ಸಮುದಾಯದ ಅಭಿವೃದ್ಧಿಗಾಗಿ ದುಡಿಯ ಹೊರಟಿರುವವರ ಬಗ್ಗೆ ಟೀಕೆ ಮಾಡುವುದ ಬಿಟ್ಟು ಪ್ರೋತ್ಸಾಹ ನೀಡಿ ಸಹಕರಿಸಿ ಎಂದು ತಾಲೂಕು ಭಗೀರಥ ನೌಕರರ ಕ್ಷೇಮಾಭಿವೃದ್ದಿ ಸಂಘದ ಗೌರವ ಸಲಹೆಗಾರ ಹಾಗೂ ನಿವೃತ್ತ ಉಪನ್ಯಾಸಕ ಡಿ.ಸಿದ್ದಬಸವಯ್ಯ ಅವರು ಕಿವಿ ಮಾತು ಹೇಳಿದರು.
ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಭಾನುವಾರ ಚಿಕ್ಕನಾಯಕನಹಳ್ಳಿ ತಾಲೂಕು ಭಗೀರಥ ನೌಕರರ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಭಗೀರಥ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ತಾಲೂಕು ಉಪ್ಪಾರ ಜನಾಂಗದ ಮಾತೃ ಸಂಸ್ಥೆಯಲ್ಲಿ ಬಹುಪಾಲು ರೈತರು, ಹಿಂದುಳಿದವರು ಇರುವ ಕಾರಣ ಇಲ್ಲಿಯವರವಿಗೆ ಸಮಾಜದ ಏಳಿಗೆ ಕಾರ್ಯದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಲಿಲ್ಲ. ಇದನ್ನು ಮನಗಂಡ ಉಪ್ಪಾರ ಸಕಾ೯ರಿ ನೌಕರರು ಪ್ರತ್ಯೇಕ ಸಂಘವನ್ನು ಸ್ಥಾಪಿಸಿ ಸಮಾಜದ ಸಂಘಟನೆ ಮಾಡಿಕೊಂಡು ವಿವಿಧ ಯೋಜನೆಯ ಮೂಲಕ ಅಭಿವೃದ್ಧಿಗೆ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು ಉಪ್ಪಾರ ಸಮಾಜದ ಸರ್ವರೂ ಇವರ ಬೆಂಬಲಕ್ಕೆ ನಿಲ್ಲಬೇಕು ಎಂದು ಕರೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಉಪ್ಪಾರ ಜನಾಂಗವು ಆಥಿ೯ಕವಾಗಿ, ಶೈಕ್ಷಣಿಕವಾಗಿ ಮುಂದುವರಿಯುತ್ತಿದ್ದರೂ ಕೂಡ ಮೂಡನಂಬಿಕೆಯನ್ನೇ ಹಾಸಿ, ಹೊದ್ದು, ಮಲಗಿಕೊಂಡಿರುವ ಪರಿಣಾಮ ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ವರ್ಗವಾಗಿದೆ ಎಂದ ಅವರು ಮೂಡನಂಬಿಕೆಯಿಂದ ಹೊರ ಬಂದು ದೇವರಲ್ಲಿನ ತಪ್ಪು ಕಲ್ಪನೆಯನ್ನು ಬಿಟ್ಟು ಬಸವಣ್ಣನವರ ಕಾಯಕವೇ ಕೈಲಾಸ ಎಂಬುದನ್ನು ಅರಿತಾಗ ಮಾತ್ರ ಮುಂದುವರಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಆಧ್ಯಾತ್ಮ ಮತ್ತು ಯೋಗದಿಂದ ಮನಸ್ಸು ಹತೋಟಿಗೆ ಬರುವುದಲ್ಲದೆ ಏಕಾಗ್ರತೆಗೆ ಕೊಂಡೊಯ್ಯಬಹುದು. ಇದರಿಂದ ದುಶ್ಚಟ, ಅಪರಾಧಗಳಿಂದ ಮುಕ್ತಿಯ ಜೀವನ ನಡೆಯಬಹುದಾಗಿದ್ದು ಪ್ರತಿದಿನ ಸ್ನಾನ, ಪೂಜೆ, ಧ್ಯಾನ, ಯೋಗ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಗೀರಥ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ರಾಮಣ್ಣ ವಹಿಸಿದ್ದರು. ತಾಲೂಕು ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಜಿ.ಎಸ್.ಕೃಷ್ಣಮೂತಿ೯ ಅವರು ಉದ್ಘಾಟಿಸಿದರು. ಭಾವಚಿತ್ರ ಅನಾವಣವನ್ನು ತಾ.ಪಂ.ಮಾಜಿ ಅಧ್ಯಕ್ಷೆ ಶಾರದಾ ಸೀತರಾಮಯ್ಯ ನೆರವೇರಿಸಿದರು. ವಿಶೇಷ ಆಹ್ವಾನಿತರಾಗಿ ಪಿಡಬ್ಮ್ಯುಡಿ ಗುತ್ತಿಗೆದಾರ ಕಲ್ಲಹಳ್ಳಿ ರೇಣುಕಯ್ಯ, ಗುಬೆಹಳ್ಳಿ ಟೌನ್ ಪ್ಲಾನರ್ ಶಂಕರಪ್ಪ, ನೀರಾವರಿ ಇಲಾಖೆಯ ಶಿವಸ್ವಾಮಿ, ಉಪನ್ಯಾಸಕ ಹೊನ್ನಯ್ಯ, ವಕೀಲ ದೊಡ್ಡೆಣ್ಣೇಗೆರೆ ಸಿ.ಓಂಕಾರಮೂತಿ೯ ಅವರು ಭಾಗವಹಿಸಿದ್ದರು.
ಭಗೀರಥ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪುಟ್ಟಯ್ಯ, ಹನುಮಂತಪ್ಪ, ಬಿ.ಸಿದ್ದಯ್ಯ, ಬಿ.ಜಿ.ಅನಂತಯ್ಯ, ಶಿವಣ್ಣ, ಟಿ.ಎಸ್.ಧನಂಜಯ್ಯ, ಸುಮಂಗಳಯಲ್ಲಪ್ಪ, ಚಂದ್ರಮ್ಮನರಸಿಂಹಯ್ಯ, ಎನ್.ಬಿ.ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.
ಚಂದ್ರಯ್ಯ ಅವರ ನಿರೂಪಣೆಯಲ್ಲಿ ಶಾಮಲಾ ಪ್ರಾಥಿ೯ಸಿ, ಅನಂತಯ್ಯ ಸ್ವಾಗತಿಸಿ, ನಾಗೇಂದ್ರಪ್ಪ ಪ್ರಾಸ್ಥಾವಿಕ ನುಡಿ ನುಡಿದು ಯಲ್ಲಪ್ಪ ವಂದಿಸಿದರು.
ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಭಾನುವಾರ ಚಿಕ್ಕನಾಯಕನಹಳ್ಳಿ ತಾಲೂಕು ಭಗೀರಥ ನೌಕರರ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಭಗೀರಥ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ತಾಲೂಕು ಉಪ್ಪಾರ ಜನಾಂಗದ ಮಾತೃ ಸಂಸ್ಥೆಯಲ್ಲಿ ಬಹುಪಾಲು ರೈತರು, ಹಿಂದುಳಿದವರು ಇರುವ ಕಾರಣ ಇಲ್ಲಿಯವರವಿಗೆ ಸಮಾಜದ ಏಳಿಗೆ ಕಾರ್ಯದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಲಿಲ್ಲ. ಇದನ್ನು ಮನಗಂಡ ಉಪ್ಪಾರ ಸಕಾ೯ರಿ ನೌಕರರು ಪ್ರತ್ಯೇಕ ಸಂಘವನ್ನು ಸ್ಥಾಪಿಸಿ ಸಮಾಜದ ಸಂಘಟನೆ ಮಾಡಿಕೊಂಡು ವಿವಿಧ ಯೋಜನೆಯ ಮೂಲಕ ಅಭಿವೃದ್ಧಿಗೆ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು ಉಪ್ಪಾರ ಸಮಾಜದ ಸರ್ವರೂ ಇವರ ಬೆಂಬಲಕ್ಕೆ ನಿಲ್ಲಬೇಕು ಎಂದು ಕರೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಉಪ್ಪಾರ ಜನಾಂಗವು ಆಥಿ೯ಕವಾಗಿ, ಶೈಕ್ಷಣಿಕವಾಗಿ ಮುಂದುವರಿಯುತ್ತಿದ್ದರೂ ಕೂಡ ಮೂಡನಂಬಿಕೆಯನ್ನೇ ಹಾಸಿ, ಹೊದ್ದು, ಮಲಗಿಕೊಂಡಿರುವ ಪರಿಣಾಮ ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ವರ್ಗವಾಗಿದೆ ಎಂದ ಅವರು ಮೂಡನಂಬಿಕೆಯಿಂದ ಹೊರ ಬಂದು ದೇವರಲ್ಲಿನ ತಪ್ಪು ಕಲ್ಪನೆಯನ್ನು ಬಿಟ್ಟು ಬಸವಣ್ಣನವರ ಕಾಯಕವೇ ಕೈಲಾಸ ಎಂಬುದನ್ನು ಅರಿತಾಗ ಮಾತ್ರ ಮುಂದುವರಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಆಧ್ಯಾತ್ಮ ಮತ್ತು ಯೋಗದಿಂದ ಮನಸ್ಸು ಹತೋಟಿಗೆ ಬರುವುದಲ್ಲದೆ ಏಕಾಗ್ರತೆಗೆ ಕೊಂಡೊಯ್ಯಬಹುದು. ಇದರಿಂದ ದುಶ್ಚಟ, ಅಪರಾಧಗಳಿಂದ ಮುಕ್ತಿಯ ಜೀವನ ನಡೆಯಬಹುದಾಗಿದ್ದು ಪ್ರತಿದಿನ ಸ್ನಾನ, ಪೂಜೆ, ಧ್ಯಾನ, ಯೋಗ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಗೀರಥ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ರಾಮಣ್ಣ ವಹಿಸಿದ್ದರು. ತಾಲೂಕು ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಜಿ.ಎಸ್.ಕೃಷ್ಣಮೂತಿ೯ ಅವರು ಉದ್ಘಾಟಿಸಿದರು. ಭಾವಚಿತ್ರ ಅನಾವಣವನ್ನು ತಾ.ಪಂ.ಮಾಜಿ ಅಧ್ಯಕ್ಷೆ ಶಾರದಾ ಸೀತರಾಮಯ್ಯ ನೆರವೇರಿಸಿದರು. ವಿಶೇಷ ಆಹ್ವಾನಿತರಾಗಿ ಪಿಡಬ್ಮ್ಯುಡಿ ಗುತ್ತಿಗೆದಾರ ಕಲ್ಲಹಳ್ಳಿ ರೇಣುಕಯ್ಯ, ಗುಬೆಹಳ್ಳಿ ಟೌನ್ ಪ್ಲಾನರ್ ಶಂಕರಪ್ಪ, ನೀರಾವರಿ ಇಲಾಖೆಯ ಶಿವಸ್ವಾಮಿ, ಉಪನ್ಯಾಸಕ ಹೊನ್ನಯ್ಯ, ವಕೀಲ ದೊಡ್ಡೆಣ್ಣೇಗೆರೆ ಸಿ.ಓಂಕಾರಮೂತಿ೯ ಅವರು ಭಾಗವಹಿಸಿದ್ದರು.
ಭಗೀರಥ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪುಟ್ಟಯ್ಯ, ಹನುಮಂತಪ್ಪ, ಬಿ.ಸಿದ್ದಯ್ಯ, ಬಿ.ಜಿ.ಅನಂತಯ್ಯ, ಶಿವಣ್ಣ, ಟಿ.ಎಸ್.ಧನಂಜಯ್ಯ, ಸುಮಂಗಳಯಲ್ಲಪ್ಪ, ಚಂದ್ರಮ್ಮನರಸಿಂಹಯ್ಯ, ಎನ್.ಬಿ.ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.
ಚಂದ್ರಯ್ಯ ಅವರ ನಿರೂಪಣೆಯಲ್ಲಿ ಶಾಮಲಾ ಪ್ರಾಥಿ೯ಸಿ, ಅನಂತಯ್ಯ ಸ್ವಾಗತಿಸಿ, ನಾಗೇಂದ್ರಪ್ಪ ಪ್ರಾಸ್ಥಾವಿಕ ನುಡಿ ನುಡಿದು ಯಲ್ಲಪ್ಪ ವಂದಿಸಿದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