್ಲೂಕು ಕೃಷಿಕ ಸಮಾಜ ಸರ್ಕಾರವನ್ನು ಒತ್ತಾಯಿಸಿದೆ. ತಾಲ್ಲೂಕಿನಾದ್ಯಂತ ಈ ಬಾರಿ ಮುಂಗಾರು,ಹಿಂಗಾರು ಮಳೆಯ ವಿಫಲತೆಯಿಂದಾಗಿ ಬರದ ಪರಿಸ್ಥಿತಿ ತಲೆದೋರಿದ್ದು,ಈ ಗಾಗಲೇ ಬೇಸಿಗೆ ದಿನಗಳು ಪ್ರಾರಂಭವಾಗಿದ್ದು,ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯುಂಟಾಗಿ,ರೈತರು ತಮ್ಮ ಜಾನುವಾರುಗಳನ್ನು ಸಾಕಲಾಗದೆ ಮಾರುವಂತಹ ದುಸ್ಥಿತಿ ಉಂಟಾಗಿದೆ. ಅಲ್ಲದೆ ಜಾನುವಾರುಗಳಿಗೆ ನೀರು,ಮೇವು ಸಿಗದೆ ಕಂಗಾಲಾಗಿವೆ.ಕೆಲ ರೈತರು ದುಪ್ಪಟ್ಟು ಹಣ ಕೊಟ್ಟು ಮೇವು ಖರೀದಿಸುಲು ಮುಂದಾದರೂ ಮೇವು ದೊರೆಯುತ್ತಿಲ್ಲ.ಇದೇ ರೀತಿ ಮುಂದುವರೆದರೆ ಜಾನುವಾರುಗಳು ಇಲ್ಲದಂತಾಗಿ,ಕೃಷಿಯನ್ನು ಕೈಬಿಡುವಂತಹ ಕಾಲ ಬರಬಹುದು. ಕಳೆದ ೪-೫ ವರ್ಷಗಳ ಹಿಂದೆ ಸಮೀಪದ ಕಾರೇಹಳ್ಳಿ ರಂಗನಾಥ ಸ್ವಾಮಿ ಕ್ಷೇತ್ರದಲ್ಲಿ ಗೋಶಾಲೆಯನ್ನು ಪ್ರಾರಂಭಿಸಿದ್ದು,ಇಲ್ಲಿನ ಜನ,ಜಾನುವಾರುಗಳಿಗೆ ತುಂಬಾ ಅನುಕೂಲವಾಗಿತ್ತು.ಅದೇ ರೀತಿ ಈ ಸಲವೂ ಸಹ ತಾಲ್ಲೂಕಿನ ನಾನಾ ಭಾಗಗಳಲ್ಲಿ ಗೋಶಾಲೆಯನ್ನು ತೆರೆದರೆ ತಾಲ್ಲೂಕಿನ ರೈತರಿಗೆ ಅನುಕೂಲ ಮಾಡಿಕೊಟ್ಟು, ಗೋವುಗಳ ರಕ್ಷಣೆ, ಸಂತತಿ ಉಳುವಿಗಾಗಿ ಸಹಕಾರ ನೀಡಬೇಕಾಗಿದೆ ಎಂದು ತಾಲ್ಲೂಕು ಕೃಷಿಕ ಸಮಾಜದಅಧ್ಯಕ್ಷ

ಅಂಗಡಿ ಮಳಿಗೆಗಳ ಒತ್ತುವರಿಯಿಂದ ಕಣ್ಮರೆಯಾಗುತ್ತಿರುವ ಹುಳಿಯಾರಿನ ನಾಯಿಗಲ್ಲು

ಹುಳಿಯಾರಿಗೆ ಹುಳಿಯಾರು ಎಂದು ಹೆಸರು ಬರಲು ಕಾರಣವಾಗಿರುವ ಇತಿಹಾಸದ ಕುರುಹಾದ ನಾಯಿಗಲ್ಲು .ಇಂದು ಸೂಕ್ತ ನಿರ್ವಹಣೆಯಿಲ್ಲದೆ,ಅಂಗಡಿ ಮಳಿಗೆಗಳ ಒತ್ತುವರಿಯಿಂದ ಮುಚ್ಚಿ ಹೋಗುತ್ತಿರುವುದು ಇಲ್ಲಿನ ಇತಿಹಾಸ ಪ್ರಸಿದ್ದ ಕೆರೆಯಲ್ಲಿರುವ ಇತಿಹಾಸದ ಕುರುಹಾದ ನಾಯಿಗಲ್ಲು ಅಂಗಡಿ ಮಳಿಗೆಗಳ ಕೆರೆ ಒತ್ತುವರಿಯಿಂದ ಕಣ್ಮರೆಯಾಗುತ್ತಿದೆ.ಹುಳಿಯಾರಿಗೆ ಹುಳಿಯಾರು ಎಂದು ಹೆಸರು ಬರಲು ಕಾರಣವಾಗಿರುವ ಈ ನಾಯಿಗಲ್ಲು ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಕೆರೆಯ ಅಂಚಿನಲ್ಲಿದ್ದು, ಸೂಕ್ತ ನಿರ್ವಹಣೆಯಿಲ್ಲದೆ ಅಂಗಡಿಮಾಲೀಕರು ಕೆರೆಯನ್ನು ಒತ್ತುವರಿ ಮಾಡಿಕೊಳ್ಳುತ್ತಾ ಇದನ್ನು ಮುಚ್ಚಿ ಹಾಕುತ್ತಿದ್ದಾರೆ. ಸುಮಾರು 5-6 ಅಡಿ ಎತ್ತರದ ಈ ಕಲ್ಲು ಸದ್ಯದಲ್ಲಿ 1 ಅಡಿಯಷ್ಟು ಮಾತ್ರ ಗೋಚರಿಸುತ್ತಿದೆ,ಪ್ರತೀತಿ ಎಂಬಂತೆ ಕೆರೆಯ ನೀರಿನ ಮಟ್ಟವನ್ನು ತಿಳಿಯಲು ಈ ಕಲ್ಲನ್ನು ಬಳಸುತ್ತಿದ್ದರು. ಕಲ್ಲು ಸಂಪೂರ್ಣ ಮುಳುಗಿದರೆ ಕೆರೆ ಕೊಡಿ ಬಿಳುತ್ತದೆಂದು ಹೇಳಲಾಗುತ್ತದೆ.ಅಲ್ಲದೆ ಹಿಂದೆ ನಾಯಿಗೂ ಮತ್ತು ಹುಲಿಗೂ ಕಾಳಗ ನಡೆಯುವಾಗ ಹುಲಿಯು ಇಲ್ಲಿನ ಕೋಟೆಯನ್ನು ಹಾರಿದ್ದರರಿಂದ ಈ ಪ್ರದೇಶಕ್ಕೆ ಹುಳಿಯಾರು ಎಂದು ಹೆಸರು ಬಂದಿದೆ ಎನ್ನಲಾಗುತ್ತದೆ. ನಾಯಿಗೆ ಹುಲಿ ಹೆದರಿದ್ದರಿಂದ ಈ ಶಿಲೆಯನ್ನು ಕೆತ್ತಿಸಿ,ಇಲ್ಲಿ ಸ್ಥಾಪಿಸಿರಬಹುದು.ಆದರೆ ಇಂದು ಅಂತಹ ಇತಿಹಾಸವನ್ನು ತಿಳಿಸುವಂತಹ ಒಂದು ಕುರುಹು ನಾಶವಾಗುತ್ತಿದೆ.ಇದರಿಂದ ಮುಂದಿನ ಪೀಳಿಗೆಗೆ ನಮ್ಮ ಊರಿನ ಬಗೆಗೆ ಮಾಹಿತಿನೀಡುವಂತಹ ಕು

ಪೋಟೊ ಸುದ್ದಿ

ಹುಳಿಯಾರು ಹೋಬಳಿ ಗಾಣಧಾಳು ಗ್ರಾ.ಪಂ.ವ್ಯಾಪ್ತಿಯ ಸೋಮನಹಳ್ಳಿಯಲ್ಲಿ ಸೇವಾಲಾಲ್ ಯುವಕ ಸಂಘದವರು ನಡೆಸಿದ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯ ಉದ್ಘಾಟನೆಯಲ್ಲಿ ತಾ.ಪಂ.ಸದಸ್ಯ ಜಿ.ವಸಂತಯ್ಯ,ಕೃಷಿಕ ಸಮಾಜದ ರಂಗನಕೆರೆ ಮಹೇಶ್ ಹಾಗೂ ಕ್ರೀಡಾಪಟುಗಳು ಹಾಜರಿದ್ದರು. ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆ ಬಹಿರಂಗ ಮಾಡಿದ ಉಪನ್ಯಾಸಕರ ಹಾಗೂ ಅಧಿಕಾರಿಗಳ ವಿರುದ್ದ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಾಗೂ ಪುನಃ ಇಂತಹ ಘಟನೆಗಳು ಜರುಗದಂತೆ ಎಚ್ಚರಿಕೆವಹಿಸಬೇಕೆಂದು ಹುಳಿಯಾರು ಎಬಿವಿಪಿ ಸಂಘದವರು ನಾಡಕಛೇರಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಸನ್ಮಾನ

ಹುಳಿಯಾರು ಹೋಬಳಿ ತೊರೆಸೂರಗೊಂಡನಹಳ್ಳಿಯಲ್ಲಿ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ ಅವರನ್ನು ಸನ್ಮಾನಿಸಲಾಯಿತು.ಡಾ.ಜೆ.ಸಿ.ಮಂಜುನಾಥ್ , ಸಂಘದ ಅಧ್ಯಕ್ಷ ಟಿ.ಕೆ.ಪ್ರಕಾಶ್, ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸುಬ್ರಾಯ ಭಟ್, ವಿಸ್ತರಣಾಧಿಕಾರಿ ಎ.ಪಿ.ಯರಗುಂಟಪ್ಪ, ಎಸ್.ದೀಪಕ್, ಗ್ರಾಪಂ ಸದಸ್ಯೆ ಗೌರಮ್ಮ,ಉಷಾಕೃಷ್ಣಮೂರ್ತಿ ಇದ್ದಾರೆ.

