ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗ್ರಾಮಸ್ಥರಿಂದಲೇ ಮಹಿಳೆ ಬರ್ಬರ ಹತ್ಯೆ

(ಹತ್ಯೆಯಾದ ಹೊನ್ನಮ್ಮಳ ಮೃತ ದೇಹವನ್ನು ತಹಸೀಲ್ದಾರ್ ಕಾಂತರಾಜು ವೀಕ್ಷಿಸುತ್ತಿರುವುದು) (ಮನೆಗಳಿಗೆ ಬೀಗ ಜಡಿದು ಪರಾರಿಯಾಗಿರುವ ಗೋಪಾಲಪುರ ಗ್ರಾಮಸ್ಥರು) ( ಘಟನಾ ಸ್ಥಳಕ್ಕೆ ಪ್ರಭಾರ ಉಪವಿಭಾಗಾಧಿಕಾರಿ ವಿಜಯ್ ಕುಮಾರ್ ಹಾಗೂ ತಹಸೀಲ್ದಾರ್ ಕಾಂತರಾಜು ಭೇಟಿ ನೀಡಿರುವುದು) ( ಹೊನ್ನಮ್ಮಳ ಹತ್ಯೆಯನ್ನು ಖಂಡಿಸಿ ಹುಳಿಯಾರಿನಲ್ಲಿ ದಲಿತ ಸಂಘಟನೆಗಳು ರಸ್ತೆ ತಡೆ ನಡೆಸಿರುವುದು) ( ಹುಳಿಯಾರು ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿರುವುದು) ಗ್ರಾಮಸ್ಥರಿಂದಲೇ ಮಹಿಳೆ ಬರ್ಬರ ಹತ್ಯೆ ----------------------------------------- @ ಗ್ರಾಮದ ಪ್ರತಿ ಮನೆಗೂ ಬೀಗ @ ದಲಿತ ಸಂಘಟನೆಗಳಿಂದ ರಸ್ತೆ ತಡೆ @ ಇಬ್ಬರು ಎಎಸ್ಐ ಸಸ್ಪೆಂಡ್ @ ಗ್ರಾ.ಪಂ.ಅಧ್ಯಕ್ಷೆ ಸೇರಿ 10 ಮಂದಿ ಬಂಧನ @ ಬಿಜೆಪಿ ಮುಖಂಡರಿಂದ ಪ್ರತಿಭಟನೆಗೆ ಬೆಂಬಲ ----------------------------------------------------------------------------------------------- ಗ್ರಾಮಸ್ಥರು ಹಾಗೂ ಅದೇ ಊರಿನ ಮಹಿಳೆಯೊಬ್ಬರ ನಡುವಿನ ವಿವಾದ ಭುಗಿಲೆದ್ದು ಮಾತಿನ ಚಕಮಕಿ ಘರ್ಷಣೆಗೆ ತಿರುಗಿ ಇಪ್ಪತ್ತೈದು ಮೂವತ್ತು ಜನರ ಗುಂಪೊಂದು ಮಹಿಳೆಯೋರ್ವಳನ್ನು ಅಮಾನುಷವಾಗಿ ಹತ್ಯೆಗೈದ ಘಟನೆ ಹುಳಿಯಾರು ಸಮೀಪದ ಗೋಪಾಲಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ಜರುಗಿದೆ. ಹತ್ಯೆಯಾದ ನತದೃಷ್ಠೆಯನ್ನು ಡಾಬಾ ಹೊನ್ನಮ್ಮ ಎಂದು ಗುರುತಿಸಲಾಗಿದ್ದು ಈಕೆ ಬಿಜೆಪಿ ದಲಿತ ಮೋರ್ಚ ಉಪಾಧ್ಯಕ್ಷೆಯಾ

ತಿಮ್ಲಾಪುರ ಕರೆ ಕೋಡಿ ಸಮೀಪ ಕಂಡು ಬಂದ ಪೆಂಗೋಲಿನ್

ಮೈತುಂಬ ಚಿಪ್ಪು, ಉದ್ದ ಮೂತಿ, ಉದ್ದ ಬಾಲ ಉದ್ದ ನಾಲಗೆ ಹೊಂದಿರುವ ಆಫ್ರಿಕಾ ಮತ್ತು ಏಷ್ಯಾದ ಭಾಗಗಳಲ್ಲಿ ಹೆಚ್ಚಾಗಿ ಕಂಡು ಬರುವ ಪೆಂಗೋಲಿನ್ ಹುಳಿಯಾರಿನ ತಿಮ್ಲಾಪುರ ಕರೆ ಕೋಡಿ ಸಮೀಪ ಕಂಡುಬಂದು ನೋಡುಗರಿಗೆ ತೀವ್ರ ಕುತೂಹಲಕ್ಕೆ ಕಾರಣವಾಯಿತು. ಪೆಂಗೋಲಿನ್ ಮೇಲ್ಭಾಗದಲ್ಲಿ ತಲೆಯಿಂದ ಹಿಡಿದು ಬಾಲದವರೆವಿಗೆ ಚಿಪ್ಪಿನ ಕವಚದ್ದರೆ ಇದರ ಹೊಟ್ಟೆ ಮತ್ತು ಮುಖದ ಕೆಳಭಾಗದಲ್ಲಿ ಈ ಕವಚ ಇರುವುದಿಲ್ಲ. ಮುಂಗಾಲುಗಳು ಬಹಳ ಬಲವಾಗಿದ್ದು ಇವುಗಳ ಸಹಾಯದಿಂದ ಇದು ನೆಲ ಅಗೆದು ಬಿಲ ತೋಡುತ್ತದೆ. ಪೆಂಗೋಲಿನ್ ಗೆ ಹಲ್ಲುಗಳಿಲ್ಲದೆ,ಉದ್ದ ನಾಲಗೆಯಿದ್ದು 25 ರಿಂದ 70 ಸೆಂ.ಮೀ. ಉದ್ದವಾಗಿರುತ್ತದೆ. ಈ ನಾಲಗೆಯ ಮೇಲೆ ಅಂಟಿನ ದ್ರವ್ಯಗಳಿರುತ್ತವೆ. ಹಾಗಾಗಿ ಹುತ್ತದೊಳಗೆ ನಾಲಿಗೆ ಇಳಿಸಿ ಇರುವೆ ಹಾಗೂ ಗೆದ್ದಲು ಹುಳುಗಳನ್ನು ಅಂಟಿಸಿ ತಿನ್ನುತ್ತವೆ. ಇದು ಒಂದು ಸಸ್ತನಿ ಪ್ರಾಣಿಯಾಗಿದ್ದು ತನ್ನ ಮರಿಗಳನ್ನು ಬಾಲದ ಮೇಲೆ ಹತ್ತಿಸಿಕೊಂಡು ತಿರುಗಾಡುತ್ತವೆ. ಅಪಾಯ ಬಂದಾಗ ತನ್ನ ಉದ್ದ ದೇಹ ಮತ್ತು ಬಾಲವನ್ನು ಚೆಂಡಿನಂತೆ ಸುತ್ತಿಕೊಳ್ಳುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಚಿಪ್ಪು ಹಂದಿ ಎಂದು ಕರೆಯಲ್ಪಡುವ ಪೆಂಗೋಲಿನ್ ಇಂದು ಹುಳಿಯಾರು ಸಮೀಪದ ಕೆರೆ ಕೋಡಿ ಬಳಿ ಕಂಡು ಬಂದು ನೋಡುಗರಿಗೆ ಅಚ್ಚರಿ ಮೂಡಿಸಿತು. ಅಪರೂಪದ ಪ್ರಾಣಿ ಕಂಡು ಬಂದ ವಿಚಾರ ಎಲ್ಲರಿಗೂ ಹರಡಿ ಸಾಕಷ್ಟು ಜನ ವೀಕ್ಷಿಸಿದರು.ನಂತರ ಪೆಂಗೋಲಿನ್ ಗೆ ಅಪಾಯವಾಗದ ರೀತಿ ಕಾಡಿಗೆ ಬಿಟ್ಟು ಬರಲಾಯಿತು.

ಹುಳಿಯಾರು ಗ್ರಾಮ ಪಂಚಾಯ್ತಿ ಜೆಡಿಎಸ್ ತೆಕ್ಕೆಗೆ,ಸೈಯದ್ ಅನ್ಸರ್ ಅಲಿ ಅಧ್ಯಕ್ಷ, ವೆಂಕಟಮ್ಮ ಉಪಾಧ್ಯಕ್ಷೆ

ಜಿಲ್ಲೆಯಲ್ಲಿಯೇ ಅತಿ ದೊಡ್ಡ ಪಂಚಾಯ್ತಿ ಎಂಬ ಹೆಗ್ಗಳಿಕೆ ಹೊಂದಿರುವ ಹುಳಿಯಾರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಸೈಯದ್ ಅನ್ಸರ್ ಅಲಿ ಹಾಗೂ ಉಪಾಧ್ಯಕ್ಷರಾಗಿ ವೆಂಕಟಮ್ಮ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಆಗಮಿಸಿದ ತಹಶೀಲ್ದಾರ್ ಟಿ.ಸಿ.ಕಾಂತರಾಜು ಅವರ ನೇತೃತ್ವದಲ್ಲಿ ಶುಕ್ರವಾರ ಚುನಾವಣೆ ನಡೆದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡೂ ಸ್ಥಾನಗಳನ್ನು ಜೆಡಿಎಸ್ ಬೆಂಬಲಿಗರು ಗೆಲ್ಲುವ ಮೂಲಕ ಅಧಿಕಾರದ ಗದ್ದುಗೆ ಅಲಂಕರಿಸಿದರು. ಎರಡೂ ಪಕ್ಷಗಳು ಪ್ರವಾಸ ಹಾಗೂ ಹಣದ ಆಮೀಷಗಳಲ್ಲದೆ ಅನೇಕ ಕಸರತ್ತು ನಡೆಸಿ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಅಂತಿಮವಾಗಿ ಇಂದು ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ನ ಸೈಯದ್ ಅನ್ಸರ್ ಅಲಿ ಅವರು 18 ಮತಗಳನ್ನು ಪಡೆಯುವ ಮೂಲಕ ಬಿಜೆಪಿಯ ಶಿವಕುಮಾರ್ ಅವರನ್ನು ಪರಾಭವಗೊಳಿಸಿದರೆ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ನ ವೆಂಕಟಮ್ಮ ಅವರು ಬಿಜೆಪಿಯ ಫರಾಹ್ನಾ ಅವರಿಗಿಂತ 4 ಮತಗಳನ್ನು ಹೆಚ್ಚು ಪಡೆಯುವ ಮೂಲಕ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಮತ ಚಲಾವಣೆಯಲ್ಲಿ ತಲಾ ಒಂದೊಂದು ಮತಗಳು ತಿರಸ್ಕೃತವಾದವು. ಸೈಯದ್ ಅನ್ಸರ್ ಅಲಿಯವರು ಸತತ 17 ವರ್ಷಗಳ ನಂತರ ಅಧ್ಯಕ್ಷ ಪಟ್ಟ ಅಲಂಕರಿಸಿದ ಮುಸ್ಲಿಂ ಯುವಕನಾದರೆ ವೆಂಕಟಮ್ಮ ಕಳೆದ 5 ವರ್ಷಗಳ ನಂತರ ಉಪಾಧ್ಯಕ್ಷ ಪಟ್ಟಕ್ಕೆ ಏರಿದ ಮಹಿಳೆಯಾಗಿದ್ದಾರೆ. ಗೆಲುವಿನ ಸುದ್ದಿ ತಿಳಿದ ತಕ್ಷಣ ಜೆಡಿಎಸ್ ಬೆಂಬಲಿತರು ಪಟಾಕಿ

