ವಿಷಯಕ್ಕೆ ಹೋಗಿ

ಸೀಗೆಬಾಗಿಯಲ್ಲಿ ಸಂಕ್ರಾಂತಿ ಜೋರು

ಮೊಲ ಬಿಡುವ ಮೂಲಕ ಸಂಕ್ರಾಂತಿ ಆಚರಣೆ
 ಡಿ.ಆರ್.ನರೇಂದ್ರಬಾಬು
---------
ಹುಳಿಯಾರು : ಸುಗ್ಗಿ ಹಬ್ಬವಾದ ಸಂಕ್ರಾತಿಯನ್ನು ರಾಜ್ಯದೆಲ್ಲೆಡೆ ಒಂದೊಂದು ರೀತಿ ತಮ್ಮ ವಾಡಿಕೆಯಂತೆ ಆಚರಿಸಿದರೆ, ಹೋಬಳಿಯ ಸೀಗೆಬಾಗಿ ಗ್ರಾಮದಲ್ಲಿ ಮಾತ್ರ ಮೊಲ ಬಿಡುವ ಮೂಲಕ ಸಂಕ್ರಾತಿ ಹಬ್ಬವನ್ನು ಎರಡು ದಿನಗಳಕಾಲ ವಿಜೃಂಭಣೆಯಿಂದ ನಡೆಸುತ್ತಾರೆ. ಸುಮಾರು ೩೫೦ ಮನೆಗಳಿರುವ ಈ ಗ್ರಾಮದಲ್ಲಿ ಸಂಕ್ರಾಂತಿಯನ್ನು ಗ್ರಾಮಹಬ್ಬದ ರೀತಿ ಗ್ರಾಮಸ್ಥರೆಲ್ಲಾ ಜಾತಿಬೇಧ ಮರೆತು ಆಚರಿಸುತ್ತಾರೆ. 
ಸೀಗೆಬಾಗಿಯ ವರದರಾಜ ಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ನೂರೊಂದೆಡೆ ಸೇವೆ ಸಲ್ಲಿಸಿದ ನೂರಕ್ಕೂ ಅಧಿಕ ಸಂಖ್ಯೆಯ ದಾಸಪ್ಪಗಳು 
       ಅಂದು ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ವಿಶೇಷ ಅಡುಗೆ ಮಾಡಿಕೊಂಡು ವರದರಾಜಸ್ವಾಮಿ ದೇವಸ್ಥಾನಕ್ಕೆ ಅಡುಗೆಬುತ್ತಿಯನ್ನು ಹೊತ್ತು ತಂದು ಎಲ್ಲರು ಒಟ್ಟಾಗಿ ಹಂಚಿಕೊಂಡು ಊಟ ಮಾಡುವುದು ಇಲ್ಲಿನ ವಾಡಿಕೆ.
         ಅದರಂತೆ ಹಬ್ಬದ ದಿನ ಗ್ರಾಮದವರು ತಮ್ಮ ಮನೆಯಲ್ಲಿ ಸಿದ್ದ ಮಾಡಿದ ಎಡೆಯನ್ನು ತಂದು ವರದರಾಜ ಸ್ವಾಮಿಗೆ ಅರ್ಪಿಸುವ ಮೂಲಕ ಎಡೆಗೆಸೇವೆ ಹಾಗೂ ಪೂಜಾ ಕೈಂಕರ್ಯ ನಡೆಸಿದರು.
      ಹಬ್ಬದ ಮಾರನೇ ದಿನ ವರದರಾಜ ಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ನೂರೊಂದೆಡೆ ಸೇವೆ ಸಲ್ಲಿಸುವ ನೂರಕ್ಕೂ ಅಧಿಕ ಸಂಖ್ಯೆಯ ದಾಸಪ್ಪಗಳು ಸಂಪ್ರದಾಯ ಉಡುಗೆ ತೊಟ್ಟು ನಂತರ ಗ್ರಾಮದ ಪ್ರತಿಯೊಂದು ಮನೆಗೆ ಹೋಗಿ ಸಾಂಕೇತಿಕವಾಗಿ ಪಡಿಆಟದ ಮೂಲಕ ಬೇಡುವುದು ಸಂಪ್ರದಾಯವಾಗಿದೆ.

