ವಿಷಯಕ್ಕೆ ಹೋಗಿ

ಗುಲಗಂಜಿ - "ಕೋತಿ ಕೈಗೆ ಗುಲಗಂಜಿ ಕೊಟ್ಟಂಗೆ"

ಗುಲಗಂಜಿ : ಈ ಪದ ಬಹಳ ಹಿಂದೆ ಕಿವಿಗೆ ಬಿದ್ದಿತ್ತೆ ವಿನಃ ಅದು ಏನೂ ಅಂತ ತಿಳಿದಿರಲ್ಲಿಲ್ಲಾ.ಇತ್ತೀಚೆಗೆ ನಮ್ಮ ಮೈನ್ಸ್ ನಲ್ಲಿ ಗಿಡದ ಸಂದಿಯಲ್ಲಿ ಲ್ಲಿ ಓಡಾಡಿಕೊಂಡು ಬರ್ತಿದ್ದಾಗ ಹಳ್ಳದ ಪಕ್ಕ ಇದ್ದ ಗಿಡದ ಬಳಿ
ಒಂದಷ್ಟು ಕಾಯಿ ಸುರಿದು ಬಿದ್ದಿದ್ದು ಇದೇನೆಂದು ಕೇಳಿದಾಗ ಗುಲಗಂಜಿ ಅನ್ನುವ ಉತ್ತರ ಬಂತು.ಅರೆರೇ ಇದೇನಾ ಗುಲಗಂಜಿ ಅಂತ ಆಶ್ಚರ್ಯ ಆಯ್ತು.ನಾನು ಚಿಕ್ಕವನಾಗಿದ್ದಾಗ ನಮ್ಮಪ್ಪ ಬಂಗಾರದ ವಿಚಾರ ಮಾತಾಡ್ತಿದ್ದಾಗ ಆ ಪದ ಕಿವಿಗೆ ಬಿದಿತ್ತೆ ಹೊರತು ಅದರ ಬಗ್ಗೆ ಸ್ಪಷ್ಟ ಕಲ್ಪನೆ ಇರ್ಲಿಲ್ಲಾ.ಹಿಂದಿನ ದಿನಗಳಲ್ಲಿ ಆಚಾರಿಗಳು ಬಂಗಾರವನ್ನು ಗುಲಗಂಜಿ ತೂಕದಲ್ಲಿಯೇ ತೂಗುತ್ತಿದ್ದರಂತೆ.
ಆಗೆಲ್ಲಾ ಹಳ್ಳಿಗಳಲ್ಲಿನ ಅಕ್ಕಸಾಲಿಗರ ಮನೆಯಲ್ಲಿ ಚಿನ್ನ ತೂಕ ಮಾಡಲು ಗುಲಗಂಜಿ ಬಳಕೆ ಆಗ್ತಿತ್ತು.ಈಗೆಲ್ಲಾ ಬಂಗಾರದ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ತೂಕದ ಮಿಶಿನ್ ಗಳು ಬಂದಿದ್ದು ಹಿಂದಿನ ರೀತಿ ಇದರ ಬಳಕೆ ಇಲ್ವೇಇಲ್ಲಾ ಅನ್ನಬಹುದು. ಈಗಿನವರಿಗೆ ಈ ಪದನೇ ಅಪರಿಚಿತ.ಇಂತಹ ಗುಲಗಂಜಿ ಗಿಡದಲ್ಲಿ ಬಿಡುವ ಕಾಯಿ ಅಂತ ತಿಳಿದಿರಲಿಲ್ಲಾ.