ಹುಳಿಯಾರಿನಲ್ಲಿ ಕಾಯರ್ ಪಾಕ್೯ ನಿಮಿ೯ಸಿ: ಎಲ್.ಆರ್.ಚಂದ್ರಶೇಖರ್

ಹುಳಿಯಾರು ಸುತ್ತಮುತ್ತ ಸುಮಾರು 1500 ನಾರಿನ ಹುರಿ ತಯಾರಿಸುವ ಕಾಮಿ೯ಕರಿದ್ದು ಇತ್ತೀಚಿನ ದಿನಗಳಲ್ಲಿ ಈ ಭಾಗದ ಬಹು ಮುಖ್ಯ ಹಾಗೂ ಪ್ರತಿಷ್ಠಿತ ಗುಡಿ ಕೈಗಾರಿಕೆಯಾಗಿದೆ. ಈ ವೃತ್ತಿಯ ಬಲವರ್ಧನೆಗೆ ಹುಳಿಯಾರಿನಲ್ಲಿ ಕಾಯರ್ ಪಾಕ್೯ ನಿಮಿ೯ಸುವುದು ಅಗತ್ಯ ಎಂದು ರಾಜ್ಯ ತೆಂಗು ನಾರು ಉತ್ಪಾದಕರ ಸಂಘದ ಉಪಾಧ್ಯಕ್ಷ ಎಲ್.ಆರ್.ಚಂದ್ರಶೇಖರ್ ಅಭಿಪ್ರಾಯಪಟ್ಟರು. ಹುಳಿಯಾರು ಹೋಬಳಿ ಬರಕನಹಾಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪೋಚಕಟ್ಟೆ ತಾಂಡ್ಯದಲ್ಲಿ ಸೆಂಟ್ರಲ್ ಕಾಯರ್ ಬೋಡ್೯ನಿಂದ ನಾರು ಹುರಿ ತಯಾರಿಸುವ ಕಾಮಿ೯ಕರಿಗೆ ಏರ್ಪಡಿಸಿದ್ದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಕಾ೯ರ ಮತ್ತು ಕಾಯರ್ ಬೋಡ್೯ ನಡುವಿನ ಸಂಪರ್ಕದ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶದ ನಾರು ಹುರಿ ತಯಾರಕರಿಗೆ ಸಿಗಬಹುದಾದ ಹಣಕಾಸು ಸೇರಿದಂತೆ ಇನ್ನಿತರ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದ ಅವರು ಕಾಯರ್ ಬೋಡ್೯ ಈ ಬಗ್ಗೆ ಗಮನ ಹರಿಸಬೇಕೆಂದರು. ಕೆನರಾ ಬ್ಯಾಂಕ್ ಮ್ಯಾನೇಜರ್ ಸತೀಶ್ ಅವರು ಮಾತನಾಡಿ ನಾರು ತಯಾರಕ ಉದ್ದಿಮೆಯನ್ನು ಆಧುನಿಕರಣ ಗೊಳಿಸಿ ಆಥಿ೯ಕ ಚೈತನ್ಯ ನೀಡುವ ಸಲುವಾಗಿ ಸಕಾ೯ರದ ನೀತಿ ಹಾಗೂ ಬ್ಯಾಂಕಿನ ನಿಯಮದನ್ವಯ ಸಾಲ ಸೌಲಭ್ಯ ವಿತರಿಸಲು ಕೆನರಾ ಬ್ಯಾಂಕ್ ಸದಾ ಸಿದ್ದ ಎಂದರು. ಸೆಂಟ್ರಲ್ ಕಾಯರ್ ಬೋಡ್೯ ಇನ್ಸ್ಫೆಕ್ಟರ್ ಮಂಜುನಾಥ್ ಅವರು ಮಾತನಾಡಿ ಆಥಿ೯ಕ ಸಹಾಯ, ಸಹಾಯಧನ, ತರಬೇತಿ ಆಧುನಿಕ ಯಂತ್ರೋಪಕರಣಗಳು, ವಿದ್ಯುತ್ ಚಾಲಿತ ಹುರಿ ತಾಯಾರ

ಹುಳಿಯಾರಿನಲ್ಲಿ ಟೈಲರಿಂಗ್ ತರಬೇತಿ ಕೇಂದ್ರ ಆರಂಭ

(ಫೋಟೊ ವಿವರ: ಹುಳಿಯಾರು ಎಸ್ಬಿಐ ಪಕ್ಕದಲ್ಲಿ ನೂತನವಾಗಿ ಶ್ರೀ ಗಾಯತ್ರಿ ಮಹಿಳಾ ಟೈಲರಿಂಗ್ ತರಬೇತಿ ಕೇಂದ್ರವನ್ನು ಆರಂಭಿಸಲಾಯಿತು. ಚಂದ್ರಕಲಾ ಸತೀಶ್, ಶಾರದ ಜಗದೀಶ್, ನೀಲವೇಣಿ, ಉಮಾ, ಪ್ರತಿಭಾ, ಶಶಿಕಲಾ ಮತ್ತಿತರರು ಇದ್ದಾರೆ. ) ಗ್ರಾಮೀಣ ಪ್ರದೇಶ ಮಹಿಳೆಯರಿಗೆ ಆಥಿ೯ಕ ಚೈತನ್ಯ ನೀಡುವ ನಿಟ್ಟಿನಲ್ಲಿ ತುಮಕೂರಿನ ಸಿದ್ಧಗಂಗಾ ಜನಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಹುಳಿಯಾರಿನ ಎಸ್ ಬಿ ಐ ಪಕ್ಕದಲ್ಲಿ ಶ್ರೀ ಗಾಯತ್ರಿ ಮಹಿಳಾ ಟೈಲರಿಂಗ್ ತರಬೇತಿ ಕೇಂದ್ರವನ್ನು ಸೋಮವಾರ ಆರಂಭಿಸಲಾಯಿತು. ಜಾತಿ, ವಿದ್ಯಾರ್ಹತೆ, ವಯಸ್ಸು, ಆಥಿ೯ಕತೆಯ ತಾರತಮ್ಯವಿಲ್ಲದೆ ಆಸಕ್ತಿಯುಳ್ಳ ಪ್ರತಿಯೊಬ್ಬ ಮಹಿಳೆಗೂ ಕೇವಲ 200 ರು. ಶುಲ್ಕದಲ್ಲಿ ಮೂರು ತಿಂಗಳ ಕಾಲ ತರಬೇತಿ ನೀಡಿಲಾಗುವುದು. ಇದರಿಂದ ಸಂಸಾರ ನಿರ್ವಹಣೆಯ ಜೊತೆಗೆ ಮನೆಯಲ್ಲಿಯೆ ಕೆಲಸ ಮಾಡಿಕೊಂಡು ಆಥಿ೯ಕ ಚೈತನ್ಯವನ್ನು ಮಹಿಳೆಯರು ಪಡೆದುಕೊಳ್ಳಬಹುದಾಗಿದೆ. ಪಟ್ಟಣ ಪ್ರದೇಶದಲ್ಲಿ ದುಡಿಯುವ ಮನಸ್ಸುಳ್ಳ ಮಹಿಳೆಯರಿಗೆ ವಿಫುಲ ಅವಕಾಶಗಳಿದ್ದು ಗ್ರಾಮೀಣ ಪ್ರದೇಶದಲ್ಲಿ ಇಲ್ಲದ ಕಾರಣ ಈ ತರಬೇತಿ ಕೇಂದ್ರವನ್ನು ತೆರೆಯಲಾಗಿದ್ದು ಮಹಿಳೆಯರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ತುಮಕೂರು ಟೈಲರಿಂಗ್ ತರಬೇತಿ ಶಿಕ್ಷಕಿ ನೀಲವೇಣಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕೆಂಕೆರೆ ಬಸವ ಕೇಂದ್ರದ ಚಂದ್ರಕಲಾ ಸತೀಶ್, ಉದ್ದೇಶಿತ ಗಾಯಿತ್ರಿ ಪತ್ತಿನ ಸಹಕಾರ ಸಂಘದ ಮುಖ್ಯ ಪ್ರವರ್ತಕಿ ಶಾರದ ಜಗದೀಶ್, ಉಮಾ, ಪ್ರತಿ

ತಹಸಿಲ್ದಾರ್ ರಿಂದ ಯಳನಡುವಿನಲ್ಲಿ ಕಾಮಗಾರಿ ವೀಕ್ಷಣೆ

ಸಂಸದ ಜಿ.ಎಸ್.ಬಸವರಾಜು ಅವರ ಪ್ರದೇಶಾಭಿವೃದ್ಧಿಯಲ್ಲಿ ಹೋಬಳಿಯ ಯಳನಡು ಗ್ರಾಮದಲ್ಲಿ ನಿಮಾ೯ಣವಾಗುತ್ತಿರುವ ಶ್ರೀ ಗುರು ರೇವಣ್ಣ ಸಿದ್ದೇಶ್ವರ ಸ್ವಾಮಿ ಸಮುದಾಯ ಭವನದ ಕಾಮಗಾರಿಯನ್ನು ತಹಸೀಲ್ದಾರ್ ಟಿ.ಸಿ.ಕಾಂತರಾಜು ಅವರು ಶನಿವಾರ ವೀಕ್ಷಿಸಿದರು. ಶೀಘ್ರದಲ್ಲಿಯೇ ವಿದ್ಯುತ್ ಸಂಪರ್ಕ ಪಡೆದುಕೊಂಡು ಲೋಕಾರ್ಪಣೆ ಮಾಡುವಂತೆ ಸೂಚಿಸಿದರಲ್ಲದೆ ಸಮುದಾಯ ಭವನವನ್ನು ಜಾತಿ ತಾರತಮ್ಯ ಮಾಡದೆ ಸಾರ್ವಜನಿಕ ಕಾರ್ಯಕ್ರಮಕ್ಕೆ ಅನ್ಯೋನ್ಯತೆಯಿಂದ ಬಳಸಿಕೊಳ್ಳುವಂತೆ ದೇವಸ್ಥಾನ ಸಮಿತಿ ಸದಸ್ಯರಿಗೆ ಸಲಹೆ ನೀಡಿದರು. ಸಮುದಾಯದ ಸುತ್ತಮುತ್ತ ಅನಗತ್ಯವಾಗಿ ಬೆಳದಿರುವ ಗಿಡಗಂಟೆಗಳನ್ನು ಕಿತ್ತು ಸ್ವಚ್ಚವಾಗಿಡುವಂತೆ ತಿಳಿಸಿದರು. ತಾ.ಪಂ.ಕಾರ್ಯನಿವಾ೯ಹಣಾಧಿಕಾರಿ ವೇದಮೂತಿ೯, ಕಂದಾಯ ತನಿಖಾಧಿಕಾರಿ ಬಸವರಾಜು, ಗ್ರಾಮದ ಮುಖಂಡ ಬಸವರಾಜು, ಸಿದ್ಧರಾಮಣ್ಣ, ಮತ್ತಿತರರು ಉಪಸ್ಥಿತರಿದ್ದರು.

ರೈತರ ಮೇಲಿನ ಕೇಸ್ ವಾಪಸ್ಸ್,ಸಿಎಂ ಭರವಸೆ ಸುಳ್ಳೆ?

ರೈತರ ಹಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸಕಾ೯ರ ಸಾರ್ವಜನಿಕರ ಒಳಿತಿಗಾಗಿ ಧರಣಿ, ಪ್ರತಿಭಟನೆ, ಹೋರಾಟ ಮಾಡಿದ ವಿವಿಧ ಜಿಲ್ಲೆಗಳ ರೈತರ ಮೇಲೆ ದಾಖಲಾಗಿದ್ದ ಸುಮಾರು 82 ಕೇಸ್ಗಳನ್ನು ವಾಪಸ್ಸು ಪಡೆಯುವುದಾಗಿ ತೀಮಾ೯ನಿಸಲಾಗಿದೆ ಎಂದು ಹೇಳಿರುವುದು ಸುಳ್ಳು ಭರವಸೆಯೇ ಎಂಬುದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ರೈತರ ಪ್ರಶ್ನೆಯಾಗಿದೆ. ಹಲವಾರು ಬಾರಿ ರೈತರ ಸಭೆಗಳಲ್ಲಿ,ರೈತ ಮುಖಂಡರೊಂದಿಗೆ ವಿಧಾನಸೌಧ ಸಭಾಂಗಣದಲ್ಲಿ ನಡೆಸಿದ ಚಚೆ೯ಯ ಸಂದರ್ಭದಲ್ಲಿ ಮೇಲಿನ ಹೇಳಿಕೆಯನ್ನು ಪುನರಾವರ್ತನೆ ಮಾಡುತ್ತಲೆ ಬಂದಿರುವ ಮುಖ್ಯಮಂತ್ರಿಗಳು ಕೇವಲ ,ಹಾಸನ,ಧಾರವಾಡ,ಮಂಡ್ಯ, ಬೆಳಗಾವಿ, ದಾವಣಗೆರೆ ಜಿಲ್ಲೆಗಳ ರೈತರ 47 ಪ್ರಕರಣಗಳನ್ನು ಮಾತ್ರ ಹಿಂಪಡೆದು ತುಮಕೂರು ಜಿಲ್ಲೆಯ ರೈತರ ಪ್ರಕರಣವನ್ನು ಹಾಗೆ ಉಳಿಸಿರುವ ಹಕೀಕತ್ತಾದರೂ ಏನೆಂದು ಎಂಟು ವರ್ಷಗಳಿಂದ ಮೊಕದ್ದಮೆ ಎದುರಿಸುತ್ತಿರುವ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ರೈತರು ಕೇಳುತ್ತಿದ್ದಾರೆ. ಇಂದು ನಿನ್ನೆಯದಲ್ಲ: ಕರಂಟ್,ಗೊಬ್ಬರ,ಪರಿಸರ ನಾಶಕ್ಕೆ ಕಾರಣವಾಗುತ್ತಿರುವ ಗಣಿಗಾರಿಕೆ ವಿರುದ್ದ ಧ್ವನಿಯೆತ್ತಿದ ತಾಲೂಕಿನ ರೈತರುಗಳ ಮೇಲೆ ದಾಖಲಾಗಿರುವ ಮೊಕದ್ದಮೆಗಳು ಇಂದು ನಿನ್ನೆಯದಲ್ಲ.ಇಲ್ಲಿನ ರೈತರು ಬರೊಬ್ಬರಿ ಎಂಟು ವರ್ಷಗಳಿಂದಲ್ಲೂ ಕೋಟ್೯ ಕಛೇರಿ ಸುತುತ್ತಲೇ ಇದ್ದಾರೆ. ಯಾವ ಕಾರಣಕ್ಕೆ: ಹಸಿರು ಸೇನೆಯ ರಾಜ್ಯ ಸಂಚಾಲಕ ಕೆಂಕೆರೆ

ಪೋಟೊ ಸುದ್ದಿ

ಹುಳಿಯಾರು ಹೋಬಳಿ ಲಕ್ಕೇನಹಳ್ಳಿಯ ಸಾಹಿತಿ ಹಾಗೂ ಜಾನಪದ ಕಲಾವಿದ ಲ.ಪು.ಕರಿಯಪ್ಪ ಅವರಿಗೆ ಗುಲ್ಬರ್ಗದ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ ಬುದ್ದಿಷ್ಟ್ ಸೊಸೈಟಿ ಆಫ್ ಇಂಡಿಯ ಅವರು ಅಂಬೇಡ್ಕರ್ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಹುಳಿಯಾರು ಥಿಯಾಸಫಿಕಲ್ ಸೊಸೈಟಿಯಲ್ಲಿ ತಾವರಕೊಪ್ಪ ಶಿವಗಿರಿ ಕ್ಷೇತ್ರದ ಸೂರ್ಯನಾರಾಯಣ ಸ್ವಾಮೀಜಿಗಳ ಆಯುರ್ವೇದ ಆರೋಗ್ಯ ಶಿಬಿರ ನಡೆಯಿರು.ಸ್ವಾಮೀಜಿಯೊಂದಿಗೆ ಥಿಯಾಸಫಿಕಲ್ ಪದಾಧಿಕಾರಿಗಳು. ಹುಳಿಯಾರು ಸ್ಪಂದನ ನರ್ಸಿಂಗ್ ಹೋಂ ಹಿಂಭಾಗದಲ್ಲಿರುವ ಎ.ಆರ್.ರಂಗದಾಮೇಗೌಡ ಅವರ ಮನೆಯಲ್ಲಿ 12 ಬ್ರಹ್ಮಕಮಲ ಹೂ ಒಮ್ಮೆಲೆ ಅರಳಿ ನಿಂತು ಕಣ್ಮನ ಸೆಳೆಯಿತು.

