(ಫೋಟೊ ವಿವರ:ಹುಳಿಯಾರು ಪ್ರವಾಸಿ ಮಂದಿರದ ಬಳಿ ಚಿ.ನಾ.ಹಳ್ಳಿ ತಾಲೂಕಿಗೆ ಹೇಮೆ ಹರಿಸಲು ಒತ್ತಾಯಿಸಿ ಕರೆಯಲಾಗಿದ್ದ ಸಭೆಯಲ್ಲಿ ಕುಪ್ಪೂರಿನ ಶ್ರೀ ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿ ಖ್ಯಾತ ಹೃದಯರೋಗ ತಜ್ಞ ಡಾ.ಪರಮೇಶ್ವರಪ್ಪ, ರೈತ ಸಂಘದ ಕೆಂಕೆರೆ ಸತೀಶ್ ಮತ್ತಿತರರು ಭಾಗವಹಿಸಿದ್ದರು.)
ಮಾತು ತಪ್ಪಿದ ಸಕಾ೯ರ:ಕಡೆಯ ಪ್ರಯತ್ನವಾಗಿ
ಮುಖ್ಯಮಂತ್ರಿ ಬಳಿಗೆ ಮಠಾಧೀಶರ ನೇತೃತ್ವದಲ್ಲಿ ನಿಯೋಗ
-------------------------------------------------------------------------
ಕುಡಿಯುವ ನೀರಿಗೂ ತೀವ್ರ ಸಮಸ್ಯೆ ಎದುರಿಸುತ್ತಿರುವ ಚಿಕ್ಕನಾಯಕನಹಳ್ಳಿ ತಾಲೂಕಿಗೆ ಹೇಮಾವತಿ ನದಿ ನೀರು ಹರಿಸಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಯೋಜನೆ ಬಗ್ಗೆ ಸಕಾ೯ರ ತನ್ನ ನಿಲುವು ಪ್ರಕಟಿಸದಿರುವದರ ಬಗ್ಗೆ ಕಡೆಯ ಪ್ರಯತ್ನವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿಗೆ ಶೀಘ್ರದಲ್ಲಿಯೇ ವಿವಿಧ ಮಠಾಧೀಶರ ನೇತೃತ್ವದಲ್ಲಿ ನಿಯೋಗವೊಂದನ್ನು ಕರೆದೊಯ್ಯಲು ರೈತ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ನಿರ್ಧರಿಸಿವೆ.
ಕುಪ್ಪೂರಿನ ಶ್ರೀ ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಹೃದ್ರೋಗ ತಜ್ಞ ಡಾ.ಪರಮೇಶ್ವರಪ್ಪನವರ ಅಧ್ಯಕ್ಷತೆಯಲ್ಲಿ ಹುಳಿಯಾರಿನ ಪ್ರವಾಸಿ ಮಂದಿರಲ್ಲಿ ತಾಲ್ಲೂಕ್ ರೈತ ಸಂಘ ಹಾಗೂ ಹಸಿರು ಸೇನೆ ಶನಿವಾರ ಕರೆಯಲಾಗಿದ್ದ ಸಭೆಯಲ್ಲಿ ಈ ನಿಧಾ೯ರ ಕೈಗೊಳ್ಳಲಾಯಿತು.ಹೋರಾಟದ ಮುಂದಿನ ರೂಪುರೇಷೆ ಕೈಗೊಳ್ಳುವ ನಿಟ್ಟಿನಲ್ಲಿ ಸುಧೀರ್ಘ ಚಚೆ೯ ನಡೆಸಿ ಅಂತಿಮವಾಗಿ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಾದ ಬಸವರಾಜ ಬೊಮ್ಮಯಿ ಅವರನ್ನು ಭೇಟಿಯಾಗಿ ಅವರ ನಿಲುವೇನೆಂದು ಖಚಿತಪಡಿಸಿಕೊಂಡ ನಂತರ ಮುಂದಿನ ಹಂತದ ಹೋರಾಟ ನಡೆಸಲು ತೀಮಾ೯ನಿಸಲಾಯಿತು.ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಸಂಸ್ಥೆಗಳ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಿಷ್ಟು.
