ಭಾರತದಲ್ಲಿನ ಎಲ್ಲಾ ಹಿಂದೂ ಧರ್ಮದವರು ಹಾಗೂ ಅಲ್ಪಸಂಖ್ಯಾತ ಧರ್ಮಗಳಲ್ಲಿ ಒಂದಾದ ಮುಸ್ಲಿಂ ಧರ್ಮದವರು ಸದಾಕಾಲ ಅಣ್ಣತಮ್ಮಂದಿರಂತೆ ಸಹೋದರತ್ವದ ಬಾಂಧ್ಯವ್ಯ ಹೊಂದಿದ್ದಾರೆ ಹೊರತು ಎಂದಿಗೂ ಶತ್ರುಗಳಲ್ಲ,ನಾವೆಲ್ಲಾ ಭಾರತೀಯರೆಂಬ ವಿಶಾಲ ಮನೋಭಾವ ಹೊಂದಿ ಬಾಳುತ್ತಿದ್ದಾರೆಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ ಕುಮಾರ್ ಅಭಿಪ್ರಾಯಪಟ್ಟರು.
ಸಿಂಗದಹಳ್ಳಿ ರಾಜ್ ಕುಮಾರ್ ಟಿಪ್ಪು ಭಾವಚಿತ್ರಕ್ಕೆ ಪುಷ್ಪ ಮಾಲಿಕೆ ಹಾಕಿ ಗೌರವಿಸಿದರು. |
ಟಿಪ್ಪು ಅಪ್ರತಿಮ ದೇಶಭಕ್ತನಾಗಿದ್ದು ದೇಶಕ್ಕಾಗಿ ತನ್ನ ಪ್ರಾಣವನ್ನೆ ಅರ್ಪಣೆ ಮಾಡಿದ ಮಹಾನ್ ವ್ಯಕ್ತಿ.ಬ್ರಿಟೀಷರ ಅಧಿಕಾರಶಾಹಿ ಹಟ್ಟಹಾಸದ ವಿರುದ್ದ ಸಿಡಿದೆದ್ದ ಮುಸ್ಲಿಂ ನಾಯಕರಲ್ಲಿ ಪ್ರಮುಖ ಟಿಪ್ಪು. ಸಾಂಸ್ಕೃತಿಕ ನಗರಿ ಮೈಸೂರನ್ನು ಬ್ರಿಟೀಷರ ಅಧೀನಕ್ಕೆ ಕೊಡದೇ ಅವರ ವಿರುದ್ದ ಹಲವು ಯುದ್ದಗಳನ್ನು ಮಾಡಿ,ಆಂಗ್ಲರ ಸಂಚಿಗೆ ಬಲಿಯಾದ ವೀರ. ಮೈಸೂರ್ ಹುಲಿ ಎಂದೇ ದೇಶಾದ್ಯಂತೆ ಪ್ರಚುರವಾಗಿರುವ ಈತ ಕರ್ನಾಟಕದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದ್ದಾನೆ ಎಂದರು.
