ಹುಳಿಯಾರು ಸಮೀಪದ ಹರೇನಹಳ್ಳಿ ಗೇಟ್ ಶ್ರೀ ದುಗಾ೯ ಗ್ರಾಮೀಣ ಮಹಿಳಾ ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆ ನಿರುವಗಲ್ ಮಜುರೆ ಹುಲಿಕಲ್ ಬೆಟ್ಟದ ಶ್ರೀ ದುಗಾ೯ಬ ದೇವಿ ಪುಣ್ಯಕ್ಷೇತ್ರದಲ್ಲಿ ಶನಿವಾರ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಿಕ್ಕನಾಯಕನಹಳ್ಳಿ ತಾಲೂಕಿನ ಹಲವು ಸಂಘ-ಸಂಸ್ಥೆಗಳು ದಾನಿಗಳ ಸಹಾಯ ಪಡೆದು ಪ್ರತಿವರ್ಷ ಹತ್ತಾರು ಸಾಮೂಹಿಕ ವಿವಾಹ ಮಹೋತ್ಸವವನ್ನು ಏರ್ಪಡಿಸಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು ಮುಂದಿನ ವರ್ಷ ಇಂತಹ ಸಂಘ ಸಂಸ್ಥೆಗಳನ್ನು ಒಟ್ಟುಗೂಡಿಸಿ ತಾಲೂಕು ಕೇಂದ್ರದಲ್ಲಿ ಒಂದೇ ದಿನ ನೂರಾರು ಜೋಡಿಗಳ ಸಾಮೂಹಿಕ ವಿವಾಹ ಮಾಡಲು ಮುಂದಾಗುವುದಾಗಿ ತಿಳಿಸಿದರು.
ಸತಿ ಪತಿಗಳು ಕಷ್ಟ-ಸುಖ ಹಾಗೂ ನೋವು ನಲಿವುಗಳನ್ನು ಸಮಾನವಾಗಿ ಸ್ವೀಕರಿಸಿ ಸಂಸಾರ ನಡೆಸಿದಾಗ ಮಾತ್ರ ಯಶಸ್ವಿ ಹಾಗೂ ಸುಖ ಜೀವನ ನಡೆಸಬಹುದಾಗಿದೆ ಎಂದು ಕಿವಿ ಮಾತು ಹೇಳಿದ ಶಾಸಕರು ಸರಳ ವಿವಾಹವಾದ ಪ್ರತಿಯೊಬ್ಬರೂ ಇತರರನ್ನು ಸರಳ ವಿವಾಹದೆಡೆ ಒಲವು ತೋರುವಂತೆ ಮನಸ್ಸು ಪರಿವತಿ೯ಸಬೇಕು ಎಂದು ಕರೆ ನೀಡಿದರು.
ಜಿ.ಪಂ.ಮಾಜಿ ಅಧ್ಯಕ್ಷ ಜಿ.ರಘುನಾಥ್, ಅಖಿಲ ಕನಾ೯ಟಕ ಭೋವಿ ಮಹಾಸಭಾ ಕಾಯಾ೯ಧ್ಯಕ್ಷ ರವಿ.ಎಚ್.ಮಾಕಳಿ, ತಾ.ಪಂ.ಮಾಜಿ ಅಧ್ಯಕ್ಷ ಶಾರದಾ ಸೀತಾರಾಮಯ್ಯ, ಜಿಲ್ಲಾ ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತಿ೯, ತಾಲೂಕು ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎಂ.ಸುರೇಶ್, ಬೆಂಗಳೂರು ಜಯಪ್ರಕಾಶ್, ಖ್ಯಾತ ಹೃದಯರೋಗ ತಜ್ಞ ಡಾ.ಪರಮೇಶ್ವರಪ್ಪ, ಸಿಪಿಐ ರವಿಪ್ರಸಾದ್, ಬೆಸ್ಕಾಂ ಎಸ್ಓ ಎನ್.ಬಿ.ಗವೀರಂಗಯ್ಯ ಪಿಎಸೈ ಶ್ರೀಮತಿ ಪಾರ್ವತಮ್ಮ ಯಾದವ್, ಪಿಎಸೈ ಲಕ್ಷೀಪತಿ, ಜಿ.ಚಿತ್ತಯ್ಯ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ದುಗಾ೯ ಗ್ರಾಮೀಣ ಮಹಿಳಾ ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಇ.ನಾಗರಾಜು, ಉಪಾಧ್ಯಕ್ಷ ಟಿ.ಎಚ್.ಚಂದ್ರು, ಕಾರ್ಯದಶಿ೯ ಎಚ್.ಟಿ.ಮಂಜುನಾಥ್, ಕೆ.ಕೆ.ಹನುಮಂತಪ್ಪ, ಜಿ.ಕರಿಯಪ್ಪ, ತಿಮ್ಮಯ್ಯ ಮತ್ತಿತರರು ಇದ್ದರು.
ಸಕಾ೯ರಿ ನೌಕರರ ಸಂಘದ ನಿದೆ೯ಶಕ ಎಸ್.ಕೆ.ಮಲ್ಲಿಕಾಜು೯ನ್ ಅವರ ನಿರೂಪಣೆಯಲ್ಲಿ ಶಿಕ್ಷಕ ರಾಜಕುಮಾರ್ ಪ್ರಾಥಿ೯ಸಿದರು. ತಿಮ್ಮಾಭೋವಿ ಸ್ವಾಗತಿಸಿದರು. ಇ.ನಾಗರಾಜು ವಂದಿಸಿದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