ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪಂಚಾಯ್ತಿಯಲ್ಲಿ ಆಪರೇಟರ್ ಹುದ್ದೆ ನೀಡದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವೆ

ಪಂಚಾಯ್ತಿಯಲ್ಲಿ ಆಪರೇಟರ್ ಹುದ್ದೆ ನೀಡದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವೆ ---------------------------------------- ಕಳೆದ ಮೂರು ವರ್ಷಗಳಿಂದಲೂ ಉದ್ಯೋಗಕ್ಕಾಗಿ ಅಲೆದ ಲಕ್ಷ್ಮೀಯ ಗೋಳಾಟ -------------------------------------- ಜಿಲ್ಲಾ ಉಸ್ತುವಾರಿ ಸಚಿವರ ಆದೇಶಕ್ಕೂ ಕಿಮ್ಮತ್ತು ನೀಡದ ಅಧಿಕಾರಿಗಳು ---------------------------------------- ಹುಳಿಯಾರು: ಹುಳಿಯಾರು ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆಯನ್ನು ಕಳೆದ ಮೂರು ವರ್ಷದ ಹಿಂದೆ ನಾನು ನಿರ್ವಹಿಸಿದ್ದು ನನ್ನನ್ನು ವಿನಾಕಾರಣ ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದು ಆ ಹುದ್ದೆಯನ್ನು ನನಗೆ ನೀಡಲೇಬೇಕು.ಇಲ್ಲದಿದ್ದಲ್ಲಿ ಇಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಲಕ್ಷ್ಮೀ ಎಂಬಾಕೆ ತನ್ನ ಅಳಲು ತೋಡಿಕೊಂಡು ಎಲ್ಲರೆದುರಿಗೂ ಕಣ್ಣೀರಿಟ್ಟ ಪ್ರಸಂಗ ಇಂದಿನ ಗ್ರಾಮಸಭೆಯಲ್ಲಿ ಜರುಗಿತು. ಹುಳಿಯಾರು ಪಂಚಾಯ್ತಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಉದ್ಯೊಗಕ್ಕಾಗಿ ಒತ್ತಾಯಿಸಿದ ಲಕ್ಷ್ಮೀ.                   ಹುಳಿಯಾರು ಗ್ರಾಮ ಪಂಚಾಯಿತಿಯಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಬಂದಿರುವ ಒಂದು ಕೋಟಿರೂ ಹಣದ ಕ್ರಿಯಾ ಯೋಜನೆ ತಯಾರಿಸುವ ಬಗ್ಗೆ ಕರೆಯಲಾಗಿದ್ದ ಗ್ರಾಮಸಭೆಯಲ್ಲಿ ತನ್ನ ತಾಯಿಯೊಂದಿಗೆ ಆಗಮಿಸಿದ್ದ ಈಕೆ ಜಿಲ್ಲಾ ಪಂಚಾಯಿತಿ ಸದಸ್ಯ,ತಾಲೂಕು ಪಂಚಾಯಿತಿ ಸದಸ್ಯ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರೊಂದಿಗೆ ತನ್ನ ಸಮ

ಸರ್ದಾರ್ ಪಟೇಲರ ಜಯಂತಿ: ಹುಳಿಯಾರಿನಲ್ಲಿ ಏಕತೆಗಾಗಿ ಓಟ

ಹುಳಿಯಾರು :ಭಾರತದ ಉಕ್ಕಿನ ಮನುಷ್ಯ ಮತ್ತು ರಾಷ್ಟ್ರದ ಅಖಂಡತೆಯ ಪ್ರವರ್ತಕ ಸರದಾರ್ ವಲ್ಲಭಭಾಯಿ ಪಟೇಲ್ ಅವರ ನೂರಾ ನಲವತ್ತೆರಡನೇ ಜನ್ಮ ದಿನೋತ್ಸವದ ಪ್ರಯುಕ್ತ ಹುಳಿಯಾರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏಕತೆಗಾಗಿ ಓಟವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.          ಕಾಲೇಜು ಆವರಣದಿಂದ ಪ್ರಾರಂಭವಾದ ಏಕತಾ ಓಟ ಹುಳಿಯಾರು ಪಟ್ಟಣ ತಲುಪಿ ರಾಮಾಹಾಲ್ ಮುಂಭಾಗದಿಂದ ಬಸ್ ನಿಲ್ದಾಣ ತಲುಪಿ ಮುಕ್ತಾಯಗೊಂಡಿತು.ಸುಮಾರು ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓಟದಲ್ಲಿ ಪಾಲ್ಗೊಂಡಿದ್ದರು.            ಇದಕ್ಕೂ ಮುನ್ನಾ ನಡೆದ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಭಾರತೀಯ ಜನತಾ ಪಕ್ಷದ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಡಾ.ಬಸವರಾಜು ಏಕತೆಗಾಗಿ ಓಟದಲ್ಲಿ ಪಾಲ್ಗೊಳ್ಳುವ ಮೂಲಕ ಮೂಲಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಸ್ಮರಿಸೋಣ ಮತ್ತು ದೇಶಾದ್ಯಂತ ಸಾಮರಸ್ಯ ಭಾತೃತ್ವ ಭಾವನೆಯನ್ನು ಪಸರಿಸೋಣ ಎಂದು ಕರೆನೀಡಿದರು.ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಎಲ್ಲಾ ಜನರನ್ನು, ಹಳ್ಳಿ ಹಳ್ಳಿಗಳನ್ನು, ದೇಶವನ್ನು ಒಗ್ಗೂಡಿಸುವುದೇ ಈ ಓಟದ ಉದ್ದೇಶವಾಗಿದ್ದು ಈ ಓಟವು ಎಲ್ಲಾ ಭಾರತೀಯರ ಕನಸನ್ನು, ಬಯಕೆಯನ್ನು ಈಡೇರಿಸುವ ಪ್ರಯತ್ನವಾಗಿದೆ ಎಂದರು. ಹುಳಿಯಾರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಏಕತೆಗಾಗಿ ಓಟದ ಸಮಾರಂಭದಲ್ಲಿ ಡಾ.ಬಸವರಾಜು ಮಾತನಾಡಿದರು.         ಚೀನಿ ಉತ್

ಹಬ್ಬದ ಎಫೆಕ್ಟ್; ಬೆಂಗಳೂರು ಬಸ್ ಗಳು ರಶೋ.......ರಶ್

ಹುಳಿಯಾರು ; ಪಟ್ಟಣದ ಬಸ್ ನಿಲ್ದಾಣದಲ್ಲಿ ಭಾನುವಾರ ಮಧ್ಯಾಹ್ನದಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಂದ ಜನಜಂಗುಳಿಯಾಗಿ ಬೆಂಗಳೂರಿಗೆ ತೆರಳುವ ಯಾವೊಂದು ಬಸ್ ಬಂದರೂ ಸಾಕು ಹರಸಾಹಸ ಮಾಡಿಯಾದರು ಬಸ್ ನೊಳಗೆ ಪ್ರವೇಶ ಮಾಡೀಯೇ ತೀರುವ ಪರಿಸ್ಥಿತಿ ಪ್ರಯಾಣಿಕರಲ್ಲಿ ಉಂಟಾಗಿತ್ತು.ದೀಪಾವಳಿ ಹಬ್ಬದ ಸಾಲು ರಜಾ ದಿನ ಮುಗಿಸಿ ವಾಪಸ್ ತೆರಳಲು ಹುಳಿಯಾರು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಜನರಿಗೆ ಬರುತ್ತಿದ್ದ ಬಸ್ಸುಗಳು ಭರ್ತಿಯಾಗಿ ಬರುತ್ತಿದ್ದರಿಂದ ಬಸ್ ಹತ್ತಲು ಹೈರಾಣಾಗುವ ಸ್ಥಿತಿ ಉಂಟಾಗಿತ್ತು. ಬೆಂಗಳೂರು ಕಡೆ ಹೋಗಲು ಯಾವ ಬಸ್ ಬಂದರೂ ಸಹ ಅವೆಲ್ಲಾ ಹೊಸದುರ್ಗದಿಂದಲೇ ಭರ್ತಿಯಾಗಿ ಬರುತ್ತಿದ್ದರಿಂದ ಕಾಲಿಡುವುದಕ್ಕು ಆಸ್ಪದವಿರಲಿಲ್ಲ. ಹುಳಿಯಾರು ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಸಾಕಷ್ಟು ಮಂದಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವವರೇ ಆಗಿದ್ದು ದೀಪಾವಳಿ ಹಬ್ಬಕ್ಕೆಂದು ತಂತಮ್ಮ ಊರುಗಳಿಗೆ ಬಂದಿದ್ದರು. ಹಬ್ಬದ ರಜೆ ಮುಗಿಸಿ ಸೋಮವಾರದಂದು ವಾಪಸ್ಸ್ ಕೆಲಸಕ್ಕೆ ಹಾಜರಾಗಲು ಎಲ್ಲರೂ ಮಧ್ಯಾಹ್ನದಿಂದಲೇ ಬಂದಿದ್ದರಿಂದ ಬಸ್ ನಿಲ್ದಾಣ ಗಿಜುಗುಟ್ಟುತ್ತಿತ್ತು. ಎಲ್ಲಾ ಕೆಎಸಾರ್ಟಿಸಿ ಬಸ್ಸುಗಳು ಹೊಸದುರ್ಗದಿಂದ ಬರುತ್ತಿದ್ದವಾದ್ದರಿಂದ ಹುಳಿಯಾರಿಗೆ ಬರುವಷ್ಟರಲ್ಲೇ ಬಸ್ ಸೀಟ್ ಗಳೆಲ್ಲಾ ತುಂಬಿದ್ದು ಪ್ರಯಾಣಿಕರು ಪರದಾಡುವಂತಾಗಿತ್ತು. ಬರುತ್ತಿದ್ದ ಬಸ್ ಗೆ ಒಮ್ಮೆಲೆ ಎಲ್ಲಾ ಪ್ರಯಾಣಿಕರು ನುಗ್ಗುತ್ತಿದ್ದರಿಂದ ಬಸ್ ಹತ್ತುವುದೆ