           ಗುಲಗಂಜಿ ಗಿಡದಲ್ಲಿ ಬಿಡುವ ಆಕರ್ಷಕವಾದ ಕೆಂಪು ಮತ್ತು ಕಡು ಕಪ್ಪು ಬಣ್ಣದ ಒಂದು ಬೀಜ.ಗುಲಗಂಜಿಯ ಗಿಡ ಹಳದಿ ಬಣ್ಣದ್ದಾಗಿದ್ದು ಕೆಂಪು ಹೂವುಗಳನ್ನು ಬಿಡುತ್ತದೆ. ಕಡು ಕೆಂಪಗಿರುವ ತುದಿಯಲ್ಲಿ ಕಪ್ಪು ಟೋಪಿಹೊಂದಿರುವಂತೆ ಕಾಣುವ ಇದು ಸಣ್ಣ ಮೊಟ್ಟೆಯ ಆಕಾರದಲ್ಲಿತ್ತದೆ.ಇವುಗಳಲ್ಲಿ ಮೂರು ವಿಧ.ಹಾಲಿನಕೆನೆ ಬಣ್ಣದ ಗುಲಗಂಜಿ, ಕೆಂಪು ಬಣ್ಣದ ಗುಲಗಂಜಿ,ಮತ್ತು ಕಪ್ಪು ಬಣ್ಣದ ಗುಲಗಂಜಿ.ಗುಲಗಂಜಿ ಕಾಡಿನಲ್ಲಿ ಬೆಳೆಯುವ ಸಾಮಾನ್ಯ ಕಳೆ ಸಸ್ಯ.ಕುರುಚಲು ಗಿಡಗಳ ಮುಳ್ಳು ಪೊದೆಗಳ ಮಧ್ಯೆ ಈ ಗಿಡ ಬೆಳೆಯುತ್ತೆ. ಏಬ್ರಸ್ ಪ್ರಿಕಟೋರಿಯಸ್`- ಗುಲಗಂಜಿಯ ಸಸ್ಯಶಾಸ್ತ್ರೀಯ ಹೆಸರು `ಏಬ್ರಸ್ ಪ್ರಿಕಟೋರಿಯಸ್'. ಇಂಗ್ಲೀಷ್‌ನಲ್ಲಿ `ಇಂಡಿಯನ್ ಲಿಕೋರಿಸ್' ಅಥವಾ `ಕ್ರಾಬ್ಸ್ ಐ, ಕನ್ನಡದಲ್ಲಿ `ಗುಲಗಂಜಿ' , ಮಲೆಯಾಳಂನಲ್ಲಿ ಕುನ್ನಿ-ಕುರು, ಸಂಸ್ಕೃತದಲ್ಲಿ `ಗುಂಜ, ತಮಿಳಿನಲ್ಲಿ `ಗುಂಡು ಮಣಿ' ಮತ್ತು `ಕುಂತಮಣಿ', ತೆಲುಗಿನಲ್ಲಿ `ಗುರಿವಿಂದ',  ಪಂಜಾಬಿಯಲ್ಲಿ `ಮುಲಟಿ', ಬೆಂಗಾಲಿಯಲ್ಲಿ ಕುಂಚ್ ಅಥವಾ ಕೂಂಚ್, ಕಾಶ್ಮೀರಿ ಭಾಷೆಯಲ್ಲಿ `ಶಂಗಿರ್' ಹೀಗೆ ನಾನಾ  ಹೆಸರುಗಳಿಂದ ಕರೆಯುತ್ತಾರೆ.ಮಲೇಷ್ಯಾ ಮತ್ತು ಇಂಡೋನೇಷ್ಯಾ ದೇಶಗಳು ಗುಲಗಂಜಿಯ ತವರು.ಔಷಧೀಯ ಗುಣವಿರುವ ಬಿಳಿ ಗುಲಗಂಜಿಯನ್ನು ನಾಟಿ ವೈದ್ಯದಲ್ಲಿ ಬಳಸುತ್ತಾರೆ.ಗುಲಗಂಜಿ ಬೀಜಗಳಲ್ಲಿ ಅಬ್ರಿನ್ ಎಂಬ ವಿಷವಸ್ತು ಇದ್ದು ನಾಗರ ಹಾವಿನ ವಿಷಕ್ಕಿಂತಲೂ ತೀಕ್ಷ್ಣ ವಿಷಕಾರಿಎನ್ನಲಾಗುತ್ತದೆ.