ವಿಷಯಕ್ಕೆ ಹೋಗಿ

ಕಾವ್ಯ ಅಂದರೆ ಪ್ರಾಸಬದ್ಧವಾಗಿ ನಾಲ್ಕು ಸಾಲಿನಲ್ಲಿ ಗೀಚುವ ಕವಿತೆಯಲ್ಲ ,ಇದೊಂದು ಜೀವನ ಕ್ರಮ

"ಗಾಯಗೊಂಡಿದೆ ಗರಿಕೆ ಗಾನ" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರೋ.ನಟರಾಜ್ ಬೂದಾಳ್ 
ಹುಳಿಯಾರು:ಕಾವ್ಯ ಅನ್ನುವುದು ನಿತ್ಯ ಬದುಕಿನ ಭಾಗವಾಗಿದ್ದು ಕಾವ್ಯ ಕಲೆ ಅಂತಿಮವಾಗಿ ರಸದೂಟವನ್ನು ಉಣಬಡಿಸುತ್ತದೆ.ಆರೋಗ್ಯಕ್ಕೆ ಒಳ್ಳೆಯ ಉಟ ಹೇಗೆ ಅಗತ್ಯವೋ ಉತ್ತಮ ಕಾವ್ಯ ರಚನೆಗೆ ನಮ್ಮ ಮನಸ್ಸು,ಚಿಂತನೆ ಆರೋಗ್ಯಕರವಾಗಿರಬೇಕು,ಸಾಹಿತ್ಯದ ಅನುಸಂಧಾನವಿರಬೇಕು,ಒಳ್ಳೆಯ ಅಡುಗೆ ಮಾಡುವುದು ಕೂಡ ಕಾವ್ಯವೇ ಎಂದು ಪ್ರೋ.ನಟರಾಜ್ ಬೂದಾಳ್ ತಿಳಿಸಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ ಬುಧವಾರದಂದು ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ರಚಿತ "ಗಾಯಗೊಂಡಿದೆ ಗರಿಕೆ ಗಾನ" ಪುಸ್ತಕ ಬಿಡುಗಡೆಗೊಳಿಸಲಾಯಿತು.
          ಹುಳಿಯಾರು-ಕೆಂಕೆರೆ ಬಿಎಂಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿಕನ್ನಡ ಸಾಹಿತ್ಯ ಪರಿಷತ್ತು ಹುಳಿಯಾರು ಘಟಕದಿಂದ ಬುಧವಾರದಂದು ಆಯೋಜಿಸಲಾಗಿದ್ದ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ರಚಿತ "ಗಾಯಗೊಂಡಿದೆ ಗರಿಕೆ ಗಾನ" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಾವ್ಯ ಪ್ರಸ್ತಾವನೆ ಮಾಡಿ ಮಾತನಾಡಿದ ಅವರು ಕಾವ್ಯ ಅಂದರೆ ಪ್ರಾಸಬದ್ಧವಾಗಿ ನಾಲ್ಕು ಸಾಲಿನಲ್ಲಿ ಗೀಚುವ ಕವಿತೆಯಲ್ಲ ,ಇದೊಂದು ಜೀವನ ಕ್ರಮವಾಗಿದೆ ಎಂದರು.
ಈ ಕ್ಷಣದಲ್ಲೂ ಕೂಡ ಕವಿ ದಾರ್ಶನಿಕರು ನಮ್ಮಿಂದ ಹೊರಗಿದ್ದಾರೆ.ಜ್ಯೋತಿಷಿಗಳ ಮಾತು ನೂರಕ್ಕೆನೂರು ಕೇಳುವ ರಾಜಕಾರಣಿಗಳು ಕವಿ,ದಾರ್ಶನಿಕರ ಮಾತು ಕೇಳದಿರುವುದು ದುರಾದೃಷ್ಟಕರ ಎಂದರು
             ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಡಾ.ಕೆ.ವೈ.ನಾರಾಯಣಸ್ವಾಮಿ ನಾವಿಂದು ಓದುತ್ತಿರುವ ಪಾಠಕ್ಕೂ ನಾವು ನಡೆಸುತ್ತಿರುವ ಜೀವನಕ್ಕೂ ನಯಾಪೈಸದ ಸಂಬಂಧವಿಲ್ಲ.ಅರಿವಿಲ್ಲದೆ ಅನ್ಯಾಯಗಳನ್ನು ನಾವೇ ಶೋಷಿಸುತ್ತಾ ಮತ್ತೊಂದೆಡೆ ಅದರ ಬಗ್ಗೆ ವಿಶ್ಲೇಷಣೆಮಾಡುತ್ತಾ ಬದುಕುತ್ತಿದ್ದೇವೆ.ಉತ್ತಮ ಸಮಾಜ ನಿರ್ಮಾಣಗೊಳ್ಳಬೇಕಾದರೆ ಪ್ರತಿಯೊಬ್ಬ ವ್ಯಕ್ತಿಯು ಸಹಾ ತನ್ನಲ್ಲಿರುವ ತಪ್ಪುಗಳನ್ನು ತಿದ್ದಿಕೊಂಡು ನಡೆದಾಗ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಇಂದು ಬಿಡುಗಡೆಗೊಂಡಿರುವ ಈ ಪುಸ್ತಕದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಜನರು ನಡೆದು ಕೊಳ್ಳುತ್ತಿರುವುದನ್ನು ಅವಲೋಕಿಸಲಾಗಿದೆ ಎಂದರು.
       ಪುಸ್ತಕ ಕುರಿತು ಮಾತನಾಡಿದ ಡಾ.ಡಾಮಾನಿಕ್ ಸಾಹಿತ್ಯ ಎನ್ನುವುದು ಕನ್ನಡದ ಪೀಳಿಗೆಗೆ,ಬದುಕಿಗೆ ಬದಲಾವಣೆ ಏನನ್ನು ಕೊಟಿಲ್ಲ. ೧೬ನೇ ಶತಮಾನದಲ್ಲಿ ಜನರಲ್ಲಿನ ಮೌಡ್ಯತೆಯನ್ನ ತೊಡೆದು ಹಾಕಲು ಅನೇಕ ಮಹನೀಯರು ಸಾಕಷ್ಟು ವಚನಗಳ,ತತ್ವಪದಗಳ ಮೂಲಕ ಜನರಲ್ಲಿ ಆತ್ಮಸ್ಥೈರ್ಯ ನೀಡುತ್ತಿದ್ದರು. ಪ್ರತಿಯೊಬ್ಬರಲ್ಲೂ ದುಡಿದು ತಿನ್ನುವ ಚಲವಿತ್ತು. ಆದರಿಂದು ಆಧುನಿಕತೆ ಯುಗದಲ್ಲೂ ಜನರಲ್ಲಿ ಆತ್ಮಸ್ಥೈರ್ಯವಿಲ್ಲವಾಗಿ ದುಡಿದು ತಿನ್ನುವವರ ಸಂಖ್ಯೆ ಕಡಿಮೆಯಾಗಿ ನಮ್ಮನ್ನ ನಾವುಗಳೇ ಕತ್ತಲೆಡೆಗೆ ದೂಡಿಕೊಳ್ಳುವಂತಾಗಿದೆ ಎಂದರು.
      ಡಾ.ಆರ್.ಶಿವಪ್ಪ ಮಾತನಾಡಿ ಲೋಕದ ಬಗ್ಗೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಪ್ರಶ್ನಿಸುವುದನ್ನು ರೂಢಿಸಿಕೊಳ್ಲಬೇಕೆಂದರು.ಇದರಿಂದ ಸಹಜ ಕುತೂಹಲ ತಣಿದು ಅರಿವು ಮೂಡಲು ಸಹಕಾರಿಯಾಗುತ್ತದೆ.ನಮ್ಮಲ್ಲಿನ ಅರಿವು,ಜ್ಞಾನವನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವುದನ್ನು ಕಲಿತಲ್ಲಿ ಬದುಕು ಸುಂದರವಾಗುತ್ತದೆ ಎಂದರು.
        ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕ್ ಕ.ಸಾ.ಪ ಅಧ್ಯಕ್ಷೆ ಪ್ರೋ.ಇಂದಿರಮ್ಮ ಮಕ್ಕಳು ಮಾರುಕಟ್ಟೆಯ ಗಿರಾಕಿಗಳಾಗುತ್ತಿದ್ದು ಕಳೆದು ಹೋದ ಬಾಲ್ಯ ಮತ್ತೆಸಿಗುವುದಿಲ್ಲ ಎಂದು ಅರಿಯುತ್ತಿಲ್ಲ.ತಂತ್ರಜ್ಞಾನದ ಗುಲಾಮರಾಗಿರುವ ಯುವಶಕ್ತಿ ತಮ್ಮ ಮನಸ್ಸನ್ನು ಇತರೆಡೆಗೆ ಹೊರಳುಸುತ್ತಿಲ್ಲ ಎಂದರು. ಕವಿತೆ ಕವನಗಳನ್ನು ರಚಿಸುವುದು ಮುಖ್ಯವಲ್ಲ.ರಚಿಸಿದ ಕವಿತೆ ಕವನಗಳನ್ನು ಜನರಿಗೆ ತಲುಪಿಸುವ ಕಾರ್ಯ ನಡೆಸುವುದು ಅತಿ ಮುಖ್ಯ ಈ ನಿಟ್ಟಿನಲ್ಲಿ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ರಚಿಸಿರುವ ಪ್ರತಿಯೊಂದು ಕವನ ಸಾಹಿತ್ಯವನ್ನು ಜನರಿಗೆ ತಲುಪಿಸುವ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಿದ್ದಾರೆಂದು.

   ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಸಾಹಿತ್ಯ ರಚನೆಯ ಬಗ್ಗೆ ತಿಳಿಸಿದರು.ಪ್ರೋ.ಬಿ.ಅಶೋಕ್ ಸ್ವಾಗತಿಸಿದರು.ಡಾ.ಬಾಳಪ್ಪ ಪ್ರಾಸ್ತಾವಿಕ ನುಡಿಗಳಾಡಿದರು.ಸಮಾರಂಭದಲ್ಲಿ ಪ್ರೋ.ಬಾಳೆಕಾಯಿ ಶಿವನಂಜಪ್ಪ,ಸಾಹಿತಿ ಎಂ.ವಿ.ನಾಗರಾಜ್ ರಾವ್,ಬೆಳಗುಲಿ ಶಶಿಭೂಷಣ್, ತಿಪಟೂರು ಕಸಾಪ ಮಾಜಿ ಅಧ್ಯಕ್ಷ ಉಜ್ಜಜ್ಜಿರಾಜಣ್ಣ,ಹುಳಿಯಾರು ಕಸಾಪ ಅಧ್ಯಕ್ಷ ಯಲ್ಲಪ್ಪ, ಹೆಚ್.ಕೆ.ರಾಮಯ್ಯ, ವೈದ್ಯ ಡಾ:ಸಿದ್ದರಾಮಯ್ಯ, ರೈತ ಸಂಘದ ಸತೀಶ್, ನಾಗಣ್ಣ,ರಾಜಪ್ಪ, ಸಜ್ಜಾದ್, ಹೊಸಹಳ್ಳಿ ಚಂದ್ರಣ್ಣ, ಪಂಡಿತ್ ಬಸವರಾಜು ಮೊದಲಾದವರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...