ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರಾಜ್ಯದ ಬಗ್ಗೆ ಕಾಂಗ್ರೆಸ್ ನವರಿಗೆ ಮಾತನಾಡುವ ನೈತಿಕ ಹಕ್ಕಿಲ್ಲ: ಸಿಎಂ ಜಗದೀಶ್ ಶೆಟ್ಟರ್

ಪ್ರಸ್ತುತದಲ್ಲಿ ಕೇಂದ್ರ ಸರ್ಕಾರ 2ಜಿ,ಕಲ್ಲಿದ್ದಲು,ಹೆಲಿಕ್ಯಾಪ್ಟರ್ ಹೀಗೆ ಹಗರಣಗಳ ಸುಳಿಯಲ್ಲಿ ಮುಳುಗಿದ್ದು ಕಾಂಗ್ರೆಸ್ ನಾಯಕರುಗಳು ಸಹ ಹಲವು ಹಗರಣಗಳಲ್ಲಿ ಸಿಲುಕಿ ರಾಷ್ಟ್ರದ ಮರ್ಯಾದೆಯನ್ನು ಹರಾಜು ಹಾಕಿದ್ದಾರೆ .ರಾಹುಲ್ ಗಾಧಿ,ಸೋನಿಯಗಾಂಧಿ ಸೇರಿದಂತೆ ಯಾವುದೇ ಕಾಂಗ್ರೆಸ್ ನಾಯಕರುಗಳು ಉತ್ತಮ ಆಡಳಿತ ನೀಡಿರುವ ಕರ್ನಾಟಕದ ಬಿಜೆಪಿ ಸರ್ಕಾರದ ಬಗ್ಗೆ , ರಾಜ್ಯದ ಬಗ್ಗೆ ಹಾಗೂ ಬಿಜೆಪಿ ಪಕ್ಷದ ಬಗ್ಗೆ ಯಾವುದೇ ರೀತಿಯ ಮಾತನಾಡುವ,ಟೀಕಿಸುವ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗುಡುಗಿದರು. ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್.ಕಿರಣ್ ಕುಮಾರ್ ಪರ ಚುನಾವಣಾ ಪ್ರಚಾರಕ್ಕಾಗಿ ಹುಳಿಯಾರಿಗೆ ಆಗಮಿಸಿದ್ದ ಅವರು ಕಾರ್ಯಕರ್ತರ ಬೃಹತ್ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ತನ್ನ ಐದು ವರ್ಷದ ಅವಧಿಯಲ್ಲಿ ಸಂಪೂರ್ಣ ಬದಲಾವಣೆ ತಂದಿದ್ದು,ರಾಜ್ಯಾಂದ್ಯತ ಕೃಷಿ ಬಜೆಟ್‌, ಸುವರ್ಣ ಗ್ರಾಮ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ,ಭೂ ಚೇತನ ಯೋಜನೆ ಸೇರಿದಂತೆ ನಮ್ಮ ಗ್ರಾಮ-ನಮ್ಮ ರಸ್ತೆಯಂತಹ ಮಹತ್ವಾಕಾಂಕ್ಷಿ ಯೋಜನೆಗಳನ್ನು ರೂಪಿಸಿ,ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಿಕೊಂಡು ಬಂದಿದ್ದು, ಕೃಷಿ,ಕೈಗಾರಿಕೆ ಸೇರಿದಂತೆ  ಇನ್ನಿತರ ಕ್ಷೇತ್ರಗಳ ಅಭಿವೃದ್ದಿಗಾಗ ಮುಂದಾಗಿ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿರುವುದು ಬಿಜೆಪಿಯ ಸಾಧನೆಯಾಗಿದೆ.ಅಲ್ಲದೆ ನಾನು ಮುಖ್ಯಮಂತ್ರಿಯಾಗಿ ಅ

ಹುಳಿಯಾರಿನಲ್ಲಿ ಗರಿಗೆದರಿದ ಕೆಜೆಪಿ ಪಕ್ಷದ ಪ್ರಚಾರ

ವಿಧಾನಸಭಾ ಚುನಾವಣಾ ದಿನ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಕ್ಷೇತ್ರದ ಎಲ್ಲಾ ಪಕ್ಷಗಳ ನಾಯಕರುಗಳು ಪೈಪೂಟಿಯುತ ಚುನಾವಣಾ ಪ್ರಚಾರ ನಡೆಸುತ್ತಿದ್ದು,ಚಿಕ್ಕನಾಯಕನಹಳ್ಳಿ ಕ್ಷೇತ್ರದ ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿ ತಮ್ಮ ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ಪ್ರಚಾರದಲ್ಲಿ ಧುಮುಕಿದ್ದು,ಸೋಮವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಕೆಜೆಪಿ ಪ್ರಚಾರ ಗರಿಗೆದರಿತ್ತು.                    ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿಯವರು ಬಸ್ ನಿಲ್ದಾಣದ ಪ್ರತಿ ಅಂಗಡಿಗಳಿಗೆ ತೆರಳಿ ತಮ್ಮ ಪಕ್ಷದ ಗುರುತಾದ ತೆಂಗಿನಕಾಯಿ ಗುರುತಿಗೆ ಓಟು ಕೊಡಿ ಎಂದು ಮತಯಾಚಿಸಿದರೆ, ಕೆಜೆಪಿ ಕಾರ್ಯಕರ್ತರು ತಮ್ಮ ನಾಯಕ ಮಾಧುಸ್ವಾಮಿ ಅವರಿಗೆ ತಮ್ಮ ಮತ ನೀಡಿ ಅವರನ್ನು ಗೆಲ್ಲಿಸುವ ಮೂಲಕ ಚಿ.ನಾ.ಹಳ್ಳಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಕಾರ್ಯಕ್ಕೆ ಮುಂದಾಗಿ ಎಂದು ಮತಯಾಚಿಸುತ್ತಿದ್ದರು.ಚುನಾವಣಾ ಪ್ರಚಾರದಲ್ಲಿ ಗ್ರಾ.ಪಂ.ಸದಸ್ಯರಾದ ಅಶೋಕ್ ಬಾಬು,ಜಹೀರ್ ಸಾಬ್,ಗೀತಾ,ಗ್ರಾ.ಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ,ಕೆಂಕೆರೆ ಶಿವಕುಮಾರ್,ಎಟಿಎನ್ ಮಂಜು, ಸ್ಟುಡಿಯೋ ದುರ್ಗರಾಜು, ಬಡ್ಡಿಪುಟ್ಟಣ್ಣ,ಕಾರ್ಗಿಲ್ ಸತೀಶ್,ಮುರುಳಿ,ವಕೀಲರಾದ ಗುರುರಾಜ್, ರಾಜಶೇಖರ್ ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರು ನೆರೆದಿದ್ದರು.

ಕೆಜೆಪಿಗೆ ಸೇರ್ಪಡೆ

ಹುಳಿಯಾರಿನ ಟಿಪ್ಪು ಸುಲ್ತಾನ್ ಯುವಕ ಸಂಘದ ಪದಾಧಿಕಾರಿಗಳು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರ ಸಮ್ಮುಖದಲ್ಲಿ ಕೆಜೆಪಿ ಪಕ್ಷ ಸೇರಿದರು. ಹುಳಿಯಾರು ಗ್ರಾಮ ಪಂಚಾಯ್ತಿ ಸದಸ್ಯ ಅಶೋಕ್ ಬಾಬು, ಏಜಾಸ್, ಕೆಂಕೆರೆ ಕೆ.ಎಂ.ಸತೀಶ್,ಎಟಿಎನ್ ಮಂಜುನಾಥ್ ಅವರು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರ ಸಮ್ಮುಖದಲ್ಲಿ ಕೆಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಜಹೀರ್ ಸಾಬ್,ಬಡ್ಡಿಪುಟ್ಟಣ್ಣ,ವಕೀಲ ಚನ್ನಬಸವಯ್ಯ ಇದ್ದಾರೆ.

