ವಿಷಯಕ್ಕೆ ಹೋಗಿ

ಹುಳಿಯಾರಿನಲ್ಲಿ ತಾವರಕೊಪ್ಪ ಶಿವಗಿರಿ ಕ್ಷೇತ್ರದ ಸೂರ್ಯನಾರಾಯಣ ಸ್ವಾಮಿಜಿಯ ಆಯುರ್ವೇದ ಆರೋಗ್ಯ ಶಿಬಿರ

ಮೊನ್ನೆ ಹುಳಿಯರು ಗಾಂಧಿಪೇಟೆಯಲ್ಲಿರುವ ಸನ್ಮಾರ್ಗ ಥಿಯಾಸಫಿಕಲ್ ಸೊಸೈಟಿಯಲ್ಲಿ ಜನವೋ ಜನ. ವಯೋವೃದ್ಧರು, ನವ ದಂಪತಿಗಳು, ಅಂಗವಿಕಲರು ಹೀಗೆ ರೋಗಬಾಧಿತರ ದಂಡು ಅಲ್ಲಿ ನೆರೆದಿತ್ತು. ಆದರೆ ಅಲ್ಲಿ ತಜ್ಞ ವೈದ್ಯರ ತಂಡ ಇರಲಿಲ್ಲ, ರೋಗ ಪರೀಕ್ಷಕ ಸಾಧನಗಳ ಸುಳಿವು ಮೊದಲೇ ಇಲ್ಲ. ಇನ್ನು ಇಂಗ್ಲೀಷ್ ಮೆಡಿಸಿನ್ ಹಾವಳಿ ಇಲ್ಲವೆ ಇಲ್ಲ ಬಿಡಿ.

ಆದರೂ ಅಲ್ಲಿ ನಡೆಯುತ್ತಿದುದು ಆರೋಗ್ಯ ಶಿಬಿರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದು ಎಂದಿನಂತೆ ಮಾಮೂಲಿ ಆರೋಗ್ಯ ಶಿಬಿರವಾಗಿರಲಿಲ್ಲ. ಸ್ಟೆಥಾಸ್ಕೊಪ್ನಲ್ಲಿ ತಪಾಸಣೆ ನಡೆಸಿ ರೋಗ ಪತ್ತೆ ಮಾಡುವುದಿರಲಿ ಸ್ವತಃ ರೋಗಿಗಳಿಂದ ಸಮಸ್ಯೆ ಕೇಳದೆ ರೋಗವನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಒಂದು ವಿಭಿನ್ನ ಹಾಗೂ ಅಪರೂಪದ ಆರೋಗ್ಯ ಶಿಬಿರ!

ಹೌದು, ಈ ಶಿಬಿರದ ವೈದ್ಯರ ಎದುರು ಸುಮ್ಮನೆ ಕುಳಿತರೆ ಸಾಕು ತಮಗೆ ಬಾಧಿಸುತಿರುವ ರೋಗವನ್ನು ಕರಾರುವಕ್ಕಾಗಿ ಹೇಳುತ್ತಾರೆ. ಎಷ್ಟು ವರ್ಷದಿಂದ ಬಾಧಿಸುತ್ತಿದೆ, ಯಾವ ರೀತಿ ಬಾಧಿಸುತ್ತಿದೆ, ಇದರ ನಿಮರ್ೂಲನೆಗಾಗಿ ಪಟ್ಟ ವೇದನೆ ಹೀಗೆ ಎಲ್ಲವನ್ನೂ ವಿವರಿಸುತ್ತಾರೆ. ಇಷ್ಟೇ ಅಲ್ಲ, ರೋಗಿ ಬರದಿದ್ದರೂ ಕೂಡ ಆತನ ಪರವಾಗಿ ಬಂದವರಿಗೆ ರೋಗಿ ಇರುವ ದಿಕ್ಕು, ಆತನ ರೋಗಲಕ್ಷಣ ಹೇಳುವುದು ಇವರ ವಿಶೇಷ.

