ಸಕಾ೯ರ ಹಿಂದುಳಿದ ವರ್ಗ ಎ ನಲ್ಲಿ 108 ಜಾತಿಗಳನ್ನು ಒಟ್ಟಿಗೆ ಸೇರಿಸಿ ಶೇ.15 ಮೀಸಲಾತಿ ನಿಗದಿ ಮಾಡಿದ್ದು ಈ ಸೌಲಭ್ಯವನ್ನು ಕೆಲ ಪ್ರಭಲ ಜಾತಿಗಳು ಕಬಳಿಸುತ್ತಿದ್ದಾರೆ. ಇದರಿಂದ ಅತ್ಯಂತ ಹಿಂದುಳಿದ ಜನಾಂಗ ವಿಶ್ವಕರ್ಮದವರಿಗೆ ಅನ್ಯಾಯವಾಗುತ್ತಿದ್ದು ಸಕಾ೯ರ 2 A ನಲ್ಲಿ ಶೇ.3 ಒಳಮೀಸಲಾತಿ ಜಾರಿಗೆ ತರುವ ಅಗತ್ಯವಿದೆ ಎಂದು ಗುಲ್ಬರ್ಗ ಜಿಲ್ಲೆ, ಯಾದಗಿರಿಯ ವಿಶ್ವಕರ್ಮ ಏಕದಂಡಗಿ ಮಠದ ಅನೇಗುಂದಿ ಸಂಸ್ಥಾನ ಸರಸ್ವತೀ ಪೀಠಾಧೀಶರಾದ ಶ್ರೀ ಗುರುನಾಥ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಚಿಕ್ಕನಾಯಕನಹಳ್ಳಿಯ ಶ್ರೀಕಾಳಿಕಾಂಬ ದೇವಾಲಯದಲ್ಲಿ ಶ್ರೀಕಾಳಿಕಾಂಬ, ಶ್ರೀ ಶಿವಲಿಂಗ ವಿಗ್ರಹಗಳ ಪುನರ್ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಭಾಗವಹಿಸಿ ಯಾದಗಿರಿ ಮಠಕ್ಕೆ ಹಿಂದಿರುಗುವಾಗ ಮಾರ್ಗಮಧ್ಯೆ ಹುಳಿಯಾರಿನ ಕಾಗಿ೯ಲ್ ಸತೀಶ್ ಅವರ ಮನೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ 2 A ನಲ್ಲಿ ವಿಶ್ವಕರ್ಮದವರಿಗೆ ಶೇ.3 ಮೀಸಲಾತಿ ಸಿಕ್ಕರೆ ಶೈಕ್ಷಣಿಕ, ಉದ್ಯೋಗ, ರಾಜಕೀಯ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಂದು ಪ್ರತಿಪಾದಿಸಿದರು.
ಪೊಲೀಸ್ ದಬ್ಬಾಳಿಕೆ ತಪ್ಪಿಸಿ: ಚಿನ್ನಬೆಳ್ಳಿ ಕೆಲಸ ಮಾಡುವವರ, ಬಂಗಾರದ ಅಂಗಡಿ ಇಟ್ಟಿರುವವ ಮೇಲೆ ಪೊಲೀಸರು ಅನಗತ್ಯ ಕಿರುಕುಳ ನೀಡುತ್ತಿದ್ದು ಪಟ್ಟಣದಲ್ಲಿ ಕಳ್ಳತನ ಪ್ರಕರಣ ಜರುಗಿದರೂ ಸಾಕು ಅಲ್ಲಿನ ಅಂಗಡಿಗಳಿಗೆ ಏಕಾಏಕಿ ಬಂದು ತಪಾಸಣೆ ನಡೆಸಿ ಅವಮಾನಕರ, ದೌರ್ಜನ್ಯದ ಮಾತುಗಳನ್ನಾಡಿ ಮಾನಸಿಕವಾಗಿ ಘಾಸಿಗೊಳಿಸುವುದನ್ನು ಮೊದಲು ತಪ್ಪಿಸಬೇಕು ಎಂದರಲ್ಲದೆ ವಿಶ್ವಕರ್ಮ ಜನಾಂಗದ ಏಳಿಗೆಗೆ ಪ್ರತ್ಯೇಕ ನಿಗಮ ಸ್ಥಾಪಿಸಿ ತರಬೇತಿ, ಸಾಲ-ಸೌಲಭ್ಯ, ಅವಸಾನದ ಅಂಚಿನಲ್ಲಿರುವ ಕಲೆಗಳ ಪುರ್ನಶ್ಚೇತನಕ್ಕೆ ಸಕಾ೯ರ ಮುಂದಾಗುವಂತೆ ಸಲಹೆ ನೀಡಿದರು.
