ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಿಂದೂ-ಮುಸ್ಲಿಂರು ಸಹೋದರರೇ ಹೊರತು ಶತ್ರುಗಳಲ್ಲ

ಭಾರತದಲ್ಲಿನ ಎಲ್ಲಾ ಹಿಂದೂ ಧರ್ಮದವರು ಹಾಗೂ ಅಲ್ಪಸಂಖ್ಯಾತ ಧರ್ಮಗಳಲ್ಲಿ ಒಂದಾದ ಮುಸ್ಲಿಂ ಧರ್ಮದವರು ಸದಾಕಾಲ ಅಣ್ಣತಮ್ಮಂದಿರಂತೆ ಸಹೋದರತ್ವದ ಬಾಂಧ್ಯವ್ಯ ಹೊಂದಿದ್ದಾರೆ ಹೊರತು ಎಂದಿಗೂ ಶತ್ರುಗಳಲ್ಲ,ನಾವೆಲ್ಲಾ ಭಾರತೀಯ ರೆಂ ಬ ವಿಶಾಲ ಮನೋಭಾವ ಹೊಂದಿ ಬಾಳುತ್ತಿದ್ದಾರೆಂದು    ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ ಕುಮಾರ್ ಅಭಿಪ್ರಾಯಪಟ್ಟರು.          ಸಿಂಗದಹಳ್ಳಿ ರಾಜ್ ಕುಮಾರ್ ಟಿಪ್ಪು ಭಾವಚಿತ್ರಕ್ಕೆ ಪುಷ್ಪ ಮಾಲಿಕೆ ಹಾಕಿ ಗೌರವಿಸಿದರು. ಹುಳಿಯಾರಿನ ಟಿಫ್ಫು ಸುಲ್ತಾನ್ ಪತ್ತಿನ ಸಹಕಾರ ಸಂಘದ ಕಛೇರಿಯಲ್ಲಿ ಆಯೋಜಿಸಿದ್ದ ಟಿಪ್ಪು ಸುಲ್ತಾನ್ ಪುಣ್ಯತಿಥಿ ಸಮಾರಂಭದಲ್ಲಿ ಅವರು ಮಾತನಾಡಿದರು. ಟಿಪ್ಪು ಅಪ್ರತಿಮ ದೇಶಭಕ್ತನಾಗಿದ್ದು ದೇಶಕ್ಕಾಗಿ ತನ್ನ ಪ್ರಾಣವನ್ನೆ ಅರ್ಪಣೆ ಮಾಡಿದ ಮಹಾನ್ ವ್ಯಕ್ತಿ.ಬ್ರಿಟೀಷರ ಅಧಿಕಾರಶಾಹಿ ಹಟ್ಟಹಾಸದ ವಿರುದ್ದ ಸಿಡಿದೆದ್ದ ಮುಸ್ಲಿಂ ನಾಯಕರಲ್ಲಿ ಪ್ರಮುಖ ಟಿಪ್ಪು. ಸಾಂಸ್ಕೃತಿಕ ನಗರಿ ಮೈಸೂರನ್ನು ಬ್ರಿಟೀಷರ ಅಧೀನಕ್ಕೆ ಕೊಡದೇ ಅವರ ವಿರುದ್ದ ಹಲವು ಯುದ್ದಗಳನ್ನು ಮಾಡಿ,ಆಂಗ್ಲರ ಸಂಚಿಗೆ ಬಲಿಯಾದ ವೀರ. ಮೈಸೂರ್ ಹುಲಿ ಎಂದೇ ದೇಶಾದ್ಯಂತೆ ಪ್ರಚುರವಾಗಿರುವ ಈತ ಕರ್ನಾಟಕದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದ್ದಾನೆ ಎಂದರು. ದೇಶಕ್ಕಾಗಿ ಹೋರಾಟ ಮಾಡಿ ಅಳಿದ ದೇಶಭಕ್ತನ ಹೆಸರಲ್ಲಿ ಇಂದು ಕೇಂದ್ರ ಸರ್ಕಾರ ಮೈಸೂರಿನಲ್ಲಿ ಟಿಪ್ಪು ಸುಲ್ತಾನ್ ಹೆಸರನ

ಬಂಗಾರಪೇಟೆ ರೈಲ್ವೆ ನಿಲ್ದಾಣಕ್ಕೆ ಇವತ್ತಿಗೆ 125 ವರ್ಷ

            ಬಂಗಾರಪೇಟೆ ರೈಲ್ವೆ ನಿಲ್ದಾಣಕ್ಕೆ ಇವತ್ತಿಗೆ 125 ವರ್ಷ ಆಯ್ತು. ಈ ರೈಲ್ವೆ ಸ್ಟೇಷನ್ ಬಗ್ಗೆ ಬಂಗಾರ ಪೇಟೆಯ ರಾಜಗೋಪಾಲ್ ಉತ್ತಮ ಲೇಖನ ವಿಜಯಕರ್ನಾಟಕ ಪತ್ರಿಕೆಯಲ್ಲಿ ಬರ್ದಿದ್ದಾರೆ. ಅದರ ಸಂಪೂರ್ಣ ವಿವರ ಓದಲು http://www.vijaykarnatakaepaper.com/Details.aspx?id= 6143&boxid=12151891 ಕ್ಲಿಕ್ ಮಾಡಿ. ಇಲ್ಲ ಕೆಳಗಿನ ಫೋಟೊ ಕ್ಲಿಕ್ ಮಾಡಿ ಎನ್ಲಾರ್ಜ್  ಮಾಡಿ.ನಮ್ಮ ಭಾರತೀಯ ರೈಲ್ವೆ ಬಗ್ಗೆ ಹೆಚ್ಚಿನದಾಗಿ ತಿಳಿದುಕೊಳ್ಳಿ.

10ನೇ ತರಗತಿ ಸಿಬಿಎಸ್ ಸಿಯಲ್ಲಿ ಹೇಮಂತ್ ಗೆ ಶೇ.90

ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನ ವಿದ್ಯಾರ್ಥಿಯಾದ ಎಂ.ಆರ್.ಹೇಮಂತ್ ಕುಮಾರ್ 10ನೇ ತರಗತಿ ಸಿಬಿಎಸ್ ಸಿ ಮಾಧ್ಯಮದಲ್ಲಿ ಶೇಕಡವಾರು 90 ಅಂಕಗಳಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದು,ಪೋಷಕರು ಹಾಗೂ ಶಾಲೆಯವರು ಅಭಿನಂದಿಸಿದ್ದಾರೆ.

ವೀರಶೈವ ಸಮುದಾಯದವರು ಸಮಾಜದ ಮುಖ್ಯವಾಹಿನಿಯಲ್ಲಿ ಹೆಚ್ಚು ಬಿಂಬಿತರಾಗಬೇಕು

ಪ್ರಸ್ತುತ ಸಮಾಜದಲ್ಲಿ ಎಲ್ಲಾ ಸಮುದಾಯದವರು ಸಂಘಟಿತರಾಗುವ ಮೂಲಕ ತಮ್ಮ ತಮ್ಮ ಸಮುದಾಯಗಳನ್ನು ಅಭಿವೃದ್ದಿಯತ್ತ ಕೊಂಡುಯ್ಯುತ್ತಿರುವ ಹಿನ್ನಲೆಯಲ್ಲಿ ವೀರಶೈವ ಸಮುದಾಯದ ನಾವುಗಳು ಮನೆಯಲ್ಲಿ ಕೂರದೆ ಸಂಘಟನೆಯಲ್ಲಿ ತೊಡಗಿ, ಸಮಾಜದ ಮುಖ್ಯವಾಹಿನಿಯಲ್ಲಿ ನಮ್ಮದೇ ಆದ ಹೆಚ್ಚಿನ ಛಾಪು ಮೂಡಿಸುವ ಕಾರ್ಯವಾಗಬೇಕಿದೆ ಎಂದು ಕೆಂಕೆರೆ ಬಸವಕೇಂದ್ರದ ಕೆ.ಎಂ.ಗಂಗಾಧರಯ್ಯ ಕರೆ ನೀಡಿದರು.   ಹುಳಿಯಾರು ಹೋಬಳಿ ವಿರಶೈವ ಸಮಾಜ ಹಾಗೂ ಬಸವೇಶ್ವರ ಪತ್ತಿನ ಸಹಕಾರ ಸಂಘದವತಿಯಿಂದ ಪಟ್ಟಣದ ವೀರಭದ್ರೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ವಿಶ್ವಗುರು ಶ್ರೀ ಬಸವೇಶ್ವರರ ಜಯಂತ್ಯೋತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿದರು. ಕೆಂಕೆರೆ ಬಸವಕೇಂದ್ರದ ಕೆ.ಎಂ.ಗಂಗಾಧರಯ್ಯನವರಿಂದ ವಿಶೇಷ ಉಪನ್ಯಾಸ ವೀರಶೈವ ಸಮುದಾಯದ ಜನ ಇಂದಿನ ಆಧುನಿಕ ಸಮಾಜದಲ್ಲಿ ನಡೆಯುವ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಹೆಚ್ಚಾಗಿ ಪಾಲ್ಗೊಳ್ಳದೇ ಹಿಂದೇಟಾಕುತ್ತಾ, ಇತರರಿಗೆ ವೀರಶೈವರಲ್ಲಿ ಒಗ್ಗಟ್ಟಿಲ್ಲವೇನೂ ಎನ್ನುವಂತೆ ಮಾಡುತ್ತಿರುವುದು ವಿಷಾದನೀಯ ಸಂಗತಿ ಎಂದರು. ಸಂಘಟಿತ ಮನೋಭಾವದ ಬಸವಣ್ಣನವರು ತಮ್ಮ ವಚನ ಸಾಹಿತ್ಯದ ಮೂಲಕ ಸಾಕಷ್ಟು ಜನರನ್ನು ಸಂಘಟಿಸಿ ಪ್ರಬುದ್ದಮಾನವಾಗಿ ಬೆಳೆದ ಮಹಾನ್ ವ್ಯಕ್ತಿ, ನಮ್ಮೆಲ್ಲರ ನಾಯಕನಾಗಿರುವಾಗಿ ಅವರ ಚಿಂತನೆ,ವಚನಗಳ ಸಾರವನ್ನು ಅರಿತು ಸಂಘಟಿತರಾಗಿ ಬಾಳಬೇಕಿದೆ ಎಂದರು. ಲಿಂಗಧಾರಣೆ

ಗಣಪತಿಗೆ ವಿಶೇಷ ಅಲಂಕಾರ

              ಹುಳಿಯಾರಿನ ಶ್ರೀಪ್ರಸನ್ನ ಗಣಪತಿ ದೇವಾಯಲದಲ್ಲಿ ಮಂಗಳವಾರದ ಅಂಗಾರಕ ಸಂಕಷ್ಟಹರ ಚತುರ್ಥಿ ನಡಿತು.ಈ ಗಣಪತಿ ಭಾರಿ ಪವರ್ ಫುಲ್.ಚೋಳರ ಕಾಲದ್ದು ಅಂತಾರೆ.ನಂಬಿದವರನ್ನು ಕೈ ಬಿಡುಲ್ಲ.ನಿನ್ನೆಯ ಪೂಜೆ ತಿಮ್ಲಾಪುರ ಸತೀಶ್ ನಡೆಸಿಕೊಟ್ಟರು.ಆಚಾರ್ ರಾಜಣ್ಣ ಗಣಪತಿಗೆ ವಿಶೇಷ ಅಲಂಕಾರ ಮಾಡಿದ್ರು.