ಬಿಜೆಪಿ ಪಕ್ಷ ಮುಳುಗುವ ಹಡಗು, ಈ ಚುನಾವಣೆಯಲ್ಲಿ ಮುಳುಗುವುದು ಶತಸಿದ್ದ : ಬಿಎಸ್ ವೈ

            ರಾಜ್ಯದಲ್ಲಿ ತಮ್ಮದು ಬಲಿಷ್ಠ ಪಕ್ಷ ಎಂದು ಬೀಗುತ್ತಿರುವ ಬಿಜೆಪಿ ಪಕ್ಷದ ನಾಯಕರು ರಾಜ್ಯದ ಅಭಿವೃದ್ದಿಗಾಗಿ ತಾನು ಕೈಗೊಂಡ ಕಾರ್ಯಗಳನ್ನು ಸಹಿಸದೆ ಹಲವರು ಸಂಚು ಮಾಡಿ ತಮ್ಮ ಅಭಿವೃದ್ದಿ ಕಾರ್ಯಗಳಿಗೆ ತಡೆಯೊಡ್ಡುವ ಕೃತ್ಯ ಮಾಡಿದರು. ಇದಕ್ಕೆಲ್ಲಾ ಪ್ರತ್ಯುತ್ತರವಾಗಿ ಈ ಬಾರಿಯ ಚುನಾವಣೆ ತಕ್ಕ ಪಾಠ ಕಲಿಸಲಿದೆ.ಪ್ರಸ್ತುತ ರಾಜಕೀಯ ಎಂಬ ಸಮುದ್ರದಲ್ಲಿ ಬಿಜೆಪಿ ಎಂಬ ಹಡಗು,ಪ್ರಾದೇಶಿಕ ಪಕ್ಷಗಳ ಎದುರು ಮುಳುಗುವುದು ಶತಸಿದ್ದ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಚಿಕ್ಕನಾಯಕನಹಳ್ಳಿ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿ ಪರ ಪ್ರಚಾರಕ್ಕಾಗಿ ಹುಳಿಯಾರಿಗೆ ಆಗಮಿಸಿದ್ದ ಅವರು ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಈ ಭಾಗಕ್ಕೆ ನೀರು ತರಲು ಭಗೀರಥ ಪ್ರಯತ್ನ ಮಾಡಿದ್ದು ತಾವೆಂದು ಹೇಳುತ್ತಿರುವ ಕೆ.ಎಸ್.ಕಿರಣ್ ಕುಮಾರ್, ಈ ಭಾಗಕ್ಕೆ ಹೇವಾವತಿ ನೀರು ಹರಿಸುವ ಬೃಹತ್ ಯೋಜನೆಯನ್ನು ಮಂಜೂರು ಮಾಡಿದವರು ಯಾರೆಂಬುದನ್ನು ಮರೆತು ಜನರ ಕಣ್ ತಪ್ಪಿಸಿ ರಾಜಕೀಯ ಮಾಡುತ್ತಿದ್ದಾರೆ,ತಮ್ಮೊಂದಿಗೆ ಆಪ್ತರಾಗಿದ್ದು ಕೊಂಡು ಈರೀತಿ ಮಾಡುತ್ತಿರುವ ಕಿರಣ್ ಕುಮಾರ್ ಅವರನ್ನು ಮನೆಗೆ ಕಳುಹಿಸಿ, ಮಾಧುಸ್ವಾಮಿ ಅವರನ್ನು ವಿಧಾಸಭೆಗೆ ಕಳುಹಿಸುವ ಮೂಲಕ ಚಿ.ನಾ.ಹಳ್ಳಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಕಾರ್ಯಕ್ಕೆ ತಾವೆಲ್ಲ ಕೈಜೊಡಿಸಿ ಎಂದು ಕರೆ ನೀಡಿದರು. ಇಂದು ಜನಕ್ಕ

ಹುಳಿಯಾರಿನಲ್ಲಿ ಬಿ.ಎಸ್.ಯಡಿಯೂರಪ್ಪ

ಚಿ.ನಾ.ಹಳ್ಳಿ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಮಾಧುಸ್ವಾಮಿ ಪರ ಪ್ರಚಾರಕ್ಕಾಗಿ ಹುಳಿಯಾರಿಗೆ ಆಗಮಿಸಿದ್ದ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿದರು.

ಬಿರು ಬಿಸಿಲಲ್ಲಿ ವಿವಿಧ ಪಕ್ಷಗಳ ಅಬ್ಬರದ ಪ್ರಚಾರ,ಮತಯಾಚನೆ

ಬಿರು ಬಿಸಿಲನ್ನು ಲೆಕ್ಕಿಸದೆ ಪಟ್ಟಣದಾದ್ಯಂತೆ ಗುರುವಾರ ವಿವಿಧ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅಬ್ಬರದ ಪ್ರಚಾರ ನಡೆಸಿದರು.ಒಂದು ಕಡೆ ಬಿಜೆಪಿ ಪಕ್ಷದ ಕಿರಣ್ ಕುಮಾರ್ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಮನೆಮನೆಗಳಿಗೆ ತೆರಳಿ ಮತಯಾಚಿಸುತ್ತಿದ್ದು,ಕಾರ್ಯಕರ್ತರು ಜೈಕಾರಗಳನ್ನು ಹಾಕುತ್ತಾ ತಮ್ಮ ನಾಯಕನಿಗೆ ಓಟು ಕೊಡಿ ಎಂದು ಕೇಳುತ್ತಿದ್ದರು. ಮತ್ತೊಂದೆಡೆ ರೈತಸಂಘದ ಅಭ್ಯರ್ಥಿ ಕೆಂಕೆರೆ ಸತೀಶ್ ಮಾರ್ಕೆಟ್ ಯಾರ್ಡ್,ವಠಾರ, ಶಂಕರಪುರ,ವಸಂತನಗರ,ಅಮಾನಿಕೆರೆ ಹೀಗೆ ವಿವಿಧ ಬಡಾವಣೆಗಳಲ್ಲಿ ಅಪಾರ ಸಂಖ್ಯೆಯ ರೈತರೊಂದಿಗೆ ಸುತ್ತಿ ಕ್ಷೇತ್ರದ ಅಭಿವೃದ್ಧಿಗೆ ಉದ್ದೇಶಿಸಿರುವ ಯೋಜನೆಗಳ ಬಗ್ಗೆ ಭಿತ್ತಿಪತ್ರಗಳನ್ನು  ಹಂಚುತ್ತಾ ಓಟಿನೊಂದಿಗೆ ಒಂದು  ನೋಟು ಕೊಡಿ ಎಂದು ಸಾಗುತ್ತಾ ನಡೆದರೆ, ಜೆಡಿಎಸ್ ಪಕ್ಷದ ಸಿ.ಬಿ.ಸುರೇಶ್ ಬಾಬು ಅವರ ಅನುಪಸ್ಥಿಯಲ್ಲಿಯೂ ಅವರ ಪರ ಮುಖಂಡರಾದ ಬೈಜು ಸಾಬ್.ಮಾಜಿ ತಾಪಂ ಸದಸ್ಯ ಶಿವನಂಜಪ್ಪ ,ತರಕಾರಿ ರಘು,ಲಲಿತ ಹಾಗೂ ಶೌಕತ್ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಮನೆಮನೆಗಳಿಗೆ ತೆರಳಿ ಜೇಡಿಎಸ್ ಪಕ್ಷಕ್ಕೆ ಮತಯಾಚಿಸುತ್ತಿದ್ದರು.                ಕೆಜೆಪಿ ಪಕ್ಷದ ಜೆ.ಸಿ.ಮಾಧುಸ್ವಾಮಿ ಪರವಾಗಿ ಸ್ಥಳಿಯ ಮುಖಂಡರುಗಳಾದ ಜಹೀರ್ ಸಾಬ್, ಕಾರ್ಗಿಲ್ ಸತೀಶ್,ಗ್ರಾಪಂ ಸದಸ್ಯರುಗಳಾದ ಬಡ್ಡಿ ಪುಟ್ಟಣ್ಣ, ಭೈರೇಶ್, ಅಶೋಕ್ ಬಾಬು ಸೇರದಂತೆ ಅಪಾರ ಅಭಿಮಾನಿಗಳು  ಪಟ್ಟಣದ ವಿವಿಧ ಬದಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂ

ಏಳುಹಳ್ಳಿ ಕರಿಯಮ್ಮ ದೇವಿ ಜಾತ್ರೆಗೆ ಚಾಲನೆ

ಹೋಬಳಿ ಚಿಕ್ಕಬಿದರೆ ಗ್ರಾಮದ ಏಳುಹಳ್ಳಿ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವವು ಗುರುವಾರ ಧ್ವಜಾರೋಹಣ.ಕಂಕಣಧಾರಣೆ,ಮಧುವಣಗಿತ್ತಿ ಸೇವಾ ಕಾರ್ಯದೊಂದಿಗೆ ಚಾಲನೆಗೊಂಡಿದೆ. ತಾ.26ರ ಶುಕ್ರವಾರ ದೊಡ್ಡಬಿದರೆ ಕರಿಯಮ್ಮ,ಪೋಚಗಟ್ಟೆ ಕರಿಯಮ್ಮ,ಕೋಡಿಹಳ್ಳಿ ಕೊಲ್ಲಾಪುರದಮ್ಮ ದೇವರುಗಳ ಆಗಮನದೊಂದಿಗೆ ಕೂಡು ಭೇಟಿ ಇದ್ದು ,ಇದೇ ದಿನ ಸಂಜೆ ಬಾನ ನಡೆಯಲಿದೆ.ತಾ.27ರ ಶನಿವಾರ ಭೈರಾಪುರ,ಅವಳಗೆರೆ,ದೇವಹಳ್ಳಿ ಗ್ರಾಮಸ್ಥರಿಂದ ಚಿಕ್ಕಬಿದರೆ ಕೆರೆಯಲ್ಲಿ ಗಂಗಾಪೂಜೆ,ಕಳಸ ದೊಂದಿಗೆ ನಡೆಮುಡಿಯಲ್ಲಿ ಅಗ್ನಿಕುಂಡ ಪ್ರವೇಶಿಸಿ,ಘಟೆಪೂಜೆ ಹಾಗು ಮಹಾಮಂಗಳಾರತಿ,ತಾ.28ರ ಭಾನುವಾರ ಆರತಿ,ಹಾನಕಲಾಡಿ ಉತ್ಸವ,ತಾ.29ರ ಸೋಮವಾರ ಚಿಕ್ಕಬಿದರೆ ರಂಗನಾಥಸ್ವಾಮಿ ಸಮ್ಮುಖದಲ್ಲಿ ಅಮ್ಮನವರ ರಥೋತ್ಸವ ನಡೆದು ನಂತರ ಕಂಕಣ ವಿಸರ್ಜನೆ,ಓಕಳಿಸೇವೆ ಗಂಡುಗತ್ತರಿ ಸೇವೆಯೊಂದಿಗೆ ಕೊನೆಗೊಳ್ಳಲಿದೆ.ತಾ.30ರ ಮಂಗಳವಾರ ಉದ್ಭವ ಮೂರ್ತಿ ದುರ್ಗಮ್ಮ ದೇವಿಯವರಿಗೆ ಆರತಿಬಾನ ನಡೆಯಲಿದ್ದು ಸುತ್ತಮುತ್ತಿಲಿನ ಭಕ್ತಾಧಿಗಳು ಆಗಮಿಸಿ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ.

ವಿಷ ಸೇವಿಸಿ ವ್ಯಕ್ತಿ ಸಾವು,ಅಪರಿಚಿತ ಹೆಂಗಸಿನ ಶವ ಪತ್ತೆ

ಹುಳಿಯಾರು ಸುತ್ತಾ ಎರಡು ದುರ್ಘಟನೆ ಸಂಭವಿಸಿದೆ.ಈ ಬಗ್ಗೆ ಮಾಹಿತಿ ಇಲ್ಲಿದೆ 1) ಹುಳಿಯಾರು: ಕಳೆದ ಕೆಲ ದಿನಗಳಿಂದ ಬಾದಿಸುತ್ತಿದ್ದ ಹೊಟ್ಟೆ ನೋವನ್ನು ತಾಳಲಾರದೆ ವಿಷ ಸೇವಿಸಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಹೋಬಳಿಯ ಹೆಚ್.ಮೇಲನಹಳ್ಳಿಯಲ್ಲಿ ಬುಧವಾರ ಸಂಭವಿಸಿದೆ. ಹರೀಶ್(26) ಎಂಬಾತನೇ ಸಾವನಪ್ಪಿದ್ದ ದುರ್ದೈವಿಯಾಗಿದ್ದು , ಈತ ಆಗಾಗ ಬರುತ್ತಿದ್ದ ಹೊಟ್ಟೆನೋವನ್ನು ತಡೆದುಕೊಳ್ಳಲಾರದೆ ಮಂಗಳರಾತ್ರಿ ವಿಷ ಸೇವಿಸಿದ್ದಾನೆ,ವಿಷಯ ತಿಳಿದ ಪೋಷಕರು ಹುಳಿಯಾರು ಆಸ್ಪತ್ರೆಗೆ ಕರೆತಂದು ತೊರಿಸಿ ನಂತರ ತುಮಕೂರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವನ್ನಪಿದ್ದು ಪ್ರಕರಣ ಹುಳಿಯಾರು ಠಾಣೆಯಲ್ಲಿ ದಾಖಲಾಗಿದೆ. 2) ಹೋಬಳಿ ದಬ್ಬಗುಂಟೆ ಗ್ರಾಮದ ಕರಿಕಲ್ಲು ಬಯಲು ಹತ್ತಿರದ ಹೊಲದಲ್ಲಿ ಮಂಗಳವಾರ ಅಪರಿಚಿತ ಹೆಂಗಸಿನ ಶವ ಪತ್ತೆಯಾಗಿದ್ದು, ಸುಮಾರು 45 ರಿಂದ 50ವರ್ಷದ ಈಕೆ ಕಳೆದ ಎರಡು ಮೂರು ದಿನಗಳಿಂದ ಈ ಭಾಗದಲ್ಲಿ ಓಡಾಡುತ್ತಿದ್ದು, ಮಾನಸಿಕ ಅಸ್ವಸ್ಥಳಾಗಿದ್ದಳು ಎಂದು ದಬ್ಬಗುಂಟ್ಟೆ ಗ್ರಾಮದ ಹೆಂಜಪ್ಪ ತಿಳಿಸಿದ್ದಾರೆ. ಶವದ ಮೈ ಮೇಲೆ ಬಿಳಿಬಣ್ಣದ ತುಂಬು ತೋಳಿನ ಅಂಗಿ,ಕೆಂಪು ಬಣ್ಣದ ಲಂಗ,ತಲೆ ಭಾಗದಲ್ಲಿ ಕಪ್ಪು ಬಿಳಿ ಮಿಶ್ರಿತ ಕೊದಲಿದ್ದು,ದೇಹ ಕೊಳೆತ ಸ್ಥಿಯದ್ದು,ಶವವನ್ನು ಹುಳಿಯಾರು ಸರ್ಕಾರಿ ಅಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು,ಗುರುತು ಬಲ್ಲವರು ಹುಳಿಯಾರು ಪೋಲೀಸ್ ಠಾಣೆ(08133-256150) ಸಂಪರ್ಕಿಸಬಹುದಾಗಿದೆ.

ಗುಲಗಂಜಿ - "ಕೋತಿ ಕೈಗೆ ಗುಲಗಂಜಿ ಕೊಟ್ಟಂಗೆ"