ಗುಲಗಂಜಿ ಬೀಜದ ಹೊರ ಪದರವು ತುಂಬಾ ಗಟ್ಟಿಯಾಗಿದ್ದು ಬೀಜದ ತಿರುಳಿನಲ್ಲಿ ವಿಷ ಇರುತ್ತದೆ. ಬೀಜಗಳನ್ನು ಅರೆದಾಗ ಅದರಲ್ಲಿನ ವಿಷ ಹೊರಬರುತ್ತದೆ. ಆದರೆ ಗುಲಗಂಜಿ ಗಿಡದ ಉಳಿದ ಭಾಗಗಳಾದ ಕಾಂಡ, ಸೊಪ್ಪು, ಎಲೆ ಇತ್ಯಾದಿಗಳು ವಿಷ ಬಾಧೆಯನ್ನುಂಟು ಮಾಡುವುದಿಲ್ಲ.ಗುಲಗಂಜಿಯನ್ನು ಕಡಿಯದೆ ಹಾಗೇ ನುಂಗಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲವಂತೆ. ಮಲ ವಿಸರ್ಜನೆಯ ಮೂಲಕ ಅದು ದೇಹದಿಂದ ಹೊರ ಹೋಗುತ್ತದೆ. ಅದನ್ನೇನಾದ್ರು ಅಗಿದು ಇಲ್ಲ ಪುಡಿ ಮಾಡಿ ತಿಂದರೆ ಪ್ರಾಣಾಪಾಯ ತಪ್ಪಿದ್ದಲ್ಲ.ಹಿಂದೆ ಈ ಬೀಜಗಳನ್ನು   ಜಾನುವಾರುಗಳು ಮತ್ತು ಮನುಷ್ಯರನ್ನು ಸಾಯಿಸಲು ಬಳಸಲಾಗುತಿತ್ತಂತೆ.ರಾಜರುಗಳು ಯುದ್ಧದಲ್ಲಿ ಇದೇ ಗುಲಗಂಜಿಯಿಂದ ಶತ್ರು ಗಳನ್ನು ಕೊಲ್ಲುಸ್ತಿದ್ದರಂತೆ.ಚೀನಾ ದೇಶದಲ್ಲಿ ಪ್ರೀತಿಯ ಸಂಕೇತ ಆಗಿರುವ ಗುಲಗಂಜಿಯನ್ನು ಮ್ಯೂಚುಯಲ್ ಲವ್ ಬೀನ್ ಎನ್ನುತ್ತಾರೆ. ಟ್ರಿನಿಡ್ಯಾಡ್, ವೆಸ್ಟ್ ಇಂಡೀಸಿನಲ್ಲಿ "ದೃಷ್ಟಿ ನಿವಾರಕ" ಎಂದು ತೋಳ್ಬಂದಿಯಾಗಿ ಬಳಸ್ತಾರೆ.
       
    ಚಿನ್ನ ತೂಕ ಮಾಡಲು ಈ ಬೀಜನೇ ಯಾಕೆ ಉಪಯೋಗಿಸ್ತಾರೆ ಅವ್ರಿಗೆ ಬೇರೆನೂ ಸಿಕ್ಕಲಿಲ್ವೆ ಅಂತ ಕೆದುಕ್ತಾ ಹೋದಾಗ ಅಚ್ಚರಿ ವಿಷಯ ತಿಳಿದುಬಂತು. ಗುಲಗಂಜಿಯ ಎಲ್ಲ ಕಾಳುಗಳು ಒಂದೇ ತೂಕ ಇರುತ್ತವಂತೆ. ಅದಕ್ಕಾಗಿ ಗುಲಗಂಜಿಯನ್ನು ತೂಕಕ್ಕೆ ಬಳುಸುತ್ತಾರೆ ಎಂದು ಹೇಳುತ್ತಾರೆ.ಗುಂಜಿ ಎಂದರೆ ಅಂದಾಜು 122 ಮಿಲಿ ಗ್ರಾಂ. ಒಂದು ಆಣೆಗೆ 6 ಗುಂಜಿ. ಅಪ್ಪಟ ಹದಿನಾರಾಣೆ ತೂಕ ಎಂದು ಹೇಳುವುದು ಬಂಗಾರಕ್ಕೆ ತಾನೆ.