ಪಂಚೇಂದ್ರಿಯಗಳನ್ನು ನಿಯಂತ್ರಣದಲ್ಲಿಡುವ ಸಾರಥಿ ಆತ್ಮ : ಡಾ|| ಬಿ.ಕೆ.ಬಸವರಾಜರಾಜಋಷಿ

ಮಾನವ ತನ್ನ ದೇಹದಲ್ಲಿನ ಪಂಚೇಂದ್ರಿಯಗಳನ್ನು ಸರಿಯಾಗಿ ನಿಯಂತ್ರಣದಲ್ಲಿಟ್ಟು ಕೊಳ್ಳದೇ ನಾನಾ ರೀತಿಯ ಕಾರ್ಯಗಳಲ್ಲಿ ತೊಡಗುವ ಮೂಲಕ ತನ್ನ ಜೀವನದಲ್ಲಿ ನೆಮ್ಮದಿ,ಶಾಂತಿ ಇಲ್ಲದಂತೆ ಮಾಡಿಕೊಳ್ಳುತ್ತಿದ್ದಾನೆ. ಇಂತಹ ದೇಹವೆಂಬ ರಥದಲ್ಲಿನ ಪಂಚೇಂದ್ರಿಯಗಳೆಂಬ ಕುದುರೆಗಳನ್ನು ನಿಯಂತ್ರಣದಲ್ಲಿಡುವಂತ ಸಾರಥಿ ಆತ್ಮವಾಗಿದೆ ಎಂದು ಹುಬ್ಬಳ್ಳಿ ವಲಯದ ಈಶ್ವರೀ ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ ಬಿ.ಕೆ.ಬಸವರಾಜ ರಾಜಋಷಿಯವರು ತಿಳಿಸಿದರು. ಇಲ್ಲಿನ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾನಿಲಯದಿಂದ ನೂತನವಾಗಿ ನಿರ್ಮಿಸಿರುವ ರಾಜ ಭವನ ಉದ್ಘಾಟನೆಯ ಅಂಗವಾಗಿ ಒಂದು ತಿಂಗಳುಗಳಕಾಲ ಪ್ರತಿ ದಿನ ಸಂಜೆ ಏರ್ಪಡಿಸಿರುವ ಶರಣರು ಕಂಡ ಶಿವ ಎಂಬ ಪ್ರವಚನ ಮಾಲೆಯಲ್ಲಿ ಅವರು ಪ್ರವಚನ ನೀಡಿದರು. ನಮ್ಮ ದೇಹ ಕ್ಷಣ ಕ್ಷಣಕ್ಕೂ ತನ್ನ ರೂಪವನ್ನು ಬದಲಿಸುತ್ತಿರುತ್ತದೆ.ಇದನ್ನು ಗಮನಿಸದೇ ನಡೆದಾಗ ಅದರ ಸ್ವರೂಪವೇನು ಎಂಬುದು ತಿಳಿಯುವುದಿಲ್ಲ.ಆಸ್ಥಿಪಂಜರದಿಂದಾದ ಈ ದೇಹಕ್ಕೆ ಚರ್ಮದ ಹೊದಿಕೆಯಿಂದ ಒಂದು ರೂಪ ಬಂದಿದೆ ಎಂದರು.ಮಾನವ ತಾನು ಮಾಡುವ ಎಲ್ಲಾ ಕಾರ್ಯಗಳಾನ್ನು ನಾನೇ ಮಾಡಿದ್ದು ಎಂದು ಬೀಗುತ್ತಾನೆ,ಆದರೆ ಈ ಕಾರ್ಯಗಳನ್ನು ಮಾಡುವಂತೆ ಮಾಡುವುದು ಆತ್ಮವೆಂಬ ಜ್ಯೋತಿ.ಇದನ್ನರಿಯದವರು ಕುರುಡರೂ,ಮೂರ್ಖರೂ ಆಗಿರುತ್ತಾರೆ ಎಂದರು. ಕೇವಲ ತಪಸ್ಸಿನಿಂದ ಮಾತ್ರ ಶಾಂತಿ,ನೆಮ್ಮದಿ ದೊರೆಯುವುದಿಲ್ಲ,ಇದರಿಂದ ದೇಹದಂಡನೆಯಾಗುತ್ತದೆ.ನಾವು ಯಾವಾಗ ಆತ್ಮ ಶುದ್ದಿ ಮಾಡಿಕೊಲ್ಳುತ್ತೇವೆ ಆಗ
ಹುಳಿಯಾರಿನ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾನಿಲಯದವರು ನೂತನವಾಗಿ ನಿರ್ಮಿಸಿರುವ ರಾಜಯೋಗ ಭವನದ ಮುಂಭಾಗದಲ್ಲಿ ನಡೆದ ಧ್ವಜಾರೋಹಣವನ್ನು ಹುಬ್ಬಳ್ಳಿ ವಲಯದ ಈಶ್ವರೀ ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ ಬಿ.ಕೆ.ಬಸವರಾಜ ರಾಜಋಷಿಗಳು ನೆರವೇರಿಸಿದರು. ಹುಳಿಯಾರಿನ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾನಿಲಯದಿಂದ ನೂತನವಾಗಿ ನಿರ್ಮಿಸಿರುವ ರಾಜಯೋಗ ಭವನ ಉದ್ಘಾಟನಾ ಸಮಾರಂಭದ ಅಂಗವಾಗಿ ಮಂಗಳವಾರ ನಗರದ ಪ್ರಮುಖ ಬೀದಿಗಳಲ್ಲಿ ಪೂರ್ಣಕುಂಬ ಹಾಗೂ ಶಿವಲಿಂಗದೊಂದಿಗೆ ಬೃಹತ್ ಮೆರವಣಿಗೆ ನಡೆಸಿದರು.

ಉತ್ತಮ ತತ್ವಗಳ ಪರಸ್ಪರ ವರ್ಗಾವಣೆಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಜಿ.ಪಂ.ಸದಸ್ಯ ಪಂಚಾಕ್ಷರಿ

