ಹುಳಿಯಾರು ಹೋಬಳಿ ವ್ಯಾಪ್ತಿಯ ಹೊಯ್ಸಳಕಟ್ಟೆ,ದಸೂಡಿ,ಗಾಣದಾಳು,ದೊಡ್ಡಬಿದರೆ ಗ್ರಾಪಂ ವ್ಯಾಪ್ತಿಯಲ್ಲಿ ದೇವಸ್ಥಾನಗಳ ಅಭಿವೃದ್ದಿಗೆ ಒಂದು ಲಕ್ಷದ ಇಪ್ಪತೈದು ಸಾವಿರ ಧನ ಸಹಾಯ ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಸಂಸ್ಥೆಯಿಂದ ನೀಡಲಾಗಿದೆ ಎಂದು ಗಾಣದಾಳು ವಿಭಾಗದ ಮೆಲ್ವಿಚಾರಕ ಸುರೇಶ್ ತಿಳಿಸಿದರು ಅವರು ಹೊಯ್ಸಳಕಟ್ಟೆಯಲ್ಲಿ ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಸಂಸ್ಥೆ ವತಿಯಿಂದ ಹಾಲಿನ ಡೇರಿ ಕಟ್ಟಡ ನಿರ್ಮಾಣಕ್ಕೆ ಸಹಾಯಾರ್ಥವಾಗಿ ಎರಡನೆ ಕಂತಿನಲ್ಲಿ ೨೪೦೦೦ ಹಣದ ಚೆಕ್ ನೀಡಿ ಮಾತನಾಡಿದರು. ಹುಳಿಯಾರು ಸಮೀಪದ ಹೊಯ್ಸಳಕಟ್ಟೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಸಂಸ್ಥೆ ವತಿಯಿಂದ ಹಾಲಿನ ಡೇರಿ ಕಟ್ಟಡ ನಿರ್ಮಾಣಕ್ಕೆ ಸಹಾಯಾರ್ಥವಾಗಿ ಎರಡನೆ ಕಂತಿನಲ್ಲಿ ೨೪೦೦೦ ಹಣದ ಚೆಕ್ ಗಾಣದಾಳು ವಿಭಾಗದ ಮೆಲ್ವಿಚಾರಕ ಸುರೇಶ್ ನೀಡಿದರು. ಸಂಸ್ಥೆಯು ಗ್ರಾಮೀಣ ಭಾಗದ ಬಡ ಜನರ ಆರ್ಥಿಕ ಸಬಲತೆಗೆ ಹೆಚ್ಚು ಶ್ರಮಿಸುತ್ತಿದ್ದು,ಗ್ರಾಮದಲ್ಲಿ ಹತ್ತು ಜನರ ಗುಂಪು ರಚಿಸಿಕೊಂಡು ಸಂಸ್ಥೆಯಿಂದ ಸಾಲ ಸೌಲಭ್ಯ ಪಡೆಯಬಹುದು ಎಂದು ಸಲಹೆ ನೀಡಿದರು.ಹೊಯ್ಸಳಕಟ್ಟೆಯಲ್ಲಿ ಇನ್ನೊಂದು ವಾರದಲ್ಲಿ ಶುದ್ದ ಕುಡಿಯುವ ನೀರಿನ ಘಟಕವನ್ನು ಸಂಸ್ಥೆಯ ಸಹಭಾಗಿತ್ವದಲ್ಲಿ ಉದ್ಘಾಟಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ದಾನಿ ರಾಮದಾಸಪ್ಪ, ಹಾ.ಉ.ಸ.ಸ.ಅಧ್ಯಕ್ಷ ಜಯಲಿಂಗರಾಜು,ಕಾರ್ಯದರ್ಶಿ ಚಿದಾನಂದ್ , ಪಿಡಿಒ ರಮೇಶ್ ,ಶಿಕ್ಷಕ ವದ್ದಿಗಯ್ಯ, ಪ್ರಗತಿ ಬಂಧು ಒಕ್ಕೂಟ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070