ಮೊಲ ಬಿಡುವುದು : ಮಕರ ಸಂಕ್ರಮಣದ ಹಿಂದಿನ ದಿನ ವಿಷ್ಣುವಿನ ಅಪರಾವತಾರವೆಂದೇ ನಂಬಿರುವ ಮೊಲವನ್ನು ಕಾಡಿಗೆ ತೆರಳಿ ಹಿಡಿದು ತರುವುದು ಹಾಗೂ ಸಂಕ್ರಮಣದ ಮಾರನೆ ದಿನ ಕಾಡಿಗೆ ವಾಪಸ್ಸ್ ಬಿಡುವುದು ಅನುಚಾನವಾಗಿ ಆಚರಣೆಯಲ್ಲಿದೆ. ಮೊಲ ಹಿಡಿಯುವುದನ್ನು ಬೇಟೆ ಉತ್ಸವ ಎಂದು ಕರೆಯಲಾಗುವುದಿದ್ದು, ಧಾರ್ಮಿಕ ವಿಧಿವಿಧಾನಗಳನ್ವಯ ದೇವಾಲಯದ ಪಟೇಲರು,ಗೌಡರು ಹಾಗೂ ಗ್ರಾಮಸ್ಥರು ತೆರಳಿ ಮೊಲ ಹಿಡಿದು ವಾದ್ಯದ ಮೆರವಣಿಗೆ ಮೂಲಕ ದೇವಾಲಯದಲ್ಲಿಗೆ ತರಲಾಗುತ್ತದೆ. ಆ ಮೊಲಕ್ಕೆ ವರದರಾಜ ಸ್ವಾಮಿ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ಕಿವಿಗೆ ಮುರು ಚುಚ್ಚಿ ವಾದ್ಯ ಮೇಳದೊಂದಿಗೆ ದೇವರುಗಳ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಮೊಲ ಬಿಡಲಾಗುತ್ತದೆ.ಈ ಮೊಲ ಯಾವ ದಿಕ್ಕಿನ ಕಡೆ ಜಿಗಿದು ಹೋಗುತ್ತದೋ ಆ ದಿಕ್ಕಿನಲ್ಲಿ ಉತ್ತಮ ಮಳೆ,ಬೆಳೆಯಾಗುತ್ತದೆ ಎಂಬ ಪ್ರತೀತಿ ಇದೆ.
        ಬಹುದಿನಗಳಿಂದಲೂ ಈ ಮೊಲ ಬಿಡುವುದನ್ನು ವರದರಾಜಸ್ವಾಮಿ, ದುರ್ಗಮ್ಮದೇವಿ ಹಾಗೂ ಮುಳ್ಳಲಗೆ ಬೂತರಾಯಸ್ವಾಮಿಯ ಸಮ್ಮುಖದಲ್ಲಿ ಒಕ್ಕಲಿನವರು ನಡೆಸಿಕೊಂಡು ಬರುತ್ತಿರುವುದಾಗಿ ಅರ್ಚಕ ಸುಗಂಧರಾಜ್ ತಿಳಿಸುತ್ತಾರೆ.