ಹುಳಿಯಾರಿನ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾನಿಲಯದಿಂದ ನೂತನವಾಗಿ ನಿರ್ಮಿಸಿರುವ ರಾಜಯೋಗ ಭವನದ ಉದ್ಘಾಟನಾ ಸಮಾರಂಭದಲ್ಲಿ ಜಿ.ಪಂ.ಸದಸ್ಯ ಪಂಚಾಕ್ಷರಿ,ಹುಬ್ಬಳ್ಳಿ ವಲಯದ ಈಶ್ವರೀ ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ ಬಿ.ಕೆ.ಬಸವರಾಜರಾಜಋಷಿ,ಚನ್ನಬಸವೇಶ್ವರ ಪ್ರಭುಸ್ವಾಮಿಗಳು,ಗ್ರಾ.ಪಂ.ಅಧ್ಯಕ್ಷ ಅನ್ಸರ್ ಅಲಿ,ಟಿ.ಎಸ್.ರಂಗನಾಥ ಶ್ರೇಷ್ರ್ಠಿ, ತಾ.ಪಂ.ಉಪಾಧ್ಯಕ್ಷೆ ಬೀಬೀಫಾತೀಮ, ಸದಸ್ಯ ಕೆಂಕೆರೆ ನವೀನ್,ಬ್ಯಾಂಕ್ ಮರುಳಯ್ಯ,ಮಲ್ಲಿಕಾರ್ಜುನಯ್ಯ ಸೇರಿದಂತೆ ಇತರರಿದ್ದಾರೆ. ಇಂದಿನ ಸಮಾಜದಲ್ಲಿ ನಾನಾ ರೀತಿಯ ಜನರಿದ್ದು, ಅವರೆಲ್ಲರಲ್ಲೂ ಒಂದೊಂದು ರೀತಿಯ ವಿಭಿನ್ನ ಮನೋಭಾವ ಹೊಂದಿರುತ್ತಾರೆ.ಇಂತಹ ಎಲ್ಲಾ ಜನರು ಒಂದೆಡೆ ಸೇರಿ ಉತ್ತಮ ವಿಚಾರ,ತತ್ವಗಳನ್ನು ಪರಸ್ಪರ ವರ್ಗಾವಣೆ ಮಾಡಿದ್ದೇ ಆದರೆ ಉತ್ತಮ ಸಮಾಜದ ನಿರ್ಮಾಣವಾಗುತ್ತದೆ ಎಂದು ಶೆಟ್ಟಿಕೆರೆ ಜಿ.ಪಂ.ಸದಸ್ಯ ಪಂಚಾಕ್ಷರಿ ಅಭಿಪ್ರಾಯಪಟ್ಟರು. ಇಲ್ಲಿನ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾನಿಲಯದಿಂದ ನೂತನವಾಗಿ ನಿರ್ಮಿಸಿರುವ ರಾಜಯೋಗ ಭವನದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ,ಮಾತನಾಡಿದರು. ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಮಾನವನಿಗೆ ದಿನದ 24 ಗಂಟೆಗಳು ಕಡಿಮೆಯಾಗಿದ್ದು,ನೆಮ್ಮದಿಯಿಲ್ಲದ ಜೀವನ ನಡೆಸುತ್ತಿದ್ದಾನೆ.ಶಾಂತಿ,ನೆಮ್ಮದಿಗಾಗಿ ಪರಿತಪಿಸುತ್ತಿರುವವರಿಗೆ ಈ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾನಿಲಯ ಒಂದು ವರದಾನವಾಗಿದೆ.ಇಲ್ಲಿ ಶಿವನ ಹಾಗೂ ಶಿವತತ್ವದ ಆರಾಧನೆಯಿಂದ

ಇಂದು(ತಾ.20) ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾನಿಲಯದ ರಾಜ ಭವನ

ಒಂದು ತಿಂಗಳುಗಳ ಕಾಲ ಪ್ರವಚನ ನೀಡಲೀರುವ ಪಂಡಿತ್ ಬಸವರಾಜ ರಾಜಋಷಿಗಳು. ಇಲ್ಲಿನ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾನಿಲಯದಿಂದ ನೂತನವಾಗಿ ನಿರ್ಮಿಸಿರುವ ರಾಜ ಭವನ ಉದ್ಘಾಟನಾ ಸಮಾರಂಭವನ್ನು ಇಂದು (ತಾ.20) ಮಂಗಳವಾರ ಬೆಳಿಗ್ಗೆ ೧೧ಗಂಟೆಗೆ ಆಶ್ರಮದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧವಾಗಿ ಇಂದಿನಿಂದ ಒಂದು ತಿಂಗಳುಗಳಕಾಲ ಹುಬ್ಬಳ್ಳಿ ವಲಯದ ಈಶ್ವರೀ ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ ಬಿ.ಕೆ.ಬಸವರಾಜ ರಾಜಋಷಿಗಳಿಂದ ನಿತ್ಯ ಸಂಜೆ ಶರಣರು ಕಂಡ ಶಿವ ಎಂಬ ಪ್ರವಚನ ಮಾಲೆಯನ್ನು ಆಯೋಜಿಸಲಾಗಿದೆ.. ರಾಜ ಭವನವನ್ನು ಮಧುಗಿರಿ ಕ್ಷೇತ್ರದ ಶಾಸಕರಾದ ಅನಿತಾಕುಮಾರಸ್ವಾಮಿ ಉದ್ಘಾಟಿಸಲಿದ್ದು, ಶಾಸಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆವಹಿಸುವರು. ಹುಬ್ಬಳ್ಳಿ ವಲಯದ ಈಶ್ವರೀ ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ ಬಿ.ಕೆ.ಬಸವರಾಜರಾಜಋಷಿಯವರು ಆಶೀರ್ವಚನ ನೀಡುವರು.ಹುಬ್ಬಳ್ಳಿ ಉಪವಲಯದ ಈಶ್ವರೀ ವಿಶ್ವವಿದ್ಯಾನಿಲಯದ ಸಂಚಾಲಕ ರಾಜಯೋಗಿ ಬಿ.ಕೆ.ನಿರ್ಮಲಾದೇವಿ ಈಶ್ವರೀ ಸಂದೇಶ ನೀಡುವರು, ಶಾಸಕ ಡಿ.ಸುಧಾಕರ್, ಶೆಟ್ಟಿಕೆರೆ ಜಿ.ಪಂ.ಸದಸ್ಯ ಪಂಚಾಕ್ಷರಿ,ಗ್ರಾ.ಪಂ.ಅಧ್ಯಕ್ಷ ಅನ್ಸರ್ ಅಲಿ,ವಾಣಿಜ್ಯೋದ್ಯಮಿ ಟಿ.ಆರ್.ಶ್ರೀನಿವಾಸಶ್ರೇಷ್ಠಿ,ಕಲ್ಪತರು ಬ್ರಿಕ್ಸ್ ನ ಮಾಲೀಕ ಟಿ.ಎಸ್.ರಂಗನಾಥ ಶ್ರೇಷ್ರ್ಠಿ ಭಾಗವಹಿಸಲಿದ್ದಾರೆ. ಇದೇ ದಿನ ಸಂಜೆ 6ಕ್ಕೆ ಶರಣರು ಕಂಡ ಶಿವ ಪ್ರವಚನ ಮಾಲೆಯ ಉದ್ಘಾಟನೆಯನ್ನು ಶಾಸಕ ಸಿ.ಬಿ.ಸುರೇಶ್ ಬಾಬು ನೆರವೇರಿಸಲಿದ್ದು, ಹುಬ್ಬಳ್ಳಿ ವಲಯ

ಹುಳಿಯಾರಿನಲ್ಲಿ ನೂತನವಾಗಿ ಆಸ್ತಿತ್ವಕ್ಕೆ ಬಂದ ವಾಸವಿ ಕ್ಲಬ್

ಹುಳಿಯಾರಿನ ನೂತನ ವಾಸವಿ ಕ್ಲಬ್ ನ ಉದ್ಘಾಟನೆಯನ್ನು ಇಂಟರ್ ನ್ಯಾಷನಲ್ ಡಿಸ್ಟ್ರಿಕ್ 301 ಎ ನ ಗವರ್ನರ್ ಎಂ.ಎಲ್.ಉದಯ್ ಕುಮಾರ್ ಜ್ಯೋತಿ ಬೆಳಗಿಸುವ ಮೂಲಕ ನೆರವೇರಿಸಿದರು. ನೂತನ ಕ್ಲಬ್ ನ ಅಧ್ಯಕ್ಷ ಎಂ.ಆರ್.ವೇಣುಗೋಪಾಲ ಗುಪ್ತ,ಉಪಾಧ್ಯಕ್ಷ ಟಿ.ಜಿ.ಮಂಜುನಾಥ ಗುಪ್ತ,ಕಾರ್ಯದರ್ಶಿ ಎಂ.ಎಸ್.ಭದ್ರೇಶ್,ಖಜಾಂಜಿ ಟಿ.ಕೆ ಅಜಯ್ ಇದ್ದಾರೆ. ಇಂಟರ್ ನ್ಯಾಷನಲ್ ಡಿಸ್ಟ್ರಿಕ್ 301 ಎ ಅವರ ಸಹಬಾಗಿತ್ವದ ನೂತನ ಶಾಖೆಯಾಗಿ ಹುಳಿಯಾರಿನಲ್ಲಿ ಅಫಿಲೇಟೆಡ್ ಟು ವಾಸವಿ ಕ್ಲಬ್ ಗೆ ಶನಿವಾರ ವಿದ್ಯುಕ್ತವಾಗಿ 301ಎ ನ ಗವರ್ನರ್ ಎಂ.ಎಲ್.ಉದಯ್ ಕುಮಾರ್ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಗರದ ರೋಟರಿ ಕ್ಲಬ್ ನಲ್ಲಿ ನಡೆದ ಸುಂದರ ಸಮಾರಂಭದಲ್ಲಿ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಟಿ.ಆರ್.ರಂಗನಾಥ ಶೆಟ್ಟಿ,ಕಾರ್ಯದರ್ಶಿ ಟಿ.ಎಸ್.ರಾಮನಾಥ್,ಎಸ್.ಎಲ್.ಆರ್ ಗ್ರೋಪ್ ನ ಹೆಚ್.ವಿ.ಗೋವಿಂದರಾಜ್ ಉಪಸ್ಥಿತರಿದ್ದರು.ನೂತನ ಕ್ಲಬ್ ನ ಅಧ್ಯಕ್ಷರಾಗಿ ಎಂ.ಆರ್.ವೇಣುಗೋಪಾಲ ಗುಪ್ತ,ಉಪಾಧ್ಯಕ್ಷರಾಗಿ ಟಿ.ಜಿ.ಮಂಜುನಾಥ ಗುಪ್ತ,ಕಾರ್ಯದರ್ಶಿಯಾಗಿ ಎಂ.ಎಸ್.ಭದ್ರೇಶ್, ಖಜಾಂಜಿಯಾಗಿ ಟಿ.ಕೆ ಅಜಯ್ ಅವರುಗಳನ್ನು ಆಯ್ಕೆ ಮಾಡಲಾಯಿತು.ಅಲ್ಲದೆ ಕ್ಲಬ್ ಗೆ ಸದಸ್ಯ್ರ ಆಯ್ಕೆ ಸಹ ಮಾಡಲಾಯಿತು.