ಹುಳಿಯಾರಿನಲ್ಲಿ ಸಾಮೂಹಿಕ ವಿವಾಹ,ಸಪ್ತಪದಿ ಮೂಲಕ ಸತಿಪತಿಗಳಾದ 20 ಜೋಡಿ

ಹುಳಿಯಾರಿನ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಭಾನುವಾರ ಮದುವೆಯ ಸಂಭ್ರಮ.ಇಲ್ಲಿನ ರೋಟರಿ ಸಂಸ್ಥೆ ಕಳೆದ 27 ವರ್ಷಗಳಿಂದ ಸತತವಾಗಿ ನಡೆಸಿಕೊಂಡು ಬಂದಿರುವ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮದುವೆಯಾಗಲು ಬಂದಿರುವ ವಧುವರರು,ಅವರುಗಳ ಪೋಷಕರು,ಇಷ್ಟಮಿತ್ರರು,ಸ್ನೇಹಿತರುಗಳಿಂದ ಮದುವೆಯ ಸಭಾಂಗಣ ತುಂಬಿತುಳುಕುತಿತ್ತು.ಧರ್ಮಸ್ಥಳದಲ್ಲಿನ ಸಾಮೂಹಿಕ ವಿವಾಹದ ಪರಿಕಲ್ಪನೆ ಹಾಗೂ ಧಮಾ೯ಧಿಕಾರಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರೋಟರಿ ಸಂಸ್ಥೆ ಅಂದಿನಿಂದಲೂ ಸರಳ ಹಾಗೂ ಸಾಮೂಹಿಕ ವಿವಾಹಕ್ಕೆ ಯಾವೊಂದು ಚ್ಯುತಿ ಬಾರದಂತೆ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬಂದಿದ್ದು ಉಚಿತವಾಗಿ ನಡೆಯುತ್ತ ಬಂದಿರುವ ಮಹೋತ್ಸವದಲ್ಲಿ ಒಟ್ಟು 20 ಜೋಡಿಗಳು ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡಿದರು. ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿದ್ದ ವಧು-ವರರಿಗೆ ಬಿಳಿ ಧೋತಿ,ಅಂಗಿ,ಪೇಟ,ಬಾಸಿಂಗ, ರೇಷ್ಮೆ ಸೀರೆ, ಕಾಲುಂಗುರ, ಬಳೆ, ಮಾಂಗಲ್ಯ, ಮಡಲಕ್ಕಿ ಸೇರಿದಂತೆ ಬಂದವರಿಗೆ ಊಟ ತಿಂಡಿ ಎಲ್ಲಕ್ಕೂ ದಾನಿಗಳ ನೆರವಿರುವದರಿಂದ ಉಚಿತ. ಪೋಷಕರಿಗೆ ಪೈಸೆಯಷ್ಟು ಖಚಿ೯ಲ್ಲ. ಇಂತಹ ಮದುವೆಗೆ ಗೋಡೆಕೆರೆ ಮಹಾಸಂಸ್ಥಾನದ ಚರಪಟ್ಟಾಧ್ಯಕ್ಷ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಶುಭ ಹಾರೈಸಿದರು. ಮಾನವೀಯ ಮೌಲ್ಯಗಳನ್ನು ಅರ್ಥಮಾಡಿಕೊಂಡು ಸತಿ-ಪತಿ ಇಬ್ಬರೂ ಸಮಾನರು ಎಂಬ ಭಾವನೆಯಲ್ಲಿ ಅನ್ಯೋನತೆಯಿಂದಲೂ ಸಂಸಾರ ಜೀವನವನ್ನು ನಿರ್ವಹಿಸಬೇಕು ಎಂದು ನೂತನ ವಧ

ಹುಳಿಯಾರು ಟಿಪ್ಪು ಸಂಘದಿಂದ ನೋಟ್ ಬುಕ್ ವಿತರಣೆ

ಟಿಪ್ಪುಸುಲ್ತಾನ್ 211 ನೇ ಪುಣ್ಯತಿಥಿ ಅಂಗವಾಗಿ ಹುಳಿಯಾರಿನ ಟಿಪ್ಪುಸುಲ್ತಾನ್ ಯುವಕ ಸಂಘದಿಂದ ಇಂದಿರಾನಗರದ ಉದು೯ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಲಾಯಿತು. ಸ್ಡಿಎಂಸಿ ಅಧ್ಯಕ್ಷ ದಸ್ತಗಿರಿ ಸಾಬ್ ಮಾತನಾಡಿ ಶಾಲೆಯಲ್ಲಿ 90 ಮಕ್ಕಳಿಗೆ ಕೇವಲ ಇಬ್ಬರು ಶಿಕ್ಷಕರಿದ್ದು ಶಿಕ್ಷಕರ ಕೊರತೆ ಬಗ್ಗೆ ಸಂಭಂದಪಟ್ಟವರು ಗಮನಹರಿಸಬೇಕೆಂದರು. ರೆಹಮಾನ್ ಖಾನ್ ಮಾತನಾಡಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಪೋಷಕರ ಪಾತ್ರ ಮಹತ್ವದಾಗಿದ್ದು ಅವರುಗಳ ಕಲಿಕೆ ಬಗ್ಗೆ ಆಸಕ್ತಿ ಹಾಗೂ ನಿಗಾವಹಿಸಬೇಕೆಂದರು. ಡಾ.ಷರೀಫ್ ಮಾತನಾಡಿ ಸಕಾ೯ರಿ ಶಾಲೆಗಳಲ್ಲಿ ಸಾಕಷ್ಟು ಸೌಲಭ್ಯ ಲಭ್ಯವಾಗುತ್ತಿದ್ದರು ಹೆಚ್ಚಿನ ಹಣ ತೆತ್ತು ಕಾನ್ವೆಂಟ್ ಸಂಸ್ಕೃತಿಯತ್ತ ಪೋಷಕರು ವಾಲುತ್ತಿರುವುದು ದುರದೃಷ್ಠಕರ ಎಂದರು. ಸಿಆರ್ಪಿ ಮಹಲಿಂಗಯ್ಯ,ಇಲಾಹಿ,ಶಿಕ್ಷಕಿಯರಾದ ಸಲ್ಮಾ, ಆಫಶಾನ್,ಟಿಪ್ಪುಯುವಕ ಸಂಘದ ಅಧ್ಯಕ್ಷ ಎಂ.ಡಿ.ಫಯಾಜ್,ಉಪಾಧ್ಯಕ್ಷ ಅಪ್ಸರ್ ಆಲಿ,ಮುಜೀಬ್,ಸೈಯದ್ ಇಫಾ೯ನ್ ಗಿರಿಯಾನಾಯ್ಕ ಮುಂತಾದವರಿದ್ದರು.

ಹುಳಿಯಾರಿನಲ್ಲಿ ತಾವರಕೊಪ್ಪ ಶಿವಗಿರಿ ಕ್ಷೇತ್ರದ ಸೂರ್ಯನಾರಾಯಣ ಸ್ವಾಮಿಜಿಯ ಆಯುರ್ವೇದ ಆರೋಗ್ಯ ಶಿಬಿರ

ಮೊನ್ನೆ ಹುಳಿಯರು ಗಾಂಧಿಪೇಟೆಯಲ್ಲಿರುವ ಸನ್ಮಾರ್ಗ ಥಿಯಾಸಫಿಕಲ್ ಸೊಸೈಟಿಯಲ್ಲಿ ಜನವೋ ಜನ. ವಯೋವೃದ್ಧರು, ನವ ದಂಪತಿಗಳು, ಅಂಗವಿಕಲರು ಹೀಗೆ ರೋಗಬಾಧಿತರ ದಂಡು ಅಲ್ಲಿ ನೆರೆದಿತ್ತು. ಆದರೆ ಅಲ್ಲಿ ತಜ್ಞ ವೈದ್ಯರ ತಂಡ ಇರಲಿಲ್ಲ, ರೋಗ ಪರೀಕ್ಷಕ ಸಾಧನಗಳ ಸುಳಿವು ಮೊದಲೇ ಇಲ್ಲ. ಇನ್ನು ಇಂಗ್ಲೀಷ್ ಮೆಡಿಸಿನ್ ಹಾವಳಿ ಇಲ್ಲವೆ ಇಲ್ಲ ಬಿಡಿ. ಆದರೂ ಅಲ್ಲಿ ನಡೆಯುತ್ತಿದುದು ಆರೋಗ್ಯ ಶಿಬಿರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದು ಎಂದಿನಂತೆ ಮಾಮೂಲಿ ಆರೋಗ್ಯ ಶಿಬಿರವಾಗಿರಲಿಲ್ಲ. ಸ್ಟೆಥಾಸ್ಕೊಪ್ನಲ್ಲಿ ತಪಾಸಣೆ ನಡೆಸಿ ರೋಗ ಪತ್ತೆ ಮಾಡುವುದಿರಲಿ ಸ್ವತಃ ರೋಗಿಗಳಿಂದ ಸಮಸ್ಯೆ ಕೇಳದೆ ರೋಗವನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಒಂದು ವಿಭಿನ್ನ ಹಾಗೂ ಅಪರೂಪದ ಆರೋಗ್ಯ ಶಿಬಿರ! ಹೌದು, ಈ ಶಿಬಿರದ ವೈದ್ಯರ ಎದುರು ಸುಮ್ಮನೆ ಕುಳಿತರೆ ಸಾಕು ತಮಗೆ ಬಾಧಿಸುತಿರುವ ರೋಗವನ್ನು ಕರಾರುವಕ್ಕಾಗಿ ಹೇಳುತ್ತಾರೆ. ಎಷ್ಟು ವರ್ಷದಿಂದ ಬಾಧಿಸುತ್ತಿದೆ, ಯಾವ ರೀತಿ ಬಾಧಿಸುತ್ತಿದೆ, ಇದರ ನಿಮರ್ೂಲನೆಗಾಗಿ ಪಟ್ಟ ವೇದನೆ ಹೀಗೆ ಎಲ್ಲವನ್ನೂ ವಿವರಿಸುತ್ತಾರೆ. ಇಷ್ಟೇ ಅಲ್ಲ, ರೋಗಿ ಬರದಿದ್ದರೂ ಕೂಡ ಆತನ ಪರವಾಗಿ ಬಂದವರಿಗೆ ರೋಗಿ ಇರುವ ದಿಕ್ಕು, ಆತನ ರೋಗಲಕ್ಷಣ ಹೇಳುವುದು ಇವರ ವಿಶೇಷ. ರೋಗಿಗಳನ್ನು ಮುಟ್ಟದೆ ಆತನಿಗೆ ಬಾಧಿಸುತ್ತಿರುವ ಕಾಯಿಲೆ ಹೇಳುವುದನ್ನು ಪರೀಕ್ಷಿಸುವ ಸಲುವಾಗಿ ರೋಗ ವಿಲ್ಲದ ಅನೇಕರು ಸುಮ್ಮನೆ ಕುಳಿತು ಕೊನೆಗೆ ನಿಮಗೆ ಯಾವ ರೋಗವಿಲ್ಲ ಎನ್ನಿಸಿಕೊ

