ವಿಷಯಕ್ಕೆ ಹೋಗಿ

ಹುಳಿಯಾರು ಗ್ರಾ.ಪಂ.ಚುನಾವಣೆ:ಕಣದಲ್ಲಿದ್ದ ಸಂಬಂಧಿಗಳ ಪೈಕಿ ಮೂವರ ಗೆಲುವು

(ಫೋಟೊ ವಿವರ:ಹುಳಿಯಾರು ಗ್ರಾ.ಪಂ.ಚುನಾವಣೆಯಲ್ಲಿ ರಕ್ತ ಸಂಬಂಧಿಕರ ಸ್ಫಧೆ೯ಯಲ್ಲಿ ಜಯಗಳಿಸಿರುವ ದ್ರಾಕ್ಷಾಯಿಣಮ್ಮ, ಸಿದ್ಧಗಂಗಮ್ಮ, ಪುಟ್ಟರಾಜು)

ಹುಳಿಯಾರು ಗ್ರಾ.ಪಂ.ಚುನಾವಣೆ:ಕಣದಲ್ಲಿದ್ದ ಸಂಬಂಧಿಗಳ ಪೈಕಿ ಮೂವರ ಗೆಲುವು
----------------------------------------------

ಈ ಬಾರಿಯ ಹುಳಿಯಾರು ಗ್ರಾಪಂ ಚುನಾವಣಾ ಫಲಿತಾಂಶದಲ್ಲಿ ಅನೇಕ ಸ್ವಾರಸ್ಯಗಳಿದ್ದು ಗ್ರಾ.ಪಂ.ಚುನಾವಣೆಯ ಕಣಕ್ಕೆ ಐದು ಕುಟುಂಬದಿಂದ ಇಬ್ಬಿಬ್ಬರು ರಕ್ತ ಸಂಬಂಧಿಗಳಂತೆ ಒಟ್ಟು 10ಮಂದಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಅವರಲ್ಲಿ ಮೂರು ಮಂದಿಗೆ ಮಾತ್ರ ಗ್ರಾ.ಪಂ.ಸದಸ್ಯರಾಗುವ ಅದೃಷ್ಟ ಒಲಿದಿರುವುದು ವಿಶೇಷವಾಗಿದೆ.


ಇದುವರೆಗೂ ಗ್ರಾ.ಪಂ.ಅಧ್ಯಕ್ಷರಾಗಿದ್ದ ಶ್ರೀಮತಿ ಮಂಜಮ್ಮ ಅವರು ಈ ಬಾರಿ 8 ನೇ ಬ್ಲಾಕ್ ನಿಂದ ಚುನಾವಣೆಗೆ ಸ್ಪಧಿ೯ಸಿದ್ದರಲ್ಲದೆ ತಮ್ಮ ಪತಿ ರಾಜಣ್ಣ ಅವರನ್ನು ಸಹ 7 ನೇ ಬ್ಲಾಕ್ ನಿಂದ ಚುನಾವಣೆಗೆ ನಿಲ್ಲಿಸಿ ಮತ್ತೊಂದು ಅವಧಿಗಾಗಿ ಅದೃಷ್ಠ ಪರಿಕ್ಷೆಗಿಳಿದಿದ್ದರು. ಮತದಾರರ ಅವಕೃಪೆಯಿಂದಾಗಿ ಠೇವಣಿ ಕಳೆದುಕೊಂಡಿದ್ದು ಮಾತ್ರ ವಿಪರ್ಯಾಸ.

ಕಳೆದ ಸಾಲಿನ ಸದಸ್ಯ ಮೀಸೆ ರಂಗಪ್ಪ ಅವರು ತಮ್ಮ ಹಳೆಯ ಕ್ಷೇತ್ರ 6 ಬ್ಲಾಕಿನಲ್ಲಿ ಸ್ಪಧಿ೯ಸುವ ಜೊತೆಗೆ ತಮ್ಮ ಪತ್ನಿ ಕಮಲಮ್ಮ ಅವರನ್ನು 9 ಬ್ಲಾಕಿನಿಂದ ಸ್ಪಧೆ೯ಗೆ ಇಳಿಸಿ ಗೆಲುವಿಗಾಗಿ ಸಾಕಷ್ಟು ಪರಿಶ್ರಮಪಟ್ಟರಾದರೂ ಮತದಾರ ಮಾತ್ರ ರಂಗಪ್ಪನಿಗೆ ಹೆಚ್ಚಿನ ಅಂತರ ಹಾಗೂ ಆತನ ಪತ್ನಿಗೆ ತೀರಾ ಕಡಿಮೆ ಅಂತರದಿಂದ ಸೋಲಿನ ಕಹಿ ಉಣ್ಣುವಂತೆ ಮಾಡಿದ್ದಾನೆ.