ಹುಳಿಯಾರಿನಲ್ಲಿ ಯೋಗಾಸನ ತರಬೇತಿ ಶಿಬಿರಕ್ಕೆ ಚಾಲನೆ

ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವ ಆದ್ಯಾತ್ಮಿಕ ವಿದ್ಯೆಯೇ ಯೋಗ ಹುಳಿಯಾರು :ಆಧುನಿಕ ಜೀವನ ಶೈಲಿಯಿಂದಾಗಿ ಎದುರಾಗುತ್ತಿರುವ ಬಹುತೇಕ ಆರೋಗ್ಯದ ಸಮಸ್ಯೆಗಳಿಗೆ ಯೋಗ ಮದ್ದಾಗಿದ್ದು ಇದು ನಮ್ಮ ಭಾರತೀಯ ಸಂಸ್ಕೃತಿಯ ಹೆಮ್ಮೆಯ ಪ್ರತೀಕ ಎಂದು ಜಿಗಣಿಯ ವಿವೇಕಾನಂದ ಯೋಗ ಕೇಂದ್ರದ ಯೋಗಗುರು ರಾಮಲಿಂಗಂ ಹೇಳಿದರು. ಪಟ್ಟಣದ ಶ್ರೀ ಮಾತಾ ಛಾರಿಟಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿರುವ ಧ್ಯಾನಮಂದಿರದಲ್ಲಿ ಉಚಿತ ಯೋಗಾಸನ ತರಬೇರತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಯೋಗದ ಮಹತ್ವ ಹಾಗೂ ಸಮತೋಲನ ಆಹಾರದ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ ಅವರು ನಾವು ಪ್ರತಿದಿನ ಸೇವಿಸುವ ಆಹಾರ ಹಾಗೂ ಜೀವನ ಕ್ರಮದಿಂದ ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆ ಹೆಚ್ಚಾಗುತ್ತಿದ್ದು ಜನರ ಆರೋಗ್ಯ ಹದಗೆಡುವಂತಾಗಿದೆ. ಉತ್ತಮ ಆರೋಗ್ಯಕ್ಕೆ ಯೋಗ ಸಹಕಾರಿಯಾಗಿದ್ದು, ಆಸನಗಳಿಂದ ಜೀವನಕ್ರಮ ಸರಳವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಯೋಗ ಎಂದರೆ ಕೇವಲ ದೈಹಿಕ ಕಸರತ್ತಲ್ಲ.ಸರ್ಕಸ್ಸು ಅಲ್ಲ.ಅದೊಂದು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವ ಆಧ್ಯಾತ್ಮಿಕ ವಿದ್ಯೆ.ವಯಸ್ಸಿನ ಅಂತರವಿಲ್ಲದೆ ಪ್ರತಿಯೊಬ್ಬರೂ ಯೋಗ ಮಾಡಬಹುದಿದ್ದು ಯೋಗ ಮಾಡುವುದಕ್ಕೂ ಯೋಗ ಬೇಕು ಎಂದರು. ಈ ಸಂದರ್ಭದಲ್ಲಿ ಶ್ರೀ ಮಾತಾ ಛಾರಿಟಬಲ್ ಟ್ರಸ್ಟ್ ಅಧ್ಯಕ್ಷ ಗಂಗಾಧರ್,ಜಿಲ್ಲಾಪಂಚಾಯ್ತಿ ಸದಸ್ಯ ವೈ.ಸಿ.ಸಿದ್ಧರಾಮಯ್ಯ,ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಎಂ.ಎಸ್.ನಟರಾಜು,ಹುಳಿಯಾರ

೫೦ ಮನೆಗಳ ಈ ಗ್ರಾಮದಲ್ಲಿ ಬಯಲು ಬಹಿರ್ದೆಸೆ ಜೀವಂತ

ಸರ್ಕಾರದ ಶೌಚಾಲಯದ ಆಂದೋಲನ ಈ ಗ್ರಾಮಕ್ಕೆ ತಲುಪಿಲ್ಲ. ೫೦ ಮನೆಗಳ ಈ ಗ್ರಾಮದಲ್ಲಿ ಬಯಲು ಬಹಿರ್ದೆಸೆ ಜೀವಂತ ವರದಿ: ಡಿ.ಆರ್.ನರೇಂದ್ರಬಾಬು ಹುಳಿಯಾರು: ಬಯಲು ಬಹಿರ್ದೆಸೆ ಮುಕ್ತ ಆರೋಗ್ಯವಂತ ಕರ್ನಾಟಕ ಮಾಡಲು ಸರ್ಕಾರ ಶೌಚಾಲಯದ ಆಂದೋಲನವನ್ನೇ ಹುಟ್ಟು ಹಾಕಿದರೂ ಕೂಡ ಇದರ ಅರಿವೇ ಇಲ್ಲದಂತೆ ಬಯಲಿನಲ್ಲಿಯೇ ಬಹಿರ್ದೆಸೆಗೆ ಗುವ ಗ್ರಾಮ ಇಂದಿಗೂ ಇರುವುದು ಯೋಜನೆಯ ಸಫಲತೆಯನ್ನು ಪ್ರಶ್ನಿಸುವಂತಾಗಿದೆ. ಶೌಚಾಲಯವಿಲ್ಲದ ಹುಳಿಯಾರಿನ ಕೂಗಳತೆಯಲ್ಲಿರುವ ಸೈಯದ್ ಸಾಬ್ ಪಾಳ್ಯದ ನೋಟ.         ಗ್ರಾಮೀಣ ಭಾಗದಲ್ಲಿ ಹೆಚ್ಚು ಕಡಿಮೆ ಎಲ್ಲರೂ ಶೌಚಾಲಯ ಹೊಂದಿ ಸಂಪೂರ್ಣ ಬಯಲು ಮುಕ್ತ ಕರ್ನಾಟಕ ಎನ್ನುವ ಹೊತ್ತಿನಲ್ಲೇ,ಸರ್ಕಾರದ ನೈರ್ಮಲ್ಯೀಕರಣ ಯೋಜನೆಯ ಫಲ ಇವರಿಗೆ ದೊರೆಯದ ಕಾರಣ ಶೌಚಾಲಯ ಹೊಂದಿರದ ಈ ಗ್ರಾಮ ಇದೀಗ ಬೆಳಕಿಗೆ ಬಂದಿದೆ.          ಹೌದು, ಹುಳಿಯಾರಿನ ಕೂಗಳತೆಯಲ್ಲಿರುವ ಸೈಯದ್ ಸಾಬ್ ಪಾಳ್ಯದಲ್ಲಿ ಐವತ್ತು ಕುಟುಂಬಗಳಿದ್ದು,ಶೌಚಾಲಯದ ಬಗ್ಗೆ ಅರಿವಿದ್ದರೂ ಕೂಡ ಅನುದಾನ ಬರುವುದಿಲ್ಲ,ಬಂದರೂ ತಡವಾಗುತ್ತದೆ ಎಂಬ ನೆಪವೊಡ್ಡಿ ಶೌಚಾಲಯದ ಉಸಾಬರಿಯೇ ಬೇಡವೆಂದು ಸುಮ್ಮನಾಗಿದ್ದಾರೆ. ಶೌಚಾಲಯದ ಯೋಜನೆಗಳ ಬಗ್ಗೆ ಹಾಗೂ ಕೊಡಮಾಡುವ ಅನುದಾನದ ಬಗ್ಗೆ ಗ್ರಾಮಸ್ಥರನ್ನು ಭೇಟಿ ಮಾಡಿ ಅರಿವು ಮೂಡಿಸುತ್ತಿರುವ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೆಚ್.ಎನ್.ಕುಮಾರ್.      ಈ ಊರಿನಲ್ಲಿ ಇಂದಿಗೂ ಇರುವುದು ಒ

ರಂಗಭೂಮಿಯ ಮುಖಾಂತರ ನಾಡು ನುಡಿ ಭಾಷೆ ಸಂಸ್ಕೃತಿ ಉಳಿಸುವ ಕೆಲಸವಾಗಬೇಕು

ಹುಳಿಯಾರಿನ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಮೀಪದ ಕೋಡಿಪಾಳ್ಯದ ಸೇವಾಲಾಲ್ ಸಾಂಸ್ಕೃತಿಕ ಸದನದಲ್ಲಿ ಶ್ರೀಮಾತ ನವರಾತ್ರಿ ಸಾಂಸ್ಕೃತಿಕ ಉತ್ಸವಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಐ.ಎಂ.ವಿಠ್ಠಲಮೂರ್ತಿ ಚಾಲನೆ ನೀಡಿದರು.ಖ್ಯಾತ ರಂಗಭೂಮಿ ಕಲಾವಿದ ಮಾಸ್ಟರ್ ಹಿರಣ್ಣಯ್ಯ,ರಂಗಕರ್ಮಿ ಶ್ರೀನಿವಾಸ.ಜಿ.ಕಪ್ಪಣ್ಣ, ವರ್ತಕ ಕೆ.ಬಿ.ಮರುಳ ಸಿದ್ದಪ್ಪ,ಬಾಬು ಹಿರಣ್ಣಯ್ಯ ಇದ್ದರು.  ಹುಳಿಯಾರು: ರಂಗಭೂಮಿ ಉಳಿಯಬೇಕು, ರಂಗಭೂಮಿಯ ಮುಖಾಂತರ ನಾಡು-ನುಡಿ- ಭಾಷೆ- ಸಂಸ್ಕೃತಿ ಉಳಿಸುವ ಕೆಲಸವಾಗಬೇಕು. ಅದಕ್ಕೂ ಮೀರಿ ಸ್ಥಳೀಯರ ರಂಗ ಕಲೆ ಗುರುತಿಸುವ ಕೆಲಸವನ್ನು ಮಾಡುವ ನಿಟ್ಟಿನಲ್ಲಿ ಈ ರಂಗಭೂಮಿ ಬಳಕೆಯಾಗಬೇಕು ಎಂದು ಖ್ಯಾತ ರಂಗಭೂಮಿ ಹಾಗೂ ಕಿರುತೆರೆ ಕಲಾವಿದ ಬಾಬು ಹಿರಣ್ಣಯ್ಯ ತಿಳಿಸಿದರು.     ಹುಳಿಯಾರಿನ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಮೀಪದ ಕೋಡಿಪಾಳ್ಯದ ಸೇವಾಲಾಲ್ ಸಾಂಸ್ಕೃತಿಕ ಸದನದಲ್ಲಿ ಗುರುವಾರ ಸಂಜೆ ನಡೆದ ಶ್ರೀಮಾತ ನವರಾತ್ರಿ ಸಾಂಸ್ಕೃತಿಕ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವ್ಯಕ್ತಿ ಬೆಳೆದಂತೆಲ್ಲ ಸಾಧಕನಾಗಬೇಕು, ಸಮಾಜಮುಖಿಯಾಗಿ ಬದುಕಬೇಕು ಎಂದರು.                 ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಅತ್ಯುತ್ತಮವಾದ ರಂಗಮಂದಿರವನ್ನು ಯಾವುದೇ ಫಲಾಪಲ ಅಪೇಕ್ಷೆಯಿಲ್ಲದೆ ಗ್ರಾಮಾಂತರ ಪ್ರದೇಶದಲ್ಲಿ ನಿರ್ಮಿಸಿರುವ ಗಂಗಾಧರ್ ಅವರ ಕಾರ್ಯ ಶ್ಲಾಘನೀಯ.ತನಗಾಗಿ ಏನನ್ನೂ ಬಯಸದೆ ಇಲ್ಲಿನ ಗ್ರಾಮದ ಸಂಸ್ಕೃ

