ಬಾಡಿಗೆಯು ಎಷ್ಟೆಂದು ನಿಗದಿಯೂ ಮಾಡಿಲ್ಲ
----------------------
ವರದಿ : ಡಿ.ಆರ್.ನರೇಂದ್ರ ಬಾಬು
ಹುಳಿಯಾರು ಪಂಚಾಯ್ತಿ ಹಣ ಬಳಸಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾಗಿದ್ದ ಮಳಿಗೆಯ ಬಾಡಿಗೆ ವಸೂಲಿ ಮಾಡಲು ಪಂಚಾಯ್ತಿ ಅಧಿಕಾರಿಗಳು ಅಸಡ್ಡೆ ಮಾಡಿದ ಪರಿಣಾಮ ಒಂದಲ್ಲ ಎರಡಲ್ಲ ಬರೋಬ್ಬರಿ ಹದಿನೆಂಟು ವರ್ಷಗಳಿಂದ ಗ್ರಾಪಂ ಮಳಿಗೆಗಳ ಬಾಡಿಗೆ ವಸೂಲಿಯಾಗದೆ ಲಕ್ಷಾಂತರ ರೂಪಾಯಿ ಬಾಕಿ ಬೆಳದಿದೆ.ಆ ಬಾಕಿಯನ್ನಾದರೂ ವಸೂಲಿ ಮಾಡೋಣವೆಂದರೆ ಯಾವ ಸಾಲಿನಿಂದ ಬಾಕಿ ನಿಂತಿದೆ,ಇವರುಗಳು ಇಟ್ಟಿರುವ ಠೇವಣಿಯಾದರೂ ಎಷ್ಟು ಎಂಬುದರ ಬಗ್ಗೆ ಸರಿಯಾದ ದಾಖಲೆಗಳೆ ಇಲ್ಲದಾಗಿದೆ.
ಹುಳಿಯಾರು ಬಸ್ ನಿಲ್ದಾಣದಲ್ಲಿನ ೬ ಮಳಿಗೆಗಳ ಲಕ್ಷಾಂತರ ರೂಪಾಯಿ ಬಾಕಿ ವಸೂಲಾತಿಗಾಗಿ ಮಳಿಗೆಗೆ ಬೀಗ ಜಡಿದರು.
|
ಲಭ್ಯವಿಲ್ಲ:ಇದಕ್ಕೆ ನಿಗದಿಪಡಿಸಲಾದ ಬಾಡಿಗೆ ಎಷ್ಟು,ಇದರ ಹಾಲಿ ಮಾಲೀಕರ್ಯಾರು,ಈ ಸಾಲಿನವರೆಗೂ ಇದರ ಬಾಡಿಗೆ ಬಾಕಿಯಿರುವುದೆಷ್ಟು ...ಉಹೂ..ಇದ್ಯಾವುದೆ ವಿವರ ಈ ಪಂಚಾಯ್ತಿಯಲ್ಲಿ ಸಿಗುವುದಿಲ್ಲ.ಹತ್ತಾರು ವರ್ಷದ ಹಿಂದಿನ ಪುಸ್ತಕವೊಂದರಲ್ಲಿ ಅರ್ಧಪುಟದಲ್ಲಿ ಹಿಂದಿನ ಕಾರ್ಯದರ್ಶಿ ಬರೆದಿರುವ ಮಳಿಗೆ ಲೆಕ್ಕದಲ್ಲಿ ಮಾತ್ರ ಬಾಡಿಗೆದಾರರ ಹೆಸರು ದಾಖಲಾಗಿರುವುದು ಬಿಟ್ಟರೆ ಇದುವರೆಗೂ ಅದರ ಪೋಸ್ಟಿಂಗ್ ಕೂಡ ಮುಂದಿನ ಪುಸ್ತಕಕ್ಕೆ ಆಗಿಲ್ಲ.ಸದ್ಯ ಲಭ್ಯವಿರುವ ಅರ್ಧಪುಟದ ಮಾಹಿತಿ ಪ್ರಕಾರ ಈ ಮಳಿಗೆಗಳ ಹದಿನೆಂಟು ವರ್ಷದಿಂದ ಬಾಕಿನಿಂತಿದೆ ಎಂದು ತಿಳಿದಬರುತ್ತದೆ