ಹುಳಿಯಾರು:ವಿಜೃಂಭಣೆಯ ಶನೇಶ್ವರ ಕುಂಭಾಭಿಷೇಕ ಮಹೋತ್ಸವ

ಪಟ್ಟಣದ ಗಾಂಧಿ ಪೇಟೆಯಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನದಲ್ಲಿ 6 ನೇ ವರ್ಷದ ಶನೇಶ್ವರ ಜಯಂತಿ ಅಂಗವಾಗಿ ಕುಂಭಾಭಿಷೇಕ ಮಹೋತ್ಸವವನ್ನು ಶನಿವಾರದಂದು ವಿವಿಧ ಧಾಮಿ೯ಕ ಕೈಂಕರ್ಯದೊಂದಿಗೆ ಅಪಾರ ಜನಸ್ತೋಮದ ನಡುವೆ ಭಕ್ತಿ.ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಶುಕ್ರವಾರದಂದು ಹುಳಿಯಾರಿನ ಶ್ರೀದುಗಾ೯ಪರಮೇಶ್ವರಿ, ಶ್ರೀಹುಳಿಯಾರಮ್ಮ ಹಾಗೂ ಶ್ರೀಆಂಜನೇಯಸ್ವಾಮಿ ದೇವರುಗಳ ಆಗಮಿಸಿ ಕುಂಭ ಸ್ಥಾಪಿಸುವ ಮೂಲಕ ಮಹೋತ್ಸವ ಆರಂಭಗೊಂಡಿತು.ಶನಿವಾರದಂದು ಅರ್ಚಕರುಗಳಾದ ಎಚ್.ಎಸ್.ಲಕ್ಷ್ಮೀನರಸಿಂಹಯ್ಯ ನೇತೃತ್ವದಲ್ಲಿ ಹೆಚ್.ಕೆ.ಗುಂಡಣ್ಣ, ಸತ್ಯನಾರಾಯಣ,ಸೀತರಾಮಣ್ಣ,ಜೆ.ಗುಂಡಪ್ಪ, ಗಣೇಶ್ ಅವರ ಮಾರ್ಗದರ್ಶನದಲ್ಲಿ ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ಗಣಪತಿ ನವಗ್ರಹ, ಶನೇಶ್ವರ ಶಾಂತಿ, ಹೋಮ, ಕುಂಭಾಭಿಷೇಕ ಮುಂತಾದ ಧಾಮಿ೯ಕ ಚಟುವಟಿಕೆಗಳು ನಡೆದು ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು. ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಅನ್ನಸಂತರ್ಪಣೆ, ಮುಖ್ಯ ಪ್ರಾಣ ಭಜನಾ ಮಂಡಲಿಯಿಂದ ಸಂಜೆ ಭಜನೆ, ಶ್ರೀಸ್ವಾಮಿಯವರೊಂದಿಗೆ ಆಹ್ವಾನಿತ ದೇವರುಗಳ ಕೈಲಾಸರೂಢ ಮುತ್ತಿನ ಮಂಟಪದಲ್ಲಿ ಕುಳ್ಳಿರಿಸಿ ರಾತ್ರಿ ರಾಜ ಬೀದಿ ಉತ್ಸವ ಮಾಡಲಾಯಿತು. ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ಟಿ.ಆರ್.ಕುಮಾರಸ್ವಾಮಿ, ಉಪಾಧ್ಯಕ್ಷ ಶ್ರೀನಿವಾಸ್, ಜಂಟಿ ಕಾರ್ಯದಶಿ೯ ಲೋಕೇಶ್, ಖಜಾಂಜಿ ಡಿ.ಎಸ್.ನಾಗರಾಜು, ಹುಳಿಯಾರು ಸಂಘದ ಗೌ.ಅಧ್ಯಕ್ಷ ಎಸ್.ಚಂದ್ರಯ್ಯ, ಅಧ್ಯಕ್ಷ ಟೈಲರ್ ಪುಟ್ಟಣ್ಣ, ಕ

ಚಿಕ್ಕೆಣ್ಣೇಗೆರೆಯಲ್ಲಿ ಹಾಲು ಉತ್ಪಾದಕರ ಸಂಘ ಅಸ್ತಿತ್ವಕ್ಕೆ

ತುಮಕೂರು ಹಾಲು ಒಕ್ಕೂಟದಿಂದ ಸ್ಥಾಪಿತವಾದ 76 ನೇ ಹಾಲು ಉತ್ಪಾದಕರ ಸಹಕಾರ ಸಂಘವಾಗಿ ಹುಳಿಯಾರು ಸಮೀಪದ ಚಿಕ್ಕೆಣ್ಣೇಗೆರೆಯಲ್ಲಿ ಅಸ್ತಿತ್ವಕ್ಕೆ ಬಂದಿದೆ. ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಎನ್.ಗಂಗಾಧರಯ್ಯ, ಕಾರ್ಯದಶಿ೯ಯಾಗಿ ಸಿ.ವಿ.ರಮೇಶ್, ಹಾಲು ಪರೀಕ್ಷಕರಾಗಿ ಪ್ಯಾರಾಜಾನ್ ಅವರುಗಳು ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಸಿ.ಬಿ.ರಾಜಣ್ಣ, ನಂಜುಂಡಯ್ಯ, ಕಂಸಾಗರಯ್ಯ, ಕರಿಯಪ್ಪ, ಸಿ.ಕೆ.ಕಲ್ಲೇಶಾಚಾರ್, ಸಿ.ಎಚ್.ಚಂದ್ರಯ್ಯ, ಶ್ರೀಮತಿ ಜಯಮ್ಮ, ಮಹಾಲಿಂಗಯ್ಯ ಅವರುಗಳು ಆಯ್ಕೆಯಾಗಿದ್ದಾರೆ. ನೂತನ ಸಂಘವನ್ನು ತುಮಕೂರು ಹಾಲು ಒಕ್ಕೂಟದ ನಿದೇ೯ಶಕ ಹಾಗೂ ಚಿ.ನಾ.ಹಳ್ಳಿ ನಂದಿನಿ ಸಹಕಾರ ಬ್ಯಾಂಕ್ ಅಧ್ಯಕ್ಷ ಹಳೇಮನೆ ಶಿವನಂಜಪ್ಪ ಅವರು ಉದ್ಘಾಟಿಸಿದರು. ಸುಬ್ರಾಯಭಟ್, ಎ.ಪಿ.ಯರಗುಂಟಪ್ಪ, ಡಿ.ಸಿ.ನಟರಾಜ ಅರಸ್, ಮಲ್ಲಯ್ಯ, ಕರಿಯಪ್ಪ, ಗಂಗಮ್ಮ ಮತ್ತಿತರರು ಉಪಸ್ಥಿತರಿದ್ದರು.

ಹುಳಿಯಾರಿನ ಪ್ರಾಕೃಸ ಬ್ಯಾಂಕಿಗೆ 50 ಸಾವಿರ ಅನುದಾನ: ಕೆ.ಎನ್.ಆರ್

1992 ರ ಸಹಕಾರಿ ಕಾಯ್ದೆಯನ್ವಯ ಎಲ್ಲಾ ವಿಧದ ಸಹಕಾರ ಸಂಘಗಳಲ್ಲಿ ಶೇ.20 ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸಾಲ ನೀಡುವುದು ಕಡ್ಡಾಯವಾಗಿದ್ದು ಸಹಕಾರ ಸಂಘಗಳು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಸಹಕಾರಿ ಕಾಯ್ದೆಯಂತೆ ಕೆಲಸ ನಿರ್ವಹಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರು ಅಭಿಪ್ರಾಯ ಪಟ್ಟರು. ಹುಳಿಯಾರಿನ ಪ್ರಾಥಮಿಕ ಕೃಷಿ ಸಹಕಾರ ಬ್ಯಾಂಕಿನಲ್ಲಿ ಲ್ಲಿ ದ್ವಿಚಕ್ರವಾಹನ ಹಾಗೂ ಚಿನ್ನಾಭರಣ ಸಾಲ ವಿತರಣೆ ಚಾಲನೆ ನೀಡಿ ಮಾತನಾಡಿದ ಅವರು ಸದರಿ ಬ್ಯಾಂಕಿನ ಮೂಲಭೂತ ಸೌಲಭ್ಯ ನಿಮಾ೯ಣಕ್ಕೆ ನೆರವಾಗುವ ನಿಟ್ಟಿನಲ್ಲಿ ತಮ್ಮ ಅಪೆಕ್ಸ್ ಬ್ಯಾಂಕ್ ನಿದೇ೯ಶಕರ ಅನುಧಾನದಲ್ಲಿ 50 ಸಾವಿರ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಸಹಕಾರ ಸಂಘಗಳು ಸಹಕಾರಿ ಸದಸ್ಯರ ಸಹಕಾರದಿಂದ ಬೆಳೆಯಬೇಕಿದ್ದು ಪ್ರತಿಯೊಬ್ಬ ಸದಸ್ಯರು ವಾಷಿ೯ಕ ಮಹಾಸಭೆಗೆ ಕಡ್ಡಾಯವಾಗಿ ಹಾಜರಾಗುವ, ಸೂಕ್ತ ಸಲಹೆ-ಸಚನೆ ನೀಡುವ, ಅನುಮಾನಗಳನ್ನು ಪ್ರಶ್ನಿಸುವ ಹಾಗೂ ಕಾರ್ಯದಶಿ೯ಯಿಂದ ಸೂಕ್ತ ಸಮಜಾಯಿಸಿ ಸಿಗದಿದ್ದಲ್ಲಿ ಮೇಲಾಧಿಕಾರಿಗಳಿಗೆ ಪತ್ರ ಬರೆಯುವ ಮನೋಭಾವವನ್ನು ಬೆಳಸಿಕೊಳ್ಳಬೇಕು ಎಂದರು. ತು.ಜಿ.ಸ.ಕೇ.ಬ್ಯಾಂಕ್ ನಿದೇ೯ಶಕ ಎಸ್.ಆರ್.ರಾಜ್ ಕುಮಾರ್ ಅವರು ಮಾತನಾಡಿ ಕೆ.ಎನ್.ಆರ್ ಅವರು ಹಳ್ಳಿ ರೈತರ ಕಷ್ಟಕ್ಕೆ ಸ್ಪಂಧಿಸುವ ಸಲುವಾಗಿ ರಾಜ್ಯದಲ್ಲಿ ಪ್ರಪ್ರಥಮ ಭಾರಿಗೆ ಯಾವುದೇ ಅಡಮಾನವಿಲ್ಲದೆ ಕೇವಲ ನಂಬಿಕೆ

ಅವಳಿ ಕೊಬ್ಬರಿ

ಹುಳಿಯಾರು ಸಮೀಪದ ತೊರೆಸೂರಗೊಂಡನಹಳ್ಳಿಯ ಲಕ್ಷ್ಮಯ್ಯ ಅವರ ಮನೆಯಲ್ಲಿ ಕೊಬ್ಬರಿ ಸುಲಿಯುವಾಗ ಕಂಡು ಬಂದ ಅವಳಿ ಕೊಬ್ಬರಿ. ಈ ಅಪರೂಪದ ಕೊಬ್ಬರಿಯನ್ನು ಎ.ಡಿ.ತಾಂಡವಾಮೂತಿ೯ ಅವರು ಸೆರೆಹಿಡಿದಿದ್ದಾರೆ .

ದೂರು ನೀಡಬೇಕೆ?

ನಾನು ಇತ್ತೀಚೆಗೆ ಬ್ಲಾಗ್ ತಾಣಗಳನ್ನು ಜಾಲಾಡುತ್ತಿದ್ದಾಗ ಅಶೋಕ್ ಎಂಬುವವರ ಬ್ಲಾಗ್ ನಲ್ಲಿ ://ashokr.wordpress.com/category/from-net/ ) ಕೆಳಗಿನ ವಿಚಾರ ಕಂಡುಬಂತು.ಇದು ಸುಮಾರು ಜನರಿಗೆ ಅನುಕೂಲವಾಗಬಹುದೆಂದು ಅದನ್ನು ಇದರಲ್ಲಿ ಹಾಕಿರುವೆ. ದೂರು ನೀಡಬೇಕೆ? ಕೇಂದ್ರ ಅಥವಾ ರಾಜ್ಯ ಸರಕಾರದ ಯಾವುದಾದರೂ ವಿಭಾಗಕ್ಕೆ ದೂರುಸಲ್ಲಿಸಬೇಕಾದರೆ ಏನು ಮಾಡಬೇಕು ಎಂಬ ಚಿಂತೆ ಎಲ್ಲರಿಗೂ ಕನಿಷ್ಠಒಮ್ಮೆಯಾದರೂ ಬಂದಿರುತ್ತದೆ. ದೂರು ಸಲ್ಲಿಸಲೆಂದೇ ಕೇಂದ್ರ ಸರಕಾರದಜಾಲತಾಣವೊಂದಿದೆ. ಅದರ ವಿಳಾಸ - www.pgportal.gov.in . ಈ ತಾಣದಲ್ಲಿದೂರು ಸಲ್ಲಿಸಿದರೆ ನಿಮ್ಮ ದೂರಿಗೆ ಒಂದು ನೋಂದಣಿ ಸಂಖ್ಯೆ ದೊರೆಯುತ್ತದೆ.ನಂತರ ನಿಮ್ಮ ದೂರು ಎಲ್ಲಿಗೆ ತಲುಪಿದೆ, ಅದರ ಬಗ್ಗೆ ಏನು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಕಾಲಕಾಲಕ್ಕೆ ಪರಿಶೀಲಿಸುತ್ತಿರಬಹುದು. ನೀವು ಒಮ್ಮೆ ಇದರ ಉಪಯೋಗ ಪಡೆದುಕೊಳ್ಳಿ ಡೌನ್‌ಲೋಡ್ ಎಲ್ಲ ಬಹುಮಾಧ್ಯಮಗಳಿಗೆ ಒಂದೇ ಪ್ಲೇಯರ್ ಚಲನಚಿತ್ರ, ವೀಡಿಯೋಗಳನ್ನು ಗಣಕದಲ್ಲಿ ವೀಕ್ಷಿಸದವರು ಯಾರು? ಇವುಗಳನ್ನುಸಾಮಾನ್ಯವಾಗಿ ವಿಂಡೋಸ್ ಬಳಸುವವರು ತಮ್ಮ ಗಣಕದಲ್ಲೇ ಇರುವವಿಂಡೋಸ್ ಮೀಡಿಯಾ ಪ್ಲೇಯರ್ ಬಳಸಿ ವೀಕ್ಷಿಸುತ್ತಾರೆ. ಆದರೆ ಇದರಲ್ಲಿರುವಸಮಸ್ಯೆಯೆಂದರೆ ಕೆಲವು ನಮೂನೆಯ ಫೈಲುಗಳನ್ನು ಇದನ್ನು ಬಳಸಿ ವೀಕ್ಷಿಸಲುಆಗುವುದಿಲ್ಲ. ಉದಾಹರಣೆಗೆ ಯುಟ್ಯೂಬ್ ತಾಣದಿಂದ ಡೌನ್‌ಲೋಡ್ ಮಾಡಿದಫ್ಲಾಶ್ ವೀಡಿಯೋ ಫೈಲುಗಳು. ಇಂತಹ ಫೈಲುಗಳನ್ನು ವೀಕ್ಷಿಸಲು