ಜಾನಪದ ನಮ್ಮ ಬದುಕಿನ,ಸಮುದಾಯದ ಸಂಸ್ಕೃತಿ :ಕಪ್ಪಣ್ಣ

ಹುಳಿಯಾರಿನಲ್ಲಿ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ೯ ದಿನಗಳ ಕಾಲ "ಕನ್ನಡದ ಅಂತರಾಷ್ಟ್ರೀಯ ಕಲಾವಿದರಿಂದ ರಾಷ್ಟ್ರೀಯ ಉತ್ಸವ" ಹುಳಿಯಾರು: ಜಾನಪದ ನಮ್ಮ ಬದುಕಿನ,ಸಮುದಾಯದ ಸಂಸ್ಕೃತಿಯಾಗಿದ್ದು ಇದನ್ನು ಉಳಿಸಿ ಬೆಳಸಿ ಮುಂದಿನ ತಲೆಮಾರುಗಳಿಗೆ ಜೀವಂತವಾಗಿರಿಸುವ ನಿಟ್ಟಿನಲ್ಲಿ ಸಂಘಸಂಸ್ಥೆಗಳು ಸಮಾಜಮುಖಿಯಾಗಿ ಚಿಂತಿಸಿ ,ಜವಬ್ದಾರಿ ಹೊರಬೇಕಿದೆ ಎಂದು ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ತಿಳಿಸಿದರು.            ಹುಳಿಯಾರಿನ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ೯ ದಿನಗಳ ಕಾಲ ಆಯೋಜಿಸಲಾಗಿರುವ ಶ್ರೀ ಮಾತಾ ನವರಾತ್ರಿ ಸಾಂಸ್ಕೃತಿಕ ಉತ್ಸವದ ಆಹ್ವಾನಪತ್ರಿಕೆಯನ್ನು ಸೇವಾಲಾಲ್ ಸಾಂಸ್ಕೃತಿಕ ಸದನದಲ್ಲಿ ಭಾನುವಾರ ಬಿಡುಗಡೆ ಮಾಡಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಅವರು ಜಾನಪದ ನಮ್ಮ ಮಣ್ಣಿನ ಸಂಸ್ಕೃತಿಯಾಗಿದ್ದು, ಜಾನಪದವಿಲ್ಲದ ಕಲೆಯೇ ಇಲ್ಲ.೧೨ನೇ ಶತಮಾನದ ವಚನಗಳು ಆಗಲೇ ಇಂಗ್ಲೀಷಿಗೆ ಹೋಗಿದ್ದಲ್ಲಿ ವಚನಕಾರರು ವಿಶ್ವದ ಪ್ರಸಿದ್ಧ ವ್ಯಕ್ತಿಗಳಾಗುತ್ತಿದ್ದರು.ನಮ್ಮ ನಾಡಿನ ಮೂಲಕಲೆಯಾದ ಜಾನಪದ ಸಾಹಿತ್ಯ,ದಾಸಸಾಹಿತ್ಯ,ವಚನ ಸಾಹಿತ್ಯದ ಬಗ್ಗೆ ಅನಾದರ ತಳೆದಿರುವುದರಿಂದ ಅವುಗಳಿಗೆ ಸಿಗಬೇಕಾದ ಮನ್ನಣೆ ದೊರೆಯದೆ ಅವು ನಿರ್ಲಕ್ಷ್ಯಕೊಳ್ಳಪಟ್ಟಿವೆ ಎಂದು ಅಭಿಪ್ರಾಯಪಟ್ಟರು.          ನಾಡಿನ ವೈಶಿಷ್ಟಪೂರ್ಣ ಜಾನಪದ ಕಲೆಗಳಕಲೆಗಳಿಗೆ ಜೀವ ತುಂಬುವ ನಿಟ್ಟಿನಲ್ಲಿ ಹಾಗೂ ಜಾನಪದ ಕಲಾವಿದರನ್ನು

ಹುಳಿಯಾರಿನಲ್ಲಿ ಸಂಭ್ರಮದ ಗಣಪತಿ ವಿಸರ್ಜನೋತ್ಸವ

ಹುಳಿಯಾರು ಪಟ್ಟಣದ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ 67ನೇ ವರ್ಷದ ಅಂಗವಾಗಿ ವಿಶೇಷವಾಗಿ ಪ್ರತಿಷ್ಠಾಪಿಸಲಾಗಿದ್ದ ಪರಿಸರ ಗಣಪತಿಯನ್ನು ಶುಕ್ರವಾರ ರಾತ್ರಿ ರಾಜಬೀದಿಯಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ನಂತರ ಶನಿವಾರದಂದು ವಿಸರ್ಜಿಸಲಾಯಿತು. ಹುಳಿಯಾರಿನ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಪರಿಸರ ಗಣಪತಿಯನ್ನು ಕೇಶವಾಪುರದ ಕೆರೆಯ ದೊಡ್ಡಗುಂಡಿಯಲ್ಲಿ ಶನಿವಾರದಂದು ವಿಸರ್ಜಿಸಲಾಯಿತು. ಸ್ವಾಮಿಯ ಗಂಗಾಪ್ರವೇಶದ ಅಂಗವಾಗಿ ಕಳೆದ ಮೂರು ದಿನಗಳಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬುಧವಾರದಂದು ಹೋಮಹವನಾದಿಗಳನ್ನು ನಡೆದು ಅನ್ನಸಂತರ್ಪಣೆ ಮಾಡಿದರೆ ಗುರುವಾರ ಮತ್ತು ಶುಕ್ತವಾರದಂದು ಸಾಂಸ್ಕೃತಿಕಕಾರ್ಯಕ್ರಮ,ಪ್ರತಿಭಾ ಪುರಸ್ಕಾರ ಹಾಗೂ ಸಂಜೆ ಉತ್ಸವ ,ಮೆರವಣಿಗೆ ಏರ್ಪಡಿಸಲಾಗಿತ್ತು. ದೇವಾಲಯದಿಂದ ಆರಂಭಗೊಂಡ ಸ್ವಾಮಿಯ ಉತ್ಸವ ಪಟ್ಟಣದ ಗಾಂಧಿಪೇಟೆ,ಬಸ್ ನಿಲ್ದಾಣ, ರಾಂಗೋಪಾಲ್ ಸರ್ಕಲ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗಿತು, ಮೆರವಣಿಗೆ ಸಂದರ್ಭದಲ್ಲಿ ಚಿಟ್ಟಿಮೇಳ, ನಾದಸ್ವರ,ನಾಸಿಕ್ ಡೋಲು,ಲಾರಿ ಡ್ಯಾನ್ಸ್ ಉತ್ಸವಕ್ಕೆ ಮೆರಗು ನೀಡಿದವು. ಬೀದಿಗಳಲ್ಲಿ ಮೆರವಣಿಗೆ ಸಾಗಿದ ಸಂದರ್ಭದಲ್ಲಿ ಭಕ್ತರು ರಸ್ತೆಯನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಸ್ವಾಮಿಗೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮೆರವಣಿಗೆ ನಂತರ ಬಸ್ ನಿಲ್ದಾಣದಲ್ಲಿ ಕೆಲ ಕಾಲ ಸಾರ್ವಜನಿಕರ

ಹುಳಿಯಾರು:ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಖಂಡನೆ

ವಿಚಾರವಾದಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದು ಅತ್ಯಂತ ಆಘಾತಕಾರಿ ಮತ್ತು ಖಂಡನಾರ್ಹವಾದುದು ಎಂದು ಸಾಹಿತಿ ಹಾಗೂ ಬಿಎಂಎಸ್ ಕಾಲೇಜಿನ ಪ್ರಾಂಶುಪಾಲ ಪ್ರೋ ಬಿಳಿಗೆರೆ ಕೃಷ್ಣಮೂರ್ತಿ ಆತಂಕ ವ್ಯಕ್ತಪಡಿಸಿದರು. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಹುಳಿಯಾರು ಹೋಬಳಿ ಪತ್ರಕರ್ತರ ಸಂಘ ಹಾಗೂ ಚಿಂತನಶೀಲರಿಂದ ನಡೆದ ಸಾಂಕೇತಿಕ ಪ್ರತಿಭಟನೆ.         ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಹುಳಿಯಾರು ಹೋಬಳಿ ಪತ್ರಕರ್ತರ ಸಂಘ ಹಾಗೂ ಚಿಂತನಶೀಲರಿಂದ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಗಾಂಧೀಜಿಯ ಜಾತ್ಯಾತೀತತೆ, ಬಸವಣ್ಣನವರ ಸಮಾನತೆಯ ಸಮಾಜ , ಅಂಬೇಡ್ಕರ್ ಸಮಾನತೆಯ ತಳಹದಿಯಲ್ಲಿ ತಮ್ಮ ವಿಚಾರಧಾರೆಗಳನ್ನು ಮಂಡಿಸುತ್ತಿದ್ದ ಗೌರಿಯವರ ಹತ್ಯೆ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ.          ತಮ್ಮ ಪ್ರಗತಿಪರ ವಿಚಾರಧಾರೆ ಹಾಗೂ ಚಿಂತನೆಗಳ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಗೌರಿ ಅವರನ್ನು ಹತ್ಯೆ ಮಾಡುವ ಮೂಲಕ ಯಾವುದೇ ವಿಚಾರ ಅಂತ್ಯಗೊಳಿಸಲು ಸಾಧ್ಯವಿಲ್ಲ.ಹತ್ಯೆಯಿಂದ ಆತಂಕ ಸೃಷ್ಟಿಸಬಹುದು ಅಷ್ಟೇ.ಗೌರಿಯನ್ನು ಹತ್ಯೆ ಮಾಡಿದಾಕ್ಷಣ ಅವರು ಪ್ರತಿಪಾದಿಸಿದ ವಿಚಾರಧಾರೆಗಳ ಮುಗಿಸಿದ್ದೇವೆ ಎಂದು ಭಾವಿಸಿದಲ್ಲಿ ಅದು ಮೂರ್ಖತನ. ವಿಚಾರವಂತರ ಹತ್ಯೆಯ ಬಗ್ಗೆ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ದ

ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಹಾಗೂ ಹುಳಿಯಾರಿನ ಸಾಕ್ಷ್ಯ ಐ ಕೇರ್ ಅಂಡ್ ಡೆಂಟಲ್ ಹಾಸ್ಪಿಟಲ್ ಇವರ ಸಹಕಾರದೊಂದಿಗೆ ಸೆ.7 ರ ಗುರುವಾರದಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 3 ಗಂಟೆವರೆಗೂ ಉಚಿತ ಹೃದಯರೋಗ,ನರರೋಗ,ಮೂತ್ರಪಿಂಡ ಮತ್ತು ಕಣ್ಣಿನ ತಪಾಸಣಾಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಹುಳಿಯಾರು ಹಾಗೂ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಉಚಿತ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳುವಂತೆ ಆಯೋಜಕರು ಕೋರಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಲಕ್ಷ್ಮೀ 9743839070 ಇವರನ್ನು ಸಂಪರ್ಕಿಸಬಹುದಾಗಿದೆ.