ರಾಜಕೀಯ ಸ್ಥಾನ ಮಾನ: ಇತರ ಹಿಂದುಳಿದ ಜಾತಿಗಳಿಗೆ ಹೋಲಿಸಿದರೆ ವಿಶ್ವಕರ್ಮ ಜನಾಂಗಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ರಾಜಕೀಯವಾಗಿ ಸರಿಯಾದ ಸ್ಥಾನ ಮಾನ ನೀಡುತ್ತಿಲ್ಲ. ಚಂದ್ರಶೇಖರ ಕಂಬಾರ ಸೇರಿದಂತೆ ಒಂದಿಬ್ಬರು ಎಂಎಲ್ಸಿ ಆಗಿದ್ದು ಬಿಟ್ಟರೆ ಮತ್ಯಾರೂ ರಾಜಕೀಯ ಹುದ್ದೆಗಳನ್ನು ಅಲಂಕರಿಸಿಲ್ಲ. ಹೀಗಾಗಲು ನಮ್ಮಲ್ಲಿರುವ ಅಸಂಘಟನೆ ಕಾರಣವಾಗಿದ್ದು ಜನಸಂಖ್ಯೆಯಲ್ಲಿ ಮುಂದುವರಿಯುವುದಕ್ಕಿಂತ ಸಂಘಟಿತರಾಗಿ ಮುಂದುವರಿಯುವುದು ಸೂಕ್ತ ಎಂದರು.
ಸಕಾ೯ರಕ್ಕೆ ಕೂಗು ತಟ್ಟಿಲ್ಲ: ದೇವಸ್ಥಾನ, ಆಸ್ತಿಕಬಾವ, ಕೃಷಿಕರ್ಮ ಮತ್ತು ತಾಂತ್ರಿಕ ಕಸುಬುಗಳನ್ನು ಹುಟ್ಟುಹಾಕಿದ ವಿರ್ಶಕರ್ಮ ಜನಾಂಗ ಇಂದು ಎಲ್ಲರ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಶಿಲ್ಪಕಲೆ ಪರಂಪರೆ ಪುನರುಸ್ಥಾನ ಗೊಂಡರೆ ಭಾರತೀಯ ಸಂಸ್ಕೃತಿ ಪುನಃ ಗತವೈಭವ ಪಡೆದು ಶಿಲ್ಪಗಳ, ಮಠಗಳ, ದೇವಾಲಯಗಳ ಏಳಿಗೆ ಸಾಧ್ಯ. ಈ ನಿಟ್ಟಿನಲ್ಲಿ 2003 ರಿಂದ ಇಲ್ಲಿಯವರೆಗೂ ನಿರಂತರವಾಗಿ 28 ಜಿಲ್ಲೆ ನೂರಾರು ತಾಲೂಕುಗಳಲ್ಲಿ ಸಮ್ಮೇಳನ, ಸಮಾವೇಶ, ಹೋರಾಟ ಮಾಡುತ್ತಿದ್ದರೂ ಕೂಡ ತಮ್ಮ ಕೂಗು ಸಕಾ೯ರಕ್ಕೆ ತಟ್ಟಿಲ್ಲ ಎಂದು ನೊಂದು ನುಡಿದರು.