ಗುಲಗಂಜಿ : ಈ ಪದ ಬಹಳ ಹಿಂದೆ ಕಿವಿಗೆ ಬಿದ್ದಿತ್ತೆ ವಿನಃ ಅದು ಏನೂ ಅಂತ ತಿಳಿದಿರಲ್ಲಿಲ್ಲಾ.ಇತ್ತೀಚೆಗೆ ನಮ್ಮ ಮೈನ್ಸ್ ನಲ್ಲಿ ಗಿಡದ ಸಂದಿಯಲ್ಲಿ ಲ್ಲಿ ಓಡಾಡಿಕೊಂಡು ಬರ್ತಿದ್ದಾಗ ಹಳ್ಳದ ಪಕ್ಕ ಇದ್ದ ಗಿಡದ ಬಳಿ ಒಂದಷ್ಟು ಕಾಯಿ ಸುರಿದು ಬಿದ್ದಿದ್ದು ಇದೇನೆಂದು ಕೇಳಿದಾಗ ಗುಲಗಂಜಿ ಅನ್ನುವ ಉತ್ತರ ಬಂತು.ಅರೆರೇ ಇದೇನಾ ಗುಲಗಂಜಿ ಅಂತ ಆಶ್ಚರ್ಯ ಆಯ್ತು.ನಾನು ಚಿಕ್ಕವನಾಗಿದ್ದಾಗ ನಮ್ಮಪ್ಪ ಬಂಗಾರದ ವಿಚಾರ ಮಾತಾಡ್ತಿದ್ದಾಗ ಆ ಪದ ಕಿವಿಗೆ ಬಿದಿತ್ತೆ ಹೊರತು ಅದರ ಬಗ್ಗೆ ಸ್ಪಷ್ಟ ಕಲ್ಪನೆ ಇರ್ಲಿಲ್ಲಾ.ಹಿಂದಿನ ದಿನಗಳಲ್ಲಿ ಆಚಾರಿಗಳು ಬಂಗಾರವನ್ನು ಗುಲಗಂಜಿ ತೂಕದಲ್ಲಿಯೇ ತೂಗುತ್ತಿದ್ದರಂತೆ. ಆಗೆಲ್ಲಾ ಹಳ್ಳಿಗಳಲ್ಲಿನ ಅಕ್ಕಸಾಲಿಗರ ಮನೆಯಲ್ಲಿ ಚಿನ್ನ ತೂಕ ಮಾಡಲು ಗುಲಗಂಜಿ ಬಳಕೆ ಆಗ್ತಿತ್ತು. ಈಗೆಲ್ಲಾ ಬಂಗಾರದ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ತೂಕದ ಮಿಶಿನ್ ಗಳು ಬಂದಿದ್ದು ಹಿಂದಿನ ರೀತಿ ಇದರ ಬಳಕೆ ಇಲ್ವೇಇಲ್ಲಾ ಅನ್ನಬಹುದು. ಈಗಿನವರಿಗೆ ಈ ಪದನೇ ಅಪರಿಚಿತ.ಇಂತಹ ಗುಲಗಂಜಿ ಗಿಡದಲ್ಲಿ ಬಿಡುವ ಕಾಯಿ ಅಂತ ತಿಳಿದಿರಲಿಲ್ಲಾ.            ಗುಲಗಂಜಿ ಗಿಡದಲ್ಲಿ ಬಿಡುವ ಆಕರ್ಷಕವಾದ ಕೆಂಪು ಮತ್ತು ಕಡು ಕಪ್ಪು ಬಣ್ಣದ ಒಂದು ಬೀಜ.ಗುಲಗಂಜಿಯ ಗಿಡ ಹಳದಿ ಬಣ್ಣದ್ದಾಗಿದ್ದು ಕೆಂಪು ಹೂವುಗಳನ್ನು ಬಿಡುತ್ತದೆ. ಕಡು ಕೆಂಪಗಿರುವ ತುದಿಯಲ್ಲಿ ಕಪ್ಪು ಟೋಪಿಹೊಂದಿರುವಂತೆ ಕಾಣುವ ಇದು ಸಣ್ಣ ಮೊಟ್ಟೆಯ ಆಕಾರದಲ್ಲಿತ್ತದೆ.ಇವುಗಳಲ್ಲಿ ಮೂರು ವಿಧ.ಹ

ಇಂದು ಬೀchiಯವರ ಜನ್ಮ ಶತಮಾನೋತ್ಸವ.( ಏಪ್ರಿಲ್ 23.1913-ಏಪ್ರಿಲ್ 23.2013)

ಇಂದು ಬೀchiಯವರ ಜನ್ಮ ಶತಮಾನೋತ್ಸವ.( ಏಪ್ರಿಲ್ 23.1913-ಏಪ್ರಿಲ್ 23.2013) .ಬೀchiಯವರು ನಮ್ಮಿಂದ ಕಣ್ಮರೆಯಾಗಿದ್ದರೂ , ತಮ್ಮ ಹಾಸ್ಯ ಸಾಹಿತ್ಯದ ಮೂಲಕ ಇಂದಿಗೂ ಜೀವಂತವಾಗಿದ್ದಾರೆ. ಬೀchi ಹಾಸ್ಯ ಸಾಹಿತ್ಯದಲ್ಲಿ ಚಿರಸ್ಥಾಯಿ ಹೆಸರು. ಬೀಚಿ ಬರಹಗಳಲ್ಲಿನ ನಾಯಕ ತಿಂಮ. ತಿಂಮ ಎಂದರೆ ಬೀchi. ಬೀchi ಎಂದರೆ ತಿಂಮ. ತಿಂಮನ ಪ್ರಸಂಗಗಳಲ್ಲಿ ಇಂದಿಗೂ ತಾಜಾತನವಿದೆ, ಇಂದಿನ ಪರಿಸ್ಥಿತಿಗೂ ಹೋಲಿಕೆ ಮಾಡಿಕೊಳ್ಳಬಹುದು. ತಿಂಮನವ್ಯಂಗ್ಯೋಕ್ತಿಗಳನ್ನು ಓದಿ ನಗದಿರುವವರು ಇಲ್ಲವೇ ಇಲ್ಲ.ನಗಲಿಲ್ಲವೆಂದರೆ ಅವರು ಬೀಚಿಯವರೇ ಹೇಳುವಂತೆ – ನಗೆ-ಶತ್ರು. ಬೀಚಿ ಅರವತ್ಮೂರು ಕೃತಿಗಳನ್ನು ರಚಿಸಿದ್ದು ಅತ್ಯಂತ ಗಂಭೀರವಾದ ಸಮಸ್ಯೆಯನ್ನು ಚೋದ್ಯದ ಮೂಲಕ ಹೇಳುವ ಜಾಣ್ಮೆ ಇವರಲ್ಲಿತ್ತು.ಹಾಸ್ಯದಲ್ಲಿ ನವಿರಾದ ಕಟು ಸತ್ಯಕ್ಕೆ ವಿಡಂಬನೆಯ ರೂಪ ಕೊಟ್ಟು, ಸಮಾಜದ ಓರೆ ಕೋರೆಗಳನ್ನು ಜನರಿಗೂ ತಿಳಿಯುವಂತೆ ಮಾಡಿದ ಅಗ್ರೇಸರ ಬೀಚಿ. ಅವರ ಶೈಲಿಯಲ್ಲಿದ್ದ ಮೊನಚು ಮತ್ಯಾರ ಸಾಹಿತ್ಯದಲ್ಲೂ ಸಿಗಲು ಸಾಧ್ಯವಿಲ್ಲ ಎಂದ ಅವರು, ಆ ಕಾಲ -ಈ ಕಾಲ ಎನ್ನದೆ ಎಲ್ಲಾ ಕಾಲಕ್ಕೂ ಸಲ್ಲುವ ಇವರಿಗೆ ಅವರದ್ದೆ ಆದ ಓದುಗ ವರ್ಗವಿದೆ. ಸೃಷ್ಟಿಸಿದರು. ತಲೆಮಾರು ಕಳದರೂ ಅವರ ಜೋಕು, ಕಥೆನಿತ್ಯ ನೂತನ,ನಿತ್ಯ ಚಿರಂತನ. ಇಂದು ಎಂದು ಅವರ ಸ್ಥಾನವನ್ನು ತುಂಬುವ ಮತ್ತೊಬ್ಬರು ಕಾಣಸಿಗುವುದಿಲ್ಲ ಎಂದರೆ ಅತಿಶಯೋಕ್ತಿ ಇಲ್ಲ. ಬೀಚಿ ಯವರ ಬಗ್ಗೆ ಬರೆಯುವುದಕ್ಕಿಂತ ಅವರ ಲೇಖನಗಳನ್ನು ಉಲ್ಲೇಖಿ