ದೊಡ್ಡಎಣ್ಣೇಗೆರೆಯಲ್ಲಿ ಶಿಕ್ಷಕರ ದಿನಾಚರಣೆ

ಹುಳಿಯಾರು: ಸಮೀಪದ ದೊಡ್ಡ ಎಣ್ಣೇಗೆರೆಯ ಜ್ಞಾನಭಾರತಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಶಾಲಾ ಆಡಳಿತವರ್ಗ ಮತ್ತು ಪೋಷಕರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಹುಳಿಯಾರು ಸಮೀಪದ ದೊಡ್ಡ ಎಣ್ಣೇಗೆರೆಯ ಜ್ಞಾನಭಾರತಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಈ ನಿಮಿತ್ತ ಶಿಕ್ಷಕರಿಗಾಗಿ ಚರ್ಚಾ ಸ್ಪರ್ಧೆ,ಮೂಕಾಭಿನಯ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಪೋಷಕರುಗಳು ತೀರ್ಪುಗಾರರಾಗಿ ಕೆಲಸ ನಿರ್ವಹಿಸಿದರು. ಹಿಂದಿನ ಶಿಕ್ಷಣ ಪದ್ಧತಿ-ಇಂದಿನ ಶಿಕ್ಷಣ ಪದ್ಧತಿ ಎಂಬ ವಿಷಯದ ಬಗ್ಗೆ ಕುವೆಂಪು ತಂಡ ಹಾಗೂ ದರಾ ಬೇಂದ್ರೆ ತಂಡದ ನಡುವೆ ಚರ್ಚೆ ಏರ್ಪಟ್ಟು ದ.ರಾ.ಬೇಂದ್ರೆ ತಂಡ ಗೆಲುವು ಸಾಧಿಸಿತು. ಈ ಸಂದರ್ಭದಲ್ಲಿ ಶಾಲಾ ಕಾರ್ಯದರ್ಶಿ ಡಿ.ಎಸ್.ಪ್ರಶಾಂತ್,ಮುಖ್ಯ ಶಿಕ್ಷಕಿ ಅನಿತಾ,ಎಬಿವಿಪಿ ನರೇಂದ್ರಬಾಬು ಪಾಲ್ಗೊಂಡಿದ್ದರು ಪೋಷಕರುಗಳಾದ ಶಶಿಕಾಂತ್ ಶುಭಾ,ರವಿಆರಾಧ್ಯ ಶ್ವೇತಾ,ಉಮಾ ಲಿಂಗರಾಜು ಹಾಗೂ ಉಮೇಶ್ ದಂಪತಿಗಳು ತೀರ್ಪುಗಾರರಾಗಿ ಆಗಮಿಸಿದ್ದರು

ನಡಿಗೆಯಿಂದಷ್ಟೇ ನಾವು ಎಲ್ಲ ವರ್ಗದವರ ಸಂಬಂಧವನ್ನು ಬೆಳೆಸಬಹುದು:ವಾಕ್ ಆಫ್ ಜಾಯ್ ಖ್ಯಾತಿಯ ಬ್ರಿಟನ್ ಪ್ರಜೆ ಡೇವಿಡ್ ಅಥೋವಾ

ಹುಳಿಯಾರು: ವಾಕ್ ಆಫ್ ಜಾಯ್ ಖ್ಯಾತಿಯ ಬ್ರಿಟನ್ ಪ್ರಜೆ ಡೇವಿಡ್ ಅಥೋವಾ ಅವರು ಸೋಮವಾರ ಬೆಳಗ್ಗೆ ಹುಳಿಯಾರಿಗೆ ಆಗಮಿಸಿದ್ದು ಅವರನ್ನು ಕಲ್ಪತರು ಆಗ್ರೋ ಕೇಂದ್ರದ ಬಳಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.      ಚಿಕ್ಕನಾಯಕನಹಳ್ಳಿಯಿಂದ ಬೆಳಗುಲಿ,ಗೂಬೇಹಳ್ಳಿ ಮಾರ್ಗವಾಗಿ ಹುಳಿಯಾರಿಗೆ ಆಗಮಿಸಿದ ಅವರೊಂದಿಗೆ ಪಟ್ಟಣದೆಲ್ಲಡೆ ರೈತ ಸಂಘದ ಪ್ರತಿನಿಧಿಗಳು,ವಿವಿಧ ಸಂಘ ಸಂಸ್ಥೆಯವರು ನಡಿಗೆಯ ಹೆಜ್ಜೆ ಹಾಕಿದರು.         ತಾವು ಆರಂಭಿಸಿರುವ ವಾಕ್ ಆಫ್ ಜಾಯ್ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ನಡಿಗೆಯ ಮುಖಾಂತರವೇ ತಾವು ದೇಶ ವಿದೇಶ ಸಂಚರಿಸಿದ್ದು , ನಡಿಗೆಯಿಂದಾಗುವ ಲಾಭ ಹಾಗೂ ಸುಸ್ಥಿರಕೃಷಿ,ಸಿರಿಧಾನ್ಯದ ಬಗ್ಗೆ ತಮ್ಮ ಸಂಚಾರ ಸಮಯದಲ್ಲಿ ಕಂಡುಕೊಂಡ ಅನುಭವದ ಬಗ್ಗೆ ವಿವರಿಸಿದರು.         ಆಧುನಿಕ ಸಂಪರ್ಕ ಸಾಧನಗಳಲ್ಲಿ ಇತ್ತೀಚೆಗೆ ಮೊಬೈಲ್ ಎಲ್ಲರಿಗೂ ಸರ್ವಸ್ವವಾಗಿದ್ದು ಅವುಗಳಿಂದ ಎಲ್ಲಾ ವರ್ಗದ ಜನರನ್ನು ತಲುಪಲು ಸಾಧ್ಯವಿಲ್ಲ.ನಾವು ವೇಗವಾದ ಬೆಳವಣಿಗೆಯಿಂದಲೇ ಹಾಳಾಗುತ್ತಿದ್ದು ನಡಿಗೆಯಿಂದಷ್ಟೇ ನಾವು ಎಲ್ಲ ವರ್ಗದವರ ಸಂಬಂಧವನ್ನು ಬೆಳೆಸಬಹುದು ಎಂದು ಅಭಿಪ್ರಾಯಪಟ್ಟರು.        ನಡಿಗೆ ನಮಗೆ ಸಮಾಧಾನ,ಸಾವಧಾನ ಕಲಿಸುತ್ತದೆ, ಸಂಬಂಧ ಬೆಳೆಸುತ್ತದೆ.ಸಂಚಾರ ಸಂದರ್ಭದಲ್ಲಿ ನಾನಾ ರೀತಿಯ ಜನಗಳೊಂದಿಗೆ ಬೇರೆಯುವುದರ ಮೂಲಕ ದೇಶದ ಸಮಗ್ರ ವೈವಿಧ್ಯತೆಯನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದರು.      

ಹುಳಿಯಾರು:ಕೊಬ್ಬರಿ ದರ ದಿಢೀರ್ ಏರಿಕೆ

ಕೊಬ್ಬರಿಗೆ ಬಂಪರ್ ಬೆಲೆ: 11011 ರೂಪಾಯಿಗೆ ನಿಂತ ಹರಾಜು ಹುಳಿಯಾರು: ಕಳೆದ ಕೆಲವು ತಿಂಗಳುಗಳಿಂದ ಇಳಿಮುಖವಾಗಿದ್ದ ಕೊಬ್ಬರಿ ಬೆಲೆ ಇದೀಗ ದಿಢೀರ್ ಏರಿಕೆ ಕಂಡು ಮಳೆ ಬೆಳೆ ಇಲ್ಲದೆ ಕಂಗೆಟ್ಟಿದ್ದ ರೈತರಿಗೆ ಹಬ್ಬದ ಸಾಲಿನಲ್ಲಿ ಹರುಷ ಮೂಡಿಸಲು ಕಾರಣವಾಗಿದೆ.          ಕಳೆದ ಒಂದು ವರ್ಷದಿಂದಲೂ ಏರಿಕೆ ಕಾಣದ ಕೊಬ್ಬರಿಗೆ , ಬೆಂಬಲ ಬೆಲೆ ನೀಡಿ ಖರೀದಿಸಿ ಎಂದು ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆ ಮುಂಭಾಗದಲ್ಲಿ ಸುಮಾರು ನೂರ ಎಂಭತ್ತು ದಿನಗಳ ಕಾಲ ಪ್ರತಿಭಟನೆ ನಡೆದಿತ್ತು.ಕೊಬ್ಬರಿ ಬೆಲೆ ಏರಿಕೆಗಾಗಿ ಸಾಕಷ್ಟು ಹೋರಾಟ ನಡೆದು, ಬೆಲೆ ಏರಿಕೆ ಆಗುವುದೇ ಇಲ್ಲ ಎಂದು ದಿಗಿಲುಕೊಂಡಿದ್ದ ರೈತರಿಗೆ ಇದೀಗ ದಿಢೀರ್ ಬೆಲೆ ಹೆಚ್ಚಳ ಸಂತಸಕ್ಕೆ ಕಾರಣವಾಗಿದೆ.        ದಾಸ್ತಾನು ಕೊರತೆ ,ಬೇಡಿಕೆಯಲ್ಲಿ ಹೆಚ್ಚಳದ ಹಿನ್ನೆಲೆಯೇ ಬೆಲೆ ಏರಿಕೆಯಾಗಲು ಕಾರಣ ಎನ್ನುತ್ತಾರೆ ಹುಳಿಯಾರಿನ ಕೊಬ್ಬರಿ ರವಾನೆದಾರ ಸಪ್ತಗಿರಿ ಎಂಟರ್ ಪ್ರೈಸಸ್ ನ ಎಲ್.ಆರ್.ಬಾಲಾಜಿ.ಕಲ್ಪತರು ನಾಡೆಂದು ಹೆಸರಾಗಿರುವ ಈ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಕೊಬ್ಬರಿ ಆವಕ ಇಳಿಮುಖವಾಗುತ್ತಿದ್ದು ಇದೇ ಸಮಯದಲ್ಲಿ ತಮಿಳುನಾಡಿನಲ್ಲಿ ಕೊಬ್ಬರಿ ಎಣ್ಣೆಗೆ ಧಾರಣೆ ಹೆಚ್ಚಳವಾದರೆ ಉತ್ತರ ಭಾರತದ ಕಡೆ ಕೊಬ್ಬರಿಗೆ ಬಲು ಬೇಡಿಕೆ ಕಂಡು ಬಂದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.            ಈ ಹಿನ್ನೆಲೆಯಲ್ಲಿ ಏಳು ಸಾವಿರ-ಎಂಟು ಸಾವಿರದ ಆಸುಪಾಸಿನಲ್ಲಿದ್ದ ಕೊಬ್ಬರಿ ಬೆಲೆ