ಹೆದ್ದಾರಿ ಬದಿಯ ಮಾನಸಿಕ ಅಸ್ವಸ್ಥ ವಿಶ್ವಾಸದ ಮನೆಗೆ!

  ಮಾನಸಿಕ ಅಸ್ವಸ್ಥರುಗಳು ಮನೆಮಂದಿಯಿಂದ ದೂರವಾಗಿ ಬೀದಿಯಲ್ಲಿ  ಅಲೆದಾಡ್ತಾಯಿರ್ತಾರೆ.ಅವರ ಬಗ್ಗೆ ಸಮಾಜ ನಿಕೃಷ್ಟವಾಗಿ ನೋಡುತ್ತೆ.ಅವರ ಜೀವನದ ಕಥೆ ಏನು,ಹೊಟ್ಟೆಪಾಡೇನು ಅಂತ ಚಿಂತಿಸುವ ಮಂದಿ ಇಲ್ಲವಾಗಿದ್ದಾರೆ.ಅವರನ್ನು ಗೇಲಿ ಮಾಡುತ್ತಾ ಕಲ್ಲು ಎಸೆಯುವರೇ ಹೆಚ್ಚಿನ ಮಂದಿ ಇದ್ದಾರೆ.ಇಂತಹ ಸಮಾಜದಲ್ಲಿ ಸ್ನಾನವಿಲ್ಲದೆ ಕೊಳಕು ಬಟ್ಟೆಯೊಂದಿಗೆ ತಿರುಗಾಡ್ತಾಯಿದ್ದ ಯುವಕನೊಬ್ಬನನ್ನು ಶಿರ್ವ ಶಂಕರಪುರದ 'ವಿಶ್ವಾಸದ ಮನೆಯ' ಕಾರ್ಯಕರ್ತರು ಅನಾಥಾಶ್ರಮಕ್ಕೆ ಸೇರಿಸಿದ್ದಾರೆ. ದಾರಿಯಲ್ಲಿ ಸಿಕ್ಕಿದ್ದನ್ನು ತಿನ್ನುತ್ತಾ ಅಲೆದಾಡುತ್ತಿದ್ದ ಸುಮಾರು 35ರ ವಯಸ್ಸಿನ ಮಾನಸಿಕ ಅಸ್ವಸ್ಥನನ್ನು ಶಂಕರಪುರ ವಿಶ್ವಾಸದ ಮನೆಯ ಕಾರ್ಯಕರ್ತರು ಬಲು ಸಾಹಸಪಟ್ಟು ಹಿಡಿದು ಪುನರ್ವಸತಿ ಕಲ್ಪಿಸಿದ್ದಾರೆ. ಆತನನ್ನು ಶುಚಿಗೊಳಿಸಿ ಶುಭ್ರ ಬಟ್ಟೆ ತೊಡಿಸಿ ಆಹಾರ ನೀಡಿ ಮಾನಸಿಕ ಚಿಕಿತ್ಸೆಗೆ ಒಳಪಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಬಗ್ಗೆ ಓದಿ.. ಹೆದ್ದಾರಿ ಬದಿಯ ಮಾನಸಿಕ ಅಸ್ವಸ್ಥ ವಿಶ್ವಾಸದ ಮನೆಗೆ! | ಪ್ರಜಾವಾಣಿ

10ನೇ ತರಗತಿ ಸಿಬಿಎಸ್ ಸಿಯಲ್ಲಿ ಜಯಶ್ರೀಗೆ ಶೇ.95

ಹೆಚ್.ಆರ್.ಜಯಶ್ರೀ ಹುಳಿಯಾರಿನ ಚಿರುಮುರಿರಘು ಅವರ ಮಗಳು ಹೆಚ್.ಆರ್.ಜಯಶ್ರೀ 10ನೇ ತರಗತಿ ಸಿಬಿಎಸ್ ಸಿಯಲ್ಲಿ ಗರಿಷ್ಠ 10ಕ್ಕೆ 10 ಅಂಕಗಳಿಸುವ ಮೂಲಕ ಎ1 ಗ್ರೇಡ್ ನಲ್ಲಿ ಪಾಸಲಾಗಿದ್ದಾಳೆ.ಈಕೆ ತುಮಕೂರಿನ ಜವಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದು ಶೇಕಡವಾರು 95 ಅಂಕಪಡೆದಿರುತ್ತಾಳೆ.ಗ್ರಾಮೀಣ ಪ್ರತಿಭೆಗಳು ಉತ್ತಮ ಅಂಕಗಳಿಸುತ್ತಿರುವುದು ಹೆಮ್ಮೆಯ ವಿಚಾರ ಅಲ್ವಾ ?

ಹಿಂದೂ ಸಮಾಜವನ್ನು ಅಂಧಕಾರದಿಂದ ಬೆಳಕಿನೆಡೆಗೆ ತಂದವರು ಬಸವಣ್ಣ

  ಸಮಾರಂಭದ ಉದ್ಘಾಟನೆಯಲ್ಲಿ ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮಿ,ಜಿಲ್ಲಾ ಬಸವ ಸೇನೆಯ ಜಿಲ್ಲಾಧ್ಯಕ್ಷ ಗಂಗರಾಜು ,ಕೆಂಕೆರೆ ಬಸವಕೇಂದ್ರದ ಗಂಗಾಧರಯ್ಯ,ವೀರಶೈವ ಸಮಾಜದ ಅಧ್ಯಕ್ಷ ಜಿ.ಎಂ.ನೀಲಕಂಠಯ್ಯ,ಕಾರ್ಯದರ್ಶಿ ಗಂಗಾಧರಯ್ಯ         ಹಿಂದೂ ಸಮಾಜದಲ್ಲಿದ್ದ ಅನೇಕ ಮೂಢನಂಬಿಕೆಗಳ ವಿರುದ್ದ ದನಿಯೆತ್ತಿ, ಯಾವುದೇ ಜಾತಿಯಲ್ಲಿ ಮೇಲುಕೀಳೆಂಬುದಿಲ್ಲ, ಎಲ್ಲಾ ಕುಲದವರು ಒಂದೇ ಎಂಬ ವಿಶಾಲ ಮನೋಭಾವವನ್ನು ಪ್ರತಿಯೊಬ್ಬ ಮಾನವರು ಹೊಂದಿ ತಮ್ಮತಮ್ಮ ಕಾಯದ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂದು ಸಾರುತ್ತಾ ಹಿಂದೂ ಸಮಾಜದಲ್ಲಿನ ಅಂಧಕಾರವನ್ನು ತೊಡೆದು ಬೆಳಕಿನೆಡೆಗೆ ಕೊಂಡೊಯ್ದವರು ಮಹಾನ್ ಮಾನವತಾವಾದಿ ಬಸವಣ್ಣ ಎಂದು ಕುಪ್ಪೂರು ಗದ್ದಿಗೆ ಸಂಸ್ಥಾನದ ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.   ಹುಳಿಯಾರು ಹೋಬಳಿ ವಿರಶೈವ ಸಮಾಜ ಹಾಗೂ ಬಸವೇಶ್ವರ ಪತ್ತಿನ ಸಹಕಾರ ಸಂಘದವತಿಯಿಂದ ಪಟ್ಟಣದ ವೀರಭದ್ರೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ವಿಶ್ವಗುರು ಶ್ರೀ ಬಸವೇಶ್ವರರ ಜಯಂತ್ಯೋತ್ಸವದ ಸಾನಿಧ್ಯದವಹಿಸಿದ್ದ ಅವರು ಆಶೀರ್ವಚನ ನೀಡಿ ಮಾತನಾಡಿದರು. ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮಿಜೀ ಆಶೀರ್ವಚನ ನೀಡಿದರು.  12ನೇ ಶತಮಾದಲ್ಲಿ ಹಿಂದೂ ಧರ್ಮದಲ್ಲಿ ಹೊಸ ಧರ್ಮಕ್ರಾಂತಿಯನ್ನು ಹುಟ್ಟು ಹಾಕಿದ ಬಸವಣ್ಣನವರ ವಚನಗಳ ಸಂದೇಶ ಇಂದಿಗೂ ಪ್ರಸ್ತುತವಾಗಿದ್ದು ಸಮಾಜದ ಬದಲಾವಣೆಗೆ ಅಗತ್ಯವಾಗಿವೆ. ಬ್ರಾಹ್ಮಣ ಕು

ಚಿಟ್ಟೆಗಳ ಹನಿಮೂನ್

ತುಮಕೂರಿನ ದೇವರಾಯನದುರ್ಗದಲ್ಲಿ ಚಿಟ್ಟೆಗಳ ಕಲರವ ಜೋರಾಗಿದ್ಯಂತೆ.ಈ ಬಗ್ಗೆ ವನ್ಯಜೀ ವಿ ಪ್ರೇಮಿ ಟಿ.ವಿ.ಎನ್.ಮೂರ್ತಿ ತೆಗೆದ ಫೋಟೊಗೆ ಜಗನ್ನಾಥ್ ಕಾಳೇನಹಳ್ಳಿ ಬರೆದ ಲೇಖನ ಓದಿ. ಈ ಬಗ್ಗೆ ಕೆಳಗಿನ ಲಿಂಕ್ ಕನೆಕ್ಟ್ ಆಗಿ....ಓದಿ http://epapervijayavani.in/Details.aspx?id=6137&boxid=17912531 ಅಥವಾ........... ಫೋಟೊ ಕ್ಲಿಕ್ಕಿಸಿ.. ..

ಇಂದು ಕ್ರಾಂತಿವೀರ ವಿನಾಯಕ ದಾಮೋದರ್ ಸಾವರ್ಕರ್ ಜನ್ಮ ದಿನ.

ಇಂದು ಕ್ರಾಂತಿವೀರ ವಿನಾಯಕ ದಾಮೋದರ್ ಸಾವರ್ಕರ್ ಜನ್ಮ ದಿನ.ಅವರ ವ್ಯಕ್ತಿತ್ವದ ಬಗ್ಗೆ ಬೆಳಕು ಚೆಲ್ಲುವ ಲೇಖನ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಈ ಬಗ್ಗೆ ಕೆಳಗಿನ ಲಿಂಕ್ ಕನೆಕ್ಟ್ ಆಗಿ.ಅವರ ಬಗ್ಗೆ ಓದಿ http://epapervijayavani.in/Details.aspx?id=6148&boxid=172331119 ಅಥವಾ........... ಫೋಟೊ ಕ್ಲಿಕ್ಕಿಸಿ....