ಹೋರಾಟ-ಸಂಘಟನೆ ನಿಲ್ಲಿಸುವುದಿಲ್ಲ: ಮನುಕುಲದ ನಾಗರಿಕತೆಗೆ ಮೀಸಲಾದವರು ವಿಶ್ವಕರ್ಮ ಜನಾಂಗದವರು. ಆದರೆ ಅಲ್ಪಸಂಖ್ಯಾತರು ಎನ್ನುವ ಕಾರಣದಿಂದ ಸಕಾ೯ರ ನಮ್ಮನ್ನು ದೂರವಿಡುತ್ತಿದ್ದು ಜನಾಂಗದಲ್ಲಿ ಅನೇಕತೆ ಹೋಗಲಾಡಿಸಿ ಐಕ್ಯತೆ ಬೆಳಸಿ ಒಗ್ಗಟ್ಟಾಗಿ ನಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡುವುದಾಗಿ ಶ್ರೀಗಳು ತಿಳಿಸಿದರು.
ಚಿಕ್ಕನಾಯಕನಹಳ್ಳಿಯ ಶ್ರೀಕಾಳಿಕಾಂಬ ದೇವಾಲಯದಲ್ಲಿ ಶ್ರೀಕಾಳಿಕಾಂಬ, ಶ್ರೀ ಶಿವಲಿಂಗ ವಿಗ್ರಹಗಳ ಪುನರ್ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಭಾಗವಹಿಸಿ ಯಾದಗಿರಿ ಮಠಕ್ಕೆ ಹಿಂದಿರುಗುವಾಗ ಮಾರ್ಗಮಧ್ಯೆ ಹುಳಿಯಾರಿನ ಕಾಗಿ೯ಲ್ ಸತೀಶ್ ಅವರ ಮನೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ 2 A ನಲ್ಲಿ ವಿಶ್ವಕರ್ಮದವರಿಗೆ ಶೇ.3 ಮೀಸಲಾತಿ ಸಿಕ್ಕರೆ ಶೈಕ್ಷಣಿಕ, ಉದ್ಯೋಗ, ರಾಜಕೀಯ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಂದು ಪ್ರತಿಪಾದಿಸಿದರು.
ಪೊಲೀಸ್ ದಬ್ಬಾಳಿಕೆ ತಪ್ಪಿಸಿ: ಚಿನ್ನಬೆಳ್ಳಿ ಕೆಲಸ ಮಾಡುವವರ, ಬಂಗಾರದ ಅಂಗಡಿ ಇಟ್ಟಿರುವವ ಮೇಲೆ ಪೊಲೀಸರು ಅನಗತ್ಯ ಕಿರುಕುಳ ನೀಡುತ್ತಿದ್ದು ಪಟ್ಟಣದಲ್ಲಿ ಕಳ್ಳತನ ಪ್ರಕರಣ ಜರುಗಿದರೂ ಸಾಕು ಅಲ್ಲಿನ ಅಂಗಡಿಗಳಿಗೆ ಏಕಾಏಕಿ ಬಂದು ತಪಾಸಣೆ ನಡೆಸಿ ಅವಮಾನಕರ, ದೌರ್ಜನ್ಯದ ಮಾತುಗಳನ್ನಾಡಿ ಮಾನಸಿಕವಾಗಿ ಘಾಸಿಗೊಳಿಸುವುದನ್ನು ಮೊದಲು ತಪ್ಪಿಸಬೇಕು ಎಂದರಲ್ಲದೆ ವಿಶ್ವಕರ್ಮ ಜನಾಂಗದ ಏಳಿಗೆಗೆ ಪ್ರತ್ಯೇಕ ನಿಗಮ ಸ್ಥಾಪಿಸಿ ತರಬೇತಿ, ಸಾಲ-ಸೌಲಭ್ಯ, ಅವಸಾನದ ಅಂಚಿನಲ್ಲಿರುವ ಕಲೆಗಳ ಪುರ್ನಶ್ಚೇತನಕ್ಕೆ ಸಕಾ೯ರ ಮುಂದಾಗುವಂತೆ ಸಲಹೆ ನೀಡಿದರು.