ಗ್ರಾಮಪಂಚಾಯ್ತಿ ಹಾಗೂ ಕಂದಾಯ ಇಲಾಖಾಧಿಕಾರಿಗಳಿಂದ ರೈತರ ಸುಲಿಗೆ : ಪ್ರತಿಭಟನೆ

ರೈತರುಗಳ ಬಗರ್ ಹುಕುಂ ಜಮೀನಿನ ಮೂಂಜೂರಾತಿ , ಅಂಗವಿಕಲ,ವಿಧವಾ ವೇತನ, ವೃದ್ಯಾಪ್ಯ ವೇತನ ಹಾಗೂಇನ್ನಿತರ ಸಮಸ್ಯೆಗಳ ಬಗ್ಗೆ ಗ್ರಾಮಪಂಚಾಯ್ತಿ ಹಾಗೂ ಕಂದಾಯ ಇಲಾಖಾಧಿಕಾರಿಗಳನ್ನು ಕೇಳಿದರೆ ಅವರು ನಮ್ಮಗಳೊಂದಿಗೆ ಸ್ಪಂದಿಸದೆ ಕೆಲಸ ಮಾಡಿಕೊಡಲು ಇಂತಿಷ್ಟು ಹಣ ಕೊಡಿ ಎಂದು ಕೇಳುವ ಮೂಲಕ ರೈತರ ಸುಲಿಗೆ ಮಾಡುತ್ತಿದ್ದಾರೆಂದು ಆರೋಪಿಸಿ ಹೊಯ್ಸಲಕಟ್ಟೆಯ ಸುತ್ತಲಿನ ಗ್ರಾಮದ ರೈತರುಗಳು ಶನಿವಾರದಂದು ಹೋಬಳಿಯ ನಾಡಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಹೊಯ್ಸಲಕಟ್ಟೆ,ದಸೂಡಿ,ದಬ್ಬ ಗುಂಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರುಗಳು ಹುಳಿಯಾರಿನ ನಾಡ ಕಛೇರಿಗೆ ಮುತ್ತಿಗೆ ಹಾಕಿ ಗ್ರಾಮ ಪಂಚಾಯ್ತಿ,ಕಂದಾಯ ಇಲಾಖಾಧಿಕಾರಿಗಳು ನಮ್ಮ ಸಮಸ್ಯೆಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸದೆ,ನಮ್ಮನ್ನು ಶೋಷಿಸುತ್ತಿದ್ದು ನಮಗೆ ನ್ಯಾಯ ದೊರೆಕಿಸಿಕೊಡಬೇಕೆಂದು ಒತ್ತಾಯಿಸಿದರು. ಅಲ್ಲದೆ ಕೆಲ ವೃದ್ದರು,ಅಂಗವಿಕಲರುಗಳಿಗೆ ಸರ್ಕಾರದಿಂದ ಬರುತ್ತಿದ್ದ ವೇತನವನ್ನು ಉದ್ದೇಶ ಪೂರ್ವಕವಾಗಿ ತಡೆಹಿಡಿದ್ದಾರೆ. ಸರ್ಕಾರ ಈ ಹಿಂದೆ ಸಂಧ್ಯಾಸುರಕ್ಷ,ವೃದ್ದಾಪ್ಯ,ಅಂಗವಿಕಲವೇತನ ಪಡೆಯುವ ಫಲಾನುಭವಿಗಳ ಗಣತಿ ಕಾರ್ಯ ಮಾಡಿಸಿದ್ದಾಗ ಗಣತಿ ಕಾರ್ಯಕ್ಕೆ ಬಂದಿದ್ದ ಅಧಿಕಾರಿಗಳು ಗ್ರಾಮದ ಯಾವುದೊ ಒಂದು ಸ್ಥಳಕ್ಕೆ ಬಂದು ತಮಗೆ ಬೇಕಾದವರಿಂದ ಮಾಹಿತಿ ಪಡೆದಿದ್ದಾರೆ.ಜೊತೆಗೆ ಕೆಲ ಅರ್ಹ ಫಲಾನುಭವಿಗಳಿಗೆ ಈ ವೇತನ ತಪ್ಪುವಂತೆ ಮಾದಿದ್ದಾರೆ, ಅಧಿಕಾರಿಗಳೇ ಹೀಗೆ ಮಾಡಿದರೆ,ನಾವು ಈ ಬಗ್ಗೆ
ಹುಳಿಯಾರಿನ ಜ್ಞಾನ ಜ್ಯೋತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ೨೦೧೧-೧೨ನೇ ಸಾಲಿನ ಕಸ್ತೂರಿ ಕನ್ನಡ ಪ್ರತಿಭಾ ಪರೀಕ್ಷೆ ಹಾಗೂ ಪುಟಾಣಿ ಪ್ರತಿಭಾ ಪರೀಕ್ಷೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕ್ರಮವಾಗಿ ೨,೪,೫ ನೇ ಪಡೆದಿದ್ದು.ಶಾಲೆಗೆ ಕೀರ್ತಿ ತಂದಿದ್ದಾರೆ.. ಕಳೆದ ಕೆಲ ದಿನಗಳ ಹಿಂದೆ ಅನುಮಾನಸ್ಪದ ಸಾವಿಗೀಡಾದ ದಬ್ಬಗುಂಟೆಯ ರಮೇಶನ ಸಾವಿನ ಪ್ರಕರಣದ ಬಗ್ಗೆ ಶೀಘ್ರವೇ ತನಿಖೆ ನಡೆಸಿ,ಆರೋಪಿಗಳಾನ್ನು ಪತ್ತೆ ಹಚ್ಚಬೇಕೆಂದು ಮೃತರ ಸಂಬಂಧಿಕರು ಹಾಗೂ ಅಲ್ಲಿನ ಗ್ರಾಮಸ್ಥರು ಹುಳಿಯಾರು ಪೋಲೀಸ್ ಠಾಣೆಯ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು

ಗಾಯನ ಸ್ಪರ್ಧೆಯಲ್ಲಿ ವೀಜೇತರಾದ ಮಕ್ಕಳಿಗೆ ನೆನಪಿನ ಕಾಣಿಕೆ

ಹುಳಿಯಾರು-ಕೆಂಕೆರೆ ಸರ್ಕಾರಿ ಪೌಢಶಾಲೆಯಲ್ಲಿ ಪುಟ್ಟರಾಜ್ ಗವಾಯಿಯವರ ಜನ್ಮದಿನದ ಅಂಗವಾಗಿ ನಡೆಸಿದ ಗಾಯನ ಸ್ಪರ್ಧೆಯಲ್ಲಿ ವೀಜೇತರಾದ ಮಕ್ಕಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ, ಉಪಪ್ರಾಂಶುಪಾಲರಾದ ಇಂದಿರಮ್ಮ,ದೈಹಿಕ ಶಿಕ್ಷಕ ಮನ್ಸೂರ್ ಅಹಮ್ಮದ್,ಶಿಕ್ಷಕರಾದ ರಾಮಯ್ಯ,ಸಂಗೀತ ಶಿಕ್ಷಕರು ಅಭಿನಂಧಿಸಿದರು.