ಓಟು ಕೊಡಿ,ನೋಟು ಕೊಡಿ ಎಂದು ಪ್ರಚಾರ ಪ್ರಾರಂಭಿಸಿದ ರೈತಸಂಘದ ಅಭ್ಯರ್ಥಿ ಕೆಂಕೆರೆ ಸತೀಶ್

              ಮತದಾರರೇ ಒಂದು ಓಟು ಕೊಡುವುದರ ಜೊತೆ ಒಂದು ನೋಟು ಕೊಟ್ಟು ತಮ್ಮನ್ನು ಜಯಶೀಲರನ್ನಾಗಿ ಮಾಡಿ ಎನ್ನುವ ಘೋಷವಾಕ್ಯದೊಂದಿಗೆ ಚುನಾವಣಾ ಪ್ರಚಾರ ಪ್ರಾರಂಬಿಸಿದ್ದಾರೆ ಚಿಕ್ಕನಾಯಕನಹಳ್ಳಿ ಕ್ಷೇತ್ರದ ರೈತಸಂಘದ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿರುವ ಹೋರಾಟಗಾರ ಕೆಂಕೆರೆ ಸತೀಶ್. ಹುಳಿಯಾರಿನ ಅಂಬೇಡ್ಕರ್ ಕಾಲೋನಿಯಿಂದ ತಮ್ಮ ಚುನಾವಣಾ ಪ್ರಚಾರ ಪ್ರಾರಂಭಿಸಿದ ಅವರು ತರಕಾರಿ ರಾಮಣ್ಣ ಅವರಿಂದ ನೋಟು ಪಡೆಯುವ ಮೂಲಕ ಪ್ರಚಾರಕ್ಕೆ ಮುಂದಾಗಿದ್ದು,ಮನೆಮನೆಗಳಿಗೆ ತೆರಳಿ ಮತಯಾಚನೆ ಮಾಡಿದರು.ತಾವು ರೈತಸಂಘದೊಂದಿಗೆ ತಾಲ್ಲೂಕಿನಾದ್ಯಂತ ಅನೇಕ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದು, ಚುನಾವಣೆಯಲ್ಲಿ ಗೆದ್ದರೂ,ಸೋತರೂ ತಮ್ಮ ಹೋರಾಟದ ಹಾದಿಯನ್ನು ಬಿಡುವುದಿಲ್ಲ,ಎಲ್ಲೆ ರೈತರಿಗೆ ಅನ್ಯಾಯವಾದರೂ ಅವರ ಜೊತೆ ಕೈಜೋಡಿಸು ನ್ಯಾಯ ದೊರಕಿಸುವ ಕಾರ್ಯದಲ್ಲಿ ಮುನ್ನೆಡೆಯುತ್ತಾ ಸಾಗುವುದಾಗಿ ತಿಳಿಸಿದರು.ತಾವು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ರೈತಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಚುನಾವಣೆಯಲ್ಲಿ ಗೆಲ್ಲಲಿ,ಸೋಲಲ್ಲಿ ತನ್ನ ಹೋರಾಟವನ್ನು ಕೈಬಿಡದೆ ಮುಂದುವರಿಸಿಕೊಂಡು ರೈತರಿಗಾಗಿ ಅವಿರತ ದುಡಿಯುವುದಾಗಿ ಹೇಳಿದರು. ಒಬ್ಬ ರೈತನಾಗಿ ರೈತರ ಸಮಸ್ಯೆಗಳನ್ನು ಹತ್ತಿರದಿಂದ ಕಂಡವನಾಗಿರುವ ನನಗೆ ರೈತರ ಕಷ್ಟದ ಅರಿವಿದ್ದು ಬಗೆಹರಿಸಲು ಶಕ್ತನಾಗಿದ್ದೇನೆ. ಸೇವಾ ಮನೋಭಾವದಿಂದ

ಜೆಡಿಎಸ್ ರಾಜ್ಯದ ಚುಕ್ಕಾಣಿ ಹಿಡಿದರೆ ರೈತ ಸಂಪೂರ್ಣ ಸಾಲ ಮನ್ನಾ : ಹೆಚ್ಡಿಕೆ ಭರವಸೆ

                 ರೈತನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿ ಆಡಳಿತ ನಡೆಸಲು ಮುಂದಾದ ಬಿಜೆಪಿ ಸರ್ಕಾರ ರಾಜ್ಯದ ರೈತರ ಹಿತವನ್ನು ಕಾಪಾಡುವುದನ್ನು ಮರೆತು ತಮ್ಮದೇ ಆದ ಆಡಳಿತವನ್ನು ನಡೆಸುತ್ತಾ ಹಲವಾರು ಹಗರಣಗಳನ್ನು ಮಾಡುವ ಮೂಲಕ ರಾಜ್ಯವನ್ನು ಕೊಳ್ಳೆ ಹೊಡೆಯುವ ಕಾರ್ಯದಲ್ಲಿ ತೊಡಗಿದ್ದಾರೆ,ಈಗ ಇದಕ್ಕೆಲ್ಲಾ ಕಡಿವಾಣ ಹಾಕಿ ರಾಜ್ಯದಲ್ಲಿ ಬದಲಾವಣೇ ತರುವ ನಿಟ್ಟಿನಲ್ಲಿ ಈಗಿನ ಚುನಾವಣೆಯಲ್ಲಿ ಮತದಾರ ಎಚ್ಚೆತ್ತು ಕೊಂಡು ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಬಹುಮತದಿಂದ ಆಯ್ಕೆ ಮಾಡಿದಲ್ಲಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಮೊದಲ ದಿನವೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಮಾಜಿ ಸಿಎಂ ಹಾಗೂ ರಾಜ್ಯ ಜೆಡಿಎಸ್ ಅಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.               ಚಿಕ್ಕನಾಯಕನಹಳ್ಳಿ ಕ್ಷೇತ್ರದ ಅಭ್ಯರ್ಥಿ ಸಿ.ಬಿ.ಸುರೇಶ್ ಬಾಬು ಪರ ಪ್ರಚಾರಕ್ಕಾಗಿ ಹುಳಿಯಾರಿಗೆ ಆಗಮಿಸಿದ್ದ ಅವರು ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದರು. ಹುಳಿಯಾರಿನಲ್ಲಿ ಅಭ್ಯರ್ಥಿ ಸಿ.ಬಿ.ಸುರೇಶ್ ಬಾಬು ಪರ ಚುನಾವಣಾ ಪ್ರಚಾರ ಮಾಡುತ್ತಿರುವ ಮಾಜಿ ಸಿಎಂ ಕುಮಾರಸ್ವಾಮಿ. ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ,ಅಲ್ಲಲ್ಲೆ ಗ್ರಾಮವಾಸ್ತವ್ಯ ಮಾಡುವ ಮೂಲಕ ಹರಿಜನ,ದಲಿತ ಎಂದು ಜಾತಿತಾರತಮ್ಯ ಮಾಡದೇ ಎಲ್ಲಾ ಜನಾಂಗದವರು ಒಂದೇ ಎಂದು ಭಾವಿಸಿ ಅವರ ಸಂಕಷ

ಬಿಎಸ್ಪಿಯಿಂದ ಕ್ಯಾಪ್ಟನ್ ಸೋಮಶೇಖರ್ ಪ್ರಚಾರ

ಕಾಂಗ್ರೆಸ್ ನಲ್ಲಿದ್ದ ಕ್ಯಾಪ್ಟನ್ ಸೋಮಶೇಖರ್ ತಮಗೆ ಟಿಕೇಟ್ ನೀಡದ ಹೈಕಮಾಂಡ್ ಮೇಲೆ ಮುನಿಸಿಕೊಂಡು ಬಿಎಸ್ಪಿ ಸೇರಿದ್ದಾರೆ.ಕಳೆದ ಬಾರಿ ಇದೇ ಪಕ್ಷದಿಂದ ಕಿರುತೆರೆ ನಟಿ ಹೇಮಾಶ್ರಿ ಸ್ಪರ್ದಿಸಿದ್ದು ಠೇವಣಿ ನಷ್ಟ ಅನುಭವಿಸಿದ್ದರು.ಈ ಬಾರಿ ನಮ್ಮ ಕ್ಯಾಪ್ಟನ್ ಪ್ರಚಾರ ಶುರು ಮಾಡಿದ್ದು ಅವರ ಹೇಳಿಕೆ ಹೀಗಿದೆ ನೋಡಿ.

ಅಭಿವೃದ್ಧಿ ಬೇಕು ಅಂದರೆ ಕಾಂಗ್ರೆಸ್ ಗೆ ಮತ ನೀಡಬೇಕಂತೆ

ಚಿಕ್ಕನಾಯ್ಕನಹಳ್ಳಿ ವಿಧಾನಸಭ ಕ್ಷೇತ್ರದಲ್ಲಿ ಕಾಂಗ್ರೆಸ್ಸೇತರ ಅಭ್ಯರ್ಥಿಗಳನ್ನು ಗೆಲ್ಲುಸುತ್ತಿರುವುದರಿಂದ ಕ್ಷೇತ್ರ ಹಿಂದುಳಿದಿದೆ.ನೀವು ಕಾಂಗ್ರೆಸ್ಸು ಪಕ್ಷವನ್ನು ಗೆಲ್ಲಿಸಿದ್ದೆ ಆದರೆ ನಿಮ್ಮ ಕ್ಷೇತ್ರಕ್ಕೆ ನೀರು,ರಸ್ತೆ....ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡು ಚಿನಾಹಳ್ಳಿಯನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೀನಿ ಅಂತ ಅಭ್ಯರ್ಥಿ ಸಾಸಲು ಸತೀಶ್ ಹುಳಿಯಾರಿನಲ್ಲಿ ತಿಳಿಸಿದ್ದಾರೆ.ಇದರ ಸಂಪೂರ್ಣ ವರದಿ ಕಿರಣ್ ಉದಯವಾಣಿಯಲ್ಲಿ ನೀಡಿದ್ದು ಅದನ್ನು URL ನಲ್ಲಿ   http://epaper.udayavani.com/Display.aspx?Pg=H&Edn=BN&DispDate=4/21/2013     ಟೈಪ್ ಮಾಡಿ ಓದಿ ಉದಯವಾಣಿ;21.04.2013

