ಇಲ್ಲಿನ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾನಿಲಯದಿಂದ ನೂತನವಾಗಿ ನಿರ್ಮಿಸಿರುವ ರಾಜಯೋಗ ಭವನದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ,ಮಾತನಾಡಿದರು.
ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಮಾನವನಿಗೆ ದಿನದ 24 ಗಂಟೆಗಳು ಕಡಿಮೆಯಾಗಿದ್ದು,ನೆಮ್ಮದಿಯಿಲ್ಲದ ಜೀವನ ನಡೆಸುತ್ತಿದ್ದಾನೆ.ಶಾಂತಿ,ನೆಮ್ಮದಿಗಾಗಿ ಪರಿತಪಿಸುತ್ತಿರುವವರಿಗೆ ಈ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾನಿಲಯ ಒಂದು ವರದಾನವಾಗಿದೆ.ಇಲ್ಲಿ ಶಿವನ ಹಾಗೂ ಶಿವತತ್ವದ ಆರಾಧನೆಯಿಂದ ಮನುಷ್ಯ ತನ್ನ ಜೀವನದಲ್ಲಿ ಯಾವರೀತಿ ಬದುಕಿ ಬಾಳಬೇಕು ಎಂಬುದನ್ನು ಕಲಿಯುತ್ತಾನೆ ಎಂದರು.ಇಲ್ಲಿ ನಡೆಯುವ ಧ್ಯಾನದ ಕಾರ್ಯಕ್ರಮಗಳಿಂದ ನಮ್ಮ ಮನಸ್ಸನ್ನು ಯಾವ ರೀತಿ ಹಿಡಿತದಲ್ಲಿಟ್ಟು ಕೊಳ್ಳಬಹುದೆಂಬುದನ್ನು ತಿಳಿಸುವ, ಶಿವನಿರುವ ಸಂಸ್ಥೆಯಾಗಿರುವ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾನಿಲಯ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನದಾಗಿ ಬೆಳೆಯುವ ಮೂಲಕ ಜನರಲ್ಲಿ ನೆಮ್ಮದಿಯನ್ನುಂಟುಮಾಡಲಿ ಎಂದು ಆಶಿಸಿದರು.
ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾನಿಲಯದ ಕಿರು ಪರಿಚಯದಲ್ಲಿ ರಶ್ಮಿ ಅವರು ಮಾತನಾಡಿ ಇಂದು ಮಾನವ ತನ್ನ ಜೀವನದಲ್ಲಿ ಏನೆನೆಲ್ಲಾ ಪಡೆದಿದ್ದರು ಸಹ ಜೀವನದಲ್ಲಿ ನೆಮ್ಮದಿಯಿಲ್ಲದೆ ತನ್ನ ಜೀವನದ ಸಂತೋಷದ ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳುತ್ತಿರುವ ಪ್ರಪಂಚದಲ್ಲಿ ಮನುಷ್ಯನ ಮನಸ್ಸಿಗೆ ನೆಮ್ಮದಿ,ಶಾಂತಿ ಪಡೆಯಬೇಕಾದರೆ,ಮೊದಲು ತನ್ನ ಮನಸ್ಸನ್ನು ಕೇಂದ್ರಿಕರಿಸಬೇಕಿದೆ. ಅದು ಓಂ ಶಾಂತಿ ಬೀಜಾಕ್ಷರ ಉಚ್ಚಾರಣೆಮಾಡಿದ್ದೆ ಆದರೆ ಸಾಧ್ಯವೆಂದು ತಿಳಿಸಿದರು.ಗೃಹಸ್ಥರಿಗೆ ಗೃಹಸ್ಥಾಶ್ರಮವಾಗಿ,ವೃದ್ದರಿಗೆ ವೃದ್ದಾಶ್ರಮವಾಗಿ,ವೈದ್ಯರಿಗೆ ವೈದ್ಯಾಲಯವಾಗಿ,ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಬಗ್ಗೆ, ಪರಸ್ಪರ ಪ್ರೀತಿ,ಸ್ನೇಹ,ಸಹಬಾಳ್ವೆಯಿಂದ ಹೇಗೆ ಬಾಳ ಬೇಕೆಂದು ತಿಳಿಸುತ್ತದೆ. ಮನುಷ್ಯ ಜೀವನದಲ್ಲಿನ ಎಡರು,ತೊಡರುಗಳನ್ನು ಹೇಗೆ ನಿವಾರಿಸಿ ಕೊಳ್ಳಬೇಕು,ಮನುಅಷ್ಯ ತನ್ನ ಮನಸ್ಸನ್ನು ಯಾಬರೀತಿ,ಏಕೆ ತನ್ನ ಹತೋಟಿಯಲ್ಲಿಟ್ಟುಕೊಳ್ಳಬೇಕು ಎಂಬ ಹತ್ತು ಹಲವು ಸಾಮಾಜಿಕ ವಿಚಾರಗಳ ಬೆಳಕನ್ನು ಚೆಲ್ಲುವುದೇ ಈ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾನಿಲಯ ಗುರಿಯಾಗಿದೆ.