ಅವನತಿಯತ್ತ ಹೊಯ್ಸಳ ಕಾಲದ ಶಿಲಾಶಾಸನ

ಹುಳಿಯಾರು ಸಮೀಪದ ಸೋರಲಮಾವು ಗ್ರಾಮದ ಇತಿಹಾಸ ಪ್ರಸಿದ್ದ ಪುರಾತ ಈಶ್ವರ ದೇವಾಯದಲ್ಲಿ ಕರ್ನಾಟಕವನ್ನಾಳಿದ ಹೊಯ್ಸಳರ ಕಾಲಕ್ಕೆ ಸೇರಿತ್ತು ಎಂಬಲಾದ ಶಿಲಾ ಶಾಸನವೊಂದಿದೆ . ಆದರೆ ಅದರ ಸೂಕ್ತ ನಿರ್ವಹಣೆಯಿಲ್ಲದೆ ಅದು ಅವನತಿಯತ್ತ ಸಾಗುತ್ತಿದೆ.ಅದ ಸೂಕ್ತ ನಿರ್ವಹಣೆಗಾಗಿ ಗ್ರಾಮದ ಸಂಚಯನ ಸ್ವಯಂ ಸೆವಾ ಸಂಸ್ಥೆ ಆಗ್ರಹಿಸಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರು ಬಳಪದ ಕಲ್ಲಿನಿಂದ ಮಾಡಿರುವ ಈ ಶಿಲಾಶಾಸನವನ್ನೇ ಪೂಜೆಸುತ್ತಿದ್ದು,ಅದಕ್ಕೆ ಎಣ್ಣೆ ಮಜ್ಜನ ಮಾಡಿಸುವುದಲ್ಲದೆ, ಅನೇಕ ವಸ್ತುಗಳನ್ನು ಅದರ ಮೇಲೆ ಹಾಕುತ್ತಿದ್ದು,.ಇದರಿಂದ ಶಾಸನದ ಮೇಲಿನ ಅನೆಕ ಅಂಶಗಳ ಅಳಿಸಿಹೋಗುತ್ತಿವೆ.ಇದೇಮುಂದುವರೆದರೆ ಶಾಸ ಸಂಪೂರ್ಣವಾಗಿ ನಶಿಸಿ ಹೋಗುತ್ತದೆ ಎಂದು ಸಂಘದವರು ತಿಳಿಸಿದ್ದಾರೆ.ಇದಕ್ಕೆ ಸಂಬಂಧಿಸಿದಂತೆ ಸುತ್ತಮುತ್ತ ಇನ್ನೂ ಅನೇಕ ಶಾಸನಗಳು ಇದ್ದರೂ ಸಹ ಯಾವುದೇ ಅಧ್ಯಯನ ತಂಡವಾಗಿ ಬಂದು ಪರಿಶೀಲನೆ ನಡೆಸಿಲ್ಲ.ಈ ಹಿಂದೆ ಸಂಚಯನ ಸ್ವಯಂ ಸೆವಾ ಸಂಸ್ಥೆ ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗವನ್ನು ಸಂಪರ್ಕಿಸಿ ಶಾಸನದ ಅಧ್ಯಯನ ಮಾಡುವಂತೆ ಮನವಿ ಮಾಡಿದ್ದರು.ಇದಕ್ಕೆ ಸಂಬಂಧ ಪಟ್ಟ ಇಲಾಖೆಯವರು ಇದರ್ ಸಂರಕ್ಷಣೆಗೆ ಮುಂದಾಗಿ ಪುರಾತನ ಶಾಸನಗಳು ಅವನತಿ ಹೊಂದುವುದನ್ನು ತಪ್ಪಿಸಿ,ಇತಿಹಾಸದ ಕುರುಹುಗಳನ್ನು ಉಳಿಸಿಕೊಡಿ ಎಂದು ಸಂಚಯನ ಸಂಘದ ಹರ್ಷ ಹಾಗೂ ಗ್ರಾಮಸ್ಥರು ಪತ್ರಿಕೆ ಮೂಲಕ ಮನವಿ ಮಾಡಿದ್ದಾರೆ.
ಹುಳಿಯಾರು ಸಮೀಪಸ ಕಂಪನಹಳ್ಳಿ ಬಳಿ ತಿರುವಿನಲ್ಲಿ ಡ್ರೈವರ್ ನ ಅಜಾಗರೂಕತೆಯಿಂದ ಆಯಾತಪ್ಪಿ ಬಿದ್ದಿರುವ ಶಿವಗಂಗಾ ಬಸ್. ಬಸ್ ಒಂದು ಪಲ್ಟಿ ಹೊಡೆದು,ಬಸ್ಸಿನಲ್ಲಿದ್ದ ಮೂವರಿಗೆ ತೀವ್ರ ಗಾಯಗಳಾಗಿರುವ ಘಟನೆ ಶಿರಾ ಹುಳಿಯಾರು ಮಾರ್ಗದಲ್ಲಿ ಬರುವ ಹುಳಿಯಾರಿನಿಂದ ಸುಮಾರು ನಾಲ್ಕೈದು ಕೀ.ಮೀ ದೂರದ ಕಂಪನಹಳ್ಳಿ ಬಳಿ ಮಾ.13ರ ಮಂಗಳವಾರ ರಾತ್ರಿ ಸುಮಾರು 10 ರ ಸಮಯದಲ್ಲಿ ಸಂಭವಿಸಿದೆ. ಕೊಂಡಳಿಕ್ರಾಸ್ ಸಮೀಪದ ಎನ್.ಹೊಸಳ್ಳಿ ಗ್ರಾಮದ ವಧುವಿನ ಮನೆಯಿಂದ ಸಂಬಂಧಿಕರನ್ನು ಕಾರೇಹಳ್ಳಿಯಲ್ಲಿ ನಡೆಯಲಿದ್ದ ಮದುವೆಗೆ ಕಾರ್ಯಕ್ಕೆ ಕರೆದುಕೊಂಡು ಬಂದಿದ್ದ ಶಿವಗಂಗಾ ಬಸ್ , ಸಂಬಂಧಿಕರನ್ನು ಕಾರೆಹಳ್ಳಿಯಲ್ಲಿ ಇಳಿಸಿ, ಡಿಸೇಲ್ ಹಾಕಿಸಲೆಂದು ಡ್ರೈವರು ಸೇರಿದಂತೆ ಮೂವರು ಹುಳಿಯಾರಿಗೆ ಬಂದಿದ್ದು,ಬಸ್ ಗೆ ಡಿಸೇಲ್ ಹಾಕಿಸಿಕೊಂಡು ಪುನ: ಕಾರೇಹಳ್ಳಿಗೆ ವಾಪಸಾಗಿದ್ದು, ಕಂಪನಹಳ್ಳಿ ಸಮೀಪದ ತಿರುವಿನಲ್ಲಿ ಡ್ರೈವರ್ ನ ಅಜಾಗರೂಕತೆಯಿಂದ ಬಸ್ ಆಯಾತಪ್ಪಿ ರಸ್ತೆಯ ಎಡ ಭಾಗಕ್ಕೆ ಉರುಳಿ ಬಿದ್ದು,ತುಮಕೂರಿನ ಡ್ರೈವರು ಮಾರುತಿ,ಹೊಸಳ್ಳಿಯ ರಂಗನಾಥ ಹಾಗೂ ಅದೇ ಗ್ರಾಮದ ಮತ್ತೊಬ್ಬ ವ್ಯಕ್ತಿಗೆ ತೀವ್ರಗಾಯಗಳಾಗಿದ್ದು,ಆಸ್ಪತ್ರೆಗೆ ದಾಖಲಿಸಲಾಗಿದೆ.ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.ಎ.ಎಸ್.ಐ.ಕೃಷ್ಣಮೂರ್ತಿ ಚಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ,ಠಾಣೆಯಲ್ಲಿ ದೂರು ದಾಖಲಿಸಿ ಕೊಂಡಿದ್ದಾರೆ.

ಮಕ್ಕಳ ಉತ್ತಮ ಚಾರಿತ್ರ್ಶಕ್ಕೆ ನಿರ್ಮಾಕ್ಕೆ ಶಿಕ್ಷಣ ಅವಶ್ಯ : ಸ್ವಾಮೀಜಿ ಸಲಹೆ

ಹುಳಿಯಾರಿನ ಸುರ್ವಣಮುಖಿ ಕ್ಯಾಂಪಸ್ ನ ವಿಧ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನ 2011-12ನೇ ಸಾಲೀನ ಶಾರದಾ ಪೂಜಾ ಕಾರ್ಯಕ್ರಮದಲ್ಲಿ ತುಮಕೂರಿನ ರಾಮಕೃಷ್ನಾಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹಿತನುಡಿ ನುಡಿದರು. ಮಾನವ ಸ್ವಾವಲಂಭಿಯಾಗಿ ಬಾಳಲಾದ ಇಂದಿನ ಸಮಾಜದಲ್ಲಿ ಇತರರೊಂದಿಗೆ ಬೆರತು ಬಾಳಬೇಕಾದರೆ ಆತನು ಉತ್ತಮ ಗುಣಗಳನ್ನು ತನ್ನಲ್ಲಿ ಮೈಗೂಡಿಸಿಕೊಂಡಿರಬೇಕು.ಅಂತಹ ಹತ್ತು ಹಲವು ಉತ್ತಮ ಚಾರಿತ್ರ್ಶದ ಗುಣಗಳನ್ನು ಶಿಕ್ಷಣ ನೀಡುತ್ತದೆಂದು ತುಮಕೂರಿನ ರಾಮಕೃಷ್ಣಾಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು. ಹೋಬಳಿಯ ಸುರ್ವಣಮುಖಿ ಕ್ಯಾಂಪಸ್ ನ ವಿಧ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನ 2011-12ನೇ ಸಾಲೀನ ಶಾರದಾ ಪೂಜಾ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು. ಭೂಮಿಯ ಮೇಲೆ ಮಾನವನ ಒಬ್ಬ ಅದ್ಬುತ ಜೀವಿಯಾಗಿದ್ದು,ಅಮೀಬಾದಿಂದ ಮಾನವನ ವಿಕಾಸವಾಗಿದ್ದರೂ ಸಹ ಮಾನವ ಮಹಾತ್ಮನಾಗುವುದೇ ನಿಜವಾದವಿಕಾಸ ಎಂದರು. ಭೂಮಿಯ ಮೇಲಿನ ಎಲ್ಲಾ ಪ್ರಾಣಿಗಳಿಗಿಂತ ಬುದ್ದಿವಂತ ಮನುಷ್ಯನಾಗಿದ್ದಾನೆ.ಇದಕ್ಕೆ ಕಾರಣ ಶಿಕ್ಷಣವಾಗಿದೆ. ಈತ ತಾನು ಪಡೆದ ಶಿಕ್ಷಣಾದಿಂದ ತನಗೆ ಬೇಕಾದ್ದನು ಪಡೆಯಲು ನಾನಾ ಆವಿಷ್ಕಾರಗಳನ್ನು ಮಾಡುತ್ತಿದ್ದಾನೆ.ವಿದ್ಯೆಯೆಂದು ಯಾರೊಬ್ಬರ ಮನೆ ಸೊತ್ತಲ್ಲ ಅದನ್ನು ಯಾರುಬೇಕಾದರೂ ಪಡೆಯುವಂತಹ ಹಾಗೂ ಎಲ್ಲಾ ಕಾಲದಲ್ಲೂ ಸಿಗುವಂತಹದ್ದು.ನಾವು ಗಳಿಸಿದ ಸಂಪತ್ತನ್ನು ಯಾರುಬೇಕಾದರು ಕಸಿದುಕೊಳ್ಳಬಹುದು ಆದರೆ ವಿದ್ಯೆಯೆಂಬ