ದೇಶಕ್ಕಾಗಿ ಹೋರಾಟ ಮಾಡಿ ಅಳಿದ ದೇಶಭಕ್ತನ ಹೆಸರಲ್ಲಿ ಇಂದು ಕೇಂದ್ರ ಸರ್ಕಾರ ಮೈಸೂರಿನಲ್ಲಿ ಟಿಪ್ಪು ಸುಲ್ತಾನ್ ಹೆಸರನಲ್ಲಿ ವಿಶ್ವವಿದ್ಯಾಲಯ ನಿರ್ಮಿಸಲು ಮುಂದಾಗಿರುವುದು ದೇಶಭಕ್ತರಿಗೆ ಸಲ್ಲಿಸುವ ಗೌರವವಾಗಿದೆ.ಆದರೆ ಕೆಲ ನಾಯಕರು ಇದಕ್ಕೆ ಅವಕಾಶ ಕೊಡದೆ ಟಿಪ್ಪುವಿನ ಸಾಧನೆಯನ್ನೇ ಮರೆತು ಟಿಪ್ಪು ಒಬ್ಬ ಮುಸ್ಲಿಂ ಎಂಬ ಕಾರಣಕ್ಕೆ ವಿಶ್ವವಿದ್ಯಾಲಯದ ಸ್ಥಾಪನೆಗೆ ತೊಡರುಗಾಲಾಕುತ್ತಿರುವುದು ಸರಿಯಲ್ಲ ಎಂದರು. ಇಂತಹ ನಾಯಕರುಗಳ ವಿರುದ್ದ ಸರ್ಕಾರ ಸೂಕ್ತಕ್ರಮ ಕೈಗೊಳ್ಳಬೇಕಿದೆ. ಟಿಪ್ಪು ಹೆಸರಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಿಂದ ಅಲ್ಲಿ ಅಭ್ಯಾಸ ಮಾಡುವವರಲ್ಲಿ ದೇಶಭಕ್ತಿ,ದೇಶಪ್ರೇಮದ ಗುಣಗಳ ಬೇಳವಣಿಗೆ ಹೆಚ್ಚಿನ ಅವಕಾಶವಿದ್ದು ,ಟಿಪ್ಪುವಿನಂತೆ ನಾವು ಆಗಬೇಕು,ದೇಶಕ್ಕಾಗಿ ತಾವು ಹೋರಾಡಬೇಕು ಎಂಬ ಮನೋಭಾವ ಚಿಗುರೊಡೆಯಲು ಸಹಕಾರಿಯಾಗುತ್ತದೆ ಇದನ್ನೆಲ್ಲಾ ಮನಗಂಡ ಸರ್ಕಾರ ಯಾವುದೇ ಅಡೆತಡೆಗಳನ್ನು ಲೆಕ್ಕಿಸದೇ ಟಿಪ್ಪು ಹೆಸರಿನಲ್ಲಿ ವಿದ್ಯಾಲಯ ಸ್ಥಾಪನೆ ಮಾಡಬೇಕು ಎಂದರು.
ನಮ್ಮ ದೇಶದ ಎಲ್ಲಾ ಧರ್ಮ,ಜಾತಿಯವರು ಅಭಿವೃದ್ದಿಯ ದೃಷ್ಠಿಯಿಂದ ಸಂಘಗಳು, ಸಹಕಾರ ಬ್ಯಾಂಕ್ ಗಳನ್ನು ಸ್ಥಾಪಿಸಿಕೊಂಡು ಸಾಗುತ್ತಿರುವುದು ಸಂತಸದ ವಿಷಯವಾಗಿದ್ದು, ಅದರಲ್ಲೂ ಅಲ್ಪಸಂಖ್ಯಾತರಾಗಿ ಹಿಂದುಳಿದಿದ್ದ ಮುಸ್ಲಿಂರು ಸಂಘಗಳನ್ನು ಸ್ಥಾಪಿಸಿ ,ಸಾಲ ಸೌಲಭ್ಯ ನೀಡುವ ಮೂಲಕ ಆರ್ಥಿಕವಾಗಿ ಸಬಲರಾಗಲು ಮುಂದಾಗಿರುವುದು ದೇಶದ ಅಭಿವೃದ್ದಿಗೆ ಪೂರಕವಾಗಿದೆ ಎಂದರು. ಅಲ್ಲದೆ ಇಂತಹ ಅನೇಕ ಸಂಘಗಳಿದ್ದು ಅವುಗಳು ಉತ್ತಮವಾಗಿ ಬೆಳೆಯಬೇಕು ಅದಕ್ಕಾಗಿ ತಮ್ಮಿಂದ ಆಗುವಂತಹ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಡಿ.ದೇವರಾಜು ಅರಸು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಡಗಿರಾಮಣ್ಣ,ಟಿಫ್ಫು ಸುಲ್ತಾನ್ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಡಿ.ಫಯಾಜ್,ಉಪಾಧ್ಯಕ್ಷ ಅಪ್ಸರ್,ನಿರ್ದೇಶಕ ಇಮ್ರಾಜ್, ಟಿಪ್ಪು ಯುವಕ ಸಂಘದ ಅಧ್ಯಕ್ಷ ರಫೀಕ್,ಕಾರ್ಯದರ್ಶಿ ಸದ್ದಾಂ, ಶ್ರೀರಾಮಫೈನಾಸ್ಸ್ ನ ಚಂದ್ರಣ್ಣ ಸೇರಿದಂತೆ ಇತರರು ಇದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