ಮತದಾರರಿಗೆ ತಮ್ಮ ಬಗ್ಗೆ ಒಲವಿದ್ದು ತಮ್ಮ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಭಾರಿ ಆತ್ಮವಿಶ್ವಾಸ ಹೊಂದಿದ್ದ ಕಳೆದ ಸಾಲಿನ ಸದಸ್ಯ ಬಡ್ಡಿಪುಟ್ಟರಾಜು ತಾವು ಹಿಂದೆ ಗೆದಿದ್ದ 1 ಬ್ಲಾಕಿನಿಂದ ತಮ್ಮ ಅತ್ತಿಗೆ ಡಿ.ಸಿದ್ದಗಂಗಮ್ಮ ಅವರನ್ನು ಚುನಾವಣಾ ಕಣಕ್ಕಿಳಿಸಿ ತಾವು ಕೂಡ 8 ನೇ ಬ್ಲಾಕಿನಿಂದ ಸ್ಫಧಿ೯ಸಿ ಭಾರಿ ಅಂತರದಿಂದ ಗೆದ್ದರಲ್ಲದೆ ಹಳೆಯ ಕ್ಷೇತ್ರದಲ್ಲಿ ಹಿಂದೆ ತಾವು ಮಾಡಿದ ಸೇವೆಯ ಶ್ರೀರಕ್ಷೆಯಿಂದಾಗಿ ಅತ್ತಿಗೆಯನ್ನೂ ಸಹ ಗೆಲ್ಲಿಸಿಕೊಂಡಿದ್ದು ನಿರೀಕ್ಷಿತವಾಗಿತ್ತು.

ಮಾಜಿ ಜಿ.ಪಂ.ಸದಸ್ಯ ಶಿವರಾಂ ಅವರು ತಮ್ಮಿಬ್ಬರು ಮಕ್ಕಳನ್ನು ಜನಸೇವೆಗಿಳಿಸುವ ನಿಟ್ಟಿನಲ್ಲಿ ನಿರಂಜನಮೂತಿ೯ಯನ್ನು 10 ನೇ ಬ್ಲಾಕಿನಿಂದಲೂ, ಪ್ರದೀಪ್ ಅವರನ್ನು 3 ನೇ ಬ್ಲಾಕಿನಿಂದಲೂ ಚುನಾವಣೆ ಕಣಕ್ಕಿಳಿಸಿದ್ದರು.ಅಲ್ಲದೆ ಇಬ್ಬರ ಪರವಾಗಿ ತಾವೇ ಪ್ರಚಾರದ ನೇತೃತ್ವ ವಹಿಸಿ ಚುನಾವಣೆ ಎದುರಿಸಿದರಾದರೂ ಸಹ ನಿರಂಜನ ಮೂತಿ೯ ಠೇವಣಿ ಕಳೆದುಕೊಂಡರೆ, ಮತ್ತೊಬ್ಬ ಮಗ ಪ್ರದೀಪ್ ಸಾಮಾನ್ಯ ಕ್ಷೇತ್ರದಲ್ಲಿ ಹೆಚ್ಚು ಮತ ಪಡೆದರಾದರೂ ಬಿಸಿಎಂನ 2 ನೇ ಅಭ್ಯಥಿ೯ ಇವರಿಗಿಂತ ಕೆಲವೇ ಕೆಲವು ಮತ ಹೆಚ್ಚಿಗೆ ಪಡೆದ ಪ್ರಯುಕ್ತ ಚುನಾವಣಾ ನಿಯಮಾನುಸಾರ ಇವರ ಕೊರಳಿಗೆ ಬೀಳಬೇಕಿದ್ದ ಜಯದಮಾಲೆ ಬಿಸಿಎಂ ಅಭ್ಯಥಿ೯ ಪಾಲಾಗಿ ಪರಾಭವಗೊಳ್ಳುವಂತಾಯಿತು.

ವೃತ್ತಿಸಂಬಂಧದಿಂದ ಅನೇಕ ಬಾರಿ ಗ್ರಾಪಂಗೆ ಎಡೆತಾಕಿದ್ದ ಸ್ಟುಡಿಯೋ ದುರ್ಗರಾಜು ಅಲ್ಲಿನ ವ್ಯವಸ್ಥೆಯಿಂದ ಆಕಷಿ೯ತರಾಗಿ ಒಂದು ಕೈ ನೋಡೇಬಿಡುವ ಎಂದು ಇದೇ ಪ್ರಥಮ ಬಾರಿಗೆ ತಾವು 10 ನೇ ಬ್ಲಾಕಿನಿಂದ ಕಣಕ್ಕಿಳಿದರೆ ಅವರ ಅತ್ತಿಗೆ ದ್ರಾಕ್ಷಾಯಿಣಮ್ಮ ಡಾ.ಭೈರೇಶ್ ಅವರು 1 ನೇ ಬ್ಲಾಕಿನಿಂದ ಕಣಕ್ಕಿಳಿದು ಚುನಾಔಣೆ ಎದುರಿಸಿದರು.ಆದರೆ ಮತದಾರರು ಅತ್ತಿಗೆ ದ್ರಾಕ್ಷಾಯಿಣಮ್ಮ ಅವರನ್ನು ಗೆಲ್ಲಿಸಿ ದುರ್ಗರಾಜು ಅವರನ್ನು ಸೋಲಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.