ರೋಗಿಗಳನ್ನು ಮುಟ್ಟದೆ ಆತನಿಗೆ ಬಾಧಿಸುತ್ತಿರುವ ಕಾಯಿಲೆ ಹೇಳುವುದನ್ನು ಪರೀಕ್ಷಿಸುವ ಸಲುವಾಗಿ ರೋಗ ವಿಲ್ಲದ ಅನೇಕರು ಸುಮ್ಮನೆ ಕುಳಿತು ಕೊನೆಗೆ ನಿಮಗೆ ಯಾವ ರೋಗವಿಲ್ಲ ಎನ್ನಿಸಿಕೊಂಡು ವಾಪಸ್ಸಾಗಿದ್ದಾರೆ. ಹೀಗೆ ಪವಾಡದ ರೀತಿ ರೋಗ ಪತ್ತೆ ಹಚ್ಚುವ ವೈದ್ಯ ಶಿವಮೊಗ್ಗ ಜಿಲ್ಲೆ, ತಾವರಕೊಪ್ಪ ಶಿವಗಿರಿ ಕ್ಷೇತ್ರದ ಸೂರ್ಯನಾರಾಯಣ ಆಯುರ್ವೇದ ಆರೋಗ್ಯ ಕೇಂದ್ರದ ಶ್ರೀ ಸೂರ್ಯನಾರಾಯಣ ಸ್ವಾಮೀಜಿ.

ಈ ಸ್ವಾಮೀಜಿ ಕೇವಲ ರೋಗವನ್ನು ಪತ್ತೆ ಹಚ್ಚುವುದಷ್ಟೆ ಅಲ್ಲ, ತಾವೇ ಗಿಡಮೂಲಿಕೆಗಳಿಂದ ತಯಾರಿಸಿದ ಆಯುರ್ವೇದ ಔಷಧಿ ನೀಡಿ ರೋಗ ನಿವಾರಿಸುವುದರಲ್ಲೂ ಎತ್ತಿದ ಕೈ. ಮದುವೆಯಾಗಿ ಅನೇಕ ವರ್ಷಗಳು ಕಳೆದಿದ್ದರೂ ಮಕ್ಕಳಿಲ್ಲದೆ ಕೊರಗುತ್ತಿರುವವರಿಗೆ ಮಕ್ಕಳ ಫಲ, ದಶಕಗಳ ಕಾಲದಿಂದ ಕಾಡುತ್ತಿರುವ ಸೊಂಟ, ಬೆನ್ನು, ಮಂಡಿ ನೋವು ನಿವಾರಣೆ ಹಾಗೂ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಗ್ಯಾಸ್ಟ್ರಿಕ್ಗಳಿಂದ ಮುಕ್ತಿ ನೀಡಿದ್ದಾರೆ.

ಮಗನಿಗೆ ಕ್ಯಾನ್ಸರ್ ಎಂಬ ಮಾರಣಾಂತಿಕ ಕಾಯಿಲೆ ಬಂದು ಕಿದ್ವಾಯಿ ಸೇರಿದಂತೆ ಅನೇಕ ಆಸ್ಪತ್ರೆಗಳನ್ನು ತಿರುಗಿ ಬಂದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಯಾರೋ ಸ್ನೇಹಿತರ ಮಾಹಿತಿ ಮೇರೆಗೆ ಶ್ರೀಸ್ವಾಮೀಜಿಯವರನ್ನು ಭೇಟಿಯಾಗಿ ಅವರು ನೀಡಿದ ಔಷಧಿ ಬಳಸಲು ಆರಂಭಿಸಿದೆ. ಆಶ್ಷರ್ಯಕರ ರೀತಿಯಲ್ಲಿ ಕೆಲವೇ ವಾರದಲ್ಲಿ ಕ್ಯಾನ್ಸರ್ ಮಂಗಮಾಯಿತು ಎನ್ನುತ್ತಾರೆ ಇಲ್ಲಿನ ಆರ್ಯವೈಶ್ಯ ಜನಾಂಗದ ಅನಂತರಾಮು.