ಹುಳಿಯಾರು:ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಚೆನೌಕರರ ಅನಿರ್ಧಿಷ್ಠಾವಧಿ ಮುಷ್ಕರ

ಹುಳಿಯಾರು: ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ರಾಷ್ಟ್ರವ್ಯಾಪ್ತಿ ಅನಿರ್ದಿಷ್ಟ ಅವಧಿ ಮುಷ್ಕರ ಬೆಂಬಲಿಸಿ, ಜಿಡಿಎಸ್ ಸಮಿತಿಯಿಂದ ಶಿಫಾರಸ್ಸು ಮಾಡಿದ ಬೇಡಿಕೆಗಳನ್ನು ಈಡೇರಿಸುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ಅಂಚೆ ಕಚೇರಿ ಎದುರು ಹುಳಿಯಾರು ಹೋಬಳಿ ವ್ಯಾಪ್ತಿಯ ಗ್ರಾಮೀಣ ಅಂಚೆ ನೌಕರರು ಮುಷ್ಕರ ನಡೆಸಿದರು. ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ರಾಷ್ಟ್ರವ್ಯಾಪ್ತಿ ಅನಿರ್ದಿಷ್ಟ ಅವಧಿ ಮುಷ್ಕರ ಬೆಂಬಲಿಸಿ ಹುಳಿಯಾರು ಹೋಬಳಿ ವ್ಯಾಪ್ತಿಯ ಗ್ರಾಮೀಣ ಅಂಚೆ ನೌಕರರು ಮುಷ್ಕರ ನಡೆಸಿದರು.          ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷ ಪಂಚಾಕ್ಷರಯ್ಯ ಏಳನೇ ವೇತನ ಆಯೋಗ ರಚನೆಯಾದರೂ ಜಾರಿಗೊಳಿಸುವಲ್ಲಿ ಕೇಂದ್ರಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ.ಇದರಿಂದ ದೇಶಾದ್ಯಂತ 2.5ಲಕ್ಷಕ್ಕೂ ಹೆಚ್ಚು ಗ್ರಾಮೀಣ ಅಂಚೆ ನೌಕರರು ಶೋಷಣೆಗೆ ಒಳಗಾಗಿದ್ದಾರೆ.ಆದ್ದರಿಂದ ತ್ವರಿತವಾಗಿ ಆಯೋಗದ ವರದಿಯನ್ನು ಜಾರಿಗೊಳಿಸಲು ಒತ್ತಾಯಿಸಿ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸುವುದಾಗಿ ತಿಳಿಸಿದರು.            ಯಳನಾಡು ಬಿಒ ರಂಗಯ್ಯ ಮಾತನಾಡಿ ನಮ್ಮ ಬೇಡೆಕೆಗಳ ಬಗ್ಗೆ ಗಮನ ಸೆಳೆಯಲು ಅನೇಕ ಬಾರಿ ಡಿವಿಷನ್ ಲೆವೆಲ್, ಸರ್ಕಲ್ ಲೆವೆಲ್ ಹಾಗೂ ಆಯಾಯ ತಾಲೂಕು ಮಟ್ಟದಲ್ಲಿ ಬೈಕ್ ರ್ಯಾಲಿ ಮಾಡುವ ಮೂಲಕ ಕೂಡಾ ಸರ್ಕಾರವನ್ನು ಎಚ್ಚರಿಸಿದ್ದೆವು.ಆದರೂ ಕೂಡ ಸರಕಾರ ಈ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜ್ವರಕ್ಕೆ ಬಲಿ

ಹುಳಿಯಾರು: ಶಂಕಿತ ಡೆಂಗ್ಯೂ ಜ್ವರದಿಂದ ಮೊನ್ನೆಯಷ್ಟೆ ಚಿಕ್ಕನಾಯಕನಹಳ್ಳಿಯಲ್ಲಿ ಸುಷ್ಮಿತಾ ಸಾವನ್ನಪ್ಪಿರುವ ಘಟನೆ ಇನ್ನು ಹಸಿಯಾಗಿರುವಾಗಲೇ ಮತ್ತದೇ ಜ್ವರದ ಭಾಧೆಯಿಂದ ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಸಮೀಪದ ದೊಡ್ಡೇಣ್ಣೇಗೆರೆಯ ನಿವಾಸಿ ಶಿಕ್ಷಕ ವೈ.ನಾಗರಾಜು ಇವರ ಮೂರನೇ ಪುತ್ರ ಒ.ಎನ್.ವಿಶ್ವನಾಥ್ (೧೬)ವರ್ಷ ಶಂಕಿತ ಡೆಂಗ್ಯುಗೆ ಬಲಿಯಾದ ದುರ್ದೈವಿಯಾಗಿದ್ದಾನೆ. ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಈತನಿಗೆ ಹುಳಿಯಾರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ.ಗುರುವಾರ ಮಧ್ಯಾಹ್ನ ಜ್ವರ ಹೆಚ್ಚಾದ ಕಾರಣ ಆತನನ್ನು ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲಿ ನಿಧನ ಹೊಂದಿದ್ದಾನೆ. ವಿಶ್ವನಾಥ್ ಹುಳಿಯಾರು- ಕೆಂಕೆರೆ ಪ್ರೌಢಶಾಲೆಯಲ್ಲಿ ೧೦ನೇತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.  ಮೃತ ಬಾಲಕನ ಅಂತ್ಯಸಂಸ್ಕಾರ ಪಾವಗಡ ತಾಲ್ಲೂಕಿನ ಪೋಷಕರ ಗ್ರಾಮದಲ್ಲಿ ನಡೆಯಿತು.

49 ಲಕ್ಷ ವೆಚ್ಚದ ಬಾಲಕಿಯರ ಕಾಲೇಜು ಕೊಠಡಿಗೆ ಶಾಸಕರ ಶಂಕುಸ್ಥಾಪನೆ

ಹುಳಿಯಾರು: ಅಗತ್ಯ ಮೂಲಭೂತ ಸೌಕರ್ಯ ಹಾಗೂ ಕೊಠಡಿ ಕೊರತೆ ಎದುರಿಸುತ್ತಿದ್ದ ಪಟ್ಟಣದ ಬಾಲಕಿಯರ ಸರಕಾರಿ ಪದವಿ ಪೂರ್ವಕಾಲೇಜಿಗೆ ೪೯ ಲಕ್ಷ ವೆಚ್ಚದಲ್ಲಿ ಶೌಚಾಲಯ ಹಾಗೂ ೨ ನೂತನ ಕೊಠಡಿ ನಿರ್ಮಾಣಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು ಗುರುವಾರದಂದು ಗುದ್ದಲಿಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು ಮಕ್ಕಳ ಉತ್ತಮ ವಿದ್ಯಾಭ್ಯಾಸ ದೃಷ್ಟಿಯಿಂದ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿದ್ದು ,ಕಾಲೇಜ್ ಕೊಠಡಿ ನಿರ್ಮಾಣದ ಕಾಮಗಾರಿಯೂ ಸಹ ಪಾಠಪ್ರವಚನಕ್ಕೆ ತೊಂದರೆಯಾಗದಂತೆ ಬೇಗನೆ ಪೂರ್ತಿಗೊಳಿಸಲಾಗುವುದು ಎಂದರು.ಶೀಘ್ರವಾಗಿ ಪೂರ್ತಿಮಾಡಿಕೊಡುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಿದರು.           ಇಲ್ಲಿನ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ನೀರಿನ ಸಮಸ್ಯೆಯಿರುವುದನ್ನು ಮನಗಂಡ ಅವರು ಬೋರ್ ವೆಲ್ ಕೊರಿಸಿಕೊಡುವುದಾಗಿ ಹೇಳಿದರಲ್ಲದೆ ಇದೇ ಆವರಣದಲ್ಲಿ ಶುದ್ಧ ಶುದ್ದ ನೀರಿನ ಘಟಕ ಸ್ಥಾಪಿಸುವುದಾಗಿ ಭರವಸೆ ನೀಡಿದರು.           ಈ ಕಾರ್ಯಕ್ರಮದಲ್ಲಿ ಹುಳಿಯಾರು ತಾಪಂ ಸದಸ್ಯರಾದ ಹೆಚ್.ಎನ್.ಕುಮಾರ್,ಯಳನಾಡು ತಾಪಂ ಸದಸ್ಯರಾದ ಯತೀಶ್, ದಸೂಡಿ ತಾಪಂ ಸದಸ್ಯರಾದ ಪ್ರಸನ್ನಕುಮಾರ್,ಹುಳಿಯಾರು ಗ್ರಾಪಂ ಉಪಾಧ್ಯಕ್ಷ ಗಣೇಶ್, ಸದಸ್ಯರುಗಳಾದ ಗೀತಾಬಾಬು, ಅಹ್ಮದ್‌ಖಾನ್, ಪುಟ್ಟಮ್ಮ,ಚಿ.ನಾ.ಹಳ್ಳಿ ಪುರಸಭೆ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಕಾಲೇಜ್ ಪ್ರಾಂಶುಪಾಲ ನಂಜುಂಡಪ್ಪ, ಶಿಕ್ಷಕರಾದ ನಂದವಾಡಗಿ, ಕಿರುತೆರೆಯ ಕಲಾವಿದ ಗೌಡಿ ಸ