ಇದರ ವಿಚಾರಗಳನ್ನು,ವಿಚಾರಧಾರೆಯನ್ನು ಕಂಡ ವಿಶ್ವಸಂಸ್ಥೆ ತನ್ನ ಅಂಗಸ್ಥೆಗಳಲ್ಲಿ ಒಂದಾಗಿಸಿಕೊಂಡಿದೆ.ಅಲ್ಲದೆ ಇಲ್ಲಿ ಯಾವುದೇ ಜಾತಿ,ಮತ,ಧರ್ಮವೆಂಬುದಿಲ್ಲದೆ ಇಲ್ಲಿ ಯಾರುಬೇಕಾದರು ಶಾಂತಿ,ನೆಮ್ಮದಿಯ ಮಾರ್ಗಗಳನ್ನು,ಶಿವತತ್ವ ವಿಚಾರಗಳನ್ನು ಗ್ರಹಿಸಬೇಬಹುದು.ಮನುಷ್ಯ ಶಾಂತಿ,ಮನಸ್ಸಿನ ಏಕಾಗ್ರತೆ ಪಡೆಯುವ ಮೂಲಕ ಆ ಶಿವನ್ನು ಕಾಣುವಂತೆ ಮಾಡುವುದಾಗಿದೆ ಎಂದರು.
ಸಮಾರಂಭದಲ್ಲಿ ಹುಬ್ಬಳ್ಳಿ ವಲಯದ ಈಶ್ವರೀ ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ ಬಿ.ಕೆ.ಬಸವರಾಜರಾಜಋಷಿಯವರು ಆಶೀರ್ವಚನ ನೀಡಿದರು. ವಾಣಿಜ್ಯೋದ್ಯಮಿ ಟಿ.ಆರ್.ಶ್ರೀನಿವಾಸಶ್ರೇಷ್ಠಿ ಅಧ್ಯಕ್ಷತೆ ವಹಿಸಿದ್ದು, ಗುಬ್ಬಿಯ ಚನ್ನಬಸವೇಶ್ವರ ಪ್ರಭುಸ್ವಾಮಿಗಳು,ಗ್ರಾ.ಪಂ.ಅಧ್ಯಕ್ಷ ಅನ್ಸರ್ ಅಲಿ,ಕಲ್ಪತರು ಬ್ರಿಕ್ಸ್ ನ ಮಾಲೀಕ ಟಿ.ಎಸ್.ರಂಗನಾಥ ಶ್ರೇಷ್ರ್ಠಿ, ತಾ.ಪಂ.ಉಪಾಧ್ಯಕ್ಷೆ ಬೀಬೀಫಾತೀಮ, ಸದಸ್ಯ ಕೆಂಕೆರೆ ನವೀನ್,ಬ್ಯಾಂಕ್ ಮರುಳಯ್ಯ,ಮಲ್ಲಿಕಾರ್ಜುನಯ್ಯ,ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾನಿಲಯದ ಬಿ.ಕೆ.ಗೀತಾ, ವಿಜಯಾಜಿ, ಬಿ.ಕೆ.ಶೋಭಾ,ಸುಹಾಸಿನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಅಲ್ಲದೆ ವಿಧ್ಯಾವಾರಿಧಿ ಶಾಲೆ ಹಾಗೂ ಜ್ಞಾನ ಜ್ಯೋತಿ ಶಾಲೆಯ ಮಕ್ಕಳು ನಡೆಸಿಕೊಟ್ಟ ನೃತ್ಯಗಳು ಸಮಾರಂಭದ ಕಳೆ ಹೆಚ್ಚುವಂತೆ ಮಾಡಿದ್ದವು.ಉದ್ಘಾಟನೆಗೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ನೂರಾರು ಅಕ್ಕಂದಿರು ಪೂರ್ಣಕುಂಬ ಹಾಗೂ ಶಿವಲಿಂಗದ ಮೆರವಣಿಗೆ ನಡೆಸಿದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