ಏನಿದು ಸಮಸ್ಯೆ ?: ದಶಕಗಳಿಂದಲ್ಲೂ ಚಿಕ್ಕನಾಯಕನಹಳ್ಳಿ ತಾಲೂಕಿನಾದ್ಯಂತ ನೀರಿನ ಸಮಸ್ಯೆ ಬಿಗಡಾಯಿಸಿದ್ದು ಇತ್ತೀಚಿನ ದಿನಗಳಲ್ಲಿ ಸರಿಯಾದ ಮಳೆಯಿಲ್ಲದೆ ಅಂತರ್ಜಲ ಮಟ್ಟ ತೀರ್ವ ಕುಸಿತವಾಗಿ ಜನಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವರವಾಗಿದ್ದರೂ ಸಹ ಯಾವುದೇ ಸಕಾ೯ರವಾಗಲಿ, ಜನಪ್ರತಿನಿಧಿಗಳಾಗಲಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿಲ್ಲ. ಹಾಗಾಗಿ ಕಳೆದೆರೆಡೂ ವರ್ಷಗಳಿಂದಲೂ ಶಾಸ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ, ರಸ್ತೆ ತಡೆ ಹಾಗೂ ಪಟ್ಟಣ ಬಂದ್, ಅಹೋರಾತ್ರಿ ಧರಣಿ ಮುಂತಾದ ಹೋರಾಟ ಮಾಡಲಾಯಿತು.
ಹೋರಾಟ ತೀವ್ರ ಸ್ವರೂಪಕ್ಕೆ ತಿರುಗಿದಾಗ ಎಚ್ಚೆತ್ತ ಸಕಾ೯ರ ಹಾಗೂ ನೀರಾವರಿ ಸಚಿವ ಬಸವರಾಜ ಬೊಮ್ಮಯಿ, ತುಮಕೂರು ಜಿಲ್ಲಾಉಸ್ತುವಾರಿ ಸಚಿವ ಸುರೇಶ ಕುಮಾರ್ ಮಧ್ಯಸ್ಥಿಕೆಯಲ್ಲಿ ಹೋರಾಟಗಾರರನ್ನು ವಿಧಾನಸೌಧಕ್ಕೆ ಬರಮಾಡಿಕೊಂಡು ತಾಲೂಕಿಗೆ ಹೇಮೆ ಹರಿಸುವ ಸಂಬಂಧ ಸ್ಥಳದಲ್ಲಿಯೇ ಸವೇ೯ ಕಾರ್ಯಕ್ಕೆ ಆದೇಶ ನೀಡುವುದರ ಮೂಲಕ ಹೋರಾಟವನ್ನು ತಾತ್ಕಾಲಿಕವಾಗಿ ಶಮನ ಮಾಡಿದ್ದರು. .ಸಚಿವರ ಆದೇಶದ ಮೇರೆಗೆ ಈಗಾಗಲೇ ಸವೇ೯ ಕಾರ್ಯ ಮುಗಿದಿದ್ದು ಈ ಹಂತದಲ್ಲಿ ಶಿರಾ ಸೇರಿದಂತೆ ತಾಲ್ಲೂಕಿಗೆ ನೀರು ಹರಿಸುವ ಕುರಿತಂತೆ ಜಿಲ್ಲೆಯ ಕೆಲ ಬಿಜೆಪಿ ಶಾಸಕರು ಹೊಸದಾಗಿ ತಕರಾರು ತೆಗೆದ ಕಾರಣ ಬರದ ನಾಡಿಗೆ ನೀರು ಹರಿಸುವ ಯೋಜನೆ ನೆನಗುದ್ದಿಗೆ ಬಿದ್ದಿದೆ.