ಹುಳಿಯಾರಿನಲ್ಲಿ ಮಹಿಳಾ ಸಹಕಾರಿ ಸಂಘ ಸ್ಥಾಪಿಸಲು ಅನುಮತಿ

ಹುಳಿಯಾರು ಹೋಬಳಿಯ ಎಲ್ಲಾ ಗ್ರಾಮಗಳ ಮಹಿಳೆಯರು ತಮ್ಮದೇ ಆದ ಸಹಕಾರಿ ಸಂಘವನ್ನು ಸ್ಥಾಪಿಸಿಕೊಳ್ಳುವ ಚಿಂತನೆ ನಡೆಸಿ ಈ ಬಗ್ಗೆ ಷೇರು ಸಂಗ್ರಹಣೆಗೆ ಅನುಮತಿ ಕೋರಿ ಸಲ್ಲಿಸಿರುವ ಪ್ರಸ್ತಾವನೆಗೆ ಸಹಕಾರಿಗಳ ಸಹಾಯಕ ನಿಬಂಧಕರು ತಿಪಟೂರು ಉಪವಿಭಾಗಕರು ಮನ್ನಣೆ ನೀಡಿ ಷೇರು ಸಂಗ್ರಹಣೆಗೆ ಇಲಾಖಾ ಅನುಮತಿ ನೀಡಿದ್ದಾರೆ ಎಂದು ಮುಖ್ಯ ಪ್ರವರ್ತಕರಾದ ಎಸ್.ಶಾರದ ಜಗದೀಶ್ ತಿಳಿಸಿದ್ದಾರೆ. ಮಹಿಳೆಯರಲ್ಲಿ ಮಿತವ್ಯಯ ಹಾಗೂ ಉಳಿತಾಯ ಭಾವನೆಯನ್ನು ಪ್ರಚೋದಿಸಿ ಎಲ್ಲಾ ವಿಧದ ಠೇವಣಿಯನ್ನು ಸಂಗ್ರಹಿಸಿ ಮಹಿಳೆಯರ ಆಥಿ೯ಕ ಅಭಿವೃದ್ಧಿಗಾಗಿ ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ಮತ್ತು ಬ್ಯಾಂಕಿಗ್ ಸೌಲಭ್ಯಗಳನ್ನು ನೀಡುವ ಘನ ಉದ್ದೇಶವನ್ನು ಈ ಸಂಸ್ಥೆ ಹೊಂದಿದೆ ಎಂದು ಅವರು ತಿಳಿಸಿದ್ದಾರೆ. ಉದ್ದೇಶಿತ ಸಹಕಾರಿ ಸಂಘಕ್ಕೆ ಶ್ರೀಗಾಯತ್ರಿ ಮಹಿಳಾ ಸೌಹಾರ್ದ ಪತ್ತಿನ ಸಹಕಾರ ಸಂಘ ಎಂದು ನೊಂದಾಯಿಸಲು ನಿರ್ಧರಿಸಲಾಗಿದೆ. ಎರಡು ಲಕ್ಷದ ರು. ಷೇರು ಸಂಗ್ರಹಣೆಯ ಗುರಿಯನ್ನು ಇಲಾಖೆ ನೀಡಿದ್ದು ಷೆರು ಧನವನ್ನು 1 ಸಾವಿರ ರು.ಗಳೆಂದು ನಿಗಧಿ ಮಾಡಿ ಸಂಗ್ರಹಣಾ ಕಾರ್ಯ ಆರಂಭಿಸಲಾಗಿದೆ. ಅಲ್ಲದೆ, ಇಲ್ಲಿನ ಬಿಎಚ್ ರಸ್ತೆಯಲ್ಲಿರುವ ಎಸ್.ಬಿ.ಐ ಬ್ಯಾಂಕ್ ಕಟ್ಟಡದಲ್ಲಿ ಕಾಯಾ೯ರಂಭ ಮಾಡಲಿದೆ ಎಂದು ವಿವರಿಸಿದರು. ಸದರಿ ಸಂಸ್ಥೆಯ ಸ್ಥಾಪನೆ ಕಾರ್ಯದಲ್ಲಿ ಬೆಂಗಳೂರಿನ ಸೌಹಾರ್ದ ಸಹಕಾರಿ ತರಬೇತುದಾರ ವೈ.ಕುಮಾರ್ ಹಾಗೂ ತುಮಕೂರು ಸಹಕಾರಿ ಸಲಹೆಗಾರ ಶಂಕರ್ ಹೆಗ್ಗಡೆ ಅವರ ಮಾರ್ಗದರ್ಶನ ಹಾಗೂ ಸಲಹೆ

ಕನಾ೯ಟಕ ಹಾಲು ಮಹಾಮಂಡಳಿಯ ಡೈರಿಗಳನ್ನು ಸಧೃಢಗೊಳಿಸಿ: ಹಳೇಮನೆ ಶಿವನಂಜಪ್ಪ

ಗ್ರಾಮಾಂತರ ಪ್ರದೇಶದ ಹಾಲು ಉತ್ಪಾದಕರ ಸಂಸ್ಥೆಗಳನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಸಂಘಗಳಿಗೆ ಸಕಾ೯ರದ ಪ್ರೋತ್ಸಾಹ ಧನವಲ್ಲದೆ ಹಾಲು ಉತ್ಪಾದಕರು ಉತ್ಪಾದಿಸುವ ಪ್ರತಿ ಲೀಟರ್ ಹಾಲಿಗೆ 2 ರು ಪ್ರೋತ್ಸಾಹ ಧನ ನೀಡುತ್ತಿದ್ದು ಕನಾ೯ಟಕ ಹಾಲು ಮಹಾಮಂಡಳಿಯ ಡೈರಿಗಳಿಗೆ ಹಾಲು ಹಾಕುವ ಮೂಲಕ ಮಂಡಳಿಯ ಡೈರಿಗಳನ್ನು ಸಧೃಢಗೊಳಿಸಿ ಎಂದು ತುಮಕೂರು ಹಾಲು ಒಕ್ಕೂಟದ ನಿದೇ೯ಶಕ ಹಾಗೂ ಚಿ.ನಾ.ಹಳ್ಳಿ ನಂದಿನಿ ಸಹಕಾರ ಬ್ಯಾಂಕ್ ಅಧ್ಯಕ್ಷ ಹಳೇಮನೆ ಶಿವನಂಜಪ್ಪ ಕಿವಿ ಮಾತು ಹೇಳಿದರು. ಹುಳಿಯಾರು ಸಮೀಪದ ಚಿಕ್ಕೆಣ್ಣೇಗೆರೆಯಲ್ಲಿ ನೂತನವಾಗಿ ಸ್ಥಾಪಿತವಾದ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು ಲೀಟರ್ ಹಾಲಿಗೆ 2 ರು. ಪ್ರೋತ್ಸಾಹಧನವಲ್ಲದೆ ಹಸು ಖರೀದಿಗೆ ಶೇ.6 ರ ಬಡ್ಡಿದರದಲ್ಲಿ 70 ಸಾವಿರದವರೆವಿಗೂ ಸಾಲ ನೀಡಲಿದ್ದು ಈ ಸೌಲಭ್ಯಗಳು ಖಾಸಗಿ ಡೈರಿಗಳಲ್ಲಿ ಸಿಗುವುದಿಲ್ಲ. ಖಾಸಗಿಯವರ ಹಾಲಿನ ಡೈರಿಗಳು ಏಕಚಕ್ರಾಧಿಪತ್ಯವುಳ್ಳವುಗಳಾಗಿದ್ದು ಹಾಲು ಹಾಕುವ ರೈತನಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಕನಾ೯ಟಕ ಹಾಲು ಮಹಾಮಂಡಳಿಯ ಡೈರಿಗಳು ಹಾಲು ಹಾಕುವ ರೈತರಿಗೇ ಕಾರ್ಯಕಾರಿ ಮಂಡಳಿ ಅಧಿಕಾರ ನೀಡಿ ಎಲ್ಲಾ ಹಣಕಾಸು ವ್ಯವಹಾರದಲ್ಲಿ ಭಾಗಿಮಾಡಿಕೊಳ್ಳುತ್ತವೆ. ಹಾಗಾಗಿ ಖಾಸಗಿ ಹಾಲಿನ ಡೈರಿಗೆ ಮರುಳಾಗದೆ ಕನಾ೯ಟಕ ಹಾಲು ಮಂಡಳಿಯ ಡೈರಿಗಳನ್ನು ಸ್ಥಾಪಿಸಿಕೊಳ್ಳಿ ಎಂದು ಸಲಹೆ ನೀಡಿದರು. ತುಮಕೂರು ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಸುಬ್ರಾಯಭಟ್ ಅವರು ಮಾತನಾ

ಕೆಂಕೆರೆ ಪಿಎಸಿ ಬ್ಯಾಂಕ್ ನಲ್ಲಿ ಲಕ್ಷಾಂತರ ರು. ಅವ್ಯವಹಾರ

ಹುಳಿಯಾರು ಹೋಬಳಿ ಕೆಂಕೆರೆ ಪ್ರಾಥಮಿಕ ಕೃಷಿ ಸಹಕಾರ ಬ್ಯಾಂಕ್ನಲ್ಲಿ ಲಕ್ಷಾಂತರ ರು. ಅವ್ಯವಹಾರ ನಡೆದಿರುವುದಾಗಿ ಸ್ವತಃ ಬ್ಯಾಂಕಿನ ನೂತನ ಕಾರ್ಯಕಾರಿ ಮಂಡಳಿ ಸದಸ್ಯರು ಪತ್ತೆ ಹಚ್ಚಿ ಮ್ಯಾನೇಜರ್ ಬಿ.ರಾಜಪ್ಪ ಅವರನ್ನು ತರಾಟೆಗೆ ತೆಗೆದುಕೊಂಡು ಚೀಮಾರಿ ಹಾಕಿದ ಘಟನೆ ಮಂಗಳವಾರ ಜರುಗಿದೆ. ಬೈಕ್ ಹಾಗೂ ಚಿನ್ನ ಸಾಲ ನೀಡುವ ವಿಚಾರವಾಗಿ ನೂತನ ಚುನಾಯಿತ ಪ್ರತಿನಿಧಿಗಳ ಸಭೆಯನ್ನು ಮಂಗಳವಾರ ಕರೆಯಲಾಗಿತ್ತು. ಸಭೆಯಲ್ಲಿ 2009-10 ನೇ ಸಾಲಿನ ಆಯವ್ಯಯ ದಾಖಲಾತಿಯಲ್ಲಿ 2 ಲಕ್ಷ ರು. ಉಳಿಕೆ ಹಣ ಇದ್ದು ಈ ಹಣ ಡಿಸಿಸಿ ಬ್ಯಾಂಕಿನಲ್ಲಿರುವ ಪಿಎಸಿಬಿ ಖಾತೆಗೆ ಜಮೆ ಆಗದಿರುವುದು ಹಾಗೂ ಸದರಿ ಬ್ಯಾಂಕಿನ ಕ್ಯಾಷ್ ಬಾಕ್ಸ್ನಲ್ಲಿ ಇಲ್ಲದಿರುವ ಸತ್ಯ ತಿಳಿದು ಬಂದಿತು. ಇದರಿಂದ ಸಹಜವಾಗಿ ಗಾಭರಿಯಾದ ಕಾರ್ಯಕಾರಿ ಮಂಡಳಿ ಮ್ಯಾನೇಜರ್ ಅನ್ನು ಪ್ರಶ್ನಿಸಲಾಗಿ 60 ಸಾವಿರ ರು.ಗಳನ್ನು ಕಛೇರಿ ದುರಸ್ಥಿಗೆ ಬಳಕೆ ಮಾಡಿದ್ದು ಉಳಿದ 1.40 ಲಕ್ಷ ರು.ಗಳನ್ನು ಷೇರುದಾರರಿಗೆ ಸಾಲ ನೀಡಿರುವುದಾಗಿ ಸಬೂಬು ಹೇಳಿದರು. ಪ್ರತಿಯಾಗಿ ಮಂಡಳಿಯವರು ಸಾಲ ಪಡೆದವರ ಪಟ್ಟಿ ಹಾಗೂ ಸಾಲ ನೀಡಿರುವ ದಾಖಲಾತಿಯನ್ನು ತೋರಿಸುವಂತೆ ಪಟ್ಟು ಹಿಡಿದಾಗ ದಾಖಲಾತಿ ತೋರಿಸಲು ವಿಫಲವಾಗಿ ಇನ್ನೇರಡು ದಿನಗಳಲ್ಲಿ ಹಣ ಬ್ಯಾಕಿಕೆ ಜಮೆ ಮಾಡುವುದಾಗಿ ಕೇಳಿಕೊಳ್ಳುವ ಮೂಲಕ ಮ್ಯಾನೇಜರ್ ಹಣವನ್ನು ದುರ್ಬಳಕೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ಸಮರ್ಪಕವಾಗಿ ಪಡಿತರ ವಿತರಿಸುತ್ತಿಲ್ಲ: ಸದರಿ ಬ್ಯಾಂಕಿನಲ್ಲಿ ಪಡಿತರ