ಆ ಪ್ರಕಾರವೇ ಲೆಖ್ಕ ಹಾಕಿದರೆ ಪಂಚಾಯ್ತಿಗೆ ಇದರ ಬಾಬತ್ತಿನಿಂದ ಬರಬೇಕಿರುವ ಬಾಕಿಯೇ ಸುಮಾರು ಹತ್ತು ಲಕ್ಷವನ್ನು ಮೀರುತ್ತೆ.ಹಾಗಂತ ಇದರ ಮಾಲೀಕರುಗಳು ತೀರಾ ಬಡವರು ಅಲ್ಲ,ಕಟ್ಟಲಾರದ ಸ್ಥಿತಿಯಲ್ಲಿರುವವರು ಅಲ್ಲ.ಪಂಚಾಯ್ತಿಯಿಂದ ಮಳಿಗೆಗೆಳ ನಿರ್ಮಾಣ ಮಾಡಿದಾಗ ಸರಿಯಾಶ್ದ ಮೆಟ್ಟಿಲು ವ್ಯವಸ್ಥೆ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸದಿದ್ದೆ ಸಮಸ್ಯೆಗೆ ಕಾರಣವಾಗಿದೆ. ನೀವು ವಿದ್ಯುತ್ ಸಂಪರ್ಕ ಕೊಡಿ,ಅಲ್ಲಿಯವರೆಗೂ ನಾವು ಬಾಡಿಗೆ ಪಾವತಿ ಮಾಡುವುದಿಲ್ಲ ಎಂದಿದ್ದೆ ಕಾರಣವಾಗಿ ಪಂಚಾಯ್ತಿಯವರು ಅಗತ್ಯ ಸೌಕರ್ಯ ಕಲ್ಪಿಸಲು ವಿಫಲವಾಗಿ ಇತ್ತ ತಿರುಗಿ ನೋಡದಂತಾದರು. ಕಡೇ ಪಕ್ಷ ಬಾಡೀಗೆಯನ್ನು ನಿಗದಿ ಮಾಡಲಾಗದ ಪರಿಣಾಮ ಬೆಟ್ಟದಷ್ಟು ಬಾಕಿ ಬೆಳೆದು ನಿಂತಿದೆ.
ಅವ್ಯವಸ್ಥೆ:ಮೇಲ್ಭಾಗದಲ್ಲಿರುವ ಈ ಮಳಿಗೆ ಹತ್ತಲು ನಿರ್ಮಿಸಿರುವ ಮೆಟ್ಟಿಲುಗಳು ತೀರಾ ಕಿರಿದಾಗಿದ್ದು ಇದನ್ನು ಹತ್ತುವುದೆ ತ್ರಾಸದಾಯಕ.ಅಂಗಡಿಗಳ ಮರೆಯಲ್ಲಿ ಮೆಟ್ಟಿಲಿರುವುದರಿಂದ ಎಷ್ಟೋ ಜನಕ್ಕಿದು ತುರ್ತು ಶೌಚಾಲಯದ ಸ್ಥಳವಾಗಿದೆ.ಹಾಗಂತ ಅಂಗಡಿದಾರರು ಸುಮ್ಮನಿಲ್ಲ.ಗೌಡನ್ ಗಾಗಿ ಈ ಸ್ಥಳ ಬಳಸಿಕೊಂಡಿದ್ದಲ್ಲದೆ ಇದರಲ್ಲಿ ಒಬ್ಬಿಬ್ಬರನ್ನು ಬಿಟ್ಟರೆ ಇನ್ನುಳಿದವರು ಅದೇ ಜಾಗವನ್ನು ತಾವೇ ಬೇರೊಬ್ಬರಿಗೆ ಬಾಡಿಗೆ ನೀಡಿ ಸಾವಿರಾರು ರೂಪಾಯಿ ವಸೂಲಿ ಮಾಡುತಿದ್ದಾರೆ.