           ಗುಲಗಂಜಿಯ ಬಗ್ಗೆ ಅನೇಕ ಮಾತುಗಳು,ಒಗಟುಗಳು ಕೇಳಿಬರುತ್ತೆ.ಕೆಲವು ಸಂದರ್ಭಗಳಲ್ಲಿ ಹೆಣ್ಣನ್ನು ಗುಲಗಂಜಿಗೆ ಹೋಲಿಸುವುದುಂಟು.ಜಾನಪದದಲ್ಲಿ ಗುಲಗಂಜಿಗೆ ಮಹತ್ವವಿದೆ.ಗುಲಗಂಜಿ ಒಮ್ಮೆ ನನಗಿಂತಾ ಸುಂದರಿಯಿಲ್ಲ ಎಂದು ಬೀಗುತ್ತಿತ್ತಂತೆ.ಬೇರೆಯವರ ಬಣ್ಣ ನೋಡಿ ನಗುತ್ತಿದ್ದ ಗುಲಗಂಜಿಗೆ ತನ್ನ ಕೆಳಗಿರುವ ಕಪ್ಪು ಬಣ್ಣದ ಬಗ್ಗೆ ತಿಳಿದಿರಲಿಲ್ಲ.ಇದನ್ನು ಮಾರ್ಮಿಕವಾಗಿ ಹಳ್ಳಿಗಳಲ್ಲಿ ಬೀಗುವ ಜನರಿಗೆ ಹಿರಿಯವರು ಬುದ್ದಿ ಹೇಳುವಾಗ ಬಳಸುತ್ತಾರೆ.
"ಆಕಾಶಕ್ಕೆ ಆಸೆಪಟ್ಟರೆ ಗಿಟ್ಟೋದು ಗುಲಗಂಜಿ; ದಕ್ಕಿದ್ದಷ್ಟೇ ಈ ಜನುಮದಲ್ಲಿ"
ಬಯ್ಗಳಲ್ಲೂ "ಥು ಗುಲಗುಂಜಿಯಷ್ಟೂ ಅವನಿಗೆ ಮಾನ ಇಲ್ವಲ್ಲಾ" ಎಂದೋ ಅಥವ "ಅಲ್ಲ ಒಂದು ಗುಲಗುಂಜಿಯಷ್ಟಾದರೂ ಅಭಿಮಾನ ಇರಬೇಕಲ್ವಾ" ಎನ್ನೊ ಮಾತು ಕೇಳಿ ಬರೋದುಂಟು. 
."ಕೋತಿ ಕೈಗೆ ಗುಲಗಂಜಿ ಕೊಟ್ಟಂಗೆ" ಎಂಬ ಗಾದೆ ಕೂಡಾ ಇದೆ.ಬೆಲೆ ಗೊತ್ತಿಲ್ಲದವರ ಕೈಯಲ್ಲಿ ಬೆಲೆಬಾಳುವ ವಸ್ತುವೊಂದನ್ನು ಕೊಟ್ಟ್ರೆ ಏನಾಗಬಹು ಎನ್ನುವುದಕ್ಕೆ ಈ ಗಾದೆಯನ್ನು ಬಳಸ್ತಾರೆ.