ಸಪ್ತಗಿರಿ ಕಾಯರ್ ಫೈಬರ್ಸ್ ಗೆ ಸೆಂಟ್ರಲ್ ಕಾಯರ್ ಬೋಡ್೯ ತಂಡದ ಭೇಟಿ

ಸಪ್ತಗಿರಿ ಕಾಯರ್ ಫೈಬರ್ಸ್ ಗೆ ಸೆಂಟ್ರಲ್ ಕಾಯರ್ ಬೋಡ್೯ ತಂಡದ ಭೇಟಿ --------------------------------------- ಕಾಯರ್ ಇಂಡಸ್ಟ್ರಿ ಬಗ್ಗೆ ಮೆಚ್ಚುಗೆ- ನೂತನ ತಂತ್ರಜ್ಞಾನ ಬಳಕೆಗೆ ಸಲಹೆ ನಾರು ಉದ್ದಿಮೆಯ ಅಧ್ಯಯನದ ಸಲುವಾಗಿ ಕನಾ೯ಟಕ ರಾಜ್ಯಕ್ಕೆ ಆಗಮಿಸಿರುವ ಸೆಂಟ್ರಲ್ ಕಾಯರ್ ಬೋಡ್೯ ರಿಮೋಟ್ ಸ್ಕೀಂ ಛೇರ್ಮನ್ ಹಾಗೂ ಕೇರಳ ಶಾಸಕ ಆನಂದನ್ ಅವರ ನೇತೃತ್ವದ ತಂಡ ಹುಳಿಯಾರಿನ ಪೇಟೆ ಬೀದಿಯಲ್ಲಿರುವ ರೂಪಾ ಚಂದ್ರಶೇಖರ್ ಮಾಲೀಕತ್ವದ ಸಪ್ತಗಿರಿ ಕಾಯರ್ ಫೈಬರ್ಸ್ ಗೆ ಸೋಮವಾರ ಭೇಟಿ ನೀಡಿದರು.ಉತ್ತಮ ಗುಣಮಟ್ಟದ ನಾರಿನ ವಿವಿಧ ಉತ್ಪನ್ನಗಳನ್ನು ತಯಾರಿಸಿ ಉತ್ಪಾದನೆಯಲ್ಲಿ ಉತ್ತಮ ಸಾಧನೆ ಮಾಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ನಾರು ತಯಾರಿಕೆ ಬಗ್ಗೆ ವಿವಿಧ ಕಾರ್ಯ ಹಂತಗಳನ್ನು ವೀಕ್ಷಿಸಿದ ತಂಡ ನೂತನ ತಂತ್ರಜ್ಞಾನ ಬಳಸಿ ಘಟಕ ಅಭಿವೃದ್ಧಿಪಡಿಸಲು ಬೋಡ್೯ನಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ನಂತರ ಇಲ್ಲಿನ ನಾರಿನ ಉದ್ದಿಮೆ ಬಗ್ಗೆ ಪ್ರತಿಕಿಯೆ ವ್ಯಕ್ತಪಡಿಸಿದ್ದಿಷ್ಟು. ತಾಂತ್ರಿಕತೆಯಲ್ಲಿ ಬಹಳ ಹಿಂದಿದೆ: ಕನಾ೯ಟಕ ರಾಜ್ಯ ಕಲ್ಪತರು ನಾಡೆಂದು ಹೆಸರಾಗಿದ್ದು ನಾರು ಉದ್ದಿಮೆ ನಂಬಿ ಅನೇಕರು ಜೀವನ ಸಾಗಿಸುತ್ತಿದ್ದಾರೆ. ರಾಷ್ಟ್ರದಲ್ಲಿ ಕನಾ೯ಟಕ ರಾಜ್ಯ ನಾರು ಉತ್ಪಾದನೆಯಲ್ಲಿ 3 ನೇ ಸ್ಥಾನದಲ್ಲಿದ್ದು ಇಲ್ಲಿನ 16 ಜಿಲ್ಲೆಗಳಲ್ಲಿ ನಾರು ಉದ್ದಿಮೆಗಳಿವೆ. ಆದರೆ ಕೇರಳ ಹಾಗೂ ತಮಿಳುನಾಡಿಗೆ ಹೋಲಿಸಿದರೆ ಕನಾ೯ಟಕ ತಾಂತ್ರಿಕತೆಯಲ್ಲ

ಹುಳಿಯಾರು ರೋಟರಿಯಿಂದ 13 ರಂದು ಸಾಮೂಹಿಕ ವಿವಾಹ

ಹುಳಿಯಾರು ರೋಟರಿ ಸಂಸ್ಥೆಯಿಂದ 27 ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವವನ್ನು ಇಲ್ಲಿನ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಜೂನ್ 13 ರ ಭಾನುವಾರ ಏರ್ಪಡಿಸಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆ ಹಾಗೂ ಗೋಡೆಕೆರೆ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ವಿವಾಹವಾಗುವ ವಧು-ವರರಿಗೆ ಬಟ್ಟೆ, ವಧುಗಳಿಗೆ ರೇಷ್ಮೆ ಸೀರೆ, ಕಾಲುಂಗುರ, ಬಳೆ, ಮಾಂಗಲ್ಯ, ಮಡಲಕ್ಕಿ, ಬಾಸಿಂಗಗಳನ್ನು ಉಚಿತವಾಗಿ ನೀಡಲಾಗುವುದು. ಹೆಣ್ಣಿಗೆ 18 ಹಾಗೂ ಗಂಡಿಗೆ 21 ವರ್ಷ ತುಂಬಿದವರಿಗೆ ಮಾತ್ರ ಇಲ್ಲಿ ವಿವಾಹವಾಗಲು ಅವಕಾಶಗಳಿದ್ದು ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಬಂದು ರಾಮಾಹಾಲ್ ಲಕ್ಷ್ಮೀಕಾಂತ್, ವಿನಾಯಕ ಟೆಕ್ಸ್ಟೈಲ್ ರಮಾಕಾಂತ್, ಎಲ್ಐಸಿ ರವೀಶ್, ರಶ್ಮಿ ಎಲೆಕ್ಟ್ರಿಕಲ್ ಶ್ರೀನಿವಾಸ್ ಅವರಲ್ಲಿ ಹೆಸರು ನೊಂದಾಯಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸೋರಲಮಾವುವಿನಲ್ಲಿ ಭತ್ತದ ಬೆಳೆಯ ಕ್ಷೇತ್ರೋತ್ಸವ

ಬೆಂಗಳೂರು ಜಲ ಸಂವರ್ಧನೆ ಯೋಜನಾ ಸಂಘ, ಕೃಷಿ ವಿಶ್ವ ವಿದ್ಯಾಲಯ, ಜಿಲ್ಲಾ ಮಾರ್ಗದರ್ಶನ ತಂಡ, ಶ್ರೀ ಆಂಜನೇಯ ಸ್ವಾಮಿ ಕೆರೆ ಅಭಿವೃದ್ಧಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಹುಳಿಯಾರು ಸಮೀಪದ ಸೋರಲಮಾವು ಗ್ರಾಮದಲ್ಲಿ ಸಮುದಾಯ ಆಧಾರಿತ ಕೆರೆ ನಿರ್ವಹಣೆ ಯೋಜನೆಯಲ್ಲಿ ತೆಗೆದುಕೊಳ್ಳಲಾದ ರೈತರ ಕ್ಷೇತ್ರ ಪಾಠಶಾಲೆ ಅಡಿಯಲ್ಲಿ ಏರ್ಪಡಿಸಿದ್ದ ಭತ್ತ ಬೆಳೆಯ ಕ್ಷೇತ್ರೋತ್ಸವವು ಯಶಸ್ವಿಯಾಗಿ ನಡೆಯಿತು. ಗ್ರಾಮದ ಯುವ ರೈತಜಿ.ಈಶ್ವರಯ್ಯ ಅವರು ಮಾತನಾಡಿ ಕೆರೆಗಳು ಗ್ರಾಮದ ಸಂಪತ್ತುಗಳು ಎನ್ನುವ ಕಾರಣದಿಂದ ಕೆರೆ ಅಭಿವೃದ್ಧಿ ಮೂಲಕ ರೈತರ ಕೃಷಿಗೆ ನೆರವಾಗಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ಜನರ ಸ್ಪಂದನೆ ಇಲ್ಲದ ಕಾರಣ ಯೋಜನೆಗಳು ವಿಫಲವಾಗುತ್ತಿವೆ. ಹಾಗಾಗಿ ಗ್ರಾಮದ ಪ್ರತಿಯೊಬ್ಬರೂ ಕೆರೆ ಅಭಿವೃದ್ಧಿ ಸಂಘಕ್ಕೆ ಸೇರಿಕೊಂಡು ಹೂಳು ತೆಗೆಯುವ, ಏರಿ ದುರಸ್ಥಿ ಮಾಡುವ, ಗಿಡಗಂಟೆಗಳನ್ನು ಕೀಳುವ ಕೆಲಸಗಳಲ್ಲಿ ಭಾಗಿಯಾಗಿ ಮುಂದಿನ ಉತ್ತಮ ಫಸಲಿಗೆ ಪೂರಕ ವಾತಾವರಣ ನಿರ್ಮಾಣ ಮಾಡುವಂತೆ ಕರೆ ನೀಡಿದರು. ರೈತ ಉತ್ತಮ ಫಸಲು ಪಡೆಯುವ ನಿಟ್ಟಿನಲ್ಲಿ ಕಾಳುಗಳ ಮೊಳಕೆ ಮಾಡುವಾಗ,ನಾಟಿ ಮಾಡುವಾಗ ಎಚ್ಚರಿಕೆಯಾಗಿರಬೇಕು ಹಾಗೂ ಸಮರ್ಪಕ ನೀರು ನಿರ್ವಹಣೆ, ಔಷಧ ಸಿಂಪಡಣೆ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದರು. ಶ್ರೀ ಆಂಜನೇಯ ಸ್ವಾಮಿ ಕೆರೆ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಕರೇಗೌಡ ಹಿಂದಿನ ಸಾಂಪ್ರದಾಯಕ ಪದ್ದತಿ ಹಾಗೂ ಈಗ ಪ್ರಾಯೋಗಿಕವಾಗಿ ನಾಟಿ ಮಾಡಿರ

ಸ್ಪಂದನ ನರ್ಸಿಂಗ್ ಹೋಂನಿಂದ ಪರಿಸರ ದಿನಾಚರಣೆ

ಪಟ್ಟಣದ ಸ್ಪಂದನ ನರ್ಸಿಂಗ್ ಹೋಂ ವತಿಯಿಂದ ಎಂಪಿಎಸ್ ಶಾಲಾ ಆವರಣ ಹಾಗೂ ಡಾ.ರಾಜ್ ರಸ್ತೆಯ ಬದಿಯಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ನಸಿ೯ಂಗ್ ಹೋಂನ ವೈದ್ಯ ಡಾ.ನಾಗರಾಜು ಶುದ್ದ ಪರಿಸರಕ್ಕೆ ಮರಗಳ ಕಾಣಿಕೆ ಅತ್ಯಮೂಲ್ಯವಾಗಿದ್ದು ದಿನೇ ದಿನೆ ಗಿಡ-ಮರಗಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಬಿಸಿಲಿನ ತಾಪ ಹೆಚ್ಚಾಗಿ ಪ್ರಕೃತಿಯಲ್ಲಿ ವೈಪರಿತ್ಯಗಳು ಉಂಟಾಗುತ್ತಿದೆ. ಈ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನರ್ಸಿಂಗ್ ಹೋಂ ವತಿಯಿಂದ ಇಂದು ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಇಲ್ಲಿನ ಸಂಘ-ಸಂಸ್ಥೆಗಳು ಹಾಗೂ ಪರಿಸರ ಪ್ರೇಮಿಗಳ ಸಹಕಾರದೊಂದಿಗೆ ಹುಳಿಯಾರು ಪಟ್ಟಣದಾಧ್ಯಂತ ಸಸಿನೆಡುವ ಗುರಿ ಹೊಂದಲಾಗಿದೆ ಎಂದರು. ಪ್ರತಿಯೊಬ್ಬರೂ ಕೇವಲ ಒಂದೇ ಒಂದು ಮರ ಬೆಳಸುವ ಸಂಕಲ್ಪ ಮಾಡಿದರೂ ಸಾಕೂ ಗ್ಲೋಬಲ್ ವಾಮಿ೯ಂಗ್ ಎಂಬ ಭೂತವನ್ನು ಬಡಿದೋಡಿಸಬಹುದು ಎಂದು ಸಿದ್ಧಶ್ರೀ ಕ್ಲೀನಿಕ್ ನ ಡಾ.ವೈ.ಜಿ.ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು. ಜಿ.ಪಂ.ಸದಸ್ಯ ಹೊನ್ನಪ್ಪ, ಗ್ರಾ.ಪಂ.ಸದಸ್ಯ ಎಚ್.ಆರ್.ರಂಗನಾಥ್, ಡಾ.ರಾಜಶೇಖರ್, ಮೆಡಿಕಲ್ ಗೋಪಾಲ್, ಎಲ್ಐಸಿ ಏಜೆಂಟ್ ನಾಗರಾಜು, ಸ್ಪಂದನ ಮೆಡಿಕಲ್ ಮೂರ್ತಣ್ಣ, ಎಂಪಿಎಸ್ ಮುಖ್ಯ ಶಿಕ್ಷಕ ಭೀಮಯ್ಯ, ಶಿಕ್ಷಕ ಎಂ.ಷಬ್ಬೀರ್, ಸ್ಪೋರ್ರ್ಸ್ ಕ್ಲಬ್ ನ ಚನ್ನಬಸವಯ್ಯ, ಗುಲಾಬಿ ಚನ್ನಬಸವಯ್ಯ ಮತ್ತಿತರರು ಉಪಸ್ಥಿತರಿದ್ದರು

