ಬೆಂಗಳೂರು ಜಲ ಸಂವರ್ಧನೆ ಯೋಜನಾ ಸಂಘ, ಕೃಷಿ ವಿಶ್ವ ವಿದ್ಯಾಲಯ, ಜಿಲ್ಲಾ ಮಾರ್ಗದರ್ಶನ ತಂಡ, ಶ್ರೀ ಆಂಜನೇಯ ಸ್ವಾಮಿ ಕೆರೆ ಅಭಿವೃದ್ಧಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಹುಳಿಯಾರು ಸಮೀಪದ ಸೋರಲಮಾವು ಗ್ರಾಮದಲ್ಲಿ ಸಮುದಾಯ ಆಧಾರಿತ ಕೆರೆ ನಿರ್ವಹಣೆ ಯೋಜನೆಯಲ್ಲಿ ತೆಗೆದುಕೊಳ್ಳಲಾದ ರೈತರ ಕ್ಷೇತ್ರ ಪಾಠಶಾಲೆ ಅಡಿಯಲ್ಲಿ ಏರ್ಪಡಿಸಿದ್ದ ಭತ್ತ ಬೆಳೆಯ ಕ್ಷೇತ್ರೋತ್ಸವವು ಯಶಸ್ವಿಯಾಗಿ ನಡೆಯಿತು.
ಗ್ರಾಮದ ಯುವ ರೈತಜಿ.ಈಶ್ವರಯ್ಯ ಅವರು ಮಾತನಾಡಿ ಕೆರೆಗಳು ಗ್ರಾಮದ ಸಂಪತ್ತುಗಳು ಎನ್ನುವ ಕಾರಣದಿಂದ ಕೆರೆ ಅಭಿವೃದ್ಧಿ ಮೂಲಕ ರೈತರ ಕೃಷಿಗೆ ನೆರವಾಗಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ಜನರ ಸ್ಪಂದನೆ ಇಲ್ಲದ ಕಾರಣ ಯೋಜನೆಗಳು ವಿಫಲವಾಗುತ್ತಿವೆ. ಹಾಗಾಗಿ ಗ್ರಾಮದ ಪ್ರತಿಯೊಬ್ಬರೂ ಕೆರೆ ಅಭಿವೃದ್ಧಿ ಸಂಘಕ್ಕೆ ಸೇರಿಕೊಂಡು ಹೂಳು ತೆಗೆಯುವ, ಏರಿ ದುರಸ್ಥಿ ಮಾಡುವ, ಗಿಡಗಂಟೆಗಳನ್ನು ಕೀಳುವ ಕೆಲಸಗಳಲ್ಲಿ ಭಾಗಿಯಾಗಿ ಮುಂದಿನ ಉತ್ತಮ ಫಸಲಿಗೆ ಪೂರಕ ವಾತಾವರಣ ನಿರ್ಮಾಣ ಮಾಡುವಂತೆ ಕರೆ ನೀಡಿದರು.
ರೈತ ಉತ್ತಮ ಫಸಲು ಪಡೆಯುವ ನಿಟ್ಟಿನಲ್ಲಿ ಕಾಳುಗಳ ಮೊಳಕೆ ಮಾಡುವಾಗ,ನಾಟಿ ಮಾಡುವಾಗ ಎಚ್ಚರಿಕೆಯಾಗಿರಬೇಕು ಹಾಗೂ ಸಮರ್ಪಕ ನೀರು ನಿರ್ವಹಣೆ, ಔಷಧ ಸಿಂಪಡಣೆ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದರು.
ಶ್ರೀ ಆಂಜನೇಯ ಸ್ವಾಮಿ ಕೆರೆ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಕರೇಗೌಡ ಹಿಂದಿನ ಸಾಂಪ್ರದಾಯಕ ಪದ್ದತಿ ಹಾಗೂ ಈಗ ಪ್ರಾಯೋಗಿಕವಾಗಿ ನಾಟಿ ಮಾಡಿರುವ ಜಪಾನ್ ಮಾದರಿಯ ಸಾಲು ಸಸಿ ಪದ್ದತಿಗೆ ಹೊಲಿಕೆ ಮಾಡಿದಲ್ಲಿ ಸಾಂಪ್ರದಾಯಕ ಪದ್ದತಿಯಲ್ಲಿ 20 ತೆಂಟೆ ಬಂದರೆ ಜಪಾನ್ ಪದ್ದತಿಯಲ್ಲಿ 40 ತೆಂಟೆ, ಅಲ್ಲಿ 120 ಕಾಳು ಕಟ್ಟಿದರೆ ಇಲ್ಲಿ 250 ಕಾಳು ಕಟ್ಟುತ್ತದೆ. ಜಪಾನ್ ಮಾದರಿಯಲ್ಲಿ ರೋಗಭಾದೆ ಇರುವುದಿಲ್ಲ ಹಾಗೂ ಕೇವಲ ಒಂದೇ ಬಾರಿ ಕಳೆ ಕೀಳುವ ಅನುಕೂಲಗಳು ಇರುತ್ತವೆ ಎಂದು ವಿವರಿಸಿದರು.