ಜಾನಪದ ಹಿನ್ನಲೆ: ಸಂಕ್ರಾಂತಿಯಂದು ಲಕ್ಷ್ಮಿತವರಿಗೆ ಹೊರಟು ನಿಂತಾಗ ಕೋಪಗೊಂಡ ವಿಷ್ಣುವು ಬೇಟೆ ಆಡುವ ನೆಪದಲ್ಲಿ ಕಾಡಿಗೆ ತೆರಳುತ್ತಾನೆ. ಇದನ್ನು ತಿಳಿದ ಲಕ್ಷ್ಮಿಯು ಗಂಡನನ್ನು ತಡೆಯಲು ಕಾಡಿನಲ್ಲಿ ಮೊಲವನ್ನು ಆತನ ದಾರಿಗೆ ಅಡ್ಡವಾಗಿ ಬರುವಂತೆ ಮಾಡುತ್ತಾಳೆ, ಮೊಲ ಅಡ್ಡ ಬಂದಿದ್ದು ಅಪಶಕುನ ಎಂದು ಭಾವಿಸಿದ ವಿಷ್ಣುವು ವಾಪಸ್ಸ್ ನಾಡಿಗೆ ತೆರಳುತ್ತಾನೆ.ಈ ಹಿನ್ನಲೆಯೂ ಮೊಲ ಬಿಡುವ ಸಂಪ್ರದಾಯಕ್ಕೆ ಕಾರಣವಾಗಿದೆ.
        ಹಬ್ಬದ ಮರುದಿನ ಸಂಜೆ ದುರ್ಗಮ್ಮ ದೇವಿಗೆ ಮಡಲಕ್ಕಿ ಹಾಕಿ ಪೂಜೆ ಸಲ್ಲಿಸಿದ ಬಳಿಕ ಸ್ವಾಮಿ ಹಾಗೂ ಅಮ್ಮನವರನ್ನು ಹೊರಡಿಸಿ ಮೊಲ ಬಿಡುವ ಕಾರ್ಯ ನಡೆಯಿತು.
      ಭಾನುವಾರದಂದು ನಡೆದ ಉತ್ಸವದಲ್ಲಿ ಸೀಗೆಬಾಗಿಯ ವರದರಾಜಸ್ವಾಮಿ, ದುರ್ಗಾಪರಮೇಶ್ವರಿ, ಗೋಪಾಲಪುರದ ಆಂಜನೇಯಸ್ವಾಮಿ ಮತ್ತು ಕರಿಯಮ್ಮದೇವಿ.ನಿರುವಗಲ್ ಆಂಜನೇಯಸ್ವಾಮಿ ಹಾಗೂ ಲಕ್ಷ್ಮೀಪುರದ ಲಕ್ಷ್ಮಮ್ಮ ದೇವಿ ಪಾಲ್ಗೊಂಡಿದ್ದವು
        ಶ್ರೀ ವರದರಾಜ ಟ್ರಸ್ಟ್ ನ ಕನ್ವೀನರ್ ಶಂಕರ್,ಕಾಂತರಾಜು,ಧರ್ಮದರ್ಶಿ ನಟರಾಜು, ವರದಯ್ಯ, ಮಧು,ತಮ್ಮಯ್ಯ,ಕೃಷ್ಣಯ್ಯ ಸೇರಿದಂತೆ ಅಪಾರ ಸಂಖ್ಯೆಯ ಗ್ರಾಮಸ್ಥರು ಪಾಲ್ಗೊಂಡಿದ್ದರು.
----------------------------------------------------
ತುಮಕೂರು ಜಿಲ್ಲೆಯಲ್ಲಿ ಸೀಗೆಬಾಗಿಯ ವರದರಾಜಸ್ವಾಮಿ ವಿಶಿಷ್ಟವಾದುದಾಗಿದ್ದು ಬೇರೆಲ್ಲೂ ಇಂತಹ ಮೂರ್ತಿಯನ್ನು ಕಾಣಲು ಸಾಧ್ಯವಿಲ್ಲ. ಇದರ ಬಗ್ಗೆ ಪುರಾಣಗಳಲ್ಲೂ ಉಲ್ಲೇಖಗಳಿವೆ. ಇಲ್ಲಿನ ವರದರಾಜಸ್ವಾಮಿಯು ಉದ್ಭವ ಮೂರ್ತಿಯಾಗಿದ್ದು ಇದೇ ದೇವಾಲಯದಲ್ಲಿ ಊರಿನಲ್ಲಿದ್ದ ಆಂಜನೇಯಸ್ವಾಮಿಯನ್ನು ಸಹ ಪ್ರತಿಷ್ಠಾಪಿಸಿ ಪೂಜಿಸಲು ಪ್ರಾರಂಭಿಸಿದ್ದರಿಂದ ವರದಾಂಜನೇಯಸ್ವಾಮಿ ಎಂದು ಪ್ರಸಿದ್ದಿಯಾಗಿದೆ.
---------------------------------------------------------
ವಿಷ್ಣುವಿನ ಅಪರಾವತಾರ ಎನ್ನುವ ಮೊಲವನ್ನು ಹಿಡಿದು ತಂದು ಪೂಜೆಸಿದ ಬಳಿಕ ಬಿಡುವುದರಿಂದ ನಾಡು ಗ್ರಾಮ ಸುಭಿಕ್ಷವಾಗಿರುತ್ತದೆ ಹಾಗೂ ಅದು ಯಾವ ದಿಕ್ಕಿನತ್ತ ಓಡಿ ಹೋಗುತ್ತದೆ ಆ ದಿಕ್ಕಿನ ಕಡೆ ಉತ್ತಮ ಮಳೆ,ಬೆಳೆ ಆಗುತ್ತದೆ ಎಂಬ ನಂಬಿಕೆ ಇದೆ: ಶಂಕರ್ ದೇವಸ್ಥಾನದ ಕನ್ವೀನಿಯರ್.
----------------


ವಿಷ್ಣು ದೇವರ ಹೆಸರಿನಲ್ಲಿ ಸಾಂಕೇತಿಕವಾಗಿ ಮೊಲ ಹಿಡಿಯುವುದು ಸಂಪ್ರದಾಯವೇ ಆಗಿ ನಡೆದು ಬರುತ್ತಿದ್ದು, ಇತ್ತೀಚಿನ ದಿನದಲ್ಲಿ ಗುಡ್ಡಬೆಟ್ಟಗಳೆಲ್ಲ ಬಯಲಾಗಿ ಮೊಲ ಸಿಗುವುದೇ ಕಷ್ಟಕರವಾಗಿದೆ. ಅದರೂ ಸಹ ಈ ಸಂಪ್ರದಾಯವನ್ನು ಬಿಡದೆ ಪಾಲಿಸಿಕೊಂಡು ಬರಲಾಗುತ್ತಿದೆ: ಭಕ್ತೇಶ್,ಅರ್ಚಕರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...