ಹ್ಯಾಟ್ರಿಕ್ ಗೆಲುವು

ಹುಳಿಯಾರು ಹೋಬಳಿ ತಿಮ್ಲಾಪುರ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ನಂದಿಹಳ್ಳಿ ಕ್ಷೇತ್ರದಿಂದ ಸ್ಪಧಿ೯ಸಿದ್ದ ಎನ್.ಜಿ.ಬೋರಲಿಂಗಯ್ಯ ಅವರು ಇಡೀ ಪಂಚಾಯ್ತಿಯಲ್ಲಿಯೇ ಅತೀ ಹೆಚ್ಚು ಅಂದರೆ 469 ಮತಗಳನ್ನು ಪಡೆಯುವ ಮೂಲಕ ಜಯಭೇರಿ ಭಾರಿಸಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ. ಈ ಹಿಂದೆ 2 ಭಾರಿ ಇದೇ ಕ್ಷೇತ್ರದಿಂದ ಸ್ಪಧಿ೯ಸಿ ಜಯಗಳಿಸಿದ್ದ ಇವರು ಕಳೆದ ಬಾರಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ಹುಳಿಯಾರು ವಿಎಸ್ಎಸ್ಎನ್ ನಿದೇ೯ಶಕರಾಗಿಯೂ ಇತ್ತೀಚೆಗೆ ಚುನಾಯಿತರಾಗಿದ್ದಾರೆ. ಇವರ ಹ್ಯಾಟ್ರಿಕ್ ಗೆಲುವಿಗೆ ಜೆಡಿಎಸ್ ಮುಖಂಡರಾದ ನಂದಿಹಳ್ಳಿ ಶಿವಣ್ಣ, ಸೈಯದ್ ಜಲಾಲ್, ಕನಕ ಸೇವಾ ಟ್ರಸ್ಟಿನ ಅಧ್ಯಕ್ಷ ಎನ್.ಬಿ.ಗವೀರಂಗಯ್ಯ ಮತ್ತಿತರರು ಅಭಿನಂದನೆ ಸಲ್ಲಿಸಿದ್ದಾರೆ.

ಫೋಟೊ ಸುದ್ದಿಗಳು

ಹುಳಿಯಾರು-ಕೆಂಕೆರೆ ಸಕಾ೯ರಿ ಕಿರಿಯ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ಪಠ್ಯಪುಸ್ತಕವನ್ನು ಶಾಸಕ ಸಿ.ಬಿ.ಸುರೇಶ್ ಬಾಬು ವಿತರಿಸಿದರು. ತಾ.ಪಂ.ಅಧ್ಯಕ್ಷ ಮಲ್ಲಿಕಾಜು೯ನಯ್ಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೈಯದ್ ಜಲಾಲ್, ಗ್ರಾ.ಪಂ.ಮಾಜಿ ಸದಸ್ಯ ರಾಮಾನಾಯ್ಕ ಮತ್ತಿತರರು ಇದ್ದಾರೆ. ಹುಳಿಯಾರು ಹೋಬಳಿ ಗಾಣಧಾಳು ಸಮೀಪದ ಯಗಚಿಹಳ್ಳಿ ಹಾಲು ಉತ್ಪಾದಕರ ಸಂಘದ ಕಾರ್ಯದಶಿ೯ ಕೆ.ಎಸ್.ಪಾಳ್ಯದ ಶೇಖ್ ಬುಡೇನ್ ಸಾಬ್ ಅವರ ಸಾಕಿದ ಸೀಮೆ ಹಸು 2 ಕರುಗಳಿಗೆ ಜನ್ಮ ನೀಡಿದೆ.ಕಳೆದ ಬಾರಿ ಕೂಡ ಇದು ಅವಳಿ ಜವಳಿಗೆ ಜನ್ಮ ನೀಡಿದ್ದು ಸುತ್ತಮುತ್ತಲ ಗ್ರಾಮಸ್ಥರಿಗೆ ಆಚ್ಚರಿ ಮೂಡಿಸಿತ್ತು. ಹುಳಿಯಾರು ಹೋಬಳಿ ಯಗಚಿಹಳ್ಳಿ ಶಾಲೆಯ ಪ್ರಾರಂಭದ ದಿನದಂದು ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸುತ್ತಿರುವುದು ಹುಳಿಯಾರು ಸಮೀಪದ ತಿಮ್ಲಾಪುರ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆಯ ಉತ್ತಮ ಫಸಲು ಬಂದಿದ್ದು ರೈತರು ಉತ್ಸುಕತೆಯಿಂದ ಭತ್ತ ಬಡಿಯುವುದರಲ್ಲಿ ಮಗ್ನವಾಗಿರುವುದು.

ನೀರಿನ ಸದ್ಭಳಕೆಗೆ ಒತ್ತು ನೀಡಿ: ಸೋಮಶೇಖರಪ್ಪ

(ಫೋಟೊ ವಿವರ:ಹುಳಿಯಾರು ಹೋಬಳಿ ಅವಳಗೆರೆ ಸಮೀಪದ ತಾರೀಕಟ್ಟೆ ತಾಂಡ್ಯದಲ್ಲಿ ಏರ್ಪಡಿಸಿದ್ದ ಭತ್ತದ ಬೆಳೆಯ ಕ್ಷೇತ್ರೋತ್ಸವದ ಉದ್ಘಾಟನೆಯನ್ನು ಶ್ರೀ ಮಾರುತಿ ಕೆರೆ ಅಭಿವೃದ್ದಿ ಸಂಘದ ಅಧ್ಯಕ್ಷ ಮಹಾಲಿಂಗಪ್ಪ ನೆರವೇರಿಸಿದರು. ಸೋಮಶೇಖರ್, ಶ್ರೀನಿವಾಸಮೂತಿ೯, ವೆಂಕಟೇಶ್, ಸಂತೋಷ್, ಕರಿಯಮ್ಮ ನಾಗರಾಜು ಮತ್ತಿತರರು ಇದ್ದಾರೆ.) ನೀರಿನ ಸದ್ಭಳಕೆಗೆ ಒತ್ತು ನೀಡಿ: ಸೋಮಶೇಖರಪ್ಪ ದಿನೆ ದಿನೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಕೆರೆಗಳಲ್ಲಿ ನೀರಿನ ಸಂಗ್ರಹಣೆ ಕಡಿಮೆಯಾಗುತ್ತಿದೆ. ಅಲ್ಲದೆ, ಅಂತರ್ಜಲ ಮಟ್ಟ ಕುಸಿಯುತ್ತಿದ್ದು ರೈತರು ನೀರಿನ ಪ್ರಮಾಣ ಮನಗಂಡು ನೀರಿನ ಸದ್ಭಳಕೆಗೆ ಒತ್ತು ನೀಡಿ ಅಲ್ಪಾವದಿ ಬೆಳೆ, ಹೊಸ ಪದ್ಧತಿಯ ಬೆಳೆ ಬೆಳೆದು ನೀರು ನಿರ್ವಹಣೆ ಮಾಡಬೇಕೆಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಲ್ಲಾ ಸಂಯೋಜಕ ಸೋಮಶೇಖರಪ್ಪ ಕರೆ ನೀಡಿದರು. ಬೆಂಗಳೂರು ಜಲ ಸಂವರ್ಧನೆ ಯೋಜನಾ ಸಂಘ, ಕೃಷಿ ವಿಶ್ವ ವಿದ್ಯಾಲಯ, ಜಿಲ್ಲಾ ಮಾರ್ಗದರ್ಶನ ತಂಡ, ಶ್ರೀಮಾರುತಿ ಕೆರೆ ಅಭಿವೃದ್ಧಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಹುಳಿಯಾರು ಹೋಬಳಿಯ ಅವಳಗೆರೆ ಸಮೀಪದ ತಾರೀಕಟ್ಟೆ ತಾಂಡ್ಯದಲ್ಲಿ ರೈತರ ಕ್ಷೇತ್ರ ಪಾಠಶಾಲೆ ಅಡಿಯಲ್ಲಿ ಏರ್ಪಡಿಸಿದ್ದ ಭತ್ತ ಬೆಳೆಯ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು. ನೀರಿನ ಸದ್ಭಳಕೆಯ ನಿಟ್ಟಿನಲ್ಲಿ ಕನಾ೯ಟಕ ಸಮುದಾಯ ಆಧಾರಿತ ಕೆರೆ ನಿರ್ವಹಣೆ ಯೋಜನೆಯಲ

ಸವಲತ್ತು ಸದುಪಯೋಗ ಪಡೆಸಿಕೊಂಡು ಉತ್ತಮ ಫಲಿತಾಂಶ ತನ್ನಿ: ಸಿ.ಬಿ.ಎಸ್

ಮನೆಯ ಆಥಿ೯ಕ ಸಮಸ್ಯೆ ವಿದ್ಯಾಥಿ೯ಗಳ ಓದಿಗೆ ಕಂಟಕವಾಗಬಾರದೆಂಬ ನಿಟ್ಟಿನಲ್ಲಿ ಸಕಾ೯ರ ಬಿಸಿಯೂಟ, ಸೈಕಲ್, ಶುಲ್ಕ ರಿಯಾಯಿತಿ ಸೇರಿದಂತೆ ಅನೇಕ ಸವಲತ್ತು ನೀಡುತ್ತಿದ್ದು ಇದರ ಸದುಪಯೋಗ ಪಡೆಸಿಕೊಂಡು ಉತ್ತಮ ಫಲಿತಾಂಶ ಪಡೆದು ಶಾಲೆಗೆ ಕೀತಿ೯ ತರುವಂತೆ ಶಾಸಕ ಸಿ.ಬಿ.ಸುರೇಶ್ ಬಾಬು ಕರೆ ನೀಡಿದರು . ಹುಳಿಯಾರು-ಕೆಂಕೆರೆ ಸಕಾ೯ರಿ ಕಿರಿಯ ಕಾಲೇಜಿನಲ್ಲಿ ಏರ್ಪಡಿಸಿದ್ದ 2010-11 ನೇ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನು ವಿತರಿಸಿ ಅವರು ಮಾತನಾಡಿ ಪಟ್ಟಣದ ವಿದ್ಯಾಥಿ೯ಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದ ವಿದ್ಯಾಥಿ೯ಗಳು ಕಲಿಕೆಯಲ್ಲಿ ಶ್ರದ್ಧೆ ಹಾಗೂ ಸಾಧನೆ ಮಾಡುತ್ತಾರೆ. ಇದಕ್ಕೆ ಹೋಬಳಿಯ ಬರಕನಹಾಳು ಶಾಲೆಯಲ್ಲಿ ಶೇ.100 ಫಲಿತಾಂಶ ಬಂದಿರುವುದೇ ನಿದರ್ಶನ. ಓದಿನ ಬಗ್ಗೆ ಅನಾಸಕ್ತಿ ಹೊಂದದೆ ಉತ್ತಮ ಫಲಿತಾಂಶ ಪಡೆಯುವ ಸಾಧನೆ ಛಲ ಹಾಗೂ ಗುರಿಯನ್ನು ಇಟ್ಟುಕೊಳ್ಳುವಂತೆ ಕಿವಿ ಮಾತು ಹೇಳಿದರು. ಕ್ಷೇತ್ರಶಿಕ್ಷಣಾಧಿಕಾರಿ ಪ್ರಭುಸ್ವಾಮಿ, ತಾ.ಪಂ.ಅಧ್ಯಕ್ಷ ಮಲ್ಲಿಕಾಜು೯ನಯ್ಯ, ತಾ.ಪಂ.ಸದಸ್ಯ ವೈ.ಆರ್.ಮಲ್ಲಿಕಾಜು೯ನಯ್ಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೈಯದ್ ಜಲಾಲ್, ಸದಸ್ಯರಾದ ದತ್ತಾತ್ರೇಯ, ರಂಗಪ್ಪ, ಲತಾ, ಗ್ರಾ.ಪಂ.ಮಾಜಿ ಸದಸ್ಯ ರಾಮಾನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ಯಗಚಿಹಳ್ಳಿಯಿಂದ ಮುರಾಜಿ೯ ಶಾಲೆಗೆ 3 ಮಂದಿ ಆಯ್ಕೆ