ಸೂಟ್ ಕೇಸ್ ಕಾರ್

ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೇಳತೀರದಾಗಿದೆ.ಆದರೂ ಕೂಡ ಜನಕ್ಕೆ ದೊಡ್ಡ ಕಾರ್ ಗಳನ್ನು ಬಳಸುವುದು ಪ್ರತಿಷ್ಠೆಯ ವಿಚಾರವಾಗಿದೆ.ಉಳ್ಳವರ ಸಮಾಚಾರ ನಮಗ್ಯಾಕೆ ಅಂತ ಕಾರ್ ಪಾರ್ಕಿಂಗ್ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಲ್ಲು ಮುಂದಾದ ಯಲಹಂಕದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಹುಡುಗರು ಸೂಟ್ ಕೇಸ್ ಕಾರ್ ಸೇರಿದಂತೆ ಅನೇಕ ಬಹುಪಯೋಗಿ ತಂತ್ರಜ್ಞಾನ ಅಭಿವೃದ್ದಿಗೆ ಮುಂದಾಗಿದ್ದಾರೆ.ಈ ಬಗ್ಗೆ ಕೆಳಗಿನ ಲಿಂಕ್ ಕನೆಕ್ಟ್ ಆಗಿ..ಏನೇನ್ಮಾಡಿದ್ದಾರೆ ಅಂತ ಓದಿ http://epapervijayavani.in/Details.aspx?id=6143&boxid=173231984

ತಮ್ಮಡಿಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಶಂಕುಸ್ಥಾಪನೆ

ಹುಳಿಯಾರು ತಮ್ಮಡಿಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಶಂಕುಸ್ಥಾಪನ ಕಾರ್ಯಕ್ರಮ ನಡೆಯಿತು.ಯಳನಾಡು ಮಠದ ಸಿದ್ದರಾಮದೇಶಿಕೇಂದ್ರ ಸ್ವಾಮಿಗಳು, ಹಳೆಮನೆ ಶಿವನಂಜಪ್ಪ,ಹಂಪಾಳಿ ಮುಂತಾದವರೆಲ್ಲಾ ಭಾಗವಹಿದ್ದರು.ಉದಯವಾಣಿ ಪತ್ರಿಕೆಯಲ್ಲಿ ಕಿರಣ್ ಮೇ.27ರಂದು ಬರೆದಿರುವ ಸುದ್ದಿ ಇದು.

ರೈತರಿಗೆ ಬಡ್ಡಿರಹಿತ ಸಾಲ..5ಲಕ್ಷ ಸಾಲಕ್ಕೆ ಶೇ3% ಬಡ್ಡಿ..

ಹೊಸ ಸರ್ಕಾರ ಬಂತು.ಹೊಸದಾಗಿ ಅಧಿಕಾರ ಸ್ವೀಕಾರಿಸುವ ಮಂತ್ರಿ ತಮ್ಮ ತಂಮ್ಮ ಖಾತೆಗೆ ಸಂಬಂಧಿಸಿದಂತೆ ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡುವುದು ಒಂದ್ರಿತಿ ಸಂಪ್ರದಾಯ ಆಗ್ಬಿಟ್ಟಿದೆ.ಅದು ಜಾರಿ ಆಗುತ್ತೋ ಬಿಡುತ್ತೊ ಗೊತ್ತಿಲ್ಲ.ಅಗ್ಗದ ಪಬ್ಲಿಸಿಟಿಗೆ ಏನೇನೊ ಹೇಳೊದು,ಹಿಂದಿನ ಸರ್ಕಾರದ ಯೋಜನೆಗಳನ್ನು ತಡೆಹಿಡಿಯುವುದು ಮಾಮೂಲು ಪ್ರಕ್ರಿಯೆ.ರೈತರನ್ನಂತೂ ಯಾರೂ ಮರೆಯುವುದಿಲ್ಲ.ಅವರ ಸಾಲ ಮನ್ನ ಯೋಜನೆ ಆಗಾಗ ಜಾರಿಗೊಳ್ತಾನೆ ಇರುತ್ತೆ.ಎಷ್ಟು ಜನಕ್ಕೆ ಪ್ರಯೋಜನವಾಗಿ ಅನುಕೂಲವಂತರಾಗಿದ್ದಾರೆ ಗೊತಿಲ್ಲ.ಎಲ್ಲಾ ಯೋಜನೆಗಳು ಉಳ್ಳವರ ಪಾಲಾಗುತ್ತೆ. ಹಿಂದಿನ ಸಾಲಮನ್ನ ಯೋಜನೆಯಲ್ಲಿ ಕೂಡ ಅನೇಕ ಸಿರಿವಂತ ರೈತರ ಸಾಲಮನ್ನವಾಯ್ತು..ಹೀಗೆ ಎನೇನೋ ಆಗುತ್ತೆ. ಸರ್ಕಾರದ ಯೋಜನೆ ಏನು ಅಂತ ತಿಳಿಯಲಿಕ್ಕೆ ಕೆಳಗಿನ ಫೋಟೊ ಕ್ಲಿಕ್ ಮಾಡಿ...

ಇನ್ಮುಂದೆ ನೀವು ನೆಟ್ ನಲ್ಲಿ ನೋಡಿದ್ದೆಲ್ಲ ಟ್ರ್ಯಾಕ್ ಆಗುತ್ತೆ

ನೀವು Internetನಲ್ಲಿ ತಾಸುಗಟ್ಟಲೆ Brouse ಮಾಡಿದ್ದು ಯಾರಿಗೂ ಗೊತ್ತಾಗುಲ್ಲ ಅಂದುಕೊಂಡರೆ ತಪ್ಪು.ಇನ್ನುಮುಂದೆ ಅದು ಖಾಸಗಿಯಾಗಿ ಉಳಿಯೊಲ್ಲ.ಪ್ರತಿಯೋದು ಟ್ರ್ಯಾಕ್ ಆಗುತ್ತೆ.ನೀವು ಗಂಟೆಗಟ್ಟಲೆ ಕೂತು ಏನೇನು ನೋಡಿದ್ರಿ ,ಯಾವ್ಯಾವ ಸೈಟ್ ವಿಸಿಟ್ ಮಾಡುದ್ರಿ ಅನ್ನುವುದು ಟ್ರ್ಯಾಕ್ ಮಾಡಲು ಕೇಂದ್ರ ಸರ್ಕಾರ ಟೆಲಿಕಾಂ ಇಲಾಖೆಗೆ ಸೂಚಿಸಲಿದೆ.ಇದರಿಂದ ಉಗ್ರರ ಚಟುವಟಿಕೆ ತಡೆಯಬಹುದೆಂಬ ಆಲೋಚನೆ ಸರ್ಕಾರದ್ದು.ಆದರೆ ಇದರಿಂದ ನಮ್ಮಗಳ ಖಾಸಗಿತನಕ್ಕೆ ಧಕ್ಕೆಯಾಗುವುದಂತು ಖಂಡಿತ...ಸರ್ಕಾರದ ಆಲೋಚನೆ ಏನು ಅಂತ ತಿಳಿಯಲಿಕ್ಕೆ ಕೆಳಗಿನ ಫೋಟೊ ಕ್ಲಿಕ್ ಮಾಡಿ...

ಟಿಪ್ಪು ವಿವಿ ಕನಸು ಭಗ್ನ | ಪ್ರಜಾವಾಣಿ

  ರಾಜ್ಯದಲ್ಲಿ ತೀವ್ರ ವಾದ-ವಿವಾದ ಹುಟ್ಟುಹಾಕಿದ್ದ ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ `ಟಿಪ್ಪುಸುಲ್ತಾನ್ ಅಲ್ಪಸಂಖ್ಯಾತ ವಿಶ್ವವಿದ್ಯಾಲಯ'ಕ್ಕೆ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ ಅಧ್ಯಕ್ಷ ಪ್ರೊ. ಸುಖದೇವ್ ಥೋರಟ್ ನೇತೃತ್ವದ ತಜ್ಞರ ಸಮಿತಿ ` ಕೆಂಪು ಸಂಕೇತ ' ತೋರಿಸಿದೆ. ಶ್ರೀರಂಗಪಟ್ಟಣದಲ್ಲಿ ಟಿಪ್ಪುಸುಲ್ತಾನ್ ಅಲ್ಪಸಂಖ್ಯಾತ ವಿವಿ ಸ್ಥಾಪನೆಗೆ ಎಷ್ಟೇ ವಿರೋಧ ಬಂದರೂ ಈ ತೀರ್ಮಾನದಿಂದ ಹಿಂದೆ ಸರಿಯುವುದಿಲ್ಲ' ಎಂದು ಸಚಿವ ರೆಹಮಾನ್ ಖಾನ್ ಮತ್ತೊಮ್ಮೆ ಪ್ರಕಟಿಸಿದ ಬೆನ್ನಲ್ಲೆ ಪ್ರೊ. ಸುಖದೇವ್ ಥೋರಟ್ ನೇತೃತ್ವದ ತಜ್ಞರ ಸಮಿತಿ `ಕೆಂಪು ಸಂಕೇತ' ತೋರಿಸಿದೆ.ಸಂವಿಧಾನದ ಕಲಂ 30 (1) ರ ಅನ್ವಯ, ಭಾಷಾ ಅಥವಾ ಧಾರ್ಮಿಕ ಅಲ್ಪಸಂಖ್ಯಾತರು ತಮ್ಮ ಇಚ್ಛೆಗೆ ಅನುಗುಣವಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡುವ ಹಕ್ಕಿದೆ. ಆದರೆ, ಸರ್ಕಾರ ಭಾಷಾ ಅಥವಾ ಧಾರ್ಮಿಕ ಅಲ್ಪಸಂಖ್ಯಾತರ ಶಾಲೆ ಇಲ್ಲವೆ ಸಂಸ್ಥೆಗಳು ಎನ್ನುವ ಕಾರಣಕ್ಕೆ ಅನುದಾನ ಬಿಡುಗಡೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ.ಹೀಗಾಗಿ ಟಿಪ್ಪು ವಿವಿ ಕನಸು ಭಗ್ನವಾಗಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಕಳಗಿನ ಲಿಂಕ್ ಫಾಲೋ ಮಾಡಿ... ಟಿಪ್ಪು ವಿವಿ ಕನಸು ಭಗ್ನ | ಪ್ರಜಾವಾಣಿ

ಬಿಎಂಶ್ರೀ ಪ್ರತಿಷ್ಟಾನದ ವತಿಯಿಂದ ಪ್ರೋ.ಜಿ.ವೆಂಕಟಸುಬ್ಬಯ್ಯನವರಿಗೆ ಸನ್ಮಾನ

ಬಿಎಂಶ್ರೀ ಪ್ರತಿಷ್ಟಾನದ ವತಿಯಿಂದ ಪ್ರೋ.ಜಿ.ವೆಂಕಟಸುಬ್ಬಯ್ಯನವರನ್ನು ಸನ್ಮಾನಿಸಲಾಯಿತು. ತಾವು ಐವತ್ತು ವರ್ಷಗಳ ಹಿಂದೆ ವಿಜಯ ಕಾಲೇಜಿನಲ್ಲಿ ಪಾಠ ಮಾಡುತಿದ್ದ ಕ್ಷಣಗಳನ್ನು ನೆನೆಪಿಸಿಕೊಂಡು ಭಾವುಕರಾದರು.ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಫೋಟೊ ಕ್ಲಿಕ್ ಮಾಡಿ....Zoom ಮಾಡಿ ಓದಿ...

ಟಾಟಾ ಬಿರ್ಲಾಗಳು ಕೊಡುವ ಪ್ರಶಸ್ತಿಯಂತೆ ಬೂಕರ್‌ ಕೂಡ!