ಚುನಾವಣೆಯ ಅಂತಿಮ ಸ್ಪರ್ಧಾಳುಗಳು

ನಾಮಪತ್ರ ಹಿಂತೆಗೆದ ನಂತರ ಕಣದಲ್ಲಿರುವ ಅಂತಿಮ ಸ್ಪರ್ಧಾಳುಗಳ ಪಟ್ಟಿ ಹೀಗಿದೆ

ಕೆ.ಎಸ್. ಕಿರಣ್ ಕುಮಾರ್ ನೇತೃತ್ವದಲ್ಲಿ ಬಿ.ಜೆ.ಪಿ ಸೇರ್ಪಡೆ

ಹುಳಿಯಾರು ಹೋಬಳಿ ಕೋರಗೆರೆ ಮರಾಠಿಪಾಳ್ಯದ ದ್ಯಾಮನಾರ ಸಿದ್ದರಾಮಯ್ಯ, ರಾಮಯ್ಯ, ಗದ್ದಿಗೆ ಸಿದ್ದರಾಮಯ್ಯ, ಪುಟ್ಟಯ್ಯ, ಬಡಗಿರಾಮಯ್ಯ, ಗಿಡ್ಡಯ್ಯನ ಸಿದ್ದರಾಮಯ್ಯ, ಶಂಕರಯ್ಯ, ಸದ್ದಲಿಂಗಯ್ಯ, ನಡುವಲಮನೆ ರಾಮಯ್ಯ, ಹೆಸ್. ಸಿದ್ದರಾಮಯ್ಯ ಹಾಗೂ ಇತರರು ಜೆ.ಡಿ.ಎಸ್. ತೊರೆದು ಕೆ.ಎಸ್. ಕಿರಣ್ ಕುಮಾರ್ ನೇತೃತ್ವದಲ್ಲಿ ಬಿ.ಜೆ.ಪಿ ಸೇರಿದರು ಜೆ.ಸಿ.ಪುರ ಗ್ರಾ.ಪಂ. ತೂಬರಹಳ್ಳಿ ಬೋವಿ ಕಾಲೊನಿಯ ಲೋಹಿತ್ ಕುಮಾರ್ , ಕೃಷ್ಣಪ್ಪ, ಗೋಪಾಲಯ್ಯ, ರಮೇಶ್ ಕುಮಾರ್, ಹೇಮಂತ್ ಯತೀಶ್ ಮಂಜು, ಕಿರಣ್ ಮಲ್ಲೇಶ್ ಹಾಗೂ ಇತರರು ಜೆ.ಡಿ.ಎಸ್. ತೊರೆದು ಬಿಜೆಪಿಗೆ ಸೇರ್ಪಡೆಯಾದರು.

ಕಾಳಿಕಾಂಭದೇವಿಯ ವೈಭವಯುತ ಸಿಡಿ ಉತ್ಸವ

ಹುಳಿಯಾರು ಹೋಬಳಿ ಕೆಂಕೆರೆಯಲ್ಲಿ ನಡೆದ ಶ್ರೀ ಕಾಳಿಕಾಂಬದೇವಿಯ ಸಿಡಿ ಉತ್ಸವದ ಒಂದು ನೋಟ. ಹೋಬಳಿ ಕೆಂಕೆರೆ ಗ್ರಾಮದ ಗ್ರಾಮದೇವತೆ ಶ್ರೀ ಕಾಳಿಕಾಂಬದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ನೂರಾರು ಸಂಖ್ಯೆಯ ಭಕ್ತಾಧಿಗಳ ಹರ್ಷೋದ್ಘಾರದೊಂದಿಗೆ ಸಿಡಿ ಉತ್ಸವ ವೈಭವಯುತವಾಗಿ ಜರುಗಿತು.         ತಾ.13 ರಿಂದ ತಾ.20ರವರೆಗೆ ನಡೆಯುವ ಒಂದು ವಾರದ ಜಾತ್ರಾ ಮಹೋತ್ಸವದಲ್ಲಿ ಮೂರುದಿನ ಅಗ್ನಿಕೊಂಡಸೇವೆ,ದಮ್ಮಡಿಹಟ್ಟಿ ಹಾಗೂ ಕಂಪನಹಳ್ಳಿ ಗ್ರಾಮಸ್ಥರಿಂದ ಅಮ್ಮನವರ ಕಂಕಣ ಧಾರಣೆ, ಮದುವಣಗಿತ್ತಿ ಸೇವೆ,ಆರತಿಬಾನ ಕಾರ್ಯ, ಮಡಲಕ್ಕಿಸೇವೆ, ಕೆ.ಬಿ.ರಮೇಶಣ್ಣ ಹಾಗೂ ಅಂಗಡಿಕೊಡಪ್ಪ ಮತ್ತು ಗ್ರಾಮಸ್ಥರಿಂದ ಅಮ್ಮನವರ ಉಯ್ಯಾಲೆ ಉತ್ಸವ ನಡೆದಿದ್ದು, ಕಲಶ ಮಹೋತ್ಸವ  ಕಾರ್ಯಗಳು ನಡೆದಿದ್ದು, ಶುಕ್ರವಾರ ಬೆಳಗಿನ ಜಾವ ಅಮ್ಮನವರನ್ನು ಉತ್ಸದಲ್ಲಿ ಕರೆತಂದು  ನಂತರ  ಸಿಡಿ ಮರವನ್ನು ಶೃಂಗರಿಸಿ,ಮರದ ಒಂದು ತುದಿಗೆ ಅರಕೆ ಮಾಡಿಕೊಂಡಿದ್ದ ಒಬ್ಬ ವ್ಯಕ್ತಿಯನ್ನು ಜೋತು ಹಾಕಿ ಮರದ ಇನ್ನೊಂದು ತುದಿಯಲ್ಲಿ ದೇವರುಗಳನ್ನು ಕುಳ್ಳಿರಿಸಿ ಗೌಡಗೆರೆ ಶ್ರೀದುರ್ಗಮ್ಮದೇವಿ, ದಮ್ಮಡಿಹಟ್ಟಿ ಈರ ಬೊಮ್ಮಕ್ಕದೇವಿ,ಬರದಲೇ ಪಾಳ್ಯದ ಅಂಬಿಕಾದೇವಿಯ ನೇತೃತ್ವದಲ್ಲಿ ಸಿಡಿಮರವನ್ನು ಮೂರು ಸುತ್ತು ಸುತ್ತಿಸುವ ಮೂಲಕ ಸಿಡಿ ಉತ್ಸವ ನಡೆಯಿತು.ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಿಂದ ಅಪಾರ ಸಂಖ್ಯೆಯ ಭಕ್ತಾಧಿಗಳು ಆಗಮಿಸಿದ್ದರು.