ಹುಳಿಯಾರು ಹೋಬಳಿ ಯಗಚಿಹಳ್ಳಿಯ ಸಕಾ೯ರಿ ಹಿರಿಯ ಪ್ರಾಥಮಿಕ ಪಾಠಶಾಲೆಯಿಂದ ಮುರಾಜಿ೯ ಶಾಲಾ ಆಯ್ಕೆ ಪರೀಕ್ಷೆಯನ್ನು 3 ಮಂದಿ ವಿದ್ಯಾಥಿ೯ಗಳು ಬರೆದಿದ್ದು ಈ ಮೂವರೂ ಉತ್ತೀರ್ಣರಾಗಿದ್ದಾರೆ. ಕೆ.ಕರುಣಾಕರ ಎಂಬ ವಿದ್ಯಾಥಿ೯ ಶೇ.97 ಅಂಕಗಳನ್ನು ಪಡೆದು 15 ನೇ ರ್ಯಾಂಕ್ ಪಡೆದರೆ, ಮಹಮದ್ ಸಮೀಉಲ್ಲಾ ಶೇ.76 ಅಂಕಗಳನ್ನು ಪಡೆದು 1008 ನೇ ರ್ಯಾಂಕ್ ಹಾಗೂ ಮಹಮದ್ ಪರ್ಮಾನ್ ಶೇ.60 ಅಂಕಗಳನ್ನು ಪಡೆಯುವ ಮೂಲಕ 2419 ನೇ ರ್ಯಾಂಕ್ ಪಡೆದು ಶಾಲೆಗೆ ಕೀತಿ೯ ತಂದಿದ್ದಾರೆ. ವಿದ್ಯಾಥಿ೯ಗಳ ಸಾಧನೆಗೆ ಮಾರ್ಗದಶ೯ಕ ಶಿಕ್ಷಕರಾದ ಹನುಮಂತರಾಜು, ಎ.ಪ್ರಕಾಶ್, ಮುಖ್ಯಶಿಕ್ಷಕಿ ಸಿ.ಎನ್.ವಿಶಾಲಾಕ್ಷಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ನಾಗರಾಜು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಕನಕದಾಸರ ಏಕಶಿಲಾ ಮೂತಿ೯ ಕೆತ್ತನೆಗೆ ಉದಾರ ದೇಣಿಗೆ ನೀಡಿ: ಹೊಸದುರ್ಗಶ್ರೀ

ಹೊಸದುರ್ಗ ಸಮೀಪದ ಕೆಲ್ಲೋಡು ವೇದಾವತಿ ಹಳ್ಳದ ದಂಡೆಯಲ್ಲಿ ಜಗತ್ತಿನಲ್ಲಿಯೇ ಮೊಟ್ಟಮೊದಲ 35 ಅಡಿ ಎತ್ತರದ ಕನಕದಾಸರ ಏಕಶಿಲಾ ಮೂತಿ೯ ನಿಮಿ೯ಸ ಹೊರಟಿರುವ ಶ್ರೀಮಠಕ್ಕೆ ಉದಾರ ದೇಣಿಗೆ ನೀಡುವ ಮೂಲಕ ಹಾಲಮತ ಸಮಾಜದ ಭವ್ಯ ಪರಂಪರೆಯನ್ನು ಹಾಗೂ ಕನಕಸಾಹಿತ್ಯವನ್ನು ಜೀವಂತವಾಗಿ ಉಳಿಸುವ ಯೋಜನೆಗೆ ಎಲ್ಲರೂ ನೆರವಾಗಿರೆಂದು ಕನಕಗುರುಪೀಠದ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮಿಗಳು ಮನವಿ ಮಾಡಿದರು. ಹುಳಿಯಾರಿನ ಶ್ರೀ ರೇವಣಸಿದ್ದೇಶ್ವರ ಸ್ವಾಮಿ ಮಠದ ಆವರಣದಲ್ಲಿ ದಿವಂಗತ ಎಚ್.ಎಸ್.ಸಿದ್ದಪ್ಪ, ಎಲ್.ಆರ್.ಲಕ್ಮಮ್ಮ, ಎಚ್.ಕೆ.ಚಂದ್ರಶೇಖರ್ ಅವರ ಸ್ವರಣಾರ್ಥ ಕೃಷಿ ಇಲಾಖೆಯ ಕೃಷ್ಣಪ್ಪ ಅವರು ನಿಮಿ೯ಸಿರುವ ಅತಿಥಿ ಗೃಹವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ ಮೂತಿ೯ ಕೆತ್ತನೆಗಾಗಿ ದೇವನಹಳ್ಳಿ ಬಂಡೆಯಿಂದ ಭಾರಿ ವಾಹನದಲ್ಲಿ ಬೃಹತ್ ಗಾತ್ರದ ಏಕಶಿಲೆಯನ್ನು ಕೆಲ್ಲೋಡಿಗೆ ಸಾಗಿಸಲಾಗಿದ್ದು ಇನ್ನೊಂದು ವಾರದಲ್ಲಿ ಕೆತ್ತನೆ ಕೆಲಸ ಪ್ರಾರಂಭವಾಗಲಿದೆ ಎಂದು ತಿಳಿಸಿದರಲ್ಲದೆ ಕನಕದಾಸರ ಏಕಶಿಲಾ ಮೂತಿ೯ ಪ್ರತಿಷ್ಠಾಪನಾ ಸ್ಥಳದಲ್ಲಿ ವಿಶಾಲವಾದ ಮಠ, ಸಮುದಾಯ ಭವನ, ಅತಿಥಿಗೃಹ, ಗುಡಿ ಹೀಗೆ ಸುಂದರವಾದ ಧಾಮಿ೯ಕ ಕೇಂದ್ರವನ್ನು ನಿಮಾ೯ಣ ಮಾಡುವ ಉದ್ದೇಶವಿದ್ದು ಶ್ರೀಮಂತರು, ಬುಡಕಟ್ಟಿನವರು, ಮಠದವರು ಒಂದೊಂದು ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದರು. ಜಾತಿಗಳೊಳಗೆ ವೈಮನಸ್ಯ ಹಾಗೂ ದ್ವೇಷ ಸಾಧಿಸುವ ಯಾವುದೇ ಸಮುದಾಯದ ಏಳಿಗೆ ಆಗಲಾರದು. ಈ ನಿಟ್ಟಿನಲ್ಲ

ದೊಡ್ಡಎಣ್ಣೇಗೆರೆಯಲ್ಲಿ ಅಪ್ಪಮಕ್ಕಳಿಬ್ಬರೂ ಪಿಂಚಣಿದಾರರು

ಒಂದೇ ಕುಟುಂಬದಲ್ಲಿ ಇಂದು ಒಬ್ಬರಿಗಿಂತ ಹೆಚ್ಚು ಮಂದಿ ಸಕಾ೯ರಿ ಹುದ್ದೆಯಲ್ಲಿ ಇರುವುದು ಸಹಜ. ಆದರೆ ಒಂದೇ ಮನೆಯಲ್ಲಿ ಅಪ್ಪ-ಮಗ ಇಬ್ಬರೂ ಒಂದೇ ವೃತ್ತಿಯಲ್ಲಿದ್ದು ನಿವೃತ್ತರಾಗಿ ಇಂದಿಗೂ ಪಿಂಚಣಿದಾರರಾಗಿರುವುದು ಅಪರೂಪ. ಇಂತಹ ಅಪರೂಪದ ಕುಟುಂಬ ಹುಳಿಯಾರು ಸಮೀಪದ ದೊಡ್ಡಎಣ್ಣೇಗೆರೆಯಲ್ಲಿ ಇದೆ. ಹೌದು! ತಂದೆ ವೀರಭದ್ರಯ್ಯ ಅವರು ಪೊಲೀಸ್ ಇಲಾಖೆ ಸೇರಿಕೊಂಡು 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಧಪೇದಾರ್ ಆಗಿ ನಿವೃತ್ತಿ ಹೊಂದಿ ಸತತ 33 ವರ್ಷಗಳಿಂದ ಇಂದಿಗೂ ಪಿಂಚಣಿತೆಗೆದುಕೊಂಡರೆ ಇವರ ಮಗ ಪಿ.ಮಲ್ಲಿಕಾಜು೯ನಯ್ಯ ಅವರೂ ಸಹ ಅದೇ ಪೊಲೀಸ್ ಇಲಾಖೆ ಸೇರಿಕೊಂಡು 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಧಪೇದಾರ್ ಆಗಿ ನಿವೃತ್ತಿ ಹೊಂದಿ ಕಳೆದ 3 ವರ್ಷಗಳಿಂದ ಪಿಂಚಣಿ ತೆಗೆದುಕೊಳ್ಳುತ್ತಿದ್ದಾರೆ. ವೀರಭದ್ರಪ್ಪನವರಿಗೆ 91 ವರ್ಷಗಳಾಗಿದ್ದರೆ ಮಲ್ಲಿಕಾಜು೯ನಯ್ಯ ಅವರಿಗೆ 61 ವರ್ಷಗಳಾಗಿದ್ದು ಒಂದೇ ಕುಟುಂಬದಲ್ಲಿ ಪತ್ನಿ, ಮಕ್ಕಳು ಹಾಗೂ ಮೊಮ್ಮಕ್ಕಳೊಂದಿಗೆ ಸುಖಿ ಸಂಸಾರ ನೆಡೆಸುತ್ತಿದ್ದಾರೆ.

ಯಗಚಿಹಳ್ಳಿಯಲ್ಲಿ ಹಬ್ಬದ ಸಡಗರದಲ್ಲಿ ಶಾಲೆ ಆರಂಭ

ಬೇಸಿಗೆ ರಜೆ ಮಜದಲ್ಲಿದ್ದ ಮಕ್ಕಳನ್ನು ಪುನಃ ಶಾಲೆಗೆ ಸೆಳೆಯುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆಯಂತೆ ಯಗಚಿಹಳ್ಳಿ ಸಕಾ೯ರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಬ್ಬದ ವಾತವರಣದಲ್ಲಿ ಶಾಲೆ ಆರಂಭಿಸಿತ್ತು. ಶಾಲೆ ಕೊಠಡಿಗಳು ಸೇರಿದಂತೆ ಆವರಣ ಸ್ವಚ್ಚಗೊಳಿಸಿ, ಬಾಳೆದಿಂಡು, ಮಾವಿನ ತೋರಣಗಳಿಂದ ಶಾಲೆ ಸಿಂಗರಿಸಿ ಬಣ್ಣ, ಬಣ್ಣದ ರಂಗೋಲಿ ಮೂಡಿಸಿ ಮಕ್ಕಳನ್ನು ಶಾಲೆಯೆಡೆಗೆ ಆಕಷಿ೯ಸಿತ್ತು. ಅದರಲ್ಲೂ ಶಾಲೆಯ ಮೊದಲ ದಿನವೇ ಬರೋಬ್ಬರಿ 43 ವಿದ್ಯಾಥಿ೯ಗಳನ್ನು ತನ್ನತ್ತ ಸೆಳೆದುಕೊಂಡಿತ್ತು. ಅಲ್ಲದೆ, ಸಮವಸ್ತ್ರ, ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತಲ್ಲದೆ ಪಾಯಸದ ಊಟ ನೀಡಿ ಮಕ್ಕಳನ್ನು ಸಂಭ್ರಮದ ಕಡಲಲ್ಲಿ ತೇಲಿಸಿತ್ತು. ಶಾಲಾ ಶಿಕ್ಷಕರು,ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಕೆಲ ಪೋಷಕರು ಶಾಲೆ ಪ್ರಾರಂಭದ ಸಡಗರ ನಿಮಾ೯ಣದಲ್ಲಿ ತೊಡಗಿಸಿಕೊಂಡಿದ್ದರಲ್ಲದೆ ಮೊದಲ ಸಭೆ ನಡೆಸಿ ಕುಡಿಯುವ ನೀರು ಸರಬರಾಜವಿನ ದುರಸ್ಥಿ, ಶಾಲಾ ಆವರಣದ ಸುತ್ತ ಮುಳ್ಳುತಂತಿ ನಿಮಾ೯ಣ, ಬಯೋಗಾರ್ಡನ್ ಅಭಿವೃದ್ಧಿ, ಶಾಲಾ ಕೊಠಡಿಗಳ ಸುಣ್ಣ-ಬಣ್ಣಗಳಂತಹ ಅಭಿವೃದ್ಧಿ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳುವ ನಿಧಾ೯ರ ಕೈಗೊಳ್ಳಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಸಿ.ಎನ್.ವಿಶಾಲಾಕ್ಷಿ, ಶಿಕ್ಷಕರಾದ ಆಸ್ಮಾನ್ ಉನ್ನೀಸಾ, ಹನುಮಂತರಾಜು, ಎ.ಪ್ರಕಾಶ್, ಎಸ್.ಡಿ.ಎಂ.ಸಿ ಅಧ್ಯಕ್ಷ ಎಂ.ನಾಗರಾಜು, ಸದಸ್ಯರಾದ ಆಲ್ತೀಫ್ ಸಾಬ್, ಎನ್.ಬಸವರಾಜು, ಪೋಷಕರಾದ ದಾದಾಪೀರ್, ತ