(ಫೋಟೊ ವಿವರ:ಹುಳಿಯಾರು ಗ್ರಾ.ಪಂ.ಚುನಾವಣೆಯಲ್ಲಿ ರಕ್ತ ಸಂಬಂಧಿಕರ ಸ್ಫಧೆ೯ಯಲ್ಲಿ ಜಯಗಳಿಸಿರುವ ದ್ರಾಕ್ಷಾಯಿಣಮ್ಮ, ಸಿದ್ಧಗಂಗಮ್ಮ, ಪುಟ್ಟರಾಜು)
ಹುಳಿಯಾರು ಗ್ರಾ.ಪಂ.ಚುನಾವಣೆ:ಕಣದಲ್ಲಿದ್ದ ಸಂಬಂಧಿಗಳ ಪೈಕಿ ಮೂವರ ಗೆಲುವು
----------------------------------------------
ಈ ಬಾರಿಯ ಹುಳಿಯಾರು ಗ್ರಾಪಂ ಚುನಾವಣಾ ಫಲಿತಾಂಶದಲ್ಲಿ ಅನೇಕ ಸ್ವಾರಸ್ಯಗಳಿದ್ದು ಗ್ರಾ.ಪಂ.ಚುನಾವಣೆಯ ಕಣಕ್ಕೆ ಐದು ಕುಟುಂಬದಿಂದ ಇಬ್ಬಿಬ್ಬರು ರಕ್ತ ಸಂಬಂಧಿಗಳಂತೆ ಒಟ್ಟು 10ಮಂದಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಅವರಲ್ಲಿ ಮೂರು ಮಂದಿಗೆ ಮಾತ್ರ ಗ್ರಾ.ಪಂ.ಸದಸ್ಯರಾಗುವ ಅದೃಷ್ಟ ಒಲಿದಿರುವುದು ವಿಶೇಷವಾಗಿದೆ.
ಇದುವರೆಗೂ ಗ್ರಾ.ಪಂ.ಅಧ್ಯಕ್ಷರಾಗಿದ್ದ ಶ್ರೀಮತಿ ಮಂಜಮ್ಮ ಅವರು ಈ ಬಾರಿ 8 ನೇ ಬ್ಲಾಕ್ ನಿಂದ ಚುನಾವಣೆಗೆ ಸ್ಪಧಿ೯ಸಿದ್ದರಲ್ಲದೆ ತಮ್ಮ ಪತಿ ರಾಜಣ್ಣ ಅವರನ್ನು ಸಹ 7 ನೇ ಬ್ಲಾಕ್ ನಿಂದ ಚುನಾವಣೆಗೆ ನಿಲ್ಲಿಸಿ ಮತ್ತೊಂದು ಅವಧಿಗಾಗಿ ಅದೃಷ್ಠ ಪರಿಕ್ಷೆಗಿಳಿದಿದ್ದರು. ಮತದಾರರ ಅವಕೃಪೆಯಿಂದಾಗಿ ಠೇವಣಿ ಕಳೆದುಕೊಂಡಿದ್ದು ಮಾತ್ರ ವಿಪರ್ಯಾಸ.
ಕಳೆದ ಸಾಲಿನ ಸದಸ್ಯ ಮೀಸೆ ರಂಗಪ್ಪ ಅವರು ತಮ್ಮ ಹಳೆಯ ಕ್ಷೇತ್ರ 6 ಬ್ಲಾಕಿನಲ್ಲಿ ಸ್ಪಧಿ೯ಸುವ ಜೊತೆಗೆ ತಮ್ಮ ಪತ್ನಿ ಕಮಲಮ್ಮ ಅವರನ್ನು 9 ಬ್ಲಾಕಿನಿಂದ ಸ್ಪಧೆ೯ಗೆ ಇಳಿಸಿ ಗೆಲುವಿಗಾಗಿ ಸಾಕಷ್ಟು ಪರಿಶ್ರಮಪಟ್ಟರಾದರೂ ಮತದಾರ ಮಾತ್ರ ರಂಗಪ್ಪನಿಗೆ ಹೆಚ್ಚಿನ ಅಂತರ ಹಾಗೂ ಆತನ ಪತ್ನಿಗೆ ತೀರಾ ಕಡಿಮೆ ಅಂತರದಿಂದ ಸೋಲಿನ ಕಹಿ ಉಣ್ಣುವಂತೆ ಮಾಡಿದ್ದಾನೆ.