ಹುಳಿಯಾರಿನಲ್ಲಿ ಶ್ರದ್ದಾಭಕ್ತಿಯಿಂದ ರಾಮನವಮಿಯ ಆಚರಣೆ

 ರಾಮನವಮಿ ಅಂಗವಾಗಿ ಪಟ್ಟಣದ ಮನೆಮನೆಗಳಲ್ಲಿ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ,ವಿವಿಧ ಧಾರ್ಮಿಕ  ಕೈಂಕರ್ಯಗಳೊಂದಿಗೆ ಶ್ರೀರಾಮನ ಭಜನೆ ಪಠಿಸುತ್ತಾ ಶ್ರೀರಾಮನನ್ನು ಆರಾಧಸಿ, ನಂತರ ಕೋಸಂಬರಿ, ಬೇಲವತೇ ಹಣ್ಣಿನ ಪಾನಕ,ಮಜ್ಜಿಗೆ,ಕಡಲೆಕಾಲು ಹುಸಲಿಯ ನೈವೇದ್ಯವನ್ನು ಸಂತರ್ಪಣೆ ಮಾಡಿ,ಸಾರ್ವಜನಿಕರಿಗೆ ವಿತರಿಸುವ ಮೂಲಕ ಶ್ರೀರಾಮಚಂದ್ರ ಸ್ವಾಮಿಯ ಜನ್ಮ ದಿನವಾದ ರಾಮನವಮಿಯನ್ನು ಶ್ರದ್ದಾಭಕ್ತಿಯಿಂದ ಶುಕ್ರವಾರ ಅದ್ಧೂರಿಯಾಗಿ ಆಚರಿಸಲಾಯಿತು. ಮಾರುತಿನಗರದ ಜೈ ಮಾರುತಿ ಯುವಕ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ರಾಮನವಮಿ ಅಂಗವಾಗಿ ಶ್ರೀಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ.ಕಡಳೆಕಾಲು ಹುಸಲಿ ವಿತರಿಸಿದರು. ಪಟ್ಟಣದ ಶ್ರೀಅಂಜನೇಯಸ್ವಾಮಿ ಸನ್ನಿಧಿ,ಶ್ರೀಅನಂತಶಯನ ರಂಗನಾಥಸ್ವಾಮಿ ಸನ್ನಿಧಿ,ಗಾಂಧಿಪೇಟೆಯ ಶನೇಶ್ವರಸ್ವಾಮಿ ದೇವಾಲಯ,ಕಾಳಿಕಾಂಭ ದೇವಾಲಯ,ಗ್ರಾಮದೇವತೆ ಹುಳಿಯಾರಮ್ಮನ ದೇವಾಲಯದಲ್ಲಿ ಶ್ರೀರಾಮಚಂದ್ರ ಹುಟ್ಟಿದ ದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯ ದಿನದ ಅಂಗವಾಗಿ ಶುಕ್ರವಾರ ಬೆಳಗಿನಿಂದಲೇ ವಿಶೇಷ ಅರ್ಚನೆ, ಪೂಜೆ ಕೈಂಕರ್ಯಗಳು ವಿಜೃಂಭಣೆಯಿಂದ ನಡೆದಿದ್ದವು.ಅಲ್ಲದೆ ಅನೇಕ ಮನೆಗಳಲ್ಲಿ ಶ್ರೀರಾಮ ಹಾಗೂ ರಾಮಭಂಟ ಆಂಜನೇಯನಿಗೆ ಪೂಜೆ ಸಲ್ಲಿಸುತ್ತಿರುವುದು ಕಂಡುಬಂದಿತ್ತು. ಹುಳಿಯಾರಿನ ಶ್ರೀದುರ್ಗಮ್ಮ ದೇವಿ,ಹುಳಿಯಾರಮ್ಮ ಹಾಗೂ ಲಿಂಗಪ್ಪನಪಾಳ್ಯದ ಶ್ರೀರಾಮದೇವರುಗಳನ್ನು ರಾಮನವಮಿಗೆ ಅಂಗವಾಗಿ ಶ

ಚುನಾವಣೆಯಲ್ಲಿ ಸೋಲಲಿ - ಗೆಲ್ಲಲಿ ನಿರಂತರ ಹೋರಾಟ ಬಿಡಲ್ಲ : ಕೆಂಕೆರೆ ಸತೀಶ್

ಸದಾಕಾಲ ರೈತರು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುತ್ತಾ, ಜನಪರ ಹೋರಾಟಗಳನ್ನು ಮಾಡಿಕೊಂಡು ತಾಲ್ಲೂಕಿನಾದ್ಯಂತ ಗಮನ ಸೆಳೆದಿರುವ ಕೆಂಕೆರೆ ಸತೀಶ್ ತಾವು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ರೈತಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಚುನಾವಣೆಯಲ್ಲಿ ಗೆಲ್ಲಲಿ,ಸೋಲಲ್ಲಿ ತನ್ನ ಹೋರಾಟವನ್ನು ಕೈಬಿಡದೆ ಮುಂದುವರಿಸಿಕೊಂಡು ರೈತರಿಗಾಗಿ ಅವಿರತ ದುಡಿಯುವುದಾಗಿ ತಿಳಿಸಿದ್ದಾರೆ.                  ನಾಮಪತ್ರ ಸಲ್ಲಿಸಿದ ನಂತರ ಹುಳಿಯಾರಿನಲ್ಲಿ ಪತ್ರಿಕೆಯೊಂದಿಗೆ ತಮ್ಮ ಅನುಭವವನ್ನು ಅವರು ಹಂಚಿಕೊಂಡರು ದೇಶಾದ್ಯಂತ ರೈತ ಹಾಗೂ ಕೃಷಿ ಕ್ಷೇತ್ರಕ್ಕೆ ಆಗುತ್ತಿರುವಷ್ಟು ಅನ್ಯಾಯ,ತೊಂದರೆಗಳು ಬೇರಾವುದೇ ಕ್ಷೇತ್ರದಲ್ಲಿ ಹೆಚ್ಚಾಗಿ ಕಂಡುಬರುತ್ತಿಲ್ಲ, ಚುನಾವಣೆಯಲ್ಲಿ ಗೆಲ್ಲುವವರೆಗೆ ರೈತರ ಬಗ್ಗೆ ಮಾತಾಡುವ ರಾಜಕೀಯ ವ್ಯಕ್ತಿಗಳು ತಾವು ಗೆದ್ದ ನಂತರ ಅನೇಕ ಕಂಟುನೆಪಗಳನ್ನು ಹೇಳುತ್ತಾ ರೈತರಿಂದ ದೂರ ಉಳಿಯುವ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ.ಅಲ್ಲದೆ ರೈತರ ಸಮಸ್ಯೆಗಳನ್ನು ಅಲಿಸದಿರುವ ವ್ಯಕ್ತಿಗಳಿಗೆ ಮತ ಹಾಕಿ ರಾಜ್ಯದ ಆಡಳಿತ ನಡೆಸಲು ಕಳುಹಿಸಬೇಕೆ ಎಂಬ ಪ್ರಶ್ನೆ ಮತದಾರರಲ್ಲಿ ಮೂಡಬೇಕಿದೆ ಎಂದರು. ಆಡಳಿತದ ಚುಕ್ಕಾಣಿ ಹಿಡಿಯುವಾಗ ಮಾತ್ರ ರೈತರ ವೇಷ ತೊಡುವ ರಾಜಕಾರಣಿಗಳಿಗಿಂತ ಒಬ್ಬ ರೈತನಾಗಿ ರೈತರ ಸಮಸ್ಯೆಗಳನ್ನು ಹತ್ತಿರದಿಂದ ಕಂಡವನಾಗಿರುವ ನನಗೆ ರೈತರ

ಬನಶಂಕರಿ ಸನ್ನಿಧಿಯಲ್ಲಿ ದೇವರದಾಸಿಮಯ್ಯ ಜಯಂತಿ

ಪಟ್ಟಣದ ಶ್ರೀಬನಶಂಕರಿ ದೇವಾಲಯದಲ್ಲಿ ದೇವಾಂಗ ಮಂಡಳಿ,ಬನಶಂಕರಿ ದೇವಾಸ್ಥಾನ ಸಮಿತಿ ಹಾಗೂ ದಾಸಿಮಯ್ಯ ಸಮಿತಿವತಿಯಿಂದ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿಯನ್ನು ನೂರಾರು ಭಕ್ತರು ಸೇರಿ ಶ್ರದ್ದಾಭಕ್ತಿಯಿಂದ ಆಚರಿಸಿದರು. ದಾಸಿಮಯ್ಯ ಸಮಿತಿಯವರು  ಕಾರ್ಯಕ್ರಮದಲ್ಲಿ ಹೋಬಳಿ ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್,ಕೆ,ರಾಮಯ್ಯ ಮಾತನಾಡಿ ವಚನಕಾರ ದಾಸಿಮಯ್ಯನವರ ವಚನಗಳ ಮಹತ್ವ ಹಾಗೂ ಆತ ನಡೆದು ಬಂದ ದಾರಿಯ ಬಗ್ಗೆ ಪರಿಚಯ ಮಾಡಿಕೊಟ್ಟರು. ಭಕ್ತಿಯ ಬಗ್ಗೆ ದಾಸಿಮಯ್ಯ ಹೊಂದಿದ್ದ ನಿಲುವು, ದೇವರು ಎಂತಹ ಭಕ್ತಿಗೆ ಒಲಿಯುತ್ತಾನೆ ಎಂಬುದನ್ನು ವಿವರಿಸಿದರು. ತೋರುವಿಕೆಯ ಭಕ್ತಿಯಿಂದ ದೇವರನ್ನು ನೆಪ ಮಾತ್ರಕ್ಕೆ ಆರಾಧಿಸಿದಂತಾಗುತ್ತದೆ ಹೊರತು ದೈವಕೃಪೆಗೆ ಪಾತ್ರರಾಗಲು ಸಾಧ್ಯವಿಲ್ಲ ಎಂದರು. ಬಂಗಾರ,ಬೆಳ್ಳಿ,ಕಂಚು,ಒಡವೆ ಸೇರಿದಂತೆ ಧನ ಕನಕಾಧಿಗಳನ್ನು ಭಗವಂತ ಮೆಚ್ಚುವುದಿಲ್ಲ ಬದಲಿಗೆ ಶ್ರದ್ದೆಯಿಂದ ಯಾರು ಆತನ ದ್ಯಾನ ಮಾಡುತ್ತಾರೆ ಅಂತಹವರ ಮೇಲೆ ತನ್ನ ಕೃಪೆ ತೋರುತ್ತಾನೆ ಎಂದು ದಾಸಿಮಯ್ಯ ನಂಬಿಕೆ ಹೊಂದಿದವನಾದಿದ್ದನು. ಎತ್ತಿನ ಗಾಡಿ ಸಾರಾಗವಾಗಿ ಚಲಿಸಲು ಕಡಕೀಲು ಎಷ್ಟು ಮುಖ್ಯ ಅಂತೆಯೇ ಶಿವಶರಣರ ಮಾತುಗಳು,ನುಡಿಮುತ್ತುಗಳು ಇಂದಿನ ಸಮಾಜಕ್ಕೆ ಮುಖ್ಯವಾಗಿದೆ ಎಂದರು. ಜಯಂತಿ ಅಂಗವಾಗಿ ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಮಿತಿಯ ಅನಂತಕುಮಾರ್, ದಾಸಪ್ಪ,ಸೀನಣ್ಣ,ಗೌಡಿ,ಬಿಟಿಆರ್ ರಾಜಣ್ಣ,ಶಶಿ,ವರದರಾಜು,ಕನ್ನಡ ಸಾಹಿತ್ಯ ಪರಿಷತ