ಹುಳಿಯಾರು ಹೋಬಳಿ ಎ ವಿಭಾಗದ ಪ್ರೌಢ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟ

ಸತತ ಪ್ರಯತ್ನಗಳಿಂದ ಸೋತವರು ಗೆಲುವು ಸಾಧಿಸಬಹುದು : ಪಿಎಸೈ ವೈ.ವಿ. ರವೀಂದ್ರ ಹುಳಿಯಾರು: ಶಿಕ್ಷಣ ಮತ್ತು ಕ್ರೀಡೆ ನಾಣ್ಯದ ಎರಡು ಮುಖವಿದ್ದಂತೆ .ಆಟದಲ್ಲಿ ಸೋಲು ಗೆಲುವು ಸಹಜ .ಆದರೆ ಸತತ ಪ್ರಯತ್ನಗಳಿಂದ ಸೋತವರು ಗೆಲುವು ಸಾಧಿಸಬಹುದು. ಆದ್ದರಿಂದ ಯಾರೂ ಸೋಲಿಗೆ ನಿರಾಶರಾಗದೆ ಕ್ರೀಡಾ ಸ್ಫೂರ್ತಿ ಹಾಗೂ ಆತ್ಮವಿಶ್ವಾಸದಿಂದ ಭಾಗವಹಿಸಿ ಗೆಲುವಿನ ನಗೆ ಬೀರಿ ಎಂದು ಹುಳಿಯಾರು ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ವೈ.ವಿ. ರವೀಂದ್ರ ಕರೆ ನೀಡಿದರು. ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದವತಿಯಿಂದ ಬುಧವಾರ ನಡೆದ ಎರಡು ದಿನಗಳ ಕಾಲದ ಹುಳಿಯಾರು ಹೋಬಳಿ ಎ ವಿಭಾಗದ ಪ್ರೌಢ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಪಿಎಸೈ ವೈ.ವಿ. ರವೀಂದ್ರ ಮಾತನಾಡಿದರು  ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದವತಿಯಿಂದ ಬುಧವಾರ ನಡೆದ ಎರಡು ದಿನಗಳ ಕಾಲದ ಹುಳಿಯಾರು ಹೋಬಳಿ ಎ ವಿಭಾಗದ ಪ್ರೌಢ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಬಾಲ್ ಚಿಮ್ಮುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು . ಕ್ರೀಡಾ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಸಿ. ಸಿದ್ದರಾಮಯ್ಯ ಮಾತನಾಡಿ ಸೋಲು ಗೆಲುವು ಕ್ರೀಡೆಯ ಎರಡು ಮುಖವಿದ್ದಂತೆ.ಆಟದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವುದನ್ನು ಕಲಿತಲ್ಲಿ ಬಾಳಿನಲ್ಲಿ ಸಮಚಿತ್ತವಾಗಿರುವುದನ್ನು ಕಲಿತಂತೆ ಎಂದರು . ಕ್ರೀ

ಏಳನೇ ವೇತನ ಆಯೋಗದ ಜಾರಿಗೆ ಒತ್ತಾಯಿಸಿ ಬೈಕ್ ರ್ಯಾಲಿ

ಏಳನೇ ವೇತನ ಆಯೋಗದ ಜಾರಿಗೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರು ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸಿದರು. ಕೇಂದ್ರ ಸಂಘದ ಆದೇಶದಂತೆ ದೇಶಾದ್ಯಂತ ಗ್ರಾಮೀಣ ಅಂಚೆನೌಕರರಿಂದ ಇಂದು ಬೈಕ್ ರ್ಯಾಲಿ ನಡೆದಿದೆ. ಈ ನಿಟ್ಟನಲ್ಲಿ ತಾಲ್ಲೂಕಿನ ಗ್ರಾಮೀಣ ಅಂಚೆನೌಕರರು ಇಂದು ಇಲ್ಲಿನ ಅಂಚೆ ಕಚೇರಿ ಮುಂಭಾಗದಿಂದ ಊರಿನ ಮುಖ್ಯರಸ್ತೆಯಲ್ಲಿ ಬೈಕ್ ರ್ಯಾಲಿ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷ ಪಂಚಾಕ್ಷರಯ್ಯ ಮಾತನಾಡಿ ಕಳೆದ ಒಂದು ವರ್ಷದಿಂದ ಏಳನೇ ವೇತನ ಆಯೋಗ ರಚನೆಯಾದರೂ ಜಾರಿಗೊಳಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಇದರಿಂದ ದೇಶಾದ್ಯಂತ ಇರುವ 2.5 ಲಕ್ಷ ಗ್ರಾಮೀಣ ಅಂಚೆ ನೌಕರರು ಶೋಷಣೆ ಅನುಭವಿಸುತ್ತಿದ್ದಾರೆ. ಪ್ರಾಮಾಣಿಕವಾಗಿ ಅಂಚೆ ಇಲಾಖೆಯಲ್ಲಿ ಎಲ್ಲಾ ಋತುಗಳಲ್ಲೂ ಸಮಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸುತ್ತಿರುವ ನಮಗೆ ನ್ಯಾಯಯುತ ವೇತನದಲ್ಲಿ ತಾರತಮ್ಯವಿದೆ ಕೂಡಲೇ ಏಳನೇ ವೇತನ ಅಯೋಗ ಜಾರಿಗೆ ತರುವಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕಿದೆ. ಇದೇ ಆಗಷ್ಟ್ 16 ರಂದು ದೇಶಾದ್ಯಂತ ಅನಿರ್ದಾಷ್ಟಾವಧಿ ಮುಷ್ಕರ ನಡೆಸಲಾಗುವುದೆಂದರು.   ರ್ಯಾಲಿಯಲ್ಲಿ ನೌಕರರ ಸಂಘದ ಕಾರ್ಯದರ್ಶಿ ಹರೀಶ್, ರಾಜಣ್ಣ, ವೆಂಕಟೇಶ್, ಮಂಜುನಾಥ್ ಇತರರು ಇದ್ದರು. 

ಹುಳಿಯಾರು:ವರಮಹಾಲಕ್ಷ್ಮೀ ಹಬ್ಬಕ್ಕೆ ಹೂವು ಹಣ್ಣು ದುಬಾರಿ

ಹುಳಿಯಾರು: ವರಮಹಾಲಕ್ಷ್ಮೀ ಹಬ್ಬಕ್ಕೆ ಹೂವು, ಹಣ್ಣು ಬೆಲೆ ಗಗನಕ್ಕೇರಿದ್ದು ಸಾರ್ವಜನಿಕರಿಗೆ ಈ ಬಾರಿ ಹಬ್ಬ ದುಬಾರಿಯಾಗಿ ಪರಿಣಮಿಸಿದೆ. ಹುಳಿಯಾರಿನಲ್ಲಿ ಗುರುವಾರದ ಸಂತೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಹೂವಿನ ವ್ಯಾಪಾರ ಜೋರಾಗಿ ಸಾಗಿತ್ತು.            ಪಟ್ಟಣದಲ್ಲಿ ಗುರುವಾರ ನಡೆದ ಸಂತೆಯಲ್ಲಿ ಹೂವು, ಹಣ್ಣಿನ ಬೆಲೆಗಳು ದುಬಾರಿಯಾಗಿದ್ದರೆ ತರಕಾರಿ ಬೆಲೆ ಮಧ್ಯಮವಾಗಿತ್ತು. ಕಾಕಡ ಮಾರಿಗೆ ೫೦ ರೂ ಇದ್ದರೆ ಶಾವಂತಿಗೆ ಹೂ ಮಾರೊಂದಕ್ಕೆ ೧೦೦ ರೂ,ಬಟನ್ಸ್ ಮಾರಿಗೆ ೮೦ ಇತ್ತು. ಇನ್ನು ಬಿಡಿ ಹೂವಿನ ಬೆಲೆ ಕೆಜಿಗೆ ಇನ್ನೂರಕ್ಕೂ ಹೆಚ್ಚಿತ್ತು .ಡೇರಾ ಹೂವಿಗೆ 10 ರೂ ಇದ್ದರೆ ತಾವರೆ ಹೂವಿಗೆ ಕೆರೆಗಳಲ್ಲಿ ಹುಡುಕಾಟ ನಡೆದಿತ್ತು..ಯಾರು ಕೊಳ್ಳಲೊಲ್ಲದೆ ಕೇಜಿಗೆ ೩೦ರೂ ಆಸುಪಾಸಿನಲ್ಲಿರುತ್ತಿದ್ದ ಚೆಂಡು ಹೂವು ಕೂಡ ಕೆಜೆ ೬೦.ರೂ ನಂತೆ ಮಾರಾಟವಾಯಿತು.          ಹೂವಿನೊಂದಿಗೆ ಹಣ್ಣಿನೆ ಬೆಲೆಯೂ ಏರಿ ಗ್ರಾಹಕರನ್ನು ಕಂಗಾಲಾಗಿಸಿತ್ತು.ಸೇಬಿನ ಬೆಲೆ ಕೇಜಿ 100-120 ರೂ ಇದ್ದರೆ ಕರಿ ದ್ರಾಕ್ಷಿ ೧೨೦ ರೂ,ಸೀಡ್ ಲೆಸ್ ದ್ರಾಕ್ಷಿ ಕೇಜಿ ೧೬೦ ರೂ. ದಾಟಿತ್ತು. ಸೀಬೆ ಕೆಜಿಗೆ ೮೦ ರೂ ,ಮೋಸುಂಬೆ ೫೦-೬೦ ರೂ,ಮರಸೇಬು ಕೇಜಿಗೆ ೧೦೦ ರೂ,ಕಿತ್ತಳೆ ಕೂಡ ಕೇಜಿಗೆ ೧೦೦ ರೂ ತಲುಪಿತ್ತು. ಪಚ್ಚಬಾಳೆ ಕೆಜಿಗೆ ೫೦-೬೦ ಇದ್ದರೆ ಪುಟ್ಟಬಾಳೆ ೮೦ ರೂ ಇತ್ತು. ತರಕಾರಿಗಳ ಬೆಲೆ ಕೇಜಿಗೆ ಸರಾಸರಿ ೩೦-೪೦ ಇದ್ದರೆ ಸೊಪ್ಪಿನ ಬೆಲೆ ಮಾತ್ರ ತಳಕಚ್ಚ