ಜಿಲ್ಲಾ ಮಾರ್ಗದರ್ಶನ ತಂಡದ ಹುಳಿಯಾರು ಮುಖ್ಯಸ್ಥ ವೆಂಕಟೇಶ್ ಅವರು ಮಾತನಾಡಿ ದೊಡ್ಡಬಿದರೆ ಹಾಗೂ ಸೋರಲಮಾವು ಕೆರೆಗಳನ್ನು ಮಾದರಿ ಕೆರೆ ಮಾಡಲು ಗುರಿ ಇಟ್ಟುಕೊಂಡು ಈಗಾಗಲೇ 25 ಲಕ್ಷದ ಬಜೆಟ್ ತಯಾರಿಸಲಾಗಿದೆ. ಅಲ್ಲದೆ, ಈ ಗ್ರಾಮದಲ್ಲಿ ಮತ್ತೊಂದು ಕೆರೆಯನ್ನು ಜಲಸಂವರ್ಧನೆ ಯೋಜನೆಗೆ ಸೇರ್ಪಡೆಮಾಡಿಕೊಳ್ಳುವ ಚಿಂತನೆ ಇದ್ದು ಈ ಯೋಜನೆಯಲ್ಲಿ ನೇರವಾಗಿ ತಮ್ಮ ಕೆರೆ ಸಂಘಕ್ಕೆ ಹಣ ಬರುವುದಿದ್ದು ತಮ್ಮ ಗ್ರಾಮದ ಅಭಿವೃದ್ಧಿಯನ್ನು ತಾವುಗಳೇ ನಿರ್ಧರಿಸಿ ಮಾಡಿಕೊಳ್ಳುವ ಸೌಲಭ್ಯವಿದೆ ಎಂದು ತಿಳಿಸಿದರು.
ತುಮಕೂರು ಕೃಷಿ ತಜ್ಞ ಶ್ರೀನಿವಾಸಮೂರ್ತಿ,ಶ್ರೀ ಆಂಜನೇಯ ಸ್ವಾಮಿ ಕೆರೆ ಅಭಿವೃದ್ಧಿ ಸಂಘದ ಅಧ್ಯಕ್ಷ ಕರಿಯಪ್ಪ, ಗ್ರಾ.ಪಂ.ಮಾಜಿ ಅಧ್ಯಕ್ಷ ನಿರಂಜನಮೂರ್ತಿ, ಸೀಗೆಬಾಗಿ ಕೆರೆ ಸಂಘದ ಅಧ್ಯಕ್ಷ ದಯಾನಂದ್, ಗ್ರಾ.ಪಂ.ಸದಸ್ಯ ಸಿದ್ದೇಗೌಡ, ಗೋಪಾಲಯ್ಯ, ಪಾಲಾಕ್ಷಯ್ಯ, ಕಾಂತರಾಜು, ಮಹಮದ್ ರಸೂಲ್ ಮತ್ತಿತರಿದ್ದರು.
ಗ್ರಾಮದ ಯುವ ರೈತಜಿ.ಈಶ್ವರಯ್ಯ ಅವರು ಮಾತನಾಡಿ ಕೆರೆಗಳು ಗ್ರಾಮದ ಸಂಪತ್ತುಗಳು ಎನ್ನುವ ಕಾರಣದಿಂದ ಕೆರೆ ಅಭಿವೃದ್ಧಿ ಮೂಲಕ ರೈತರ ಕೃಷಿಗೆ ನೆರವಾಗಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ಜನರ ಸ್ಪಂದನೆ ಇಲ್ಲದ ಕಾರಣ ಯೋಜನೆಗಳು ವಿಫಲವಾಗುತ್ತಿವೆ. ಹಾಗಾಗಿ ಗ್ರಾಮದ ಪ್ರತಿಯೊಬ್ಬರೂ ಕೆರೆ ಅಭಿವೃದ್ಧಿ ಸಂಘಕ್ಕೆ ಸೇರಿಕೊಂಡು ಹೂಳು ತೆಗೆಯುವ, ಏರಿ ದುರಸ್ಥಿ ಮಾಡುವ, ಗಿಡಗಂಟೆಗಳನ್ನು ಕೀಳುವ ಕೆಲಸಗಳಲ್ಲಿ ಭಾಗಿಯಾಗಿ ಮುಂದಿನ ಉತ್ತಮ ಫಸಲಿಗೆ ಪೂರಕ ವಾತಾವರಣ ನಿರ್ಮಾಣ ಮಾಡುವಂತೆ ಕರೆ ನೀಡಿದರು.
