ಹಂದನಕೆರೆ ಹೋಬಳಿ ಎಳ್ಳೇನಹಳ್ಳಿ ಗ್ರಾಮದ ಸಿದ್ದರಾಮಯ್ಯ ತಮ್ಮ ತೋಟದಲ್ಲಿ ಎತ್ತಿನಗಾಡಿಯಿಂದ ಬಿದ್ದು ತೆಂಗಿನಮರದ ಬುಡಕ್ಕೆ ಬಡಿದು ಸಾವನಪ್ಪಿದ್ದರು. ಸದರಿ ವ್ಯಕ್ತಿಯ ಕುಟುಂಬದವರು ಪರಿಹಾರಕ್ಕಾಗಿ ಈ ಹಿಂದೆ ಮನವಿ ಸಲ್ಲಿಸಿದ್ದರು. ಇವರಿಗೆ ರೈತ ಸಂಜೀವಿನ ಅಪಘಾತ ವಿಮಾ ಯೋಜನೆಯಲ್ಲಿ ಮಂಜೂರಾದ 50 ಸಾವಿರ ರು. ಪರಿಹಾರ ಚೆಕ್ಕನ್ನು ತಂದೆ ಜಯಣ್ಣ ಅವರಿಗೆ ಎಪಿಎಂಸಿ ಅಧ್ಯಕ್ಷ ಸಿ.ಬಸವರಾಜು ವಿತರಿಸಿದರು.
ಈ ಸಂದರ್ಭದಲ್ಲಿ ಕಾರ್ಯದಶಿ೯ ಎಂ.ಆರ್.ಜಯರಾಮ್, ಉಪಾಧ್ಯಕ್ಷ ಎಸ್.ಶಿವರಾಮಯ್ಯ, ಮಾಜಿ ಅಧ್ಯಕ್ಷ ಕೆ.ಎಸ್.ಶಿವರಾಮಯ್ಯ, ನಿದೇ೯ಶಕರುಗಳಾದ ಎಲ್.ಆರ್.ಬಾಲಾಜಿ, ಎಸ್.ಆರ್.ರಾಜ್ ಕುಮಾರ್, ರಾಮಾನಾಯ್ಕ, ಪ್ರಭುಸ್ವಾಮಿ ಇತರರು ಇದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