ಸರಣಿ ಅಪಘಾತ : ಬೈಕ್ ಸವಾರ ಸಾವು

ಹುಳಿಯಾರು ಸಮೀಪದ ಡಿಂಕನಹಳ್ಳಿ ಬಳಿ ಬೈಕ್ ಸವಾರನೊಬ್ಬ ಸೇತುವೆಗೆ ಗುದ್ದಿದ ಪರಿಣಾಮ ಸಾವನಪ್ಪಿರುವ ಘಟನೆ ಬುಧವಾರ ಸಂಜೆ ಸಂಭವಿಸಿದೆ. ಬೈಕ್ ಸವಾರ ಹನುಮಂತಪುರದ ಕುಮಾರ್ (೨೫) ಎಂದು ತಿಳಿದು ಬಂದಿದ್ದು, ಅಪಘಾತ ಸ್ಥಳದಿಂದ ಆಸ್ಪತ್ರೆಗೆ ಕರೆತರುವಾಗ ಸಾವನಪ್ಪಿದ್ದಾನೆ. ಹಿಂಬದಿಯಲ್ಲಿದ್ದ ಇತನ ಸ್ನೇಹಿತನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಇದೇ ದಿನ ಸಂಜೆ ಹೋಬಳಿಯ ಕಂಪನಹಳ್ಳಿ ಹತ್ತಿರ ಟಿವಿಎಸ್ ಮೊಪೆಡ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಗಾಣಧಾಳು ಅಂಚೆ ಕಛೇರಿ ನೌಕರ ಮೂರ್ತಿ ಎಂಬುವರ ಟಿವಿಎಸ್ ಗೆ ಮೊಟ್ಟಿಹಳ್ಳಿ ವಡ್ಡರಹಟ್ಟಿಯ ರವಿ ಎಂಬಾತನ ಹಿಂಬದಿಯಿಂದ ಬಂದು ಗುದ್ದಿದ್ದಾನೆ.ಅಪಘಾತದಲ್ಲಿ ರವಿಗೆ ತೀವ್ರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಗೆ ಸೇರಿಸಲಾಗಿದೆ. ಘಟನಾ ಸ್ಥಳಕ್ಕೆ ಪ್ರಬಾರಿ ಸಿಪಿಐ ರಾಮಕೃಷ್ಣಯ್ಯ,ಪಿಎಸೈ ಪಾರ್ವತಮ್ಮ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹುಳಿಯಾರು ಹೋಬಳಿ ಕಾರೇಹಳ್ಳಿ ಶ್ರೀ ರಂಗನಾಥಸ್ವಾಮಿಯ ವೈಭವದ ಮಹಾರಥೋತ್ಸವ

ಹುಳಿಯಾರು : ಹೋಬಳಿಯ ಕಾರೇಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿಯ ಮೂಲಸ್ಥಾನದಲ್ಲಿ ದನಗಳ ಜಾತ್ರೆ ಹಾಗೂ ವೈಭವದ ಬ್ರಹ್ಮ ರಥೋತ್ಸವ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಮಾ.೦6ರ ಮಂಗಳವಾರ ಮಧ್ಯಾಹ್ನ ಶ್ರದ್ದಾಭಕ್ತಿ ಹಾಗೂ ವೈಭವದಿಂದ ಜರುಗಿತು. ಕಳೆದ ಮೂರು ದಿನದಿಂದ ಜಾತ್ರೆ ಅಂಗವಾಗಿ ಸ್ವಾಮಿಗೆ ಕಂಕಣ, ಅಂಕುರಾರ್ಪಣೆ, ಧ್ವಜಾರೋಹಣ, ಉಯ್ಯಾಲೋತ್ಸವ, ಗಜಾರೋಹಣ, ಗರುಡ ವಾಹನೋತ್ಸವ, ಸಂತರ್ಪಣೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದಿದ್ದು, ಇಂದು ಮುಂಜಾನೆಯಿಂದಲೆ ಬ್ರಹ್ಮ ರಥೋತ್ಸವದ ವಿವಿಧ ಪೂಜಾ ಕೈಂಕರ್ಯ ನಡೆದವು.ವಿಪ್ರರುಗಳು ಮೂಲ ದೇವಸ್ಥಾನದಿಂದ ಮಂಗಳವಾಧ್ಯ ಹಾಗೂ ಪೂರ್ಣಕುಂಭದೊಂದಿಗೆ ಶ್ರೀ ಸ್ವಾಮಿಯವರನ್ನು ಸಹಸ್ರಾರು ಭಕ್ತರು ಉದ್ಘೋಷದೊಂದಿಗೆ ಕರೆತಂದು ರಂಗು ರಂಗಿನ ಬಾವುಟ, ತಳಿರು ತೋರಣ, ಬಣ್ಣ ಬಣ್ಣದ ಹೂವಿನ ಹಾರದಲ್ಲಿ ಸಿಂಗಾರಗೊಂಡ ಸರ್ವಾಲಂಕೃಥ ರಥದಲ್ಲಿ ಶ್ರೀ ಸ್ವಾಮಿಯವರನ್ನು ಪ್ರತಿಷ್ಠಾಪಿಸಿ ಮಂಗಳವಾದ್ಯದೊಂದಿಗೆ ರಥೋತ್ಸವ ನೆರವೇರಿಸಿದರು. ಸುಡುವ ಬಿಸಿಲನ್ನೂ ಲೆಕ್ಕಿಸದೆ ಬೆಳಿಗ್ಗೆಯಿಂದಲೇ ಕಿಕ್ಕಿರಿದು ನೆರೆದಿದ್ದ ಭಕ್ತರು ಜಯಘೋಷದೊಂದಿಗೆ ತೇರನ್ನೆಳೆದು ಸಂಭ್ರಮಿಸಿದರು. ಎಲ್ಲೆಲ್ಲೂ ಜಾತ್ರೆಯ ಸಡಗರ ತುಂಬಿ ತುಳುಕುತಿತ್ತು. ಸುಮಾರು ಐವತ್ತು ಅಡಿಗೂ ಎತ್ತರದಲ್ಲಿದ್ದ ಬ್ರಹ್ಮ ರಥವನ್ನು ಭಕ್ತಿಭಾವದಿಂದ ಅಪಾರ ಭಕ್ತಾಧಿಗಳು ಎಳೆದರೆ ಮತ್ತೊಂದು ಕಡ