ಟಾಟಾ ಬಿರ್ಲಾಗಳು ಕೊಡುವ ಪ್ರಶಸ್ತಿಯಂತೆ ಬೂಕರ್‌ ಕೂಡ! Udayavani | May 26, 2013 ಅನಂತಮೂರ್ತಿ ಅವರಿಗೆ ಬೂಕರ್‌ ಪ್ರಶಸ್ತಿ 'ಜಸ್ಟ್‌ ಮಿಸ್‌' ಆಗಿದೆ. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆಂದು ಲಂಡನ್ನಿಗೆ ಹೋದ ಅವರು ಸಾಕಷ್ಟು ಅನುಭವಗಳೊಂದಿಗೆ ವಾಪಸಾಗಿದ್ದಾರೆ. ಅವುಗಳನ್ನು ಉದಯವಾಣಿ ಜೊತೆ ಹಂಚಿಕೊಂಡಿದ್ದಾರೆ. ತಮಗೆ ಬೂಕರ್‌ ಸಿಗುವುದಿಲ್ಲ ಎಂಬುದು ಮೊದಲೇ ಗೊತ್ತಾಗಿತ್ತು ಎಂಬ ಸ್ವಾರಸ್ಯಕರ ಸಂಗತಿಯನ್ನೂ ಹೇಳಿದ್ದಾರೆ.  *ಲಂಡನ್‌ ಅನುಭವ ಹೇಗಿತ್ತು? - ಹೋಗೋದು ತುಂಬ ಕಷ್ಟ ಆಯ್ತು. ನಾಲ್ಕು ಸಲ ಡಯಾಲಿಸಿಸ್‌ ಮಾಡಿಸ್ಕೋತಿದ್ದೆ. ಅಷ್ಟು ದೂರ ಹೋಗೋದು ಸಾಧ್ಯವೇ ಇರಲಿಲ್ಲ. ಡಾಕ್ಟರಿಗೆ ಹೇಳಿ ನೀರನ್ನೆಲ್ಲ ವಿಸರ್ಜನೆ ಮಾಡಿಕೊಂಡು ಹದಿನಾಲ್ಕು ಗಂಟೆ ಡಯಾಲಿಸಿಸ್‌ ಇಲ್ಲದೆ ಇರೋ ಹಾಗೆ ಮಾಡಿಕೊಂಡು ಹೋದೆ. ಇಷ್ಟೆಲ್ಲ ಕಷ್ಟ ಪಟ್ಟುಹೋಗಬೇಕಾ ಅನ್ನಿಸ್ತಿತ್ತು. ಆದರೆ ಮೊದಲ ಸಲ ಮಾತೃಭಾಷೆಯಲ್ಲಿ ಬರಿಯೋನನ್ನು ಕರೀತಿದ್ದಾರೆ. ಭಾರತವನ್ನು ನಾನು ಪ್ರತಿನಿಧಿಸುತ್ತಿದ್ದೀನಿ, ಕನ್ನಡದ ಮೂಲಕ ಅನ್ನಿಸಿದ್ದರಿಂದ ಹೋದೆ. *ನಿರೀಕ್ಷೆಗಳೇನಾದ್ರೂ ಇದ್ದವಾ? - ಹೋಗೋವಾಗಲೇ ನಂಗೊಂದು ಸತ್ಯ ಗೊತ್ತಿತ್ತು. ಹೆಚ್ಚೆಂದರೆ ನನ್ನ ಎರಡೋ ಮೂರೋ ಪುಸ್ತಕ ಓದಿ ಆಯ್ಕೆಮಾಡಿದ್ದಾರೆ. ಅನುವಾದ ಆಗಿರೋದೇ ಅಷ್ಟು. ಸೂರ್ಯನ ಕುದುರೆ, ಸಂಸ್ಕಾರ ಮತ್ತು ಭಾರತೀಪುರ. ಅದು ಏನೇನೂ ಸಾಲದು. ಅಷ್ಟನ್ನೇ ಓದಿಕೊಂಡು ಆಯ್ಕೆ ಮಾಡಿದೋರು ಯಾರು ಅನ್ನೋದೂ

ಇತರೆ ಪಕ್ಷದೊಂದಿಗೆ ಯಡಿಯೂರಪ್ಪ ಮೈತ್ರಿ

ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಸೋಲಿನಿಂದ ಕಂಗೆಟ್ಟಿರುವ ಯಡಿಯೂರಪ್ಪ ಸಧ್ಯ ಬರಲಿರುವ ಲೋಕಸಭೆ ಚುನಾವಣೆಗೆ ಇತರೆ ಪಕ್ಷದೊಂದಿಗೆ ಮೈತ್ರಿ ಸ್ಥಾಪಿಸಿ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಓದಿ........

ಅಭಿವೃದ್ದಿ ಕಾರ್ಯಕ್ಕೆ ಮುಂದಡಿಯಿಡುವೆ:ಸಿಬಿಎಸ್

ಈ ತಾಲ್ಲೂಕಿನ ಎಲ್ಲಾ ಜನತೆಯ ಆಶಿರ್ವಾದದಿಂದ ನಾನು ಮತ್ತೊಮ್ಮೆ ಪುನಾರಾಯ್ಕೆಯಾಗಿದ್ದು ಜನರ ಪ್ರೀತಿವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ.ತಾಲ್ಲೂಕಿನ ಅಭಿವೃದ್ದಿಗೆ ಅನೇಕ ಯೋಜನೆಗಳಿದ್ದು ಸಾಕಾರಗೊಳ್ಳಿಸುವೆ ಎಂದರು.......................ಹೆಚ್ಚಿನ ವಿವರಕ್ಕೆ ಕೆಳಗಿನ ಫೋಟೊ ಕ್ಲಿಕ್ ಮಾಡಿ...ಓದಿ

ಸಿದ್ರಾಮಯ್ಯ ಸಿಎಂ:ಸಿಹಿ ಹಂಚಿಕೆ

ಉಚಿತ ಆರೋಗ್ಯ ತಪಾಸಣಾ ಶಿಬಿರ

ಹುಳಿಯಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುಮಕೂರು ಜಿಲ್ಲಾ ಆರ್.ಪಿ.ಚೆಸ್ಟ್ ಕ್ಲಿನಿಕ್ ಅವರ ಸಂಯುಕ್ತಾಶ್ರಯದಲ್ಲಿ ಇಂದು ಭಾನುವಾರ ಬೆಳಿಗ್ಗೆ ಉಚಿತ ಆರೋಗ್ಯ ಶಿಬಿರ ನಡೆಯಲಿದೆ.            ಶಿಬಿರದಲ್ಲಿ ಪಲ್ಮನೋಲಾಜಿಸ್ಟ್ ತಜ್ಞ ಡಾ||ರವಿಕುಮಾರ್,ಆಡಳಿತ ವೈದ್ಯಾಧಿಕಾರಿ ಡಾ||ಮಂಜುನಾಥ್, ಡಾ|| ಷಣ್ಮುಗ, ಡಾ||ಸದಾಶಿವಯ್ಯ,ಅರವಳಿಕೆ ವೈದ್ಯೆ ಡಾ||ಚಂದನ ಭಾಗವಹಿಸಲಿದ್ದು,ಉಚಿತವಾಗಿ ಅಸ್ತಮಾ, ಎದೆರೋಗ, ನಿದ್ರಾರೋಗ, ಟಿ.ಬಿ.ನ್ಯೋಮೋನಿಯಾ,ಎದೆಯ ಕ್ಯಾನ್ಸರ್,ಏಡ್ಸ್,ಅಲರ್ಜಿ,ಸೀನು, ಇತರೆ ಎಲ್ಲಾ ಖಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಪರಿಹಾರ ಕ್ರಮಗಳನ್ನು ನೀಡಲಿದ್ದು, ಹುಳಿಯಾರು ಹಾಗೂ ಸುತ್ತಮುತ್ತಲಿನ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಶಿಬಿರದಲ್ಲಿ ಪಾಲ್ಗೊಂಡು ಇದರ ಉಪಯೋಗ ಪಡೆಯುವಂತೆ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.9449605557,9448342916 ಸಂಪರ್ಕಿಸಬಹುದಾಗಿದೆ.

ಬಸವಜಯಂತಿ ಮಹೋತ್ಸವ

ಹುಳಿಯಾರು  ಹೋಬಳಿ ವಿರಶೈವ ಸಮಾಜ ಹಾಗೂ ಬಸವೇಶ್ವರ ಪತ್ತಿನ ಸಹಕಾರ ಸಂಘದವರು ವಿಶ್ವಗುರು ಶ್ರೀ ಬಸವೇಶ್ವರರ ಜಯಂತೊತ್ಸವವನ್ನು ಪಟ್ಟಣದ ವೀರಭದ್ರೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ನಾಳೆ(ತಾ.27) ಸೋಮವಾರ ಮಧ್ಯಾಹ್ನ ಹಮ್ಮಿಕೊಂಡಿದ್ದಾರೆ. ಕುಪ್ಪೂರು ಗದ್ದಿಗೆ ಸಂಸ್ಥಾನದ ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯುವ ಜಯಂತೋತ್ಸವದ ಅಧ್ಯಕ್ಷತೆಯನ್ನು ವೀರಶೈವ ಸಮಾಜದ ಅಧ್ಯಕ್ಷ ಜಿ.ಎಂ.ನೀಲಕಂಠಯ್ಯ ವಹಿಸಲಿದ್ದು, ಮಾಜಿ ಶಾಸಕರುಗಳಾದ ಕೆ.ಎಸ್.ಕಿರಣ್ ಕುಮಾರ್,ಜೆ.ಸಿ.ಮಾಧುಸ್ವಾಮಿ,ವಿರಶೈವ ಸಮಾಜದ ಕಾರ್ಯದರ್ಶಿ ಗಂಗಾಧರಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಜಿಲ್ಲಾ ಬಸವ ಸೇನೆಯ ಜಿಲ್ಲಾಧ್ಯಕ್ಷ ಗಂಗರಾಜು ಅನುಭಾವ ನೀವೇದನೆ ನಡೆಸಿಕೊಡುವರು. ಜಯಂತೊತ್ಸವದ ಅಂಗವಾಗಿ ಇದೇ ದಿನ ಸಂಜೆ ಬಸವೇಶ್ವರ ಅಷ್ಠಮಂಡಲೋತ್ಸವ ನಡೆಯಲಿದ್ದು,ರಾಜ್ಯ ಪ್ರಶಸ್ತಿ ವಿಜೇತ ಬೆಳ್ತಂಗಡಿ ಗಿರಿಧರ ಶೆಟ್ಟಿ ಬೊಂಬೆ ಬಳಗದ ಹಾಲಕ್ಕಿ ಕುಣಿತ,ನಾದಸ್ವರ,ಕಡೂರಿನ ಬಸವಶ್ರೀ ಮಹಿಳಾ ತಂಡದವರಿಂದ ವೀರಗಾಸೆ,ಚಿಕ್ಕನಹಳ್ಳಿ ಶ್ರೀ ವಿರಭದ್ರೇಶ್ವರ ಜಾನಪದ ಕಲಾವಿದರ ಸಂಘದಿಂದ ವೀರಭದ್ರನ ಕುಣಿತ,ಕೆಂಕೆರೆ ಬಸವಕೇಂದ್ರ ಹಾಗೂ ಅಕ್ಕಮಹಾದೇವಿ ಮಹಿಳಾ ಸಂಘದಿಂದ ವಚನ ಗಾಯನ ಸೆರಿದಂತೆ ವಿವಿಧ ಜಾನಪದ ಕಲಾತಂಡಗಳಿಂದ ವೆವಿಧ್ಯಮಯ ಕಾರ್ಯಕ್ರಮಗಳು, ಅಮೋಘ ಮದ್ದುಗುಂಡಿನ ಪ್ರದರ್ಶನ ಉತ್ಸವದುದ್ದಕ್ಕೂ ನಡೆಯಲಿದ್ದು, ನಂತರ ಅನ್ನಸಂತರ್ಪಣೆ ಜರುಗಲಿದೆ.