ರಾಜಕೀಯ ಸ್ಥಾನ ಮಾನ: ಇತರ ಹಿಂದುಳಿದ ಜಾತಿಗಳಿಗೆ ಹೋಲಿಸಿದರೆ ವಿಶ್ವಕರ್ಮ ಜನಾಂಗಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ರಾಜಕೀಯವಾಗಿ ಸರಿಯಾದ ಸ್ಥಾನ ಮಾನ ನೀಡುತ್ತಿಲ್ಲ. ಚಂದ್ರಶೇಖರ ಕಂಬಾರ ಸೇರಿದಂತೆ ಒಂದಿಬ್ಬರು ಎಂಎಲ್ಸಿ ಆಗಿದ್ದು ಬಿಟ್ಟರೆ ಮತ್ಯಾರೂ ರಾಜಕೀಯ ಹುದ್ದೆಗಳನ್ನು ಅಲಂಕರಿಸಿಲ್ಲ. ಹೀಗಾಗಲು ನಮ್ಮಲ್ಲಿರುವ ಅಸಂಘಟನೆ ಕಾರಣವಾಗಿದ್ದು ಜನಸಂಖ್ಯೆಯಲ್ಲಿ ಮುಂದುವರಿಯುವುದಕ್ಕಿಂತ ಸಂಘಟಿತರಾಗಿ ಮುಂದುವರಿಯುವುದು ಸೂಕ್ತ ಎಂದರು.
ಸಕಾ೯ರಕ್ಕೆ ಕೂಗು ತಟ್ಟಿಲ್ಲ: ದೇವಸ್ಥಾನ, ಆಸ್ತಿಕಬಾವ, ಕೃಷಿಕರ್ಮ ಮತ್ತು ತಾಂತ್ರಿಕ ಕಸುಬುಗಳನ್ನು ಹುಟ್ಟುಹಾಕಿದ ವಿರ್ಶಕರ್ಮ ಜನಾಂಗ ಇಂದು ಎಲ್ಲರ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಶಿಲ್ಪಕಲೆ ಪರಂಪರೆ ಪುನರುಸ್ಥಾನ ಗೊಂಡರೆ ಭಾರತೀಯ ಸಂಸ್ಕೃತಿ ಪುನಃ ಗತವೈಭವ ಪಡೆದು ಶಿಲ್ಪಗಳ, ಮಠಗಳ, ದೇವಾಲಯಗಳ ಏಳಿಗೆ ಸಾಧ್ಯ. ಈ ನಿಟ್ಟಿನಲ್ಲಿ 2003 ರಿಂದ ಇಲ್ಲಿಯವರೆಗೂ ನಿರಂತರವಾಗಿ 28 ಜಿಲ್ಲೆ ನೂರಾರು ತಾಲೂಕುಗಳಲ್ಲಿ ಸಮ್ಮೇಳನ, ಸಮಾವೇಶ, ಹೋರಾಟ ಮಾಡುತ್ತಿದ್ದರೂ ಕೂಡ ತಮ್ಮ ಕೂಗು ಸಕಾ೯ರಕ್ಕೆ ತಟ್ಟಿಲ್ಲ ಎಂದು ನೊಂದು ನುಡಿದರು.
ಹೋರಾಟ-ಸಂಘಟನೆ ನಿಲ್ಲಿಸುವುದಿಲ್ಲ: ಮನುಕುಲದ ನಾಗರಿಕತೆಗೆ ಮೀಸಲಾದವರು ವಿಶ್ವಕರ್ಮ ಜನಾಂಗದವರು. ಆದರೆ ಅಲ್ಪಸಂಖ್ಯಾತರು ಎನ್ನುವ ಕಾರಣದಿಂದ ಸಕಾ೯ರ ನಮ್ಮನ್ನು ದೂರವಿಡುತ್ತಿದ್ದು ಜನಾಂಗದಲ್ಲಿ ಅನೇಕತೆ ಹೋಗಲಾಡಿಸಿ ಐಕ್ಯತೆ ಬೆಳಸಿ ಒಗ್ಗಟ್ಟಾಗಿ ನಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡುವುದಾಗಿ ಶ್ರೀಗಳು ತಿಳಿಸಿದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