ಅಳತೆಯ ವಿಚಿತ್ರ

ಹಿಂದೆ ಅಳತೆಯ ಬಳಕೆ ಸೇರು,ಪಾವು,ಚಟಾಕು ಹೀಗೆ ನಾನಾ ರೀತಿಯಿತ್ತು.ಅದರೀಗ ಅವುಗಳು ಬದಲಿಗೆ ಲೀಟರ್,ಮಿಲಿ ಲೀಟರ್ ಮಾತ್ರ ಚಾಲ್ತಿಯಲ್ಲಿದೆ.ಈಗಿನವರಿಗೆ ಸೇರಿನ ಅಳತೆ ಬಗ್ಗೆ ಹೆಚ್ಚು ಕಡಿಮೆ ತಿಳಿದೆ ಇಲ್ಲ ಎನ್ನಬಹುದು.ಅದೇ ರೀತಿ ಇಂಚು,ಅಡಿ,ಮೈಲುಗಳ ಬದಲಿಗೆ ಕಿಮೀ,ಮೀ,ಸೆಂ.ಮೀ ಬಳಕೆಯಲ್ಲಿದ್ದು ಎಲ್ಲರಿಗೂ ಸುಲಭದಲ್ಲಿ ಅರ್ಥವಾಗುತ್ತದೆ.ಜಾಗತೀಕವಾಗಿ ಈಗ ಎಸ್ ಐ ಸಿಸ್ಟಮ್ ಬಳಕೆಯಲ್ಲಿದ್ದು ಕಾನೂನು ಮಾಪನ ಶಾಸ್ತ್ರ ಇಲಾಖೆ ಹೇಳುವಂತೆ ದಿ ಲೀಗಲ್‌ ಮೆಟ್ರಾಲಜಿ ಕಾಯ್ದೆ 2009 ಸೆಕ್ಷನ್‌ 11 (1) (ಸಿ) ಪ್ರಕಾರ ಇಂಚು, ಅಡಿ ಮಾಪನಗಳು ನಿಷಿದ್ಧ.ಇದನ್ನು ಬಳಕೆ ಮಾಡಿದರೆ ದಂಡ ಹಾಕಬಹುದು.ಆದರೂ ಕೂಡ ಟಿವಿ ಜಾಹೀರಾತುಗಳಲ್ಲಿ ನಮ್ಮ ಹೊಸ ಟಿವಿ ಇಷ್ಟು ಇಂಚು/ ಅಡಿ ಇದೆಯೆಂಬ ಲೆಕ್ಕದಲ್ಲಿ ಗಾತ್ರವನ್ನು ನಮೂದಿಸುವುದನ್ನು ಕಾಣಬಹುದು. ಈ ಬಗ್ಗೆ ಉದಯವಾಣಿ ಪತ್ರಿಕೆಯಲ್ಲಿ ಹಿಲರಿ ಕ್ರಾಸ್ತಾ Feb 21, ೨೦೧೨ ರಲ್ಲಿ ಬರೆದ ಲೇಖನ ಗಮನ ಸೆಳೆಯುವಂತಿದ್ದು ಈ ಬಗ್ಗೆ ತಮ್ಮ ಪ್ರತಿಕ್ರಿಯೆಗಾಗಿ ಅದನ್ನು ಇಲ್ಲಿ ನೀಡಲಾಗಿದೆ. ಭಾರತದಲ್ಲಿ ಇಂಚು, ಅಡಿ ಮಾಪನ ನಿಷಿದ್ಧ ! * ಹಿಲರಿ ಕ್ರಾಸ್ತಾ Feb 21, 2012 ಮಂಗಳೂರು: ಭಾರತದಲ್ಲಿ ಇಂಚು, ಅಡಿ ಮಾಪನಗಳು ನಿಷಿದ್ಧವೇ? ಕಾನೂನು ಮಾಪನ ಶಾಸ್ತ್ರ ಇಲಾಖೆ ಹೇಳುವಂತೆ ದಿ ಲೀಗಲ್‌ ಮೆಟ್ರಾಲಜಿ ಕಾಯ್ದೆ 2009 ಸೆಕ್ಷನ್‌ 11 (1) (ಸಿ) ಪ್ರಕಾರ ಈ ಮಾಪನಗಳು ನಿಷಿದ್ಧ. ಮಿಲಿ ಮೀಟರ್‌, ಸೆಂಟಿ ಮೀಟರ್‌, ಮೀಟರ್‌, ಕಿಲೋ ಮೀಟರ್‌ ಇತ್

ಮದುವೆಗೆ ಒಡವೆ ತರಲೋದ ವರ ಶವವಾಗಿ ಪತ್ತೆ

ಮದುವೆಗೆ ಒಡವೆ ತರಲೆಂದು ಹೋಗಿದ್ದ ವರ ದಪ್ಪಗುಂಟೆಯ ರಮೇಶ(28) ಎಂಬಾತ ಕಳೆದ 15 ದಿನಗಳಿಂದ ಕಾಣೆಯಾಗಿದ್ದ. ಈತನ ಶವ ಸಮೀಪದ ಬೋರನಕಣಿವೆ ಜಲಾಶಯದಲ್ಲಿ ಸೋಮವಾರ ಸಂಜೆ ಪತ್ತೆಯಾಗಿದೆ. ಕಳೆದ ಫೆಬ್ರವರಿ 26ರಂದು ದಪ್ಪಗುಂಟೆಯ ರಮೇಶ ಹಾಗೂ ಸಾಲಕಟ್ಟೆ ಗ್ರಾಮದ ಚೈತ್ರರೊಂದಿಗೆ ವಿವಾಹ ನಿಶ್ಚಯವಾಗಿತ್ತು.ಹಿರಿಯೂರು ಪಟ್ಟಣದ ಬಂಗಾರದ ಅಂಗಡಿಯಲ್ಲಿ ಮದುವೆಯ ಒಡವೆಗಳನ್ನು ತಯಾರು ಮಾಡಲು ಹಾಕಿದ್ದ ಒಡವೆಗಳನ್ನು ಫೆ.24ರಂದು ತರಲೆಂದು ಗ್ರಾಮದಿಂದ ತೆರಳಿದ್ದ ವರ ರಮೇಶ ಮದುವೆಯ ದಿನ ಸಮೀಪಿಸಿದರೂ ಮನೆಗೆ ಬಾರದಿದ್ದನ್ನು ಕಂಡ ಸಂಬಂಧಿಕರು ರಮೇಶ ಕಾಣೆಯಾಗಿದ್ದಾನೆಂದು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮದುವೆ ನಿಂತು ಹೋಗಿತ್ತು. ಕಳೆದ ಸೋಮವಾರ ರಾತ್ರಿ ಬೋರನಕಣಿವೆ ಜಲಾಶಯದಲ್ಲಿ ರಮೇಶ ಶವವಾಗಿ ಪತ್ತೆಯಾಗಿದ್ದು,ಒಡವೆಯನ್ನು ತರಲೆಂದು ಹಣ ತೆಗೆದುಕೊಂಡು ಹೋಗಿದ್ದ ಈತನ್ನು ಯಾರೋ ಹಣಕ್ಕಾಗಿ ಕೊಲೆಮಾಡಿ ಕಾಕಿರಬಹುದೆಂದು ಶಂಕಿಸಲಾಗಿದೆ.ಶವದ ಮರಣೋತ್ತರಪರೀಕ್ಷೆ ನಡೆಸಲು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಾಬೂರಾಮ್,ಎ.ಎಸ್.ಪಿ ವಂಶಿಕೃಷ್ಣ,ಸಿಪಿಐ ಪ್ರಭಾಕರ್ ಹಾಗೂ ಪಿಎಸೈ ಪಾರ್ವತಮ್ಮ ಹಾಜರಿದ್ದರು.

ಈ ಬಾರಿ ಬಜೆಟ್ ನಲ್ಲಿ ತಾ.ಪಂ.ಗೆ ಹೆಚ್ಚಿನ ಅನುದಾನ ಕೊಟ್ಟು ಅಭಿವೃದ್ಧಿಗೆ ಸಹಕರಿಸಿ : ತಾ.ಪಂ.ಸದಸ್ಯ ನವೀನ್ ಮನವಿ

