
ಹುಳಿಯಾರಿನಲ್ಲಿ ವೈಭವದ ವಾಸವಿ ಜಯಂತಿ
---------------------------------------
ಆರ್ಯವೈಶ್ಯ ಸಮುದಾಯದ ಕುಲದೇವತೆ ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರ ಜಯಂತಿಯನ್ನು ಭಾನುವಾರದಂದು ಹುಳಿಯಾರಿನಲ್ಲಿ ಶ್ರದ್ಧಾ ಭಕ್ತಿ ಹಾಗೂ ವೈಭವದಿಂದ ಆಚರಿಸಲಾಯಿತು.
ರಾಮಚಂದ್ರಭಟ್ಟರು ಹಾಗೂ ನಾಗರಾಜಗುಪ್ತ ಅವರ ಪೌರೋಹಿತ್ಯದಲ್ಲಿ ಬೆಳಿಗ್ಗೆಯಿಂದಲೇ ಪೂಜಾ ಕೈಂಕರ್ಯಗಳು,ಹವನ ಹೋಮಾಧಿಗಳು ನಡೆದವು. ಟಿ.ಎಸ್.ದುರ್ಗರಾಜಗುಪ್ತ ಮತ್ತು ಕುಟುಂಬದವರಿಂದ ಹಾಲಿನ ಪಂಚಾಮೃತ ಅಭಿಷೇಕದಿಂದ ಆರಂಭವಾಗಿ ಗಣಪತಿ ಹೋಮ, ನವಗ್ರಹ ಹೋಮ, ವಾಸವಿ ಹೋಮ, ದುಗಾ೯ಹೋಮ, ಮೃತ್ಯುಂಜಯ ಹೋಮ ಆಚರಿಸಿ ಪೂರ್ಣಾಹುತಿ ಸಲ್ಲಿಸಲಾಯಿತು.
ನಂತರ ಸುಮಂಗಲಿಯರಿಂದ ಆರತಿ ಸೇವೆ, ಸಮಸ್ತ ಆರ್ಯವೈಶ್ಯ ಕುಲಭಾಂಧವರಿಂದ ಶ್ರೀ ಅಮ್ಮನವಿಗೆ ನಾಣ್ಯಗಳಿಂದ ತುಲಾಭಾರ, ಕನ್ಯಕಾ ಬಾಲನಾಗರು ಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ, ಅಷ್ಟಾವಧಾನ ಮುಂತಾದ ವಿವಿಧ ಧಾಮಿ೯ಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಆರ್ಯವೈಶ್ಯ ಮಹಿಳಾ ಸಂಘದಿಂದ ತಂಬಿಟ್ಟಿನ ಆರತಿ ಸ್ಪಧೆ೯, ವಾಸವಿ ವೇಷಭೂಷಣ ಸ್ಪಧೆ೯, ವಾಸವಿ ಯುವ ಜನ ಸಂಘದಿಂದ ರೋಗಿಗಳಿಗೆ ಹಣ್ಣು ಎಳನೀರು ವಿತರಣೆ ಅಲ್ಲದೆ ಹೆಣ್ಣು ಮಕ್ಕಳಿಗೆ ವಿವಿಧ ಸ್ಪಧೆ೯ಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.
ಸಂಜೆ ಶ್ರೀ ಕನ್ನಿಕಾ ಪರಮೇಶ್ವರಿ ಅಮ್ಮನವರನ್ನು ವಿಧ್ಯುತ್ ದೀಪಾಲಂಕೃತ ರಾಜಗೋಪುರ ಮಂಟಪದಲ್ಲಿ ಕುಳ್ಳಿರಿಸಿ ನಾಸಿಕ್ ವಾದ್ಯ, ಸಿಡಿ ಮದ್ದುವಿನೊಂದಿಗೆ ಅದ್ದೂರಿಯಾಗಿ ರಾಜಬೀದಿ ಉತ್ಸವ ಮಾಡಲಾಯಿತು.
ಆರ್ಯವೈಶ್ಯ ಮಂಡಲಿಯ ಗೌ.ಅಧ್ಯಕ್ಷ ಟಿ.ಆರ್.ಶ್ರೀನಿವಾಸಶ್ರೇಷ್ಠಿ, ಅಧ್ಯಕ್ಷ ಟಿ.ಆರ್.ರಂಗನಾಥ್, ಉಪಾಧ್ಯಕ್ಷ ಎಲ್.ಆರ್.ಚಂದ್ರಶೇಖರ್, ಗೌ.ಕಾರ್ಯದಶಿ೯ ಟಿ.ಎಸ್.ರಾಮನಾಥ್, ಆರ್ಯವೈಶ್ಯ ಮಹಿಳಾ ಸಂಘದ ವೀಣಾಭೂಷಣ್, ವಂದನಾ ನಟರಾಜ್, ಜ್ಯೋತಿ ನಾಗರಾಜ್ ವಾಸವಿ ಯುವಜನ ಸಂಘದ ಕೆ.ಪಿ.ನವೀನ್, ಕೆ.ನಂದೀಶ್, ಟಿ.ಕೆ.ಅಜೇಯ್ ಸೇರಿದಂತೆ ಆರ್ಯವೈಶ್ಯ ಕುಲಭಾಂಧವರು ದಿನಪೂತಿ೯ ಅಂಗಡಿಗಳನ್ನು ಮುಚ್ಚಿ ವ್ಯಾಪಾರ ವ್ಯವಹಾರ ಸ್ಥಗಿತಗೊಳಿಸಿ ದೇವಿಯ ಪೂಜಾ ಕಾರ್ಯಕ್ರಮದಲ್ಲಿ ಸಂಭ್ರಮ ಹಾಗೂ ಸಡಗರದಿಂದ ಭಾಗವಹಿಸಿದ್ದರು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