ಹುಳಿಯಾರು ಸಮೀಪದ ಕೋಡಿಪಾಳ್ಯದ ಮೈಲಾರಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಕೆಂಕೆರೆ ಕಾಳಮ್ಮ ದೇವಿಯ ಸಮ್ಮುಖದಲ್ಲಿ ಏಳುಕೋಟಿ ಮೈಲಾರಲಿಂಗೇಶ್ವರನ ದೋಣಿಸೇವೆ ಹಾಗೂ ಎಡೆಸೇವೆ ಶ್ರದ್ಧಾಭಕ್ತಿಯಿಂದ ನಡೆಯಿತು.
ಹುಳಿಯಾರು ಸಮೀಪದ ಕೋಡಿಪಾಳ್ಯದ ಮೈಲಾರಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಏಳುಕೋಟಿ ಮೈಲಾರಲಿಂಗೇಶ್ವರನ ದೋಣಿಸೇವೆ ಹಾಗೂ ಎಡೆಸೇವೆ ಶ್ರದ್ಧಾಭಕ್ತಿಯಿಂದ ನಡೆಯಿತು. |
ನಿಂಗರಾಜು ಮತ್ತು ಮೈಲಾರಪ್ಪನವರ ಸೇವಾರ್ಥದಲ್ಲಿ ನಡೆದ ದೋಣಿ ಸೇವೆಯ ಅಂಗವಾಗಿ ಕಾಳಮ್ಮ ದೇವಿಯನ್ನು ಕರೆದುಕೊಂಡು ಬಂದು ಊರಿನ ಗೌಡರ ಮನೆಯಲ್ಲಿ ನಂದಾದೀಪ ಹಚ್ಚಿ ಪೂಜಿಸಿದ್ದಲ್ಲದೆ, ದೇವಾಲಯದಲ್ಲಿ ಕಥೆ ಓದಿಸುವ ಕಾರ್ಯ ನಡೆಯಿತು.
ಮುಂಜಾನೆ ದೇವರುಗಳ ಜೊತೆ ಡಮರುಗ, ಕಂಬಳಿ ಹೊದ್ದ ಗೊರವಯ್ಯಗಳನ್ನು ಸಕಲವಾದ್ಯಗಳೊಂದಿಗೆ ದೇವಾಲಯದಲ್ಲಿಗೆ ಕರೆದೊಯ್ಯಲಾಯಿತು. ಗೊರವಯ್ಯಗಳನ್ನು ಸಾಕ್ಷಾತ್ ಮೈಲಾರಲಿಂಗೇಶ್ವರನ ಪ್ರತಿರೂಪವೆಂದೆ ನಂಬಿರುವ ಭಕ್ತ ಸಮೂಹ ಗೊರಪ್ಪಗಳ ದೋಣಿಗೆ ಬಾಳೆಹಣ್ಣಿನ ರಸಾಯನ ತುಂಬಿಸುವ ಸೇವೆ ಜರುಗಿಸಿದರು.
ಪೂಜೆ ಮುಗಿದ ನಂತರ ಬಾಳೆಹಣ್ಣಿನ ಪ್ರಸಾದವನ್ನು ಆಗಮಿಸಿದ್ದ ಭಕ್ತರಿಗೆ ವಿತರಿಸಲಾಯಿತು. ದೇವಾಲಯ ಸಮಿತಿಯವರು,ಗ್ರಾಮದ ಮುಖಂಡರು ಹಾಗೂ ಸುತ್ತೇಳು ಹಳ್ಳಿಗಳ ಭಕ್ತರು ಆಗಮಿಸಿ ದೋಣಿ ಸೇವೆಯಲ್ಲಿ ಪಾಲ್ಗೊಂಡು ಸ್ವಾಮಿಯ ಅಶೀರ್ವಾದಕ್ಕೆ ಭಾಜನರಾದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