ಈ ಬಗ್ಗೆ ಮೊನ್ನೆ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿ ಬಾಡಿಗೆ ಕಟ್ಟದಿದ್ದ ಮೇಲೆ ಬೀಗ ಹಾಕಿ ಠೇವಣಿ ಮುಟ್ಟುಗೋಲು ಹಾಕಲು ತೀರ್ಮಾನಿಸಿದ ಸದಸ್ಯರುಗಳು ತಾವೇ ಖುದ್ದಾಗಿ ನಿಂತು ಬೀಗ ಜಡಿದಿದ್ದಾರೆ.ಇವರುಗಳಿಗೆ ಪುನರ್ ನವೀಕರಣ ಮಾಡುವುದೆ ಬೇಡ ಎಂದು ವಸೂಲಾತಿಗಾಗಿ ಬಿಗಿ ನಿಲುವು ತೆಗೆದುಕೊಂಡಿದ್ದಾರೆ,
ಅಲ್ಪಸ್ವಲ್ಪ ಕಂದಾಯ ಬಾಕಿಉಳಿಸಿಕೊಂಡ ಬಡವರನ್ನು ಬಿಪಿಎಲ್ ಪಡಿತರ ಚೀಟಿ ನವೀಕರಣದಂತಹ ಅತ್ಯವಶ್ಯಕ ಸಮಯದಲ್ಲಿ ಸತಾಯಿಸುತ್ತಿದ್ದ ಹುಳಿಯಾರು ಪಂಚಾಯ್ತಿ ಕೊನೆಗೂ ಬಾಡಿಗೆ ವಸೂಲಾತಿಗಾಗಿ ಬೀಗ ಹಾಕಿದ ನಿರ್ಧಾರವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.
---------------------------------------------------------
ಕೆರೆಅಂಗಳದಲ್ಲಿದ ಅಂಗಡಿಗಳನ್ನು ತೆರವುಗಿಒಳಿಸಿರುವುದರಿಂದ ವ್ಯಾಪಾರಕ್ಕೆ ಸೂಕ್ತ ಸ್ಥಳವಿಲ್ಲದೆ ಪರದಾಡುತ್ತಿರುವ ವ್ಯಾಪಾರಸ್ಥರು ಸಾಕಷ್ಟಿದ್ದಾರೆ.ಮಳಿಗೆ ಮರುಹಾರಾಜಿನ ನಿರ್ಧಾರವನ್ನು ತೆಗೆದುಕೊಂಡು ಪಂಚಾಯ್ತಿಗೆ ಆದಾಯಮೂಲ ಮಾಡಿಕೊಳ್ಳಬೇಕು:ವೆಂಕಟೇಶ್,ಗ್ರಾಪಂ ಸದಸ್ಯ
----------------------------
ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಾಲಾಗುವುದು.ಅಂಗಡಿದಾರರಿಗೆ ನೋಟೀಸ್ ನೀಡಿ ಮಳಿಗೆ ಬಾಡಿಗೆ ನೀಡದವರ ಠೇವಣಿ ಮುಟ್ಟುಗೋಲು ಹಾಕಿಕೊಂಡು ಮರು ಟೆಂಡರ್ ಕರೆದು ಮಳಿಗೆ ಹಂಚಿಕೆ ಮಾಡಲು ಕ್ರಮತೆಗೆದುಕೊಳ್ಳಲಾಗುವುದು : ಪಿಡಿಓ ಅಡವೀಶ್ ಕುಮಾರ್
------------------------------------------------------
ಈ ಹಿಂದೆ ಮೆಟ್ಟಿಲು ನಿರ್ಮಾಣಕ್ಕೆ ಹತ್ತು ಸಾವಿರ ರೂಪಾಯಿ ಹಾಗೂ ಅಭಿವೃದ್ಧಿ ಶುಲ್ಕವಾಗಿ ಎರಡು ಸಾವಿರ ರೂಪಾಯಿಗಳನ್ನು ಕೊಟ್ಟಾಗ್ಯೂ ಯಾವುದೇ ಸೌಕರ್ಯ ಕಲ್ಪಿಸಿಲ್ಲ..ಒಂದೆರಡು ಬಾರಿ ಈ ಬಗ್ಗೆ ಕೇಳಿದಾಗಲೂ ನಿಮ್ಮ ಮಳಿಗೆ ಬಾಡಿಗೆ ಎಷ್ಟೆಂದೆ ನಿಗದಿಯಾಗಿಲ್ಲ ಎಂದು ತಿಳಿಸಿದ್ದರಿಂದ ಬಾಡಿಗೆ ಬಾಕಿಯಿದೆ.ಬಾಕಿ ತಿಳಿಸಿದಲ್ಲಿ ಈ ಕ್ಷಣವೆ ಕಟ್ಟಲು ಸಿದ್ದ : ಮಳಿಗೆದಾರರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