ಮತದಾರರಿಗೆ ತಮ್ಮ ಬಗ್ಗೆ ಒಲವಿದ್ದು ತಮ್ಮ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಭಾರಿ ಆತ್ಮವಿಶ್ವಾಸ ಹೊಂದಿದ್ದ ಕಳೆದ ಸಾಲಿನ ಸದಸ್ಯ ಬಡ್ಡಿಪುಟ್ಟರಾಜು ತಾವು ಹಿಂದೆ ಗೆದಿದ್ದ 1 ಬ್ಲಾಕಿನಿಂದ ತಮ್ಮ ಅತ್ತಿಗೆ ಡಿ.ಸಿದ್ದಗಂಗಮ್ಮ ಅವರನ್ನು ಚುನಾವಣಾ ಕಣಕ್ಕಿಳಿಸಿ ತಾವು ಕೂಡ 8 ನೇ ಬ್ಲಾಕಿನಿಂದ ಸ್ಫಧಿ೯ಸಿ ಭಾರಿ ಅಂತರದಿಂದ ಗೆದ್ದರಲ್ಲದೆ ಹಳೆಯ ಕ್ಷೇತ್ರದಲ್ಲಿ ಹಿಂದೆ ತಾವು ಮಾಡಿದ ಸೇವೆಯ ಶ್ರೀರಕ್ಷೆಯಿಂದಾಗಿ ಅತ್ತಿಗೆಯನ್ನೂ ಸಹ ಗೆಲ್ಲಿಸಿಕೊಂಡಿದ್ದು ನಿರೀಕ್ಷಿತವಾಗಿತ್ತು.
ಮಾಜಿ ಜಿ.ಪಂ.ಸದಸ್ಯ ಶಿವರಾಂ ಅವರು ತಮ್ಮಿಬ್ಬರು ಮಕ್ಕಳನ್ನು ಜನಸೇವೆಗಿಳಿಸುವ ನಿಟ್ಟಿನಲ್ಲಿ ನಿರಂಜನಮೂತಿ೯ಯನ್ನು 10 ನೇ ಬ್ಲಾಕಿನಿಂದಲೂ, ಪ್ರದೀಪ್ ಅವರನ್ನು 3 ನೇ ಬ್ಲಾಕಿನಿಂದಲೂ ಚುನಾವಣೆ ಕಣಕ್ಕಿಳಿಸಿದ್ದರು.ಅಲ್ಲದೆ ಇಬ್ಬರ ಪರವಾಗಿ ತಾವೇ ಪ್ರಚಾರದ ನೇತೃತ್ವ ವಹಿಸಿ ಚುನಾವಣೆ ಎದುರಿಸಿದರಾದರೂ ಸಹ ನಿರಂಜನ ಮೂತಿ೯ ಠೇವಣಿ ಕಳೆದುಕೊಂಡರೆ, ಮತ್ತೊಬ್ಬ ಮಗ ಪ್ರದೀಪ್ ಸಾಮಾನ್ಯ ಕ್ಷೇತ್ರದಲ್ಲಿ ಹೆಚ್ಚು ಮತ ಪಡೆದರಾದರೂ ಬಿಸಿಎಂನ 2 ನೇ ಅಭ್ಯಥಿ೯ ಇವರಿಗಿಂತ ಕೆಲವೇ ಕೆಲವು ಮತ ಹೆಚ್ಚಿಗೆ ಪಡೆದ ಪ್ರಯುಕ್ತ ಚುನಾವಣಾ ನಿಯಮಾನುಸಾರ ಇವರ ಕೊರಳಿಗೆ ಬೀಳಬೇಕಿದ್ದ ಜಯದಮಾಲೆ ಬಿಸಿಎಂ ಅಭ್ಯಥಿ೯ ಪಾಲಾಗಿ ಪರಾಭವಗೊಳ್ಳುವಂತಾಯಿತು.
ವೃತ್ತಿಸಂಬಂಧದಿಂದ ಅನೇಕ ಬಾರಿ ಗ್ರಾಪಂಗೆ ಎಡೆತಾಕಿದ್ದ ಸ್ಟುಡಿಯೋ ದುರ್ಗರಾಜು ಅಲ್ಲಿನ ವ್ಯವಸ್ಥೆಯಿಂದ ಆಕಷಿ೯ತರಾಗಿ ಒಂದು ಕೈ ನೋಡೇಬಿಡುವ ಎಂದು ಇದೇ ಪ್ರಥಮ ಬಾರಿಗೆ ತಾವು 10 ನೇ ಬ್ಲಾಕಿನಿಂದ ಕಣಕ್ಕಿಳಿದರೆ ಅವರ ಅತ್ತಿಗೆ ದ್ರಾಕ್ಷಾಯಿಣಮ್ಮ ಡಾ.ಭೈರೇಶ್ ಅವರು 1 ನೇ ಬ್ಲಾಕಿನಿಂದ ಕಣಕ್ಕಿಳಿದು ಚುನಾಔಣೆ ಎದುರಿಸಿದರು.ಆದರೆ ಮತದಾರರು ಅತ್ತಿಗೆ ದ್ರಾಕ್ಷಾಯಿಣಮ್ಮ ಅವರನ್ನು ಗೆಲ್ಲಿಸಿ ದುರ್ಗರಾಜು ಅವರನ್ನು ಸೋಲಿಸಿದ್ದಾರೆ.