ಅಡ್ಡಿಪಡಿಸಿರುವ ಶಾಸಕರುಗಳನ್ನು ಏಕೆಂದು ಪ್ರಶ್ನಿಸುವುದಾಗಲಿ ಅಥವಾ ಮನವೊಲಿಸಲಾಗಲಿ ಮಾಡಲು ಶಾಸಕ ಸುರೇಶ್ ಬಾಬು ಅವರಾಗಲಿ, ಮುಖ್ಯಮಂತ್ರಿಗಳ ಆಪ್ತರೆಂದೇ ಗುರುತಿಸಿಕೊಂಡಿರುವ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಅವರಾಗಲೀ ಪ್ರಯತ್ನ ಮಾಡದೆ ಮೌನವಹಿಸಿದ್ದಾರೆ.ತಾಲೂಕಿಗೆ ನೀರಿನ ಅನಿವಾರ್ಯತೆ ಬಗ್ಗೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರುವಲ್ಲಿ ವಿಫಲವಾಗಿರುವ ಕಾರಣ ಅನಿವಾರ್ಯವಾಗಿ ಮಠಾಧೀಶರ ನೇತೃತ್ವದಲ್ಲಿ ನಿಯೋಗ ತೆರಳುವ ನಿಧಾ೯ರಕ್ಕೆ ಬರಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ರಾಜ್ಯ ಹಸಿರು ಸೇನೆ ಸಂಚಾಲಕ ಕೆಂಕೆರೆ ಸತಿಶ್, ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಪಿ.ಮಲ್ಲೇಶ್, ನೂತನ ಗ್ರಾಮ ಪಂಚಾಯ್ತಿ ಸದಸ್ಯರಾದ ಏಜೆಂಟ್ ಗಂಗಣ್ಣ, ಶ್ರೀನಿವಾಸ್, ಸೈಯದ್ ಜಲಾಲ್, ತಮ್ಮಡಿಹಳ್ಳಿ ಮಲ್ಲಿಕಣ್ಣ, ಕಾಗಿ೯ಲ್ ಸತೀಶ್, ಗಂಗಣ್ಣ, ಹೊಸಹಳ್ಳಿಚಂದ್ರಣ್ಣ, ಜಯಲಕ್ಷ್ಮಮ್ಮ, ಬೀರಣ್ಣ, ಪರಮೇಶ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಮಾತು ತಪ್ಪಿದ ಸಕಾ೯ರ:ಕಡೆಯ ಪ್ರಯತ್ನವಾಗಿ
ಮುಖ್ಯಮಂತ್ರಿ ಬಳಿಗೆ ಮಠಾಧೀಶರ ನೇತೃತ್ವದಲ್ಲಿ ನಿಯೋಗ
-------------------------------------------------------------------------
ಕುಡಿಯುವ ನೀರಿಗೂ ತೀವ್ರ ಸಮಸ್ಯೆ ಎದುರಿಸುತ್ತಿರುವ ಚಿಕ್ಕನಾಯಕನಹಳ್ಳಿ ತಾಲೂಕಿಗೆ ಹೇಮಾವತಿ ನದಿ ನೀರು ಹರಿಸಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಯೋಜನೆ ಬಗ್ಗೆ ಸಕಾ೯ರ ತನ್ನ ನಿಲುವು ಪ್ರಕಟಿಸದಿರುವದರ ಬಗ್ಗೆ ಕಡೆಯ ಪ್ರಯತ್ನವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿಗೆ ಶೀಘ್ರದಲ್ಲಿಯೇ ವಿವಿಧ ಮಠಾಧೀಶರ ನೇತೃತ್ವದಲ್ಲಿ ನಿಯೋಗವೊಂದನ್ನು ಕರೆದೊಯ್ಯಲು ರೈತ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ನಿರ್ಧರಿಸಿವೆ.
ಕುಪ್ಪೂರಿನ ಶ್ರೀ ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಹೃದ್ರೋಗ ತಜ್ಞ ಡಾ.ಪರಮೇಶ್ವರಪ್ಪನವರ ಅಧ್ಯಕ್ಷತೆಯಲ್ಲಿ ಹುಳಿಯಾರಿನ ಪ್ರವಾಸಿ ಮಂದಿರಲ್ಲಿ ತಾಲ್ಲೂಕ್ ರೈತ ಸಂಘ ಹಾಗೂ ಹಸಿರು ಸೇನೆ ಶನಿವಾರ ಕರೆಯಲಾಗಿದ್ದ ಸಭೆಯಲ್ಲಿ ಈ ನಿಧಾ೯ರ ಕೈಗೊಳ್ಳಲಾಯಿತು.ಹೋರಾಟದ ಮುಂದಿನ ರೂಪುರೇಷೆ ಕೈಗೊಳ್ಳುವ ನಿಟ್ಟಿನಲ್ಲಿ ಸುಧೀರ್ಘ ಚಚೆ೯ ನಡೆಸಿ ಅಂತಿಮವಾಗಿ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಾದ ಬಸವರಾಜ ಬೊಮ್ಮಯಿ ಅವರನ್ನು ಭೇಟಿಯಾಗಿ ಅವರ ನಿಲುವೇನೆಂದು ಖಚಿತಪಡಿಸಿಕೊಂಡ ನಂತರ ಮುಂದಿನ ಹಂತದ ಹೋರಾಟ ನಡೆಸಲು ತೀಮಾ೯ನಿಸಲಾಯಿತು.ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಸಂಸ್ಥೆಗಳ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಿಷ್ಟು.
ಏನಿದು ಸಮಸ್ಯೆ ?: ದಶಕಗಳಿಂದಲ್ಲೂ ಚಿಕ್ಕನಾಯಕನಹಳ್ಳಿ ತಾಲೂಕಿನಾದ್ಯಂತ ನೀರಿನ ಸಮಸ್ಯೆ ಬಿಗಡಾಯಿಸಿದ್ದು ಇತ್ತೀಚಿನ ದಿನಗಳಲ್ಲಿ ಸರಿಯಾದ ಮಳೆಯಿಲ್ಲದೆ ಅಂತರ್ಜಲ ಮಟ್ಟ ತೀರ್ವ ಕುಸಿತವಾಗಿ ಜನಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವರವಾಗಿದ್ದರೂ ಸಹ ಯಾವುದೇ ಸಕಾ೯ರವಾಗಲಿ, ಜನಪ್ರತಿನಿಧಿಗಳಾಗಲಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿಲ್ಲ. ಹಾಗಾಗಿ ಕಳೆದೆರೆಡೂ ವರ್ಷಗಳಿಂದಲೂ ಶಾಸ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ, ರಸ್ತೆ ತಡೆ ಹಾಗೂ ಪಟ್ಟಣ ಬಂದ್, ಅಹೋರಾತ್ರಿ ಧರಣಿ ಮುಂತಾದ ಹೋರಾಟ ಮಾಡಲಾಯಿತು.