ಪೌರಾಣಿಕ ಮಹತ್ವ:ಮೈಸೂರಿಗೆ ಕೇವಲ 32 ಕಿಲೋ ಮೀಟರ್ ದೂರದಲ್ಲಿರುವ ತಿರುಮಕೂಡಲು ನರಸೀಪುರದಲ್ಲಿನ ನರಸಿಂಹನ ಬಲಗೈಯಲ್ಲಿ ಗುಲಗಂಜಿ ಇದೆಯಂತೆ.ಹಾಗಾಗಿ ಈತ ಇತರೆಡೆಯಲ್ಲಿರುವ ಮಿಕ್ಕೆಲ್ಲ ನರಸಿಂಹರಿಗಿಂತ ಒಂದು ಗುಲಗಂಜಿ ಶ್ರೇಷ್ಠನಂತೆ .ಇದಕ್ಕಾಗೆ ಇವನ್ನನ್ನು ಗುಂಜಾ ನರಸಿಂಹ ಎಂದು ಕರೀತಾರಂತೆ.ಒಂದ್ಸಲ ಹಂಪಿ ಮತ್ತು ಕಾಶಿ ಹೆಚ್ಚೋ ಎಂಬ ಪಾವಿತ್ರತೆಯ ತೂಕ ಮಾಡುವ ಭಾರ ಶ್ರೀಕೃಷ್ಣನ ಮೇಲೆ ಬಿತ್ತಂತೆ. ತೂಕ ಮಾಡಿದಾಗ ಹಂಪಿಯ ತೂಕ ಒಂದು ಗುಲಗಂಜಿ ಕಾಳಿನಷ್ಟು ಹೆಚ್ಚು ಬಂದಿತಂತೆ. ತೂಕ ಮಾಡಿದ ಕೃಷ್ಣನನ್ನು "ಗುಲಗಂಜಿ ಕೃಷ್ಣ" ಎಂದೂ ಹಂಪಿಯ ವಿರೂಪಾಕ್ಷ ದೇವರ ಗುಡಿಯ ಆವರಣದಲ್ಲಿ ಕೃಷ್ಣನಿಗೂ ಗುಡಿ ಕಟ್ಟಿದರಂತೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...

​ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ

ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ ವರದಿ : ಡಿ.ಆರ್‌.ನರೇಂದ್ರಬಾಬು-ಹುಳಿಯಾರು ​ ಹುಳಿಯಾರು : ದೀರ್ಘಕಾಲದಿಂದ ಬಗೆಹರಿಯದ ಕಸ ವಿಲೇವಾರಿ ಘಟಕದ ಸಮಸ್ಯೆ ಹಾಗೂ ಪಟ್ಟಣದ ಮೂಲಸೌಕರ್ಯಗಳ ಕೊರತೆ ಖಂಡಿಸಿ, ಹುಳಿಯಾರಿನ ರೈತ ಸಂಘ ಕಳೆದ 19 ದಿನಗಳಿಂದ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ನಡೆಯುತ್ತಿರುವ ಅಹೋರಾತ್ರ ಧರಣಿಗೆ ಬೆಂಬಲಿಸಿ ಇಂದು ವಿವಿಧ ಸಂಘ-ಸಂಸ್ಥೆಗಳು ಮತ್ತು ನಾಗರಿಕರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಬಂದು ನಾಡಕಚೇರಿ ಮುಂದೆ ಸುರಿಯಲು ಯತ್ನಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು . ​ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷ ಸೇರಿದಂತೆ ಹಲವು ಸಂಘಟನೆಗಳ ಬೆಂಬಲದೊಂದಿಗೆ ನಡೆದ ಈ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪಟ್ಟಣ ಪಂಚಾಯಿತಿ ಮುಂದೆ ತಹಸಿಲ್ದಾರ್ ,ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಸೇರಿಕೊಂಡು ಪ್ರತಿಭಟನಾಕಾರದೊಂದಿಗೆ ಗಂಟಗಟ್ಟಲೆ ಸಮಾಲೋಚಿಸಿದರು. ಮೂರು ಬೇಡಿಕೆಗಳಲ್ಲಿ ಎರಡು ಬೇಡಿಕೆ ಈಡೇರಿಸುವ ಭರವಸೆ ನೀಡಿದರೂ ಸಹ ಪ್ರತಿಭಟನಾಕಾರರು ಒಪ್ಪದೇ ನಾಡಕಚೇರಿ ಮುಂದೆ ಕಸ ಸುರಿಯುವ ಪ್ರಯತ್ನಕ್ಕೆ ಮುಂದಾದರು. ​ ಪ್ರತಿಭಟನೆ ಹಾದಿ ಮತ್ತು ಪೊಲೀಸ್ ಸರ್ಪಗಾವಲು :  ​ಪ್ರತಿಭಟನಾಕಾರರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಮೊದಲು ದ...