ಹುಳಿಯಾರು ಗ್ರಾ.ಪಂ.ಚುನಾವಣೆ:ಕಣದಲ್ಲಿದ್ದ ಸಂಬಂಧಿಗಳ ಪೈಕಿ ಮೂವರ ಗೆಲುವು
----------------------------------------------
ಈ ಬಾರಿಯ ಹುಳಿಯಾರು ಗ್ರಾಪಂ ಚುನಾವಣಾ ಫಲಿತಾಂಶದಲ್ಲಿ ಅನೇಕ ಸ್ವಾರಸ್ಯಗಳಿದ್ದು ಗ್ರಾ.ಪಂ.ಚುನಾವಣೆಯ ಕಣಕ್ಕೆ ಐದು ಕುಟುಂಬದಿಂದ ಇಬ್ಬಿಬ್ಬರು ರಕ್ತ ಸಂಬಂಧಿಗಳಂತೆ ಒಟ್ಟು 10ಮಂದಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಅವರಲ್ಲಿ ಮೂರು ಮಂದಿಗೆ ಮಾತ್ರ ಗ್ರಾ.ಪಂ.ಸದಸ್ಯರಾಗುವ ಅದೃಷ್ಟ ಒಲಿದಿರುವುದು ವಿಶೇಷವಾಗಿದೆ.
ಇದುವರೆಗೂ ಗ್ರಾ.ಪಂ.ಅಧ್ಯಕ್ಷರಾಗಿದ್ದ ಶ್ರೀಮತಿ ಮಂಜಮ್ಮ ಅವರು ಈ ಬಾರಿ 8 ನೇ ಬ್ಲಾಕ್ ನಿಂದ ಚುನಾವಣೆಗೆ ಸ್ಪಧಿ೯ಸಿದ್ದರಲ್ಲದೆ ತಮ್ಮ ಪತಿ ರಾಜಣ್ಣ ಅವರನ್ನು ಸಹ 7 ನೇ ಬ್ಲಾಕ್ ನಿಂದ ಚುನಾವಣೆಗೆ ನಿಲ್ಲಿಸಿ ಮತ್ತೊಂದು ಅವಧಿಗಾಗಿ ಅದೃಷ್ಠ ಪರಿಕ್ಷೆಗಿಳಿದಿದ್ದರು. ಮತದಾರರ ಅವಕೃಪೆಯಿಂದಾಗಿ ಠೇವಣಿ ಕಳೆದುಕೊಂಡಿದ್ದು ಮಾತ್ರ ವಿಪರ್ಯಾಸ.
ಕಳೆದ ಸಾಲಿನ ಸದಸ್ಯ ಮೀಸೆ ರಂಗಪ್ಪ ಅವರು ತಮ್ಮ ಹಳೆಯ ಕ್ಷೇತ್ರ 6 ಬ್ಲಾಕಿನಲ್ಲಿ ಸ್ಪಧಿ೯ಸುವ ಜೊತೆಗೆ ತಮ್ಮ ಪತ್ನಿ ಕಮಲಮ್ಮ ಅವರನ್ನು 9 ಬ್ಲಾಕಿನಿಂದ ಸ್ಪಧೆ೯ಗೆ ಇಳಿಸಿ ಗೆಲುವಿಗಾಗಿ ಸಾಕಷ್ಟು ಪರಿಶ್ರಮಪಟ್ಟರಾದರೂ ಮತದಾರ ಮಾತ್ರ ರಂಗಪ್ಪನಿಗೆ ಹೆಚ್ಚಿನ ಅಂತರ ಹಾಗೂ ಆತನ ಪತ್ನಿಗೆ ತೀರಾ ಕಡಿಮೆ ಅಂತರದಿಂದ ಸೋಲಿನ ಕಹಿ ಉಣ್ಣುವಂತೆ ಮಾಡಿದ್ದಾನೆ.