ಕಾಂಗ್ರೆಸ್ ಸಚಿವರ ಮನೆ ಮೇಲಿನ ಐಟಿ ದಾಳಿ ರಾಜಕೀಯ ಪ್ರೇರಿತ

ಹುಳಿಯಾರು: ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ಹುಳಿಯಾರು: ಐ.ಟಿ.ಅಧಿಕಾರಿಗಳನ್ನು ತನ್ನ ಕೈಗೊಂಬೆಮಾಡಿಕೊಂಡಿರುವ ಕೇಂದ್ರಸರಕಾರ ಕರ್ನಾಟಕ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಸಚಿವ ಡಿ.ಕೆ.ಶಿವಕುಮಾರ್ ಮನೆಮೇಲೆ ವಿನ:ಕಾರಣ ದಾಳಿಮಾಡಿಸುವ ಮುಲಕ ಕಿರುಕುಳ ನೀಡಿತ್ತಿದ್ದಾರೆಂದು ಆರೋಪಿಸಿ ಹುಳಿಯಾರಿನಲ್ಲಿ ಕಾಂಗ್ರೆಸ್ ಮುಖಂಡರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ಹಾಗೂ ಜಿ.ಪಂ. ಸದಸ್ಯ ವೈ.ಸಿ.ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರದಂದು ಪ್ರತಿಭಟನೆ ನಡೆಸಿದರು.         ಹುಳಿಯಾರಿನ ಪರಿವೀಕ್ಷಣಾಮಂದಿರದಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ನಾಡಕಚೇರಿ ತಲುಪಿ ಉಪತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.         ಈ ವೇಳೆ ಜಿಪಂ ಸದಸ್ಯ ವೈ.ಸಿ.ಸಿದ್ದರಾಮಯ್ಯ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿವೃದ್ಧಿ ಕಾರ್ಯ ಹಾಗೂ ಜನಪ್ರಿಯತೆ ಸಹಿಸದ ಕೇಂದ್ರದ ಬಿಜೆಪಿ ಸರಕಾರವು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸೋಲುತ್ತೆವೆ ಎಂಬ ಭಯದಿಂದ ಕಂಗಾಲಾಗಿ ಕಾಂಗ್ರೆಸ್‌ನ ಸಚಿವರ ಮನೆಮೇಲೆ ಐ.ಟಿ.ಅಧಿಕಾರಿಗಳನ್ನ ಕಳಿಸಿ ದಾಳಿಮಾಡಿಸಿ ಭಯದ ವಾತವರಣ ಸೃಷ್ಟಿಸಲು ಮುಂದಾಗಿರುವುದು ನಾಚಿಕೆಗೇಡಿತನವಾಗಿದೆ ಎಂದು ಕಿಡಿಕಾರಿದರು.         ರೈತರ ಪರ ಸ್ವಲ್ಪವು ಕನಿಕರವಿಲ್ಲದ ಪ್ರಧಾನ ಮಂತ್ರಿಗಳು ರೈತರ ಬೆಳೆದ ತೆಂಗಿನ ಕೊಬ್ಬರಿ, ಅಡಕೆಯ ಬೆಳೆಗೆ ನ್ಯಾಯಯುತವಾದ ಬ

ಅಗಲಿದ ಗುರುಗಳಿಗೆ ಶಿಷ್ಯರಿಂದ ಪದಕ ಸಮರ್ಪಣೆ

ನಮ್ಮ ಅಮೋಘ ಸಾಧನೆಗೆ ಗುರುಗಳ ಪ್ರೋತ್ಸಾಹವೇ ಕಾರಣ ಎಂದ ಮಕ್ಕಳು ಹುಳಿಯಾರು: ತಮ್ಮ ಸಾಧನೆಗೆ ಗುರುಗಳ ಪ್ರೋತ್ಸಾಹ ಹಾಗೂ ಶ್ರೀ ರಕ್ಷೆಯೇ ಕಾರಣವಾಗಿದ್ದು ,ಇಂದು ನಮ್ಮ ತಂಡ ಪಡೆದ ಗೆಲುವು ಅವರಿಗಾಗಿ ಸಮರ್ಪಣೆ ಎಂದು ಬೆಳ್ಳಾರ ಶಾಲೆಯ ವಿದ್ಯಾರ್ಥಿಗಳು ತಮ್ಮ ಸಾಧನೆಯ ಹಿಂದಿನ ಕರ್ತೃವಾದ ಕಳೆದ ವಾರವಾಷ್ಟೆ ಅಗಲಿದ ದೈಹಿಕ ಶಿಕ್ಷಕ ತ್ಯಾಗರಾಜ್ ಗೆ ಸಮರ್ಪಿಸಿದ ಘಟನೆ ಹುಳಿಯಾರಿನಲ್ಲಿ ಬುಧವಾರ ಜರುಗಿದೆ . ಹುಳಿಯಾರಿನಲ್ಲಿ ದೈಹಿಕ ಶಿಕ್ಷಕ ತ್ಯಾಗರಾಜ್ ಅವರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಇವರ ಪ್ರೋತ್ಸಾಹದಿಂದಲೇ ನಾವು ಗೆಲುವು ಸಾಧಿಸಿದ್ದು ಎಂದ ಮಕ್ಕಳು ಪದಕವಿಟ್ಟು ಭಾಷ್ಪಾಂಜಲಿ ಸಮರ್ಪಿಸಿದರು          ಗುರುಗಳ ನಮ್ಮಲ್ಲಿ ಗೆಲ್ಲಲೇ ಬೇಕಂಬ ಸ್ಫೂರ್ತಿಯ ಸೆಲೆ ತುಂಬಿದ್ದು ನಮ್ಮ ಗೆಲುವಿಗೆ ಕಾರಣವೆಂದ ಮಕ್ಕಳು ಇಂದು ತಾವು ಪಡೆದ ಪದಕಗಳೆನೆಲ್ಲಾ ದೂರದ ಊರಿನಿಂದ ಹುಳಿಯಾರಿನ ಅಂತ್ಯಕ್ರಿಯೆ ನಡೆದಿದ್ದ ಸ್ಥಳಕ್ಕೆ ಆಗಮಿಸಿ ಗುಡ್ಡೆ ಮುಂದೆ ಪದಕಗಳನಿಟ್ಟು ಪೂಜೆ ಸಲ್ಲಿಸಿ ಸಮರ್ಪಿಸಿದ ಘಟನೆ        ಅಲ್ಲಿದ್ದವರ ಕಣ್ಣಂಚಿನಲ್ಲಿ ನೀರು ತಂದಿದಂತೂ ಸತ್ಯ.ದೈಹಿಕ ಶಿಕ್ಷಕ ತ್ಯಾಗರಾಜುವಿಗೆ ಮಕ್ಕಳ ಬಗ್ಗೆಗಿದ್ದ ಅಂತಕರಣ,ಮಮಕಾರಕ್ಕೆ ಈ ಘಟನೆ ಸಾಕ್ಷಿಯಾಯಿತು.                ಬೆಳ್ಳಾರ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ದೈಹಿಕ ಶಿಕ್ಷಕ ತ್ಯಾಗರಾಜ್ ಕಳೆದ ಬುಧವಾರ ರಾತ್ರಿ ಹುಳಿಯ

ಹುಳಿಯಾರು:ಕಾಯಂ ಉಪನ್ಯಾಸಕರ ನೇಮಕಕ್ಕೆ ಅಭಾವಿಪ ಒತ್ತಾಯ

ಹುಳಿಯಾರು ಕೆಂಕೆರೆಯ ಬಿಎಂಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಖಾಯಂ ಉಪನ್ಯಾಸಕರ ಕೊರತೆಯಿದ್ದು ಕಳೆದ ಹದಿನೈದು ದಿನಗಳಿಂದ ಕಾರ್ಯನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕರನ್ನು ಕೂಡಾ ಸರ್ಕಾರದ ಆದೇಶದಂತೆ ರದ್ದುಮಾಡಿರುವುದರಿಂದ ಪಾಠಪ್ರವಚನಕ್ಕೆ ತೊಂದರೆಯಾಗಿದ್ದು ಈ ಕೂಡಲೇ ಉಪನ್ಯಾಸಕರನ್ನು ನೇಮಿಸುವಂತೆ ಅಖಿಲಭಾರತೀಯ ವಿದ್ಯಾರ್ಥಿ ಪರಿಷತ್ತು ವತಿಯಿಂದ ನಾಡಕಛೇರಿಯ ಉಪತಹಸೀಲ್ದಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಉಪನ್ಯಾಸಕರನ್ನು ನೇಮಿಸುವಂತೆ ಅಖಿಲಭಾರತೀಯ ವಿದ್ಯಾರ್ಥಿ ಪರಿಷತ್ತು ವತಿಯಿಂದ ನಾಡಕಛೇರಿಯ ಉಪತಹಸೀಲ್ದಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.         ಮನವಿ ಸಲ್ಲಿಸಿ ಮಾತನಾಡಿದ ಎಬಿವಿಪಿ ನಗರಕಾರ್ಯದರ್ಶಿ ನವೀನ್ ಕಾಲೇಜು ಪ್ರಾರಂಭವಾಗಿ ಈಗಾಗಲೇ ಒಂದೂವರೆ ತಿಂಗಳಾಗಿದ್ದು ಉಪಸ್ಯಾಸಕರ ಕೊರತೆಯಿಂದ ಕೆಲವು ತರಗತಿಗಳು ನಡೆಯುತ್ತಿರಲಿಲ್ಲ.ಈಗ್ಗೆ ಹದಿನೈದು ದಿನಗಳ ಹಿಂದೆಯಷ್ಟೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ಸಮಸ್ಯೆ ಸರಿಯಾಯಿತು ಎನ್ನುವಷ್ಟರಲ್ಲೇ ಸರ್ಕಾರ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ರದ್ದುಪಡಿಸಿ ಆದೇಶ ಹೊರಡಿಸಿದ್ದರಿಂದ ಇಂದಿನಿಂದ ಅವರುಗಳು ಕೂಡ ತರಗತಿ ತೆಗೆದುಕೊಳ್ಳುತ್ತಿಲ್ಲ.ಇದರಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗಿದೆ.           ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಸರ್ಕಾರಿ ಕಾಲೇಜುಗಳೇ ಆಧಾರವಾಗಿದ್ದು ಇಲ್ಲಿ ಶಿಕ್ಷಕ