ಹೋರಾಟ ತೀವ್ರ ಸ್ವರೂಪಕ್ಕೆ ತಿರುಗಿದಾಗ ಎಚ್ಚೆತ್ತ ಸಕಾ೯ರ ಹಾಗೂ ನೀರಾವರಿ ಸಚಿವ ಬಸವರಾಜ ಬೊಮ್ಮಯಿ, ತುಮಕೂರು ಜಿಲ್ಲಾಉಸ್ತುವಾರಿ ಸಚಿವ ಸುರೇಶ ಕುಮಾರ್ ಮಧ್ಯಸ್ಥಿಕೆಯಲ್ಲಿ ಹೋರಾಟಗಾರರನ್ನು ವಿಧಾನಸೌಧಕ್ಕೆ ಬರಮಾಡಿಕೊಂಡು ತಾಲೂಕಿಗೆ ಹೇಮೆ ಹರಿಸುವ ಸಂಬಂಧ ಸ್ಥಳದಲ್ಲಿಯೇ ಸವೇ೯ ಕಾರ್ಯಕ್ಕೆ ಆದೇಶ ನೀಡುವುದರ ಮೂಲಕ ಹೋರಾಟವನ್ನು ತಾತ್ಕಾಲಿಕವಾಗಿ ಶಮನ ಮಾಡಿದ್ದರು. .ಸಚಿವರ ಆದೇಶದ ಮೇರೆಗೆ ಈಗಾಗಲೇ ಸವೇ೯ ಕಾರ್ಯ ಮುಗಿದಿದ್ದು ಈ ಹಂತದಲ್ಲಿ ಶಿರಾ ಸೇರಿದಂತೆ ತಾಲ್ಲೂಕಿಗೆ ನೀರು ಹರಿಸುವ ಕುರಿತಂತೆ ಜಿಲ್ಲೆಯ ಕೆಲ ಬಿಜೆಪಿ ಶಾಸಕರು ಹೊಸದಾಗಿ ತಕರಾರು ತೆಗೆದ ಕಾರಣ ಬರದ ನಾಡಿಗೆ ನೀರು ಹರಿಸುವ ಯೋಜನೆ ನೆನಗುದ್ದಿಗೆ ಬಿದ್ದಿದೆ.
ಅಡ್ಡಿಪಡಿಸಿರುವ ಶಾಸಕರುಗಳನ್ನು ಏಕೆಂದು ಪ್ರಶ್ನಿಸುವುದಾಗಲಿ ಅಥವಾ ಮನವೊಲಿಸಲಾಗಲಿ ಮಾಡಲು ಶಾಸಕ ಸುರೇಶ್ ಬಾಬು ಅವರಾಗಲಿ, ಮುಖ್ಯಮಂತ್ರಿಗಳ ಆಪ್ತರೆಂದೇ ಗುರುತಿಸಿಕೊಂಡಿರುವ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಅವರಾಗಲೀ ಪ್ರಯತ್ನ ಮಾಡದೆ ಮೌನವಹಿಸಿದ್ದಾರೆ.ತಾಲೂಕಿಗೆ ನೀರಿನ ಅನಿವಾರ್ಯತೆ ಬಗ್ಗೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರುವಲ್ಲಿ ವಿಫಲವಾಗಿರುವ ಕಾರಣ ಅನಿವಾರ್ಯವಾಗಿ ಮಠಾಧೀಶರ ನೇತೃತ್ವದಲ್ಲಿ ನಿಯೋಗ ತೆರಳುವ ನಿಧಾ೯ರಕ್ಕೆ ಬರಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ರಾಜ್ಯ ಹಸಿರು ಸೇನೆ ಸಂಚಾಲಕ ಕೆಂಕೆರೆ ಸತಿಶ್, ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಪಿ.ಮಲ್ಲೇಶ್, ನೂತನ ಗ್ರಾಮ ಪಂಚಾಯ್ತಿ ಸದಸ್ಯರಾದ ಏಜೆಂಟ್ ಗಂಗಣ್ಣ, ಶ್ರೀನಿವಾಸ್, ಸೈಯದ್ ಜಲಾಲ್, ತಮ್ಮಡಿಹಳ್ಳಿ ಮಲ್ಲಿಕಣ್ಣ, ಕಾಗಿ೯ಲ್ ಸತೀಶ್, ಗಂಗಣ್ಣ, ಹೊಸಹಳ್ಳಿಚಂದ್ರಣ್ಣ, ಜಯಲಕ್ಷ್ಮಮ್ಮ, ಬೀರಣ್ಣ, ಪರಮೇಶ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