ಜ್ಞಾನ ದೀವಿಗೆ; ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಭೋದನೆ

ಕೆ.ಎನ್.ರಾಜಣ್ಣಗೆ ಸಚಿವ ಸ್ಥಾನ ನೀಡಲಿ ಒತ್ತಾಯ

ಹುಳಿಯಾರಿನ ಕಾಂಗ್ರೆಸ್ ಕಾರ್ಯಕರ್ತರು ಮಧುಗಿರಿ ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣಗೆ ಸಚಿವ ಸ್ಥಾನ ನೀಡಲಿ ಒತ್ತಾಯಿಸಿದರು.ಇದರ ವಿವರ ಉದಯಯವಾಣಿ (ಮೇ25)ಪತ್ರಿಕೆಯಲ್ಲಿದೆ . ಇದನ್ನು ಓದಬೇಕೆಂದರೆ ಕೆಳಗಿನ ಫೋಟೊ ಕ್ಲಿಕ್ ಮಾಡಿ....Zoom ಮಾಡ್ತಾ ಹೋಗಿ... .

ಪದವಿ ತರಗತಿಗಳ ಪ್ರವೇಶಾತಿ ಆರಂಭ

ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2013-14ನೇ ಸಾಲಿನ ಬಿಎ,ಬಿಎಸ್ಸಿ,ಬಿಬಿಎಂ,ಬಿಕಾಂ ಪದವಿ ತರಗತಿಗಳ ದಾಖಲಾತಿ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಬಿಎ ವಿಭಾಗದಲ್ಲಿ ಹೆಚ್.ಇ.ಪಿ/ಹೆಚ್.ಇ.ಕೆ/ಹೆಚ್.ಇ.ಇ ಹಾಗೂ ಬಿಎಸ್ಸಿ ವಿಭಾಗದಲ್ಲಿ ಪಿಎಂಸಿ ವಿಷಯಗಳ ಆಯ್ಕೆಗಳಿದ್ದು ತುಮಕೂರು ವಿಶ್ವವಿದ್ಯಾಲಯದ ನಿಗದಿತ ಪಠ್ಯಾನುಸಾರ ವಿಷಯಗಳ ಆಯ್ಕೆಗಳನ್ನೊಳಗೊಂಡಿದ್ದು ಕಂಪ್ಯೂಟರ್ ಕಲಿಕೆ,ಸ್ಪೋಕನ್ ಇಂಗ್ಲಿಷ್ ಕಲಿಕೆ ಸೌಲಭ್ಯವಿದ್ದು ವಿದ್ಯಾರ್ಥಿಗಳು ಕಾಲೇಜಿನ ಕಛೇರಿ ಸಮಯದಲ್ಲಿ ಅರ್ಜಿಗಳನ್ನು ಪಡೆಯುವಂತೆ ಪ್ರಾಂಶುಪಾಲ ಆರ್.ಮೂಗೇಶಪ್ಪ(08133-256205) ಕೋರಿದ್ದಾರೆ.

ಹನಿಮುತ್ತು

ದುಬೈನಲ್ಲಿರುವ ಆರತಿ ಘಟಿಕಾರ್ ಬರೆದಿರುವ ಹನಿಗವನಗಳು ಸಖಿ ಪತ್ರಿಕೆಯಲ್ಲಿ ಈ ಮೊದಲು ಪ್ರಕಟವಾಗಿತ್ತು

ಹುಳಿಯಾರಿನಲ್ಲಿ ಶಂಕರಜಯಂತಿ

ಅದ್ವೈತ ತತ್ವವನ್ನು ಪ್ರತಿಪಾದಿಸಿ ಸನಾತನ ಹಿಂದೂ ಧರ್ಮವನ್ನು ಜಗತ್ತಿಗೆ ಸಾರಿ ಹೇಳಿದ, ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದ ಮಹಾದಾರ್ಶನಿಕ ಶಂಕರಭಗವತ್ಪಾದರ ಜಯಂತಿಯನ್ನು ಹುಳಿಯಾರಿನ ವಿಪ್ರಸಮಾಜದಿಂದ ಬುಧವಾರದಂದು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಪಟ್ಟಣದ ಶ್ರೀ ಸೀತಾರಾಮ ಕಲ್ಯಾಣ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಶಂಕರರ ಭಾವಚಿತ್ರಕ್ಕೆ ಅಭಿಷೇಕ ಸಮೇತ ವಿಶೇಷ ಪೂಜೆ ಸಲ್ಲಿಸಲಾಯಿತು.ವಿಪ್ರಮಹಿಳೆಯರಿಂದ ಶಂಕರಾಚಾರ್ಯ ವಿರಚಿತ ಸೌಂದರ್ಯಲಹರಿ,ಆನಂದಸಿಂಧು,ರಾಮ ಭುಜಂಘಾಪ್ರಯಾತ,ಹರಿಸ್ತುತಿ ಹಾಗೂ ಶಿವಾನಂದಲಹರಿಯನ್ನು ಸಾಮೂಹಿಕವಾಗಿ ಪಠಿಸಲಾಯಿತು.ಶಂಕರಭಜನೆ,ಮಹಾಮಂಗಳಾರತಿ ನಂತರ ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು.ಶ್ರೀ ಸೀತಾರಾಮ ಪ್ರತಿಷ್ಠಾನದ ಅಧ್ಯಕ್ಷ ನರೇಂದ್ರಬಾಬು.ಉಪಾಧ್ಯಕ್ಷ ಎಮ್.ಎ.ಲೋಕೇಶಣ್ಣ,ಕಾರ್ಯದರ್ಶಿ ವಿಶ್ವನಾಥ್,ರಂಗನಾಥ್ ಪ್ರಸಾದ್,ಅರ್ಚಕರಾದ ಗುಂಡಣ್ಣ, ಸತ್ಯನಾರಾಯಣ,ನಾಗರಾಜ್ ಮಾಸ್ಟರ್ ಸೇರಿದಂತೆ ಸಮಾಜ ಭಾಂದವರು ಭಾಗವಹಿಸಿದ್ದರು.

ಶಂಕರ ಜಯಂತಿ

ಶಂಕರ ಜಯಂತಿಯನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ ಆಚರಿಸುತ್ತಾರೆ. ಆದಿ ಶಂಕರ ಸುಮಾರು ೮ ನೇ ಶತಮಾನದಲ್ಲಿ ಜೀವನ ನಡೆಸಿದರು ಎಂದು ಹೇಳುತ್ತಾರೆ. ಇವರು ಕೇರಳದ ಕಾಲಡಿ ಎಂಬ ಊರಲ್ಲಿ ಜನಿಸಿದ್ದು ಇವರ ಜೀವಿತದ ಅವಧಿ ಕೇವಲ ೩೨ ವರ್ಷವಾದರೂ ಸಹ ಇವರು ಮಾಡಿರುವ ಸಾಧನೆ ಅಪಾರ. .ಆದಿಶಂಕರರು ಭಗವದ್-ಗೀತೆ,ಉಪನಿಶತ್ ಹಾಗು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಅಚಾರ್ಯರಾದರು.. ಅದ್ವೈತ ಅನುಯಾಯಿಗಳಿಗೆ ಇವರೇ ಆದಿ ಗುರುಗಳು. ಶೈವ,ವೈಷ್ಣವ,ಶಾಕ್ತ,ಗಾಣಪತ್ಯ,ಸೌರ ಹಾಗು ಸ್ಕಾಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು. ಶಂಕರರು ಬಾದರಾಯಣರ "ಬ್ರಹ್ಮಸೂತ್ರ" (ವೇದಾಂತಸೂತ್ರ)ಗಳಿಗೆ ಭಾಷ್ಯವನ್ನು ರಚಿಸಿದರು. ಇವರು ರಚಿಸಿದ "ಭಜ ಗೋವಿಂದಮ್" ಸ್ತೋತ್ರ ಅತ್ಯಂತ ಪ್ರಸಿದ್ಧವಾದುದು. ಹಲವಾರು ಇತರ ಸ್ತೋತ್ರಗಳನ್ನೂ ಸಹ ಶಂಕರರು ರಚಿಸಿದ್ದಾರೆ. ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಶಂಕರಾಚಾರ್ಯರು ಜೀವಿತದ ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆಗಳಿಗೆ ಸಂಚರಿಸಿ ಗೀತಾಚಾರ್ಯ ಶ್ರೀಕೃಷ್ಣನ ಸಿದ್ಧಾಂತವಾದ "ಅದ್ವೈತ" ತತ್ವವನ್ನು ಪ್ರತಿಪಾದಿಸಿ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು. ಹಿಂದೂ ಧರ್ಮದ ಪ್ರಚಾರಕ್ಕಾಗಿ ಶಂಕರರು ಸ್ಥಾಪಿಸಿದ ನಾಲ್ಕು ಪೀಠಗಳು ಉತ್ತರದಲ್ಲಿ: ಬದರಿ ಪೀಠ - ಉತ್ತರಾಮ್ನಾಯ ಜ್ಯೋತಿರ್ ಮಠ ದಕ್ಷಿಣದಲ್ಲಿ: ಶ

ಬುಕ್ಕಾಪಟ್ಟಣದ ಸಾಕ್ಷಿಹಳ್ಳಿಯಲ್ಲಿ ಜಾತ್ರೆ

ಬುಕ್ಕಾಪಟ್ಟಣದ ಹತ್ತಿರ ಇರುವ ಸಾಕ್ಷಿಹಳ್ಳಿಯಲ್ಲಿ ಜಾತ್ರೆ ಶುರುವಾಗಿದೆ.ತುಂಬಾ ಜೋರಾಗಿ ನಡೆಯುತ್ತಂತ್ತೆ.ಇಲ್ಲಿ ರಥೊತ್ಸವ ಮಧ್ಯರಾತ್ರಿ ನಡೆಯುತ್ತ.ನಿಮಗೆ ಆಸಕ್ತಿಯಿದ್ದರೆ ಹೋಗಿಬನ್ನಿ.