ಮತದಾರರಿಗೆ ತಮ್ಮ ಬಗ್ಗೆ ಒಲವಿದ್ದು ತಮ್ಮ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಭಾರಿ ಆತ್ಮವಿಶ್ವಾಸ ಹೊಂದಿದ್ದ ಕಳೆದ ಸಾಲಿನ ಸದಸ್ಯ ಬಡ್ಡಿಪುಟ್ಟರಾಜು ತಾವು ಹಿಂದೆ ಗೆದಿದ್ದ 1 ಬ್ಲಾಕಿನಿಂದ ತಮ್ಮ ಅತ್ತಿಗೆ ಡಿ.ಸಿದ್ದಗಂಗಮ್ಮ ಅವರನ್ನು ಚುನಾವಣಾ ಕಣಕ್ಕಿಳಿಸಿ ತಾವು ಕೂಡ 8 ನೇ ಬ್ಲಾಕಿನಿಂದ ಸ್ಫಧಿ೯ಸಿ ಭಾರಿ ಅಂತರದಿಂದ ಗೆದ್ದರಲ್ಲದೆ ಹಳೆಯ ಕ್ಷೇತ್ರದಲ್ಲಿ ಹಿಂದೆ ತಾವು ಮಾಡಿದ ಸೇವೆಯ ಶ್ರೀರಕ್ಷೆಯಿಂದಾಗಿ ಅತ್ತಿಗೆಯನ್ನೂ ಸಹ ಗೆಲ್ಲಿಸಿಕೊಂಡಿದ್ದು ನಿರೀಕ್ಷಿತವಾಗಿತ್ತು.
ಮಾಜಿ ಜಿ.ಪಂ.ಸದಸ್ಯ ಶಿವರಾಂ ಅವರು ತಮ್ಮಿಬ್ಬರು ಮಕ್ಕಳನ್ನು ಜನಸೇವೆಗಿಳಿಸುವ ನಿಟ್ಟಿನಲ್ಲಿ ನಿರಂಜನಮೂತಿ೯ಯನ್ನು 10 ನೇ ಬ್ಲಾಕಿನಿಂದಲೂ, ಪ್ರದೀಪ್ ಅವರನ್ನು 3 ನೇ ಬ್ಲಾಕಿನಿಂದಲೂ ಚುನಾವಣೆ ಕಣಕ್ಕಿಳಿಸಿದ್ದರು.ಅಲ್ಲದೆ ಇಬ್ಬರ ಪರವಾಗಿ ತಾವೇ ಪ್ರಚಾರದ ನೇತೃತ್ವ ವಹಿಸಿ ಚುನಾವಣೆ ಎದುರಿಸಿದರಾದರೂ ಸಹ ನಿರಂಜನ ಮೂತಿ೯ ಠೇವಣಿ ಕಳೆದುಕೊಂಡರೆ, ಮತ್ತೊಬ್ಬ ಮಗ ಪ್ರದೀಪ್ ಸಾಮಾನ್ಯ ಕ್ಷೇತ್ರದಲ್ಲಿ ಹೆಚ್ಚು ಮತ ಪಡೆದರಾದರೂ ಬಿಸಿಎಂನ 2 ನೇ ಅಭ್ಯಥಿ೯ ಇವರಿಗಿಂತ ಕೆಲವೇ ಕೆಲವು ಮತ ಹೆಚ್ಚಿಗೆ ಪಡೆದ ಪ್ರಯುಕ್ತ ಚುನಾವಣಾ ನಿಯಮಾನುಸಾರ ಇವರ ಕೊರಳಿಗೆ ಬೀಳಬೇಕಿದ್ದ ಜಯದಮಾಲೆ ಬಿಸಿಎಂ ಅಭ್ಯಥಿ೯ ಪಾಲಾಗಿ ಪರಾಭವಗೊಳ್ಳುವಂತಾಯಿತು.
ವೃತ್ತಿಸಂಬಂಧದಿಂದ ಅನೇಕ ಬಾರಿ ಗ್ರಾಪಂಗೆ ಎಡೆತಾಕಿದ್ದ ಸ್ಟುಡಿಯೋ ದುರ್ಗರಾಜು ಅಲ್ಲಿನ ವ್ಯವಸ್ಥೆಯಿಂದ ಆಕಷಿ೯ತರಾಗಿ ಒಂದು ಕೈ ನೋಡೇಬಿಡುವ ಎಂದು ಇದೇ ಪ್ರಥಮ ಬಾರಿಗೆ ತಾವು 10 ನೇ ಬ್ಲಾಕಿನಿಂದ ಕಣಕ್ಕಿಳಿದರೆ ಅವರ ಅತ್ತಿಗೆ ದ್ರಾಕ್ಷಾಯಿಣಮ್ಮ ಡಾ.ಭೈರೇಶ್ ಅವರು 1 ನೇ ಬ್ಲಾಕಿನಿಂದ ಕಣಕ್ಕಿಳಿದು ಚುನಾಔಣೆ ಎದುರಿಸಿದರು.ಆದರೆ ಮತದಾರರು ಅತ್ತಿಗೆ ದ್ರಾಕ್ಷಾಯಿಣಮ್ಮ ಅವರನ್ನು ಗೆಲ್ಲಿಸಿ ದುರ್ಗರಾಜು ಅವರನ್ನು ಸೋಲಿಸಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