ತಾಯಿಗೆ ಸ್ಕಿನ್ ಅಲರ್ಜಿ ಆಗಿ ಬಹಳ ವರ್ಷಗಳಿಂದ ಬಾಧಿಸುತಿತ್ತು. ಇದಕ್ಕಾಗಿ ಅಲೆಯದ ಆಸ್ಪತ್ರೆಗಳಿಲ್ಲ, ಬಳಸದ ಔಷಧಗಳಿಲ್ಲ. ಕೊನೆಗೆ ಶ್ರೀಸ್ವಾಮೀಜಿಯವರ ಸೂಚನೆಯಂತೆ ಆಯುರ್ವೇದ ಚಿಕಿತ್ಸೆ ಪಡೆದ ಬಳಿಕ ಗುಣಮುಖವಾಗುತ್ತಿದೆ ಎನ್ನುತ್ತಾರೆ ಪಿಗ್ಮಿ ಕಲೆಕ್ಟರ್ ತಿಮ್ಲಾಪುರ ರವಿ. ಹಾಗೆಯೆ ಮಕ್ಕಳಿಲ್ಲದ ವೇದನೆಯಲ್ಲಿದ್ದ ತಮಗೆ ಇವರನ್ನು ಕಂಡ ಬಳಿಕ ಶುಭವಾಗಿದೆ ಎನ್ನುತ್ತಾರೆ ಎಸ್ಎಲ್ಆರ್ ಪ್ರದೀಪ್, ಪಾರಿಜಾತ ರವಿ ಹಾಗೂ ನವೀನ್.

ಸ್ವತಃ ಸ್ವಾಮೀಜಿಯವರನ್ನು ಈ ಬಗ್ಗೆ ಕೇಳಿದರೆ ತಮಗೆ ಹಣ ಹಾಗೂ ಹೆಸರು ಮಾಡುವ ದುರುದ್ದೇಶ ವಿಲ್ಲ. ತಮಗೆ ತಿಳಿದ ವಿದ್ಯೆಯಿಂದ ಅನೇಕರಿಗೆ ಅನುಕೂಲ ಮಾಡುತ್ತಿದ್ದೇನೆ. ಇದುವರೆವಿಗೂ ಯಾರಿಗೂ ಸಂದರ್ಶನ ನೀಡಿಲ್ಲ. ತಮ್ಮ ಬಗ್ಗೆ ಬರೆಯ ಬೇಕೆಂದರೆ ಅನುಕೂಲ ಪಡೆದವರ ಅನಿಸಿಕೆಗಳನ್ನು ಆಲಿಸಿ ಬೇಕಿದ್ದರೆ ಬರೆಯಿರಿ ಎಂದು ಮುಗುಳ್ನಕ್ಕು ಮೌನರಾಗುತ್ತಾರೆ.
ಇಂತಿಷ್ಟೆ ಹಣ ಕೊಡಿ ಎಂದು ಕಡ್ಡಿ ತುಂಡಾಗುವಂತೆ ಕೇಳದ ಇವರು ರೋಗಿಗಳು ಕೊಟ್ಟಷ್ಟೆ ಹಣಕ್ಕೆ ತೃಪ್ತರಾಗುತ್ತಾರೆ. ಈಗಾಗಲೇ ಇವರು ಅನೇಕ ಮಂದಿಯ ಕಾಯಿಲೆಗಳು ವಾಸಿಮಾಡಿದ್ದರೆ. ಈಗಲೂ ವಾಸಿಮಾಡುತ್ತಿದ್ದರೆ. ಇಲ್ಲಿಯವರೆವಿಗೂ ಯಾವ ಊರಿನಲ್ಲೂ ಆರೋಗ್ಯ ಶಿಬಿರ ಮಾಡದ ಇವರು ಹುಳಿಯಾರಿನಲ್ಲಿ ಮಾಡುತ್ತಿರುವುದು ಈ ಭಾಗದ ಜನರ ಸುಯೋಗವಾಗಿದೆ. ಈ ಶಿಬಿರದಲ್ಲಿ ನೂರೈವತ್ತಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ ಎನ್ನುತ್ತಾರೆ ಥಿಯಾಸಫಿಕಲ್ ನ ಎಂ.ಆರ್.ಗೋಪಾಲ್.








ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...