ರೈತ ಉತ್ತಮ ಫಸಲು ಪಡೆಯುವ ನಿಟ್ಟಿನಲ್ಲಿ ಕಾಳುಗಳ ಮೊಳಕೆ ಮಾಡುವಾಗ,ನಾಟಿ ಮಾಡುವಾಗ ಎಚ್ಚರಿಕೆಯಾಗಿರಬೇಕು ಹಾಗೂ ಸಮರ್ಪಕ ನೀರು ನಿರ್ವಹಣೆ, ಔಷಧ ಸಿಂಪಡಣೆ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದರು.
ಶ್ರೀ ಆಂಜನೇಯ ಸ್ವಾಮಿ ಕೆರೆ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಕರೇಗೌಡ ಹಿಂದಿನ ಸಾಂಪ್ರದಾಯಕ ಪದ್ದತಿ ಹಾಗೂ ಈಗ ಪ್ರಾಯೋಗಿಕವಾಗಿ ನಾಟಿ ಮಾಡಿರುವ ಜಪಾನ್ ಮಾದರಿಯ ಸಾಲು ಸಸಿ ಪದ್ದತಿಗೆ ಹೊಲಿಕೆ ಮಾಡಿದಲ್ಲಿ ಸಾಂಪ್ರದಾಯಕ ಪದ್ದತಿಯಲ್ಲಿ 20 ತೆಂಟೆ ಬಂದರೆ ಜಪಾನ್ ಪದ್ದತಿಯಲ್ಲಿ 40 ತೆಂಟೆ, ಅಲ್ಲಿ 120 ಕಾಳು ಕಟ್ಟಿದರೆ ಇಲ್ಲಿ 250 ಕಾಳು ಕಟ್ಟುತ್ತದೆ. ಜಪಾನ್ ಮಾದರಿಯಲ್ಲಿ ರೋಗಭಾದೆ ಇರುವುದಿಲ್ಲ ಹಾಗೂ ಕೇವಲ ಒಂದೇ ಬಾರಿ ಕಳೆ ಕೀಳುವ ಅನುಕೂಲಗಳು ಇರುತ್ತವೆ ಎಂದು ವಿವರಿಸಿದರು.
ಜಿಲ್ಲಾ ಮಾರ್ಗದರ್ಶನ ತಂಡದ ಹುಳಿಯಾರು ಮುಖ್ಯಸ್ಥ ವೆಂಕಟೇಶ್ ಅವರು ಮಾತನಾಡಿ ದೊಡ್ಡಬಿದರೆ ಹಾಗೂ ಸೋರಲಮಾವು ಕೆರೆಗಳನ್ನು ಮಾದರಿ ಕೆರೆ ಮಾಡಲು ಗುರಿ ಇಟ್ಟುಕೊಂಡು ಈಗಾಗಲೇ 25 ಲಕ್ಷದ ಬಜೆಟ್ ತಯಾರಿಸಲಾಗಿದೆ. ಅಲ್ಲದೆ, ಈ ಗ್ರಾಮದಲ್ಲಿ ಮತ್ತೊಂದು ಕೆರೆಯನ್ನು ಜಲಸಂವರ್ಧನೆ ಯೋಜನೆಗೆ ಸೇರ್ಪಡೆಮಾಡಿಕೊಳ್ಳುವ ಚಿಂತನೆ ಇದ್ದು ಈ ಯೋಜನೆಯಲ್ಲಿ ನೇರವಾಗಿ ತಮ್ಮ ಕೆರೆ ಸಂಘಕ್ಕೆ ಹಣ ಬರುವುದಿದ್ದು ತಮ್ಮ ಗ್ರಾಮದ ಅಭಿವೃದ್ಧಿಯನ್ನು ತಾವುಗಳೇ ನಿರ್ಧರಿಸಿ ಮಾಡಿಕೊಳ್ಳುವ ಸೌಲಭ್ಯವಿದೆ ಎಂದು ತಿಳಿಸಿದರು.
ತುಮಕೂರು ಕೃಷಿ ತಜ್ಞ ಶ್ರೀನಿವಾಸಮೂರ್ತಿ,ಶ್ರೀ ಆಂಜನೇಯ ಸ್ವಾಮಿ ಕೆರೆ ಅಭಿವೃದ್ಧಿ ಸಂಘದ ಅಧ್ಯಕ್ಷ ಕರಿಯಪ್ಪ, ಗ್ರಾ.ಪಂ.ಮಾಜಿ ಅಧ್ಯಕ್ಷ ನಿರಂಜನಮೂರ್ತಿ, ಸೀಗೆಬಾಗಿ ಕೆರೆ ಸಂಘದ ಅಧ್ಯಕ್ಷ ದಯಾನಂದ್, ಗ್ರಾ.ಪಂ.ಸದಸ್ಯ ಸಿದ್ದೇಗೌಡ, ಗೋಪಾಲಯ್ಯ, ಪಾಲಾಕ್ಷಯ್ಯ, ಕಾಂತರಾಜು, ಮಹಮದ್ ರಸೂಲ್ ಮತ್ತಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