ಕೆಂಕೆರೆ : ಅದ್ದೂರಿ ಚನ್ನಬಸವೇಶ್ವರ ಸ್ವಾಮಿ ರಥೋತ್ಸವ

                  ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀಚನ್ನಬಸವೇಶ್ವರ ಸ್ವಾಮಿಯ ರಥೋತ್ಸವ ಮೇ.13 ರ ಸೋಮವಾರ ಮಧ್ಯಾಹ್ನ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ನೂರಾರು ಭಕ್ತರ ಹರ್ಷೋದ್ಗಾರದ ಜೊತೆ ವೈಭಯುತವಾಗಿ ಜರುಗಿತು.        ಜಾತ್ರೆಯ ಅಂಗವಾಗಿ ಮೇ.11ರ ಶನಿವಾರ ಬೆಳಿಗ್ಗೆ ಸ್ವಾಮಿಯವರ ಧ್ವಜಾರೋಹಣ ನಡೆದಿದ್ದು,ಇದೇ ದಿನ ಸ್ವಾಮಿಯ ಮೂಲಸ್ಥಾನವಾದ ಕೆಂಕೆರೆಯಿಂದ 3 ಕಿ.ಮೀ.ದೂರದ ಪುರದಮಠಕ್ಕೆ ಸ್ವಾಮಿ ಸೇರಿದಂತೆ ಗ್ರಾಮದೇವತೆ ಲೋಕಮಾತೆ ಕಾಳಮ್ಮ ,ದಮ್ಮಡಿಹಟ್ಟಿ ಈರಬೊಮ್ಮಕ್ಕ ದೇವಿಯವರೊಂದಿಗೆ ಕಾಲ್ನಡಿಗೆಯಲ್ಲಿ ಹೋಗಿ, ನಂತರ ಮೇ.12ರ ಭಾನುವಾರ ಬೆಳಗಿನ ಜಾವ ಸ್ವಾಮಿಯ ಗಂಗಾಪ್ರವೇಶ,ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾಕಾರ್ಯಗಳೊಂದಿಗೆ ಪ್ರಸಾದ ವಿನಿಯೋಗ ನಡೆದು,ಅದೇ ದಿನ ಕೆಂಕೆರೆ ಗ್ರಾಮಕ್ಕೆ ಆಗಮಿಸಿದ ಸ್ವಾಮಿಯನ್ನು ನಡೆಮುಡಿಯೊಂದಿಗೆ ದೇವಾಲಯಕ್ಕೆ ಕರೆತರಲಾಗಿತ್ತು.ಇಂದು ಮುಂಜಾನೆ ಮಹದೇವಮ್ಮ , ಚನ್ನಬಸವಯ್ಯ ದಂಪತಿಗಳು ಹಾಗೂ ಈಶ್ವರಪ್ಪ ನವರಿಂದ ರಥಕ್ಕೆ ಪುಣ್ಯಾಹ ಕಾರ್ಯ ನಡೆಸಿ ಕಳಸ ಸ್ಥಾಪಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ಸ್ವಾಮಿಯನ್ನು ಬಸವನ ಉತ್ಸವ ಹಾಗೂ ಧ್ವಜದ ಕುಣಿತದೊಂದಿಗೆ ಮೆರವಣಿಗೆಯಲ್ಲಿ ಕರೆತಂದು,ರಂಗುರಂಗಿನ ಬಾವುಟ,ಎಳನೀರ ಗೊಂಚಲು,ಬಾಳೆಗೊನೆ,ಕೊಬ್ಬರಿಹಾರ ಸೇರಿದಂತೆ ವಿವಿಧ ಮಾದರಿಯ ಹೂ,ಹಾರಗಳಿಂದ ಶೃಂಗರಿಸಿದ್ದ ರಥಕ್ಕೆ ಕಾಳಿಕಾಂಬ ದೇವಿಯೊಂದಿಗ

ಪೋಟೊ ಕ್ಯಾಪ್ಷನ್

ಚಿ.ನಾ.ಹಳ್ಳಿ ಕ್ಷೇತ್ರದ ಶಾಸಕರಾಗಿ 2ನೇ ಬಾರಿ ಆಯ್ಕೆಯಾದ ಜೆಡಿಎಸ್ ನ ಸಿ.ಬಿ.ಸುರೇಶ್ ಬಾಬು ಹುಳಿಯಾರಿನ ಶ್ರೀ ದುರ್ಗಮ್ಮ ದೇವಿ ಸನ್ನಿಧಿಗೆ ತಮ್ಮ ಕಾರ್ಯಕರ್ತರೊಂದಿಗೆ ಆಗಮಿಸಿ ಪೂಜೆ ಸಲ್ಲಿಸಿದರು.         ಕಾಂಗ್ರೆಸ್ ಬಹುಮತ ಪಡೆದು ಸಿದ್ದರಾಮಯ್ಯನವರಿಗೆ ಸಿಎಂ ಸ್ಥಾನ ನೀಡಿರುವ ಹಿನ್ನಲೆಯಲ್ಲಿ ಹುಳಿಯಾರಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಧನುಷ್ ರಂಗನಾಥ್,ಎಲ್.ಆರ್.ಚಂದ್ರಶೇಖರ್,ಹೊಸಳ್ಳಿ ಅಶೋಕ್,ಸಿದ್ದರಾಮಯ್ಯ ನೇತೃತ್ವದಲ್ಲಿ ಬೈಕ್ ನಲ್ಲಿ ಮೆರವಣಿಗೆ ನಡೆಸಿ,ಸಂಭ್ರಮಿಸಿದರು.

ಕೆಂಕೆರೆ ಚನ್ನಬಸವೇಶ್ವಸ್ವಾಮಿ ರಥೋತ್ಸವ

ಹುಳಿಯಾರು  ಹೋಬಳಿ ಕೆಂಕೆರೆ ಗ್ರಾಮದ ಶ್ರೀಚನ್ನಬಸವೇಶ್ವರ ಸ್ವಾಮಿಯ ರಥೋತ್ಸವ ಇಂದು(ತಾ.13) ಸೋಮವಾರ ನಡೆಯಲಿದೆ. ರಥೋತ್ಸವದ ಬೆಳಿಗ್ಗೆ 6 ಗಂಟೆಗೆ ಮಹದೇವಮ್ಮ ಮತ್ತು ಚನ್ನಬಸವಯ್ಯ,ಈಶ್ವರಪ್ಪ ನವರಿಂದ ರಥಕ್ಕೆ ಪುಣ್ಯದ ಕಾರ್ಯ ನಂತರ ಕಳಸ ಸ್ಥಾಪನೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಗ್ರಾಮದೇವತೆ ಕಾಳಮ್ಮ,ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ,ಗೌಡಗೆರೆ ದುರ್ಗಮ್ಮ ದೇವಿಯ ಸಮ್ಮುಖದಲ್ಲಿ ಸ್ವಾಮಿಯವರ ರಥೋತ್ಸವ ನಡೆಯಲಿದೆ.

ಸಿದ್ದು ಅಭಿಮಾನಿಗಳನ್ನ ನೋಡಿ ಸ್ವಾಮಿ

ಸಿದ್ದರಾಮಯ್ಯನವರು ಸಿಎಂ ಆಗಿರುವ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಗಿರುವುದನ್ನು ಹುಳಿಯಾರಿನ ಅಂಗಡಿಯೊಂದರ ಕಟ್ಟೆ ಮೇಲೆ ಕುಳಿತು ಧೀರ್ಘವಾಗಿ ಓದುತ್ತಿರುವ ಅಭಿಮಾನಿ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸುವ ವಿಷಯ ತಿಳಿದ ಹುಳಿಯಾರಿನ ಪುಟಾಣಿ ಪೋರನೊಬ್ಬ ಸಿದ್ದರಾಮಯ್ಯನವರ ಉಡುಪು ಧರಿಸಿ ಸಂಭ್ರಮಿಸಿದ್ದು ಹೀಗೆ.

ಸತತ 2ನೇ ಬಾರಿ ಜೆಡಿಎಸ್ ಗೆ ಒಲಿದ ಚಿ.ನಾ.ಹಳ್ಳಿ ಕ್ಷೇತ್ರ

ಚಿ.ನಾ.ಹಳ್ಳಿ ಕ್ಷೇತ್ರದಲ್ಲಿ ಒಂದು ಬಾರಿ ಗೆದ್ದವರು ಪುನ: ಗೆಲ್ಲುವುದಿಲ್ಲ ಎಂಬ ಮೌಡ್ಯತೆಯನ್ನು ಹುಸಿಗೊಳಿಸುವ ಮೂಲಕ ಜೆಡಿಎಸ್ ಅಭ್ಯರ್ಥಿ ಸಿ.ಬಿ.ಸುರೇಶ್ ಬಾಬು 60,759 ಮತಗಳನ್ನು ಪಡೆದು ಸತತ ಎರಡನೇ ಬಾರಿ ವಿಜಯಯ ಮಾಲೆ ಧರಿಸಿ.ಮರು ಆಯ್ಕೆಯಾಗಿ ಕ್ಷೇತ್ರದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಈ ಬಾರಿಯ ಚಿ.ನಾ.ಹಳ್ಳಿ ಕ್ಷೇತ್ರದ ಮತ ಎಣಿಕೆಯಲ್ಲಿ ಕೆಜೆಪಿ,ಜೆಡಿಎಸ್,ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿದ್ದು ಮೊದಲ ಹಂತದ ಮತಎಣಿಕೆ ಸಂಧರ್ಭದಲ್ಲಿ ಕೆಜೆಪಿ ಅಭ್ಯರ್ಥಿ ಮಾಧುಸ್ವಾಮಿ ಅವರು ಮುಂದಿರುವುದು ಕಂಡು ಬಂದಿದ್ದು, ಬಿಜೆಪಿ ಹಾಗೂ ಕೆಜೆಪಿ ಪಕ್ಷಗಳ ತೀವ್ರ ಪೈಪೂಟಿಯ ನಡುವೆಯೂ ನಂತರದ ಸುತ್ತುಗಳಲ್ಲಿ ಜೆಡಿಎಸ್ ಅಂತರವನ್ನು ಕಾಯ್ದುಕೊಂಡು ಕೆಜೆಪಿಯ ಮಾಧುಸ್ವಾಮಿಯವರಿಗಿಂತ 11,139 ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಜೆಡಿಎಸ್ ಅಭ್ಯರ್ಥಿ ಸಿ.ಬಿ.ಸುರೇಶ್ ಬಾಬು ಜಯಶೀಲರಾಗಿದ್ದು ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ. ಕಳೆದ ಬಾರಿ 67046 ಮತಗಳನ್ನು ಪಡೆದು 29044 ಮತಗಳ ಅಂತರದಲ್ಲಿ ಚುನಾಯಿತರಾಗಿದ್ದ ಸಿಬಿಎಸ್, ಈ ಬಾರಿ ಬಿಜೆಪಿ ಹಾಗೂ ಕೆಜೆಪಿ ಪಕ್ಷಗಳ ತೀವ್ರ ಪೈಪೂಟಿಯ ನಡುವೆಯೂ 11,139 ಮತಗಳ ಅಂತರದಲ್ಲಿ ಜಯಗಳಿಸಿದ್ದು ಮೊದಲನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಯುನಿಂದ ಸ್ಪರ್ಥಿಸಿದ್ದ ಮಾಧುಸ್ವಾಮಿ ಮೂರನೇ ಸ್ಥಾನ ಪಡೆದಿದ್ದರು.ಆದರೆ ಈ ಬಾರಿ ಜೆಡಿ

ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಗೆ ಶೇ 80% ಫಲಿತಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆ ಯಲ್ಲಿ ಒಟ್ಟು 143 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,113 ಮಂದಿ ಉತ್ತೀರ್ಣರಾಗಿರುವ ಮೂಲಕ ಶಾಲೆಗೆ 80% ಫಲಿತಾಂಶ ಬಂದಿರುತ್ತದೆ. 3 ಮಂದಿ ಅತ್ಯುನ್ನತ ಶ್ರೇಣಿ, 41 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರೆ , 29 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಹಾಗೂ 40 ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದಿದ್ದಾರೆ. ಆಂಗ್ಲ ಮಾಧ್ಯಮದ ವಿಧ್ಯಾರ್ಥಿನಿ ಕೆಂಕೆರೆ ಸೋನಿಯಾ ಕೆ.ಎಂ. 563 ಅಂಕ ಪಡೆದು 90.08% ಗಳಿಸಿದರೆ,ಮನೋಜ್ ಹೆಚ್.ಜಿ.545 ಅಂಕಗಳಿಸಿ 87.2% ಗಳಿಸಿದ್ದು, ಯಶಸ್ವಿನಿ 540 ಅಂಕಗಳಿಸಿ 86.4% ಪಡೆದಿರುತ್ತಾರೆ.           ಹುಳಿಯಾರಿನ ವಾಸವಿ ವಿದ್ಯಾಸಂಸ್ಥೆಯ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಶೇ.91 ರಷ್ತು ಫಲಿತಾಂಶಬಂದಿದ್ದು,ಒಟ್ಟು 87 ಮಂದಿಯಲ್ಲಿ 76 ಮಂದಿ ಉತ್ತೀರ್ಣರಾಗಿದ್ದು,5 ಮಂದಿ ಅತ್ಯುತ್ತಮ ಶ್ರೇಣಿ,43ಮಂದಿ ಪ್ರಥಮ ಶ್ರೇಣಿ, 16 ಮಂದಿ ದ್ವಿತೀಯ ಸ್ಥಾನ,12 ಮಂದಿ ತೃತೀಯ ಸ್ಥಾನ ಪಡೆದಿದ್ದಾರೆ.ಎಸ್.ಸಿ.ಸೀಮಾ(584/ 93.44%), ಬಿ.ಎಂ.ತನುಶ್ರೀ (580 / 92.8%),ಪಿ.ಸಚಿನ್(564/ 90.24%),ಮಂಜು(553/ 88.48%), ಆರ್.ಸಚಿನ್(543/ 86.88%) ಅಂಕಗಳನ್ನು ಗಳಿಸಿದ್ದು ಶಾಲೆ ಹಾಗೂ ಪೋಶ್ಃಅಕರಿಗೆ ಕೀರ್ತಿ ತಂದಿದ್ದು, ಈ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರು ಹಾಗೂ ಶಿಕ್ಷರು,ಸಿಬ್ಬಂದಿವರ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಗ್ಷನ್ಹುಳಿಯಾರಿನ ವಾಸವಿ ವಿದ್ಯಾಸಂಸ್ಥೆಯ ಆಂಗ್ಲವಿಭಾಗದ ಬಿ.ಎಂ.ತನುಶ್ರೀ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 580(92.8%) ಅಂಕಗಳಿಸುವ ಮೂಲಕ ಅತ್ಯುತ್ತಮ ಶ್ರೇಣಿಯಲ್ಲಿ(ಡಿಸ್ಟಿಂಗ್ಷನ್) ತೇರ್ಗಡೆಯಾಗಿದ್ದು, ಶಾಲಾ ಸಿಬ್ಬಂದಿ ಹಾಗೂ ಪೋಷಕರು ಅಭಿನಂಧಿಸಿದ್ದಾರೆ.

ಹುಳಿಯಾರಿನ ವಾಸವಿ ವಿದ್ಯಾಸಂಸ್ಥೆಯ ಆಂಗ್ಲವಿಭಾಗದ ಬಿ.ಎಂ.ತನುಶ್ರೀ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 580(92.8%) ಅಂಕಗಳಿಸುವ ಮೂಲಕ ಅತ್ಯುತ್ತಮ ಶ್ರೇಣಿಯಲ್ಲಿ(ಡಿಸ್ಟಿಂಗ್ಷನ್) ತೇರ್ಗಡೆಯಾಗಿದ್ದು, ಶಾಲಾ ಸಿಬ್ಬಂದಿ ಹಾಗೂ ಪೋಷಕರು ಅಭಿನಂಧಿಸಿದ್ದಾರೆ.

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶೇ 73.5% ಫಲಿತಾಂಶ

  ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅತ್ಯುತ್ತಮ ಶ್ರೇಣಿಯಲ್ಲಿ ಪಾಸಾದ ವಿದ್ಯಾ ರ್ಥಿಗಳಾದ 1)ಬಿ.ಎಸ್.ಚಂದನ್ 2) ಸತೀಶ್ ಕೆ.ಆರ್ 3)ಪ್ರಸನ್ನ 4) ಹರೀಶ್. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶೇ73.5%^ ಫಲಿತಾಂಶ ಲಭಿಸಿದ್ದು, ಪರೀಕ್ಷೆಗೆ ಒಟ್ಟು 188 ವಿದ್ಯಾರ್ಥಿಗಳು ಹಾಜರಾಗಿದ್ದು 138 ಮಂದಿ ತೇರ್ಗಡೆಯಾಗಿದ್ದಾರೆ. 4 ಮಂದಿ ಅತ್ಯುತ್ತಮ ಶ್ರೇಣಿ, 75 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರೆ , 36 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಹಾಗೂ 23 ವಿದ್ಯಾರ್ಥಿಗಳು ತೃತೀಯ ಸ್ಥಾನ ಹೊಂದಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಬಿ.ಎಸ್.ಚಂದನ್ 554 ಅಂಕ ತೆಗೆಯುವ ಮೂಲಕ 92.33% ಗಳಿಸಿದರೆ, ಕಲಾವಿಭಾಗದಲ್ಲಿ ಸತೀಶ್ ಕೆ.ಆರ್. 533 ಅಂಕದ ಮೂಲಕ ಶೇ 88,83 ಪ್ರಸನ್ನ  528 ಅಂಕದ  ಮೂಲಕ ಶೇ.88 ಹಾಗೂ ಹರೀಶ್ 522 ಅಂಕದ ಮೂಲಕ ಶೇ.87 ಗಳಿಸಿದ್ದಾರೆ.ಈ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲ ನಟರಾಜು,ಶಿಕ್ಷಕ ವರ್ಗ,ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರುಗಳು ಅಭಿನಂದಿಸಿದ್ದಾರೆ.

ಹುಳಿಯಾರಿನಲ್ಲಿ ಶೇ.75.36 ರಷ್ಟು ಮತದಾನ

         ಚಿ.ನಾ.ಹಳ್ಳಿ ವಿಧಾನಸಭಾ ಚುನಾವಣೆಯು ಭಾನುವಾರ ಶಾಂತಿಯುತವಾಗಿ ನಡೆದಿದ್ದು, ಚಿ.ನಾ.ಹಳ್ಳಿ ಕ್ಷೇತ್ರದಲ್ಲಿ ಒಟ್ಟು ಶೇ.81.16ರಷ್ಟು ಹಾಗೂ ಕ್ಷೇತ್ರದ ಪ್ರಮುಖ ಕೇಂದ್ರವಾಗಿ ಬಿಂಬಿತವಾಗಿರುವ ಹುಳಿಯಾರಿನಲ್ಲಿ ಒಟ್ಟು ಶೇ.75.36 ರಷ್ಟು ಮತದಾನವಾಗಿದೆ. ಹುಳಿಯಾರು ಪಟ್ಟಣದಲ್ಲಿ ಒಟ್ಟು 13 ಮತಗಟ್ಟೆಗಳನ್ನು ಎಂಪಿಎಸ್ ಶಾಲೆಯಲ್ಲಿ 9 ಮತಕೇಂದ್ರಗಳನ್ನು,ಉರ್ದು ಶಾಲೆಯಲ್ಲಿ ಎರಡು ಮತಗಟ್ಟೆಗಳನ್ನು,ಸೋಮಜ್ಜನ ಪಾಳ್ಯ ಹಾಗೂ ಹುಳಿಯಾರು-ಕೆಂಕೆರೆ ಪ್ರೌಢಶಾಲೆಯಲ್ಲಿ ತಲಾ ಒಂದೊಂದು ಮತಗಟ್ಟೆಳನ್ನು ಸ್ಥಾಪಿಸಲಾಗಿತ್ತು.        ಬೆಳಗಿನ ತಂಪಿನ ವಾತಾವರಣದಲ್ಲಿ ಚುರುಕಾಗಿದ್ದ ಮತದಾನ ಬಿಸಿಲೇರಿಕೆ ನಂತರ ಸ್ವಲ್ಪ ಕುಗ್ಗಿದರೂ ಸಹ ಮಧಾಹ್ನದ ನಂತರ ಬಂದ ತುಂತುರು ಸೊನೆ ಮಳೆಯ ತಂಪಿನಿಂದಾಗಿ ಮತ್ತೆ ಮತದಾರರು ಮತಗಟ್ಟೆಗಳಿಗೆ ದಾವಿಸಲಾರಂಭಿಸುವ ಮೂಲಕ ಮತ್ತೆ ಚುರುಕುಗೊಂಡ ಮತದಾನ ನಡೆಯಿತು. ಹುಳಿಯಾರಿನ ಮತಗಟ್ಟೆಗಳಲ್ಲಿ ಮತ ಚಲಾಯಿಸಿದ ಪುರುಷ ಹಾಗೂ ಮಹಿಳೆಯರ ವಿವರ: ಮತಗಟ್ಟೆ 1 : ಪುರುಷರು 185, ಮಳೆಯರು 176 ಒಟ್ಟು 361 ಶೇ.68.76 ಮತಗಟ್ಟೆ 2: ಪುರುಷರು 241, ಮಳೆಯರು 198 ಒಟ್ಟು 439 ಶೇ. 68.27 ಮತಗಟ್ಟೆ 3 :ಪುರುಷರು 264, ಮಳೆಯರು 245 ಒಟ್ಟು 509 ಶೇ. 71.29 ಮತಗಟ್ಟೆ 4 : ಪುರುಷರು 172, ಮಳೆಯರು 190 ಒಟ್ಟು 362 ಶೇ. 75.89 ಮತಗಟ್ಟೆ 5: ಪ