ಸುಮಾರು ಹತ್ತು ಸಾವಿರ ಮತದಾರರಿಂದ ಆಯ್ಕೆಯಾದ ತಾ.ಪಂ.ಸದಸ್ಯರಿಗೆ ಪ್ರಸ್ತುತ ಸರ್ಕಾರದಿಂದ ಬರುತ್ತಿರುವ ಕನಿಷ್ಠ ಅನುದಾನದಿಂದ ತಾಲ್ಲೂಕಿನಲ್ಲಿ ಹೆಚ್ಚಿನ ಅಭಿವೃದ್ದಿಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.ಈ ಬಾರಿಯಾದರೂ ಬಜೆಟ್ ನಲ್ಲಿ ಮಾನ್ಯಮುಖ್ಯಮಂತ್ರಿಗಳು ತಾಲ್ಲೂಕು ಪಂಚಾಯ್ತಿಗಳಿಗೆ ಹೆಚ್ಚಿನ ಅನುದಾನ ಕೊಡಿ ಎಂದು ತಾ.ಪಂ.ಸದಸ್ಯ ಕೆಂಕೆರೆ ನವೀನ್ ಮನವಿ ಪತ್ರ ಸಲ್ಲಿಸಿದ್ದಾರೆ. ತಾ.ಪಂ.ಸದಸ್ಯರಿಗೆ ನೀಡುವ 5ಲಕ್ಷ ಅನುದಾನದಲ್ಲಿ ಯಾವ ಕಾರ್ಯ ಮಾಡಬೇಕು ಎಂಬ ಯಕ್ಷಪಶ್ನೆಗಳು ಮೂಡುತ್ತಿವೆ.ಕಾರಣ ಸರ್ಕಾರದಿಂದ ಬರುವ ಈ ಅನುದಾನದಲ್ಲಿ ನಮ್ಮ ವ್ಯಾಪ್ತಿಗೆ ಬರುವ 8ರಿಂದ 10 ಹಳ್ಳಿಗಳ ಅಭಿವೃದ್ದಿ ಹೇಗೆ ಸಾಧ್ಯ.ಅಲ್ಲದೆ ಕುಡಿಯುವ ನೀರಿನ ವ್ಯವಸ್ಥೆ,ಶಾಲಾ ಕಟ್ಟಡ ನಿರ್ಮಾಣ,ಶೌಚಾಲಯ,ದಾರಿದೀಪದ ವ್ಯವಸ್ಥೆ,ಸ್ಮಶಾನ ಅಭಿವೃದ್ದಿ,ಸಾರ್ವಜನಿಕ ಗ್ರಂಥಾಲಯದ ನಿರ್ವಹಣೆ ಹಾಗೂ ಇನ್ನಿತರ ಗ್ರಾಮೀಣಾಭಿವೃದ್ದಿ ಕಾರ್ಯಗಳು ತಾ.ಪಂ.ಸದಸ್ಯರ ಮೇಲಿದೆ.ಅಲ್ಲದೆ ಕನಿಷ್ಠ ಅನುದಾನದಿಂದ ಬಡವರ ಕಷ್ಟಕ್ಕೂ ಸ್ಪಂದಿಸಲು ಸಾಧ್ಯವಾಗದೇ ಹಾಗೂ ಅಭಿವೃದ್ದಿ ಕಾರ್ಯಗಳನ್ನು ಪೂರೈಸಲು ಸಾಧ್ಯವಾಗದ ಶೋಚನೀಯ ಸ್ಥಿತಿಯಲ್ಲಿದ್ದೇವೆ. ಇದನ್ನು ಮನಗಂಡ ಮಾನ್ಯಮುಖ್ಯಮಂತ್ರಿಗಳು ಸೂಕ್ತ ಗಮನ ಹರಿಸಿ ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ತಾ.ಪಂ.ಸದಸ್ಯರು ಸಮಾಜಮುಖಿ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಮಾಡಿದರೆ ಪ್ರದೇಶಾಗಳ ಅಭಿವೃದ್ದಿ ಸಾಧ್ಯವಾಗುತ್ತದೆ. ಚಿಕ್

ಸನ್ಮಾನ

ಹುಳಿಯಾರು ಹೋಬಳಿ ಯಳನಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 25ವರ್ಷ ಸೇವೆ ಸಲ್ಲಿಸಿದ ಡಿ ಗೂಪ್ ನೌಕರ ಗೊವಿಂದಪ್ಪ ಅವರನ್ನು ಸನ್ಮಾನಿಸಲಾಯಿತು. ವಿ.ಎಸ್.ಎಸ್ ಅಧ್ಯಕ್ಷ ಕುಮಾರ್,ನಿರ್ದೇಶಕ ಶಿವಶಂಕರ್, ಗ್ರಾಮಸ್ಥರಾದ ಜಗದೀಶ್,ಪಂಚಾಕ್ಷರಿ,ಸಿಬ್ಬಂದಿವರ್ಗದ ಡಾ ಗಿರೀಶ್,ಜಯಣ್ಣ,ಸಹಾಯಕಿ ಮಧು ಇದ್ದಾರೆ.

ಮಾಧ್ಯಮದವರ ಮೇಲೆ ವಕೀಲರ ಹಲ್ಲೆ ಖಂಡಿಸಿದ ಹುಳಿಯಾರಿನ ವಿವಿಧ ಸಂಘಟನೆಗಳು

ಮಾಧ್ಯಮದವರ ಮೇಲೆ ವಕೀಲರ ಹಲ್ಲೆ ಖಂಡಿಸಿದ ಹುಳಿಯಾರಿನ ವಿವಿಧ ಸಂಘಟನೆಗಳು ಶುಕ್ರವಾರ ಪಟ್ಟಣದ ನಾಢಕಛೇರಿ ಆವರಣದಲ್ಲಿ ಮನವಿ ಪತ್ರ ಸಲ್ಲಿಸಿದರು. ಗ್ರಾ.ಪಂ.ಅಧ್ಯಕ್ಷ ಅನ್ಸರ್ ಆಲಿ,ಟಿಪ್ಪು ಮಹಾವೇದಿಕೆಯ ಉಪಾಧ್ಯಕ್ಷ ಸಯ್ಯದ್ ಅಮೀದ್,ಕಾರ್ಯದರ್ಶಿ ಅಮೀದ್ ಷರೀಪ್,ಇಮ್ರಾಜ್,ಅರುಣ್ ಇದ್ದಾರೆ. ಬೆಂಗಳೂರಿನ ಉಚ್ಚನ್ಯಾಯಾಲಯದ ಎದುರು ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ ಹಾಗೂ ಪೋಲೀಸ್ ಪೇದೆಯ ಸಾವಿಗೆ ಕಾರಣರಾದ ವಕೀಲರ ದುರ್ವರ್ತನೆಯನ್ನು ಹುಳಿಯಾರಿನ ವಿವಿಧ ಸಂಘಟನೆಗಳು ಖಂಡಿಸಿದ್ದಾರೆ. ಈ ಹಿನ್ನಲೆಯಲ್ಲಿ ದುರ್ವರ್ತನೆ ತೋರಿದ ವಕೀಲರಿಗೆ ತಕ್ಕಶಿಕ್ಷೆಯನ್ನು ನೀಡಬೇಕೆಂದು ಆಗ್ರಹಿಸಿ ಶುಕ್ರವಾರದಂದು ಹೋಬಳಿಯ ಟಿಪ್ಪು ಮಹಾವೇದಿಕೆ ಹಾಗೂ ಇತರ ಸಂಘಟನೆಯವರು ನಾಢಕಛೇರಿಯಲ್ಲಿ ಮನವಿಪತ್ರ ಸಲ್ಲಿಸಿದರು. ಈ ಸಂಧರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಅನ್ಸರ್ ಅಲಿ ಮಾತನಾಡಿ, ವಕೀಲರ ಇಂತಹ ವರ್ತನೆ ನ್ಯಾಯಾಂಗವೇ ತಲೆತಗ್ಗಿಸುವಂತೆ ಮಾಡಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಕಾಯುವಂತವರೇ ಈ ರೀತಿ ಮಾಡಿರುವುದು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಕಗ್ಗೊಲೆ ಮಾಡಿದಂತೆ. ವಕೀಲರು ತಮ್ಮ ತನವನ್ನೇ ಮರೆತು ಕಾಡು ಮೃಗಗಳಂತೆ ವರ್ತಿಸಿರುವುದು ನಾಚೀಕೆಗೇಡು ಎಂದರು. ಇದನ್ನು ಕಂಡವರು ವಕೀಲರ ಬಳಿ ಹೇಗೆ ಹೋಗುವುದು ಎಂಬಂತಾಗಿದೆ,ಇದಕ್ಕೆ ಸರ್ಕಾರ ಸೂಕ್ತ ಕ್ರಮವನ್ನು ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಿ ಎಂದರು. ಹೋಬಳಿ ಟಿಪ್ಪು ಮಹಾವೇದಿಕೆಯ ಉಪಾಧ್ಯಕ್ಷ ಸಯ್ಯದ್

ಪೋಟೊ ಕ್ಯಾಪ್ಷನ್

2012ನೇ ಸಾಲೀನ ಹಿರಿಯ ಸರ್,ಸಿ.ವಿ. ರಾಮನ್ ಪ್ರಶಸ್ತಿಯನ್ನು ಪಡೆದ ಹುಳಿಯಾರು ಹೋಬಳಿಯ ಕೆ.ಎಮ್,ಸೋನಿಯ ಮತ್ತು ಜೀವನ್ ಅವರನ್ನು ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ರಾಮಕೃಷ್ಣಪ್ಪ,ತರಬೇತಿ ಶಿಕ್ಷಕರಾದ ವಿದ್ಯಾಕುಂಚನೂರು,ಪ್ರವೀಣ್,ಅಮೂಲ್ಯ, ಇತರರು ಅಭಿನಂದಿಸಿದರು. ಹುಳಿಯಾರು ಸಮೀಪದ ನಂದಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಾಮದ ವಿಜಯ್ ಕುಮಾರ್ ಎಂಬುವರು ಉಚಿತವಾಗಿ ಧ್ವನಿವರ್ಧಕವನ್ನು ವಿತರಿಸಿದರು.ಜೆಡಿಎಸ್ ಮುಖಂಡ ನಂದಿಹಳ್ಳಿ ಶಿವಣ್ಣ,ಮುಖ್ಯಶಿಕ್ಷಕರು ಹಾಗೂ ಇತರರಿದ್ದಾರೆ.