ಸಚಿವ ಟಿ.ಬಿ ಜಯಚಂದ್ರ ಅವರಿಂದ 288 ಫಲಾನುಭವಿಗಳಿಗೆ ಸಾಗುವಳಿ ಚೀಟಿ ವಿತರಣೆ

ದೊಡ್ಡಪ್ರಮಾಣದಲ್ಲಿ ಅಕ್ರಮ ಸಾಗುವಳಿದಾರರ ಅರ್ಜಿಗಳನ್ನು ಪರಿಶೀಲಿಸಿ ವಿತರಿಸುತ್ತಿರುವುದು ಜಿಲ್ಲೆಯಲ್ಲಿಯೇ ಪ್ರಥಮ ---------------------- ಚಿಕ್ಕನಾಯಕನಹಳ್ಳಿ ;ಹಲವಾರು ವರ್ಷಗಳಿಂದ ಇತ್ಯರ್ಥವಾಗದ ಬಗರಹುಕುಂ ಸಾಗುವಳಿದಾರರ ಅರ್ಜಿಗಳ ಪೈಕಿ ಈಗ ತಾಲ್ಲೂಕಿನ 288 ಫಲಾನುಭವಿಗಳಿಗೆ ಸಾಗುವಳಿ ಚೀಟಿಯನ್ನು ವಿತರಿಸಲಾಗಲಿದೆ ಎಂದು ಉಸ್ತುವರಿ ಸಚಿವ ಟಿ.ಬಿ ಜಯಚಂದ್ರ  ತಿಳಿಸಿದರು.  ಅವರು ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬಹರ್‌ಹುಕುಂ ಸಮಿತಿಯ ಮುಂದೆ ಹಲವಾರು ವರ್ಷಗಳಿಂದ ಇತ್ಯರ್ಥವಾಗದ ೯೦೦ ಅರ್ಜಿಗಳ ಪೈಕಿ ೨೮೮ ಅರ್ಜಿದಾರರಿಗೆ ಇಂದು ಸಾಗುವಳಿ ಚೀಟಿ ವಿತರಿಸಿ ಮಾತನಾಡಿದರು. ಗೋಮಾಳದಲ್ಲಿ ಅರ್ಜಿ ಹಾಕಿದ್ದ ರೈತರಿಗೆ ಉಚ್ಚನ್ಯಾಯಾಲಯದ ಆದೇಶದನ್ವಯ ಕೆಲವನ್ನು ವಿಲೆ ಇಡಲಾಗಿದೆ. ಉಳಿದಂತೆ ತಾಲ್ಲೂಕಿನ ಎಲ್ಲಾ ಭಾಗದಲ್ಲಿನ ಜಮೀನುಗಳನ್ನು ಸಮಿತಿಯ ಮೂಲಕ ಸ್ಥಳ ಪರಿಶೀಲನೆ ನಡೆಸಿ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಫಾರಂನಂ.೫೦ ರಲ್ಲಿ ಯಾವುದೇ ಅರ್ಜಿ ಉಳಿದಿಲ್ಲ, ಫಾರಂ ನಂ. ೫೩ರಲ್ಲಿ ೯೦೦ ಪ್ರಕರಣಗಳಲ್ಲಿ 288 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದು, ಇದರಲ್ಲಿ 164 ಪ್ರಕರಣಗಳಲ್ಲಿ ಸರ್ಕಾರಕ್ಕೆ ಕಿಮ್ಮತ್ತು ಕಟ್ಟಬೇಕಿದೆ. 540 ಪ್ರಕರಣಗಳಲ್ಲಿ ಈಗ 288 ಅರ್ಜಿದಾರರಿಗೆ ಇಂದು ಸಾಗುವಳಿ ಚೀಟಿ ವಿತರಿಸಲಿದ್ದು ಉಳಿದ 220 ಮಂದಿಗೆ ಇಪ್ಪತ್ತು ದಿನದೊಳಗೆ ವಿತರಿಸಲಾಗುವುದೆಂದರು. ಇಷ್ಟೊಂದು ದೊಡ್ಡಪ್ರಮಾಣದಲ್ಲಿ ಅ

ಶಾಲೆಗಳಲ್ಲಿ ಕಲಿಕೆಯ ಜೊತೆಗೆ ಕೃಷಿ ಚಟುವಟಿಕೆಗೂ ಒತ್ತುನೀಡಬೇಕು

         ಶಾಲೆಗಳಲ್ಲಿ ಕಲಿಕೆಯ ಜೊತೆಗೆ ಕೃಷಿ ಚಟುವಟಿಕೆಗೂ ಒತ್ತುನೀಡಬೇಕು.ಪಠ್ಯದ ಜೊತೆಜೊತೆಗೆ ಪಠ್ಯೇತರ ಚಟುವಟಿಕೆಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಶಿಕ್ಷಕರುಗಳು ಶಾಲಾ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಕೈತೋಟ ಮಾಡಿದಲ್ಲಿ ತರಕಾರಿ ಬೆಳದಲ್ಲಿ ಬಿಸಿಯೂಟಕ್ಕು ಬಳಸಿಕೊಳ್ಳಬಹುದಾಗಿದೆ ಎಂದು ಕೆಂಕೆರೆ ಗ್ರಾಮಪಂಚಾಯ್ತಿ ಸದಸ್ಯ ಲೋಕೇಶ್ ಸಲಹೆ ನೀಡಿದರು.        ಹುಳಿಯಾರು ಸಮೀಪದ ಕುರಿಹಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಶಾಲಾ ಕೈತೋಟದ ರಚನೆಗೆ ಗಿಡ ನೆಡುವ ಮೂಲಕ ಅವರು ಚಾಲನೆ ನೀಡಿ ಮಾತನಾಡಿದರು.         ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹುಳಿಯಾರು ಮೇಲ್ವಿಚಾರಕ ಸಂತೋಷ್ ಮಾತನಾಡಿ ಇಲ್ಲಿ ಅಡುಗೆಗೆ ಬೇಕಾದ ಬಗೆಬಗೆಯ ತರಕಾರಿ ಬೆಳೆಯಲಾಗುತ್ತದೆ. ಕೈತೋಟದಿಂದ ಉತ್ತಮ ಪರಿಸರ ನಿರ್ಮಾಣವಾಗುತ್ತದಲ್ಲದೆ ಕೃಷಿ ಕಲಿಕೆಗೂ ಪ್ರೇರಣೆ ನೀಡಿದಂತಾಗುತ್ತದೆ ಎಂದರು.       ಶಾಲೆಯ  ಆವರಣದಲ್ಲಿ   ಗಿಡ ನಾಟಿ ಮಾಡಲು ಸಂಸ್ಥೆಯ ಮಹಿಳಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು.    ಈ ಸಂದರ್ಭದಲ್ಲಿ ಕೃಷಿ ಮೇಲ್ವಿಚಾರಕ ಬಾಲಚಂದ್ರ,ಮುಖ್ಯ ಶಿಕ್ಷಕ ದೇವರಾಜು, ಸೇವಾ ಪ್ರತಿನಿಧಿಗಳಾದ ಗೌರಮ್ಮ,ಪುಷ್ಪಾವತಿ, ಒಕ್ಕೂಟದ ಅಧ್ಯಕ್ಷ ಬಸವರಾಜ್ ಮೊದಲಾದವರಿದ್ದರು.

ನಮ್ಮೂರ ಹಾಸ್ಟಲ್ ಸ್ಥಳಾಂತರ ಕೂಡದು.

ಪ್ರಾರಂಭವಾಗುವವರೆಗೂ ಸ್ಥಳ ಬಿಟ್ಟು ಕದಲೆವು;ಹೈಸ್ಕೂಲ್ ವಿದ್ಯಾರ್ಥಿಗಳು ಭಾಗಿ ಹಾಸ್ಟಲ್ ಸ್ಥಳಾಂತರ ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಸೌಲಭ್ಯಕ್ಕೆ ಎಸಗುವ ವಂಚನೆ -------------- ಹುಳಿಯಾರು : ಅಧಿಕಾರಿಗಳು ಕುಂಟುನೆಪ ಒಡ್ಡಿ ಸ್ಥಳಾಂತರ ಮಾಡಲು ಹೊರಟಿರುವ ನಮ್ಮೂರಿನ ಹಾಸ್ಟಲ್ ಸ್ಥಳಾಂತರಗೊಳಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ.ಅಲ್ಲದೆ ಈಗ ಹಾಸ್ಟಲ್ ಸೇರಲು ಸಿದ್ಧವಾಗಿರುವ ನಮ್ಮೂರ ಸುತ್ತಮುತ್ತಲ ಗ್ರಾಮಗಳ ೪೫ ಮಕ್ಕಳಿಗೆ ಇಲ್ಲಿ ಹಾಸ್ಟಲ್ ತೆರೆಸಿ ಅವಕಾಶ ಕಲ್ಪಿಸಿಯೇ ತೀರುವೆವು.ಅಲ್ಲಿಯವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಸ್ಥಳಿಯ ಪಂಚಾಯ್ತಿ ಪ್ರತಿನಿಧಿಗಳು, ಗ್ರಾಮಸ್ಥರು,ಸಂಘಸಂಸ್ಥೆಗಳ ಪ್ರತಿನಿಧಿಗಳು,ಫೋಷಕರುಗಳು ಆಹೋರಾತ್ರಿ ಧರಣಿ ಪ್ರಾರಂಭಿಸಿರುವ ಘಟನೆ ಹುಳಿಯಾರು ಹೋಬಳಿಯ ಹೊಯ್ಸಳ ಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋರನಕಣಿವೆಯಲ್ಲಿ ಜರುಗಿದೆ. ಹುಳಿಯಾರು ಹೋಬಳಿ ಬೋರನಕಣಿವೆಯಲ್ಲಿನ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ಸ್ಥಳಾಂತರ ವಿರೋಧಿಸಿ ಶೀಘ್ರ ಆರಂಭಕ್ಕೆ ಒತ್ತಾಯಿಸಿ ಸೋಮವಾರದಿಂದ ಅಹೋರಾತ್ರಿ ಧರಣಿ ಪ್ರಾರಂಭವಾಗಿದ್ದು ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು,ಪೋಷಕರುಗಳು ಅವರೊಂದಿಗೆ ಸ್ಥಳಿಯ ಪಂಚಾಯ್ತಿ ಪ್ರತಿನಿಧಿಗಳು ಧರಣಿ ಕೂತಿದ್ದಾರೆ. ಬೋರನಕಣಿವೆಯಲ್ಲಿನ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್