ಪ್ರತಿನಿತ್ಯ ಕನಿಷ್ಠ ಒಂದುವರೆ ತಾಸಿನ ನಡಿಗೆ ಉತ್ತಮ ಆರೋಗ್ಯಕ್ಕೆ ಸೋಪಾನ : ಡಾ|| ಖಾದರ್

                     ಯಾಂತ್ರಿಕತೆಗೆ ಮಾರು ಹೋಗಿರುವ ಮಾನವ ತನ್ನ ತನವನ್ನು ಮರೆತು ಯಂತ್ರಗಳೊಂದಿಗೆ ಬೆರೆತು ಜೀವನ ಸಾಗಿಸುತ್ತಾ ಜೀವನದ ಉತ್ತಮ ಆರೋಗ್ಯ ಸ್ಥಿತಿಯನ್ನು ಕಳೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ ಸಾಕಷ್ಟು ಹಣವ್ಯಯಿಸಿ ಉತ್ತಮ ಆರೋಗ್ಯ ಪಡೆಯಲು ಮುಂದಾಗುತ್ತಿರುವ ಜನ ದಿನನಿತ್ಯ ಕನಿಷ್ಠ ಒಂದುವರೆ ತಾಸು ನಡಿಯುವುದರಿಂದ ದೇಹದಲ್ಲಿನ ಕಲ್ಮಶ ತೊಲಗಿ ಉತ್ತಮ ಆರೋಗ್ಯ ಪಡೆಯಬಹುದಾಗಿದೆ ಎಂದು ಮೈಸೂರಿನ ಆಯುರ್ವೇದ ಡಾ||ಖಾದರ್ ತಿಳಿಸಿದ್ದಾರೆ.  ಡಾ||ಖಾದರ್ ಮಹಿಳೆಯರು ಯಾವ ರೀತಿ ಉತ್ತಮ ಆರೋಗ್ಯ ಪಾಡಿಕೊಳ್ಳ ಬಹುದೆಂದು ಮಾಹಿತಿ ನೀಡುತ್ತಿರುವುದು.                         ಹುಳಿಯಾರಿನ ಬಸವೇಶ್ವರನಗರ ಬಡಾವಣೆಯಲ್ಲಿ ಸೃಜನ ಮಹಿಳಾ ವೇದಿಕೆಯವರ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳೆಯರು ತಮ್ಮ ಹಾಗೂ ಸಂಸಾರದ ಸ್ವಾಸ್ಥ್ಯವನ್ನು ಯಾವರೀತಿ ಕಾಪಾಡಿಕೊಳ್ಳಬೇಕೆಂಬ ವಿಚಾರಗಳನ್ನು ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.                               ಮನುಷ್ಯರಾದ ತಾವು ಆರೋಗ್ಯದಿಂದಿರ ಬೇಕೆಂದು ಬಯಸುವುದು ಎಷ್ಟು ಮುಖ್ಯವೋ, ಉತ್ತಮ ಆರೋಗ್ಯವನ್ನು ಯಾವ ರೀತಿ ಪಡೆಯಬೇಕು, ದೇಹಕ್ಕೆ ಆಗತ್ಯವಾದ ಪೋಷಕಾಂಶ,ದೇಹದ ಸ್ವಚ್ಚತೆ,ರೋಗಗಳು ತಮ್ಮ ದೇಹವನ್ನು ಬಾದಿಸದೆಂತೆ ವಹಿಸ ಬೇಕಾದ ಎಚ್ಚರಿಕಾ ಕ್ರಮಗಳನ್ನು ಅನುಸರಿಸುವುದು ಅಷ್ಟೇ ಮುಖ್ಯವಾಗಿದೆ ಎಂದರು.ಆರೋಗ್ಯವನ್ನು ಕಾಡುವ ಮೂಕ್ಕಾಲು ಪಾಲು ಜ

ಏ 14. ಡಾ.ಅಂಬೇಡ್ಕರ್ ಜಯಂತಿ

ಇವತ್ತು ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ಜಯಂತಿ.ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಗ್ರಾಪಂ ಸದಸ್ಯರು ಪಂಚಾಯ್ತಿ ಹಾಲ್ ನಲ್ಲಿ ಬರಲು ಅವಕಾಶ ಇಲ್ಲದಿರುವುದರಿಂದ ಹುಳಿಯಾರು ಗ್ರಾಪಂ ಸಿಬ್ಬಂದಿಗಳೆ ಸೇರಿಕೊಂಡು ಆಚರಣೆ ಮಾಡಿದ್ದಾರೆ.ಪಿಡಿಓ ಹನುಮರಾಜ್,ಸಿಬ್ಬಂದಿ ಆನಂದ,ರಾಜಣ್ಣ ಇದ್ದಾರೆ. ಹುಳಿಯಾರಿನ ಎಬಿವಿಪಿ ಘಟಕದವರು ತಮ್ಮ ಕಛೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಿಸಿದರು.ಘಟಕದ ಅಧ್ಯಕ್ಷ ನರೇಂದ್ರಬಾಬು, ಪದಾಧಿಕಾರಿಗಳಾದ ಅರುಣ್,ಕಲ್ಲೇಶ್,ಕಿರಣ್ ಹಾಗೂ ಇತರರು ಇದ್ದಾರೆ.

"ಬ್ರಾಹ್ಮಣರ ಮದುವೆಗೆ ಗಲ್ಲೇಬಾನಿ ನೀರು ಬೇಕಂತೆ"

ಡಾ.ಅಂಬೇಡ್ಕರ್ ಜಯಂತಿ ಪ್ರಯುಕ್ತ ತುಮಕೂರಿನ ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ಚೇಳೂರು ವೆಂಕಟೇಶ್ ಬರೆದಿರುವ ಲೇಖನದ ಪ್ರತಿ.ಇದು ದಿನಾಂಕ ೧೪ ಏಪ್ರಿಲ್ ಭಾನುವಾರ ಪುಟ ೭ ರಲ್ಲಿ ಪ್ರಕಟವಾಗಿದೆ.ಈ ಬಗ್ಗೆ ನಾನು ಕೂಡ ಎಲ್ಲೂ ಓದಿಲ್ಲದ್ದರಿಂದ ,ಕೇಳು ಕೂಡ ಇಲ್ಲದ್ದರಿಂದ ಅದರ ಯಥಾವತ್ತು ಸ್ವರೂಪೊಅವನ್ನು ಇಲ್ಲಿ ಪ್ರಕಟಿಸಲಾಗಿದೆ.ಇದರ ಬಗ್ಗೆ ಹೆಚ್ಚಿನ ಮಾಹಿತಿಯಿದ್ದವರು ಪ್ರತಿಕ್ರಿಯಿಸಬೇಕೆಂದು ವಿನಂತಿಸುವೆ.