ಹುಳಿಯಾರಿನಲ್ಲಿ ಶಾಂತಿಯುತ ಮತದಾನ : ಮಧಾಹ್ನದ ನಂತರ ಮತದಾನದಲ್ಲಿ ಚುರುಕು

                  ಚಿ.ನಾ.ಹಳ್ಳಿ ಕ್ಷೇತ್ರದ ವಿಧಾನಸಭಾ ಚುನಾವಣೆ ಭಾನುವಾರ ನಡೆದಿದ್ದು, ಹೋಬಳಿ ವ್ಯಾಪ್ತಿಯಲ್ಲಿ ಯಾವುದೇ ಘರ್ಷಣೆ,ಗದ್ದಲ ನಡೆಯದೆ ಶಾಂತಿಯುತವಾಗಿ ಮತದಾನ ನಡೆದಿದ್ದು, ಹುಳಿಯಾರು ಹೋಬಳಿಯಾದ್ಯಂತ ಶಾಂತಿಯುತ ಮತದಾನ ನಡೆದಿದೆ.ಮುಂಜಾನೆ 7 ರಿಂದ ಮತದಾನ ಆರಂಭವಾದ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಮಧ್ಯಾಹ್ನದ ಉರಿ ಬಿಸಿಲು ಅರಿತು ಮತದಾರರು ಬೆಳಿಗ್ಗೆ ಮತದಾನ ಕೇಂದ್ರದ ಮುಂದೆ ನೀಂತಿದ್ದು ಕಂಡುಬಂತು ಮಧಾಹ್ನ ಒಂದು ಗಂಟೆ ವೇಳೆಗೆ ಶೇ.50 ರಷ್ಟು ಮತದಾನ ವಾಗಿತ್ತು. ಉಳಿದಂತೆ ನಿರಸ ಮತದಾನ ನಡೆದು ಮತ್ತೆ ಸಂಜೆ ವೇಳೆಗೆ ಮತದಾರರು ಮತಕೇಂದ್ರಕ್ಕೆ ಬರಲಾರಂಭಿಸಿದ್ದು ಪುನ: ಮತದಾನ ಚುರುಕುಗೊಂಡಿತ್ತು. ಮತ ಚಲಾಯಿಸಲು ವಯೋವೃದ್ದರು,ವಿಕಲಚೇತನರು,ಮಹಿಳೆಯರು,ಪುರುಷ ಮತದಾರರು ಬರುತ್ತಿದ್ದರು. ಪಟ್ಟಣದ ಕೆಲ ಮತಗಟ್ಟೆಗಳಲ್ಲಿ ಸರದಿಯಲ್ಲಿ ನಿಂತು ಜನ ಮತಚಲಾಯಿಸಿದೆ, ಇನ್ನುಳಿದ ಮತಗಟ್ಟೆಗಳಲ್ಲಿ ಜನ ವಿರಳವಾಗಿದ್ದು ಕಂಡುಬಂತು. ಹುಳಿಯಾರಿನ ಮತಕೇಂದ್ರದಲ್ಲಿ ಮತಚಲಾಯಿಸಲು ಸರದಿ ಸಾಲಿನಲ್ಲಿ ನಿಂತ ಮಹಿಳೆಯರು.                    ಹುಳಿಯಾರು ಹೋಬಳಿಯಲ್ಲಿ 11 ಸಾವಿರ ಮತದಾರರಿದ್ದು 13 ಮತಗಟ್ಟೆಗಳನ್ನು ಎಂಪಿಎಸ್ ಶಾಲೆ ಹಾಗೂ ಉರ್ದು ಶಾಲೆ,ಸೋಮಜ್ಜನ ಪಾಳ್ಯ,ಹುಳಿಯಾರು-ಕೆಂಕೆರೆ ಪ್ರೌಢಶಾಲೆಯಲ್ಲಿ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಹೋಬಳಿ ವ್ಯಾಪ್ತಿಯ ಕೆಂಕೆರೆ,ತಿರುಮಲಾಪುರ

ಅಂತಿಮ ಘಟ್ಟ

ಭಾನುವಾರ ನಡೆಯಲಿರುವ ಚುನಾವಣೆ ನಿಮಿತ್ತ ಇಂದು ಹುಳಿಯಾರಿನ ಎಂಪಿಎಸ್ ಶಾಲಾ ಆವರಣದಲ್ಲಿನ ಮತಗಟ್ಟೆಯೊಂದಕ್ಕೆ ಆಗಮಿಸುತ್ತಿರುವ ಮತಗಟ್ಟೆ ಅಧಿಕಾರಿಗಳು. ಬಹಿರಂಗಪ್ರಚಾರಕ್ಕೆ ತೆರೆಬಿದ್ದಿದ್ದರಿಂದ ಶನಿವಾರದಂದು ಮನೆಮನೆಗೆ ತೆರಳಿ ಕಡೆಯದಾಗಿ ಮತಯಾಚಿಸುತ್ತಿರುವ ರೈತಸಂಘದ ಅಭ್ಯರ್ಥಿ ಕೆಂಕೆರೆ ಸತೀಶ್ .

ಹುಳಿಯಾರು ದುರ್ಗಮ್ಮನ ವೈಭವದ ಸಿಡಿ ಉತ್ಸವ

ಇಲ್ಲಿನ ಗ್ರಾಮದೇವತೆ ದುರ್ಗಾಪರಮೇಶ್ವರಿದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಶನಿವಾರ ಸಿಡಿ ಕಾರ್ಯ ಹಾಗೂ ಓಕಳಿ ಸೇವೆ ಅಪರಿಮಿತ ಜನಸ್ತೋಮದ ಹರ್ಷೋದ್ಗಾರದ ನಡುವೆ ವಿಧಿವತ್ತಾಗಿ ನಡೆಯಿತು. ಶಕ್ತಿ ದೇವತೆ ದುರ್ಗಮ್ಮ ದೇವಿಯ ಜಾತ್ರೆಯ ಪ್ರಮುಖ ಘಟ್ಟ ಸಿಡಿ ಉತ್ಸವವಾಗಿದ್ದು ಇದು ಹಲವು ವರ್ಷಗಳಿಂದಲ್ಲೂ ಆಚರಿಸಿಕೊಂಡು ಬಂದ ಧಾರ್ಮಿಕ ಸಂಪ್ರದಾಯವಾಗಿದೆ. ಗ್ರಾಮದೇವತೆಗಳಾದ ಹುಳಿಯಾರಿನ ದುರ್ಗಮ್ಮ,ಹುಳಿಯಾರಮ್ಮ ಹಾಗೂ ಕೆಂಚಮ್ಮ, ಗೌಡಗೆರೆಯ ದುರ್ಗಮ್ಮ, ತಿರುಮಲಾಪುರದ ಕೊಲ್ಲಾಪುರದಮ್ಮ, ದಮ್ಮಡಿಹಟ್ಟಿಯ ಈರಬೊಮ್ಮಕ್ಕದೇವಿ,ಕೆ.ಸಿ.ಪಾಳ್ಯದ ಅಂತರಘಟ್ಟಮ್ಮ ದೇವಿ, ಹೊಸಹಳ್ಳಿಯ ಅಂತರಘಟ್ಟಮ್ಮ ನವರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಕೆಂಪು ಹಾಗೂ ಬಿಳಿ ಬಣ್ಣ ಹಚ್ಚಿದ ಸಿಡಿ ಮರಕ್ಕೆ ಮಾವಿನ ಸೊಪ್ಪು ಕಟ್ಟುವ ಮೂಲಕ ಸಿಂಗರಿಸಲಾಗಿತ್ತು.ಸಿಡಿಮರಕ್ಕೆ ಪೂಜೆ ಸಲ್ಲಿಸಿ, ಬಲಿ ನೀಡುವ ಮೂಲಕ ಉತ್ಸವ ಪ್ರಾರಂಭವಾಗಿ ಸಿಡಿ ಕಂಬದ ತುದಿಯಲ್ಲಿ ಭಕ್ತನೊಬ್ಬ ಕೆಳಮುಖವಾಗಿ ಕಟ್ಟಿ ಮತ್ತೊಂದು ತುದಿಗೆ ದೇವಾಲಯದ ಗೌಡರುಗಳನ್ನು ಕುಳ್ಳಿರಿಸಿ ವಾದ್ಯ ಹಾಗೂ ಎಲ್ಲಾ ದೇವರುಗಳೊಂದಿಗೆ ಸಿಡಿ ಕಂಬವನ್ನು ತಿರುಗಿಸುವ ದೃಶ್ಯ ರೋಮಾಂಚನಕಾರಿಯಾಗಿತ್ತು.      ಒಟ್ಟಾರೆ ಸುಡುಬಿಸಿಲನ್ನು ಲೆಕ್ಕಿಸದೇ ದೂರದೂರುಗಳಿಂದ ಭಕ್ತಾಧಿಗಳು ಆಗಮಿಸಿ,ದುರ್ಗಮ್ಮನ ಕೃಪಾಶೀರ್ವಾದಕ್ಕೆ ಬಾಜನರಾದರು.ಧರ್ಮದರ್ಶಿ ಶಿವಕುಮಾರ್,ಕನ್ವಿನರ್ ವಿಶ್ವನಾಥ್, ಸುಬ್ರಮಣ್ಯ,ದು

ಬಿಸಿಲನ್ನು ಲೆಖ್ಖಿಸದೆ ದುರ್ಗಮ್ಮನ ತೇರನ್ನೆಳೆದ ಭಕ್ತ ಸಮೂಹ

ಹುಳಿಯಾರು ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ 43 ನೇ ವರ್ಷದ ರಥೋತ್ಸವವು ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ವಿವಿಧ ಗ್ರಾಮದೇವತೆಗಳ ಸಮ್ಮುಖದಲ್ಲಿ ವೇದ ಮಂತ್ರ ಘೋಷಗಳ ನಾದದಲ್ಲಿ ಸಡಗರ ಹಾಗೂ ಸಂಭ್ರಮದಿಂದ ಶುಕ್ರವಾರದಂದು ಯಶಸ್ವಿಯಾಗಿ ಜರುಗಿತು. ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ಕಳಸ ಪ್ರತಿಷ್ಠಾಪನೆ ಸೇರಿದಂತೆ ಇನ್ನಿತರ ಧಾರ್ಮಿಕ ವಿಧಿವಿಧಾನಗಳು ಹಾಗೂ ಪೂಜಾಕೈಂಕರ್ಯಗಳು ಶಾಸ್ತ್ರೋಕ್ತವಾಗಿ ನೆರವೇರಿತು. ಮಂಗಳವಾಧ್ಯ ದೊಂದಿಗೆ ಶ್ರೀ ದುರ್ಗಾಪರಮೇಶ್ವರಿ ದೇವಿಯು ಮೂಲ ದೇವತೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಗ್ರಾಮದೇವತೆಗಳಾದ ಹುಳಿಯಾರಿನ ಹುಳಿಯಾರಮ್ಮ ಹಾಗೂ ಕೆಂಚಮ್ಮ, ಗೌಡಗೆರೆಯ ದುರ್ಗಮ್ಮ,ತಿರುಮಲಾಪುರದ ಕೊಲ್ಲಾಪುರದಮ್ಮ,ದಮ್ಮಡಿಹಟ್ಟಿಯ ಈರಬೊಮ್ಮಕ್ಕದೇವಿ, ಕೆ.ಸಿ.ಪಾಳ್ಯದ ಅಂತರಘಟ್ಟಮ್ಮ ದೇವಿ, ಹೊಸಹಳ್ಳಿಯ ಅಂತರಘಟ್ಟಮ್ಮ ನವರ ಭೇಟಿ ಮಾಡಿ ,ದೇವಾಲಯವನ್ನು ಪ್ರದಕ್ಷಣೆ ಮಾಡಿಸಿ, ಭಕ್ತಾಧಿಗಳ ಉದ್ಘೋಷದೊಂದಿಗೆ ಸರ್ವಾಲಂಕೃತಗೊಂಡ ರಥಕ್ಕೆ ದುರ್ಗಾಪರಮೇಶ್ವರಿ ಅಮ್ಮನವರನ್ನು ಏರಿಸಲಾಯಿತು.ಮದ್ಯಾಹ್ನ 2 ಗಂಟೆಗೆ ರಥಕ್ಕೆ ಕಾಯಿ ಒಡೆಯುವ ಮೂಲಕ ಹಾಗೂ ವಿಶೇಷ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿಲಾಯಿತು.             ರಥೋತ್ಸವಕ್ಕೂ ಮುನ್ನ ಸೋಮನನ್ನು ಸಿಂಗರಿಕೊಂಡು ಸಕಲ ವಾದ್ಯಗಳೊಂದಿಗೆ ರೇವಣಪ್ಪ ಸ್ವಾಮಿ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ,ಪಾನಕದ ಗಾಡಿಯನ್ನು ಜೊತ